ಭಾರ ಹೊರುವವರಿದ್ದರೆ ದಯವಿಟ್ಟು ಬೇಗ ತಿಳಿಸಿನಿಮ್ಮಿಂದ ಉಪಕಾರವಾದೀತುಚಿಕ್ಕ ಋಣವಾದರೂ ನನ್ನ ಮೇಲಿರಲಿನಿಮ್ಮ ಸಹಾಯಹಸ್ತಗಳನ್ನು ಪೂಜಿಸುತ್ತಾ..ನಾನೂ ನಿಮ್ಮ ದಾರಿ ಸೇರಿಕೊಳ್ಳುತ್ತೇನೆ ಹೀಗೊಂದು ಜೀವ ಚಡಪಡಿಸುವಾಗಯಾರೂ ಮುಂಬರಲಿಲ್ಲ! ಕಾರಣ, ಅನ್ಯ ಜಾತಿಯವಸಾವು ಎಲ್ಲರನ್ನೂ ಹೆದರಿಸಿ, ಹೇಡಿಯನ್ನಾಗಿ ಮಾಡುತ್ತದೆಇಷ್ಟು ದಿನ ಬೇಡದ ಬದುಕಿನಲ್ಲಿಆ ಕ್ಷಣದಿಂದ ಜೀವಿಸುವ ಆಶೆ ಮೂಡಿಸುತ್ತದೆಬಯಕೆಗಳೆಲ್ಲ ಈಡೇರುವಂತಿದ್ದರೆ..ಚಟ್ಟ ಏರಬೇಕಾದವರೆಲ್ಲ ಪಟ್ಟವೇರಿಬಿಡುತ್ತಿದ್ದರು ಅದಕ್ಕೆಲ್ಲಾ ಪಕೃತಿ ಒಪ್ಪಬೇಕಲ್ಲಾ!ಎಲ್ಲದಕ್ಕೂ ಯೋಜನೆಗಳು ಸಿದ್ಧವಾಗಿವೆಒಂದಾದ ಮೇಲೊಂದರಂತೆ ಪ್ರಯೋಗಿಸುತ್ತದೆನೋಟಿನ ಚಳಕ ಇಲ್ಲಿ ನಡೆಯುವುದೇ ಇಲ್ಲ!ಎಲ್ಲರೂ ಸಮಾನರೇ.. ಮಣ್ಣಲ್ಲಿ ಮಣ್ಣಾಗಲೇಬೇಕುಸಾಗಿಸಲು ಯಾರೂ ಇಲ್ಲವೆಂದಾಗ ನಾನು ಬರುತ್ತೇನೆದಾರಿಬಿಡಿ!! ನಾಲ್ಕೇ ಚಕ್ರ, […]Read More
I’m your hope, you’re my hope, I’m J-Hope ಹೋಬಿ ಹುಟ್ಟಿದ್ದು ಫೆಬ್ರವರಿ 18, 1994ರಂದು. ಜಂಗ್-ಹೊಸಾಕ್, BTSನ ಆಧಾರ ಸ್ತಂಭ. ಅವನನ್ನು ಪ್ರೀತಿಯಿಂದ ಹೋಬಿ ಎಂದು ಕರೆಯುತ್ತಾರೆ. ಹೋಬಿಯ ಸ್ಟೇಜ್ ಹೆಸರು ಜೆ-ಹೋಪ್. ಹೋಪ್ ಎಂದರೆ ಭರವಸೆ…. BTSನ ಭರವಸೆ…. ಯುವಜನರ ಭರವಸೆ. BTSನ ಭರವಸೆ…. ಯುವಜನರ ಭರವಸೆ. ಏನೇ ಕಷ್ಟವಿದ್ದರೂ ನಗುನಗುತ್ತಿರಬೇಕು ಎಂಬುದು ಜೆ-ಹೋಪ್ ಪಾಲಿಸಿ. ಜೆ ಹೋಪ್, ಹೈಸ್ಕೂಲಿನಲ್ಲಿ ಓದುವಾಗಲೇ ನೃತ್ಯ ಮಾಡಲು ಆರಂಭಿಸಿದನು. ಹೈಸ್ಕೂಲಿನಲ್ಲಿ ಓದುವಾಗ ಇಂಗ್ಲಿಷ್ ಬ್ಯಾಂಡುಗಳ ನೃತ್ಯವನ್ನು […]Read More
