ಮಾನ್ಯರೇ ನಮಸ್ಕಾರ…. ಕೃಷ್ಣಾ ಮೇಲ್ದಂಡೆ ಯೋಜನೆ ಕ್ಕ್ರಿಯಾಕ್ರಮ ಯೋಜನೆ ಅನುಷ್ಠಾನ ತತ್ಸಂಬಂಧಿತ ಪುನರ್ವಸತಿ ಹಾಗೂ ಅದರನುಗುಣವಾಗಿ ಮಾಡಿದ್ದು ಮಾಡಬೇಕಾಗಿದ್ದು ವಿಷಯ ವಿಚಾರಯೋಗ್ಯ…. ಸಾಂಘಿಕವಾಗಿ ನಾವೆಲ್ಲರೂ ಬರಲಿರುವ ಸನ್ನಿವೇಶಗಳ ಬಗ್ಗೆ ಹಾಗೂ ತೆಗುದುಕೊಳ್ಳಬೇಕಾಗದ ನಿರ್ಧಾರಗಳ ಬಗ್ಗೆ ಪ್ರಸ್ತುತ ಈ ಒಡನಾಟ ಮನ್ವಂತರವಾಗಬೇಕು. ಅಂದಾಜು ೭೦ ಋತುಗಳ ಸಂಘರ್ಷ ಕಂಡ ಕೃಷ್ಣಾ ಮೇಲ್ದಂಡೆ ಯೋಜನೆ ಅನುಕಂಪ ಗಿಟ್ಟಿಸಿಕೊಳ್ಳುವ ಅಥವಾ ಕೃಪಾಪೋಷಿತವಾಗಬಾರದು..ನಮ್ಮೆಲ್ಲರ ತ್ಯಾಗ ಸಹಿಷ್ಣುತೆಯ ದ್ಯೋತಕವಾಗಲೇಬೇಕು… ಹತ್ತಾರು ಬಂದಾರು ತಿಳುವಳಿಕೆ ತಂದಾರು ಮನೆಮನೆಗು ಕನಸಿನ ತೊಟ್ಟಿಲು ಕೊಟ್ಟಾರು…. ಏರಿಳಿತದ ಜೀವನದ ನಿಟ್ಟುಸಿರು […]Read More
ಒಂದು, ಒಂದು ಪಕ್ಕ ಕುಂತಾವೆ,ಹನ್ನೊಂದು ಆಗಾವೆ. ಒಂದು, ಒಂದು ಎಂದೇಸೇರ್ಪಡೆಯಾಗುತ್ತಾಜನನ ಪ್ರಮಾಣವು ಏರುತ್ತಾಸಂಖ್ಯೆಯು ಅಸಂಖ್ಯವಾಗುತ್ತಿದೆ. ಯೋಚನೆ, ಆಲೋಚನೆ,ಯೋಜನೆಗಳಿಂದಜನಸಂಖ್ಯಾ ಸ್ಫೋಟಕ್ಕೆತಡೆ ಹಾಕಬಹುದು! ಜನನ ಜತನವಾಗಲಿ!ಮರಣ ಅಕಾಲವಾಗದಿರಲಿ! ತುಂಕೂರು ಸಂಕೇತ್Read More
ಅದೇನದು?ಇತ್ತೀಚೆಗೆ ಎಲ್ಲರೂ..ಗೀಚಲು ಶುರುಮಾಡಿದ್ದಾರಲ್ಲ!!ಕಾವ್ಯವಿರಬೇಕು ಇಲ್ಲಾ ಕವನವಿರಬೇಕುಅದೂ ಅಲ್ಲದಿದ್ದರೆ ಕವಿತೆಯಿರಬೇಕು ಕಾವ್ಯವೆಂದರೆ,ಪದಗಳನ್ನು ಒಂದರ ವಕ್ಕಳಕ್ಕೆಮತ್ತೊಂದನ್ನು ಪೋಣಿಸುವುದೇ?ಪ್ರಾಸಗಳನ್ನು ಆಯ್ದು ಮನೆ ಕಟ್ಟುವುದೇ?ಎಲ್ಲಿಗೆ ಬೇಕು ಅಲ್ಲಿಗೆಸಾಲುಗಳನ್ನು ತುಂಡರಿಸುವುದೇ?