ಮಾರ್ಕೋಲು – ವಿಧಿಗೇ ತಿರುಗೇಟು ಪುಸ್ತಕದ ಹೆಸರು: ಮಾರ್ಕೋಲುಪ್ರಕಾರ: ಕಾದಂಬರಿಲೇಖಕರು: ಆಶಾ ರಘುಮುದ್ರಣ: 1ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 136ಬೆಲೆ: 160/-ಮೊಬೈಲ್: 9008122991 ವಿಧಿಗೆ ಸಂಬಂಧಿಸಿದ ಕನ್ನಡ, ಮರಾಠಿ, ಸಂತಾಲಿ, ಗೊಂಡಿ, ತಮಿಳು ಮೊದಲಾದ ಎಲ್ಲ ಭಾಷೆಗಳಲ್ಲಿಯೂ ಇರುವ ಹಲವು ಜನಪದ ಕಥೆಗಳನ್ನು ಆಧರಿಸಿ ಈ ಕಾದಂಬರಿಯನ್ನು ರಚಿಸಲಾಗಿದೆ. ಮೇಲ್ನೋಟಕ್ಕೆ ಇದು Oedipus ನ ಕಥೆಯ ಮಾದರಿ ಅನ್ನಿಸುತ್ತದೆ. ಆದರೆ ಅದನ್ನು ಮೀರಿ ಈ ನೆಲದ ಸಾಂಸ್ಕೃತಿಕ ಪ್ರಜ್ಞೆಯನ್ನು ಈ ಕಾದಂಬರಿ ಸೆರೆಹಿಡಿಯುತ್ತದೆ. ಈ ಕಥೆಗಳಲ್ಲಿ ಕೆಲವು ‘ಬದುಕು […]Read More
ವಕ್ಷಸ್ಥಲ – ಪೌರಾಣಿಕ ಹಾಗೂ ಸಾಮಾಜಿಕ ಕಾದಂಬರಿ ಪುಸ್ತಕದ ಹೆಸರು: ವಕ್ಷಸ್ಥಲಪ್ರಕಾರ: ಕಾದಂಬರಿಲೇಖಕರು: ಆಶಾ ರಘುಮುದ್ರಣ: 1ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 208ಬೆಲೆ: 270/-ಮೊಬೈಲ್: 9008122991 ಪೌರಾಣಿಕ ಹಾಗೂ ಸಾಮಾಜಿಕ ಎರಡು ವರ್ಗಕ್ಕೂ ಸಲ್ಲುವ ಕಾದಂಬರಿ ’ವಕ್ಷಸ್ಥಲ’. ಶ್ರೀನಿವಾಸ ಕಲ್ಯಾಣದೊಂದಿಗೆ, ವೆಂಕಟೇಶ್ವರ ಮಹಾತ್ಮೆಯನ್ನೂ, ಮೀರಾ, ರಾಧೆ, ಆಂಡಾಳು, ಬೀಬಿ ನಾಚಿಯಾರ್, ವೆಂಕಮಾಂಬ ಮೊದಲಾದ ವಿಷ್ಣು ಭಕ್ತೆಯರ ಕಥೆಗಳನ್ನೂ ಈ ಕಾದಂಬರಿ ಒಳಗೊಂಡಿದೆ. ಈ ಎಲ್ಲ ಭಕ್ತೆಯರೂ ಬಯಸಿದ್ದು ಶ್ರೀಹರಿಯ ವಕ್ಷಸ್ಥಲದಲ್ಲಿ ಸಣ್ಣ ಜಾಗವನ್ನು… ಪದತಲದಲ್ಲಿಯೇ ಇರುವೆನೆಂದು ಕೋರಿಕೊಂಡರೂ, ಒಂದೇ […]Read More
ಚಿತ್ತರಂಗ – ತೆರೆಮರೆಯ ಅಂತರಂಗ ಪುಸ್ತಕದ ಹೆಸರು: ಚಿತ್ತರಂಗಪ್ರಕಾರ: ಕಾದಂಬರಿಲೇಖಕರು: ಆಶಾ ರಘುಮುದ್ರಣ: 1ಪ್ರಕಾಶನ: ಸಾಹಿತ್ಯಲೋಕ ಪಬ್ಲಿಕೇಶನ್ಸ್ಪುಟಗಳು: 308ಬೆಲೆ: 370/-ಮೊಬೈಲ್: 9008122991 ‘ಚಿತ್ತರಂಗ’ ಕನ್ನಡ ಚಿತ್ರರಂಗದ ಕಾಲ್ಪನಿಕ ಕಲಾವಿದರ ಮನೋಲೋಕದ ಚಿತ್ರಣವಿರುವ ಕಾದಂಬರಿ. ಎಪ್ಪತ್ತು-ಎಂಭತ್ತರ ದಶಕದ ಕನ್ನಡ ಚಿತ್ರರಂಗದ ವಾತಾವರಣವನ್ನು ಈ ಕಾದಂಬರಿ ಹೊಂದಿದೆ. ಈ ಕಾದಂಬರಿಯಲ್ಲಿ ಬರುವ ಎಲ್ಲಾ ಪಾತ್ರಗಳೂ ಹಾಗೂ ಸನ್ನಿವೇಶಗಳೂ ಕೇವಲ ಕಾಲ್ಪನಿಕವಾಗಿದ್ದು, ಯಾರದೇ ನಿಜ ಬದುಕು ಅಥವಾ ಘಟನೆಗಳಿಗೆ ಸಂಬಂಧ ಪಟ್ಟುದಲ್ಲವೆಂಬುದು ಲೇಖಕಿಯ ಅರಿಕೆ. ಚಿತ್ರ ನಿರ್ದೇಶಕನೊಬ್ಬನ ಹಾಗೂ ಅವನೊಂದಿಗೆ ನಿಕಟ […]Read More
ಬೊಂಬೆಯಾಟವಯ್ಯ ಹಾಡಿನ ಖ್ಯಾತಿಯ ಉಮೇಶ್ ಇನ್ನಿಲ್ಲ ಕನ್ನಡದ ಹಿರಿಯ ನಟರಾದ ಎಂ. ಎಸ್. ಉಮೇಶ್ ಅವರು ಕನ್ನಡ ರಸಿಕರನ್ನು ಅಗಲಿದ್ದಾರೆ. ಬಾಲ್ಯದಿಂದ ರಂಗಭೂಮಿಯಲ್ಲಿ ಬೆಳೆದ ಉಮೇಶ್ ಅವರು ತಮ್ಮ ಐದನೇ ವಯಸ್ಸಲ್ಲೇ ನಟನೆಗೆ ಎಂಟ್ರಿ ಕೊಟ್ಟಿದ್ದರು. ಕೆ ಹಿರಣಯ್ಯ ಅವರ ನಾಟಕ ಕಂಪನಿಯಲ್ಲಿ ಬಣ್ಣ ಹಚ್ಚಿದರು. ಉಮೇಶ್ ಅವರ ಅಪ್ಪ ಕಂಪನಿ ನಾಟಕದಲ್ಲಿ ಸ್ರ್ರೀ ಪಾತ್ರ ಮಾಡುತ್ತಿದ್ದರು. ಅವರಿಗೆ ಹನ್ನೊಂದು ಮಕ್ಕಳಿದ್ದರು. ಅವರಲ್ಲಿ ಉಮೇಶ್ ಎಂಟನೆಯವರು. “ಆಗ ಫ್ಯಾಮಿಲಿ ಪ್ಲಾನಿಂಗ್ ಗೊತ್ತಿರಲಿಲ್ಲ. ಆದಕಾರಣ ನಾನು ಹುಟ್ಟಿದೆ” ಎಂದು […]Read More
ಮಾಯೆ – ಅಲ್ಲಮನ ವಚನಪ್ರೇರಿತ ಕಾದಂಬರಿ ಪುಸ್ತಕದ ಹೆಸರು: ಮಾಯೆಪ್ರಕಾರ: ಕಾದಂಬರಿಲೇಖಕರು: ಆಶಾ ರಘುಮುದ್ರಣ: 2ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 242ಬೆಲೆ: 320/-ಮೊಬೈಲ್: 9008122991 ‘ಮಾಯೆ’ ಕಾದಂಬರಿಯ ವಸ್ತು ಅಲ್ಲಮನ ವಚನದಿಂದ ಪ್ರೇರಿತವಾದದ್ದು. ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ ಈ ವಚನದಂತೆಯೇ, ಒಬ್ಬ ವ್ಯಕ್ತಿ ಹೊನ್ನು, ಹೆಣ್ಣು, ಮಣ್ಣುಗಳ ಆಸೆಗೆ ಬಿದ್ದು ದಕ್ಕಿಸಿಕೊಳ್ಳಲು ಹೊರಟು ಅತೀವವಾದ ಘಾಸಿಗೆ ಒಳಗಾಗಿ, ಕಡೆಗೆ ಈ ಮೂರನ್ನೂ […]Read More
