ಸ್ಟಾರ್ಟ್ ಅಪ್….ನೀವೂ ಕಟ್ಟಬಹುದು ಪುಸ್ತಕ :ಸ್ಟಾರ್ಟ್ ಅಪ್….ನೀವೂ ಕಟ್ಟಬಹುದುಲೇಖಕರು : ಸತ್ಯೇಶ್ ಎನ್ ಬೆಳ್ಳೂರ್ಪ್ರಕಾಶಕರು :ಮೈಲ್ಯಾಂಗ್ ಬುಕ್ಸ್ ಇಂದಿನ ಹೈಟೆಕ್ ಯುಗದಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಅದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಒಳಗೊಂಡ ಪುಸ್ತಕಗಳು ಸ್ಥಳೀಯ ಭಾಷೆಯಲ್ಲೂ ಬರಲಾರಂಭಿಸಿವೆ…ಕನ್ನಡ ಭಾಷೆಗೆ ಇತ್ತೀಚಿನ ಸೇರ್ಪಡೆ ಸ್ಟಾರ್ಟಪ್ ನೀವೂ ಕಟ್ಟಬಹುದು ಎಂಬ ವಿಶಿಷ್ಟವಾದ ಪುಸ್ತಕ. ಯಾರಾದರೂ ಒಂದು ತನ್ನದೇ ಸ್ವಂತ ಉದ್ದಿಮೆ ಅಥವಾ ವ್ಯಾಪಾರವನ್ನು ಪ್ರಾರಂಭಿಸಿದರೆ ಅಂತಹ ಕಂಪನಿಗಳನ್ನು ಸ್ಟಾರ್ಟಪ್ ಎಂದು ಕರೆಯಲಾಗುತ್ತದೆ.ಇಂತಹ ಸ್ಟಾರ್ಟಪ್ಗಳ ಸ್ವರೂಪ ಎಂತಾದ್ದು!?ಯಾರು ಬೇಕಾದರೂ ಕಟ್ಟಬಹುದೇ!?ಬಂಡವಾಳ ಕ್ರೋಢೀಕರಣ […]Read More
ಪಶ್ಚಿಮ ಘಟ್ಟದಲ್ಲೊಂದು ಇಣುಕು – 1 ಪಶ್ಚಿಮ ಘಟ್ಟ ನಮ್ಮ ದೇಶದ ಅನರ್ಘ್ಯ ಸಂಪತ್ತು. ಗುಜರಾತಿನಿಂದ ಕನ್ಯಾಕುಮಾರಿಯವರೆಗೆ ಸುಮಾರು 1600 ಕಿಲೋಮೀಟರ್ ಉದ್ದದ ಘಟ್ಟ ಪ್ರದೇಶ ಹಾಗೂ ಪ್ರಪಂಚದ ಅತಿಸೂಕ್ಷ್ಮ ಪರಿಸರ ಎಂದು ಗುರುತಿಸಲ್ಪಟ್ಟಿದೆ.ಮನಮೋಹಕ ದೃಶ್ಯಾವಳಿಗಳು, ಬಿಸಿಲು ಮತ್ತು ಮೋಡಗಳ ಕಣ್ಣಾಮುಚ್ಚಾಲೆಯಾಟ, ಜುಳುಜುಳು ಹರಿವ ನೀರಿನ ತೊರೆಗಳು, ಅಸಂಖ್ಯ ವನ್ಯಸಂಪತ್ತು, ಔಷಧೀಯ ಸಸ್ಯಸಂಪತ್ತು, ವೈವಿಧ್ಯಮಯ ಪ್ರಾಣಿ, ಪಕ್ಷಿ ಪ್ರಬೇಧಗಳನ್ನು ತನ್ನಲ್ಲಿ ಹುದುಗಿಸಿಕೊಂಡಿರುವ ಪಶ್ಚಿಮ ಘಟ್ಟಕ್ಕೆ ಮಹತ್ವದ ಸ್ಥಾನ ಇದೆ. ನಮ್ಮ ಕರ್ನಾಟಕದಲ್ಲಿ ಪಶ್ಚಿಮಘಟ್ಟವು ದಾಂಡೇಲಿಯಿಂದ ಶುರುವಾಗಿ ಕೊಡಗು […]Read More
