ಕನ್ನಡ್ ಪದಗೊಳ್

ಸಣ್ದಾಗಿದ್ದಾಗ್ ಆಕಂತಿದ್ದೆ ತುಂಡ್ ಆಗಿರ್ತಿದ್ ಚಡ್ಡಿರಾತ್ರಿ ಓದಕ್ ಇರ್ತಾಯಿತ್ತು ತುಕ್ಕಿನ್ ಚುಮ್ನಿ ಬುಡ್ಡಿಓದಾ ನೆಪದಲ್ ಆಡಾವಾಗ ಮುರ್ದಿತ್ ದೋಸ್ತನ್ ಹಡ್ಡಿಅವ್ವ ಕ್ವಾಪಕ್ ವಡಿತಾಯಿದ್ಲು ತಕ್ಕಂಡ್ ಪರ್ಕೆಕಡ್ಡಿ ದೊಡ್ಡಾಗ್ತಿದ್ದಂಗ್ ಮರ್ತೋಗಿತ್ತು ಕನ್ನಡ್ ಪದಗೊಳ್ ದ್ಯಾಸಓದ್ತಾ ಓದ್ತಾ ಬೆಳ್ದಾಗಿತ್ತು ಇಂಗ್ಲಿಸ್ನ ಸಾವಾಸಕೆಲ್ಸ ಕೆಲ್ಸ ಅಂತ ಏಳ್ಕಂಡ್ ಓಯ್ತಾ ಇತ್ತು ಮಾಸಕನ್ನಡ್ ನೆನ್ಸಕ್ ಮತ್ತೆ ಬಂದಿದ್ ಮಹಾಭಾರ್ತದ್ ಯಾಸ .. ಯೆಂಡ ತಂದ್ರು, ಯೆಂಡ್ತಿ ಬಂದ್ರು ಬೆಳಿಲೇ ಇಲ್ಲ ಗ್ಯಾನಯಂಡ ಕುಡ್ಕಂಡ್ ಬಂದಿದ್ ಅಷ್ಟಕ್ ಹರಾಜ್ಗಿಟ್ಲು ಮಾನಯಂಡಕ್ ಯೆಂಡ್ತೀಗ್ ಆಗಾಕಿಲ್ಲ ಮಾಡ್ಕ […]Read More

ಪರಾಭವ ಭಾವನಾ – 6 ಯತಿರಾಜ್‌ ವೀರಾಂಬುಧಿ

-ಆರು- ಹಿಂದಿನ ಸಂಚಿಕೆಯಿಂದಅಪ್ಪು ಮದುರೈ ನಲ್ಲಿ ಧರ್ಮ ಪ್ರವಚನವನ್ನು ಮಾಡಿ ಶಿಷ್ಯರ ಜೊತೆ ಬೆಂಗಳೂರಿಗೆ ಹಿಂತಿರುಗಿದ. ಮದ್ಯೆ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಶಿಷ್ಯರನ್ನು ಕಂಡು ದುಡ್ಡಿಗೋಸ್ಕರ ಅಲ್ಲವೇ ಇವರಲ್ಲಿ ಯಾರೋ ಒಬ್ಬರು ನಮ್ಮ ವಿರುದ್ದವಾಗಿರುವುದು ಎಂದು ಮರುಗಿದ. ಬೆಂಗಳೂರಿನಲ್ಲಿ ಸ್ನೇಹಿತ ಅಗಸ್ತ್ಯನ ನೋಡಿ ಸಂತಸಪಟ್ಟರು ನಾಗ ಗಾಂಧಾರಿಯನ್ನು ನೋಡಿ ಆಶ್ಚರ್ಯಪಟ್ಟ. ಅಷ್ಟಕ್ಕೂ ಯಾರೀ ನಾಗ ಗಾಂಧಾರಿ…… “ಆಯಾ ಹೈ ಮುಝೆ ಫಿರ್‌ ಯಾದ್‌ ವೋ ಜಾಲಿಮ್‌ ಗುಜರಾ ಜಮಾನಾ ಬಚಪನ್‌ ಕಾ ಹಾಯ್‌ ರೆ ಅಕೇಲೆ ಛೋಡ್‌ ಕೆ […]Read More

