ಸಾಹಸಿ ಕ್ಯಾಪ್ಟನ್ ಮೋನಿಕಾ ಖನ್ನಾ ಪಾಟ್ನಾದಿಂದ ದೆಹಲಿಗೆ ಹೊರಟಿಟ್ದ ಸ್ಪೈಸ್ ಜೆಟ್ ಬೋಯಿಂಗ್ – 737 ವಿಮಾನದ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡು ಪಾಟ್ನಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಈ ವೇಳೆ ಸಮಯಪ್ರಜ್ಞೆ ಮೆರೆದ ವಿಮಾನದ ಕ್ಯಾಪ್ಟನ್ ಮೋನಿಕಾ ಖನ್ನಾಗೆ ಈಗ ಮೆಚ್ಚುಗೆಗಳ ಮಹಾಪೂರವೇ ಹರಿದಿದೆ ಇಂದಿನ ದಿನ ತಂತ್ರಜ್ಞಾನದಲ್ಲಿ ತೀರಾ ಮುಂದುವರಿದಿದ್ದು, ಕೆಲವೇ ಗಂಟೆಗಳಲ್ಲಿ ಪ್ರಪಂಚದ ಯಾವುದೇ ಮೂಲೆಯನ್ನೂ ತಲುಪಬಹುದು. ಇದನ್ನು ಸಾಧ್ಯವಾಗಿಸಿದ್ದು ಜೆಟ್ ಮತ್ತು ಸೂಪರ್ ಸಾನಿಕ್ ಇಂಜಿನ್’ಗಳು. ಜೆಟ್ ಮತ್ತು ಸೂಪರ್ […]Read More
ಹನುಕಿಯಾ- ಆರಿ ಹೋಗದ ದೀಪ ಪುಸ್ತಕ: ಹನುಕಿಯಾಲೇಖಕರು: ವಿಠಲ್ ಶೆಣೈಪ್ರಕಾಶಕರು: ಸಾಹಿತ್ಯಲೋಕ ಪಬ್ಲಿಕೇಷನ್ಸ್ಸಂಪರ್ಕ: 91-9945939436ಬೆಲೆ: 425 /- ಸೃಜನಶೀಲ ಲೇಖಕರಾದ ವಿಠಲ್ ಶೆಣೈ ರವರು ತಮ್ಮ “ಹನುಕಿಯಾ” (ಆರಿ ಹೋಗದ ದೀಪ) ಎಂಬ ಹೊಸ ಕಾದಂಬರಿಯನ್ನು ಸಾಹಿತ್ಯಲೋಕ ಪಬ್ಲಿಕೇಷನ್ಸ್ ಪ್ರಕಾಶಕರ ಮೂಲಕ ಹೊರತಂದಿದ್ದಾರೆ. ಖ್ಯಾತ ಲೇಖಕ ಸಂತೋಷ್ ಕುಮಾರ್ ಮೆಹಂದಳೆ ಯವರು ಪುಸ್ತಕಕ್ಕೆ ಬೆನ್ನುಡಿ ಬರೆದುಕೊಟ್ಟಿದ್ದಾರೆ. ಲೇಖಕ ವಿಠಲ್ ಶೆಣೈಯವರು ಮಂಗಳೂರಿನಲ್ಲಿ ಹುಟ್ಟಿ ಬೆಳೆದು, ಮೈಸೂರಿನಲ್ಲಿ ಇಂಜಿನಿಯರಿಂಗ್ ಓದಿ ಬೆಂಗಳೂರಿನಲ್ಲಿ ನೆಲೆಸಿ ಹಲವು ಬಹುರಾಷ್ಟ್ರೀಯ ಸಾಫ್ಟ್ವೇರ್ ಕಂಪೆನಿಗಳಲ್ಲಿ […]Read More