ದ್ವೀಪದ ಹಕ್ಕಿಗಳ ಕಣ್ಮರೆ – 2 ಹಿಂದಿನ ಸರಣಿಯ ಮುಂದಿನ ಭಾಗ…… ದ್ವೀಪದ ಹಕ್ಕಿಗಳ ಕಣ್ಮರೆ –1 – https://bit.ly/3PkGZXy ಓ’ಆಹೂ ಅಕಿಯಲೋ – ಜೇನು ಬಳ್ಳಿಗ “ಓ’ಆಹೂ ಅಕಿಯಲೋ” ಎಂಬ ವಿಚಿತ್ರ ಹೆಸರಿರುವ ಈ ಪಕ್ಷಿಯು ಪೆಸಿಫಿಕ್ ಮಹಾಸಾಗರದ ಹವಾಯಿ ದ್ವೀಪದಲ್ಲಿನ ಪ್ರಮುಖ ಆಕರ್ಷಕ ಪಕ್ಷಿಗಳಲೊಂದಾಗಿತ್ತು. ಜೇನು ಬಳ್ಳಿಗ (ಹನಿ ಕ್ರೀಪರ್) ಎಂದು ಕೂಡ ಕರೆಯುವ ಈ ಹಕ್ಕಿಯು ತನ್ನ ಆಕರ್ಷಕವಾದ ಬಾಗುಕತ್ತಿಯಂತಹ ಕೊಕ್ಕಿನಿಂದ ಮರಗಳಿಗೆ ಮಾರಕವಾದ ಮರದ ತೊಗಟೆಗಳಲ್ಲಿ ಸಿಗುವ ಜೇಡ, ಮತ್ತಿತರ ಕೀಟಗಳನ್ನು […]Read More
ಶಿಕ್ಷಕನು ಮಕ್ಕಳಿಗೆ ಶಿಕ್ಷಣವ ಕೊಡಬೇಕುಶಿಕ್ಷೆ ಕೊಡುವುದು ಅಲ್ಲ ಶಿಕ್ಷಕನ ಕೆಲಸಶಿಕ್ಷಕನು ತತ್ವವಿದ, ಮಾರ್ಗದರ್ಶಿಯು, ಗೆಳೆಯ,ಮೋಕ್ಷದಾಯಕ ಕಾಣ !- || ಪ್ರತ್ಯಗಾತ್ಮ || ದಕ್ಷತೆಯೆ ಇಲ್ಲದಿಹ ಶಿಕ್ಷಕರ ನೇಮಿಸಲುಲಕ್ಷಾವಧಿಯ ಮುಗ್ಧ ಬಾಲಕರ ಬಾಳುದಿಕ್ಸೂಚಿಯಿಲ್ಲದಿಹ ನೌಕೆಯಂತಾಗುವುದು.ದಿಕ್ಕು ತೋರುವರಾರು?- || ಪ್ರತ್ಯಗಾತ್ಮ ||| ಮನೆ ಬಾಡಿಗೆಗೆ ಕೊಡುವ ಮುನ್ನ ಪರಿಕಿಸಿ ನೋಡುಮನೆ ಬೇಡಿ ಬರುವವನು ಕಾಲಿಗೆರಗುವನುಮನೆ ಕೊಟ್ಟು ಬಳಿಕವನ ಕಾಲ ಹಿಡಿಯುವೆಯೇನು ?ನೆನೆದು ಕೊಡು ಯೋಗ್ಯನಿಗೆ- || ಪ್ರತ್ಯಗಾತ್ಮ || ಬಾಯಿ ಅಬ್ಬರ ಹೆಚ್ಚು ಬಾಡಿಗೆಯ ಹಣ ಕೊಡನುನಾಯಿ ಜೀವನ ನಡೆಸಿ […]Read More
ಬೆಳದಿಂಗಳಿರುತ್ತದೆ ನೀನು ಎಲ್ಲಿರ್ತಿಯೋಅಲ್ಲಿ ಒಲವಿರುತ್ತದೆಗೆಲುವಿರುತ್ತದೆಹಾಲಿನಂಥಬೆಳದಿಂಗಳಿರುತ್ತದೆನೀ ನಕಾಗೆಲ್ಲಅದು ಕಾಣ್ತಿರುತ್ತದೆ!! ಶಿಕ್ಷೆ ಸದಾನಿನ್ನ ನೆನಪಿನಲ್ಲೇಇರುವಶಿಕ್ಷೆಯೊಂದೇಈ ಜನ್ಮಕೆಸಾಕೆನಗೆ!ಮತ್ತೇನೂಬೇಡವೇ ಬೇಡನನಗೇ!! ವಿಶೇಷ ಭತ್ಯೆ ನಿನ್ನ ನೆನಪಿನ ಸುಳಿಯಲ್ಲಿಸಿಲುಕಿರುವೆಹೊರ ಬರುವ ದಾರಿ ತಿಳಿಯದೇನಲುಗಿರುವೆ!ಚಕ್ರವ್ಯೂಹದಿ ಅಭಿಮನ್ಯುಬಂಧಿಯಾದಂತೆ!!ಅಭಿಮನ್ಯುವಿಗೆ ಸಿಕ್ಕಿದ್ದುವೀರಮರಣನನಗೋ ಆತ್ಮಹತ್ಯೆಯೇವಿಶೇಷ ಭತ್ಯೆ!!! ನಿತ್ಯ ಎಲ್ಲೇ ಇರುಹೇಗೆ ಇರುನನ್ನ ಎದೆಯಲ್ಲಿಪ್ರೇಮ ದೀವಿಗೆಯಾಗಿರು!ನನ್ನೆದೆಯಒಲವ ಎರೆಯುವೆನಿತ್ಯ ನೀಬೆಳಗಲು! ಡಾ!! ಪರಮೇಶ್ವರಪ್ಪ ಕುದರಿಚಿತ್ರದುರ್ಗRead More