ಚುಕ್ಕೆ ಚಿಟ್ಟುಗೂಬೆ – Spotted Owlet

ಏಯ್! ಗೂಬೆ! ಹೀಗೆ ಬೈಸಿಕೊಳ್ಳದವರೇ ಅಪರೂಪ, ನಮ್ಮ ದೇಶದಲ್ಲಿ. ಅತಿ ದೊಡ್ಡ ದಡ್ಡ ಎಂದರೆ ಅವನು ಗೂಬೆಯೇ! ಕಳಂಕಕ್ಕೂ ಗೂಬೆ ಎಂದೇ ಹೆಸರು. ನಮ್‍ ತಲೆ ಮೇಲೆ ಗೂಬೆ ಕೂರಿಸಬೇಡಿ ಎನ್ನುವಲ್ಲಿ ಇದೇ ಭಾವ. ಗೂಬೆ ಇದ್ದಹಾಗೆ ಇದಾನೆ ಎನ್ನುತ್ತಾ ಇದಕ್ಕೆ ರೂಪಕಾಲಂಕಾರದ ಪ್ರಯೋಗವೂ ನಡೆಯುತ್ತದೆ. ಹೀಗೆ ಸಾಕಷ್ಟು ಹೇಳುತ್ತಾ ಹೋಗಬಹುದು. ಹಾಗಾದರೆ, ಒಟ್ಟಾರೆ ಅಭಿಪ್ರಾಯವೇನು? ಗೂಬೆ ಎಂದರೆ ಕೆಟ್ಟದ್ದು, ಅನಿಷ್ಟ ಎಂದೆ? ಹಾಗೇನೂ ಇಲ್ಲ! ಈ ಗೂಬೆ ಲಕ್ಷ್ಮಿಯ ವಾಹನ! ಇದನ್ನು ನೋಡುವುದು ಅದೃಷ್ಟವನ್ನು ಕಂಡಂತೆ! […]Read More

ಎದೆ ತುಂಬಿ ಹಾಡುವೆನು – ಮತ್ತೊಮ್ಮೆ

ಇದು ಎಸ್ ಪಿ ಬಿ ಕನಸು “ಎದೆ ತುಂಬಿ ಹಾಡುವೆನು” ಕಲರ್ಸ್ ಕನ್ನಡ ಚಾನೆಲ್ ನಲ್ಲಿನ ಪ್ರಸಾರವಾದ ಒಂದು ಜನಪ್ರಿಯ ಕನ್ನಡ ಕಾರ್ಯಕ್ರಮ.  ಎಸ್ ಪಿ ಬಾಲಸುಬ್ರಮಣ್ಯಂ ಅವರಿಂದಾಗಿ ಈ ಕಾರ್ಯಕ್ರಮ 8 ವರ್ಷ 700 ರಕ್ಕೂ ಹೆಚ್ಚು ವಾರಂತ್ಯ ಗಳು 500 ರಕ್ಕೂ ಹೆಚ್ಚು ಸಂಚಿಕೆ ಗಳು ಮತ್ತು ಸರಿ ಸುಮಾರು 4000 ಗಾಯಕರನ್ನು ಕರ್ನಾಟಕದ ಜನತೆಗೆ ಪರಿಚಯ ಮಾಡಿಸಿದ ಏಕೈಕ ಸಂಗೀತ ಕಾರ್ಯಕ್ರಮ. ಹಾಡುಗಾರಿಕೆ ಯಲ್ಲಿ ಹೊಸ ಪ್ರತಿಬೆ ಗಳನ್ನು ಗುರುತಿಸಿ ಪ್ರೋತಾಹಿಸು ವುದು […]Read More

