ಒಂಟಿಮನೆ-1

ಶ್ವೇತ ವರ್ಣದ ಒಂಟಿ ಮನೆ, ಮನೆಯ ಹಿಂದೆ ಕಗ್ಗತ್ತಲ ಕಾಡು  ಮನೆಯ ಮುಂದೆ ಅಡಿಕೆ ತೋಟ. ನೋಡಲು ಸುಂದರವಾದ ತಾಣವಾಗಿದ್ದರೂ ಅಲ್ಲಿ ನಡೆದ ಕೆಲ ಘಟನೆಗಳಿಂದ ಯಾರೂ ಆ ಮನೆ ಕೊಳ್ಳುವ ಧೈರ್ಯ ಮಾಡಿರಲಿಲ್ಲ. ಕೃಷಿಯ ಮೇಲಿನ ಆಸಕ್ತಿಯಿಂದ ಪಟ್ಟಣ ತೊರೆದು ಬಂದ ದಂಪತಿಗಳು ಊರಿನ ಎಷ್ಟೋ ಜನ ಎಷ್ಟು ರೀತಿಯಾಗಿ ಆ ಮನೆಯ ಬಗ್ಗೆ ಎಚ್ಚರಿಸಿದರು ಕೇಳದೆ ಆ ಮನೆ ಮತ್ತು ತೋಟವನ್ನು ಕೊಂಡಿದ್ದರು.ಆ ದಂಪತಿಗಳಿಗೆ ವಿಜ್ಞಾನದ ಹೊರತು ಮೂಢನಂಬಿಕೆಗಳ ಬಗ್ಗೆ ನಂಬಿಕೆ ಇರಲಿಲ್ಲ. ಮನೆ […]Read More

ಪರಾಭವ ಭಾವನಾ – 7 ಯತಿರಾಜ್‌ ವೀರಾಂಬುಧಿ

ಹಿಂದಿನ ಸಂಚಿಕೆಯಿಂದಅಗಸ್ತ್ಯನ ಮನೆಯಲ್ಲಿ ನಾಗ ಗಾಂಧಾರಿಯನ್ನು ಕಂಡ ಅಪ್ರಮೇಯನಿಗೆ ತನ್ನ ಹಾಗು ಅವಳ ಬಾಲ್ಯದ ನೆನಪುಗಳು ಮರುಕಳಿಸಿ ಅವಳ ಪ್ರೇಮಪಾಶದಿಂದ ಪಾರಾದ ಬಗೆಯನ್ನು ಚಿಂತಿಸುತಿದ್ದಾಗ ಅಗಸ್ತ್ಯ ವಾಗ್ವಾದಕ್ಕೆ ಬಿದ್ದು ನಾಗ ಗಾಂಧಾರಿಯು ನಿನಗೋಸ್ಕರ ಇನ್ನು ಮದುವೆಯಾಗದೆ ಉಳಿದಿರುವಳು ಎಂದು ಅಪ್ರಮೇಯನಿಗೆ ನೆನಪಿಸಿದ. ಅಪ್ರಮೇಯ ನಿರಾಕರಿಸಿದ್ದಕ್ಕೆ ನಾಗ ಗಾಂಧಾರಿಯು ಸಿಟ್ಟಿನಿಂದ ಕಿರುಚುತ್ತಾ “ನಾನು ನಿನ್ನ ಜೊತೆಗೆ ಜೋಷಿಮಠದ ಆಶ್ರಮಕ್ಕೆ ಬರ್ತೀನಿ. ಅದೇನು ಮಾಡ್ತೀಯೋ ಗೊತ್ತಿಲ್ಲ” ಎನ್ನುತ್ತಾ ಹೊರಬಂದು “ಈ ಅಪ್ರಮೇಯನಿಗೆ ಬುದ್ಧಿ ಕಲಿಸ್ತೇನೆ. ಅವನಿಗೆ ಕೆಟ್ಟ ಹೆಸರು ಬರುವಂತೆ […]Read More

ಓ ಹೆಣ್ಣೆ ನೀ ದುರ್ಬಲಳೇ?

