ಅಂಗವಿಕಲತೆಯನ್ನು ವರವಾಗಿಸಿಕೊಂಡ -ಮಾನಸಿ ಜೋಶಿ

ಅಂಗವಿಕಲತೆಯನ್ನು ವರವಾಗಿಸಿಕೊಂಡ -ಮಾನಸಿ ಜೋಶಿ ಹೆಣ್ಣಿನ ಮುಖದ ಮೇಲೆ ಒಂದೆರಡು ಮೊಡವೆಗಳು ಬಿದ್ದರೆ ಏನೋ ಅನಾಹುತವೇ ನಡೆದಿದೆ ಎನ್ನುವಂತೆ ಆಡುವ ಸಮಾಜದಲ್ಲಿ ಯಾವನೋ ಒಬ್ಬ ಲಾರಿ ಡ್ರೈವರ್ ಮಾಡಿದ ಆಚಾತುರ್ಯದಿಂದ ಆಕ್ಸಿಡೆಂಟ್ ನಲ್ಲಿ ತನ್ನ ಕಾಲನ್ನೇ ಕಳೆದುಕೊಂಡ ಮಾನಸಿ ಗಿರೀಶ್ಚಂದ್ರ ಜೋಶಿ ಸಮಾಜದಲ್ಲಿನ ಹೆಜ್ಜೆ ಹೆಜ್ಜೆಗೂ ಮೂದಲಿಕೆ, ಅಪಹಾಸ್ಯ, ತಿರಸ್ಕಾರದ ಮಾತುಗಳಿಂದ ಬೇಸತ್ತು ತಮ್ಮ ಬದುಕನ್ನು ಕೊನೆಗಣಿಸಿಕೊಳ್ಳಲು ನಿರ್ಧರಿಸಿದ್ದರು. ಅಪ್ಪನಂತೆ ತಾನೂ ವಿಜ್ಞಾನಿ ಆಗಬೇಕೆಂಬ ಬಾಲ್ಯದ ಕನಸನ್ನು ನನಸು ಮಾಡುವ ಇಂಜಿನಿಯರಿಂಗ್ ಮುಗಿಸಿ ಕ್ಯಾಂಪಸ್ ಇಂಟರ್ವ್ಯೂನಲ್ಲಿಯೇ ಹಲವಾರು […]Read More

ಸಾಲವೆಂಬ ತಿರುಳು

ಸಾಲವೆಂಬ ತಿರುಳು ಮೌನವದು ಬಿಕ್ಕಿ ತಾ ಸೋತಾಗಮಾತುಗಳು ಮನಕೆ ಬೇಡವಾದಾಗಮೌನ-ಮಾತುಗಳ ಮಂಥನದಿ ಕ್ಷಣವುರುಳಿದಾಗ..ನಿನ್ನ ಕಾಳಜಿಯ ಸಾಲ ಕೊಡುವೆಯಾ !!? ಅಂತರಾಳವು ಬೇಸರದ ಕದ ಮುಚ್ಚಿದಾಗಬಾಳಲಿ ಸಂತಸವು ಮರೆಯಾದಾಗನೋವು-ನಲಿವಿನುಯ್ಯಾಲೆಯಲಿ ಮನ ಜೀಕಿದಾಗ…ನಿನ್ನ ನಸುನಗುವಿನ ಸಾಲ ನೀಡುವೆಯಾ !!? ಕಡಲಿನ ಅಲೆಗಳೊಂದಿಗೆ ಒಂಟಿಯಾದಾಗದುಗುಡವೇ ನಿತ್ಯ ಜಂಟಿಯಾದಾಗಏಕಾಂತವೇ ಬದುಕಿನ ಭಾಗವಾದಾಗ…ನಿನ್ನ ಒಲವಿನಾಸರೆಯ ಸಾಲ ಕೊಡುವೆಯಾ !!? ನಡೆವ ಹಾದಿಯದು ಕಗ್ಗಂಟಾದಾಗನುಡಿವ ಹೃದಯವೇ ಒಗಟಾದಾಗನಡೆದು ನುಡಿವ ಪಯಣದಿ ಸೋತು ಕುಗ್ಗಿದಾಗ…ನಿನ್ನ ಸಾಂಗತ್ಯದ ಸಾಲ ನೀಡುವೆಯಾ !!? ಸುಮನಾ ರಮಾನಂದRead More

