ಗಿಡುಗ ಬಂತು ಗಿಡುಗ ಬಿರು ಬೇಸಿಗೆಯ ಒಂದು ದಿನ, ಆಗಷ್ಟೇ ಮಧ್ಯಾನದ ಊಟ ಮುಗಿಸಿ ಆಫೀಸಿನ ಕೆಲಸ ಶುರುಮಾಡಿಕೊಂಡಿದ್ದೆವು, ನಮ್ಮ ಆಫೀಸಿನ ಆವರಣದಲ್ಲಿ ಒಂದು ದೊಡ್ಡ ಮಾವಿನ ಮರವು ಬೃಹದ್ದಾಕಾರದಲ್ಲಿ ಬೆಳೆದು ನಿಂತು ಅದರ ರೆಂಬೆ ಕೊಂಬೆಗಳು ನಾವು ಕೆಲಸ ಮಾಡುವ ಮೊದಲನೇ ಮಹಡಿಯ ಕಿಟಕಿಯ ಸಮೀಪದಲ್ಲೇ ಹಾದು ಗಾಳಿಗೆ ಮರವು ಆಫೀಸಿನ ಏರ್ ಕಡೀಷನರ್ ಕೂಡ ನಾಚುವಷ್ಟು ತಂಗಾಳಿ ಸೂಸುತಿತ್ತು. ಇದ್ದಕಿದ್ದ ಹಾಗೆ ದಪ್ ಎಂದು ಏನೋ ಬಿದ್ದ ಸದ್ದು, ಕಿಟಕಿಯ ಮೂಲಕ ನೋಡಲು ಪ್ರಯತ್ನ […]Read More
ಕತ್ತಲಿಂದ ಬೆಳಕಿನೆಡೆಗೆ ಅಂಧಕಾರ ಎತ್ತಲೆತ್ತಲೂ ಅಂಧಕಾರಕಾಣುವ ಕಣ್ಣಿಗೆ ಎಲ್ಲವೂ ಅಗೋಚರಸಕಲ ದೈವವೂ ಈ ಜೀವಕೆ ನಿರಾಕಾರಆಕಾರ ನಿರಾಕಾರದ ನಿಖರ ಸಾಕಾರದ ಗ್ರಹಚಾರ ಹೇ ದೇವನೇ ನೀನೇಕೆ ದೃಷ್ಟಿ ಕಿತ್ತುಕೊಂಡೆಪರವಾಗಿಲ್ಲ ಬಿಡು ಅಂತರ್ದೃಷ್ಟಿ ಕೊಟ್ಟೆನೋಡಲು ನೋಟವಿಲ್ಲದಿದ್ದರೇನುಸ್ಪರ್ಷಾನುಭವದ ಜ್ಞಾನಚಕ್ಷುವನ್ನು ಕೊಟ್ಟೆ ಎಲ್ಲರೂ ಪತ್ಯೂಷ ಸಂಧ್ಯೆ ಅಂತೆಲ್ಲಾ ಕೂಗಾಡಿದ್ರೆನಮ್ಮ ಪಾಲಿಗೆ ಎಲ್ಲವೂ ಕಾವಳವೇಬದುಕೇ ದುಸ್ತರ ಅಂದರಂತೆ ಎಲ್ಲರೂನಮಗ್ಯಾವುದೂ ಹಾಗನ್ನಿಸದಂತೆ ಮಾಡಿಟ್ಟೆ ಪಂಚೇಂದ್ರಿಯಗಳಲ್ಲಿ ಒಂದಂನಂತೂ ಕಿತ್ತುಬಿಟ್ಟೆಮಿಕ್ಕ ನಾಲ್ಕು ಇಂದ್ರಿಯಗಳನ್ನು ಹರಿತ ಮಾಡಿಬಿಟ್ಟೆಕಣ್ಣಿದ್ದೂ ಕುರುಡರಂತಿರುವವರ ನಡುವೆ ನಮ್ಮನ್ನಿಟ್ಟೆಎಲ್ಲರ ಡೋಂಗೀತನವ ನೀ ತೋರಿಸಿಬಿಟ್ಟೆ ಪ್ರಭುವೇ ನಿನಗೆಷ್ಟು […]Read More
