ಹನಿಗವನಗಳು ದೂರಾಗು ನೀ ನೀರಾದರೆನಾನು ಕಲ್ಲಾಗುವೆಇಷ್ಟವಿದ್ದರೆನನ್ನನ್ನು ನಿನ್ನಲ್ಲಿಮುಳುಗಿಸಿಕೊ!ಇಲ್ಲವಾದರೆನನ್ನ ಮೇಲೆಹರಿದು ದೂರಾಗು!! ಅರ್ಥ ನಿನ್ನಿಂದನಾ ದೂರಹೋದ ಮೇಲೆನಿನಗರ್ಥ ಆಗುತ್ತೆ!ಜಗತ್ತಿನಲ್ಲಿನನ್ನಂತವನುಇನ್ನೊಬ್ಬನಿಲ್ಲಎಂಬ ಸತ್ಯ!! ಆಳ ನೀ ನನ್ನಪಡೆಯಬೇಕೆಂದರೆನನ್ನೊಳಗೆಇಳಿದು ನೋಡು!ದಡದಲ್ಲೇನಿಂತರೆಕಡಲಿನ ಆಳತಿಳಿಯಲಾರದು!! ಶುಭ ಸಮಾಚಾರ ತುಂಬಾ ದಿನಗಳಿಂದಕನಸಾಗಿದ್ದವಳುಇಂದು ಇದ್ದಕಿದ್ದಂತೆಎದುರು ಬಂದುನನಸಾದಳು!ನಾನಿಷ್ಟ ಪಡುವಮೋಹಕ ನಗೆ ಬೀರಿದಳು!! ಡಾ|| ಪರಮೇಶ್ವರಪ್ಪ ಕುದರಿRead More
ಹೆಣ್ಣಿನವರಿಗೆ ನೋವು, ಗಂಡಿನವರಿಗೆ ನಲಿವುಹಣ್ಣಾದ ಮುದುಗಣ್ಗಳಿಗೆ ಸೊಂಟ ನೋವುಸಣ್ಣ ಮಕ್ಕಳಿಗಂತು ಅದುವೆ ಸುಖದಾಗರವುಕಣ್ಣಿಟ್ಟು ಕಾಣ್ ಮದುವೆ- || ಪ್ರತ್ಯಗಾತ್ಮ || ಮದು ಮಕ್ಕಳಿಗೆ ತಮ್ಮ ಓಪರನು ಕಾಂಬಾಸೆಮೊದಲು ಊಟದ ಆಸೆ ಬಂದ ನೆಂಟರಿಗೆಮದಿರಾಕ್ಷಿಯರ್ಗೆಲ್ಲ ಮೈಸಿರಿಯ ಮೆರೆವಾಸೆಇದು ಕಣಾ ಮದುವೆ ಮನೆ- || ಪ್ರತ್ಯಗಾತ್ಮ || ಮುದುಕರನು ನೀ ಕಂಡು ಮುದಿಗೊರಡು ಎನ್ನದಿರುಮದುವೆ ಮೊದಲಾದಂಥ ಶುಭ ಕಾರ್ಯಗಳಲಿವಿಧಿ ವಿಧಾನವ ತಿಳಿಸಿ ಮನೆಯ ಮುನ್ನಡೆಸಲಿಕೆಮುದುಕರನುಭವ ಬೇಕು- || ಪ್ರತ್ಯಗಾತ್ಮ || ಮನೆ ಮಂದಿ ಹೊರ ಹೋಗೆ ಮನೆಯ ಕಾಯುವರಲ್ತೆ!ಮನೆಯವರು ನಿದ್ರಿಸಲು […]Read More
