ನದಿಯ ಕಾತುರ

ನದಿಯ ಕಾತುರ ನನ್ನ ಪಾಲಿನ ಕಡಲುನೀನೇ ಆದರೂಅದೆಷ್ಟು ದೂರ ನೀನು!ನಿನ್ನ ಸೇರಬಯಸುವನದಿಯೇ ನಾನುಹೌದಾದರೂನೀನೇ ಹೇಳುಎಷ್ಟೆಂದು ಹರಿಯಲಿ ನಾನು? ನಿನ್ನ ಸೇರ ಬಯಸುವಸಾವಿರಾರು ನದಿಗಳಲಿನಾನೂ ಒಂದೆಂದುನನಗೆ ತಿಳಿದೇ ಇದೆ ಆದರೂತೀರಕ್ಕೆ ಬಂದುಅಪ್ಪಳಿಸುವ ಅಲೆಗಳೆಲ್ಲವೂಕೈಚಾಚಿ ನನ್ನನ್ನೇಕರೆಯುತ್ತಿವೆಯೇನೋಎನ್ನುವ ಭ್ರಮೆಯಲ್ಲಿಮತ್ತೆ ಮತ್ತೆ ನಿನ್ನೆಡೆಗೇಆಕರ್ಷಿತಳಾಗುತ್ತೇನೆ ಸವೆಸುವ ದಾರಿಗೊಂದುಗುರಿಯಿರಬೇಕಂತೆಆ ಗುರಿ ನೀನೇಇರಬಹುದೆನ್ನುವ ಆಸೆಯಲಿಮುನ್ನುಗ್ಗಿ ಧುಮ್ಮಿಕ್ಕಿಅಡ್ಡ ಬಂದುದನು ಹಿಂದಿಕ್ಕಿಹಿರಿ ಹಿರಿ ಹಿಗ್ಗುತ್ತಾ ಬರುತ್ತಿದ್ದೇನೆ ತಲುಪಬೇಕಾದ ಗಮ್ಯನೀನೇ ಆದರೂತಲುಪುವ ದಾರಿಯಲಿನಾನು ಅಗಮ್ಯಳಾಗುತ್ತಿದ್ದೇನೆ!! ಸೌಜನ್ಯ ದತ್ತರಾಜRead More

ಪ್ರಾಚೀನ ಕಟ್ಟೆಯ ಅರಳೀ ಮರ

ಪ್ರಾಚೀನ ಕಟ್ಟೆಯ ಅರಳೀ ಮರ ಹಳ್ಳಿಗಳಲ್ಲಿನ ಕೆರೆ ಕಟ್ಟೆಗಳ ಪಕ್ಕದಲ್ಲಿ ಅಥವಾ ದೇವಸ್ಥಾನಗಳ ಸಮೀಪದಲ್ಲಿ ಸುಲಭವಾಗಿ ಕಾಣಸಿಗುವ, ಪ್ರತೀ ಗ್ರಾಮದಲ್ಲಿ ಕನಿಷ್ಠ ಒಂದಾದರೂ ಇದ್ದೇ ಇರುವಂತಹ ಮರ ಅರಳಿಮರ ಅಥವಾ ಅಶ್ವತ್ಥ ಮರ. ಬೆಂಗಳೂರಿನ ಹಳೇ ವಸತಿ ಪ್ರದೇಶಗಳಾದ ಬಸವನಗುಡಿಯ ಗುಟ್ಟಳ್ಳಿ, ರಾಜಾಜಿನಗರದ ಶಿವನಹಳ್ಳಿ, ಮಲ್ಲೇಶ್ವರಂ, ಚಾಮರಾಜಪೇಟೆ, ಹಳೇ ಮೈಸೂರಿನ ವಿದ್ಯಾರಣ್ಯಪುರಂ, ಚಾಮುಂಡಿಪುರಂ ಮತ್ತೂ ನಮ್ಮ ಇತರೇ ನಗರಗಳಲ್ಲಿ ಈಗಲೂ ಸಹ ನಮ್ಮ ಬಾಲ್ಯವನ್ನು ಹಾಗು ಹಿರಿಯರ ನೆನಪುಗಳನ್ನು ಸದಾ ನೆನಪಿಸಿ ಕ್ಷಣಕಾಲ ಭಾವುಕಾರಾಗಿ ಮಾಡುವ ಮರ […]Read More