ನಾಲ್ಕೈದು ಪ್ಯಾರ ಅನಿಸಿಕೆ ಬರೆಯುವುದೇ? ಇದೊಂದು ಗೊಂದಲದ ಪ್ರಶ್ನೆಇಂತದ್ದೇ ನಿಯಮಗಳೆಂಬುದಿದ್ದರೆಅದನ್ನು ಅನುಸರಿಸಬಹುದಿತ್ತುಓದಿದರೆ ಕಾವ್ಯವಾಗಬಲ್ಲುದುಮತ್ತೆ ಓದಿದರೆ ಗದ್ಯವಾಗಬಹುದುಎಲ್ಲಿಲ್ಲದ ಮಾಂತ್ರಿಕ ಶಕ್ತಿ ಈ ಕಾವ್ಯಕ್ಕೆಅರ್ಥೈಸಿಕೊಳ್ಳದಿದ್ದರೆ ಗೊಚ್ಚೆತಲೆಹಾಕದಿದ್ದರೆ ಪುಚ್ಚೆಕೆಲವರಿಗೆ ನೇರ ಚಾಟಿ ಏಟುಮತ್ತೆ ತಳ ಸುಟ್ಟ ಹಾಗೆ ಇಲ್ಲಿ ಎಲ್ಲವೂ ಸಂಧಿಸಲಿದೆಪುಟಪುಟಗಳಲ್ಲಿ ಹೇಳುವುದನ್ನುಕೇವಲ ಎರಡು ಪದಗಳಲ್ಲಿಯೇ ಮುಗಿಸಹುದು!ನಾಲ್ಕು ಸಾಲಿನಲ್ಲಿ ಪ್ರಪಂಚವೇ ಕಾಂಬುದುಅಳುವವರಿಗೆ ನಗುವುದನ್ನೂನಗುವವರಿಗೆ ಸೈರಿಸುವುದನ್ನುಹಸಿದವರಿಗೆ ಅನ್ನವನ್ನೂಹೆಚ್ಚಾದವರಿಗೆ ತಲೆತೂಗುವುದನ್ನೂಹೇಳಿಕೊಡುವ ಅದ್ಭುತ […]Read More
“ಜಿಗಿ ಜಿಗಿ ಬೊಂಬೆಯಾಟ” ಇದು ನಾಟಕಕಾರರಾದ ‘ಎ ಎಸ್ ಮೂರ್ತಿ’ ರವರು ಕಿರುತೆರೆಯಲ್ಲಿ ತಂದ ಪ್ರಸಿದ್ಧ ಧಾರಾವಾಹಿಯ ಹೆಸರು. ಈ ಬೊಂಬೆಯಾಟವು ತೊಗಲು ಬೊಂಬೆಯಾಟ ನಮ್ಮ ಜನಪದಕಲೆಯಾಗಿದ್ದು ಇದರ ಬಗ್ಗೆ ತಿಳಿಯೋಣ. ತೊಗಲು ಬೊಂಬೆಯಾಟವು ಚಿತ್ರಕಲೆ, ಹಾಡು, ನೃತ್ಯ ಮತ್ತು ಬೆಳಕಿನ ಅಂಶಗಳನ್ನು ಮೇಳೈಸಿಕೊಂಡು ಮುನ್ನಡೆಯುವ ಪ್ರದರ್ಶನ ಚಿತ್ರಕಲೆ. ವಿಜ್ಞಾನ, ಪುರಾಣ, ಇತಿಹಾಸ, ಕಾವ್ಯಗಳು ಮತ್ತು ಬದುಕಿನ ತೊಳಲಾಟವನ್ನು ಮೇಳೈಸಿಕೊಂಡ ವಿಶಿಷ್ಠವಾದ ಜನಪದ ಪ್ರಯೋಗ ಕಲೆ. ಈ ಕಲೆ ಈಗ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಅಪಾಯದಲ್ಲಿದೆ. ಕಲೆ […]Read More
ಈ ಬಾರಿ ಮುಖ್ಯವಾಗಿ ಮನುಷ್ಯ ಆಹಾರ ನೀಡುತ್ತಿರುವ ಕಾರಣದಿಂದ ತನ್ನ ಸಂಖ್ಯೆಯನ್ನು ಅತಿಯಾಗಿ ಹೆಚ್ಚಿಸಿಕೊಂಡಿರುವ ಪಾರಿವಾಳಗಳನ್ನು ಕುರಿತಾಗಿ ತಿಳಿಯೋಣ. ಶಾಂತಿಗೆ ಪರ್ಯಾಯ ಹೆಸರೇ ಪಾರಿವಾಳ. ಅದರಲ್ಲಿಯೂ ಬಿಳಿ ಬಣ್ಣದ ಪಾರಿವಾಳ. ಸಮಾರಂಭಗಳಲ್ಲಿ ಬಿಳಿಪಾರಿವಾಳಗಳನ್ನು ಹಾರಿಬಿಡುವುದು ಶಾಂತಿಯ ಸಂಕೇತ ಎಂದೇ ತಿಳಿಯಲಾಗಿದೆ. ಪ್ರಾಚೀನ ಕಾಲದಲ್ಲಿ ಇವು ಬಹಳ ಮುಖ್ಯವಾದ ಸಂದೇಶವಾಹಕಗಳಾಗಿಯೂ ಕೆಲಸ ಮಾಡುತ್ತಿದ್ದವು. ಗುಪ್ತ ಸಂದೇಶಗಳ ರವಾನೆಯಲ್ಲಿ ಇವುಗಳದ್ದು ಬಹಳ ವಿಶ್ವಾಸಾರ್ಹವಾದ ಪಾತ್ರವಾಗಿತ್ತು. ಸೇನೆಯಲ್ಲಿಯೂ ಇವನ್ನು ಸಂದೇಶವಾಹಕವಾಗಿ ಬಳಸಲಾಗುತ್ತಿತ್ತು. ಲಕ್ಷಾಂತರ ಜನ ಸೈನಿಕರ ಪ್ರಾಣವನ್ನು ಈ ಸಂದೇಶವಾಹಿ ಪಾರಿವಾಳಗಳು […]Read More
ಇತ್ತೀಚೆಗೆ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಕಲಿ – ನಲಿ, ನಲಿ – ಕಲಿ ಎಂಬ ಹೆಸರಿನ ಯೋಜನೆಗಳು ಜಾರಿಯಾಗಿ ಎಲ್ಲೆಡೆ ಸಂತಸ ಕಲಿಕಾ ವಾತಾವರಣ ಕಂಡು ಬಂದಿದೆ. ಚಟುವಟಿಕೆ ಆಧಾರಿತ ಕಲಿಕೆಯನ್ನುಅಳವಡಿಸಿಕೊಳ್ಳಲಾಗುತ್ತಿದೆ.ಇದು ಯಶಸ್ವಿಯೂ ಆಗಿದೆ ಕೂಡ. ಅಂದು ನಾನು ಏಳನೇ ತರಗತಿಗೆ ಪಾಠ ಮಾಡುತ್ತಿದ್ದೆ, ಚಟುವಟಿಕೆ ಆಧಾರಿತ , ಸಂತಸ ಕಲಿಕೆಯನ್ನು ಉಂಟು ಮಾಡೋಣವೆಂದು ಸಕಲ ಸಿದ್ಧತೆಯೊಂದಿಗೆ ತರಗತಿಗೆ ಹೋಗಿದ್ದೆ. ಯುದ್ದಕ್ಕೆ ಹೊರಟ ಯುವ ಸೈನಿಕನಂತಾಗಿತ್ತು ನನ್ನ ಮನ!ಅಂದು ನಾನು ಶುರು ಮಾಡಿದ ಪಾಠದ ಹೆಸರು’ ಕುಡಿತದ ಕೆಡಕುಗಳು’! ಮಾದರಿ ವಾಚನವನ್ನು ಚನ್ನಾಗಿ ಮಾಡಿದ ಖುಷಿಯಲ್ಲಿ ನನ್ನ ಬೆನ್ನನ್ನು ನಾನೇ ಚಪ್ಪರಿಸಿಕೊಂಡೆ! ಕುಡಿಯುವುದರಿಂದ ಸಂಸಾರಗಳು ಹಾಳಾಗುತ್ತವೆ. ಮನೆಯಲ್ಲಿ ನೆಮ್ಮದಿ ಹಾಳಾಗುತ್ತದೆ.ಅದೊಂದು ದುಶ್ಚಟ..ಎಂದೆಲ್ಲ ಹೇಳಿದೆ.