ಸ್ನೇಹದ ಅನುಬಂಧ ಸ್ನೇಹವೆಂದರೆ…ಬರೇ ಪದಗಳಲ್ಲಆ ಪದಗಳಲಿರುವ ಅಕ್ಷರಗಳಲ್ಲ!ಅಕ್ಷರದಲಿ ಕಾಣುವ ಹೊಂದಾಣಿಕೆಯ ಭಾವವೇ..ಸತ್ಯದ ಗೆಳೆತನ, ಮಾತಲಿ ವಿವರಿಸಲಾರದಲ್ಲ!! ಸ್ನೇಹವೆಂದರೆ… ದೊಡ್ಡ ಆಲದಮರದಂತೆಆ ಮರದ ಚಿಕ್ಕ ಎಲೆಗಳಂತಲ್ಲ!ಎಲೆಗಳಲಿರುವ ಹಸಿರುಸಿರಿನ ಭಾವವೇ..ನಿತ್ಯದ ಗೆಳೆತನ, ಉದುರಿ ಬೀಳುವುದಿಲ್ಲ!! ಸ್ನೇಹವೆಂದರೆ…ಸದಾ ಉರಿವ ನಂದಾದೀಪದಂತೆಆ ದೀಪದಲಡಗಿದ ಬಿಸಿಯಲ್ಲ!ಬಿಸಿಯಾಗದ ಬೆಚ್ಚಗಿನ ಭಾವವೇ..ಚಿರನೂತನ ಗೆಳೆತನ, ಉರಿದು ಆರುವುದಿಲ್ಲ!! ಸ್ನೇಹವೆಂದರೆ…ವಿಶಾಲ ಶರಧಿಯಂತೆಆ ಸಾಗರದಲಿನ ಅಲೆಗಳಂತಲ್ಲ!ಏರಿಳಿತದಲೆಗಳ ಅಪ್ಪಳಿಸುವ ಭಾವವೇ..ಶಾಶ್ವತ ಗೆಳೆತನ, ಪ್ರಳಯಕೆ ಕೊಚ್ಚಿ ಹೋಗುವುದಿಲ್ಲ!! ಸುಮನಾ ರಮಾನಂದRead More
ಹೊಯ್ಸಳರ ಕಾಲದ ಸೌಮ್ಯ ಕೇಶವ ಪುರಾತನ ಕಾಲದ ಎಷ್ಟೋ ಹಿಂದೂ ದೇವಾಲಯಗಳು ಇಂದಿಗೂ ಪ್ರಸಿದ್ಧ. ಅಳಿವಿನಂಚಿನಲ್ಲಿ ಇರುವ ಇನ್ನೂ ಅನೇಕ ದೇವಾಲಯಗಳನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ನಾನೀಗ ಹೇಳಲು ಹೊರಟಿರುವುದು ಅಂತಹ ಒಂದು ಪ್ರಸಿದ್ಧ ದೇವಾಲಯ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಸೌಮ್ಯಕೇಶವ ದೇವಾಲಯವು 12ನೇ ಶತಮಾನದ ಪುರಾತನ ದೇವಾಲಯ. ಹೊಯ್ಸಳರ ಕೊಡುಗೆಯಿದು. ಅತಿ ಎತ್ತರದ ಗೋಪುರಗಳನ್ನು ಹೊಂದಿರುವ ನಮ್ಮ ರಾಜ್ಯದ ದೇವಾಲಯಗಳಲ್ಲಿ ಇದೂ ಒಂದು . ರಾಜಗೋಪುರ ದ್ರಾವಿಡ ಶೈಲಿಯಲ್ಲಿ ಕಟ್ಟಲ್ಪಟ್ಟಿದ್ದು, ದೇವಾಲಯದ ವಿಶಾಲತೆ ಹಾಗೂ […]Read More
