ಕಲಾ ಪ್ರತಿಭೆ – ಸೃಷ್ಟಿ

ಕುಮಾರಿ ಸೃಷ್ಟಿ ಸ್ವಾಮಿ 10 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ. ಚಿಕ್ಕ ವಯಸ್ಸಿಗೆ ತನ್ನ ಪ್ರತಿಭೆಯಿಂದ ಕಲಾದೇವಿಯನ್ನು ವಶಪಡಿಸಿಕೊಂಡಿದ್ದಾಳೆ. ಗುರುಸಿದ್ದಯ್ಯ ದಂಪತಿಗಳು ಪುತ್ರಿಯ ಕಲಾ ಪ್ರತಿಭೆಗೆ ಪ್ರೀತಿಯೆಂಬ ಖನಿಜಯುಕ್ತ ನೀರನ್ನು ಪೋಷಿಸಿ ಬೆಳೆಸುತಿದ್ದಾರೆ. ಮಹಾರಾಷ್ಟ್ರದ ಅಕ್ಕಲಕೋಟದ ಮಂಗರೂಳೆ ಪ್ರಶಾಲೆಯಲ್ಲಿ ಓದುತ್ತಿರುವ ಕುಮಾರಿ ಸೃಷ್ಟಿ ಬರೆದ ಅಮಿತಾಭ್ ಬಚ್ಚನ್ ಚಿತ್ರವನ್ನು ಸ್ವತಃ ಅಮಿತಾಭ್ ಮೆಚ್ಚಿ ಅಭಿನಂದಿಸಿದ್ದಾರೆ ಹಾಗೆಯೇ ಸುಧಾ ಮೂರ್ತಿಯವರು ಸಹ ಚಿತ್ರಗಳನ್ನು ಕಂಡು ಸಂತಸದಿಂದ ತಮ್ಮ ವೈಯಕ್ತಿಕ ಮೆಚ್ಚುಗೆಯನ್ನು ಹೇಳಿ ಹಾರೈಸಿದ್ದಾರೆ. ಇಂತಃ ಕಲಾ ಚಿಗುರೂಗಳನ್ನು ಗುರುತಿಸಿ […]Read More

BTS ನಲ್ಲೊಬ್ಬ ರವಿಚಂದ್ರನ್!! – SUGA

BTS ನಲ್ಲೊಬ್ಬ ರವಿಚಂದ್ರನ್!! BTSನ ಕನಸುಗಾರ ಸೂಗಾ ಸೂಗಾ ಎಂಬ ಸಾಗಾ ಮಿನ್ ಯೂಂಗಿ (Min Yoongi) ಅಂದ್ರೆ ಯಾರಿಗೂ ಗೊತ್ತಾಗೊಲ್ಲ. ಆದರೆ ಸೂಗ SUGA ಅಂದಾಕ್ಷಣ ಎಲ್ಲರಿಗೂ ಮಿಂಚಿನ ಸಂಚಾರ ಆದಂತೆ ಆಗುವುದು. ಸೂಗ, ಆಗಸ್ಟ್-ಡಿ ಇವನ ಸ್ಟೇಜ್ ಹೆಸರುಗಳು. ಸೂಗಾ ಹುಟ್ಟಿದ್ದು ಮಾರ್ಚ್ 9, 1993ರಲ್ಲಿ. ಇದೀಗ ಅವನಿಗೆ 28 ವರ್ಷಗಳ ಪ್ರಾಯ. ಈ ಸೂಗಾ ಥೇಟ್ ನಮ್ಮ ರವಿಚಂದ್ರನ್ ನಂತೆಯೆ. ಕನಸುಗಾರ, ಪರಿಶ್ರಮಿ, ತಾಂತ್ರಿಕತೆಯ ಅಪಾರ ಜ್ಞಾನ ಉಳ್ಳವನು. ತಾನು ರಚಿಸುವ ಗೀತೆಗಳನ್ನು […]Read More

ಗುರುವಿಲ್ಲದಿರೆ ಕೊರಡಯ್ಯ ನಾವೆಲ್ಲಾ….