‘ಹೆಣ್ಣು’ ಎಲ್ಲರ ಮನೆಯ ಕಣ್ಣು. ಹೆಣ್ಣೆಂದರೆ,  ಪ್ರೀತಿಯಿಂದ, ಪ್ರೀತಿಗಾಗಿ, ಪ್ರೀತಿಗೋಸ್ಕರ ಬದುಕುವ ಜೀವ. ಒಂದು ಸೃಷ್ಟಿಗೆ ಕಾರಣ ಹೆಣ್ಣು. ಹೆಣ್ಣು ಒಂದು ಅದ್ಭುತ.  ಪ್ರತಿಯೊಬ್ಬ ಗಂಡಿನ ಜೀವನದಲ್ಲಿ ತಾಯಿಯಾಗಿ, ಅಕ್ಕ-ತಂಗಿಯಾಗಿ, ಹೆಂಡತಿಯಾಗಿ, ಮಗಳಾಗಿ ಪಾತ್ರವಹಿಸುತ್ತಿದ್ದಾಳೆ. ಅವಳ ಶಕ್ತಿಯ ಬಗ್ಗೆ ಅವಳಿಗೆ ತಿಳಿಯಬೇಕಾಗಿದೆ. ವೇಗವಾಗಿ ಓಡುತ್ತಿರುವ ಈ ಪ್ರಪಂಚದಲ್ಲಿ ಹೆಣ್ಣು ತನ್ನ ಸ್ಥಾನವನ್ನು ಎಲ್ಲೂ ಬಿಟ್ಟುಕೊಟ್ಟಿಲ್ಲ. ಎಲ್ಲಾ ಕಾರ್ಯಕ್ಷೇತ್ರದಲ್ಲಿ ಹೆಣ್ಣುಮಕ್ಕಳು ಲಗ್ಗೆ ಇಟ್ಟಿದ್ದಾರೆ. ತನ್ನ ಸಂಸಾರದ ಭಾರವನ್ನು ಹೊತ್ತಿರುವ ಹೆಣ್ಣು ತನ್ನ ಕಾರ್ಯಕ್ಷೇತ್ರದಲ್ಲೂ ಯಾರಿಗೂ ಕಮ್ಮಿಯಿಲ್ಲದಂತೆ ದುಡಿಯುತ್ತಿದ್ದಾಳೆ. ಆದರೆ […]Read More

ತುಂಬು ಮನಸ್ಸಿನ ತುಂಬೆ

ಬಾಲ್ಯದ ನೆನಪುಗಳನ್ನು ನೆನೆದರೆ ಈಗಲೂ ಆ ಮಧುರ ಕ್ಷಣಗಳು ಮರಳಿ ಬಾರದೆ ಎನಿಸುತ್ತದೆ. ನಮ್ಮಂತಹ ಪಟ್ಟಣಗಳಲ್ಲಿ ಬೆಳೆಯುವ ಮಕ್ಕಳಿಗಂತೂ ಬೇಸಿಗೆಯ ರಜೆ ಶುರುವಾಗುವುದನ್ನು ಕಾಯುವುದೇ ದೊಡ್ಡ ಸಾಹಸ. ರಜೆ ಬಂದ ಕೂಡಲೇ ಅಜ್ಜಿಯ ಹಳ್ಳಿಯ ಮನೆ ಕಡೆಗೆ ದಾರಿ ಹಿಡಿದುಬಿಡುತಿದ್ದೆವು. ಅಂತಹ ಬಾಲ್ಯ ಮರುಕಳಿಸದೆ ಇರುವುದು ಕಹಿಯ ಸಂಗತಿ. ಕಾಂಕ್ರೀಟ್ ಕಾಡಿನಲ್ಲಿ ಬೆಳೆದ ನಮಗೆ ಹಳ್ಳಿಯ ಸೊಬಗು, ಹಸಿರು ಸೌಂದರ್ಯವೆಂದರೆ ಸ್ವರ್ಗವೇ ಸಿಕ್ಕಂತೆ. ಅಜ್ಜಿಯೊಡನೆ ಹೊಲಕ್ಕೆ, ತೋಟಕ್ಕೆ ಅಥವಾ ಹಿತ್ತಲಿಗೆ ಹೋಗಿ ಅಲ್ಲಿಯ ಹಸಿರನ್ನು ಕಣ್ತುಂಬಿಕೊಳ್ಳುವ ಕಾತುರ. […]Read More