ಗುದದ ರೋಗಗಳು Anal Diseases – 3

ಗುದದ ರೋಗಗಳು Anal Diseases – 3 ಗುದದ ಬಾವು ಮತ್ತು ಭಗಂದರ ಗುದದ ಅಥವ ಗುದದ್ವಾರದ ಆಸುಪಾಸಿನಲ್ಲಿ ಸೋಂಕಿನ ಕುಳಿಯೊಳಗೆ ಕೀವು ತುಂಬಿದ್ದರೆ ಅದನ್ನು ಗುದದ ಬಾವು ಅಥವ ಗುದದ್ವಾರದ ಬಾವು ಎನ್ನುವರು. ವೈದ್ಯಕೀಯ ಭಾಷೆಯಲ್ಲಿ Anal or perianal abscess or anorectal abscess or rectal or perirectal abscess ಮುಂತಾಗಿ ಹೇಳುವರು. ಇದಕ್ಕೆ ಶೇಕಡ ತೊಂಭತ್ತರಷ್ಟು ಕಾರಣ ಆಂತರಿಕ ಗುದಗ್ರಂಥಿಯ ತೀವ್ರತರ ಸೋಂಕು. ಕೆಲವೊಮ್ಮೆ ಬ್ಯಾಕ್ಟೀರಿಯಗಳು (ಸೂಕ್ಷ್ಮಾಣುಜೀವಿಗಳು) ಅಥವ ಮಲದ ಚೂರು […]Read More

ಭಾರತದ ಭಾಗ್ಯವಿಧಾತ

ಭಾರತದ ಭಾಗ್ಯವಿಧಾತ ಬೆಳೆದಿರಿ ದೂರ ತಳ್ಳಿದವರೆ ಅಪ್ಪಿಕೊಳ್ಳುವಂತೆಇಡೀ ಮನುಕುಲವೇ ಪ್ರೀತಿಯಿಂದ ಒಪ್ಪಿಕೊಳ್ಳುವಂತೆಬೆಳಗಿದಿರಿ ಸದಾ ಕಾಲ ಸೂರ್ಯ ಚಂದ್ರರಂತೆನೆನಪಾಗುತ್ತೀರಿ ನಿತ್ಯ ಹೃದಯ ಬಡಿತದಂತೆ ಭೂಮಿಯ ಮೇಲೆ ಬಾಬಾಸಾಹೇಬ್ ಜನನಭಾರತವೇ ಆಯಿತು ದಿವ್ಯ ಪಾವನಬಾಲ್ಯದಲ್ಲಿ ಪಟ್ಟರು ಬಹಳ ಕಷ್ಟವನಎಂದಿಗೂ ಬಿಡಲಿಲ್ಲ ಅಕ್ಷರ ಕಲಿಯುವ ಆಸೆಯನ ಬಾಲ್ಯದಲ್ಲಿ ಕಿತ್ತು ತಿನ್ನುವ ಬಡತನಕಾಣಲಿಲ್ಲ ಎಂದಿಗೂ ಬದುಕಿನಲ್ಲಿ ಸಿರಿತನದೊರಕಿತು ಗುರುಗಳ ಮಾರ್ಗದರ್ಶನಪಡೆದರು ತಂದೆ ತಾಯಿಯರ ಪ್ರೀತಿನ ಹಿಂದೆ ಇಡಲಿಲ್ಲ ತಾವು ಇಟ್ಟ ಹೆಜ್ಜೆನಬದಲಾಯಿಸಿದರು ದೃಷ್ಟಿಯಿಂದ ಭಾರತದ ಸೃಷ್ಟಿನರಚಿಸಿದರು ಸಂವಿಧಾನದ ಕರುಡು ಸಮಿತಿನಮಾಡಿದರು ಅಧ್ಯಕ್ಷರನ್ನಾಗಿ ಸಲಹಾ […]Read More

ಸುಂದರ ಸೂರಕ್ಕಿಗಳು

ಸುಂದರ ಸೂರಕ್ಕಿಗಳು ನಗರ ಪ್ರದೇಶದ ಮನೆಗಳಲ್ಲಿ ಬೆಳಿಗ್ಗೆ ಎದ್ದ ಕೂಡಲೇ ಕೇಳುವುದು ನಮ್ಮ ಹಾಗು ಅಕ್ಕ ಪಕ್ಕದ ಮನೆಗಳಲ್ಲಿನ ಕರ್ಕಶವಾದ ನೀರೆತ್ತುವ ಮೋಟಾರ್ ಶಬ್ದಗಳೇ, ಹಳ್ಳಿಗಳಲ್ಲಿನ ಮುಂಜಾವಿನ ಸೊಗಡೇ ಬೇರೆ. ಹಾಲು ತರುವ ನೆಪದಲ್ಲಿ ಬೆಳಿಗ್ಗೆ ಮನೆಯಿಂದ ಹೊರಡುವ ನನಗೆ ಚಿಲಿಪಿಲಿ, ಟ್ವೀಟ್ ಟ್ವೀಟ್ ಶಬ್ದ ಕೇಳಿಸಿಕೊಳ್ಳಲು ಸ್ವಲ್ಪ ದೂರ ನೆಡೆಯಬೇಕು. ನಮ್ಮ ರಸ್ತೆ ತಿರುವಿನ ಮನೆಯ ಕಾಂಪೌಂಡ್ ನಲ್ಲಿ ದಾಸವಳ ಹಾಗು ಗಣಗಳೆ ಗಿಡಗಳನ್ನು ಹಾಕಿಕೊಂಡಿದ್ದಾರೆ. ಅಲ್ಲಿ ಸ್ವಲ್ಪ ಹೊತ್ತು ನಿಂತು ತಲೆ ಎತ್ತಿ ದಿಟ್ಟಿಸಿದರೆ […]Read More