ಅಹಮ್ಮಿನ ಕೋಟೆಯಲಿ ಇರಲು ಅಳತೆ ಮೀರಿದ ಬೇಗುದಿಆಗಲಿ ತಾನು,ತನ್ನಿಂದಲೆಂಬ ಭಾವದ ಶಮನ!ಬೇಕಿರಲು ಸಂಸಾರನೌಕೆಯಲಿ ನೆಮ್ಮದಿ..ಕ್ಷಣಕೊಮ್ಮೆ ಆಗುತಿರಲಿ ಅಹಂಕಾರದ ದಮನ!! ತನ್ನ ಬಿಟ್ಟು ಯಾರಿಲ್ಲ ಲೋಕದಿಅನ್ನುವ ಭಾವ ಮೊದಲು ಅಳಿಯಲಿ!ಕಾಯಲು ದೇವರಿದ್ದಾನೆನ್ನುವ ಭಕ್ತಿಯು..ಪ್ರೇಮದಿ ಪ್ರತೀ ಮನದಲೂ ಉಳಿಯಲಿ!! ಆ ಸೂರ್ಯಚಂದ್ರರಿಗಿರದ ಅಹಂಕಾರವುಮನುಜನಲಿ ಉದಿಸಿದದೇತಕೊ ಕಾಣೆ!ಭವಬಂಧನವ ತೊರೆದು ಹೋಗುವ ತನಕ..ಅಹಮ್ಮಿರುವ ಮನಕೆ ಹಿಡಿಯಿರಿ ಸಾಣೆ!! ತಲೆಗೆ ಏರಿರಲು ಅಹಂಕಾರದ ಭಾವತುಂಬೀತು ಅದರಲಿಯೇ ಬಾಳ ಕೊಪ್ಪರಿಗೆ,ಜೋಕೆ !ನಿತ್ಯ ಕೃತಕ ಹೊಗಳುಭಟರ ಕೈಗೆ ತನ್ನನಿರಸಿ…ಏರಿಸುವಿರಿ ಮನವನು ಉಪ್ಪರಿಗೆಗೆ,ಯಾಕೆ!! ಸುಮನಾ ರಮಾನಂದRead More
ನವಶಕ್ತಿ ಸ್ವರೂಪಿಣಿ ನವರೂಪವನೆತ್ತಿ ನಲಿದಿರುವೆ ತಾಯೇ!ನವಜೀವನಕೊಂದು ಬೆಳಕು ನೀಡಮ್ಮಾ!!ನಿನ್ನ ಹೆಸರೊಂದಿರಲು ನನ್ನ ಮನದಲ್ಲಿ!ನನ್ನ ಭಾವದಂಗಳದಿ ಬೆಳಕು ತಾಯೇ!! ನವರಾತ್ರಿಯಲಿ ಪೂಜಿಪೆನು ನಾ ನಿನ್ನ!ನೀಡು ನೀ ವರವನು ಸಲಹು ನಮ್ಮನ್ನು!!ನವಶಕ್ತಿ ದುರ್ಗೆಯು ನೀನಮ್ಮ ತಾಯೇ!ನವೀನತೆಯ ಭಾಗ್ಯ ನೀಡುವಾ ಮಾಯೆ!! ನನ್ನೆದೆಯ ಗೂಡಲ್ಲಿ ನೆಲೆಸು ನೀ ಬಾರಮ್ಮ!ನಾನುನಾನೆಂಬ ಮೋಹವನು ಕಳೆಯಮ್ಮ!!ನವದುರ್ಗೆ ನೀನಮ್ಮ ನನ್ನ ಉಸಿರಾಗಿರುವೆ!ನಮಿಸುವೆನು ನಾ ನಿನಗೆ ಬೆಳಕು ನೀಡಮ್ಮ!! ನಿನ್ನೊಲುಮೆ ನನಗಿರಲು ಬಾಳು ಸೊಗಸಮ್ಮ!ನನ್ನೆದೆಯ ಗೂಡಲ್ಲಿ ಹಣತೆ ಹಚ್ಚುವೆನಮ್ಮ!!ನಿನ್ನೊಡಲ ಕೂಸು ನಾ ಕೃಪೆಯ ತೋರಮ್ಮ!!ನನ್ನದೆಯಾಳದಲಿ ನೀ ನಿಂತು ಸಲಹಮ್ಮ!! […]Read More