ಉದ್ಯೋಗಶೀಲನ ಪುರುಷಸಿಂಹನ ಬಳಿಗೆಆದ್ಯಾದಿ ಲಕ್ಷ್ಮೀಯರು ತಾವಾಗಿ ಬಹರು,ಸಾಧ್ಯವಾಗಿಸು ಸಿದ್ಧಿ ಪುರುಷ ಪ್ರಯತ್ನದಲಿಸದ್ಯಫಲವದರಿಂದೆ- || ಪ್ರತ್ಯಗಾತ್ಮ || ಭೂಪತಿ ಭಗೀರಥನು ಘೋರ ತಪವಾಚರಿಸಿಆ ಪಿತರ ಸದ್ಗತಿಗೆ ಗಂಗೆಯನು ತಂದ,ಪಾಪ ! ಪಿತೃಋಣ ನೀಗಿ ಲೋಕ ಹಿತವನು ಗೈದಭೂಪ ಪ್ರಜೆಗುಪಕಾರಿ! – || ಪ್ರತ್ಯಗಾತ್ಮ || ಅತ್ಯುಗ್ರ ಸಂಶಯವು ನಿನ್ನ ತಲೆ ಕೆಡಿಸಿರಲುಪ್ರತ್ಯುಪಾಯವ ಹುಡುಕು; ಒಡನೆ ದುಡುಕದಿರುಪ್ರತ್ಯಕ್ಷವಾದರೂ ನೆರೆ ವಿಚಾರಿಸಿದಾಗಸತ್ಯ ಸಾಕ್ಷಾತ್ಕಾರ- || ಪ್ರತ್ಯಗಾತ್ಮ || ರಮಣೀಯಕ ವಸ್ತು ಎಲ್ಲಿದ್ದರೇನಂತೆಭೂಮಿಯೊಳೊ ವ್ಯೋಮದೊಳೊ ಫಲ ಪುಷ್ಪದೊಳಗೊಭೂಮಾನುಭೂತಿಯಿಂ ಸೃಷ್ಠಿ ಸೊಬಗನು ಕಾಣುಸಾಮಾನ್ಯವೆನ್ನದಿರು- || […]Read More
ಇಲ್ಲಿಯವರೆಗೂ…ಒಂಟಿ ಮನೆಯನ್ನು ಖರೀದಿಸಿದ ದಂಪತಿಗಳಿಗೆ ಮನೆಯಲ್ಲಿನ ವಿಕೃತ ಅನುಭವಗಳು ಬೆಚ್ಚಿಬೀಳಿಸುತ್ತವೆ ಹಾಗು ಮನೆಯಲ್ಲಿ ಸಿಕ್ಕ ತಾಮ್ರ ಹಾಳೆಯಲ್ಲಿ ಬರೆದಿರುವಂತೆ ಆತ್ಮಗಳನ್ನು ಬಂಧಿಸಿ ಅಷ್ಟ ದಿಗ್ಬಂದನದ ಅರಿವಾಗುತ್ತದೆ. ಅಗೋಚರ ಕೈಗಳು ದಂಪತಿಗಳು ಹೆದರುವಂತೆ ಮಾಡಿ ಮುದುಕಿಯ ರೂಪದಲ್ಲಿ ಆತ್ಮವು ಕಥೆಯನ್ನು ಹೇಳತೊಡಗುತ್ತದೆ. ಮುಂದೆ…. ಪಾತ್ರ ಪ್ರವೇಶ, ಶರತ್ತಿನಂತೆ ಕಥೆಯಲ್ಲಿ ಈ ದಂಪತಿಗಳು ಇಬ್ಬರು ಪಾತ್ರಗಳು, ಆತ್ಮಕ್ಕೆ ಬೇರೆಯವರು ಮುಟ್ಟುವಂತೆ ಭೌತಿಕ ದೇಹವಿಲ್ಲ.ಸನ್ನಿವೇಶಕ್ಕೆ ಪ್ರವೇಶಿಸುತ್ತಿದ್ದಂತೆ ಸುತ್ತ ಎತ್ತ ನೋಡಿದರೂ ಕಾಡು, ಸ್ವಲ್ಪ ದೂರದಲ್ಲಿ ಹೊಗೆ ಬರುತ್ತಿರುವ ಗೋಚರತೆ. ಏನು ಮಾಡುವುದು […]Read More