ಹಿಂದಿನ ಸಂಚಿಕೆಯಿಂದ…. ಸ್ಕಂದಗುಪ್ತ- ನಿನ್ನ ಅವಸ್ಥೆಯನ್ನು ನೋಡಿದರೆ ನನಗೆ ‘ಅಯ್ಯೋ’ ಎನಿಸುತ್ತದೆ. ಮತ್ತೆ ಮತ್ತೆ ಕಾಳಿದಾಸನ ಮಾತುಗಳನ್ನು ಉದಾಹರಿಸುತ್ತಿರುವೆ. ನೀನು ಯುದ್ಧವನ್ನು ನೋಡಬೇಕೆಂದು ಆಸೆಪಟ್ಟೆ. ಆದ ಕಾರಣ ನಿನ್ನನ್ನು ಜೊತೆಯಲ್ಲಿ ಕರೆದುಕೊಂಡು ಬಂದೆ. ಹೀಗೆಂದು ತಿಳಿದಿದ್ದರೆ ನಿನ್ನ ಹೆಂಡತಿಯನ್ನೂ ಜೊತೆಯಲ್ಲಿ ಕರೆದುಕೊಂಡು ಬರಬಹುದಾಗಿತ್ತು. ಪಿಪ್ಪಲೀ ಮಿಶ್ರ- ‘ಬೇಡ ವಯಸ್ಯ. ಇದೇ ಒಳ್ಳೆಯದು. ನನಗೆ ಸ್ವಲ್ಪ ನೋವಾದರೂ ಪರವಾಗಿಲ್ಲ. ಆಕೆ ಏನಾದರೂ ಬಂದಿದ್ದರೆ ಇಲ್ಲಿಯ ಸೈನ್ಯ, ಆನೆ ಕುದುರೆ ಇವುಗಳನ್ನೆಲ್ಲಾ ನೋಡಿ, ಹೆದರಿ, ಪ್ರಾಣವನ್ನೇ ಬಿಡುತ್ತಿದ್ದಳು.’ ಈ ರೀತಿ […]Read More
ಟಿಶ್ಯೂ ಪೇಪರ್ ಎಂಬ ಪರಿಸರ ಮಾರಕ ನಿಮಗೆಲ್ಲರಿಗೂ ಟಿಶ್ಯೂ ಪೇಪರ್ ಚಿರಪರಿಚಿತ ಅಲ್ಲವೇ?, ಹೋಟೆಲ್ಗಳಲ್ಲಿ ಊಟ ಆದ ಮೇಲೆ ಕೈ ಒರೆಸಲು, ಕಾರಿನಲ್ಲಿ ಮುಖ್ಯ ಒರೆಸಲು, ಏರ್ ಪೋರ್ಟ್ಗಳ ರೆಸ್ಟ್ ರೂಮ್ಗಳಲ್ಲಿ ಮುಖತೊಳೆದ ನಂತರ ಮುಖ ಒರೆಸಲು, ಶೌಚಗ್ರಹದಲ್ಲಿ, ಅಡುಗೆ ಮನೆ ಕಟ್ಟೆಯ ಮೇಲೆ ಏನಾದರೂ ಚೆಲ್ಲಿದರೆ ಒರೆಸಲು, ಬೊಂಡಾ – ಪಕೊಡಾ ದಲ್ಲಿರುವ ಎಣ್ಣೆ ಹೀರಲೆಂದು ಹೀಗೆ ಟಿಶ್ಯೂ ಪೇಪರ್ಗಳ ಬಳಕೆ ಇತ್ತೀಚಿನ ದಿನಗಳಲ್ಲಿ ಅಧಿಕವಾಗಿದೆ. ಇದರಿಂದ ಪರಿಸರ ಎಷ್ಟು ಹಾಳಾಗುತ್ತಿದೆ ಎಂದು ನಾವು ಯೋಚಿಸುವುದೇ […]Read More
