ಪ್ರತ್ಯಗಾತ್ಮ ಚಿಂತನ (ನೇನಂಶಿ)

ಸೂರ್ಯದೇವನಿಗಿಂತ ಇನ್ನು ದೇವರು ಇಲ್ಲಸೂರ್ಯನೇ ಈ ಜಗದ ಆಧಾರ ಭೂತ |ಸೂರ್ಯನಿಂದಲೆ ಸಕಲ ಜೀವಿಗಳ ಉತ್ಪತ್ತಿಸೂರ್ಯನಿಗೆ ಶರಣೆನ್ನು – || ಪ್ರತ್ಯಗಾತ್ಮ || ಸೃಷ್ಟಿ ಮೇಣ್ ಸ್ಥಿತಿ, ಲಯಕೆ ಸೂರ್ಯ ಕಾರಣಸೃಷ್ಟಿಕರ್ತನು ಇವನೆ; ಸಸ್ಯಗಳ ಪ್ರಾಣ |ದೃಷ್ಟಿಗೋಚರವಪ್ಪ ಭಗವಂತನಿವನೆ ದಿಟಇಷ್ಟಾರ್ಥದಾಯಕನು- || ಪ್ರತ್ಯಗಾತ್ಮ || ನವಗ್ರಹಗಳೆಲ್ಲವು ಇನವ ಅಂಕೆಗೊಳಪಟ್ಟಿಹವುಮಹನೀಯನಿವನೊಬ್ಬ ವಿಶ್ವಕ್ಕೆ ಒಡೆಯ |ಇಹಪರದ ಸೌಖ್ಯಕ್ಕೆ ಇವನ ಬಿಟ್ಟರೆ ಇಲ್ಲವಿಹಿತದಲಿ ಶರಣಾಗು- || ಪ್ರತ್ಯಗಾತ್ಮ || ಎನ್. ಶಿವರಾಮಯ್ಯ ‘ನೇನಂಶಿ’ವಾಚನ – ಗೌರಿ ದತ್ತ ಏನ್ ಜಿRead More

ಕರಾವಳಿ ಬಕ – Western Reef Heron or Wester Reef Egret

ಬಣ್ಣವೊಂದನ್ನು ಬಿಟ್ಟರೆ ಬೆಳ್ಳಕ್ಕಿಯ ದೊಡ್ಡಣ್ಣನೇ ಎನಿಸುವ ಈ ಬಕ, ಮುಖ್ಯವಾಗಿ ಕರಾವಳಿ ಪ್ರದೇಶಗಳಲ್ಲಿ ಕಂಡುಬರುತ್ತದೆ. ನಮ್ಮ ಉಡುಪಿಯ ಸಮುದ್ರ ತಟದಲ್ಲಿಯೂ ಕಂಡುಬರುತ್ತದೆ. ಇಂಗ್ಲೀಷಿನಲ್ಲಿ Western Reef Heron ಅಥವಾ  Western Reef Egret ಎನ್ನಲಾಗುವ ಇದರ ವೈಜ್ಞಾನಿಕ ಹೆಸರು Egretta gularis. ಏನಿದು ವೈಜ್ಞಾನಿಕ ಹೆಸರು ಎಂಬ ಪ್ರಶ್ನೆ ಏಳಬಹುದು, ಕೆಲವರಿಗೆ. ಭೂಮಿಯ ಮೇಲಿನ ಸಕಲ ಜೀವಿಗಳಿಗೂ ಒಂದೊಂದು ಅನನ್ಯವಾದ ಹೆಸರು ಬೇಕಲ್ಲವೆ? ಇಲ್ಲವಾದಲ್ಲಿ ಒಂದಕ್ಕೇ ಅನೇಕ ಕಡೆ ಅನೇಕ ಹೆಸರುಗಳು ಇದ್ದು ಅಧ್ಯಯನ, ಗುರುತುಹಚ್ಚುವಿಕೆಗೆ ತೊಂದರೆಯಾಗುತ್ತದೆ. […]Read More

