ವ್ಯಕ್ತಿಯ ವ್ಯಕ್ತಿತ್ವ ಪೆನ್ಸಿಲ್ನಂತೆ ಅಕ್ಷರಗಳನ್ನು ಸುಂದರವಾಗಿ ಬರೆಯುವ ಪೆನ್ಸಿಲ್ ವಿಭಿನ್ನ ವಿಚಾರಗಳನ್ನು ದಾಖಲಿಸಿ ಇಡಬಲ್ಲದು. ಅದ್ಭುತವಾದ ಕಥೆಗಳು, ಕವನಗಳು, ಒಳ್ಳೆಯ ಮತ್ತು ಕೆಟ್ಟ ವಿಚಾರಗಳನ್ನು ಬರೆಯುವ ಮೂಲಕ ಮತ್ತು ಬರೆದ ಅಕ್ಷರಗಳಿಂದ ವ್ಯಕ್ತಿ ವ್ಯಕ್ತಿಗಳಲ್ಲಿ ಪ್ರೀತಿ ಹುಟ್ಟಿಸುವ ಅಥವಾ ದ್ವೇಷವನ್ನು ಬಿತ್ತುವ ಎರಡೂ ಗುಣ ಪೆನ್ಸಿಲ್ ನಲ್ಲಿ ಇದೆ. ಆದರೆ, ಪೆನ್ಸಿಲಿಗೆ ಬರೆಯುವ ಕೈಗಳ ಸಹಕಾರ ಇಲ್ಲದಿದ್ದರೆ ಕೇವಲ ಪೆನ್ಸಿಲ್ ಒಂದೇ ಏನನ್ನೂ ಬರೆಯಲು ಯಾ ಮಾಡಲು ಸಾಧ್ಯವಿಲ್ಲ. ಅಕ್ಷರಗಳನ್ನು ಬರೆಯುವ ಪೆನ್ಸಿಲ್ ಬಳಸುತ್ತಾ ಹೋದಂತೆ ಅದರ […]Read More
ನೇಸರನ ಇಣುಕುನೋಟ ಗಗನದಿಂದ ಬುವಿಯೆಡೆಗೆತಾ ಇಣುಕುನೋಟ ಬೀರಿಹನು!ತನ್ನಾಸರೆಯಲಿ ಜಗವು ಬೆಳಕಿನೆಡೆಗೆ..ಸಾಗುವುದನು ಅವ ನೋಡಬಯಸಿಹನು!! ಕೆಂಪಿನೋಕುಳಿಯ ಹೊಸ ರಂಗುಅಂಬರದಲಿ ನಿತ್ಯ ತುಂಬಿರಲು!ಅಹಸ್ಕರನಿಗೂ ಅವನಿಯದೇ ಗುಂಗು..ಅವಳ ನಗುವಲಿ ಮನವಿರಲು!! ಬೆಟ್ಟಗುಡ್ಡಗಳ ಮರೆಯಲಿದೆಭಾಸ್ಕರನ ಕಿರಣದ ಸೊಬಗು!ಲೋಕವು ದಿನವೂ ಬೆಳಗಲಿದೆ..ಕೇಳುತಾ ಇಳೆಯ ಹೃದಯದ ಕೂಗು!! ಅನಂತತೆಯ ಸಾರವಿರಲುಅಲ್ಲಿಯೇ ಲೀನವಾಗಿದೆ ಕ್ಷಿತಿಜ!ಅಗೋಚರ ಸೃಷ್ಟಿಯೇ ಪ್ರಕೃತಿಯಲಿರಲು…ಬುವಿಗಿದು ಆ ದೈವನಿತ್ತ ಖನಿಜ!! ಸುಮನಾ ರಮಾನಂದRead More
ಮಧುಮೇಹ ಪರಿಹರಿಸುವ ಕರುಂಬೇಶ್ವರ ಭಾರತ ದೇಗಲಗಳ ದೇಶ. ಇಲ್ಲಿರುವ ಎಷ್ಟೋ ಪುರಾತನ ದೇಗುಲಗಳು ಅಲ್ಲಿನ ಕ್ಷೇತ್ರ ಮಹಿಮೆಯಿಂದ ವಿಶಿಷ್ಟವಾದ ಶಕ್ತಿಯಿಂದ ಭಕ್ತರನ್ನು ಕೈಬೀಸಿ ಕರೆಯುತ್ತದೆ. ಸಂತಾನ ಕರುಣಿಸುವ ದೇವಸ್ಥಾನವಿದೆ, ಆರೋಗ್ಯ ಕರುಣಿಸುವ ವೈಧ್ಯನಾಥೇಶ್ವರನ ದೇಗುಲವಿದೆ. ಚರ್ಮ ರೋಗ ವಾಸಿ ಮಾಡುವ ದೇಗುಲಗಳಿವೆ. ಮಕ್ಕಳಿಗೆ ವಿದ್ಯೆ ಕರುಣಿಸುವ ಅನೇಕ ದೇಗುಲಗಳಿದೆ. ಆದರೆ ಮಧುಮೇಹವನ್ನು ನಿಯಂತ್ರಣದಲ್ಲಿಡುವ ದೇಗುಲದ ಬಗ್ಗೆ ಕೇಳಿದ್ದಿರಾ. ಹೌದು ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು ಇಲ್ಲಿರುವ ಆರಾಧ್ಯ ಧೈವ ಕರುಂಬೇಶ್ವರನ ದರ್ಶನ ಮಾಡಿದರೆ ಮಧುಮೇಹ ನಿಯಂತ್ರಣದಲ್ಲಿರುತ್ತದೆ ಎಂದು […]Read More
ಅಪ್ಪನೆಂಬ ಹಿರಿಮೆ ಅಕ್ಷರಗಳಲ್ಲಿ ಅಳೆಯಲಾಗದಆಕಾರವೊಂದಿದೆ ಅಪ್ಪಾ ಎಂಬಅಚ್ಚರಿಯ ಆಕಾಶ ನಾಗರಿಕತೆಯೊಂದಗೆ ಉದಯಿಸಿದಮೊದಲ ಸೇನಾನಿಅವನಿರುವೇ ಜಗದಬಲ ಬೆರಗು ಹಳೆ ಚಪ್ಪಲಿಯಂತೆಯೇ ಎತ್ತೆತ್ತಲೊಬಾಯ್ಬಿಟ್ಟ ಬದುಕಿಗೆ ಹೊಲಿಗೆ ಹಾಕುವ ಕಸುಬುದಾರತನ್ನದೇ ಹರಿದ ಬೆನ್ನು ಅವನಿಗೆ ಕಾಣುವುದೇ ಇಲ್ಲ ಅಪ್ಪನಾದ ಹಿರಿಮೆಗೆ ಅಂಕುರಿಸಿದತನ್ನದೇ ಜೀವ ಚೈತನ್ಯದಕಣ್ಣ ಹೊಳಪಲ್ಲಿ ನಕ್ಷತ್ರ ಎಣಿಸುವ ಅಪ್ಪಮುರಿದು ಬಿದ್ದ ಕನಸುಗಳ ಆಯ್ದು ತಂದುಕೌದಿ ಹೊಲಿಯುತ್ತಾನೆಬೇಸಿಗೆಯಲ್ಲೂ ತಂಪಿಡುವ ಅಪ್ಪನ ಹೃದಯನಡುಗಿಸುವ ಚಳಿಯಲ್ಲೂ ಬೆಚ್ಚನೆ ಕಾವು ಅಂಗಳದ ತುಳಸಿ,ಜಂಪು ಹಿಡಿದ ನಡುಮನೆ,,ತಳತಳಿಸುವ ಪಡಸಾಲೆಯ ಜಂತಿ,,,ಹಿತ್ತಲ ಕಿಲುಬು ಹಿಡಿದ ಚಿಲಕಎಲ್ಲವೂ ಅವನದೇ ಪ್ರತಿರೂಪ […]Read More
ಪ್ರೀತಿ ಪ್ರೇಮ ಹಾಗೂ ಮದುವೆಗಳ ನಡುವೆ ಲೇಖಕ : ಪ್ರಮೋದ ಕರಣಂ (Chiದು)ಪ್ರ: ಮಾತ್ರೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಟಾನ (ರಿ), ಡೊಂಗರಗಾಂವ, ಕಮಲಾಪುರ, ಕಲಬುರಗಿ.ದೂ: 9743224892ಬೆಲೆ: ರೂ. ೧೦೦.೦೦, ಮುದ್ರಣ: ೨೦೨೩ ‘ಸಾಧ್ಯ ಅಸಾಧ್ಯಗಳ ನಡುವೆ’ ಎಂಬ ತಮ್ಮ ಮೊದಲ ಕಾದಂಬರಿಯಿಂದ ಓದುಗರಿಗೆ ಪರಿಚಿತರಾಗಿರುವ ಪ್ರಮೋದ ಕರಣಂ ತಮ್ಮ ಎರಡನೇ ಪ್ರಯತ್ನವನ್ನಿಲ್ಲಿ ದಾಖಲಿಸಿದ್ದಾರೆ. ಭಾಷೆಯ ಮೇಲಿನ ಹಿಡಿತ ಹಾಗೂ ಸೊಗಸಾದ ಉಪಮೆಗಳು ಕಾದಂಬರಿಯ ಅಂದ ಹೆಚ್ಚಿಸಿ ಲೇಖಕರ ಬಗ್ಗೆ ಭರವಸೆ ಮೂಡಿಸುತ್ತವೆ. ಆರಂಭದ ಅರೆಕೊರೆಗಳನ್ನು ನೀಗಿಸಿಕೊಂಡು ಮಾಗುತ್ತಾ […]Read More
