ಅತಿಕ್ರಿಯಾಶೀಲ ಮೂತ್ರಕೋಶ ಅತಿಕ್ರಿಯಾಶೀಲ ಮೂತ್ರಕೋಶ (Overactive urinary bladder) ಎಂಬುದು ಹಲವಾರು ರೋಗಲಕ್ಷಣಗಳ ಸಮೂಹ ಬೇನೆಯಾಗಿದ್ದು, ಒಬ್ಬ ವ್ಯಕ್ತಿ ಎಷ್ಟು ಸಲ ಮೂತ್ರ ಮಾಡುವನು ಮತ್ತು ಮೂತ್ರ ವಿಸರ್ಜನೆಯ ಆತುರತೆ (urgency) ಆತನಿಗೆ ಎಷ್ಟಿರುತ್ತದೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣಗಳು, ಹೊಟ್ಟೆಯ ಮೇಲೆ ಬಿದ್ದ ಪೆಟ್ಟಿಂದ ಹಿಡಿದು, ಸೋಂಕು, ನರಗಳ ಹಾನಿ, ಕೆಲವು ಔಷಧಿ ಮತ್ತು ದ್ರವಗಳು. ನಡವಳಿಕೆಯ ಬದಲಾವಣೆಯಿಂದ ಆರಂಭಿಸಿ, ಔಷಧೋಪಚಾರ ಹಾಗು ನರಗಳ ಉತ್ತೇಜಕಗಳು ಮುಂತಾದವು ಈ ರೋಗದ ಚಿಕಿತ್ಸೆಗಳು. ಅತಿಕ್ರಿಯಾಶೀಲ […]Read More
ಧೈರ್ಯಂ ಸರ್ವತ್ರ ಸಾಧನಂ – ಪುಸ್ತಕ ವಿಮರ್ಶೆ ಪುಸ್ತಕದ ಹೆಸರು : ಧೈರ್ಯಂ ಸರ್ವತ್ರ ಸಾಧನಂ ಲೇಖಕರು : ಸಂತೋಷ್ ರಾವ್ ಪೆರ್ಮುಡ ಪ್ರಕಾಶಕರು : ನಿರಂತರ ‘ಧೈರ್ಯಂ ಸರ್ವತ್ರ ಸಾಧನಂ’ ನೈಜ ಘಟನೆಗಳಿಂದ ಕೂಡಿದ ಕಾಲ್ಪನಿಕ ಕಥಾ ಸಂಕಲನ. ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಸಂತೋಷ್ ರಾವ್ ಪೆರ್ಮುಡ ಅವರು ತಾವು ನೋಡಿದ, ಕೇಳಿದ, ಅನುಭವಿಸಿದ ಕೆಲವೊಂದು ಘಟನೆಗಳಿಗೆ ಕಲ್ಪನೆಯ ಸ್ಪರ್ಶ ನೀಡಿ ಹೆಣೆದ ಒಟ್ಟು 66 ಬರಹಗಳು ಇದರಲ್ಲಿವೆ. ಧೈರ್ಯವೊಂದಿದ್ದರೆ ಜೀವನದಲ್ಲಿ ಎದುರಾಗುವ ಎಲ್ಲಾ ಸವಾಲುಗಳನ್ನು ಅರ್ಧ […]Read More
ಒಲವಿನ ಸವಿಬಂಧನ ಮೊದಲ ಸಲ ನೋಡಿರಲುಕಂಗಳ ಕದತೆರೆದು ನಿ ಬಂದಿದ್ದೆ..!ಒಲವಿನ ಆ ನಿನ್ನ ನೋಟಕೆ..ಕಣ್ಣಂಚಲಿ ನಾ ಬಂಧಿಯಾಗಿದ್ದೆ!! ಮಂದಹಾಸದಿ ನಿ ನಕ್ಕಾಗನೂರೆಂಟು ಕನಸು ನಾ ಕಂಡಿದ್ದೆ..!ಹೃದಯವು ಬಿಡದೆ ಮಿಡಿದಾಗಲೇ..ಇನಿಯನಿವನೇ ಎಂದು ಬಗೆದಿದ್ದೆ!! ಕಣ್ಣಬಿಂಬದಲಿ ಸದಾ ನೀನಿರಲುಜನ್ಮಜನ್ಮಗಳೇ ನಂಬಿಕೆಯಲಿ ಕಾದಿದ್ದೆ..!ನಿ ತೋರಿದ ಒಲುಮೆಯ ಭಾವಕೆ..ಮನದಲೇ ನಿನ್ನ ನಾ ವರಿಸಿದ್ದೆ!! ಹೇಳು ಕೃಷ್ಣಾ..ನೀನೇಕೆ ನಿನಗಾಗಿಮೀಸಲಾದ ರಾಧೆಯ ತೊರೆದಿದ್ದೆ..!ನೀ ಬಂದೇ ಬರುವೆಯೆಂದು ನನಗಾಗಿ..ನಾ ನಿನ್ನ ಮನದುಂಬಿ ಪ್ರೀತಿಸಿದ್ದೆ!! ಸುಮನಾ ರಮಾನಂದRead More
ಮೊಸಳೆಯ ವಿರಾಮ ಮೊಸಳೆಗಳು ಆಗಾಗ ನದಿಗಳ ತೀರದಲ್ಲಿ ನಿಶ್ಚಲವಾಗಿ ಹೆಬ್ಬಂಡೆಯಂತೆ ಬಾಯ್ತೆರೆದು ಬಿಸಿಲಿಗೆ ಮೈಯೊಡ್ಡಿ ಸೋಮಾರಿಗಳ ತರ ಬಿದ್ದಿರುವುದನ್ನ ನೋಡುತ್ತಿರುತ್ತೇವೆ. ಇವು ಈ ರೀತಿ ಕಿಂಚಿತ್ತು ಚಲನವಿಲ್ಲದೇ ಸೂರ್ಯನ ಬಿಸಿಲಿನಲ್ಲಿ ಬಾಯ್ತೆರೆದು ಬಿದ್ದುಕೊಳ್ಳಲು ಪ್ರಮುಖವಾಗಿ ಎರಡು ಕಾರಣಗಳಿವೆ. 1) ನದಿ ತೀರದ ಮರಳಿನಲ್ಲಿ ತನ್ನ ಹಿಂಗಾಲಿನಿಂದ ಗುಂಡಿ ತೋಡಿ ಮೊಟ್ಟೆ ಇಡುವ ಉಭಯವಾಸಿ ಮೊಸಳೆಗಳು ಎಕ್ಟೋಥರ್ಮಿಕ್ ಪ್ರಾಣಿಗಳು (Ectothermic).ಇವುಗಳ ದೇಹದ ಉಷ್ಣತೆ ಪರಿಸರಕ್ಕನುಸಾರವಾಗಿ ತನ್ನಷ್ಟಕ್ಕೆ ತಾನೇ ಸ್ವಯಂ ಬದಲಾಯಿಸಿಕೊಳ್ಳುವುದಿಲ್ಲ. ಅಂದರೇ ದೇಹದ ಉಷ್ಣತೆ ತನ್ನಷ್ಟಕ್ಕೆ ತಾನೇ ನಿಯಂತ್ರಿತವಾಗುವುದಿಲ್ಲ. […]Read More
ಮಣಿಕರ್ಣಿಕಾ ಎಲ್ಲರ ಮೆಚ್ಚಿನ ಕೂಸಾಗಿ ಜನಿಸಿದಳುಕಾಶೀ ಪಟ್ಟಣದ ಮುದ್ದಿನ ಕುಡಿಯಿವಳುಮುದ್ದಿಗೆ ಮನುವೆಂಬ ಹೆಸರ ಹೊಂದಿದವಳು ಬಾಲ್ಯದಲಿ ಪೌರ್ಣಿಮೆಯ ಚಂದಿರನಂತೆಕಲೆಯಲ್ಲಿ ವಿದ್ಯೆಯಲ್ಲಿ ಸರಸ್ವತಿಯಂತೆಕಂಗೊಳಿಸುತ್ತಲಿ ಹೊಳೆವ ಮುತ್ತಾದಳು ಅಪರೂಪದ ಚೆಲುವೆಯಿವಳು ಮುದ್ದು ಮಗಳುಕತ್ತಿವರಸೆ ಅಶ್ವಸವಾರಿಯ ಜಯಿಸಿದವಳುವಿಪ್ರ ಸಮುದಾಯವನ್ನು ಬೆರಗಾಗಿಸಿದವಳು ರಾಜನ ಮನಗೆದ್ದು ಮಹಾರಾಣಿಯಾದಳುಪುತ್ರ ಮತ್ತು ಪತಿಯ ಅಗಲಿಕೆಗೆ ಶೋಕಿಸಿದಳುದತ್ತು ಪುತ್ರನ ಪಡೆದು ರಾಜ್ಯಭಾರವ ನಡೆಸಿದಳು ಆಂಗ್ಲರ ಕುಟಿಲೋಪಾಯಕ್ಕೆ ನಲುಗಿದವದಳುವಿಶ್ವಕ್ಕೇ ಮೊದಲ ಮಹಿಳಾ ಸೇನೆ ಕೊಟ್ಟವಳುಹಲ್ಲಿನಲಿ ಲಗಾಮು, ಎರಡೂ ಕರಗಳಲಿ ಖಡ್ಗಗಳು ಬೆನ್ನಿನ ಚೀಲದಲಿ ಹಸುಕಂದ ದಾಮೋದರಆಂಗ್ಲರ ವಿರುದ್ಧ ನಡೆಸಿದಳು ಹುನ್ನಾರಮೊಳಗಿಸಿದಳು […]Read More