ಯುವ ಸಾಹಿತ್ಯ ಪ್ರತಿಭೆ – ಅನಂತ್

“ಋಣಭಾರ” ಕಥಾಸಂಕಲನಕ್ಕೆ ಸಾಹಿತ್ಯ ಶರಭ ಪ್ರಶಸ್ತಿ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಅಪ್ಪಟ ಹಳ್ಳಿ ಪ್ರತಿಭೆ ಅನಂತ ಅವರ ಚೊಚ್ಚಲ ಕೃತಿ ಋಣಭಾರ ಕಥಾಸಂಕಲನ ಇದೀಗ ಮೂರನೆಯ ಪ್ರಶಸ್ತಿ ಪಡೆದುಕೊಂಡಿದೆ. 2020 ರಲ್ಲಿ ಪ್ರಕಟಗೊಂಡ ಈ ಕಥಾಸಂಕಲನವು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಯುವಬರಹಗಾರ ಚೊಚ್ಚಲ ಕೃತಿ ಬಹುಮಾನ ಹಾಗೂ ಹೆಬ್ಬಗೋಡಿ ಗೋಪಾಲ್ ದತ್ತಿ ಪ್ರಶಸ್ತಿ ಪಡೆದುಕೊಂಡಿತ್ತು. ಇದೀಗ ಗುರುಕುಲ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಸಾಹಿತ್ಯ ಶರಭ ಪ್ರಶಸ್ತಿಗೆ ಕೃತಿ ಆಯ್ಕೆಯಾಗಿದೆ ಎಂದು ಗುರುಕುಲ ಪ್ರತಿಷ್ಠಾನದ ರಾಜ್ಯಾಧ್ಯಕ್ಷರಾದ ಹುಲಿಯೂರುದುರ್ಗ […]Read More

ಕೊನೆಗೂ ಅರ್ಥವಾಗದವಳು

ಅವಳ ನಾಲಿಗೆಗಿಂತ ಅವಳ ಮುಂಗುರುಳೇ ಹೆಚ್ಚು ಮಾತನಾಡುತ್ತವೆ!ಏಕೆಂದರೆ, ಅವಳು ಮಾತನಾಡುವಾಗ ಹಾರಾಡುವ ಮುಂಗುರುಳು,ಫಳ-ಫಳ ಹೊಳೆಯುವ ಕಣ್ಞುಗಳು,ಅತೀ ಕೋಮಲವಾಗಿ ಹೊರಡುವ ಧ್ವನಿ, ಎಲ್ಲದರಲ್ಲಿಯೂ ಸಮ್ಮೋಹನ ಶಕ್ತಿ ಕಾಣದಿರಲಾರದು. ನನ್ನ ಅವಳ ಪರಿಚಯ ಅತೀ ಹಳೆಯದಾದರೂ,ಪರಿಚಯವಾದಾಗಿನಿಂದ ಪ್ರಶ್ನೆಯಾಗಿಯೇ ಕಾಡುತ್ತಿದ್ದಾಳೆ!ಅವಳು ” ಹೀಗೇ” ಎಂದು ಹೇಳುವುದು ನನ್ನಿಂದ ಮಾತ್ರವಲ್ಲ, ಅವಳನ್ನು ಹತ್ತಿರದಿಂದ ಬಲ್ಲ ಯಾರಿಗೂ ಸಾಧ್ಯವಾಗಿಲ್ಲ.ಬಹುಶಃ ಸಾದ್ಯವಾಗಲಿಕ್ಕೂ ಇಲ್ಲ! ” ವಿವೇಕಶೂನ್ಯ ಆಲೋಚನೆಗಳೆಲ್ಲವೂ ನಮ್ಮ ದುಃಖಕ್ಕೆ ಕಾರಣ” ಎಂಬ ನಿಲುವಿನ ಅವಳು, ಪಿರಿಯಡ್ ಇದ್ದಾಗ ಮಾತ್ರ ಕ್ಲಾಸಿಗೆ ಹೋಗುತ್ತಾಳೆ.ಬಾಕೀ ಸಮಯವನ್ನೆಲ್ಲಾ ಅಕ್ಕಮಹದೇವಿ,ವಿವೇಕಾನಂದ […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ)

