ನಂಬಿಕೆ

ನಂಬಿಕೆ ಸತ್ಯಕ್ಕೆ ಸಾವಿಲ್ಲವೆಂಬನಂಬಿಕೆಯು ತಾನಿಂದುಕೊನೆಯುಸಿರೆಳೆಯುತಿದೆ! ಧರ್ಮಕ್ಕೆ ಜಯವೆಂಬನಂಬುಗೆಯ ಮಂತ್ರವಿಂದುಹುಸಿಯದೆನಿಸುತಿದೆ ! ಕಾಯಕವೇ ಕೈಲಾಸವೆಂಬಮಾತಿನ ನಂಬಿಕೆಯಿಂದುಮೈಗಳ್ಳತನ ತೋರುತಿದೆ! ನಮ್ಮನಾಳುವವರೇಗೋಮುಖ ವ್ಯಾಘ್ರರಾಗಿನಂಬಿಕೆಗನರ್ಹರಾಗಿದ್ದಾರೆ! ಹಣದೆದುರು ಸ್ನೇಹ,ಪ್ರೀತಿ, ವಿಶ್ವಾಸಗಳೆಂಬುದುನಂಬಿಕೆ ಕಳೆದುಕೊಳ್ಳುತಿದೆ ! ನಂಬಿಕೆಯೇ ನಂಬಿಕೆಯಮೇಲಿಟ್ಟ ನಂಬಿಕೆಯನುನಂಬದಿದ್ದರೂ; ಮಾನವೀಯತೆಯಿಂದುಗುಟುಕು ಜೀವಹಿಡಿದುನಂಬಿಕೆಯ ಕಾಯುತ್ತಿದೆ ! ಶ್ರೀವಲ್ಲಿ ಮಂಜುನಾಥRead More

ನನ್ನ ಪ್ರೀತಿಯ ಸರ್ಕಾರಿ ಶಾಲೆ

ನನ್ನ ಪ್ರೀತಿಯ ಸರ್ಕಾರಿ ಶಾಲೆ ಸರ್ಕಾರಿ ಶಾಲೆಯಲ್ಲಿ ನಾನು ಓದುವೆಅಪ್ಪಾ ಅಮ್ಮನಿಗೆ ಹೆಸರನು ತರುವೆಈ ಶಾಲೆ ಅಂದರೆ ನನಗಿಷ್ಟ,,,ರಜೆಯು ಬಂದರೆ ಬಲುಕಷ್ಟ.!!೧!! ನಮ್ಮನ್ನು ಕಂಡರೆ ಗುರುಗಳಿಗಂತುತಮ್ಮ ಮಕ್ಕಳಂತೆ ಪ್ರೀತಿಯಿದೆ.ಜಾತಿ, ಧರ್ಮದ ಕೊಳಕಿನ ಬ್ರಾಂತುಕಿತ್ತು ಎಸೆಯುವ ಶಕ್ತಿಯಿದೆ.!!೨!! ಓದುತ ಬರೆಯುತ ದಿನವೆಲ್ಲಾ,,ಶಿಸ್ತು,ಸಂಯಮವ ಮರೆಯಲ್ಲಗುರುಗಳೆ ನಮಗೆ ಇಲ್ಲೆಲ್ಲಾ,,,ಜ್ಞಾನ ಹಂಚುವರು ನಮಗೆಲ್ಲ.!!೩!! ಹಲವು ರೀತಿಯ ಪಾಠವಿದೆಕುಣಿದು ಕುಪ್ಪಳಿಸೊ ಆಟವಿದೆನಮ್ಮ ಸಂಸ್ಕೃತಿಯ ಮಂತ್ರವಿದೆಬದುಕು ಗೆಲ್ಲುವ ತಂತ್ರವಿದೆ.!!೪!! ತಂದೆ ತಾಯಿಗೆ ನಮ್ಮ ಕಲಿಕೆಯತಿಳಿಸಿ ಹೇಳಲು ಸಭೆಗಳಿವೆ.ನಾವು ಮಾಡಿದರೆ ತರಲೆ ತೀಟೆಯತಿದ್ದಿ ತೀಡುವ ಮನಗಳಿವೆ.!!೫!! ಹಸಿವು […]Read More

