ಚಮಚ ಕೊಕ್ಕಿನ ಮರಳು ಪೀಪಿ

ಚಮಚ ಕೊಕ್ಕಿನ ಮರಳು ಪೀಪಿ – Spoonbilled Sand Piper ನಿರಂತರವಾಗಿ ಬರುತಿದ್ದ ಮನೆಯ ನೆಂಟರು ಕ್ರಮೇಣವಾಗಿ ಕಡಿಮೆಯಾಗುತ್ತಾ ಬಂದರೆ! ನಂತರ ಬರುವುದನ್ನೇ ನಿಲ್ಲಿಸಿದರೆ ಬರುತ್ತಿದ್ದ ನೆಂಟರಿಗೆ ಏನಾಯಿತೋ ಏನೋ ಎಂದು ಕಳವಳವಾಗುವುದು ಸಹಜ. ರಷ್ಯಾ ದೇಶದಿಂದ ಚಳಿಗಾಲದ ಅತಿಥಿಯಾಗಿ ಭಾರತಕ್ಕೆ ಆಗಮಿಸುತಿದ್ದ “ಸ್ಪೂನ್ ಬಿಲ್ಡ್ ಸ್ಯಾಂಡ್ ಪೈಪರ್” ಎಂಬ ಪುಟ್ಟ ಅಲೆಮಾರಿ ವಲಸೆ ಹಕ್ಕಿಯ ಸಂತತಿ ಬಗ್ಗೆ ನಿಜಕ್ಕೂ ಈಗ ಆಗುತ್ತಿರುವುದು ಅದೇ ಕಳವಳ. ರಷ್ಯಾದ ಚುಕೋಟ್ಸ್ಕ್ ಹಾಗು ಕಮ್ಚಟ್ಕಾ ಎಂಬ ಪರ್ಯಾಯ ದ್ವೀಪದಲ್ಲಿ ಸಂತಾನವೃದ್ಧಿ […]Read More

ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ – 2023

“ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ – 2023” ಅವ್ವ ಪುಸ್ತಕಾಲಯ ಸಾಹಿತ್ಯ ಬಳಗ ಕುಣಿಗಲ್ ಇವರ ವತಿಯಿಂದ ಪ್ರತೀ ವರ್ಷದಂತೆ “ಶ್ರೀಮಾನ್ ಲೇ. ನರಸಯ್ಯ” ಅವರ ಸ್ಮರಣಾರ್ಥ ಕೊಡಮಾಡುವ “ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ” ಗಾಗಿ 2022 ಮತ್ತು 2023 ರಲ್ಲಿ ಪ್ರಕಟವಾಗಿರುವ ಕನ್ನಡ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ. ಈ ಹಿಂದೆ ಪ್ರಶಸ್ತಿ ಪಡೆದವರು ಈ ವರ್ಷದ ಪ್ರಶಸ್ತಿಗೆ ಅರ್ಹರಾಗಿರುವುದಿಲ್ಲ. * 2023 ರ ಆಗಸ್ಟ್ 31 ರ ಒಳಗೆ ತಮ್ಮ ಕೃತಿಯ ಮೂರು ಪ್ರತಿಗಳನ್ನು, ಪ್ರತ್ಯೇಕ […]Read More

ಹೆಣ್ಣು ಮತ್ತು ಆರೋಗ್ಯ ಭಾಗ -2

ಹೆಣ್ಣು ಮತ್ತು ಆರೋಗ್ಯ ಭಾಗ –2 ಈ ಎರಡನೇ ಅಂಕಣದಲ್ಲಿ ನಾನು ಗರ್ಭಿಣಿಯ 4,5,6 ನೆ ತಿಂಗಳುಗಳು ಹೇಗಿರುತ್ತದೆ ಏನನ್ನು ನಿರೀಕ್ಷಿಸಬಹುದು, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಏನು ಅಂತ ತಿಳಿಸಿಕೊಡುತ್ತೇನೆ. ಇಡೀ ಗರ್ಭಿಣಿ ಅವಧಿಯಲ್ಲೇ ತುಂಬಾ ಸಂತಸದಾಯಕ ಹಾಗೂ ಆರಾಮದಾಯಕ ತಿಂಗಳುಗಳು ಇವು. 1- ಮೊದಲ 3 ತಿಂಗಳು ಅನುಭವಿಸಿದ ವಾಕರಿಕೆ, ವಾಂತಿ,ಸುಸ್ತು, ಸ್ಥನಗಳ ನೋವು, ಊತ ಕಮ್ಮಿಯಾಗುತ್ತದೆ ಇದಕ್ಕೆ ಕಾರಣ ಒಂದು ಹಾರ್ಮೋನ್ ಕಡಿಮೆಯಾಗುವಿಕೆ ಹಾಗೂ ಜನನ ಪ್ರಕ್ರಿಯೆಗೆ ಬೇಕಾದ ಹಾರ್ಮೋನ್ ಜಾಸ್ತಿಯಾಗುವಿಕೆ. 2- ಹಸಿವು ಹೆಚ್ಚಿ, […]Read More