ಕಲಿಕೆಯಲ್ಲಿ ತೊಡಗುವ ಮೊದಲುಶಿಷ್ಯಂದಿರು ಒಂದು ಮರದ ಕೊರಡು! ಅದನು ಗುರುವು ತಮ್ಮಲ್ಲಿನಅಪಾರ ಪಾಂಡಿತ್ಯ ಹಾಗೂಶಿಷ್ಯನ ಮೇಲಿನ ಪ್ರೀತಿಯಿಂದಸ್ಪರ್ಶಿಸಿ, ಸಲಹಿ, ಬೋಧಿಸಿ,ಸಂರಕ್ಷಿಸಿ ಗಂಧದ ತುಂಡಾಗಿಸುತ್ತಾರೆ… ಹಂತ ಹಂತವಾಗಿ ಅದರಲ್ಲಿಸುಗಂಧವನ್ನು ತುಂಬಿಸುತ್ತಾರೆ. ಇದು ಕೊರಡಲ್ಲವೆಂದೂಸುಗಂಧಭರಿತ ಕೊರಡೆಂದೂಶಿಷ್ಯನಿಗೆ ಅರ್ಥೈಸಿತಿಳಿಯ ಪಡಿಸುತ್ತಾರೆ… ಅಲ್ಲದೇ ನಿನ್ನ ಶಕ್ತಿಯ ಪ್ರಕಾರಇದನ್ನು ತೇಯಿತೇಯುತ್ತಲ್ಲೇ ಇರು.ಎಷ್ಟೆಷ್ಟು ತೇಯುವಿಯೋಅಷ್ಟಷ್ಟೂ ನಿನ್ನ ಪರಿಸರವುಸುಗಂಧಭರಿತವಾಗುವುದುಎನ್ನುವರು ಗುರು…. ಗುರುಭ್ಯೋ ನಮಃ 🙏 ತುಂಕೂರ್ ಸಂಕೇತ್ ಸಕಲ ಗುರುಗಳಿಗೆಲ್ಲಾ ಕೋಟಿ ನಮನ 🙏Read More

74ನೇ ವರ್ಷಕ್ಕೆ ಕಾಲಿಟ್ಟ ಕನ್ನಡದ ವಿಭಿನ್ನ ನಟ ಅನಂತ್‍ನಾಗ್

ಅನಂತ್ ಎಂದರೆ ಕನ್ನಡ ಚಿತ್ರಪ್ರೇಮಿಗಳಿಗೆ ಆನೆಯನ್ನು ತಡವಿದಂತೆ. ಇನ್ನೂ ಅನಂತ್ ಏನೆಂದು ಅರ್ಥವಾಗೇ ಇಲ್ಲಾ ಎಂದರೆ ತಪ್ಪಾಗಲಾರದು. ಅನಂತ್ ತಮ್ಮ ಅಭೂತಪೂರ್ವ ನಟನೆಯಿಂದ ಮೂರು ತಲೆಮಾರಿನ ಸಿನಿಪ್ರಿಯರನ್ನು ರಂಜಿಸುತ್ತಿದ್ದಾರೆ. “ಹಂಸಗೀತೆ, ಕನ್ನೇಶ್ವರ ರಾಮ” ಗಳಂತಹ ಚಿತ್ರಗಳನ್ನು ನೋಡಿದ್ದ ಹಿರಿಯರಿಗೆ ಅನಂತ್ ಅವರಲ್ಲಿ ಕಂಡಿದ್ದೇ ಬೇರೆ. ಆನಂತರದಲ್ಲಿ ನಟಿಸಿದ ಮಧ್ಯಮ ವರ್ಗದ ಸಾಮಾನ್ಯನ ಪಾತ್ರದಲ್ಲಿ ಲಕ್ಷ್ಮೀ ಅವರ ಜೋಡಿಯಾಗಿ ನಟಿಸಿದ್ದನ್ನು ಎರಡನೇ ತಲೆಮಾರಿನವರ ತಲೆಯಲ್ಲಿ ಈಗಲೂ ಉಳಿದಿದೆ. ಇತ್ತೀಚಿಗೆ ಹಾಸ್ಯ ಪಾತ್ರಗಳಲ್ಲದೇ ವಿಭಿನ್ನ ಪಾತ್ರಗಳಲ್ಲಿ ನೈಜವಾಗಿ ನಟಿಸಿ ಈ […]Read More