ಅನುಬಂಧ

ದಿಟ್ಟತನದಲ್ಲಿ ಭಾತೃತ್ವವನ್ನು ಹುಡುಕಿಹೊರಟವಳಿಗೆ ದೊರಕಿದುದುದೂರದಲ್ಲೊಂದು ಆಶಾಕಿರಣ…..ಬಾಲ್ಯದಲ್ಲಿ ಬೆಸೆದಿದ್ದ ಸಂಬಂಧಗಳುಹೇಳಹೆಸರಿಲ್ಲದೆ ಅಳಿದಿಹವು ಕಾಲೇಜಿನಲ್ಲಿ ರಕ್ಷಾಬಂಧನದ ಹೆಸರಿನಲ್ಲಿಎಷ್ಟೊಂದು ಸಹೋದರರುಬಣ್ಣಬಣ್ಣದ ಅನುಬಂಧಗಳವುಈ ಸಂಬಂಧಗಳು ದಿನಕಳೆದಂತೆಬಣ್ಣ ಕಳೆದುಕೊಂಡಿದೆ. ಕಾಲ ಚಕ್ರ ಉರುಳಿದಂತೆಸಂಬಂಧಗಳ ಮಹತ್ವ ಅರಿತುಹುಡುಕಿದವಳಿಗೆ……ಜನಪದರು ನೆನಪಾಗದೆ ಇರದುಬೆನ್ನಿಗೊಬ್ಬ ಸೂರ್ಯನಂತಹ ಅಣ್ಣಚಂದ್ರನಂತ ತಮ್ಮ ಇರಬೇಕೆಂಬಮಾತು ದಿಟ…. ಒಂದೇ ಬಳ್ಳಿ ಎಂದು ಜತನ ಮಾಡಿಬೆಳೆಸಿದ ಅಪ್ಪ-ಅಮ್ಮ ಕಂಗಾಲಾಗಬೇಕೀಗ…ಆದರೂ ಸಹೋದರರು ಸಿಗರೆ…. ಪುಟ್ಟ ತಮ್ಮನೊಬ್ಬ ಅಚಾನಕ್ಕಾಗಿದೊರೆತು ಅಕ್ಕಾ ಎಂದಾಗ….ಅಪರೂಪದ ಅನುಬಂಧ ಬೆಸೆದುಹೃದಯದ ಭಾವನೆಗಳೆಲ್ಲಾ ಅಳಿದುಸಂತಸದ ಒಡಲು ತುಂಬಿರಕ್ಷಾಬಂಧನದ ದಿನ ರಕ್ಷೆ ಕಟ್ಟಿಹಾರೈಸಿದಾಗ ಮನ ಸಂತಸದಗೂಡಾಗಿತ್ತು. ದಿವ್ಯ .ಎಲ್.ಎನ್.ಸ್ವಾಮಿRead More

ಸಿಹಿಜೀವಿಯ ಗಜಲ್

ಕ್ರಿಯಾಶೀಲ ಬರಹಗಾರರಾದ ಶ್ರೀ ಸಿ ಜಿ ವೆಂಕಟೇಶ್ವರ್ ತಮ್ಮ ಪ್ರೀತಿಯ ಗಜಲ್ ಗಳನ್ನು “ಸಿಹಿ ಜೀವಿ ಗಜಲ್” ಎಂಬ ಪುಸ್ತಕದ ಮೂಲಕ ಹೊರತಂದಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ಕಲಾವಿದರಾದ ಕೋಟೆ ಕುಮಾರ್ ತಮ್ಮ ರೇಖಾ ಚಿತ್ರಗಳಿಂದ ಪುಸ್ತಕದಲ್ಲಿನ ಗಜಲ್ ಗಳಿಗೆ ಅಂದವನ್ನು ಹೆಚ್ಚಿಸಿದ್ದಾರೆ. ತುಮುಕೂರಿನ ಕನ್ನಡ ಭವನದಲ್ಲಿ “ಸಿಹಿ ಜೀವಿ ಗಜಲ್” ಪುಸ್ತಕವನ್ನು ರಾಜ್ಯ ಸರ್ಕಾರೀ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಯವರು ಲೋಕಾರ್ಪಣೆ ಮಾಡಿದರು. ಕವಿಗಳಾದ ಶ್ರೀ ದೇಸು ಆಲೂರು ರವರು ತಮ್ಮ ಮುನ್ನುಡಿಯಲ್ಲಿ ಹೀಗೆ […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 5