ಧಾರವಾಡದಲ್ಲಿ ದೀಪಾವಳಿಯ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸುತ್ತಾರೆ. ಇಲ್ಲಿನ ವಿಶೇಷತೆ ಎಂದರೆ ಚಿತ್ರರಚನಾ ಆಚರಣೆ. ಈ ಚಿತ್ರಸಂಪ್ರದಾಯವು ಪರಂಪರಾನುಗತವಾಗಿ ನಡೆದುಕೊಂಡು ಬರುತ್ತಿದೆ. ಇಲ್ಲಿನ ಜನಸಮುದಾಯವು ಸಗಣಿಯಲ್ಲಿ ಬೊಂಬೆಗಳ ಹಾಗೆ ವಿನ್ಯಾಸ ಮಾಡಿ ಪಾಂಡವರ ಆಕಾರಗಳನ್ನು ಮನೆಯ ಅಂಗಳದಲ್ಲಿ ಸ್ಥಾಪಿಸುತ್ತಾರೆ. “ಪಾಂಡವರು ನರಕ ಚತುರ್ಥಿಯಂದು ಬನ್ನಿ ಗಿಡದಲ್ಲಿ ಅಡಗಿಸಿಟ್ಟಿದ್ದ ತಮ್ಮ ಆಯುಧಗಳನ್ನು ತೆಗೆದುಕೊಂಡು ಹೋಗಲು ಬರುತ್ತಾರೆ ಆ ಸಮಯದಲ್ಲಿ ಅವರು ನಮ್ಮ ಮನೆಗೂ ಬರುತ್ತಾರೆ” ಎಂಬ ನಂಬಿಕೆ ಇವರದು. ಅವರು ಸಿಧ್ಧಪಡಿಸಿದ ಐದು ಪಾಂಡವರು ಮತ್ತು ದ್ರೌಪದಿಯ ಗೊಂಬೆಗಳನ್ನು […]Read More
ಬಸಳೆ ಸೊಪ್ಪಿನ ಪರಿಚಯ ಬಹಳಷ್ಟು ಜನರಿಗೆ ಇರುತ್ತದೆ. ಬಸಳೆಯು ಬಳ್ಳಿಯಂತೆ ಹಬ್ಬಿ ಅದರಲ್ಲಿ ಎಲೆ ಹೂವು ಹಾಗು ಹಣ್ಣುಗಳನ್ನು ಬಿಡುತ್ತದೆ. ಈ ಬಳ್ಳಿಗಳಲ್ಲಿ ಬೆಳೆದ ಎಲೆಗಳನ್ನು ಅಡುಗೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ. ಬಸಳೆಯ ಸಸ್ಯವು ‘ಬ್ಯಾಸಲೇಸಿಯಿ‘ (ಬ್ಯಾಸೆಲೇಸೀ) ಕುಟುಂಬಕ್ಕೆ ಸೇರಿದ್ದು. ಇದರ ವೈಜ್ಞಾನಿಕ ಹೆಸರು ‘ಬ್ಯಾಸೆಲ ರೂಬ್ರ’ ಎಂದು ಇದನ್ನು ಭಾರತದಲ್ಲಿ ಹೆಚ್ಚಾಗಿ ಬಳಸುವುದರಿಂದ ‘ಇಂಡಿಯನ್ ಸ್ಪಿನಿಚ್’ (ಬಹುವಾರ್ಷಿಕ ಬಳ್ಳಿ) ಎಂದು ಕೂಡ ಕರೆಯಲ್ಪಟ್ಟಿದೆ. ಏಷ್ಯಾ ಖಂಡದ ಉಷ್ಣ ಪ್ರದೇಶಗಳಲ್ಲಿ ಬಸಳೆಯ ಬಳ್ಳಿಗಳು ಬೆಳೆಯುತ್ತವೆ. ಎರಡು ಬಗೆಗಳಲ್ಲಿ ಬೆಳೆಯುವ […]Read More
