ಹೆಣ್ಣು ಮತ್ತು ಆರೋಗ್ಯ – 1

ಹೆಣ್ಣು ಮತ್ತು ಆರೋಗ್ಯ – 1 ಎಲ್ಲರಿಗೂ ನಮಸ್ಕಾರ. ಈ ಅಂಕಣದ ಮೂಲಕ ನಾನು ಹೆಣ್ಣು ಮಕ್ಕಳ ಆರೋಗ್ಯ, ಅವರಿಗೆ ಬೇರೆ ಬೇರೆ ಸಮಯಗಳಲ್ಲಿ ಬೇಕಾಗುವ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಬರೆಯುತ್ತೇನೆ. ಮೊದಲಿಗೆ ಅತ್ಯಂತ ಜವಾಬ್ದಾರಿಯುತ ಗರ್ಭಿಣಿಯ ವಿಷಯ ತಿಳಿಸಿಕೊಡುತ್ತೀನಿ ಮದುವೆಯಾದ ಮೇಲೆ, ತಾಯಿಯಾಗುವುದು ಎಲ್ಲ ಹೆಣ್ಣುಮಕ್ಕಳ ಕನಸು.ಗರ್ಭಿಣಿಯಾದ ಹೆಣ್ಣು, ಮೊದಲ ಮೂರುತಿಂಗಳು ,ಆರು ತಿಂಗಳು ,ಹಾಗೂ ಒಂಬತ್ತು ತಿಂಗಳುಗಳಲ್ಲಿ ತೆಗೆದುಕೊಳ್ಳಬೇಕಾದ ನಿಗಾ, ತೋರಿಸಬೇಕಾದ ಕಾಳಜಿ, ಜವಾಬ್ದಾರಿಗಳನ್ನು ಮೊದಲು ಹೇಳುತ್ತೇನೆ. ಸರಿಯಾದ ಆಹಾರ ಪದ್ಧತಿ, ವೈದ್ಯರಿಗೆ ತೋರಿಸಬೇಕಾದ […]Read More

ವ್ಯಾಸ ಗುಟ್ಟು

ವ್ಯಾಸ ಗುಟ್ಟು ಒಂದು ದಿನ ಮುಸ್ಸಂಜೆಯಲಿ ಹಳ್ಳಿದಾರಿಯಲ್ಲಿ ಸೈಕಲ್ ಸವಾರಿ ಮಾಡುತ್ತಾ ಹೋಗುತ್ತಿದ್ದೆ. ನೇಸರನು ತನ್ನ ತಾಪವನ್ನಿಳಿಸಿಕೊಂಡು ಪಡುವಣದ ಕಡೆ ಜಾರುತ್ತಿದ್ದ. ಎತ್ತ ನೋಡಿದರೂ ಹಸಿರು ರಾಶಿಯಾಗಿ ಸುರಿಯುತ್ತಿದೆ. ಕಾಲುವೆಗಳಲ್ಲಿ ಸಮೃದ್ಧ ಜಲಧಾರೆ ಹರಿಯುತ್ತಿದೆ. ಮನಸ್ಸನಲ್ಲಿ ತುಂಬಾ ದೂರದವರೆಗೂ ಸೈಕಲ್‌ನಲ್ಲೇ ಹೋಗಿ ಬರೋಣ ಅಂತ ತೀರ್ಮಾನಿಸಿದೆ. ಪ್ರಶಾಂತ ವಾತಾವರಣದ ಸವಿ ನನ್ನಂತಹ ನಗರವಾಸಿಗೆಲ್ಲಿ ಸಿಗಬೇಕು? ಕಳೆದ ಮೂರ್ನಾಲ್ಕು ದಿನಗಳಿಂದ ಸೈಕಲ್ ಅಭ್ಯಾಸವಾಗಿಬಿಟ್ಟಿದೆ. ಹೀರೋ ಕಂಪನಿಯ ಗಟ್ಟಿಯಾದ ಸೈಕಲ್ ಎಪ್ಪತ್ತನೇ ಇಸವಿಯ ಸೈಕಲ್ ಇನ್ನೂ ಸದೃಢವಾಗಿದೆ. ಅದರ ಮೇಲೆ […]Read More