ಗುರುಸ್ಮರಣೆ ಬಾಲ ಭಾಸ್ಕರನಹೊಳೆವ ಹೊಂಗಿರಣಗುರು ಚರಣಕ್ಕೆರಗಲಿ! ಮಂದ ಮಾರುತದಇಂಪು ಗಾಯನವುಗುರು ಗೀತೆ ಭಜಿಸಲಿ! ಇಳೆಗಿಳಿವ ಮಳೆಯತುಂತುರೆಲ್ಲವೂ ತಾಗುರುವಿಗಭಿಷೇಕ ಮಾಡಲಿ! ಧರಣಿ ಅರಳಿಸುವಘಮದ ಸುಮವೆಲ್ಲವೂಗುರುವಿನ ಮುಡಿಯೇರಲಿ! ಅನು ದಿನ ಅನು ಕ್ಷಣನನ್ನ ಮನದ ತುಂಬೆಲ್ಲಾಗುರುನಾಮ ಅನುರಣಿಸಲಿ!! ಶ್ರೀವಲ್ಲಿ ಮಂಜುನಾಥRead More
ನಮ್ಮಮ್ಮ ಕಾವೇರಿ ಕಾವೇರಿ !! ಅಂದರೆ ಅವಳು ಬರೀ ನೀರಿನ ಹನಿಯಲ್ಲ ಸಿಹಿಯಾದ ಜೇನು. ಕನ್ನಡಿಗರ ಹೆಮ್ಮೆಯ ಮನೆ ಮಗಳು. ಇನ್ನೂ ಕೆಲ ಕವಿಗಳು ಅವಳಿಗೆ ಪೂಜ್ಯ ಸ್ಥಾನ ಕೊಟ್ಟು ತೀರ್ಥವೆಂದೆನ್ನುತ್ತಾರೆ. ಅವಳ ವರ್ಣನೆ ಮಾಡದ ಕವಿಗಳಿಲ್ಲ. ಅವಳಿಗೂ ಕವಿಗಳಿಗೂ ಅಗಾಧ ಅನುಬಂಧವಾದರೂ, ಅವಳ ಅಂದ ವರ್ಣನೆಗೂ ಮೀರಿದ್ದು. ಅವಳಿಂದಲೇ ಭೂತಾಯಿ ಮಡಿಲು ಹಚ್ಚ ಹಸಿರು, ಈ ಇಳೆಗೆ ಬೆಳೆ, ಕಳೆ ಎಲ್ಲವೂ. ನಿತ್ಯವೂ ನೋಡುಗರಿಗೆ ನೂತನ, ಚೇತನ ಮನೋಹರವಾಗಿದ್ದಾಳೆ ಈ ಕಾವೇರಿ. ವಿಷ್ಣುವರ್ಧನ್ ಅಭಿನಯದ ‘ಜೀವನದಿ’ […]Read More
ಬೆಲೆ ಕಟ್ಟಲಾಗದ ಬಳಪ ಹಿಡಿದ ಭಗವಂತ ಅಕ್ಷರ ಕಲಿಸಿ ಬದುಕು ತೋರಿಸಿದವರುಮಾರ್ಗದರ್ಶನ ಮಾಡಿ ಹರಸಿ ಹಾರೈಸಿದವರುಪರ ಊರಿನಿಂದ ಬಂದು ಬೋಧಿಸಿದವರುಸ್ವಾರ್ಥವಿಲ್ಲದ ನಿಸ್ವಾರ್ಥ ಮನದ ಗುರುದೇವರು ಬೆಳೆಸಿದರು ಅಜ್ಞಾನದಿಂದ ಜ್ಞಾನದ ಕಡೆಗೆಸ್ಫೂರ್ತಿ ತುಂಬಿದರು ಪ್ರತಿ ಮಗುವಿನ ಸಾಧನೆಗೆಪೂಜಿಸಿ ಬಳಪ ಹಿಡಿದ ಭಗವಂತನಿಗೆಪ್ರೀತಿ ಮಮತೆಯ ಎರಡನೇ ತಾಯಿಗೆ ತಮ್ಮ ಮಕ್ಕಳಂತೆ ಪ್ರೀತಿಸಿ ಮುದ್ದಿಸಿದರುಏನು ಇಲ್ಲದ ಮೆದುಳಿಗೆ ಜ್ಞಾನ ತುಂಬಿದರುನನ್ನಂತೆ ನನ್ನ ಶಿಷ್ಯ ಬೆಳೆಯಬೇಕು ಎಂದರುಮಕ್ಕಳ ಪಾಲಿಗೆ ಬೆಲೆ ಕಟ್ಟಲಾಗದ ಭಗವಂತನಾದರು ಸೋತಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಿದವರುಗೆದ್ದಾಗ ಶಿಷ್ಯರಿಗಿಂತ ಮುಂಚೆ ಖುಷಿ […]Read More
ಆರ್ಕಿಡ್ ಮಿಡತೆ ಹೆಣ್ಣನ್ನ ಹೂವಿಗೆ ಹೋಲಿಸಿ ಸಂಪಿಗೆಯ ನಾಸಿಕದವಳೇ ,ಮಲ್ಲಿಗೆಯ ಮೈಯವಳೇ ,ಹೂವಂತ ಮನಸ್ಸಿನವಳೇ ಅಂತೆಲ್ಲಾ ಅಗಾಧ ರಸಿಕತೆಯಿಂದ ಬರೆಯವ ಪೇಸ್ಬುಕ್ ಕವಿಗಳ ಕವನಗಳನ್ನ ಓದುವಾಗ , ಒಂದೊಂದ್ಸಲಾ ನನಗೂ ಆ ತರ ಬರೆಯಲಿಕ್ಕೆ ಬರುವುದಿಲ್ಲವಲ್ಲ ಅಂತ ಮತ್ಸರವಾಗುತ್ತೆ. ನಾನೂ ಒಂದಿನ ನಿಮ್ಮನೆಲ್ಲಾ ಮೀರಿಸೋವಂತ ಒಂದು ಕವನದ ಗ್ರಂಥವನ್ನೇ ಬರೆದುಬಿಡ್ತೇನೆ .ಹ್ಞಾಂ ಇರಲಿ… ಅಂದಂಗೆ ಭಾರತೀಯ ಉಪಖಂಡಕ್ಕೆ ಹೊಂದಿಕೊಂಡಿರುವ ಆಗ್ನೇಯ ಏಷ್ಯಾದ ಬರ್ಮಾ, ಬ್ರೂನಿ, ಕಾಂಬೋಡಿಯಾ, ಇಂಡೋನೇಶಿಯಾ, ಲಾವೋಸ್,ಮಲೇಷಿಯಾ, ಫಿಲಿಪೀನ್ಸ್, ಸಿಂಗಾಪುರ್, ವಿಯೆಟ್ನಾಂ ದೇಶಗಳ ನಿತ್ಯಹರಿದ್ವರ್ಣದ ಮಳೆಕಾಡುಗಳಲ್ಲಿ […]Read More
ಬೇಡಿ ಕಳಚಿದಾಗ ವರ್ಷಗಳ ಪ್ರೀತಿಯ ಬೇರುಆಳವಾಗಿ ಅಂತರಾಳದಿ ನೆಲೆಸಿದೆ!ಅಗಲಿಕೆಯ ನೋವನು ಕ್ಷಣಿಕವೂ..ಭರಿಸಲಾರದ ಮನವಿದು ಕಲಕಿದೆ!! ಹೆತ್ತ ಕರುಳದು ಸದಾ ಜೊತೆಯಿರಲುಬಯಸಿ ತಪಿಸಿ ನೋವನುಂಡಿದೆ!ನೆನಪುಗಳ ನಾವೆಯಲಿ ಮನ ತೇಲುತಿರಲು..ಅಗಲುವ ಸಂಕಟ ಹೃದಯವ ಹಿಂಡಿದೆ!! ಕಾಲಚಕ್ರವಿದು ಗರಗರನೆ ತಿರುಗಿಯಾರನೂ ಕಾಯದೇ ಉರುಳುತಲಿದೆ!ಪ್ರೀತಿಯ ಹಕ್ಕಿಯು ರೆಕ್ಕೆಬಲಿತು..ಬಾನಂಗಳದಿ ಹಾರಲು ಅಣಿಯಾಗಿದೆ!! ಮನವು ಭರವಸೆಗಳಲಿ ಬೆರೆತು ಅರಿತುಬಾಳ ಉಯ್ಯಾಲೆಯು ತೃಪ್ತಿಯಲಿ ಜೀಕುತಿದೆ!ತನ್ನದೇ ನೆಲೆಯಲಿ ಅಸ್ತಿತ್ವ ಹುಡುಕಲು..ತವಕಿಸುವ ಪಕ್ಷಿ ತನ್ನ ಗುರಿ ತಲುಪಿದೆ!! ಸುಮನಾ ರಮಾನಂದRead More