ಗುದದ ರೋಗಗಳು (Anal diseases) ದಶಕಗಳಷ್ಟು ಹಿಂದಿನ ವಿಷಯ. ನಾನು ಆಗ, ಮೂಲವ್ಯಾಧಿ ಚಿಕಿತ್ಸೆಗೆ ಮಾತ್ರ ಮೀಸಲಾಗಿದ್ದ ನನ್ನ ಸ್ನೇಹಿತರೊಬ್ಬರ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. ಬೆಳಗಿನ ಒಂಭತ್ತರಿಂದ ಆರಂಭವಾಗಿ, ಸಂಜೆಯ ರಂಗು ಪಶ್ಚಿಮದಲ್ಲಿ ಮಾಯವಾಗುವವರೆಗೂ, ಕೇವಲ ಮೂಲವ್ಯಾಧಿ ರೋಗಿಗಳನ್ನೆ ಪರೀಕ್ಷಿಸಿ, ಶಸ್ತ್ರಚಿಕಿತ್ಸೆಗೆ ತಯಾರು ಮಾಡುವ ಕೆಲಸ ನನ್ನದಾಗಿತ್ತು. ಮನುಷ್ಯನಿಗೆ ಆತನ ಬದುಕಿನಲ್ಲಿ ಎಂಥೆಂಥ ಸಂಕಷ್ಟದ ಪರಿಸ್ಥಿತಿಗಳು ಬಂದೆರಗಬಹುದು ಎಂಬುದನ್ನು ಮನದಟ್ಟಾಗಿಸಲೋ ಎಂಬ ಹಾಗೆ ನಡೆದ ಆ ಘಟನೆ ನನಗೆ ಇನ್ನೂ ಕೂಡ ಮರೆಯಲಾಗದ್ದು; ಮತ್ತು ಅಷ್ಟಾದರು ಮನುಷ್ಯನ […]Read More
ಕಾಸ್ಕ್ವೆರ್ ಗುಹೆ ಇದು ವಿಶ್ವದ ಏಕೈಕ ಇತಿಹಾಸಪೂರ್ವ ನೀರೊಳಗಿನ ಗುಹೆ !! ಫ್ರಾನ್ಸ್ ನ ಕ್ಯಾಲಂಕ್ ಡೆ ಮೊರ್ಗಿಯೋದಲ್ಲಿರುವ ಈ ಗುಹೆಯನ್ನು 1991 ರಲ್ಲಿ ಕಂಡುಹಿಡಿಯಲಾಯಿತು. ಈ ಗುಹೆಯ ಪ್ರವೇಶದ್ವಾರವು ಸಮುದ್ರ ಮಟ್ಟಕ್ಕಿಂತ ಸುಮಾರು 37 ಮೀಟರ್(121ಅಡಿ) ಕೆಳಗಿದೆ,175 ಮೀ (574 ಅಡಿ ) ಉದ್ದವಿದೆ. ಮಾನವ ವಾಸಿಸುತ್ತಿದ್ದ ಸಮಯದಲ್ಲಿ ಈ ಗುಹೆಯು ಸಮುದ್ರ ತೀರದಿಂದ 6-10 ಕಿಲೋಮೀಟರ್ ಗಳಷ್ಟು ದೂರದಲ್ಲಿತ್ತು ಎಂದು ಅಂದಾಜು ಮಾಡಲಾಗಿದೆ. ಸುಮಾರು 30,000 ವರ್ಷಗಳಷ್ಟು ಹಳೆಯದಾದ ಈ ಗುಹೆಯಲ್ಲಿ ಇತಿಹಾಸ ಪೂರ್ವ […]Read More
ಅಪ್ಪು ಅಜರಾಮರ… ಹೆಮ್ಮೆಯ ಕರುನಾಡು ಮರೆಯದ ರಾಜರತ್ನನುಪ್ರೇಮದ ಕಾಣಿಕೆಯೊಂದಿಗೆ ಚಿತ್ರರಂಗಕ್ಕೆ ಬಂದನುಸನಾದಿ ಅಪ್ಪಣ್ಣನಲಿ ನಟನಾ ಚತುರನಾದನುತಾಯಿಗೆ ತಕ್ಕ ಮಗನಾಗಿ ಮನೆತನ ಬೆಳಗಿದನು ಕನ್ನಡ ಚಿತ್ರರಂಗದ ಹೊಸ ಬೆಳಕು ನೀನುವಸಂತ ಗೀತೆಯ ಹಾಡಿದ ಮೌರ್ಯನುಪಡೆದಿರಿ ಬೆಟ್ಟದ ಹೂವಿಗೆ ರಾಷ್ಟ್ರ ಪ್ರಶಸ್ತಿಯನುಯಾರಿವನು ಅಂದವರಿಗೆ ದೊಡ್ಮನೆ ಮಗನಾದವನು ನಗುನಗುತಾ ಬಾಳಿದ ಪರಶುರಾಮನುಅಪ್ಪಿ ಮುದ್ದಾಡಿತು ಕರುನಾಡು ಅಪ್ಪುವನುಅರ್ಪಿಸಿದರು ವೀರ ಕನ್ನಡಿಗನಿಗೆ ಹಾಲಿನ ಅಭಿಷೇಕವನುಆಕಾಶದೆತ್ತರಕ್ಕೆ ಏರಿದ ನಮ್ಮ ಬಸವನು ಪ್ರತಿ ಸಿನಿಮಾದಲಿ ಅಜಯ್ ಬಾರಿಸಿದವನುಅಭಿಮಾನಿಗಳ ಪಾಲಿಗೆ ಅರಸನಾದವನುಪರಮಾತ್ಮನಾಗಿ ಭೂಮಿಗೆ ಬಂದ ರಾಜ್ ನುಪೃಥ್ವಿಯೇ ಹಾಡಿ […]Read More
ಹೆಣ್ಣು ಹುಣ್ಣಲ್ಲ ಹೊನ್ನು.. ಪ್ರತಿ ಮನೆಯ ಮನಸಿನ ನಂದಾದೀಪ ಹೆಣ್ಣುನೆನಪಿರಲಿ ಅವಳೊಂದಿಗೂ ಸಮಾಜದ ಕಣ್ಣುಯಾರೊ ಮೂರ್ಖರಂದರು ಮಹಿಳೆಯು ಹುಣ್ಣುಸ್ತ್ರೀಯನು ದೂಷಿಸಿದರೆ ಸೇರಬೇಕಾಗುವುದು ಮಣ್ಣು ಸಿಗಬೇಕಾಗಿದೆ ಸ್ವಾತಂತ್ರ್ಯ ಪ್ರತಿಯೊಬ್ಬ ಹೆಣ್ಣಿಗೆಎಷ್ಟು ಕೆಲಸ ಮಾಡಿದರೂ ಇಲ್ಲ ನೆಮ್ಮದಿ ಮನಸ್ಸಿಗೆ ನಿಷ್ಕಲ್ಮಶವಾದ ಪ್ರೀತಿ ಅಡಗಿದೆ ಹೃದಯದೊಳಗೆಗುಡಿಯ ಕಟ್ಟಿ ಪೂಜಿಸಿ ಸ್ತ್ರೀಯ ತ್ಯಾಗದ ಮಹಿಮೆಗೆ ಮಹಿಳಾ ಸಮಾನತೆ ಕೇವಲ ಭಾಷಣಕ್ಕಾಗದಿರಲಿಮಹಿಳೆ ಅಬಲೆ ಅಲ್ಲ ಸಬಲೆ ಗೊತ್ತಿರಲಿಹೆಣ್ಣಿರದೆ ಗಂಡು ಶೂನ್ಯ ಎಂಬುದು ತಿಳಿದಿರಲಿಹೆಣ್ಮಕ್ಕಳ ಮನಸ್ಸಿಗೆ ನೋವಾಗದಂತೆ ಇರಲಿ ಕರುಣೆಗೆ ಮಮತೆಗೆ ತಾಯಿಯಾಗಿ ಹೆಣ್ಣುಪ್ರೀತಿಗೆ ಬಾಳಿಗೆ […]Read More
ಜಲ ಚತುರೆ ಈ ಗುಳುಮುಳಕ ಶಾಲೆಯ ಬೇಸಿಗೆ ರಜೆ ಬಂತೆಂದರೆ ಸಾಕು ನಾನು ನನ್ನ ತಂಗಿ ನಮ್ಮ ತಾಯಿಯೊಡನೆ ನಮ್ಮ ಅಜ್ಜಿಯ ಊರಿಗೆ ಹೊರಟು ಬಿಡುತ್ತಿದ್ದೆವು. ಮಂಡ್ಯದ ಬಸ್ ನಿಲ್ದಾಣದಲ್ಲಿ ಆ ಬಿರು ಬೇಸಿಗೆಯಲ್ಲಿ ಕೆಂಪು ಬಸ್ಸನ್ನು ಕಾಯುತ್ತಾ ಬಸ್ಸು ಬಂದೊಡನೆ ಸೀಟಿಗಾಗಿ ಖರ್ಚಿಫು, ಬ್ಯಾಗು ಇನ್ನಿತರ ವಸ್ತುಗಳನ್ನು ಕಿಟಕಿಯ ಮೂಲಕ ಹಾಕುವ ಜನರ ನಡುವೆ ನಾನು ಕಿಟಕಿಯಿಂದಲೇ ತೂರಿ ಒಳಗೆ ನುಗ್ಗಿ ಅದೇಗೋ ಮೂರು ಸೀಟಿನ ಜಾಗವನ್ನು ಆಕ್ರಮಿಸಿಬಿಡುತ್ತಿದ್ದೆ. ನಮ್ಮ ತಾಯಿ ಕೊನೆಯ ಸೀಟಿನಲ್ಲಿ ನನ್ನ […]Read More