‘ಒನ್ ವುಮೆನ್ ಶೋ’ ಮಾಡಬೇಕೆಂಬ ರಂಗಕರ್ಮಿ ಮಾಧುರಿ ಕೆ ಶಿವಣಗಿ

ರಂಗಭೂಮಿಯು ಒಮ್ಮೆ ಸೆಳೆಯಿತೆಂದರೆ ಸಾಕು. ಅದರಿಂದ ಹೊರ ಬರಲು ಸಾಧ್ಯವೇ ಇಲ್ಲಾ. ಕುಟುಂಬದಲ್ಲಿನ ಒಬ್ಬ ವ್ಯಕ್ತಿಯು ಈ ರಂಗಕ್ಕೆ ಪ್ರವೇಶ ಕೊಟ್ಟರೆ ಆ ವ್ಯಕ್ತಿಯ ಮುಂದಿನ ಎರಡು ಮೂರು ಪೀಳಿಗೆಯೂ ಇದರಲ್ಲಿ ಸಕ್ರಿಯರಾಗುತ್ತಾರೆ. ಅದು ಖಚಿತ. ರಂಗಕ್ಕೆ ಅಷ್ಟು ಸೆಳೆತವಿದೆ! ಈ ನಿಟ್ಟಿನಲ್ಲಿ ಮಹಿಳಾ ರಂಗಕರ್ಮಿ ಮಾಧುರಿ ಕೆ ಶಿವಣಗಿ ಅವರೂ ಇಂತಹ ಸೆಳೆತಕ್ಕೆ ಒಳಗಾಗಿದ್ದಾರೆ. ಓದಿದ್ದೇ ಬೇರೆ ವೃತ್ತಿಯೇ ಬೇರೆ. ಆದರೆ ತಮ್ಮ ತಂದೆಯಲ್ಲಿದ್ದ ರಂಗದ ನಂಟು ಮತ್ತೆ ಈಕೆಯಲ್ಲಿ ತುಡಿತವನ್ನು ಉಂಟು ಮಾಡಿ ಈ […]Read More

ಗಂಜೀಫಾ ಚಿತ್ರಕಲೆ ಮತ್ತು ಸಾಂಸ್ಕೃತಿಕ ನೇಪಥ್ಯ

ಗಂಜೀಫಾ ಚಿತ್ರಕಲೆಯು ಸಂಪ್ರದಾಯಿಕ ಚಿತ್ರಕಲಾ ಪ್ರಪಂಚದ ಒಂದು ವಿಶಿಷ್ಟವಾದ ಕಲಾ ಕೊಡುಗೆ. ‘ಗಂಜೀಫಾ ಕಲೆಯು ಮೊಘಲರ ಕಾಲದಲ್ಲಿ ಇರಾನ್ ದೇಶದಿಂದ ನಮ್ಮ ಭಾರತಕ್ಕೆ ಬಂದ ಕಲೆ. ಹಾಗೆ ಬಂದ ಪರ್ಷಿಯನ್ನರ ಈ ಕಲೆ ಈಗ ಭಾರತೀಯ ಕಲೆಯೇ ಆಗಿಬಿಟ್ಟಿದೆ. ಮೈಸೂರು ಶೈಲಿಯ ಗಂಜೀಫಾ ಕಲೆ, ಆಟಗಳ ಶ್ರೇಯಸ್ಸು, ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ಸೇರಬೇಕು. ಮುಮ್ಮಡಿಯವರನ್ನು ಒಳಗೊಂಡಂತೆ ಮೈಸೂರಿನ ಅರಸು ಮನೆತನದವರು ಸಾಹಿತ್ಯ, ಚಿತ್ರಕಲೆ, ನೃತ್ಯ, ಕ್ರೀಡೆ ಎಲ್ಲವನ್ನೂ ಸೇರಿದಂತೆ ಅನೇಕ ಕಲಾಪ್ರಕಾರಗಳ ಉನ್ನತಿಗೆ ಕಾರಣರಾಗಿದ್ದಾರೆ. ಆಗ ಇದನ್ನು […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 6