ಕಂದು ಮೀನು ಗೂಬೆ – Brown Fish Owl

ಕಳೆದ ಬಾರಿ ಜಗತ್ತಿನ ನಾನಾ ಭಾಗಗಳಲ್ಲಿ ಗೂಬೆಯನ್ನು ಅಪಶಕುನದ ದ್ಯೋತಕವಾಗಿಯೂ ಜ್ಞಾನದ ದ್ಯೋತಕವಾಗಿಯೂ ಕಾಣುವುದನ್ನು ನೋಡಿದ್ದೇವೆ. ಈ ಬಾರಿ ಈ ಪ್ರವೃತ್ತಿ ಕೇವಲ ಜನಸಾಮಾನ್ಯರಲ್ಲಿ ಮಾತ್ರವಲ್ಲ ಸಾಹಿತಿಗಳ, ಕಲಾವಿದರ ಕೃತಿಗಳಲ್ಲಿಯೂ ಇದು ಹಾಗೇ ಎಂಬುದನ್ನು ನೋಡೋಣ. ಜಗತ್ತಿನ ಮಹಾನ್ ಕಾವ್ಯಗಳಲ್ಲಿ ಒಂದಾದ ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧದಲ್ಲಿನ ಕೊನೆಯ ಅಂಕ ದುರ್ಯೋಧನ ಕೊನೆಯ ಘಳಿಗೆಗಳನ್ನು ಎಣಿಸುತ್ತಿರುವಾಗ ಅಶ್ವತ್ಥಾಮ “ಪಾಂಡವರೈವರ ತಲೆಗಳನ್ನು ತರಿದು ತರುವೆ” ಎಂದು ಮಧ್ಯರಾತ್ರಿ ಅವರ ಪಾಳಯಕ್ಕೆ ಹೋಗುವುದನ್ನು ವಿವರಿಸುವಾಗ ವ್ಯಾಸ ಮಹರ್ಷಿಗಳು ಅಶ್ವತ್ಥಾಮ ಗೂಬೆಯನ್ನು ಕಂಡ […]Read More

ಬದುಕು

ಈ ಬದುಕು ಬಂದಂತೆ ಸ್ವೀಕರಿಸಿ ಬದುಕಿಬಿಡುಬೇಕು ಬೇಡಗಳ ಪಟ್ಟಿ ಬದುಗಿರಿಸು.ಕೂಡಿಡುವ ಖಾಯಿಲೆಗೆ. ಪ್ರಕೃತಿಯಲಿ ಮದ್ದಿದೆ..ನಾನೂ, ನನ್ನದೆನುವದ, ಮರೆತು ಜೀವಿಸು.,ದಯೆಬಯಸಿ, ಸಣ್ಣ ಆಯುಗಾಗೀ..ಉಳಿಯುವುದು ಜೀವ ಸಣ್ಣ ಉದಾಹರಣೆಯಾಗಿ ಮೆರೆಯದಿರು, ಇನ್ನಾದರೂ,.. ಹಸಿ ಮಾಂಸವ ಬಯಸಿ.ಜೀವ ಸಂಕುಲದಲ್ಲಿ ನೀನೂ ಬಾಗವಷ್ಟೇ..ತೋರದಿರೆ ಸಂಯೋಗ ಬಾವ..ಕೊಚ್ಚಿ ಹೋಗುವೆ ಒಮ್ಮೆ ತರಗೆಲೆಯಂತೆ ನಿಶ್ಚಿತ. ಕೆದಕದಿರು, ಹಾಳುಗೆಡುಹದಿರು,ವಿಕೃತಿಗೆ.. ಕೃತಿಯುಂಟು. ಶಾಸನದಂತೆ ಎಚ್ಚರ.ಕಾಗದದ ದೋಣಿಯಂತೆ ತೇಲಿಹೋದವು ಮನೆಗಳುಕಾಲನ ಹೊಡೆತಕ್ಕೆ ಈಗ ಎಲ್ಲರೂ ಸಮಾನರು.ಬದುಕಿ ಬಿಡುವ ಬನ್ನಿ. ಬದುಕು ಸಾಗಿಸಿದ ದಿಕ್ಕಿನೆಡೆಗೆ ಸಾಗಿ. ಪವನ ಕುಮಾರ ಕೆ ವಿ […]Read More