ಗ್ಯಾಸ್ಟ್ರೈಟಿಸ್ (ಜಠರದುರಿತ) ಮೊದಲನೆಯದಾಗಿ ಈ ಲೇಖನದ ಶೀರ್ಷಿಕೆಯನ್ನು ಆರಂಭಕ್ಕೆ ಇಂಗ್ಲಿಷಿನಲ್ಲಿ ಬರೆದು, ನಂತರ ಆವರಣದೊಳಗೆ ಕನ್ನಡ ಪದವನ್ನು ಬರೆದ ಕಾರಣ ಏನೆಂದರೆ, ಇದೀಗ ವಾಸ್ತವದಲ್ಲಿ ಅನೇಕ ಇಂಗ್ಲಿಷ್ ಪದಗಳು ಕನ್ನಡ ಭಾಷಿಕರಲ್ಲಿ, ನಮ್ಮ ನಾಲಿಗೆಗೆ ತಕ್ಕ ಹಾಗೆ ಉಚ್ಛಾರದಲ್ಲಿ ಬದಲಾವಣೆಗೊಂಡು ಉಪಯೋಗಿಸಲ್ಪಡುತ್ತ, ಅವೂ ಸಹ ಕನ್ನಡ ಪದಗಳೇ ಏನೋ ಅನ್ನುವ ಹಾಗಾಗಿ, ಅವುಗಳ ಕನ್ನಡ ಅವತಾರದ ಪದಗಳು ಹೆಚ್ಚುಕಮ್ಮಿ ಮೂಲೆಗುಂಪಾಗಿವೆ. ಎರಡನೆಯದಾಗಿ, ಜನಸಾಮಾನ್ಯರ ಬಾಯಲ್ಲಿ ಅನೇಕ ಕನ್ನಡ ಪದಗಳನ್ನು ಇಂಗ್ಲಿಷ್ ಪದಗಳಷ್ಟು ಸುಲಭವಾಗಿ ಉಚ್ಛರಿಸುವುದೂ ಕಷ್ಟಕರ. ಉದಾಹರಣೆಗೆ […]Read More
ನೋವ ನುಂಗಿದ ನಂಜುಂಡರು ಎಂತಹ ನೆನಪುಗಳ ಸಂತೆ ನಮ್ಮ ಬಾಲ್ಯ !ಈಗ ನೆನೆಸಿಕೊಂಡರೆ ಮನಸ್ಸಿಗೆ ಮುದ !ಒಮ್ಮೊಮ್ಮೆ ನೋವು ಬಂದು ಬೇಸರವೆನಿಸುತ್ತದೆ !ಕಾಂಡಕಿ ಕಲ್ಲಿನ ಗಚ್ಚಿನಮನೆ, ಕೂಡು ಕುಟುಂಬ, ತಂದೆ-ತಾಯಿ, ದೊಡ್ಡಪ್ಪ-ದೊಡ್ಡವ್ವ, ಚಿಕ್ಕಪ್ಪ- ಚಿಕ್ಕವ್ವಎಲ್ಲರಿಗೂ ಮೂರು-ನಾಲ್ಕು ಮಕ್ಕಳು !ಮನೆಯಲ್ಲಿ ದಿನವು ಸಂತೆ ನೆರೆದಂತೆ !ಅಪ್ಪನೇ ಮನೆಯ ಯಜಮಾನಆತ ಹಾಕಿದ ಗೆರೆಯನ್ನು ಯಾರೂ ದಾಟುತ್ತಿರಲಿಲ್ಲ ! ಮನೆಯಲ್ಲಿಯ ಎಲ್ಲ ಹಿರಿಯರು ನಮ್ಮಂಥ ಚಿಕ್ಕವರನ್ನು ಎಷ್ಟು ಅಗಾಧಪ್ರೀತಿಯಿಂದ ನೋಡುತ್ತಿದ್ದರು !ಬೇಡ ಬೇಡವೆಂದರು ಒತ್ತಾಯ ಮಾಡಿಊಟ ಮಾಡಿಸುವ ದೊಡ್ಡವ್ವ-ಚಿಕ್ಕವ್ವ !ಸ್ನಾನಕ್ಕೆ ಬಿಸಿ […]Read More