ಗತ – ಪುನರ್ಜನ್ಮದ ರೋಚಕ ಕಾದಂಬರಿ ಪುಸ್ತಕದ ಹೆಸರು: ಗತಪ್ರಕಾರ: ಕಾದಂಬರಿಲೇಖಕರು: ಆಶಾ ರಘುಮುದ್ರಣ: 2ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 232ಬೆಲೆ: 300/-ಮೊಬೈಲ್: 9008122991 ‘ಗತ’ ಆಶಾ ರಘು ಅವರ ಎರಡನೆಯ ಕಾದಂಬರಿ. ‘ಮನುಷ್ಯ ಮರಣ ಹೊಂದಿದ ಮೇಲೆ ಪುನಃ ಈ ಭೂಮಿಯ ಮೇಲೆ ಹುಟ್ಟಿ ಬರುತ್ತಾನೆ… ಹುಟ್ಟು ಆರಂಭವೂ ಅಲ್ಲ, ಸಾವು ಅಂತ್ಯವೂ ಅಲ್ಲ…’ ಎಂದು ಭಾರತೀಯ ವೇದಾಂತವೂ, ಇತರ ಕೆಲವು ಧರ್ಮಗಳೂ ಹೇಳುತ್ತವೆ. ಈ ನಂಬಿಕೆಯ ಬೆನ್ನಿಗೆ ಬೀಳದಿದ್ದರೂ ಪುನರ್ಜನ್ಮದ ವಿಷಯ ಯಾವತ್ತಿಗೂ ಅತ್ಯಂತ ಕುತೂಹಲಕಾರಿಯಾದುದು. […]Read More
ಆವರ್ತ – ಸರ್ವಕಾಲಿಕ ಕೃತಿ ಪುಸ್ತಕದ ಹೆಸರು: ಆವರ್ತಪ್ರಕಾರ: ಕಾದಂಬರಿಲೇಖಕರು: ಆಶಾ ರಘುಮುದ್ರಣ: 3ಪ್ರಕಾಶನ: ಉಪಾಸನ ಬುಕ್ಸ್ಪುಟಗಳು: 512ಬೆಲೆ: 350/-ಮೊಬೈಲ್: 9008122991 ಆವರ್ತ ವೇದೋತ್ತರ ಕಾಲಘಟ್ಟದ ಕಾಲ್ಪನಿಕ ಕಾದಂಬರಿ. ಆಶಾ ರಘು ಅವರು ಯಾವುದೇ ಪುರಾಣವನ್ನಾಗಲೀ ಅಥವಾ ಇತಿಹಾಸವನ್ನಾಗಲೀ ಆಧರಿಸದೆ ರಚಿಸಿರುವ ಸ್ವತಂತ್ರವಾದ ತಾತ್ವಿಕ ಚಿಂತನೆಯ ಕೃತಿ ಇದು. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳ ಸುಳಿಯಲ್ಲಿ ಸಿಕ್ಕಿಕೊಂಡು ತೊಳಲಾಡುವ, ಬಿಡಿಸಿಕೊಳ್ಳಲು ಯತ್ನಿಸುವ, ಕಡೆಗೆ ಒಳಗಿದ್ದೂ ಇರದ ಹದವನ್ನು ಕಂಡುಕೊಳ್ಳುವ ಪ್ರತೀಪನೆಂಬ ರಾಜನ ಬದುಕಿನ ಚಿತ್ರಣ […]Read More
ನಜತ್ – ಫ್ರಾನ್ಸ್ ದೇಶದ ಮಹಿಳಾ ಸಾಧಕಿ ಸಾಧನೆಗೆ ಬಡತದ ಅಡ್ಡಿಯಿಲ್ಲ-ಪರಿಶ್ರಮ ಅಗತ್ಯ ಇದು ಬಡ ಕುಟುಂಬದಿಂದ ಬಂದ ಹೆಣ್ಣು ಮಗಳೊಬ್ಬಳು ಕುರಿ ಕಾಯುವಿಕೆಯನ್ನೇ ಜೀವನಾಧಾರವನ್ನಾಗಿ ಮಾಡಿಕೊಂಡಿದ್ದ ಕುಟುಂಬದಲ್ಲಿ ಹುಟ್ಟಿ ಶ್ರೀಮಂತಿಕೆಯೆಂದರೆ ಏನು ಎಂಬುದನ್ನೇ ಅರಿಯದೆ ಇಂದು ರಾಷ್ಟ್ರವೊಂದರ ಎರಡನೇ ಅತ್ಯುನ್ನತ ಸಚಿವೆಯ ಸ್ಥಾನವನ್ನು ಅಲಂಕರಿಸಿರುವ “ನಜತ್” ಎಂಬ ಮಹಿಳೆಯ ಮಹಾನ್ ಸಾಹಸಗಾಥೆ. “ಬದುಕಲ್ಲಿ ಬಡವನಾಗಿ ಹುಟ್ಟುವುದು ತಪ್ಪಲ್ಲ, ಆದರೆ ಬಡವನಾಗಿ ಸಾಯುವುದು ತಪ್ಪು” ಎಂಬ ಮಾತನ್ನು ಅಕ್ಷರಶಃ ನಿಜವಾಗಿಸಿದ ಧೀರ ಹೆಣ್ಣು ಮಗಳು ಈಕೆ.4 ನೇ […]Read More
ಶ್ರೀ ಭಕ್ತ ಕನಕದಾಸರು ಭಕ್ತಿ ಭಾವಕೆ ಅಜರಾಮರದ ಹೆಸರು ಕನ್ನಡ ಭಾಷೆಯ ವಿಶಿಷ್ಟವಾದ ದಾಸಶ್ರೇಷ್ಠರುಯುದ್ಧದಿ ಸೋತ ದಾಸ ಪರಂಪರೆಯ ಹರಿದಾಸರುಕಾಗಿನೆಲೆಯ ನಿವಾಸಿ ಶ್ರೀ ಭಕ್ತ ಕನಕದಾಸರು ಹಾವೇರಿಯ ಬಾಡ ಗ್ರಾಮದ ತಿಮ್ಮಪ್ಪ ನಾಯಕಚಿನ್ನದಂತ ಮಗನ ಹೆತ್ತರು ಬಚ್ಚಮ್ಮ ಬೀರಪ್ಪನಾಯಕವಿಜಯನಗರ ಸಾಮ್ರಾಜ್ಯದ ಗಂಡೆದೆಯ ದಂಡನಾಯಕತಿರುಪತಿ ತಿಮ್ಮಪ್ಪನ ಆಶೀರ್ವಾದದ ಕುಲದೀಪಕ ಶ್ರೀವ್ಯಾಸರಾಯರ ಪ್ರೀತಿಯ ಮೆಚ್ಚಿನ ಶಿಷ್ಯರಾಗಿಉಡುಪಿ ದೇಗುಲದಿ ಕನಕನ ಕಿಂಡಿಗೆ ಹೆಸರಾಗಿಲೋಕ ಕಲ್ಯಾಣದಿ ಕೃಷ್ಣನ ಪ್ರೀತಿಯ ಭಕ್ತರಾಗಿಜಾತಿ ವ್ಯವಸ್ಥೆಯ ತಿರಸ್ಕರಿಸಿದರು ಮನುಕುಲಕ್ಕಾಗಿ ಕಾಗಿನೆಲೆ ಆದಿಕೇಶವರಾಯರ ಅಂಕಿತದಲಿಕೀರ್ತನೆಗಳ ರಚಿಸಿ ಹಾಡಿದರು ಕೃಷ್ಣನ […]Read More
ಪರಿಸ್ಥಿತಿ ಕೆಲವೊಮ್ಮೆ ಪರಿಸ್ಥಿತಿಯಅತಿರೇಕಗಳು ಹೇಗಿರುತ್ತವೆಂದರೆಚಕ್ರವ್ಯೂಹದಲಿ ಸಿಲುಕಿದ್ದಅಭಿಮನ್ಯುವಿನ ಸ್ಥಿತಿಯಂತೆಉಸಿರುಕಟ್ಟಿಸುವಳತೆಯಚೌಕದೊಳಗೆ ಸಿಲುಕಿದವಗೆಚುಚ್ಚುವೀಟಿಗಳ ಗತಿಯಂತೆ ಅಸುವುಳಿಸಿಕೊಳುವಕೆಸುವ ಕೈಬಿಡದೆ ಕಾಪಿಡುತಹೋರಾಡಲೇ ಬೇಕುಬದುಕ ರಣರಂಗದಲಿಸಿಡಿದೇಳಲೇ ಬೇಕುಬೆಂಕಿಗೆ ಬಿದ್ದ ಸಾಸಿವೆಯಂತೆಪೊರೆ ಕಳಚಿ ಹೊಸ ರೂಪ ಪಡೆವಂತೆ ಬದುಕೆಂಬ ಬಯಲುದಾರಿಹರಿವ ಹರಿವಿನಲ್ಲಿಹರಿ ನಾಮಸ್ಮರಣೆಯಲ್ಲಿಕಿರಿಕಿರಿಗಳ ಮರೆತುಕಿರುನಗೆಯ ಹೊತ್ತುಸಾಗಿಸಬೇಕಿದೆ ದಾರಿಸೋಲೊಪ್ಪದೇ ಬೇಸತ್ತು ಸೌಜನ್ಯ ದತ್ತರಾಜRead More