ಶ್ರೀವಾಣಿ ಕಲ್ಯಾಣಿ ಅಜನ ಪಟ್ಟದ ರಾಣಿಭಾವನಾ ಪ್ರಕಟಣೆಗೆ ಚೋದಿಸೈ ಮನವ |ಆವ ವಾಙ್ಮಂತ್ರದಿಂ ರಸಋಷಿಗಳಾದರೋಆವಾಹಿಸುವೆನದನೆ- || ಪ್ರತ್ಯಗಾತ್ಮ || ಸರ್ವಭಾಷಾಮಯೀ ವಿಶ್ವಭಾರತಿ ತಾನುಗೀರ್ವಾಣಿ ಕಲ್ಯಾಣಿ ಅಮೃತ ರೂಪಿಣಿಯು |ಸರ್ವಮಂಗಳೆ ವರದೆ ವಾಕ್ ಶುದ್ಧಿ ವಾಕ್ ಸಿದ್ಧಿಸರ್ವದಾ ದಯೆಗೆಯ್ಗೆ- ಪ್ರತ್ಯಗಾತ್ಮ || ಪೂರ್ಣವನು ಪೂರ್ಣದಿಂ ಕೂಡಿ ಕಳೆದರೂ ಕೂಡಪೂರ್ಣವೇ ಉಳಿಯುವುದು ಕಡೆಗೆ ಎಂದೆಂದೂ |ಪೂರ್ಣವಿದು ಪೂರ್ಣವದು ಪೂರ್ಣದಿಂದಲೆ ಎಲ್ಲಪೂರ್ಣತೆಗೆ ಶರಣೆನ್ನು- || ಪ್ರತ್ಯಗಾತ್ಮ || ಎನ್. ಶಿವರಾಮಯ್ಯ ‘ನೇನಂಶಿ’ ವಾಚನ – ಗೌರಿ ದತ್ತ ಏನ್ ಜಿRead More

ಬಿ ಟಿ ಎಸ್ – ಯುವ ಸಂಗೀತ ತಂಡ

BTS ಎಂದರೆ ಏನು ಎಂದು ಯಾರಾದರು ಯುವಕ, ಯುವತಿಗೆ ಕೇಳಿ ನೋಡಿ. ಅವರು I’m BTS Stan ಎಂದು ಹೇಳದಿದ್ದರೆ ಕೇಳಿ! ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ BTS ಬಗ್ಗೆ ಹುಡುಕಿರಿ. ನೀವೂ ಸಹ ಅವರ ಸಂಗೀತ, ನೃತ್ಯದ ಮೋಡಿಗೊಳಗಾಗುವಿರಿ. ಅಂತಹದ್ದೇನಿದೆ BTS ನಲ್ಲಿ? ಓದಿ BTS Band ಬಗ್ಗೆ ಒಂದಷ್ಟು ವಿಚಾರಗಳು. ಈಗಿನ ಕಾಲದ ವಿದೇಶಿ ಸಂಗೀತವೆಂದರೆ ಅದು BTS ಆಗಿರಲೇಬೇಕು. BTS ಎಲ್ಲ ವಯೋಮಾನದವರಿಗೂ ಇಷ್ಟವಾಗುತ್ತದೆ. ಏಕೆಂದಿರಾ? ಪುಟ್ಟ ಮಕ್ಕಳಿಗೆ ಇಷ್ಟವಾಗುವಂತಹ ಮ್ಯೂಸಿಕ್, ಡ್ಯಾನ್ಸ್ ಹೆಜ್ಜೆಗಳು, […]Read More