ಚಿಟಿಕೆ ಹೊಡೆವಷ್ಟರಲಿ ಹೇಳಿ ಮುಗಿಸುವ ಕವನಪಠಿಸಿದರೆ ಸಾಕೊಮ್ಮೆ ನೆನಪಿಗೂ ಸುಲಭ.ಜಟಿಲತೆಯ ತೊಡಕಿಲ್ಲ; ಸುಲಿದ ಬಾಳೆಯ ಹಣ್ಣುಚುಟುಕ ಹೃದಯಂಗಮವು- || ಪ್ರತ್ಯಗಾತ್ಮ || ಹೂವಿಂದ ಹೂವಿಂಗೆ ಹಾರುತ್ತ ತಂದಿರುವೆಹೂವೊಡಲೊಳಿದ್ದಂಥ ಮಕರಂದವನ್ನುನೀವಿದನು ಸವಿನೋಡಿ ಮೆಚ್ಚಿದರೆ ಬಂಡುಣಿಗೆಆವುದಿದೆ ಬೇರೆ ಸುಖ?- || ಪ್ರತ್ಯಗಾತ್ಮ || ಈ ಜಗದಿ ದುಃಸಾಧ್ಯವೆಂಬುದಾವುದೂ ಇಲ್ಲಸಜ್ಜನ ಮಹಾಮಹಿಮ ಪುರುಷ ಸಿಂಹನಿಗೆ,ಆಂಜನೇಯನು ತಾನು ಶರಧಿಯನೆ ದಾಟಿದನುಸೋಜಿಗವದೇನಲ್ಲ- || ಪ್ರತ್ಯಗಾತ್ಮ || ಯಾವುದೇ ವಿಷಯದಲಿ ಸಂಶಯವು ಮೂಡಿರಲುಯಾವ ವ್ಯಕ್ತಿಯ ಕಡೆಗೂ ಹೋಗದಿರು ಒಡನೆ,ಸಾವದಾನದಿ ಕುಳಿತು ಆತ್ಮಚಿಂತನೆ ಮಾಡುಕಾವುದೈ ನಿನ್ನರಿವು- || […]Read More

ಪ್ರಕೃತಿ vs ಮನುಜ

ಓ ಮನುಜ,ಸಾವಿನ ಸ್ವರಕೇ ಅಂಜಿಹೆ ನೀ,ಸತ್ತ ಪ್ರತಿ ಸಲವುಬಿಟ್ಟ ಕೇವಲ ಕಣದಿಂ ಹುಟ್ಟಿಅರಳಿ ಮರಳಿಹೆ ನಾ.. ಬದುಕ ನಡೆಸುವ ಕರ್ಮ ನಿನಗೆಉಸಿರನ್ ಇತ್ತು,ಅನ್ನವ ಕೊಟ್ಟುಉಳಿಸಿ ಬೆಳೆಸುವ ಮರ್ಮ ಎನಗೆ … ಬದುಕುವ ಬವಣೆಗೆಕೊಲ್ಲುವ ಸ್ವಾರ್ಥಿ ನೀನಾದೆನೀ ಎಷ್ಟೇ ಕೊಂದರು, ಕೊಟ್ಟು ಕಾಯುವಬದುಕಿಗೆ ಅರ್ಥ ನಾನಾದೆ … ಮರಣಕೆ ಮರುಗುವ ಮನುಜಅರಿವನೆ ಮರೆತೆಯ ತನುಜಕಷ್ಟದಲಿ ತಾಳ್ಮೆಯಿಂ ತಾಳುಬಂದಷ್ಟು ದಿನ ಬದುಕಿ ಬಾಳು … ಸಮಾಜದ ಸಮರದೊಳ್ಸತ್ಕಾರ್ಯವ ಮಾಡು,ನಿಸರ್ಗವ ಅಳಿವಸಾವಿಗೇ ಸಾವಾಗು,ಪ್ರಕೃತಿಯ ಬದುಕಿನಬಸಿರಿಗೇ ಉಸಿರಾಗು … ಅRead More