ಕಾಲಚಕ್ರ

ಕಾಲಚಕ್ರ ಬದಲಾಗುತಿದೆ ಕಾಲ ಬದಲಾಗುತಿದೆಜಂಜಡದ ಜೀವನವು ಬದಲಾಗುತಿದೆಎಲ್ಲೆಲ್ಲೂ ಹಣದ ಹೊಳೆಯು ಹರಿಯುತಿದೆ ಹುಟ್ಟುವ ಮೊದಲೇ ಹಸುಗೂಸಿನ ಜೀವಕೆಸಾವಿರಾರು ರೂಪಾಯಿಗಳ ಪ್ಯಾಕೇಜುಪ್ರತಿಷ್ಟೆಯ ಮನಕೆ ಇದೊಂದು ರಿವಾಜು ಮಗು ಹುಟ್ಟಿದ ಸಂಭ್ರಮದಲಿ ಹುಡುಕಾಟ ಆರಂಭಶಾಲೆಗಳ ಮುಂದೆ ಸರದಿ ನಿಲ್ಲಲು ಪ್ರಾರಂಭಇದೇ ಶಾಲೆಯ ಸೀಟು ಬೇಕೆಂಬ ಒಣಜಂಭ ಮುಂದೊಂದು ದಿನ ಮದುವೆಯ ಹುಡುಕಾಟಲಗ್ನ ವರದಕ್ಷಿಣೆಗಳ ಜೊತೆ ಬೀಗರೂಟನೋಡುವವರಿಗಂತೂ ಸುಂದರ ನೋಟ… ಕೇಳಿದಷ್ಟು ಸಾಲಕೊಡುವ ಬ್ಯಾಂಕುಗಳುಗೃಹಸಾಲ, ಮದುವೆ ಸಾಲ, ಶಿಕ್ಷಣದ ಸಾಲಗಳುಬೆನ್ನತ್ತಿ ನಿಲ್ಲುವ ಅದೇ ಬ್ಯಾಂಕಿನ ಇಎಂಐಗಳು ನಾವು ಮಾಡುವ ತಪ್ಪಿಗೆ ಮಾಡುವೆವು […]Read More

ನಂದನವನದ ಪಕ್ಷಿಗಳು – Birds of Paradise

ನಂದನವನದ ಪಕ್ಷಿಗಳು – Birds of Paradise ಪಕ್ಷಿಗಳಿಗೆ ಗರಿಗಳು ಮುಖ್ಯವಾಗಿ ಮೂರು ಉದ್ದೇಶಗಳಿಗೋಸ್ಕರ ಇರುತ್ತವೆ. ಹಾರಾಟ, ರಕ್ಷಣೆ ಮತ್ತು ಆಕರ್ಷಣೆ. ಪಕ್ಷಿ ಲೋಕದಲ್ಲಿ ಸ್ವರ್ಗಲೋಕದ ಹಕ್ಕಿಗಳು ಅಥವಾ ನಂದನವನದ ಹಕ್ಕಿಗಳೆಂದೇ ಸುಪ್ರಸಿದ್ದವಾಗಿರುವ ಪಪುವಾ ನ್ಯುಗಿನಿಯಾದ “ಪ್ಯಾರಾಡೈಸೀಈಡೇ” ಕುಟುಂಬಕ್ಕೆ ಸೇರಿದ ಈ ಪಕ್ಷಿಗಳು ಪಕ್ಷಿ ಜಗತ್ತಿನಲ್ಲಿಯೇ ಅತ್ಯಂತ ಆಕರ್ಷಣೀಯ ರೆಕ್ಕೆ ಗರಿಗಳನ್ನ ಹೊಂದಿವೆ. ಈ ಪಕ್ಷಿಗಳು ವಿಶೇಷವಾಗಿ ಇಂಡೋನೇಷ್ಯಾ , ಆಸ್ಟ್ರೇಲಿಯಾ ಮತ್ತು ಪಪುವಾ ನ್ಯುಗಿನಿಯಾ ದೇಶಗಳ ಅರಣ್ಯಪ್ರದೇಶಗಳಲ್ಲಿ ಕಂಡುಬರುತ್ತವೆ. 4.7 ರಿಂದ 39 ಇಂಚುಗಳವರೆಗೆ ಗಾತ್ರದಲ್ಲಿರುವ […]Read More

