ಸ್ವರ್ಗದ ಹಕ್ಕಿ! (Indian Paradise Flycatcher)

ಸ್ವರ್ಗದ ಹಕ್ಕಿ! ಎಂಬ ಹೆಸರೇ ಚಕಿತಗೊಳಿಸುತ್ತದೆ. ಅದನ್ನು ನೋಡಿದ ಕೂಡಲೆ ಯಾಕೆ ಅದನ್ನು ಸ್ವರ್ಗದ ಹಕ್ಕಿ ಎನ್ನುತ್ತಾರೆ ಎಂಬುದು ಅರ್ಥವಾಗಿ ಹೋಗುತ್ತದೆ. ಬಿಳಿ ಅಥವಾ ಕಂದು ದೇಹದ ಪುಟ್ಟ ಹಕ್ಕಿಗಳು. ಗಂಡು ಹಕ್ಕಿಗೋ ಬಾಲ ದೇಹದ ಸರಿಸುಮಾರು ಹತ್ತರಷ್ಟು ಉದ್ದವಿರುತ್ತದೆ. ಇದೇ ಆ ಹಕ್ಕಿಗೆ ಒಂದು ಅಪೂರ್ವ ಸೌಂದರ್ಯವನ್ನು ತಂದುಕೊಡುತ್ತದೆ. ಇಂಗ್ಲಿಷಿನಲ್ಲಿ ಈ ಹಕ್ಕಿಯನ್ನು ಇಂಡಿಯನ್ ಪ್ಯಾರಡೈಸ್ ಪ್ಲೈ ಕ್ಯಾಚರ್ (Indian Paradise-Flycatcher Terpsiphone paradisi) ಎನ್ನುತ್ತಾರೆ. ಅಂದಹಾಗೆ, ಈ ಪ್ಲೈಕ್ಯಾಚರ್ ಎಂಬ ಪದಪುಂಜ ಮುಖ್ಯ. ಇಲ್ಲಿ ಪ್ಲೈ […]Read More

ಮಿತ್ರ ನಿನಗೊಂದು ಪತ್ರ!

ಮಿತ್ರ ನಿನಗೊಂದು ಪತ್ರ! ಮಿತ್ರಮತ್ತೊಮ್ಮೆ ಜಗವನಾಚ್ಛಾದಿಸಿದೆಶತಮಾನದಿತಿಹಾಸ ಅಗೆದೆದ್ದಿದೆಹೊಸ ಹೊಸ ಹೊದಿಕೆ ಹೊದ್ದಕರೋನ ವೈರಸ್ ಕರಿ ಛಾಯೆ! ಅಲ್ಲಿದೆ ಇಲ್ಲಿಲ್ಲಇಲ್ಲಿದೆ ಅಲ್ಲಿಲ್ಲಎಂದಲ್ಲವೇ ಅಲ್ಲದೇಶದೇಶಗಳ ಮೂಲೆಮೂಲೆಜಾಗರೂಕ ತಡಕಿದೆಭೀಷಣ ಬಲಿ ಕೆಡವಿದೆ!ಬರಿಗಣ್ಣಿಗೆ ನಿಷ್ಕಪಟ ಅಗೋಚರಈ ಶಿಕಾರಿ ದೈತ್ಯಶಿಖರ! ಯಾವಯಾವ ಘಳಿಗೆಗೆಯಾರುಯಾರೋ ಎಷ್ಟೆಷ್ಟೋಅರಿವಿರದ ಅಂಕೆ ಸಂಖ್ಯೆ! ನಾ ನಿನ್ನನೀ ನನ್ನಎದಿರು ಬದಿರು ದೈಹಿಕ ಮತ್ತೊಮ್ಮೆನಿಲ್ಲುವೆವೋಅಥವ ಎಂದೆಂದೂ ಇಲ್ಲವೋಹಾಗಾಗಿ ನಿನ್ನ ದಾಖಲೆಗೊಂದುಗುಂಡಿಗೆ ಹಿಂಡುವಪದಪುಂಜ ಪತ್ರಧಾರೆ! ಪ್ರಿಯ ಗೆಳೆಯನೀ ಹೇಗಿರುವೆಹಾಗೂ ನಿನ್ನೆದೆ ನಂಬಿದವರುನಂಬಿಕಸ್ತರು ಈಗ ಪ್ರತಿಕ್ಷಣಕ್ಷಣಕ್ಷಣ ಸಹ ಅತಿ ಪ್ರಮುಖಪರಸ್ಪರ ವಿಚಾರವಿನಿಮಯಹಾಗೂ ಇರವಿನ ಅರಿಯಲುಅಗತ್ಯ ಇರುವಉದ್ವಿಗ್ನ […]Read More