ಒಂಟಿಮನೆ-1

ಶ್ವೇತ ವರ್ಣದ ಒಂಟಿ ಮನೆ, ಮನೆಯ ಹಿಂದೆ ಕಗ್ಗತ್ತಲ ಕಾಡು  ಮನೆಯ ಮುಂದೆ ಅಡಿಕೆ ತೋಟ. ನೋಡಲು ಸುಂದರವಾದ ತಾಣವಾಗಿದ್ದರೂ ಅಲ್ಲಿ ನಡೆದ ಕೆಲ ಘಟನೆಗಳಿಂದ ಯಾರೂ ಆ ಮನೆ ಕೊಳ್ಳುವ ಧೈರ್ಯ ಮಾಡಿರಲಿಲ್ಲ. ಕೃಷಿಯ ಮೇಲಿನ ಆಸಕ್ತಿಯಿಂದ ಪಟ್ಟಣ ತೊರೆದು ಬಂದ ದಂಪತಿಗಳು ಊರಿನ ಎಷ್ಟೋ ಜನ ಎಷ್ಟು ರೀತಿಯಾಗಿ ಆ ಮನೆಯ ಬಗ್ಗೆ ಎಚ್ಚರಿಸಿದರು ಕೇಳದೆ ಆ ಮನೆ ಮತ್ತು ತೋಟವನ್ನು ಕೊಂಡಿದ್ದರು.ಆ ದಂಪತಿಗಳಿಗೆ ವಿಜ್ಞಾನದ ಹೊರತು ಮೂಢನಂಬಿಕೆಗಳ ಬಗ್ಗೆ ನಂಬಿಕೆ ಇರಲಿಲ್ಲ. ಮನೆ […]Read More

ಪರಾಭವ ಭಾವನಾ – 7 ಯತಿರಾಜ್‌ ವೀರಾಂಬುಧಿ

ಹಿಂದಿನ ಸಂಚಿಕೆಯಿಂದಅಗಸ್ತ್ಯನ ಮನೆಯಲ್ಲಿ ನಾಗ ಗಾಂಧಾರಿಯನ್ನು ಕಂಡ ಅಪ್ರಮೇಯನಿಗೆ ತನ್ನ ಹಾಗು ಅವಳ ಬಾಲ್ಯದ ನೆನಪುಗಳು ಮರುಕಳಿಸಿ ಅವಳ ಪ್ರೇಮಪಾಶದಿಂದ ಪಾರಾದ ಬಗೆಯನ್ನು ಚಿಂತಿಸುತಿದ್ದಾಗ ಅಗಸ್ತ್ಯ ವಾಗ್ವಾದಕ್ಕೆ ಬಿದ್ದು ನಾಗ ಗಾಂಧಾರಿಯು ನಿನಗೋಸ್ಕರ ಇನ್ನು ಮದುವೆಯಾಗದೆ ಉಳಿದಿರುವಳು ಎಂದು ಅಪ್ರಮೇಯನಿಗೆ ನೆನಪಿಸಿದ. ಅಪ್ರಮೇಯ ನಿರಾಕರಿಸಿದ್ದಕ್ಕೆ ನಾಗ ಗಾಂಧಾರಿಯು ಸಿಟ್ಟಿನಿಂದ ಕಿರುಚುತ್ತಾ “ನಾನು ನಿನ್ನ ಜೊತೆಗೆ ಜೋಷಿಮಠದ ಆಶ್ರಮಕ್ಕೆ ಬರ್ತೀನಿ. ಅದೇನು ಮಾಡ್ತೀಯೋ ಗೊತ್ತಿಲ್ಲ” ಎನ್ನುತ್ತಾ ಹೊರಬಂದು “ಈ ಅಪ್ರಮೇಯನಿಗೆ ಬುದ್ಧಿ ಕಲಿಸ್ತೇನೆ. ಅವನಿಗೆ ಕೆಟ್ಟ ಹೆಸರು ಬರುವಂತೆ […]Read More