ಹನಿಗವನಗಳು

ನಿಯತ್ತು ಕೇವಲ ಅಪರಿಚಿತರನ್ನು ಕಂಡಾಗಬೊಗಳುವುದುನಾಯಿ.ಪರಿಚಿತರ ಬಗೆಗೆಬೈಯುವುದುಬಾಯಿ. ಬಾಲಕ ಮದುವೆಯ ಮುನ್ನ ಅವಬಾಲಕ.ಮದುವೆಯ ನಂತರಮಡದಿಯ ಹಿಂ-ಬಾಲಕ. ಅಪ್ಪ ಅದೆಷ್ಟೋ ವರ್ಷ ಬಿಡುವಿಲ್ಲದೆಕೆಸರಿನಲ್ಲಿ ದುಡಿದದ್ದಕ್ಕೆ, ಆಕೈ.ಇಂದು ನಮ್ಮ ಕೊರಳಿಗೆಬಂದು ಬಿದ್ದಿದೆ, ಈಟೈ. ಶ್ರೀಧರ ಕಾಡ್ಲೂರುRead More

ಪರಾಭವ ಭಾವನಾ – 2 ಯತಿರಾಜ್‌ ವೀರಾಂಬುಧಿ

ಹಿಂದಿನ ಸಂಚಿಕೆಯಿಂದಅಪ್ರಮೇಯ (ಅಪ್ಪು) ತನ್ನ ಗುರುಗಳನ್ನು ಕಾಣಲು ಹೋದಾಗ ಅಪ್ಪುವನ್ನೇ ಕಾಯುತ್ತಾ ಮರಣಾವಸ್ಥೆಯಲ್ಲಿದ್ದ ಗುರುಗಳು ಬೀಗದ ಕೈ ರಹಸ್ಯವನ್ನು ಹೇಳಿ ಹರಿಪಾದವನ್ನು ಸೇರುತ್ತಾರೆ. ಗುಹೆಯಲ್ಲಿ ಸಿಕ್ಕ ಪತ್ರವನ್ನು ಓದಿ ಅಪ್ಪುವಿಗೆ ತನ್ನಿಬ್ಬರ ಶಿಷ್ಯರಲ್ಲಿ ಯಾರನ್ನು ನಂಬುವುದು ಎಂದು ಯೋಚಿಸಿ ಅವರುಗಳ ಜೊತೆ ರಾಮೇಶ್ವರದ ಕಡೆ ಹೆಜ್ಜೆ ಹಾಕುತ್ತಾನೆ. ಅದ್ಯಾಯ – ೨ ರಾಮೇಶ್ವರಕ್ಕೆ ಹೋಗುವ ದಾರಿಯಲ್ಲಿ ಅಪ್ರಮೇಯ ಬಹಳವೇ ಆಲೋಚನೆ ಮಾಡಿದ. ಗುರುಗಳ ದೇಹವನ್ನೊಮ್ಮೆ ನೆನೆದ. ಅದರ ಮೇಲೆ ಅನೇಕ ಸುಟ್ಟಗಾಯಗಳಿದ್ದವು. ಯಾಕೆ? ಯಾಕೆ? ಅವರೇನಾದರೂ ರಹಸ್ಯವನ್ನು […]Read More