ಒಳ ಧನಿ

ಇಲ್ಲಿ ಕಾಣಿಸುವ ಪಾತ್ರಗಳು ಕೇವಲ ಕಾಲ್ಪನಿಕಯಾರನ್ನೂ ಉದ್ದೇಶಿಸಿದವಲ್ಲ.. ವಿರೋಧಿಸುತ್ತೇನೆ ಈ ಹೇಳಿಕೆಗೆಹಾಗಾದರೆ ಕಾಲ್ಪನಿಕ ಪಾತ್ರಗಳು  ರೂಪುಗೊಂಡ ಬಗೆ ಹೇಗೆ? ನಮ್ಮನ್ನು ಬ್ರಮೆಗೆ ದೂಡಿದವರಾರು?ನಾವೇಕೆ ಹುಚ್ಚರಾದೆವು ಬಲೆಗೆ ಬಿದ್ದವೇಕೆ ಕುರಿಮಂದೆಯೊಳಗೆ..  ಒಮ್ಮೊಮ್ಮೆ ಯೋಚಿಸುತ್ತೇನೆ.. ನಾನೇಕೆ ಹುಡುಕುತ್ತಿದ್ದೇನೆ ಸಾಂಗತ್ಯಕ್ಕಾಗಿಬಹುದೊಡ್ಡ ಹೆದ್ದಾರಿ ಇದೆ..ಸಾಗಬಹುದಲ್ಲವೇ ನನ್ನ ಪಾಡಿಗೆ..  ಉರುಳಿ ಹೋಗಲಿ ದಿನಗಳು ಬಹು ಬೇಗನೇ ರಜಾ ದಿನಗಳಲ್ಲಿ ಅರ್ಥವಿಲ್ಲ. ಸ್ವಾರ್ಥಿಗಳು ನಾವು ಎಲ್ಲವೂ ನಮ್ಮ, ನಮ್ಮ ಅನುಕೂಲಕ್ಕೆ. ಕಾಲನ ಹೊಡೆತಕ್ಕೆ ರಜಾ ಚೀಟಿ ಅಂಟಿಸಲಾದೀತೆ.?  ನಾನು ಪ್ರಶ್ನಿಸಲು ಆರಂಭಿಸಿದೆಜನ ದಡ್ಡರೆಂದರು..ನಿಜವಾಗಿಯೂ ನಾನು ದಡ್ಡನೇ ಆಗಿದ್ದೆ..ನಾನು ನಿರುತ್ತರಿಗಳನ್ನು ಎಡತಾಗಿದ್ದೆ.  ಕಣ್ಣು ಕಂಡ ಪ್ರಪಂಚದಲ್ಲಿ […]Read More

ಬಿಗ್ ಬಾಸ್ (ಸೀಸನ್ -8) – ನೂರು ದಿನಗಳು – ಟಾಸ್ಕುಗಳ ಸುರಿಮಳೆ

ಕಳೆದ ವಾರದ ಬಿಡುವಿಲ್ಲದ ಟಾಸ್ಕ್ ಗಳ ನಡುವೆ ಉಂಟಾದ ಮೋಜು ಮಸ್ತಿ ಹಾಗು ಗಲಾಟೆಗಳು ಬಿಗ್ ಬಾಸ್ 8 ನೇ ಸೀಸನ್ ನನ್ನೂ 100 ದಿನ ದಾಟಿಸಿಯಾಯಿತು. ಹೌದು ಬಿಗ್ ಬಾಸ್ 8 ನೇ ಸೀಸನ್ ಗೆ ಈಗ 100 ದಿನಗಳ ಸಂಭ್ರಮ. ಸೀಸನ್ 8 ರಲ್ಲಿ ಉಳಿದಿರುವ ಮಿಕ್ಕ ಮೂರು ವಾರಗಳ ನಿಯಮಿತದಿಂದಾಗಿ ಎಲ್ಲಾ ಸ್ಪರ್ದಿಗಳಲ್ಲೂ ಒಂದು ಬಗೆಯ ಆತಂಕ ಎದ್ದು ಕಾಣಿಸುತ್ತಿದೆ. ಆಯೋಜಿಸಿರುವ ಟಾಸ್ಕ್ ಗಳಲ್ಲಿ ಎಲ್ಲಾ ಸ್ಪರ್ದಿಗಳು ತಮ್ಮ ಸಾಮರ್ಥ್ಯವನ್ನು ಮೀರಿ ಆಟವನ್ನು […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ)