ಭಾವದೇವಿಯು ತಾನೆ ಒಲಿದ ಪುಣ್ಯಾತ್ಮರಿಗೆಕಾವ್ಯರಚನೆಯು ಸಾಧ್ಯ; ಬಲ್ಲವನೆ ಬಲ್ಲ,ಭಾವದೇವಿಯ ಕರುಣೆ ಪ್ರಾಪ್ತವಾಗುವವರೆಗೆ ಸಾವರಿಸಬೇಕಯ್ಯ- || ಪ್ರತ್ಯಗಾತ್ಮ || ದಿನ-ವಾರ-ತಿಂಗಳುಗಳಲ್ಲ, ವರುಷಗಳುರುಳೆತಿಣುಕಿದರೂ ಪದವೊಂದ ಬರೆಯದಿರಬಹುದು.ದಿನವೊಂದರೊಳೆ ಲೆಕ್ಕವಿರದಷ್ಟು ಚರಣಗಳಕನಿಕರಿಸಬಹುದವಳು – || ಪ್ರತ್ಯಗಾತ್ಮ || ಅವಳ ಬಗೆಯೇ ಬೇರೆ; ರೀತಿ ನೀತಿಯೇ ಬೇರೆಅವಳಿಚ್ಛೆಯನ್ನರಿಯಲೆಮ್ಮಅಳವಲ್ಲ,ಅವಳು ಕೊಟ್ಟರೆ ಉಂಟು; ಕೊಡದಿರಲು ಬರಿಯ ಕೈ,ಕವಿ ಅವಳ ಕೈಗೊಂಬೆ- || ಪ್ರತ್ಯಗಾತ್ಮ || ನಾನು ನನ್ನದು ಎಂಬ ಅಹಮಿಕೆಯು ನನಗಿಲ್ಲನಾನು ಬರೆದಿಹ ಕವಿತೆ ಎಂಬುದೂ ಇಲ್ಲನಾನೊಬ್ಬ ಲಿಪಿಕಾರ; ಒಳಗೆ ಕಬ್ಬಿಗನಿಹನುನಾನು ಪರತಂತ್ರದವ- || ಪ್ರತ್ಯಗಾತ್ಮ || […]Read More

ಯಾನ ಸಂಸ್ಕೃತಿ

ಲೇಖಕರು: ಶಾಂತ ನಾಗರಾಜ್ಮುದ್ರಣ : ಸಾಹಿತ್ಯ ಲೋಕ ಪಬ್ಲಿಕೇಷನ್ಸ್ಬೆಲೆ : 200/- ಸಾಹಿತ್ಯ ಲೋಕ ಪಬ್ಲಿಕೇಷನ್ಸ್ ಎಂದಿನಂತೆ ಈ ಬಾರಿ ಹಿರಿಯ ಲೇಖಕರಾದ ಶಾಂತ ನಾಗರಾಜ್ ರವರ “ಯಾನ ಸಂಸ್ಕೃತಿ” ಪ್ರವಾಸ ಕಥನ ಪುಸ್ತಕವನ್ನು ಹೊರತಂದಿದೆ. ಲೇಖಕಿ ಶಾಂತಾ ನಾಗರಾಜ್ ಅವರ ’ಯಾನಸಂಸ್ಕೃತಿ’ ಕೃತಿಯು ಪ್ರವಾಸ ಕಥನವಾಗಿದೆ. ಈ ಕಥನದಲ್ಲಿ ಶಿಕ್ಷಣಾನುಭವಗಳು ಹದವಾಗಿ ಮಿಶ್ರಣಗೊಂಡಿದೆ. ‘ಯಾನ ಸಂಸ್ಕೃತಿ’ ಭೌತಿಕ ವಿವರಗಳೊಂದಿಗೆ ವೀಕ್ಷಿತ ಸ್ಥಳ-ಸಮಾಜ-ಸಂಸ್ಕೃತಿಗಳ ಸೂಕ್ಷ್ಮ ನಾಡಿ ಹಿಡಿಯುವ ಕೌಶಲ್ಯ ಇಲ್ಲಿ ಕಾಣುತ್ತದೆ. ವಿಮರ್ಶಾಪರವಾದ ಒಲವಿದ್ರೂ ಅನ್ಯ ದೇಶೀಯರನ್ನು […]Read More