ಆವರ್ತ

ಮೌನ ಮಾತುಗಳನಡುವೊಂದು ವೃತ್ತಎಷ್ಟೆಲ್ಲಾ ಸುತ್ತಿ ಬಂದರೂಮತ್ತೆ ನಿನ್ನೆಡೆಗೇ ಹರಿಯುತಿದೆ ಚಿತ್ತ ಮೌನದೊಳಗಿನ ಮಾಧುರ್ಯಮಾತಿನೊಳಗಿನ ಚಾತುರ್ಯಬಗೆದಷ್ಟೂ ವಿಸ್ಮಯ ನಿನ್ನಾಂತರ್ಯ ಕೇಳಬೇಕಿದೆ ಕೇಳಿಸಬೇಕಿದೆಮಾತುಗಳ ನಡುವಿನ ಎದೆಬಡಿತಮೌನದೊಳಗಿನ ಸಂಗೀತಹಾಡಬೇಕಿದೆ ಹಾಡಿಸಬೇಕಿದೆಒಂದೆರಡು ಭಾವಗೀತೆಗಳಹೇಳಬೇಕಿದೆ ಹೇಳಿಸಬೇಕಿದೆಹೊಸ ಕನಸುಗಳ ಕಥೆಗಳ ಕೈ ಕೈ ಹಿಡಿದು ಕೆನ್ನೆ ಹಿಂಡಿಆಗಾಗ ನಡು ಬಳಸಿನಿನ್ನ ಮೂಗಿಗೆ ನನ್ನ ಮೂಗನು ತಿಕ್ಕಿನಕ್ಕಾಗ ಬೀಳುವ ನಿನ್ನಕೆನ್ನೆಯ ಗುಳಿಯ ಗಮನಿಸುತಸಾಗಬೇಕಿದೆ ಸಾಗರದಗುಂಟ ಸಾಗರದ ಅಲೆಗಳಂತೆನಿನ್ನೆಡೆಗೆ ಉಕ್ಕೇರಿಬಂದು ಬಡಿಯುವಭಾವಗಳಲೆಯ ಲೆಕ್ಕವನುಏಳುವ ಅಲೆಗಳೊಡನೆಸಮೀಕರಿಸುತತಪ್ಪೋಣ ಲೆಕ್ಕಚಾರಗಳನು ಮತ್ತೆ ಮತ್ತೆ ಒಂದಿಷ್ಟುಮಾತಾಡುತಾಮಧ್ಯೆ ಮಧ್ಯೆ ಮೌನಕೆಶರಣಾಗುತಾಕಳೆದುಹೋಗಿಬಿಡೋಣಮೌನ ಮಾತುಗಳ ಆವರ್ತದಲಿ ಸೌಜನ್ಯ ದತ್ತರಾಜ […]Read More

ಬಿಗ್ ಬಾಸ್ (ಸೀಸನ್ -8) ಟ್ರಿಣ್ ಟ್ರಿಣ್ ಟೆಲಿಫೋನ್ ಬಂತು

ಬಿಗ್ ಬಾಸ್ ಸೀಸನ್ 8 ಒಟ್ಟು 20 ಸ್ಪರ್ದಿಗಳಿಂದ ಶುರುವಾಗಿ ಮನೆಯಲ್ಲಿ ಕೇವಲ 9 ಸ್ಪರ್ದಿಗಳು ಉಳಿದುಕೊಂಡಿದ್ದಾರೆ. ಅಂತಿಮ ಸುತ್ತಿನಲ್ಲಿ ಕೇವಲ 5 ಸ್ಪರ್ದಿಗಳಿಗೆ ಅವಕಾಶವಿದ್ದು ವೀಕ್ಷಕರಲ್ಲಿ ಈಗ ಕೊತೂಹಲ ಹೆಚ್ಚಾಗಿದೆ. ವಾರಾಂತ್ಯದ ಎಪಿಸೋಡ್ ನಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಕಾದು ಕೂತಿದ್ದ ವೀಕ್ಷಕರಿಗೆ ಸುದೀಪ್ ಒಂದು ಟ್ವಿಸ್ಟ್ ಕೊಟ್ಟಿದ್ದಾರೆ. ಈ ದಿನ ಯಾವುದೇ ಸ್ಪರ್ದಿಗಳು ಹೊರಹೋಗುವುದಿಲ್ಲ ಆದರೆ ವಾರದ ಮದ್ಯೆ ಒಬ್ಬ ಸ್ಪರ್ದಾಳು ಹೊರಹೋಗುತ್ತಾರೆ ಮತ್ತು ಆ ಕ್ಷಣ ಯಾವಾಗ ಬೇಕಾದರೂ ಬರಬಹುದು ಎಂದು […]Read More