ಮರೆಯದಿರಿ ನಾಗರೀಕತೆಯ ಪ್ರಜ್ಞೆಯನ್ನು

ಮರೆಯದಿರಿ ನಾಗರೀಕತೆಯ ಪ್ರಜ್ಞೆಯನ್ನು ನಾಗರೀಕತೆ ಎಂದರೆ ಮನುಷ್ಯ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬಾಳಿ ಬದುಕುವ ಅಥವಾ ಇತರರೊಡನೆ ಹೊಂದಾಣಿಕೆಯೊಂದಿಗೆ ಸಹ ಜೀವನ ಮಾಡುವ ರೀತಿ ಎಂದು ಹೇಳಬಹುದಾಗಿದೆ. ನಾಗರೀಕತೆ ಎಂಬುವುದು ಕೇವಲ ಒಬ್ಬ ವ್ಯಕ್ತಿಗಷ್ಟೇ ಸೀಮಿತವಾಗಿರದೆ, ನಾವು ಬದುಕುತ್ತಿರುವ ಸಮಾಜ ಹಾಗೂ ಪರಿಸರಕ್ಕೂ ಸಂಬಂಧಿಸಿದ್ದಾಗಿದೆ. ಆಧುನಿಕತೆಯು ಬೆಳೆದಂತೆ ಒಂದು ನಿರ್ದಿಷ್ಟ ಪ್ರದೇಶದ ಹಾಗೂ ಅಲ್ಲಿನ ಜನರ ಸಾಮಾಜಿಕ ಹಾಗೂ ಸಂಘಟನಾತ್ಮಕ ಜೀವನ ಶೈಲಿಯಲ್ಲಿ ಆಗುವ ಬದಲಾವಣೆಯನ್ನು ನಾಗರೀಕತೆ ಎನ್ನಬಹುದು. ಉತ್ತಮ ನಾಗರೀಕತೆಯು ಪರಿಸರ ಅಥವಾ ವಾತಾವರಣದ ನಿರ್ಮಾಣವಾಗಬೇಕಾದರೆ […]Read More

ಬದುಕಿನ ಸವಿಯನಾವರಣ

ಬದುಕಿನ ಸವಿಯನಾವರಣ ನನಸಾಗಿರಲು ಕಂಡ ಸವಿಗನಸುಗಳುಬೇಸರಿಕೆ ಕಾಣದೊಲ್ಲದು ಮನಸು!ಅಂತರಾಳದಲಿ ಸವಿನೆನಪುಗಳ ದಿಬ್ಬಣಸಾಗುತಿರಲು..ಬಾಳೆಂದಿಗೂ ಸೊಗಸು!! ಕಂಬನಿ ಮಿಡಿದಿಹ ಕಂಗಳನೊರೆಸಿಬಾಳಪುಟಕೆ ನೀ ಮುನ್ನುಡಿಯಾದೆ!ಮೌನದ ಬದುಕಲಿ ನೀನಡಿಯನಿರಿಸಿ…ಅರಿಯದ ಹರುಷಕೆ ನಾಂದಿಯಾದೆ!! ನಿನ್ನೊಲವಿನ ಮಳೆಯ ಸಿಂಚನದಿಭಾವಾಂತರಾಳದಲಿ ಧನ್ಯತೆಯ ಒನಪು!ಜೀವಸಾಂಗತ್ಯದ ಭಾವಲಾಸ್ಯಕೆ..ಒಲಿದ ಹೃದಯಾಂತರಾಳವೇ ಮುಡಿಪು!! ಕಾಣದ ದೇವರ ಹಾರೈಕೆಯಲಿನಮ್ಮೊಲವಿನ ನಂದನವನ ಅರಳಿದೆ!ಸಂಕಟವು ಮರೆಯಾಗಿ ಬಾಳಲಿ..ಸಂತಸದ ಕ್ಷಣಗಳೆಲ್ಲ ಮರಳಿದೆ!! ಮನದಾಳದ ಆಸರೆಯೋ..ಆಸರೆಯಮನದಾಳವೋ ಮನ ತಿಳಿಯದಾಗಿದೆ!ಮಿಡಿದ ಜೀವ ಜೊತೆಯಲಿರಲು..ಜೊತೆಯಲಿಹ ಜೀವ ನಿತ್ಯ ಮಿಡಿದಿದೆ!! ಸುಮನಾ ರಮಾನಂದRead More

ಪರಿಪೂರ್ಣತೆಯೆಡೆಗೆ…

ಪರಿಪೂರ್ಣತೆಯೆಡೆಗೆ… ನಾಯಿ-ನರಿ ಬೊಗಳಿದರೆಆನೆ ಬೆದರುವುದೇ ?ತಾನು ಮುನ್ನಡೆಯುವುದಎಂದಾದರೂ ಮರೆವುದೇ? ಕರಿಯ ತೆರದಲಿ ನಾವುಮುನ್ನಡೆಯುತ್ತಿರುವಾ,ನಿಂದನೆ, ಕುಹಕಗಳಿಗೆಕಿವಿಯಗೊಡದೆ ! ಬೊಗಳುವರು ನಿಂತಲ್ಲೇಬೊಗಳುತ್ತಾ ನಿಲ್ಲುವರು,ದಿಟ ಹೆಜ್ಜೆಯಿಡುವವರತಡೆವರಾರಿಹರು? ಕ್ಷುಲ್ಲಕ ವಿಷಯಗಳಕಡೆಗಣಿಸುತ್ತಲೇ,ನಡೆಯುವಾ ನಾವುಪರಿಪೂರ್ಣತೆಯೆಡೆಗೆ! ಶ್ರೀವಲ್ಲಿ ಮಂಜುನಾಥRead More