ಹಿಂದಿನ ಸಂಚಿಕೆಯಿಂದ… ಅಪ್ರಮೇಯ ಬೆಂಗಳೂರನ್ನು ಇಷ್ಟು ಬೇಗ ಬಿಡಬೇಕೆಂಬ ಇಚ್ಛೆ ಇರಲಿಲ್ಲ ಆದರೆ ತನ್ನಲ್ಲಿರುವ ವಿಗ್ರಹಗಳ ಭದ್ರತೆಗಾಗಿ ನಿಂತಲ್ಲೇ ನಿಲ್ಲದೆ ದಕ್ಷಿಣ ಭಾರತವನ್ನು ಒಂದಿಷ್ಟು ಧರ್ಮ ಪ್ರಚಾರವನ್ನು ಮಾಡುತ್ತಾ ಸುತ್ತೋಣವೆಂದು ಹೈದರಾಬಾದ್ ಗೆ ಹೋಗೋಣವೆಂದು ನಿರ್ಧರಿಸಿ ಶಿಷ್ಯರ ಹಾಗು ನಾಗ ಗಾಂಧಾರಿಯ ಜೊತೆ ರೈಲು ಹತ್ತಿದ. ಮುಂದೆ… –ಒಂಬತ್ತು- ಹೈದರಾಬಾದಿನ ಸಾಲಾರ್ ಜಂಗ್ ಮ್ಯೂಸಿಯಂ ನೋಡಿದರು ಬೆಳಗ್ಗೆ. ನಂತರ ಹೊಟೇಲ್ಗೆ ಮರಳಿ ಮಧ್ಯಾಹ್ನ ಸ್ವಲ್ಪ ವಿಶ್ರಾಂತಿ ಪಡೆದರು. ಸಂಜೆ ಸಣ್ಣ ಗುಡ್ಡವೊಂದರ ಮೇಲಿನ ಬಿರ್ಲಾ ಮಂದಿರ್ನವರ ಹಾಲ್ನಲ್ಲಿ […]Read More
ಮನುಷ್ಯನ ಜೀವನದಲ್ಲಿ ಪ್ರಕೃತಿಯ ಕೊಡುಗೆ ಅಪಾರವಾಗಿದೆ. ಗಿಡ ಮರಗಳು ಹಾಗೂ ಸಕಲ ಜೀವರಾಶಿಗಳು ಅಂದರೆ ಮನುಷ್ಯನೂ ಸೇರಿ ಪ್ರಕೃತಿಯ ಒಂದು ಭಾಗವೆ. ಮನುಷ್ಯನ ಜೀವನಕ್ಕೆ ಮುಖ್ಯವಾದ ಅಂದರೆ, ಉಸಿರಾಟಕ್ಕೆ ಬೇಕಾದ ಆಮ್ಲಜನಕವನ್ನು ನಮಗೆ ಪ್ರಕೃತಿಯು ನೀಡಿದ ಕೊಡುಗೆಯೇ ಸರಿ. ಮನುಷ್ಯನ ದೇಹ ಐದು ಪಂಚ ಮಾಹಾಭೂತಗಳಿಂದಾಗಿದೆ. ಮಣ್ಣು, ವಾಯು, ಅಗ್ನಿ, ಆಕಾಶ, ನೀರು, ಆದುದರಿಂದ ಹುಟ್ಟಿನಿಂದ ಸಾಯುವವರೆಗೂ ನಾವೆಲ್ಲಾ ಇದರೊಂದಿಗೆ ಬಾಳಬೇಕು. ಇದಕ್ಕೆ ಕೃತಜ್ಞತರಾಗಿರಬೇಕು. ಈ ಐದು ಪಂಚಭೂತಗಳು ನಮ್ಮ ಪ್ರಕೃತಿಯಲ್ಲಿರುವ ಒಂದು ವೈಶಿಷ್ಟ್ಯವೇ ಸರಿ. ದೇವರ […]Read More