ಮಕ್ಕಳು ಬಾಯಿ ತೆರೆದು, ಕಣ್ಣರಳಿಸಿ ಪಾಠ ಕೇಳುತ್ತಿದ್ದರು. ನನಗೆ ನನ್ನ ಮೇಲೇ ಹೆಮ್ಮೆ ಎನಿಸಿತ್ತು! ಸದಾ ತರಲೆ ಮಾಡುತ್ತಿದ್ದ ಹರೀಶ, ಗಿರೀಶ, ಸುರೇಶ ಕೂಡ ಸೈಲೆಂಟಾಗಿ ಪಾಠವನ್ನು ಆಲಿಸುತ್ತಿದ್ದರು.ಬಹುಶಃ ಅವರಿಗೆ ದಿನಾಲೂ ಕುಡಿದು ಬರುವ ಅವರವರ ಅಪ್ಪ ನೆನಪಾಗಿರಬಹುದು ಎಂದುಕೊಂಡು&Read More
ಜಾರುತಪ್ಪು ಮಾಡಿ ಹೆಂಡತಿ ಕೈಯಲ್ಲಿ ಸಿಕ್ಕಿಬಿದ್ದಾಗತುಂಬಾ ಹುಷಾರಾಗಿ ಬೇರೇ ವಿಷಯದ ಕಡೆಗೆಹಾರು.ಯಾಮಾರಿದರೆ ಮುಖಕ್ಕೆ ಬಿಸಾಡುವಳುಕೈಯಲ್ಲಿರುವ ಮಿಕ್ಸಿಯಜಾರು. ದಿನಕರಅವಳಿಗೆ ಚೂರೂ ಇಲ್ಲ ಅವನ ಮೇಲೆಕನಿಕರತಿಳಿದಿದ್ದಾಳೆ ಅವನೊಬ್ಬದನ-ಕರಪಾಪ ಬಡಪಾಯಿ ಗಂಡ ನಮ್ಮ ಪಕ್ಕದ ಮನೆದಿನಕರ ಮಧುಚಂದ್ರಹನಿಮೂನಿಗೆ ಹೋಗುವರುನವದಂಪತಿಗಳುಸಿಮ್ಲಾ, ಡಾರ್ಜಿಲಿಂಗ್, ಕೇರಳಾ, ಊಟಿ.ಸ್ಥಳ ಯಾವುದಾದರೇನುಆಗುವುದಂತೂ ಖಂಡಿತಪತಿರಾಯನ ಜೇಬಿನ ಲೂಟಿ. ಮಡದಿ ಹೇಳಿದ್ದುಎಲ್ಲರ ಮುಂದೆಚಿನ್ನ, ಬಂಗಾರ, ಮುದ್ದು ಅಂತಕರೆದು.ಪುಸಲಾಯಿಸ ಬೇಡ ನನ್ನಕವನಗಳಬರೆದು.ಕೇಳಿದ ಸರ ಕೊಡಿಸದಿದ್ದರೆಕಸಕ್ಕೆ ಹಾಕುವೆನುಬರೆದ ಎಲ್ಲಾ ಹಾಳೆಗಳಹರಿದು. ಶ್ರೀಧರ ಕಾಡ್ಲೂರುRead More
ನಮ್ಮ ಅತಿ ಸುಂದರ ಹಕ್ಕಿಗಳಲ್ಲಿ ಈ ಮಧುರಕಂಠವೂ ಒಂದು. ಹೆಸರಿಗೆ ತಕ್ಕಂತೆ ಇದು ಶ್ರಾವ್ಯವಾಗಿ ಹಾಡುತ್ತದೆ. ಇಂಗ್ಲಿಷಿನಲ್ಲಿ ಇದನ್ನು ಐಯೋರ ಎಂಬ ಇಂಪಾದ ಹೆಸರಿನಿಂದಲೇ ಕರೆಯುತ್ತಾರೆ. (Common Iora Aegithina tiphia)ದಕ್ಷಿಣ ಏಷ್ಯಾದಲ್ಲಿ ಎರಡು ಜಗತ್ತಿನಲ್ಲಿ ನಾಲ್ಕು ಬಗೆಯ ಮಧುರಕಂಠಗಳು ಕಂಡುಬರುತ್ತವೆ. ಎಲ್ಲವೂ ಹಸಿರು, ಹಳದಿ, ಬಿಳಿ ಹಾಗೂ ಕಪ್ಪು ವರ್ಣಗಳ ಸಂಯೋಜನೆಯ ಹಕ್ಕಿಗಳೇ. ಗಂಡು ಹೆಣ್ಣಿನ ವರ್ಣ ಸಂಯೋಜನೆ ಬೇರೆ ಬೇರೆ. ಮರಿ ಮಾಡುವ ಕಾಲದಲ್ಲಿ ಗಂಡು ಹಕ್ಕಿ ಕಪ್ಪು ಟೋಪಿಯನ್ನು ಮೆರೆಸುತ್ತದೆ. ಇದರ ಪ್ರೇಮಯಾಚನಾ ಪ್ರಸಂಗ […]Read More