ಕರುಣಾಳು ಪರಮೇಶ(ಕುಸುಮ ಷಟ್ಪದಿ)

ಕರುಣಾಳು ಪರಮೇಶ(ಕುಸುಮ ಷಟ್ಪದಿ) ಕರುಣಿಸೋ ಪರಮೇಶಕರುಣೆಯನು ತೋರಿಸೋ!ಕಂಭಸುತ ಕರುಣಾಳು ಕಾಪಾಡು ಬಾ|ಕಡುಕಷ್ಟ ಪಡುತಿಹೆನುಕಾಣುತಿಹೆ ನೀನಿಂದುಕಡುಲೋಭಿ ಜಿಪುಣನಾ ಕಾಪಾಡಿದೆ||. ೧|| ಕಡುಬಡವ ಕುಚೇಲನಕರ ಪಿಡಿದು ಕಾಪಾಡಿದೆಕನಕನಿಗೆ ಕಿಂಡಿಯಲಿ ಮೊಗವನ್ನು ತೋರ್ದೆ|ಕಾಪಾಲಿ ಶಿವನನ್ನುಕಂಟಕದಿ ನೀ ಸಲಹಿದೆಕಡುಕಷ್ಟ ಪಡುತಿರುವೆ ಕಾಪಾಡು ನೀ||. ||೨|| ಮೊರೆಯಿಟ್ಟ ಪಾಂಚಾಲಿಮಾನವನು ಉಳಿಸಿದೇಮದನಪಿತ ಮಾಧವನೆ ಕರುಣಾಸಿಂಧು|ಮೋಹಿನಿಯೆ ಸುಧೆಯಂಚಿಮೋಹವನು ಬೀರಿದಳೆಮೋಹನ ನಾಗಶಯನನೆ ಕರುಣಾಳು|| ||೩|| ನಾಗರಾಜು.ಹ.ಬೆಂಗಳೂರುRead More

ಶ್ರೀ ಕ್ಷೇತ್ರ ಪೊಳಲಿ

ಶ್ರೀ ಕ್ಷೇತ್ರ ಪೊಳಲಿ ದಕ್ಷಿಣ ಕನ್ನಡ ಜಿಲ್ಲೆಯು ಕಡಲತಟದ ಇತಿಹಾಸ ಪ್ರಸಿದ್ಧ ಸ್ಥಳವಾಗಿದ್ದು, ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದಲ್ಲಿರುವ ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನವು ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದು. ಇದು ಮಂಗಳೂರಿನಿಂದ ಸುಮಾರು 20 ಕಿ.ಮೀ ದೂರದಲ್ಲಿದ್ದು ಪೊಳಲಿಯು ಇತರ ದೇವಾಲಯಗಳಿಗಿಂತ ಭಿನ್ನವಾದ ಸ್ಥಳ ಪುರಾಣವನ್ನು ಹೊಂದಿದ್ದು ಇದು ಮುಖ್ಯವಾಗಿ ಫಲ್ಗುಣಿ ನದಿ ದಡದಲ್ಲಿದೆ. ಮೂಲಗಳ ಪ್ರಕಾರ 1446ರಲ್ಲಿ ಫಲ್ಗುಣಿ ನದಿಯಲ್ಲಿ ಬಂದ ನೆರೆಯಿಂದಾಗಿ ಪೊಳಲಿ ದೇವಸ್ಥಾನದ ಪವಿತ್ರ ಸ್ಥಳವನ್ನು ಹೊರತು ಪಡಿಸಿ ಉಳಿದೆಲ್ಲಾ […]Read More