ಆ ಒಂದು ಕ್ಷಣ….. ನಿಮ್ಮೊಂದಿಗೆ – ಸುನೀಲ – 4

ಆ ಒಂದು ಕ್ಷಣ….. ನಿಮ್ಮೊಂದಿಗೆ – ಸುನೀಲ – 4 ಒಂದು ದೊಡ್ಡ ಕಂಪನಿ….. .ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿದೆ.ಇತ್ತೀಚಿನ ದಿನಗಳಲ್ಲಿ ಈ ಕಂಪನಿಗೂ ಸವಾಲೊಡ್ಡುವಂತಹ ಕಂಪನಿಗಳು ಮಾರುಕಟ್ಟೆ ಪ್ರವೇಶ ಮಾಡಿವೆ.ಇತರ ಕಂಪನಿಗಳ ಜೊತೆಗೆ ಸ್ಪರ್ಧಿಸಿ ಗೆಲ್ಲುವ, ಜೊತೆಗೆ ಅತ್ಯುತ್ತಮ ಸೇವೆಯನ್ನು ಕೊಡಬೇಕಾದ ಗುರುತರ ಜವಾಬ್ದಾರಿ ಕಂಪನಿಯ ಮೇಲೆ ಇದೆ. ಆ ಕಂಪನಿಗೆ ಮುಖ್ಯಸ್ಥರಾಗಿ ಬಂದ ವ್ಯಕ್ತಿಯ ಮುಂದೆ ಹಲವು ಸವಾಲುಗಳು…೧.ತಮ್ಮಲ್ಲಿರುವ ಮಾನವ ಸಂಪನ್ಮೂಲಗಳ ಸದ್ಭಳಕೆ..೨.ಉದ್ಯೋಗಿಗಳಿಗೆ ಅವಶ್ಯಕವಾದ ಸೌಕರ್ಯಗಳನ್ನು ಒದಗಿಸುವುದು೩.ಹೆಚ್ಚಿನ ವೇತನ ಅಥವಾ ಸೌಲಭ್ಯಗಳನ್ನು ಹುಡುಕಿ […]Read More

ಬಡವರ ಮಗಳು ಸೌಜನ್ಯ

ಬಡವರ ಮಗಳು ಸೌಜನ್ಯ ಬಡವನ ಮನೆಯಲಿ ಏಕೆ ಹುಟ್ಟಿಸಿದೆಮಂಜುನಾಥನೆ,, ನನ್ನನ್ನು.ನಿನ್ನಯ ನೆಲದಲಿ ತಿಂದು, ತೇಗಿದರುನನ್ನಯ ಬದುಕಿನ ಕನಸನ್ನುಏತಕೆ ನಿನಗೆ ಪೂಜೆಗಳು,,,ತೆಲುತಿವೆ ಹೆಣ, ದೇಹಗಳು.!!೧!! ತಿಂದು ತೇಗಿದ ಕಾಮುಕರನ್ನುರಕ್ಷಿಸುತಿಹರು ಹಲವು ಜನ.ನನ ದೇಹ, ಮನಸಿಗೆ ಆದ ನೋವನುಮರೆಯಲು ಸಾಧ್ಯವೇ, ನನ್ನ ಮನ.ಏತಕೆ ನಿನಗೆ ಹರಕೆಗಳು,,?ಬದುಕಿಹರಲ್ಲ ಈ ಬೆರಕೆಗಳು.!!೨!! ತಾಯಿ ನೊಂದಳು,ತಂದೆ ಬೆಂದನುನನ್ನಯ ಈ ಸ್ಥಿತಿ ನೋಡಿ.ಪಾಪಿ ಎಳೆದನು,ದುರುಳ ಕಡಿದನುಬೇಡಿದರು ನನ್ನ ಎಳೆದಾಡಿ.ನಿನಗೆ ಏತಕೆ ದೀಪಗಳು,,?ನಿನ್ನಯ ನೆರಳಲಿ ಪಾಪಗಳು.!!೩!! ಮಂಜುನಾಥನೆ ಹೇಳು ಬೇಗನೆನನಗೆ ನ್ಯಾಯವ ಕೊಡಿಸುವೆಯಾ.?ಧರ್ಮಸ್ಥಳದ ಧರ್ಮರಕ್ಷಕನೆನಾರಿಯ ಮಾನವ ಉಳಿಸುವೆಯಾ,?ಉಳಿಸಿದೆ […]Read More