ಸ್ಕಂದಾವಾರದಲ್ಲಿ (ಸೇನಾ ಶಿಬಿರದಲ್ಲಿ) ಮಧ್ಯಾಹ್ನದ ಊಟವಾದ ಮೇಲೆ ಸ್ಕಂದಗುಪ್ತನು ಶಿಬಿರದ ಒಂದು ಕೊಠಡಿಯಲ್ಲಿ ಮಲಗಿ ವಿಶ್ರಮಿಸಿಕೊಳ್ಳುತ್ತಿದ್ದನು. ಇಬ್ಬರು ಸಂವಾಹಕ (ಮಾಲೀಸು ಮಾಡುವವರು) ಅವನ ಕಾಲುಗಳನ್ನು ಒತ್ತುತ್ತಿದ್ದರು. ಒಬ್ಬ ದಾಸಿ ಚಾಮರವನ್ನುಬೀಸುತ್ತ ಗಾಳಿ ಹಾಕುತ್ತಿದ್ದಳು. ಭುಕ್ತಾ ರಾಜವದಾಚರೇತ್! ಆಗಿನ ಕಾಲದಲ್ಲಿ ಮಧ್ಯಾಹ್ನದ ಭೋಜನಾ ನಂತರ ವಿಶ್ರಮಿಸಿಕೊಳ್ಳುವ ಪದ್ಧತಿ ಇದ್ದಿತು. ರಾಜನಿಂದ ಮೊದಲುಗೊಂಡು ಸಾಧಾರಣ ಪಾಮರರವರೆಗೆ ಎಲ್ಲರೂ ಮಧ್ಯಾಹ್ನದ ಹೊತ್ತಿನಲ್ಲಿ ಸ್ವಲ್ಪ ಹೊತ್ತಾದರೂ ರಾಜನಂತೆ ಈ ಪದ್ಧತಿಯನ್ನು ಆಚರಿಸುತ್ತಿದ್ದರು. ಸ್ಕಂದಗುಪ್ತನ ಗುಡಾರದಲ್ಲಿ ಅನೇಕ ಕೊಠಡಿಗಳಿದ್ದವು. ಅವುಗಳಲ್ಲಿ ಒಂದು ಎಲ್ಲಕ್ಕಿಂತಲೂ ದೊಡ್ಡದು. […]Read More
ನನ್ನ ಭಯಾಗ್ರಫಿ – ಬೀಚಿ ಬದುಕನ್ನ ನೋಡೋ ರೀತಿ, ಒಂದು ಟೇಸ್ಟ್, ರೂಢಿಸಿಕೊಂಡ ಶಿಸ್ತು, ಸಹಾನುಭೂತಿಯಿಂದ ಶುರುವಾಗೋ ಪ್ರೀತಿ ಇದೆಲ್ಲದರ ಜೊತೆಗೆ ಮನುಷ್ಯನ ಎಲ್ಲಾ ಕ್ರಿಯೆ, ಪ್ರತಿಕ್ರಿಯೆಗಳಿಗೆ ಅಂದಿನ ಪರಿಸ್ಥಿತಿನೇ ಕಾರಣ. ಆ ಮನಸ್ಥಿತಿಯ ಮೇಲೆ ಮನುಷ್ಯರು ನಿರ್ಧರಿಸೋದು ತಮ್ಮ ಬೇಕುಬೇಡಗಳಿಗೆ, ವೈಯಕ್ತಿಕ ಬದುಕಿಗೆ ಬಡಿದಾಡೋದ ಅಥವಾ ಸುಮ್ಮನಿರೋದ ಅಂತ. ವೈಯಕ್ತಿಕ ಬದುಕಿನ ದುರಂತಗಳಲ್ಲೇ ಸಾಮಾಜಿಕ ಪ್ರಜ್ಞೆ ಪ್ರಜ್ವಲಿಸೋದು. ಕನ್ನಡ ಸಾಹಿತ್ಯದಲ್ಲಿ ಹಾಸ್ಯ ಸಾಹಿತಿಗಳೆಂದೇ ಪ್ರಸಿದ್ಧಿ ಹೊಂದಿ ಹಾಗೂ ಕನ್ನಡದ “ಬರ್ನಾಡ್ ಷಾ” ಎಂದು ಪ್ರಖ್ಯಾತಿ ಹೊಂದಿರುವ […]Read More