ಕ್ರಾಸ್ ರೋಡ್ಸ್ ಲೇಖಕರು: ಡಾ.ವಿರೂಪಾಕ್ಷ ದೇವರಮನೆಪ್ರಕಾಶಕರು:ನವಕರ್ನಾಟಕ ಪ್ರಕಾಶನಬೆಲೆ: 120/- ಕಿಶೋರಾವಸ್ಥೆ ಎಂದಾಕ್ಷಣ ಹದಿಹರೆಯದ ಮಕ್ಕಳ ಮಾನಸಿಕ ತುಮುಲಗಳು, ತಲ್ಲಣಗಳು ಕಣ್ಣ ಮುಂದೆ ಹಾದುಹೋಗುತ್ತವೆ.ದೈಹಿಕವಾಗಿ, ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿಯೂ ಬದಲಾವಣೆಗಳನ್ನು ಕಾಣುವ ವಯೋಮಾನವಿದು. ಶೈಕ್ಷಣಿಕವಾಗಿಯೂ ಈ ವಯೋಮಾನದವರಿಗೆ ಬಹುಮುಖ್ಯ ಕಾಲಘಟ್ಟವೂ ಹೌದು. Adolescence ಎನ್ನುವುದು ಬಹಳ ಸೂಕ್ಷ್ಮವಾದ ಕಾಲಘಟ್ಟ…ಇದನ್ನು ಸೂಕ್ತವಾದ ರೀತಿಯಲ್ಲಿ ನಿಭಾಯಿಸುವ ,ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸಲು ಬೇಕಾದ ಮನೋ ಸ್ಥೈರ್ಯವನ್ನು ತುಂಬುವ ಪ್ರಯತ್ನವೇ “ಕ್ರಾಸ್ ರೋಡ್ಸ್” – ಕಿಶೋರದ ಕವಲು ಹಾದಿ ಕೃತಿ. ತಮ್ಮ ಮನೋವೈಜ್ಞಾನಿಕ […]Read More
ಸಿಹಿಭಾವದ ನೋಟ ನೋಡುವಾ ನೋಟಗಳುಒಂದಾಗೆ ಸವಿಭಾವ..!ನುಡಿಯುವಾ ಮಾತಿನಲಿ..ಜೇನಿರಲು ಸಿಹಿಭಾವ !! ಕುಸುಮಗಳ ಮೇಲಿರುವಇಬ್ಬನಿಯ ಒಲವಿರಲಿ..!ಮನವನುಲ್ಲಸಿಪ ನುಡಿ..ಹೊತ್ತು ಜಾರಿಸದಿರಲಿ!! ಸವಿನುಡಿಯ ಭಾವವಿರೆಮೌನದಾ ಪರದೆಯಲಿ..!ಬದುಕೆಂದಿಗೂ ಚೆನ್ನ..ತಾನೊಲವಿನೊರತೆಯಲಿ !! ನವಭಾವ ಜೀವನದಿಬತ್ತುವುದೆ ಅನುರಾಗ..!ಪ್ರೀತಿಯಿರೆ ಅನುಗಾಲ..ಬಾಳದುವೆ ಶುಭಯೋಗ !! ಸುಮನಾ ರಮಾನಂದಬೆಳಗಾವಿRead More
ಕಾಲವಾದಾಗ….. ಕಾಲನೆಂಬ ರೈಲಿನೊಳಗೆಕುಳಿತು ನಾವು ಚಿಂತಿಸುತ್ತನೆನೆದು ನಮ್ಮ ನೋವು ನಲಿವುನಮ್ಮ ನಡೆಯು ಎತ್ತಲೋ!! ಓಡುತಿತ್ತು ರೈಲು ತಾನುಎಲ್ಲರೊಳಗೆ ಒಬ್ಬ ನಾನುಅವನ ಊರು ಯಾವುದಿಹುದೊಇವನ ಪಯಣ ಎಲ್ಲಿಗೋ!!! ಬಂದಿತೆನಲು ಅವನ ಊರುತಲುಪಿದಾಗ ಇವನ ಸೂರುನಾನು ಮಾತ್ರ ಎಳೆಯುತ್ತಿದ್ದೆನನ್ನ ಬಾಳ ತೇರನು!! ಅವನು ಇವನು ಮತ್ತು ನಾನುಇಳಿಯುತಿರಲು ನಮ್ಮ ಊರುಬೇರೆ ಬೇರೆ ಜನರು ಬಂದುಏರುತಿರಲು ಬಂಡಿಯ!! ಇವರು ಅವರು ಮತ್ತೆ ಯಾರೊಏರುತಿರಲು ಅವನ ರೈಲುಕಾಲನೊಬ್ಬ ನಗುತಲಿದ್ದಅವನ ಕಾರುಬಾರಲಿ!! ಸುನೀಲ್ ಹಳೆಯೂರುRead More