ಆಪ್ಯಾಯ ಮೌನ

ಆಪ್ಯಾಯ ಮೌನ ಮನವೇಕೋ ಮೌನದಮೊರೆ ಹೋದಂತಿದೆ.ಮಾತಿಗೆ ಮೌನಬೇಲಿ ಹಾಕಿದಂತಿದೆ. ಎಂದೂ ಕಂಡಿರದಮಾತಿಲ್ಲದ, ಮೌನವಕಂಡ ಮನ ಅರೆಕ್ಷಣಗಲಿಬಿಲಿಗೊಂಡಂತಿದೆ. ಮೌನದಲ್ಲೇ ಮನಎಲ್ಲವ ಮನನ ಮಾಡಿಸರಿತಪ್ಪುಗಳನೆಣಿಸಿದಂತೆಭಾಸವಾಗುತ್ತಿದೆ. ಇತ್ತೀಚೆಗೇಕೆ ಯಾವಮಾತೂ ಬೇಡವೆನಿಸಿ,ಏಕಾಂತಕ್ಕಾಗಿ ಮನಕಾತರಿಸುತ್ತಲಿದೆ ! ಶ್ರೀವಲ್ಲಿ ಮಂಜುನಾಥRead More

ಚಂದಿರನ ಸೋಜಿಗ

ಚಂದಿರನ ಸೋಜಿಗ ಬುವಿಯಲಿ ಪಸರಿಸಿಹ ಬೆಳದಿಂಗಳಲಿತಾ ನಕ್ಕು ಆಗಮಿಸಿಹನು ಚಂದಿರ!ತಾರೆಗಳ ತೋಟದ ಹಾಲ್ಬೆಳಕಲಿ..ಕಾಣುವ ಲೋಕವದುವೇ ಸುಂದರ!! ಮುಸ್ಸಂಜೆಗೆ ಅರಳಿ ಮುದುಡುವಮಲ್ಲೆ,ಪಾರಿಜಾತ ಹೂಗಳದೇ ಕಂಪು!ಕುದಿವ ಕೆಂಡದ ತಾಪದ ಮರೆಯಲಿ..ಅವ ನೀಡಿಹನು ಇಳೆಗೆ ತಂಪು!! ನೇಸರನ ಬೆಳಕಲಿ ಜಗ ಮಿಂಚಿದೆಕಣ್ಕೋರೈಸುವ ಹೊಂಗಿರಣದಿ!ಧರೆಯು ನವವಧುವಿನಂತೆ ಹೊಳೆದಿದೆ…ರವಿಯಿಂದ ಕಡ ತಂದ ಶಶಿಕಿರಣದಿ!! ಅಂಬರದಿ ಚದುರಿದ ನಕ್ಷತ್ರಗಳಒಂದಾಗಿಸಿ ಮಿನುಗಿಸಿಹನು ತಂಗದಿರ!ಬಿರುಬಿಸಿಲ ತಾಪಕೆ ಬಳಲಿದ ಧರಣಿಯ…ತಂಪಾಗಿಸುವ ಬೆಳದಿಂಗಳೇ ಮಧುರ!! ಸುಮನಾ ರಮಾನಂದRead More

ಸಂಪನ್ಮೂಲ ವ್ಯಕ್ತಿಯೆಂಬ ಮಹಾನ್ ಕಲಾವಿದ

ಸಂಪನ್ಮೂಲ ವ್ಯಕ್ತಿಯೆಂಬ ಮಹಾನ್ ಕಲಾವಿದ ಯಾವುದೇ ಒಂದು ವಿಚಾರದ ಬಗ್ಗೆ ಮಾಹಿತಿಯ ವಿವರಣೆಯನ್ನು ನೀಡಲು ಬಹಳ ಹಿಂದಿನ ಕಾಲದಿಂದಲೂ ಪ್ರಚಲಿತದಲ್ಲಿರುವ ಒಂದು ಪದ್ದತಿ ಎಂದರೆ ಉಪನ್ಯಾಸ. ಉಪನ್ಯಾಸ ಎಂದ ಕೂಡಲೇ ಇಂದು ವಿದ್ಯಾರ್ಥಿಗಳ ಪಾಲಿಗೆ ಅದೊಂದು ಮಹಾನ್ ಕೊರೆತ ಎಂದೇ ಬಿಂಬಿತವಾಗಿದೆ. ಯಾಕೆಂದರೆ ಉಪನ್ಯಾಸಕರು ಒಂದಷ್ಟು ವಿಚಾರಗಳನ್ನು ಅಭ್ಯಸಿಸಿಕೊಂಡು ಬಂದು ಬಡಪಾಯಿ ವಿದ್ಯಾರ್ಥಿಗಳ ಮೇಲೆ ಪ್ರಯೋಗ ಮಾಡುತ್ತಾರೆ. ಇದು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಎಂಬಂತಾಗಿಬಿಡುತ್ತದೆ. ತಾನು ತಿಳಿಸುತ್ತಿರುವ ವಿಚಾರಗಳನ್ನು ವಿದ್ಯಾರ್ಥಿಗಳು ಎಷ್ಟು ಅರ್ಥೈಸಿಕೊಳ್ಳುತ್ತಿದ್ದಾರೆ, ತಾನು ನೀಡುತ್ತಿರುವ […]Read More