ಜಾಗ್ರತೆ

ಜಾಗ್ರತೆ ನುಚ್ಚು ನೂರಾಗಿಒಡೆದ ಮುಕುರದಲಿಪ್ರತಿಬಿಂಬ ಹುಡುಕಲುಕಾಣ್ವುದೇ ಪೂರ್ಣಬಿಂಬ! ಕೊಳ್ಳೆ ಹಾಕಿದ ಮನದಮುಂಬಾಗಿಲಿಗೆಬೀಗವಿಕ್ಕುವುದರಿಂದಅಲ್ಲಿಹುದೇ ಮನಶಾಂತಿ! ಸಜಲ ನಯನದೊಳ್ಇಣುಕಿಕ್ಕಲು, ಇಹುದೇಕಾಂತಿಯುತ ನಗೆಯಬೆಳದಿಂಗಳದರಲಿ ! ಅಂಕೆ , ಶಂಕೆ, ಅಂಜಿಕೆ,ಅಪನಂಬಿಕೆ ಎಂದೂಸುಳಿಯದಿರುವಂದದಿಕಾಪಿಡೋಣ ಮನವ !! ಶ್ರೀವಲ್ಲಿ ಮಂಜುನಾಥRead More

ಗುದದ ರೋಗಗಳು (Anal diseases) – 2

ಗುದದ ರೋಗಗಳು (Anal diseases) – 2 ಗುದದ್ವಾರದ ಬಿರುಕು/ಸೀಳು ವಯಸ್ಸು ಐವತ್ತು ತುಂಬಿದ ಶೇಕಡ ಐವತ್ತರಷ್ಟು ಜನರು ಈ ಜಗತ್ತಿನಲ್ಲಿ, ಅವರ ಜೀವಿತಾವಧಿಯಲ್ಲಿ ಮೂಲವ್ಯಾಧಿ ರೋಗದಿಂದ ಬಳಲಬಹುದು ಎಂಬ ಒಂದು ಅಂದಾಜಿದೆ. ಆದರೆ ಗುದದ್ವಾರದ ಸೀಳು ಅಥವ ಬಿರುಕಿನ ಬಗ್ಗೆ ನಿಖರ ಮಾಹಿತಿ ಇಲ್ಲದಿದ್ದರೂ, ಪ್ರತಿ ಐದು ಮಂದಿಗೆ ಒಬ್ಬರಲ್ಲಿ ಈ ರೋಗ ಕಂಡುಬರುವ ಸಾಧ್ಯತೆ ಇದೆಯಂತೆ. ಮೇಲಾಗಿ, ಮುಜುಗರ ಅಥವ ನಾಚಿಕೆಯಿಂದ ವೈದ್ಯರ ಸಲಹೆ ಪಡೆಯದೆ ದೂರ ಉಳಿಯುವವರ ಲೆಕ್ಕವನ್ನೂ ಸೇರಿಸಿದರೆ, ಒಟ್ಟಾರೆ ರೋಗಿಗಳ […]Read More

ಅಳಲು

ಅಳಲು ಗಿಡವಾದೆ, ಮರವಾದೆಬಯಲಿನಲಿ ಬೆತ್ತಲಾದೆಮಾನವನ ದಾಹಕೆ ಬಲಿಯಾದೆ ಹೆಚ್ಚಿಸಿಕೊಳ್ಳುತಿಹ ಮಾನವ ತನ್ನ ಸಂಕುಲವಾಕಡಿದು ಬುಡಮೇಲು ಮಾಡುತಿಹ ಸಸ್ಯರಾಶಿಯಾತನ್ನ ಹೊಟ್ಟೆ ಹೊರೆಯಲು ಕತ್ತರಿಸುತಿಹ ಮರಗಳಾ ಉರುವಲಿಗೆ ಮರಗಳೇ ಬೇಕೇನಿವನಿಗೆನಿಗಿ ನಿಗಿ ಹೊಳೆಯುತಿಹ ರವಿ ಕಾಣನಿವನಿಗೆಕಾದಿದೆ ತಕ್ಕ ಶಾಸ್ತಿ ಮುಂದೊಂದುದಿನ ಅವನಿಗೆ ಮುಂದೊಂದು ದಿನ ಹಸಿರಿಲ್ಲದೇ ನೆರಳಿಲ್ಲದೇನೀರಿಲ್ಲದೇ ಅವ ಒಣಗುವುದಿಲ್ಲವೇಎಂದೂ ಮರೆಯಾಗದ ಸೂರ್ಯ ನೋಡುವುದಿಲ್ಲವೇ ಕಾಡು ಕಡಿದರೆ ನಾಡಿಲ್ಲನಾಡಿಲ್ಲದಿರೆ ನಾವಿಲ್ಲ ಸಿ. ಎನ್. ಮಹೇಶ್Read More