ಶ್ರೀ ಗೌರಿ -ಮುಖಕಮಲ-ದಿನಕರನೆ ಗಣಪತಿಯೆಶ್ರೀ ಗಜಾನನ ಆಖು ವಾಹನನೆ ಶರಣು|ಶ್ರೀ ಗುರುಕೃಪಾದೃಷ್ಟಿ ಎನ್ನ ಮೇಲಿರುವಂತೆ |ಆಗುಮಾಡಿಸೊ ಬೆನಕ ಶರಣು ಶರಣು- || ಪ್ರತ್ಯಗಾತ್ಮ || ಅಮ್ಮ ಶಾರದೆ ವರದೆ ಶೃಂಗಗಿರಿ ಪುರವಾಸಿಬೊಮ್ಮನರಸಿಯೆ ಸಕಲ ವಿಬುಧ-ಜನ-ವಂದ್ಯೆನಮ್ಮ ಗುರುಕಾರ್ಯಕ್ಕೆ ಅಭಯ ಹಸ್ತವ ನೀಡುದಮ್ಮಯ್ಯ ಶರಣೆಂದೆ ಶ್ರೀ ಪಾದಕೆ- || ಪ್ರತ್ಯಗಾತ್ಮ|| ಪೊಡವಿಯೊಳಗಾವುದಿದೆ ನಿನಗಸಾಧ್ಯವು ಹನುಮಹಿಡಿದ ಕೆಲಸವ ಬಿಡದೆ ಸಾಧಿಸುವೆ ನೀನುದೃಢ ಭಕ್ತ ಶ್ರೀರಾಮದೂತ ಕರುಣಾಸಿಂಧುಬಿಡದೆನ್ನ ಕಾರ್ಯವನು ಪೂರ್ಣಗೊಳಿಸು- || ಪ್ರತ್ಯಗಾತ್ಮ|| ಅಂಜನಾ ಗರ್ಭದಲಿ ಜನಿಸಿದ ಮಹಾಮಹಿಮಸುಗ್ರೀವ ಸಚಿವರಲಿ ಉತ್ತಮೋತ್ತಮನೆರಾಮಪ್ರಿಯ ನಿನಗಿದೊ […]Read More

ಎನ್. ಶಿವರಾಮಯ್ಯ (ನೇನಂಶಿ)

ಎನ್. ಶಿವರಾಮಯ್ಯ (17.02.1933 – 26.04.2016) ಕಾವ್ಯನಾಮ – ನೇನಂಶಿ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ನೇಗಲಾಲ ಗ್ರಾಮದವರು. ತಂದೆ ಎನ್.ಆರ್. ನಂಜಪ್ಪ, ತಾಯಿ ವೆಂಕಟಲಕ್ಷಮ್ಮ.ಕನ್ನಡ ಎಂ.ಎ., ಬಿ.ಎಡ್., ಕನ್ನಡ ಪಂಡಿತ್, ಹಿಂದೀ ವಿದ್ವಾನ್, ರಾ.ಭಾ. ಪ್ರವೀಣ್, ಸಂಸ್ಕೃತ ಕೋವಿದ, ಕನ್ನಡ ಉಪನ್ಯಾಸಕ ರಾಗಿದ್ದರು. `ನೇನಂಶಿ’ಯವರು ಬಹುಶ್ರತರಾಗಿದ್ದರು. ಅವರೊಬ್ಬ ಲಿಂಗ್ವಿಸ್ಟ್. ಅವರು ಬಹುಭಾಷಾ ಪಂಡಿತರಾಗಿದ್ದರು. ಅವರಿಗೆ ಕನ್ನಡ, ಇಂಗ್ಲಿಷ್, ಸಂಸ್ಕೃತ, ಹಿಂದಿ, ತೆಲುಗು, ತಮಿಳು, ಬಂಗಾಳಿ ಭಾಷೆಗಳಲ್ಲಿ ಪರಿಣತಿ ಇತ್ತು. ಕನ್ನಡಕ್ಕೆ ಈ ಎಲ್ಲಾ ಭಾಷೆಗಳಿಂದ ಅನುವಾದಗಳನ್ನೂ […]Read More