ಕಲ್ಲಂಗಡಿಯಲ್ಲಿ ಕಲಾವಿದನ ಕೈಚಳಕ

ಕಲ್ಲಂಗಡಿಯಲ್ಲಿ ಕಲಾವಿದನ ಕೈಚಳಕ ಕಲಾವಿದ ನಿದ್ದೆಯಲ್ಲೂ ಕಲೆಯನ್ನು ಆರಾಧಿಸುವವನು. ಕಲೆ ಎಂಬುದು ಒಂದೇ ಕ್ಷೇತ್ರದ ಸೊತ್ತಲ್ಲ, ಯಾವುದೇ ಕ್ಷೇತ್ರವಿರಲಿ ಅಲ್ಲಿ ಆಸಕ್ತಿ ಮತ್ತು ಶ್ರದ್ಧೆಯಿಂದ ಕೌಶಲವನ್ನು ಧಾರೆಯೆರೆದರೆ ಸಾಧಕನ ಪಟ್ಟ ದೊರೆತು ಸಾಧನೆಯ ತೃಪ್ತಿಯೂ ಶೀಘ್ರವಾಗಿ ದೊರೆಯುತ್ತದೆ. ಇಂತಹ ಸಾಧನೆಯ ಹಾದಿಯಲ್ಲಿರುವವನು ಧಾರವಾಡ ಜಿಲ್ಲೆಯ ಕೇಲಗೇರಿಯ ಯುವಕ ಅಮೃತ್ ಗೌಡ ಭಾವಿಕಟ್ಟಿ. ಹದಿನೆಂಟು ವರ್ಷದ ಯುವಕ ಅಮೃತ್ ಗೌಡ ಭಾವಿಕಟ್ಟಿ ಪ್ರಸ್ತುತ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಧಾರವಾಡದ ಜೆ.ಎಸ್.ಎಸ್ ಕಾಲೇಜಿನಲ್ಲಿ ಓದುತ್ತಿದ್ದಾನೆ. ಯುವಕ ಎಂದಾಕ್ಷಣ ನಮ್ಮ ಮುಂದೆ […]Read More