ನವಿಲೇನೋ ಕುಣಿಬೇಕು ‘ಮುಗಿಲನು ಮುದ್ದಿಡೆ ನೆಲದ ಬೆಳೆಚಿಗಿವುದು, ಜಿಗಿವುದು ನೆಗೆವುದಿಳೆ;ಚಿಕ್ಕೆ ಇರುಳು ಕುಣಿದಂತೆ ಕುಣೀಕುಣಿ ಕುಣಿ ನವಿಲೇ ಕುಣೀ ಕುಣೀ’– ಡಾ|| ದ ರಾ ಬೇಂದ್ರೆ ಹಿರಿಯ ಕವಿ ಡಾ|| ದ ರಾ ಬೇಂದ್ರೆಯವರು ಹೇಳಿದಂತೆ ಮಳೆಗೆ ಇಳೆ, ಇಳೆಯಿಂದ ಹೊರಬಂದ ಬೆಳೆ ಅಷ್ಟೇ ಅಲ್ಲದೆ ತನ್ನ ಸುಂದರವಾದ ಗರಿ ಬಿಚ್ಚಿ ನಮ್ಮ ರಾಷ್ಟ್ರ ಪಕ್ಷಿ ನವಿಲು ಸಹ ಕುಣಿಯುತ್ತದೆ. ಗಂಡು ನವಿಲು ತನ್ನ ಆಕರ್ಷಕ ರೆಕ್ಕೆಯ ಗರಿಗಳನ್ನು ತೆರೆದು ಕುಣಿಯುವುದು ಮುಖ್ಯವಾಗಿ ತನ್ನ ಸಂಗಾತಿಯನ್ನು ಆಕರ್ಷಿಸಿ […]Read More
ಪಿತೃಪಕ್ಷ – ಮಹಾಲಯ ಅಮಾವಾಸ್ಯೆ ಭಾದ್ರಪದ ಮಾಸದ ಬಹುಳ ಪಾಡ್ಯದಿಂದ ಅಮಾವಾಸ್ಯೆಯವರೆಗೆ 15 ದಿನಗಳನ್ನು ಪಿತೃಪಕ್ಷ ಅಥವಾ ಪಕ್ಷಮಾಸವೆನ್ನುತ್ತಾರೆ. ಈ ಸಮಯದಲ್ಲಿ ಪಿತೃಗಳು ತಮ್ಮ ಮಕ್ಕಳಿಂದ ಪಿಂಡ, ತಿಲೋದಕಗಳನ್ನು ಎದುರು ನೋಡುತ್ತಿರುತ್ತಾರೆ. ಈ ಹದಿನೈದು ದಿನಗಳಲ್ಲಿ ಯಾರು ಶ್ರಾದ್ಧವನ್ನು ಮಾಡುತ್ತಾರೋ ಅವರನ್ನು ಸಂತೃಪ್ತರಾದ ಪಿತೃಗಳು ಉತ್ತರೋತ್ತರ ಅಭಿವೃದ್ದಿಯಾಗಲೆಂದು ಆಶೀರ್ವಾದ ಮಾಡುತ್ತಾರೆ. ಪಿತೃಗಳ ಆಶೀರ್ವಾದವಿದ್ದರೆ ಮಕ್ಕಳು ಮೊಮ್ಮಕ್ಕಳು ಆಯುರಾರೋಗ್ಯ ಆಯುಷ್ಯಗಳನ್ನು ಪಡೆದು ಜೀವನದಲ್ಲಿ ಪ್ರಗತಿಯನ್ನು ಹೊಂದುತ್ತಾರೆ. ನಮಗೆ ಜನ್ಮನೀಡಿ ನಾವು ಈಗಿರುವ ಪರಿಸ್ಥಿತಿಗೆ ನಮ್ಮ ಪಿತೃಗಳ ಕೊಡುಗೆ ಬಹಳಷ್ಟಿರುತ್ತದೆ, […]Read More
ಸದಾಶಯ ಯಾರ ಶಾಪ ತಟ್ಟಿತೋ,ಅದಾರ ಕಣ್ಣು ತಾಗಿತೋ.ನಂದನದಂತಿದ್ದ ಮನೆಯೇಕೆಭೂತ ಬಂಗಲೆಯಾಯಿತೋ ? ರಾಮನನ್ನನುಸರಿಸುವಅನುಜರಂತಿದ್ದವರಿಂದು,ತಾವೇ ರಾವಣರಂತೆಬಾಳಲೇಕಾದರೋ ? ಜೇನುಗೂಡಿನಂತಿದ್ದಆ ಮನೆಯೊಗ್ಗಟ್ಟಿಗೆ,ದ್ವೇಷವೆಂಬ ಕಲ್ಲನ್ನುಅದಾರೊಗೆದರೋ ? ಕೇರುವ ಮೊರದಂತೆದೋಷವ ಬಿಟ್ಟು ಗುಣಗ್ರಹಿಸುತ್ತಿದ್ದವರು, ಜರಡಿಯಂತೆದೋಷ ಸಂಗ್ರಹಕರೇಕಾದರೋ ? ಇರುವ ಸುಖವನು ತೊರೆದು,ಮರೀಚಿಕೆಯನ್ನರಸುತ್ತಾ,ಅವರವರಲ್ಲೇ ಹೊಡೆದಾಡಿಪರಸ್ಪರ ಶತೃಗಳೇಕಾದರೋ ? ವೈರತ್ವ ಕರಗಿ, ಮನದ ಕೊಳತಿಳಿಯಾಗಿ, ಮನೆ-ಮನ-ಗಳೊಂದಾಗಿ, ಹಿಂದಿರುಗಲಾಮನೆಯ ಸಿರಿ ವೈಭವ !! ಶ್ರೀವಲ್ಲಿ ಮಂಜುನಾಥRead More
ದೂರದೂರಿನ ಪ್ರಯಾಣಕ್ಕೆ ಪೂರ್ವ ತಯಾರಿಯಿರಲಿ ದೂರದ ಊರಿಗೆ ಪ್ರಯಾಣ ಮಾಡುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಪ್ರಯಾಣ ಮತ್ತು ಪ್ರವಾಸವೆಂದರೆ ಹೆಚ್ಚಿನೆಲ್ಲರಿಗೂ ಅಚ್ಚುಮೆಚ್ಚು ಹಾಗೂ ಖುಷಿಯ ವಿಚಾರ. ಪ್ರವಾಸವೆಂದರೆ ವಾಹನವಿಲ್ಲದಿದ್ದರೆ ಅದು ಪ್ರವಾಸವೇ ಅಲ್ಲ ಎಂಬಂತಾಗಿದ್ದು, ಪ್ರವಾಸದ ಸಂದರ್ಭದಲ್ಲಿ ವಾಹನದೊಂದಿಗೆ ವಿವಿಧ ಪ್ರೇಕ್ಷಣೀಯ ಸ್ಥಳಗಳಲ್ಲಿ ಫೋಟೋ ತೆಗೆಸಿಕೊಳ್ಳುವುದೇ ಒಂದು ವಿಶೇಷವಾದ ಸಂದರ್ಭವಾಗಿ ಮಾರ್ಪಟ್ಟಿದೆ. ಪ್ರಯಾಣಕ್ಕೆ ಬಹುತೇಕರು ಸ್ವಂತ ವಾಹನ ಹಾಗೂ ಬಾಡಿಗೆ ವಾಹನವನ್ನು ಬಳಸುತ್ತಾರೇನೋ ನಿಜ ಆದರೆ ವಾಹನವನ್ನು ಯಾವ ರೀತಿ ಚಲಾಯಿಸ್ತಾರೆ ಎಂಬುವುದು ಮುಖ್ಯವಾಗುತ್ತದೆ. ವಾಹನಗಳು […]Read More