ಸತ್ವಯುತ ಜೀವಕ್ಕೆ ‘ಜೀವಸತ್ವಗಳು‘ ಜೀವಸತ್ವಗಳು ನೈಸರ್ಗಿಕವಾಗಿ ತರಕಾರಿ ಹಣ್ಣು ಆಹಾರ ಪದಾರ್ಥ ಹಾಗೂ ಖಾದ್ಯ ಪದಾರ್ಥಗಳ ಮೂಲಕ ನಮ್ಮ ದೇಹ ಪ್ರವೇಶಿಸಬೇಕೆ ಹೊರತು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವುದಿಲ್ಲ. ದೇಹದಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳಲ್ಲಿ ಜೀವಸತ್ವಗಳು ಮಹತ್ವದ ಪಾತ್ರವಹಿಸುತ್ತದೆ. ದೇಹದ ಬೆಳವಣಿಗೆಗೆ ಹಾಗೂ ಆರೋಗ್ಯದ ದೃಷ್ಟಿಯಿಂದ ಜೀವಸತ್ವಗಳು ಅವಶ್ಯಕ. ಹಾಗಾಗಿ ಸಣ್ಣ ಪ್ರಮಾಣದಲ್ಲಿ ಇವು ನಮ್ಮ ದೇಹವನ್ನು ಪ್ರವೇಶಿಸುತ್ತಲೇ ಇರಬೇಕು. ನಾವು ತಿನ್ನುವ ಆಹಾರದಲ್ಲಿ ಬಹಳ ದಿನಗಳವರೆಗೆ ಯಾವುದೇ ಒಂದು ಜೀವಸತ್ವದ ಕೊರತೆಯಾದರೂ ದೇಹದ ಮೇಲೆ ಪ್ರತಿಕೂಲ ಪರಿಣಾಮ […]Read More
ಬರ್ಕ – (ಬರಿಂಕ) Mouse Deer ನಮ್ಮೂರಿನ ಜಾತ್ರೆಯನ್ನು ಮುಗಿಸಿ ಕಾಡು ಗುಡ್ಡದ ಹಾದಿಯಲ್ಲಿ ರಾತ್ರಿ ಹನ್ನೆರಡರ ವೇಳೆಗೆ ನಾನೂ ನನ್ನ ಸಹೋದರ ಇಬ್ಬರೂ ಟಾರ್ಚ್ ಲೈಟಿನ ಬೆಳಕನ್ನು ಹಾಯಿಸಿಕೊಂಡು ಮನೆಯೆಡೆಗೆ ಹೆಜ್ಜೆ ಹಾಕುತ್ತಿದ್ದೆವು. ರಾತ್ರಿಯ ಪಯಣವೆಂದರೆ ನನಗೆ ಅದೇನೋ ಒಂದು ರೀತಿ ರೋಮಾಂಚನವನ್ನು ನೀಡುತ್ತಿದ್ದರೂ ಒಳಗೊಳಗೇ ಏನೋ ಭಯ. ಆದರೂ ಧೈರ್ಯ ಮಾಡಿ ನೆರೆಮನೆಯವರನ್ನು ಜಾತ್ರೆಯಲ್ಲೇ ಬಿಟ್ಟು ಇಬ್ಬರೇ ಮನೆಯ ಕಡೆಗಿನ ಕಾಡು ಹಾದಿಯನ್ನು ದಾಟಿ ತಲುಪಿದ ಇತಿಹಾಸವನ್ನು ಸೃಷ್ಟಿಸುವ ತವಕ ನಮಗಿಬ್ಬರಿಗೂ. ಹೊರಟು ಸ್ವಲ್ಪ […]Read More