ಕಥೆ ಬರೆಯಬೇಕು! ಹೀಗೊಂದು ಚಡಪಡಿಕೆ, ಸುಮಾರು ಎರಡು ತಿಂಗಳಿಂದಲೂ ನನ್ನನ್ನು ಹಿಂಡುತ್ತಿದೆ. ನಾನು ಕಥೆಗಾರನಾ? ನನಗೆ ಗೊತ್ತಿಲ್ಲ. ಕಥೆ ಬರೆಯುವುದು ನನ್ನ ಚಟವೇ ಇರಬಹುದು ಎಂದುಕೊಂಡಿದ್ದೇನೆ. ನಾನು ಇದಕ್ಕೂ ಮುಂಚೆ ಹಲವು ಕಥೆ ಬರೆದಿದ್ದೇನೆ. ಆದರೆ ಅವು ‘ಕಥೆ’ ಎಂಬ ದೃಷ್ಟಿಯಿಂದ ಪರಿಪೂರ್ಣವಾಗಿವೆಯೇ ? ಗೊತ್ತಿಲ್ಲ.ಮುಖ್ಯವಾಗಿ ಕಥೆ ಎಂದರೆ ಏನೆಂದೇ ನನಗೆ ಗೊತ್ತಿಲ್ಲ. ‘ಒಳ್ಳೆಯ ಕಥೆ’ ಎಂಬುದು ನನಗಿನ್ನು ಅರ್ಥವೇ ಆಗಿಲ್ಲ. ಸಾಹಿತ್ಯಾಸಕ್ತರು ಮೆಚ್ಚಿಕೊಂಡಿದ್ದನ್ನೇ ನಾನು ಮುಗುಮ್ಮಾಗಿ ಒಪ್ಪಿಕೊಂಡಿದ್ದೇನೆ. ಹೀಗೆ ನನ್ನ ಕಥೆಗಳು ಕಥೆಗಳಾ? ಎಂಬ ಭಯದಿಂದಲೆ […]Read More
ಅರೇ! ಯಾವುದೋ ಔಷಧದ ಹೆಸರಿನಂತಿರುವ ಇದು ಹಕ್ಕಿಯೇ ಎಂದು ನಿಮಗನ್ನಿಸಬಹುದು! ಹೌದು ಇದು ಹಕ್ಕಿಯೇ! ನಮ್ಮಲ್ಲಿನ ಅತಿ ಮುದ್ದಾದ ಹಕ್ಕಿಗಳಲ್ಲಿ ಒಂದು ಈ ಪ್ರಾಟಿನ್ಕೋಲ್. ಕನ್ನಡದಲ್ಲಿ ಇವನ್ನು ಚಿಟವ ಎಂದು ಕರೆಯುತ್ತಾರೆ. ಕವಲುಬಾಲದ ಚಿಟವ, ಸಣ್ಣ ಚಿಟವ ಇತ್ಯಾದಿ ಹೆಸರುಗಳಿಂದ ಕರೆಸಿಕೊಳ್ಳುತ್ತದೆ. ಸಾಮಾನ್ಯವಾಗಿ ನೀರಿನಾಸರೆಗಳ ಸಮೀಪ ಕಂಡುಬರುವ ಇವು ಕಲ್ಲು, ಮರಳಿನ ಭೂಭಾಗದೊಂದಿಗೆ ಸೇರಿಹೋಗುವಂತಹ ಗರಿಹೊದಿಕೆಯನ್ನು ಹೊಂದಿದೆ. ಗುಬ್ಬಿ ಮತ್ತು ಮೈನಾದ ನಡುವಿನ ಗಾತ್ರದ ಪುಟ್ಟಕಾಲು ಮತ್ತು ಪುಟ್ಟ ಕೊಕ್ಕಿನ ಹಕ್ಕಿ. ಭಾರತದಾದ್ಯಂತ ಮತ್ತು ಪಾಕಿಸ್ಥಾನ, ನೇಪಾಳ, […]Read More