ರಕ್ಕಸ ನಿದ್ದೆ

ರಕ್ಕಸ ನಿದ್ದೆ ಹಲವು ಜನರಿಗೆ ಮರೀಚಿಕೆಯಾದೆಕೆಲವರ ಪಾಲಿಗೆ ಬೇಡದ ವರವಾದೆನಿನಗಾಗಿ ಅಸುರನೊಬ್ಬನ ಸಾಂಗತ್ಯವಿದೆ ನಿನ್ನಯ ಶಾಪಕೆ ಅವನಿಗೂ ಕೆಟ್ಟಹೆಸರುಅವನಿಂದ ಈಗಲೂ ಹಲವರಿಗೆ ಅದೇ ಹೆಸರುಬೇಡುವರು ಕೆಲವರು ನಿನ್ನಯ ಉಸಿರು ಸಂತೆಯಾದರೂ ಚಿಂತೆಯಿಲ್ಲದಿದ್ದರೂ ಸಹನಿನಗಿಲ್ಲ ಚಿಂತೆ ಬದುಕಲ್ಲಿ ನಿನದೇ ಸಂತೆನಿನ್ನಯ ಆಗಮನವ ಕಂಡು ಕರುಬುವ ಜನ ತುತ್ತಿನ ಚೀಲಕ್ಕೆ ನಿನ್ನನ್ನು ಮರೆತ ಜನಮರಕ್ಕಂಟಿದ ಬಾವಲಿಗಳಂತೆ ನಿಶಾಚರಿಯಾಗಿನಿನದೇ ಧ್ಯಾನದಲಿ ಕೊರಗುತಿಹರು ಅನುದಿನ ಊಟದಷ್ಟೇ ಮಹತ್ವ ನಿನಗೂ ಇರಲಿನಿನ್ನಯ ಕೃಪೆಯು ಎಲ್ಲರ ಮೇಲಿರಲಿಕಾವಳದ ರಾತ್ರಿಯಲಿ ಸುಂದರ ಸ್ವಪ್ನಗಳಿರಲಿ ಮರೀಚಿಕೆಯಾಗದಿರು ನೀನು ನಿದಿರೆಕುಂಭಕರ್ಣನಿಗೆ […]Read More

ಆ ಒಂದು ಕ್ಷಣ….. ನಿಮ್ಮೊಂದಿಗೆ – ಸುನೀಲ – 2

ಆ ಒಂದು ಕ್ಷಣ – ಅಂಕಣ ಭಾಗ-02 ಆ ಕ್ಷಣದ ನಿರ್ಧಾರ …. ಅದು ಹೇಗೆ ಸಾಧ್ಯ…!? ನಿರ್ದಿಷ್ಟ ಗುರಿ ಅಥವಾ ಉದ್ದೇಶವನ್ನು ಸಾಧಿಸಲು ಅಗತ್ಯವಾದ ಪೂರ್ವ ನಿರ್ಧರಿತ ಕಾರ್ಯಮಾರ್ಗ “ಯೋಜನೆ”. ಅದನ್ನು ಕಾರ್ಯರೂಪಕ್ಕೆ ತರುವುದು ನಿರ್ಧಾರ. ಏನು ಮಾಡಬೇಕು, ಹೇಗೆ ಮಾಡಬೇಕು, ಯಾವಾಗ ಮಾಡಬೇಕು ಮತ್ತು ಅದನ್ನು ಯಾರು ಮಾಡಬೇಕು ಎಂಬುದನ್ನು ಪೂರ್ವಭಾವಿಯಾಗಿ ಯೋಚಿಸಿ ಕಾರ್ಯರೂಪಕ್ಕೆ ಇಳಿಸಿದರೆ ಅದು ನಿರ್ಧಾರ. ಯೋಜಿಸುವಿಕೆಯು ನಾವು ಎಲ್ಲಿದ್ದೇವೆ ಮತ್ತು ಎಲ್ಲಿಗೆ ಹೋಗಬೇಕು ಎಂಬುದರ ನಡುವಿನ ಸಂಪರ್ಕ ಸೇತು.ಇದು ಯೋಜನೆ […]Read More

ನನ್ನ ಮುದ್ದು ಕಂದ

ನನ್ನ ಮುದ್ದು ಕಂದ ನನ್ನ ಮುದ್ದು ಕಂದನ ನಗುವಿಗೆವೀಣಾ ವಾಣಿಯು ಮುನಿಸಿದೆ……..|೨|ನನ್ನ ಕಂದನ ಹಾಗೆ ನಗಲು ಬರಲು…|೨| ನನ್ನ ಮುದ್ದು ಕಂದನ ನಡಿಗೆಗೆನಡೆವಾ ನವಿಲು ಮುನಿಸಿದೆ…………|೨|ನನ್ನ ಕಂದನ ಹಾಗೆ ನಡೆಲು ಬರಲು…|೨| ನನ್ನ ಮುದ್ದು ಕಂದನ ಹಾಡಿಗೆಹಾಡುವ ಕೋಗಿಲೆ ಮುನಿಸಿದೆ…….|೨|ನನ್ನ ಕಂದನ ಹಾಗೆ ಹಾಡ ಬರಲು…|೨| ನನ್ನ ಮುದ್ದು ಕಂದನ ನೋಟಕೆನೋಡುವ ನಕ್ಷತ್ರ ಮುನಿಸಿದೆ………..|೨|ನನ್ನ ಕಂದನ ಹಾಗೆ ನೋಡ ಬರಲು…|೨| ಪ್ರೇಮಕವಿ ಗುಡ್ಡಪ್ಪ. ಬಿಉಜ್ಜಿನಿRead More