ಪನ್ನೀರ ಹನಿ ಸಾರಲು ಅಂದು ಕಲ್ಲಿನಲ್ಲಿನನ್ನ ಹೆಸರು ಕೆತ್ತಿದೆ ನೀನುನಿನ್ನೊಲವ ತೋರಲು!ಕಲ್ಲಿನಂಥ ನನ್ನಮನಸು ಗೆದ್ದ ನಿನಗೆಒಲವ ಮುದ್ರೆ ಒತ್ತಿದೆ ನಾನುನನ್ನೊಲವ ಸಾರಲು!! ಏಕಾಂತ ಒಮ್ಮೊಮ್ಮೆಅವಳಿಗಿಂತಅವಳ ಜೊತೆ ಕಳೆದಸವಿ ಘಳಿಗೆಗಳೇಇಷ್ಟವಾಗುತ್ತವೆ!ಮತ್ತೆ ಮತ್ತೆನೆನಪಾಗ ಬೇಕೆನಿಸುತ್ತದೆಏಕಾಂತವೂಹಿತವೆನಿಸುತ್ತದೆ! ನೀನೆ ನನ್ನ ಜೀವ ನೀನು ನನ್ನ ಜೀವನೀನು ನನ್ನ ಭಾವನೀನಿಲ್ಲದ ನಾನುನೀರಿಲ್ಲದ ಮೀನುನಿನ್ನ ಸಲುಗೆ ಸ್ನೇಹಮರೆಸುವುದುನನ್ನ ನೋವು! ಜಾಗವಿಲ್ಲ ಕೊನೆಯಿಲ್ಲನಮ್ಮ ಪ್ರೀತಿಗೆಸರಿಸಾಟಿಯಿಲ್ಲ ಅದರವಿವಿಧ ರೀತಿಗೆ!ನಿಜವಾದ ಪ್ರೀತಿಯಲ್ಲಿಜಾಗವಿಲ್ಲ ಭೀತಿಗೆಒಲಿದು ಬರುತ್ತದೆ ಪ್ರೀತಿಬಲವಾದ ಛಾತಿಗೆ!! ಡಾ|| ಪರಮೇಶ್ವರಪ್ಪ ಕುದರಿಚಿತ್ರದುರ್ಗRead More
ಹಿಂದಿನ ಸಂಚಿಕೆಯಿಂದ…. ನಡುರಾತ್ರಿಯಾದ ಮೇಲೆ ಅವನಿಗೆ ಎಚ್ಚರವಾಯಿತು. ಎದ್ದು ಕುಳಿತನು. ಬೆಂಕಿ ಆರಿ ತಣ್ಣಗಾಗಿತ್ತು. ಸುತ್ತಲೂ ಗಾಢಾಂಧಕಾರ. ರಟ್ಟಾ ಎದ್ದು ಬಂದು ಅವನ ತೋಳುಗಳನ್ನು ಬಿಗಿಯಾಗಿ ಅವಚಿಕೊಂಡು ಕುಳಿತಿರುವ ಹಾಗೆ ಭಾಸವಾಯಿತು. ಅವನ ಕಿವಿಯಲ್ಲಿ ‘ನೋಡಿರಿ ಗುಹೆಯ ಬಾಗಿಲ ಕಡೆ ನೋಡಿರಿ-’ ಎಂದು ರಟ್ಟಾ ಮೆಲ್ಲಗೆ ಹೇಳಿದಳು. ಚಿತ್ರಕನು ಗುಹೆಯ ಬಾಗಿಲ ಕಡೆ ದೃಷ್ಟಿ ಹರಿಸಿ ನೋಡುತ್ತಾನೆ- ಬೆಂಕಿಯ ಹಾಗೆ ಕೆಂಪು ಬಣ್ಣದ ಎರಡು ಕಣ್ಣುಗಳು ಅವರನ್ನೇ ದುರುಗುಟ್ಟಿ ನೋಡುತ್ತಿವೆ. ಕತ್ತಲಿನಲ್ಲಿ ಬೆಂಕಿಯಂತಿರುವ ಕಣ್ಣಿನ ಪ್ರಾಣಿಯ ಶರೀರ […]Read More