ಅಯೋಧ್ಯೆಯ ಕನಸು

ಅಯೋಧ್ಯೆಯ ಕನಸು ಅಯೋಧ್ಯೆಯಲ್ಲಿ ರಾಮಮಂದಿರಕಟ್ಟಿಬಿಟ್ಟರು ಬಹಳ ಸುಂದರಮರೆಯದೆ ನೋಡಿರಿ ಜನವೆಲ್ಲ,,,ಹನುಮನ ಭಕ್ತಿಗೆ ಮಿತಿಯಿಲ್ಲ.!!೧!! ಹನುಮನ ಹಾಗೆ ಭಜನೆಯ ಮಾಡುತಮರ್ಯಾದ ರಾಮನ ಮನದಿ ನೆನೆಯುತಪ್ರಭು ಸೀತಾರಾಮನ ಕೊಂಡಾಡಿ,,,ರಾಮ ಭಕ್ತಿಯಲಿ ತೆಲಾಡಿ.!!೨!! ಶಬರಿಯ ಹಾಗೆ ಕಾದು ಕುಳಿತಿಹರುಹನುಮನ ರೀತಿ ಜಪವಗೈದಿಹರುಗುಡಿಯ ನೋಡಲು ಬಂದೇ ಬರುವರುರಾಮ ಕೋಟಿಯನು ಬರೆದು ತರುವರು.!!೩!! ರಾಮ ನವಮಿಗೆ ಪಾನಕ ಹಂಚುವಅನ್ನದಾನದ ಘನತೆ ಮೆರೆಸುವಏಕೈಕ ಧರ್ಮವು ನಮ್ಮದು,ನಿಮ್ಮದುಜಗದ ಒಳಿತಿಗೆ ಬೆಳಕು ಕೊಡುವುದು .!!೪!! ಅಳಿಲು ಸೇವೆಯ ಧರ್ಮರಕ್ಷಕರುರಾಮನ ಗುಡಿಗೆ ಸೇವೆಗೈದಿಹರುಅಕ್ಷತೆ ಕೊಟ್ಟು ಕೂಗಿ ಕರೆದಿಹರುಅಯೋಧ್ಯೆಗೆ ಬನ್ನಿರಿ,,, ಶ್ರೀ […]Read More

ಭೇಟಿ

ಭೇಟಿ ಹೊಂಗನಸ ಹಾದಿಯಲಿಹಾದು ಹೋಗುವ ತವಕ,ತಡೆಯಾಗದಿರಿಯೆನಗೆಮನದ ಭಾವಗಳೆ; ಆಗು-ಹೋಗುಗಳೆಡೆಗೆಗಮನವೆನಗಿಂದಿಲ್ಲ,ಗುರಿಯೊಂದೇ ನನ್ನಕಣ್ಮುಂದೆಯಿಹುದು ; ದೂರ ದೂರದಲಿರುವಬೆಳಕಿನೋಕುಳಿಯೀಗ,ಮಾತಿರದೆ ಮೌನದಲೇ,ನನ್ನ ಸೆಳೆಯುತಿದೆ; ಅಡೆತಡೆಗಳಾವುದೂನನಗೆ ತಡೆಯಾಗದು,ಧ್ಯಾನಸ್ಥ ಮನಕಾವಮಸುಕು ಮುಸುಕದು! ಹೋಗಿ ಸೇರುವೆನಲ್ಲಿನೆಲಮುಗಿಲಿನಂಚಿನಲಿ,ಸಾಗರನು ಆಗಸವಸಂಧಿಸುವ ಸಮಯದಿ! ಶ್ರೀವಲ್ಲಿ ಮಂಜುನಾಥಬೆಂಗಳೂರುRead More

ಕಳ್ಳ ಖದೀಮ ಕಡಲ ಹಕ್ಕಿ – ಫ್ರಿಗೇಟ್

ಕಳ್ಳ ಖದೀಮ ಕಡಲ ಹಕ್ಕಿ – ಫ್ರಿಗೇಟ್ ಅಟ್ಲಾಂಟಿಕ್ ಮಹಾಸಾಗರ ಹಾಗು ಪೆಸಿಫಿಕ್ ಸಾಗರದ ತೀರದಲ್ಲಿ ಪೆಂಗ್ವಿನ್ ತರಹದ ಬೂಬಿ ಎಂಬ ಸಣ್ಣ ಗಾತ್ರದ ಹಕ್ಕಿಗಳು ಕಾಣಸಿಗುತ್ತವೆ, ಈ ಆಕರ್ಷಕ ಹಕ್ಕಿಗಳ ಮುಖ್ಯ ಆಹಾರ ಸಾಗರದ ಮೀನುಗಳು. ಬೂಬಿ ಹಕ್ಕಿಗಳು ದಿನದಲ್ಲಿ ಸಾಕಷ್ಟು ಮೀನು ಹಿಡಿಯುತ್ತವಾದರೂ ಅವುಗಳ ಹೊಟ್ಟೆಗೆ ಸೇರುವುದು ಅದರಲ್ಲಿನ ಶೇಕಡ 40 ರಷ್ಟು ಮಾತ್ರ. ಮೀನನ್ನು ಹಿಡಿದ ಖುಷಿಯಲ್ಲಿ ಬೂಬಿ ಹಕ್ಕಿಗಳು ತನ್ನ ಸಂಗಾತಿಯತ್ತ ತಿರುಗುವಷ್ಟರಲ್ಲಿ ಅದೆಲ್ಲಿರುತ್ತದೋ ಕಳ್ಳ ಖದೀಮ ಫ್ರಿಗೇಟ್ ಹಕ್ಕಿ ಯುದ್ಧ […]Read More