‘ಭೂರಮೆ ವಿಲಾಸ’ ಹಾಗೂ ‘ವೈಫ್ ಆಫ್ ಸೋಲ್ಜರ್’ – ಪುಸ್ತಕಗಳ ಬಿಡುಗಡೆ

ಕಗ್ಗೆರೆ ಪ್ರಕಾಶ್ ರವರ ಕಾವ್ಯ ಕೃತಿ “ಭೂರಮೆವಿಲಾಸ” ಹಾಗು ಎಸ್ ಭಾಗ್ಯ ರವರ ಅನುಭವ ಕಥನ ‘ವೈಫ್ ಆಫ್ ಸೋಲ್ಜರ್’ ಪುಸ್ತಕಗಳ ಬಿಡುಗಡೆ ಆಗಸ್ಟ್ 1 ರ ಭಾನುವಾರ ಬೆಂಗಳೂರಿನ “ಕೆ ಜಿ ಎಲ್ ಡಿ ಆರ್ಟ್ ಗ್ಯಾಲರಿ” ಯಲ್ಲಿ ಮಧ್ಯಾಹ್ನ 3 ರ ವೇಳೆಗೆ ಆಯೋಜಿಸಲ್ಪಟ್ಟಿದೆ. ಸಂಪೂರ್ಣ ವಿಳಾಸ ಕೆಳಗೆ ಲಭ್ಯವಿದೇ. ಇಂಥ ಅಪರೂಪದ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಪ್ರೀತಿಯ ಸ್ವಾಗತ. ಸಾಹಿತ್ಯಾಸ್ಕತರು ಭೇಟಿ ನೀಡಿ ಕಾರ್ಯಕ್ರಮವನ್ನು ಪ್ರೋತ್ಸಾಯಿಸಬೇಕೆಂದು ಸಾಹಿತ್ಯಮೈತ್ರಿ ವತಿಯಿಂದ ವಿನಂತಿ. ವಿಶೇಷವೆಂದರೆ ಮೂರು ವರ್ಷದ […]Read More

ಪರಾಭವ ಭಾವನಾ – 1 ಯತಿರಾಜ್‌ ವೀರಾಂಬುಧಿ

ಖ್ಯಾತ ಲೇಖಕರಾದ “ಯತಿರಾಜ್ ವೀರಾಂಬುಧಿ” ಯವರು ಸಾಂಸ್ಕೃತಿಕ ಅಭಿರುಚಿ, ಅಭಿವ್ಯಕ್ತಿ ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿ. ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್, ಕಥೆ, ಕಾದಂಬರಿ, ಅಂಕಣ, ಹಾಸ್ಯ ಲೇಖನ ಅನುವಾದ ಹೀಗೆ ಕನ್ನಡ ಸಾಹಿತ್ಯ ಲೋಕದ ಅನೇಕ ಮಜಲುಗಳಲ್ಲಿನ ಇವರ ಸೇವೆ ಅಮೋಘವಾದದ್ದು. ಕೇವಲ ಬದುಕಿನ ಮೇಲ್ಮೆಯ ಹೊರನೋಟಕ್ಕೆ ಸೀಮಿತಗೊಳ್ಳದ ಯತಿರಾಜ ವೀರಾಂಬುಧಿ ಅವರ ಸೃಜನಶೀಲ ಮನಸ್ಸು, ಅಂತರಂಗದ ಹುಡುಕಾಟಕ್ಕೆ ಕೂಡ ಹೇಗೆ ಕಾತರಿಸುತ್ತದೆ ಎಂಬುದಕ್ಕೆ ಅವರ ಪ್ರಸಿದ್ಧ ಪುಸ್ತಕದ ಶೀರ್ಷಿಕೆ ‘ಭಗವದ್ಗೀತೆ ಬಚ್ಚಿಟ್ಟಿದ್ದ ಪಾಠಗಳು’ ಒಂದು ಸೂಚ್ಯವೇನೋ! […]Read More