ಹಾಯ್ಕುಗಳು ಒಡೆದ ಹೃದಯ ಒಡೆದ ಹೃದಯಒಂದುಮಾಡಿದರೇನುಮನಸು ಒಂದೇ! ಅಲಂಕಾರ ದೀಪ ದೇವರ ಚಿತ್ರ,ಶುಭ ಕಾರ್ಯದಲಿದಬಳಸುವರು ಚತುರ್ಮಂಗಗಳು ತಿಳಿಸುವುವುಕೇಳು,ಚಿಂತಿಸು,ಮಾತು.ನೋಡದಿರೆಂದು ಬೆಳಕು ಅಧಮನಿಗೆಸಜ್ಜನರ ಜ್ಯೋತಿಯಬೆಳಕು ಇಲ್ಲ ಲಕ್ಷ್ಮೀ ಧನಿಕನಿಗೆಲಕ್ಷ್ಮೀ ಪುತ್ರನಾಗುವಯೋಗವು ಇದೆ ದೀಪ ಜ್ಞಾನಾಂಧನಿಗೆಗುರೋಪದೇಶ ದೀಪದಾರಿತೋರ್ವುದು ಗ್ರಹಣ ಗ್ರಹಣದಲಿಪಾಣೀಗ್ರಹಣ ಹೆಚ್ಚುಶಕ್ತಿಯುತವು ಹಬ್ಬ ಹಬ್ಬಗಳೆಲ್ಲವುಜ್ಞಾನಜ್ಯೋತಿಯ ತೋರಿರಂಜಿಸುವುವು ನಾಗರಾಜು.ಹಇಸ್ರೋ ಬಡಾವಣೆ,ಬೆಂಗಳೂರುRead More
ಎರಡು ಜೀವಗಳೊಂದು ಗೂಡುವುದೆ ಪರಿಣಯವುವರದಕ್ಷಿಣೆಯ ಪಿಡುಗು ಇದಕೊಂದು ವಿಘ್ನವರನ ತಾಯ್ ತಂದೆಗಳು ಆತ್ಮ ಶೋಧನೆಗೈಯೆಪರಿಹಾರವಿದಕುಂಟು- || ಪ್ರತ್ಯಗಾತ್ಮ || ಜೀವವೆರಡರ ಮಧುರ ಮಿಲನವಲ್ಲವೆ ಮದುವೆ!ಆ ವಿಚಾರವ ಮರೆಯಲಿನ್ನೇಕೆ ಮದುವೆ?ಆವ ಪುರುಷಾರ್ಥಕ್ಕೆ ವರದಕ್ಷಿಣೆಯ ತೆರುವೆ?ಹೂವಲ್ಲ ಹಾವಾಗು- || ಪ್ರತ್ಯಗಾತ್ಮ || ಹೊಸಗರಿಯ ಚಪ್ಪರವು, ಮಾವಿನೆಲೆ ತೋರಣವುಬಿಸಿಯಾದ ರುಚಿಯಾದ ಭಕ್ಷ್ಯಭೋಜ್ಯಗಳುಒಸಗೆ ವಾದ್ಯದ ಮೊಳಗು, ಪ್ರಸದನದ ಸಡಗರವುರಸಿಕತೆಯ ನೆಲೆ ಮದುವೆ- || ಪ್ರತ್ಯಗಾತ್ಮ || ನೆಂಟರಿಷ್ಟರ ಕೂಟ, ತುಂಟ ಮಕ್ಕಳ ಆಟಸೊಂಟ ತಿರುವುತ ಬರಿದೆ ಹೆಣ್ಗಳೋಡಾಟನೆಂಟತನ ಸೋಗಿನೊಳು ಗಂಟು ಹೊಡೆದವರವೈಕುಂಠವೈ ಮದುವೆ […]Read More