ಜನುಮದ ಜೋಡಿ ಪ್ರೀತಿಸಿದೆನು ಒಲವಿನ ಗೆಳತಿ ನಿನ್ನನುಮರೆತು ದೂರವಾದೆ ನೀನು ನನ್ನನುನೀಡಿದೆ ಪ್ರೀತಿಯ ಸಂಕೇತವಾಗಿ ಉಂಗುರವನುನದಿಯಲಿ ಎಸೆದೆ ಒಲವಿನ ಉಡುಗೊರೆಯನು ಯಾರಿಲ್ಲದ ಊರಲ್ಲಿ ಪ್ರೇಮ ಲೋಕದಲಿವಾರೆಗಣ್ಣಿನ ನೋಟದಲ್ಲಿ ಸೆಳೆದೆ ಕಣ್ಣಲಿಮುಂಗುರುಳು ಸರಿಸುತ ಮಂದಹಾಸದಲಿಒಪ್ಪಿಸಿ ಬಿಟ್ಟೆ ಪ್ರೀತಿಯನ್ನು ಸಾಯಂಕಾಲದಲಿ ಪ್ರತಿವರ್ಷದ ಜನ್ಮದಿನಕ್ಕೆ ನಿನಗಾಗಿಸಂಭ್ರಮದ ಆಚರಣೆ ಏರ್ಪಡಿಸಿದೆ ಪ್ರೀತಿಗಾಗಿಮುತ್ತು ನೀಡಿ ಸಿಹಿಯ ತಿನಿಸಿದೆ ಗೆಳತಿಗಾಗಿಕೊಂಚ ಬಿಡುವು ಮಾಡಿಕೋ ರೂಪಸಿ ನನಗಾಗಿ ನನ್ನ ನಿಷ್ಕಲ್ಮಶ ಪ್ರೀತಿಗೆ ಮೋಸ ಮಾಡಿಹೋದೆಯಾ ಗೆಳತಿ ತಿರುಗಿ ನೋಡಿಒಪ್ಪಿಸಲೆ ಮತ್ತೆ ಪ್ರೀತಿಯನ್ನು ನಿನ್ನ ಕಾಡಿಎಲ್ಲೇ ಇದ್ದರೂ ನೀ […]Read More
ನಾರ್ವಲ್ ಎಂಬ ಸಮುದ್ರ ಸುಂದರಿ ಕೆನಡಾ, ಗ್ರೀನ್ಲ್ಯಾಂಡ್, ನಾರ್ವೆ ಮತ್ತು ರಶಿಯಾದ ಆರ್ಕಟಿಕ್ ಸಮುದ್ರದಲ್ಲಿ ಕಂಡುಬರುವ “ನಾರ್ವಲ್ ತಿಮಿಂಗಿಲುಗಳು” ತಿಮಿಂಗಿಲ ಪ್ರಭೇದಗಳಲ್ಲಿಯೇ ಅತ್ಯಂತ ವಿಶಿಷ್ಟ, ವಿಶೇಷ ಪ್ರಭೇದದ ತಿಮಿಂಗಿಲ ಎಂದು ಪರಿಗಣಿಸಲಾಗಿದೆ. ಇವುಗಳ ತಲೆಯಿಂದ ಬೆತ್ತದ ಬೊಂಬಿನಂತೆ ಉದ್ದನೆಯ ಸುರುಳಿಯಾಕಾರದ ದಂತ ಹೊರಹೊಮ್ಮಿರುತ್ತದೆ. ಉದ್ದವಾಗಿ ಈಟಿಯ ರೀತಿಯಲ್ಲಿ ಸುಮಾರು ಹತ್ತು ಪೀಟ್ ವರೆಗೂ ಬೆಳೆಯವ ಇವುಗಳ ದಂತಗಳು 10 ಮಿಲಿಯನ್ ಸೂಕ್ಷ್ಮಸಂವೇದಿ ನರಗಳನ್ನ ಹೊಂದಿರುತ್ತವೆ. ಅತ್ಯಂತ ಸೂಕ್ಷ್ಮ ಹಾಗೂ ಸಂವೇಧನಾಶೀಲಯುಕ್ತ ನರಗಳಿಂದ ಕೂಡಿದ ಈ ಉದ್ದನೆಯ ದಂತಗಳನ್ನ […]Read More