ದಿನಕರನ ಸೋಜಿಗದಲಿ…

ದಿನಕರನ ಸೋಜಿಗದಲಿ… ಕತ್ತಲು ಕವಿದಿಹ ಲೋಕದಲಿಸುತ್ತಲೂ ಬೆಳಕನು ನೀಡುತಾ!ಎತ್ತೆತ್ತಲೂ ಹಸಿರ ಚಿಗುರಿಸುತಲಿ..ಸೊಗದಿ ಆ ಅಹಸ್ಕರನು ಬಂದಿಹನಲ್ಲಾ!! ನೀಲಾಗಸದಿ ಹೊಂಗಿರಣವ ಬೀರಿಸರಾಗದಿ ಕೆಂಬಣ್ಣವ ಪಸರಿಸುತಾ!ಅನುರಾಗದಿ ಕಾಯ್ವ ಧರಣಿಯಲಿ..ತನ್ನೊಲವ ಅರುಹಲು ರವಿ ಆಗಮಿಸಿಹನಲ್ಲಾ!! ಕಾನನಕೆ ಹೊನ್ನಿನ ಚಾದರ ಹೊದಿಸಿಮನನ ಮಾಡುವಂತೆ ಬಾನಲಿ ಚಲಿಸುತಾ!ಶಮನ ಮಾಡಿ ಕಾರ್ಗತ್ತಲನು ಜಗದಲಿ..ನೇಸರನು ಸಕಲರ ಕಂಗಳ ತೆರೆಸಿಹನಲ್ಲಾ!! ದೊಡ್ಡ ನಕ್ಷತ್ರವಾದರೂ ಬ್ರಹ್ಮಾಂಡದಲಿಅಡ್ಡವಾದ ಮೋಡದ ಮರೆಯಲಿ ಅಡಗುತಾ!ಹೆಡ್ಡ ಮನುಜನಿಗೆ ಕರ್ತವ್ಯವ ತಿಳಿಸೇ ಮನದಲಿ..ದಿನಕರನು ತನ್ನ ಬೆಳಕಲಿ ಬಾಳ ಬೆಳಗಿಹನಲ್ಲಾ!! ಸುಮನಾ ರಮಾನಂದRead More

ತಾಯಗರ್ಭ

ತಾಯಗರ್ಭ ಅಮ್ಮಾ ನಿನ್ನಯ ಒಡಲಲಿಹುದುನನ್ನಯ ಜೀವ ನನ್ನಯ ಉಸಿರುಜತನ ಮಾಡು ತಾಯೆ ನನ್ನುಸಿರನುಉಳಿಸು ತಾಯೇ ನೀ ಮನುಕುಲವನು ಅದೆಷ್ಟು ಜೀವಿಗಳ ನೀ ಪೊರೆದೊರುವೆಉಸಿರು ಉಸಿರಿನಲಿ ನೀ ಉಸಿರಾಗಿರುವೆನೆಲಕ್ಕಂಟಿ ಬೆಟ್ಟ ತಬ್ಬಿ ಮಳೆ ಹಿಡಿದಿರುವೆಹಸಿರೇ ಉಸಿರೆಂದು ನೀ ಸಾರುತಿರುವೆ ವಿಷಗಳ ನೀನುಂಡು ಅಮೃತವನಿತ್ತಿರುವೆಇಂಗದ ಇಂಗದ ಇಂಗಾಲವ ನೀ ಹೀರಿರುವೆಪ್ರಾಣವಾಯುವ ನೀ‌ ಹರಿಸಿ ಜನನಿಯಾಗಿರುವೆಅಮ್ಮಾ ನೀನಿದ್ದರೆ ನೆಲ ಜಲವು ಸಕಲವು ಸಿ.ಎನ್. ಮಹೇಶ್Read More

ಹೆಜ್ಜೆ ಗುರುತು

ಹೆಜ್ಜೆ ಗುರುತು ಎಂದಾದರೂ ಒಮ್ಮೆ ಹಿಂತಿರುಗಿನಿಮ್ಮ ಹೆಜ್ಜೆ ಗುರುತುಗಳನ್ನು ನೋಡಿಕೊಂಡಿದ್ದೀರಾ?ಅಲ್ಲಿರುವ ನೋವು, ಕಷ್ಟ, ಅಳು, ನಗುಪರದಾಟ, ಹೊಡೆದಾಟ, ಹಸಿವು, ಬೆವರುಎಲ್ಲವೂ ಅಲ್ಲೇ ಅಡಗಿರುವಾಗಸುಮ್ಮನೆ ಮುಂದೆ ಹೋಗುವುದು ಸರಿಯೇ? ಅವಕಾಶಗಳಿಗೇನು ಕಮ್ಮಿನಿಜ ಪ್ರತಿಭೆಗೆ ಅಭಿವ್ಯಕ್ತಿಸುವ ಚಾತುರ್ಯವಿದ್ದಮೇಲೆಕಲಿಯುವಾಗ ಬೇಕುಚಿಕ್ಕಪುಟ್ಟ ಹೆಜ್ಜೆಗಳು ಸವಾಲಿನ ರೂಪದಲ್ಲಿಸತತ ಪರಿಶ್ರಮದ ಜೊತೆಗೆಸಮಯ ಹೊಂದಾಣಿಕೆಯೇ ಗೆಲುವು ಕಲಿಯಲು ಹಂಬಲಿಸುಹಪಾಹಪಿಸು ನಿನ್ನನ್ನೇ ನೀನು ಕೆಳಗಿಳಿಸುಸೊನ್ನೆ ಎಂದರೆ ಅಂತ್ಯವಲ್ಲಅದು ಆದಿಯೆಂದು ತಿದ್ದಿ ತಿಳಿಸು ಕಾಣು, ಸದಾ ಜೀವಿಸುವ ದೊಡ್ಡ ದೊಡ್ಡ ಕನಸುಗಳನಿನ್ನದೇ ದಾರಿಯಲ್ಲಿ, ಪೋಷಿಸು ಅವುಗಳಎಲ್ಲದನ್ನು ರುಚಿ ನೋಡಿ, ಒಂದನ್ನು […]Read More