ಬ್ಯಾಂಗ್ತಾನ್ ಬೇಬಿ (ಬಿ ಟಿ ಎಸ್) – Jeon Jung-Kook

ಜಿಯಾನ್ ಜಂಗ್-ಕುಕ್ BTSನ ಅತ್ಯಂತ ಕಿರಿಯ ಸದಸ್ಯ. ಇವನು ಹುಟ್ಟಿದ್ದು ಸೆಪ್ಟೆಂಬರ್‌ 1ನೇ ತಾರೀಖಿನಂದು. ಜಂಗ್-ಕುಕ್ ನದ್ದು ಅಪ್ಪ-ಅಮ್ಮ, ಒಬ್ಬ ಅಣ್ಣನೊಂದಿಗಿನ ಪುಟ್ಟ ಕುಟುಂಬ. ದೊಡ್ಡವನಾದ ಮೇಲೆ ತಾನು ಬ್ಯಾಡ್ಮಿಂಟನ್ ಆಟಗಾರನಾಗಬೇಕೆಂದು ಆಸೆಪಟ್ಟಿದ್ದ ಪುಟ್ಟ ಹುಡುಗ ಜಂಗ್-ಕುಕ್. ಜಿ-ಡ್ರ್ಯಾಗನ್ ನ (G-Dragon) ‘ಹಾರ್ಟ್ ಬ್ರೇಕರ್’ (Heartbreaker) ಎಂಬ ಪಾಪ್ ಸಂಗೀತವನ್ನು ದೂರದರ್ಶನದಲ್ಲಿ ನೋಡಿ, ತಾನೂ ಅವನಂತಾಗಬೇಕು ಎಂದು ಆಸೆಪಟ್ಟನು. ಜಂಗ್-ಕುಕ್ 14 ವರ್ಷದವನಿದ್ದಾಗಲೇ ಕೊರಿಯಾದ ಸೂಪರ್ ಸ್ಟಾರ್ ಟ್ಯಾಲೆಂಟ್ ಶೋ ಒಂದರಲ್ಲಿ ಆಡಿಷನ್ ಗಾಗಿ ಹೋಗಿದ್ದನು. ಆದರೆ […]Read More

ನೇಪಥ್ಯ’ಕ್ಕೆ ಗುಡಿಹಳ್ಳಿ ನಾಗರಾಜ್

ರಂಗಭೂಮಿಯ ಅದರಲ್ಲೂ ವೃತ್ತಿ ರಂಗಭೂಮಿಯ ಮೇಲೆ ಅತೀವ ಪ್ರೀತಿ ಹೊಂದಿದ್ದ ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ್ ಅವರು ನಮ್ಮನ್ನಗಲಿದ್ದಾರೆ. ರಂಗವನ್ನೆ ನಂಬಿ ಬದುಕಿದ ಹಾಗೂ ಬೆಳಕಿಗೆ ಬಾರದ ಕಲಾವಿದರನ್ನು ಪರಿಚಯಿಸುವ ಕೆಲಸವನ್ನು ಮಾಡುತ್ತಿದ್ದರು. ವಿಶೇಷವಾಗಿ ಹಿರಿಯ ರಂಗ ನಟಿಯರನ್ನು ಗುರುತಿಸಿ ಅವರ ಆತ್ಮಕತೆಗಳನ್ನು ಬರೆದಿದ್ದಾರೆ. ಅವರೆಲ್ಲರ ರಂಗದ ಮೇಲಿನ ಹಾಗೂ ನೇಪಥ್ಯದಲ್ಲಿನ ಹಲವಾರು ನೋವು-ನಲಿವುಗಳನ್ನು ದಾಖಲಿಸಿದ್ದಾರೆ. ವೃತ್ತಿ ರಂಗಭೂಮಿಯಲ್ಲಿನ ಹಿರಿಯ ನಟಿಯರು ರಂಗಗೀತೆಗಳನ್ನು ಹೇಳುವ ಪರಿಯನ್ನು ಮೆಚ್ಚಿದವರಲ್ಲದೇ ಅಂತಹ ಖಾಸಗಿ ಕಾರ್ಯಕ್ರಮಕ್ಕೆ ಸಮಾನ ಮನಸ್ಕರನ್ನು ಆಹ್ವಾನಿಸಿ ಆ […]Read More