ಅಪ್ಪನ ವಾತ್ಸಲ್ಯದೊಲುಮೆ ಅಮ್ಮನಂತೆ ಅಪ್ಪನ ಪ್ರೀತಿಎಂದೂ ಭೋರ್ಗರೆಯದಲ್ಲ…!ಆದರೂ ಅವನೊಲುಮೆಯಲಿಅದರ ರೀತಿಯಲಿ ಎರಡು ಮಾತಿಲ್ಲ..! ಕಟ್ಟಿದ ಹಗ್ಗ ಬಿಟ್ಟೊಡನೆ ಕರುಓಡುವುದು ಹೆತ್ತ ತಾಯಿಯೆಡೆಗೆ..!ಅಂತೆಯೇ ಪುಟ್ಟ ಸಲಹೆಗೂ…ಮಕ್ಕಳೋಡುವರು ತಂದೆಯೆಡೆಗೆ!! ಜಾರಿ ಬಿದ್ದಾಗ ಕೈಹಿಡಿದೆಬ್ಬಿಸಿಬೆನ್ನುತಟ್ಟಿ ನಾನಿದ್ದೇನೆನುವಾ ಅಪ್ಪ..!ಮುಗ್ಗರಿಸಿದಾಗ ತಲೆನೇವರಿಸಿ..ಸಾಧನೆಯೆಡೆಗೆ ದಾರಿ ತೋರುವ ಅಪ್ಪ!! ಆಗಸದಷ್ಟು ಅಳೆಯಲಾರದಮಮತೆ ತುಂಬಿದೆ ತಂದೆಯ ಹೃದಯದಲಿ!ಯಾವ ಕಾರಣಕೂ ನಮ್ಮಿಂದಿನಿತೂ..ನೋವಾಗದಿರಲಿ ಆ ಮನದಲಿ!! ಸುಮನಾ ರಮಾನಂದRead More
ಛತ್ರಪತಿ – ನಾ ಕಂಡಂತೆ ಶಿವಾಜಿ ಛತ್ರಪತಿ – ನಾ ಕಂಡಂತೆ ಶಿವಾಜಿ ಲೇಖಕರು : ಶ್ರೀ ಗುರುಪ್ರಸಾದ ಭಟ್ ಪ್ರಕಾಶಕರು : ವಿವಿದ್ ಲಿಪಿ ಪ್ರಕಾಶನ ಲೇಖಕರ ಸಂಪರ್ಕ ಸಂಖ್ಯೆ : 9819324363 ಯಾವುದೇ ಒಂದು ವ್ಯಕ್ತಿ ಅಥವಾ ವಿಷಯದ ಬಗ್ಗೆ ಬರೆಯಲು ಹೊರಟರೆ ನಮಗೆ ಆ ವ್ಯಕ್ತಿ ಅಥವಾ ವಿಷಯದ ಬಗ್ಗೆ ಆಳವಾದ ಜ್ಞಾನ ಇರುವುದು ಬಹಳ ಮುಖ್ಯ. ಹಾಗಲ್ಲದೆ, ಕೇಳಿದ ಓದಿದ ಸಂಗತಿಗಳನ್ನು ಬರೆದುಬಿಟ್ಟರೆ ಅದು ಅಂತಹ ಮಹತ್ವವನ್ನು ಪಡೆದುಕೊಳ್ಳುವುದಿಲ್ಲ. ಈ ಮೇಲಿನ […]Read More
ವ್ಯಂಗ್ಯಚಿತ್ರಕಾರ ಪಿ ಜಿ ನಾರಾಯಣ್ ಗೆ ಜೀವಮಾನದ ಪ್ರಶಸ್ತಿ ನಾಡಿನ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಪುಟ್ಟಿ ಗುಂಡೂರಾವ್ ನಾರಾಯಣ ಎಂದರೆ ಯಾರಿಗೂ ತಿಳಿಯದು. ಅದೇ ಪಿ ಜಿ ನಾರಾಯಣ ಎಂದರೆ ಸಾಕು. ಅವ್ರಾ? ಅಂತಾರೆ! ಸಾಮಾನ್ಯವಾಗಿ ವ್ಯಂಗ್ಯಚಿತ್ರಕಾರರು ತಮ್ಮ ಕಾರ್ಟೂನ್ ಗೆರೆಗಳಿಂದ, ತಮ್ಮದೇ ಆದ ಶೈಲಿಯ ಕ್ಯಾರೆಕ್ಟರ್ಗಳಿಂದ, ಪಂಚ್ ಡೈಲಾಗ್ ಗಳಿಂದ ಚಿರಪರಿಚಿತರಾಗಿರುತ್ತಾರೆ. ಹಾಗೆಯೇ ನಾರಾಯಣ ಅವರದ್ದೂ ಒಂದು ಸ್ಟೈಲ್ ಇದೆ. ಈ ಹಿರಿಯ ವ್ಯಂಗ್ಯಚಿತ್ರಕಾರ ಪಿ ಜಿ ನಾರಾಯಣ ಅವರು ವ್ಯಂಗ್ಯಚಿತ್ರ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ […]Read More