ಜನಪದ ಚಿತ್ರಗಳು ಸಾಮಾನ್ಯವಾಗಿ ಕಾಲದಿಂದ ಕಾಲಕ್ಕೆ ತಮ್ಮ ಅಭಿವ್ಯಕ್ತಿಗಳ ಅಸ್ತಿತ್ವವನ್ನು ಬದಲಿಸಿಕೊಳ್ಳುತ್ತಾ ಬರುತ್ತಿವೆ. ಈ ಬದಲಾವಣೆಯನ್ನು ಪರಿವರ್ತನೆ ಅಥವಾ ರೂಪಾಂತರ ಎಂಬ ಹೆಸರಿನಲ್ಲಿ ವಿದ್ವಾಂಸರು ಗುರುತಿಸುತ್ತಾ ಬಂದಿದ್ದಾರೆ. ಅಂದರೆ ಅದರ ಮೂಲ ಸ್ವರೂಪವನ್ನು ಉಳಿಸಿಕೊಂಡು ಹಲವು ವಿಧಿವಿಧಾನಗಳ ಹಿನ್ನೆಲೆಯಲ್ಲಿ ಅಲ್ಪ ಸ್ವಲ್ಪ ಬದಲಾವಣೆಯನ್ನು ಮಾಡಿಕೊಳ್ಳುತ್ತಾ ಇದು ಸಾಗಿದೆ. ಜನಪದ ಚಿತ್ರಗಳ ಸಾಮಾನ್ಯ ಸ್ವರೂಪವನ್ನು ಜನಪದ ಭಿತ್ತಿಚಿತ್ರಗಳ ಮೂಲ ಹಾಗೂ ಅವುಗಳ ನೇಪಥ್ಯ, ಚಾರಿತ್ರಿಕ, ಭೌಗೋಳಿಕ, ನೈಸರ್ಗಿಕ ಹಿನ್ನೆಲೆಯಲ್ಲಿ ಕನ್ನಡ ಜನಪದ ಚಿತ್ರಕಲೆಯ ಪ್ರಯೋಗ ವಿಧಾನ, ವಿಕಾಸ, ಗ್ರೀಕ್, […]Read More
ಕೋವಿಡ್ ಎರಡನೇ ಅಲೆಯಿಂದಾಗಿ ಚಿತ್ರೀಕರಣ ನಿಲ್ಲಿಸಿದ್ದ ಬಿಗ್ ಬಾಸ್ 8 ನೇ ಸೀಸನ್ ಮತ್ತೆ ಶುರುವಾದ ಹಿನ್ನಲೆಯಲ್ಲಿ ಎರಡು ವಾರದ ಹಿಂದೆ ಅಳುತ್ತಾ ಮನೆಗೆ ತೆರೆಳಿದ್ದ ಎಲ್ಲಾ ಸ್ಪರ್ದಿಗಳು ನಗುನಗುತ್ತಾ ಬಿಗ್ ಬಾಸ್ ಮನೆಗೆ ಹಿಂತಿರುಗಿದ್ದಾಯಿತು. ಬಿಗ್ ಬಾಸ್ ಕಾರ್ಯಕ್ರಮದ ಇತಿಹಾಸದಲ್ಲೇ ಈ ರೀತಿ ಸ್ಪರ್ಧೆ ನಿಂತು ಹೋಗಿ ಮತ್ತೆ ಶುರುವಾಗಿರುವುದು ಇದೇ ಮೊದಲು. ಈ ಆವೃತ್ತಿಯ ಸ್ಪರ್ದಿಗಳಿಗೆ ಕಾಲಾವಕಾಶ ದೊರೆತು ತಮ್ಮಲೇ ವಿಶ್ಲೇಷಣೆ ಮಾಡಿಕೊಂಡು ಸಿಗುವ ಸಲಹೆಗಳನ್ನು ಉಪಯೋಗಿಸಿಕೊಂಡು ಇನ್ನು ಚೆನ್ನಾಗಿ ಆಡಬಹುದಾಗಿದೆ.ಸ್ಪರ್ಧೆಯ ವೇಳೆಯಲ್ಲಿದ್ದ ದುಗುಡ […]Read More