ದಾರಿಯಲ್ಲಿ ಸಿಕ್ಕ ಬಾರ್ಬೆಟ್ (ಕುಟುರ ಹಕ್ಕಿ)

ತಿಂಗಳ ಕೊನೆ ದಿವಸದ ಆಫೀಸ್ ಕೆಲಸದ ಒತ್ತಡ, ಮನೆಯಿಂದ ಡಬ್ಬಿ ಬೇರೆ ತಂದಿರಲಿಲ್ಲ. ಸುಹಾಸ್ ಹಾಗು ಮೇಘನಾಳ ಜೊತೆ ಜೋಳದ ರೊಟ್ಟಿ ಊಟಕ್ಕೆ ಅಂತ ಹೊರಟಿದ್ದೆವು. ಇದ್ದಕಿದ್ದಂತೆ ಸುಹಾಸ್ ನಿಂತಿದ್ದ ಕಾರ್ ಒಂದರ ಬಳಿ ಬಗ್ಗಿ ಏನನ್ನೋ ಎತ್ತಿಕೊಂಡ. ಏನು ಅಂತ ನೋಡಿದರೆ ಪುಟ್ಟ ಹಸಿರು ಬಣ್ಣದ ಹಕ್ಕಿ ಮರಿ. ಸುಹಾಸ್ ಹಕ್ಕಿಯನ್ನು ಪರಿಶೀಲಿಸಿ ಸರ್ ಕಾಲು ಸೊಟ್ಟಗಾಗಿದೆ, ರೆಕ್ಕೆಗೆ ಏನು ಆಗಿಲ್ಲ ಎಂದ. ನಾನು ಸಹ ದಿಟ್ಟಿಸಿ ನೋಡಿದೆ ಹೌದು ಅದರ ಕಾಲು ತಿರಿಚಿಕೊಂಡಿತ್ತು. ಬಳಿಯಲ್ಲಿದ್ದ […]Read More

ದಾಸವಾಳದ ದಾಸನಾಗಿ ನೋಡು ಒಮ್ಮೆ

ಹೂಗಳನ್ನು ದೇವರ ಪಟಕ್ಕೆ ಅಥವಾ ಮೂರ್ತಿಗೆ  ಅರ್ಪಿಸುವ, ಮುಡಿಸುವ, ಹಾರ ಹಾಕುವುದು ನಮ್ಮ ಸಂಸ್ಕೃತಿ. ಅದರಲ್ಲೂ ಈ ದಾಸವಾಳ ಹೂ ದೇವರ ಫೋಟೋ ಮೇಲೆ ಕೂತರಂತೂ ನೋಡುವವರಿಗೆ ಭಕ್ತಿ ರಸಧಾರೆ ಹರಿಸುವುದರಲ್ಲಿ ಸಂಶಯವಿಲ್ಲ. ಪ್ರಪಂಚಾದ್ಯಂತ ಮೂರು ಲಕ್ಷದ ತೊಂಬತೊಂದು ಸಾವಿರಕ್ಕೂ (3,91,000) ಹೆಚ್ಚು ಜಾತಿಯ ಸಸ್ಯಗಳಿವೆ ಮತ್ತು ಅವುಗಳಲ್ಲಿ ಬಹಳಷ್ಟು ಸಸ್ಯಗಳು ಅತ್ಯಂತ ವಿಶಿಷ್ಟ ಲಕ್ಷಣಗಳನ್ನು ಹೊಂದಿವೆ. ಇಂತಹ ಅಗಾಧ ಸಸ್ಯರಾಶಿಯಲ್ಲಿ ಅತೀ ಹೆಚ್ಚು ಪ್ರಾಮುಖ್ಯತೆ ಹೊಂದಿರುವ ಅತಿ ಪರಿಚಿತವೆಂದರೆ “ದಾಸವಾಳ”. ದಾಸವಾಳಗಳು ಮ್ಯಾಲೋಗಳ (ಕೆನ್ನೀಲಿ ಬಣ್ಣದ […]Read More