ಅಂತರಾಷ್ಟ್ರೀಯ ಹುಲಿ ದಿನ – ಜುಲೈ 29

ಅಂತರಾಷ್ಟ್ರೀಯ ಹುಲಿ ದಿನ – ಜುಲೈ 29 ಹುಲಿಗಳು ಮೂಲತಃ ಬೆಕ್ಕಿನ ವಂಶವಾದ ಪೆಲಿಡೇ ಕುಟುಂಬಕ್ಕೆ ಸೇರಿದ್ದು. ಬೆಕ್ಕಿನ ವಂಶದ ಜೀವಿಗಳು 70 ಮಿಲಿಯನ್ನು ವರ್ಷಗಳ ಹಿಂದೆ ಏಷಿಯಾ ಖಂಡದಲ್ಲಿ ಜನ್ಮ ತಾಳಿವೆ ಎಂದು ಸಂಶೋದನೆ ಹೇಳುತ್ತದೆ. ಪ್ರಸ್ತುತ ಜಗತ್ತಿನಲ್ಲಿ 37 ಬೆಕ್ಕಿನ ಜಾತಿಯ ಪ್ರಾಣಿಗಳನ್ನು ನೋಡಬಹುದು , ಭಾರತದಲ್ಲಿ 15 ಜಾತಿಗಳಿಗೆ. ಇವುಗಳಲ್ಲಿ ಅನೇಕ ಉಪ ಪ್ರಭೇದಗಳು ಇವೆ. ಸಣ್ಣ ಬೆಕ್ಕುಗಳನ್ನು “ಫೆಲಿನಿ” (Felini) ಹಾಗು ದೊಡ್ಡ ಬೆಕ್ಕುಗಳನ್ನು “ಪ್ಯಾಂಥರಿಣಿ” (Pantherini) ಎಂದು ಎಂದು ಗುಂಪುಗಳಲ್ಲಿ […]Read More

ಜರೀಬೇಡ ಕನ್ನಡ ನುಡಿಯ

ಜರೀಬೇಡ ಕನ್ನಡ ನುಡಿಯ ಅಯ್ಯೋ!? ಹುಚ್ಚಪ್ಪ ಕನ್ನಡ ನುಡಿಯ ಜರಿಯಬೇಡ…….|ಪ|ಈ, ನಮ್ಮ ಕನ್ನಡ ನಾಡಿನ ಮಣ್ಣನು ಮರೆಯಬೇಡಆ, ಚಂದಿರ ಬೆಳದಿಂಗಳ ಹೊತ್ತು ತರುವುದು ಕೂಡಾಕನ್ನಡ ನುಡಿಯ, ಕಲಿಯಬೇಕೆಂಬ ಬಯಕೆ ನೋಡಾ…….|೧| ಅಯ್ಯೋ!? ಹುಚ್ಚಪ್ಪ ಕನ್ನಡ ನುಡಿಯ ಜರಿಯಬೇಡ…….|ಪ|ಈ, ನಮ್ಮ ಕನ್ನಡ ನಾಡಿನ ಮಣ್ಣನು ಮರೆಯಬೇಡಆ, ಮೋಡವು ಕುಣಿದು ಮಳೆ ಸುರಿಸುವುದು ಕೂಡಾಕನ್ನಡ ನುಡಿಯ, ಕಲಿಯಬೇಕೆಂಬ ಬಯಕೆ ನೋಡಾ…….|೨| ಅಯ್ಯೋ!? ಹುಚ್ಚಪ್ಪ ಕನ್ನಡ ನುಡಿಯ ಜರಿಯಬೇಡ…….|ಪ|ಈ, ನಮ್ಮ ಕನ್ನಡ ನಾಡಿನ ಮಣ್ಣನು ಮರೆಯಬೇಡಆ ಸೂರ್ಯ ಕಿರಣವ ಬಿಟ್ಟು ಹುಡುಕುವುದು […]Read More