ಕೊಡಗಿನ ದೇಸಿ ಹಬ್ಬದಲ್ಲಿನ ಮುಖವರ್ಣಿಕೆಗಳು

“ಕುಂಡೆ ಹಬ್ಬ ಹಾಗು ಬೋಡುನಮ್ಮೆ” ಇವು ಕೊಡಗು ಮತ್ತು ಗೊಡಗಿನ ಸುತ್ತಮುತ್ತಲ ಪರಿಸರದಲ್ಲಿ ನಡೆಯುವ ಸ್ಥಳೀಯ ಪಾರಂಪರಿಕ ಹಬ್ಬವಾಗಿದೆ. ಮೂಲತಃ ಕೇರಳದಿಂದ ಈ ಹಬ್ಬ ಬಂದಿದೆ ಎಂದು ನಂಬುವ ಈ ಮಂದಿಯು ತಮ್ಮ ಸಮುದಾಯಗಳನ್ನು ಈ ಕಾಡಿನಲ್ಲಿ ಇರುವ ಭದ್ರಕಾಳಿ ಮಾತೆಯೇ ಕರೆದುಕೊಂಡು ಬಂದಿದ್ದಾಳೆ ಎಂದು ನಂಬುತ್ತಾರೆ. ಕುಂಡೆ ಹಬ್ಬ ಹಾಗು ಬಹುವೇಷಿಗಳು: ನಾವು ಆಚರಿಸಲ್ಪಡುವ ಯಾವ ಹಬ್ಬವನ್ನೂ ಹೋಲದೆ ವಿಭಿನ್ನ ಹಾಗೂ ವಿಶಿಷ್ಟವಾಗಿರುವ ಈ ಹಬ್ಬವನ್ನು ಕೆಲವರು “ಕುಂಡೇ ಹಬ್ಬ” ಎಂದು ಕರೆಯುತ್ತಾರೆ. ಈ ಹಬ್ಬದ […]Read More

ಸಾಹಿತ್ಯ ನೃಪತುಂಗ – ತ ರಾ ಸು

‘ಪಂಜರದ ಪಕ್ಷಿ’ಯಾಗಿದ್ದ ಭಾರತವನುಆಂಗ್ಲರ ‘ಬೆಂಕಿಯ ಬಲೆ’ಯಿಂದ ಬಿಡಿಸಿ‘ಬಿಡುಗಡೆಯ ಬೇಡಿ’ಯ ‘ಬೆಳಕು ತಂದ’ರು‘ಕಂಬನಿಯ ಕುಯಿಲು’ ಕಳೆದ ರಾಯರು ‘ಚಂದವಳ್ಳಿಯ ತೋಟ’ದ ‘ಚಕ್ರತೀರ್ಥ’ದಿ‘ಶಿಲ್ಪ’ದೊಂದಿಗೆ ‘ಗಾಳಿಮಾತು’ಗಳಾಡುತಿಹ‘ನಾಗರ ಹಾವಿ’ನ ‘ಹಂಸಗೀತೆ’ಯಾಲಿಸುವ‘ಚಂದನದ ಗೊಂಬೆ’ಯ ‘ಮೊದಲ ನೋಟ’ ‘ಮಲ್ಲಿಗೆಯ ನಂದನವನದಲ್ಲಿ’ ಕಂಡ ‘ರೂಪಸಿ’‘ಮನೆಗೆ ಬಂದ ಮಹಾಲಕ್ಷ್ಮಿ’ಗೆ ‘ಕಸ್ತೂರಿ ಕಂಕಣ’‘ತೊಟ್ಟಿಲು ತೂಗಿತು’ ಅಂಗಳ ತುಂಬ ಅಂಬುಜ‘ಬಸಂತ್ ಬಹಾರ್’ ಆ ‘ಮಹಾಶ್ವೇತೆ’ಯಿಂದ ‘ಸಿಡಿಲ ಮೊಗ್ಗು’ ಅರಳಿತು ‘ಜ್ವಾಲಾ’ ಸಿಡಿಯಿತು‘ಖೋಟಾ ನೋಟು’ ಬಡಿದ ‘ಪುರುಷಾವತಾರ’‘ತಿರುಗು ಬಾಣ’ ‘ರಕ್ತ ತರ್ಪಣ’ಗಳ ‘ರಕ್ತ ರಾತ್ರಿ’ಚಿತ್ರಕಲ್ಲುಗಳ ನಡುಗಿಸಿದ ‘ದುರ್ಗಾಸ್ತಮಾನ’ ‘ಮೃತ್ಯು ಸಿಂಹಾಸನ’ ಏರಿತು ‘ಮಸಣದ […]Read More