ಅಕ್ಷರಗಳ ಮಾಲೆ – ನಮ್ಮೂರಿನ ಶಾಲೆ

ಅಕ್ಷರಗಳ ಮಾಲೆ – ನಮ್ಮೂರಿನ ಶಾಲೆ ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎಂಬ ಕುವೆಂಪುರವರ ನುಡಿಯಂತೆ, ಭಕ್ತರಿಗೆ ದೇವಾಲಯವಾದರೆ ಪ್ರತಿ ವಿದ್ಯಾರ್ಥಿಗಳ ಪಾಲಿಗೆ ಶಾಲೆಯೇ ದೇವಾಲಯವಿದ್ದಂತೆ. ನಾವು ಜ್ಞಾನವನ್ನು ಪಡೆಯುವ ಸ್ಥಳವನ್ನು ಶಾಲೆ ಎಂದು ಕರೆಯಲಾಗುತ್ತದೆ. ಶಾಲೆಗೆ ದೇವಾಲಯದ ಸಾದೃಶ್ಯವನ್ನು ನೀಡಲಾಗಿದೆ. ನಮ್ಮ ಜೀವನದ ಪ್ರಮುಖ ಭಾಗವೆಂದರೆ ನಮ್ಮ ಬಾಲ್ಯ ಮತ್ತು ನಮ್ಮ ಬಾಲ್ಯವು ಶಾಲೆಯ ನೆನಪುಗಳಿಂದ ತುಂಬಿರುತ್ತದೆ. ಶಾಲೆ ಎಂದರೆ ಶಿಸ್ತು, ಶಿಕ್ಷಣ, ಶಿಕ್ಷಕರು, ಗೆಳತಿಯರು, ಗೆಳೆಯರು ಮುಂತಾದ ಚಿತ್ರಣ ಕಣ್ಮುಂದೆ ಬರುತ್ತದೆ. […]Read More

ಪರಶುರಾಮ ಸೃಷ್ಟಿಯ ನಾಡಿನಲ್ಲೊಂದು ಥೀಂ ಪಾರ್ಕ್

ಪರಶುರಾಮ ಸೃಷ್ಟಿಯ ನಾಡಿನಲ್ಲೊಂದು ಥೀಂ ಪಾರ್ಕ್ ಕರಾವಳಿ ಜಿಲ್ಲೆಗಳನ್ನು (ತುಳುನಾಡು) ಪರಶುರಾಮ ಸೃಷ್ಟಿಸಿದ ನಾಡು ಎಂದು ಕರೆಯುತ್ತಾರೆ. ಈ ಕರಾವಳಿಯ ಭಾಗವನ್ನು ಮಹರ್ಷಿ ಪರಶುರಾರಮರು ಸೃಷ್ಟಿಸಿದ್ದು ಎಂಬ ಪುರಾಣ ಪ್ರತೀತಿಯಿದೆ. ಸುಮಾರು 5,000 ವರ್ಷಕ್ಕೂ ಮೊದಲು ಈ ಭೂಮಿಯಲ್ಲಿ ಜೀವಿಸಿದ್ದ ಪರಶುರಾಮ, (ವಿಷ್ಣುವಿನ ಆರನೆಯ ಅವತಾರ) ಮತ್ತು ಬ್ರಹ್ಮನ ವಂಶಸ್ಥ ಹಾಗೂ ಶಿವನ ಶಿಷ್ಯ ಎಂಬ ಉಲ್ಲೇಖವಿದೆ. ಇವರು ರೇಣುಕೆ ಹಾಗೂ ಸಪ್ತರ್ಷಿ ಜಮದಗ್ನಿಯ ಪುತ್ರ. ಇವರು ತ್ರೇತಾಯುಗದ ಕೊನೆಯಲ್ಲಿ ಜೀವಿಸಿದ್ದರು. ತಮ್ಮ ತಾಯಿಗಾಗಿ ಪರಶುಘಡದಲ್ಲಿ (ಸವದತ್ತಿ) […]Read More