ನಿಮ್ಮ ನಗು

ಉರಿದುರಿದು ಬೀಳುವವರಿಗೆಉರುವಲಾಗಲಿ ನಮ್ಮ ನಗುವುಇರಲಿಬಿಡಿ ಬೆಚ್ಚಗೆ ಕೆಲವರಾದರೂ ನಗುವು ನಮಗದು ಸಹಜ ಧರ್ಮಉರಿದುಕೊಳ್ಳುವುದು ಅವರ ಕರ್ಮಆಗಿರಲಿ ಇದುವೇ ಬಾಳಮರ್ಮ ನಾವು ಅತ್ತರೂ ಕೊರಗದವರುನಾವು ನಕ್ಕಾಗ ಸೊರಗಿಹರುನಮ್ಮವರೆಂದಿಗೂ ಆಗದ ಇವರುತೋರಿಕೆಯ ಸೋಗಲಾಡಿ ಸುಭಗರು ಇರುತ್ತಾರೆ ಸುತ್ತಲೂ ಇಂಥವರುಹುಳಿ ಹಿಂಡುವ ಕಾಯಕದವರುಬಲಿಬೀಳದಿರಿ ಇವರು ನರಿಗಳಂಥವರು ನಕ್ಕು ನಗಿಸುವುದು ಸುಲಭವೆನ್ನದಿರಿನಗುವಿನೊಳಗೂ ಇರಬಹುದುಕಡಲಂಥ ದುಃಖ ದುಮ್ಮಾನ ನೂರು ಸ್ವಸ್ಥ ನಗುವ ಲೇಪನವೊಂದೇಹೆಚ್ಚಿಸುವುದು ಮೊಗದ ಚೆಲುವಿಂಗೆಹರಿಸುವುದದು ಸ್ನೇಹದ ಪರಿಶುದ್ಧಗಂಗೆ ಉರಿದುರಿದು ಬೀಳುವವರಿಗೆಉರುವಲಾಗಲಿ ನಮ್ಮ ನಗುವುಇರಲಿಬಿಡಿ ಬೆಚ್ಚಗೆ ಕೆಲವರಾದರೂ ಸೌಜನ್ಯ ದತ್ತರಾಜ ಚಿತ್ರಗಳು : pininterestRead More

ಶಿಳ್ಳೇ ವೃತ್ತಾಂತ!

ತುಂಕೂರ್ ಸಂಕೇತ್ ಸಣ್ಣವಳಿದ್ದಾಗಪೀಟಿ ಮಾಸ್ತರರವಿಶಲ್ಲಿನ ಶಿಳ್ಳೆ! ಬೆಳೆದು ಬೆಡಗಿಯಾಗಿಬಳುಕಿ ನಡೆವಾಗಪಡ್ಡೆ ಹುಡುಗರಕ್ಯಾತೆ ಮಾಡುವ ಶಿಳ್ಳೆ! ಪಕ್ಕಾ ಗೃಹಿಣಿಯಾಗಿಅಡುಗೆ ಕೋಣೆ ಸೇರಿದರೆಕೂಗಿ ಕರೆಯುತ್ತೆಅಡುಗೆಯ ಕುಕ್ಕರ್ಶಿಳ್ಳೆ ಹಾಕಿ! ಬಿಡದೀ ಮಾಯೇವಯಸ್ಸಾದ ಮೇಲೆವೃದ್ಧಾಶ್ರಮ ಸೇರಿದರೆಪಕ್ಕದ ಬೆಟ್ಟದಿಂದಕೂಗುತ್ತೆ ಶಿಳ್ಳೇ ಕ್ಯಾತಶಿಳ್ಳೇ ಹಾಕಿ! ತುಂಕೂರ್ ಸಂಕೇತ್Read More