ಕೋಪವನ್ನು ಗೆದ್ದವನು ಬದುಕನ್ನು ಗೆದ್ದಂತೆ

ಕೋಪವನ್ನು ಗೆದ್ದವನು ಬದುಕನ್ನು ಗೆದ್ದಂತೆ ಇತಿಹಾಸದ ಪುಟಗಳನ್ನು ತಿರುವಿದಾಗ ಅಲ್ಲಿ ಗೋಚರಿಸುವ ಮಹಾನ್ ವ್ಯಕ್ತಿಗಳು ಹುಟ್ಟುತ್ತಲೇ ಮಹಾನ್ ವ್ಯಕ್ತಿಗಳಾಗಿ ಹುಟ್ಟಿಲ್ಲ ಬದಲಿಗೆ ಅವರು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡ ವಿಶೇಷ ಮೌಲ್ಯಗಳಿಂದಾಗಿ ಮಹಾನ್ ವ್ಯಕ್ತಿಗಳಾಗಿ ಗೋಚರಿಸಿದ್ದಾರೆ. ಅಂತಹ ಮಹಾನ್ ವ್ಯಕ್ತಿಗಳು ತಮ್ಮ ಬದುಕಿನಲ್ಲಿ ಅರಿಷಡ್ವೈರಿಗಳನ್ನು ಸಮರ್ಥವಾಗಿ ಗೆದ್ದಿದ್ದಾರೆ ಎನ್ನಬಹುದು. ಮನುಷ್ಯನನ್ನು ಸದಾ ಕಾಡುವ ಅರಿಷಡ್ ವೈರಿಗಳ ಪೈಕಿ ಕಾಮ, ಕ್ರೋಧ, ಮೋಹ, ಲೋಭ, ಮದ, ಮತ್ಸರ ಇವುಗಳು ಪ್ರಮುಖವಾದದು. ಈ ಅರಿಷಡ್ವೈರಿಗಳು ಸದಾ ಯಶಸ್ವಿ ಮನುಷ್ಯನನ್ನು ಕಾಡುತ್ತಲೇ ಇರುತ್ತಿದ್ದು, […]Read More

ಪ್ರೇಮ ಕವಿತೆ

ಪ್ರೇಮ ಕವಿತೆ ನಿನ್ನೀ ಕಣ್ಣು ಬೋರ್ಗರೆವ ಕಡಲುಅದರಲ್ಲಿ ನಾ ಅಲೆಯಂತೆ!ನೀ ನೊಮ್ಮೆ ನನ್ನ ನೋಡಲುನನ್ನೀ ಶಾಂತ ಅಲೆಯು ಉಣ್ಣಿಮೆಯ ಚಂದ್ರನಂತೆ!! ನನ್ನ ಕನಸಿಗೂ ನಿನ್ನದೇ ಕನವರಿಕೆಕಾರಣ! ಹೃದಯದಲಿ ಮೂಡಿದ ಪ್ರೇಮದ ಗರಿಕೆನೀ ಒಪ್ಪಿಗೆಯ ನೀರೆರೆದರೆಆಗುವುದು ಮುದುವೆಗೆ ವೇದಿಕೆಸಧ್ಯಕಷ್ಟು ಸಾಕು ಚಂದದ ಸಂಸಾರಕ್ಕೆ!! ಬಾಲ ಕನ್ನಡಿಗRead More