ಕಪ್ಪು ಚುಕ್ಕೆ

ಕಪ್ಪು ಚುಕ್ಕೆ ಪುಟ್ಟೇನಹಳ್ಳಿ ಎಂಬ ಸಣ್ಣ ಊರಿನಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದು ಇತ್ತು. ಒಂದು ದಿನ, ಐದನೇ ತರಗತಿಯ ಕ್ಲಾಸ್ ಟೀಚರ್ ಸಂಗಪ್ಪ ಮೇಸ್ಟ್ರು ತನ್ನ ತರಗತಿಗೆ ಪ್ರವೇಶಿಸಿ ತನ್ನ ವಿದ್ಯಾರ್ಥಿಗಳನ್ನು ಅಚ್ಚರಿಯ ಪರೀಕ್ಷೆಗೆ ಸಿದ್ಧರಾಗುವಂತೆ ಹೇಳಿದರು. ಪರೀಕ್ಷೆ ಇನ್ನೇನು ಪ್ರಾರಂಭವಾಗಲಿದೆ, ಪರೀಕ್ಷೆಯಲ್ಲಿ ಏನೆಲ್ಲಾ ಪ್ರಶ್ನೆಗಳಿರುತ್ತೋ ಎಂಬ ಚಿಂತೆಯಲ್ಲಿ ಮಕ್ಕಳೆಲ್ಲರೂ ತಮ್ಮ ಮೇಜುಗಳ ಮೇಲೆ ಆತಂಕದಿಂದ ಕಾಯುತ್ತಿದ್ದರು. ಪ್ರಾಧ್ಯಾಪಕರು ಎಂದಿನಂತೆ ಪರೀಕ್ಷೆಯ ಪತ್ರಿಕೆಗಳನ್ನು ಮಕ್ಕಳೆಲ್ಲರಿಗೂ ಹಸ್ತಾಂತರಿಸಿದರು. ವಿದ್ಯಾರ್ಥಿಗಳು ತಮಗೆ ಸಿಕ್ಕ ಪತ್ರಿಕೆಗಳನ್ನು ನೋಡಿ ಆಶ್ಚರ್ಯಕ್ಕೆ ಒಳಗಾದರು, […]Read More

ಮನೆ ಮನಗಳ ಬೆಳಕು – ದೀಪಾವಳಿ

ಮನೆ ಮನಗಳ ಬೆಳಕು – ದೀಪಾವಳಿ ದೀಪಾವಳಿ ಎಂದರೆ ಮೊದಲು ನೆನಪಾಗುವುದೇ ಮನೆಯ ಮತ್ತು ಮನದ ಕತ್ತಲು ಓಡಿಸುವ ಬೆಳಕಿನ ಹಬ್ಬ. ಕರುಣಾಳು ಬಾ ಬೆಳಕೇಮುಸುಕಿದೀ ಮಬ್ಬಿನಲಿಕೈ ಹಿಡಿದು ನಡೆಸೆನ್ನನು ಬಿ. ಎಂ. ಶ್ರೀಕಂಠಯ್ಯ ಬಿ.ಎಮ್.ಶ್ರೀ ಅವರ ಮೇಲಿನ ಪ್ರಸಿದ್ಧ ಸಾಲುಗಳು ಇಲ್ಲಿ ನೆನಪಾಗುತ್ತದೆ. ಇದೊಂದು ಹಬ್ಬವಷ್ಟೇ ಅಲ್ಲದೆ ಕತ್ತಲಿನಿಂದ ಬೆಳಕಿನೆಡೆಗೆ ಕರೆದೊಯ್ಯುವ ಒಂದು ಧನಾತ್ಮಕತೆಯ ಭಾವ. ಪ್ರತಿಯೊಂದು ಹಬ್ಬಕ್ಕೂ ಒಂದೊಂದು ಹಿನ್ನೆಲೆ ಇದೆ ಹಾಗೇ ಆಚರಿಸುವ ವಿಧಾನಗಳಿವೆ. ಆಚರಣೆಗಳು ಹೇಗೆ ಇದ್ದರೂ ಉದ್ದೇಶಗಳು ಮಾತ್ರ ಒಂದೇ. […]Read More

ಕಗ್ಗದ ಹಣತೆ – ಡಾ|| ಡಿ. ವಿ. ಗುಂಡಪ್ಪ

ಕಗ್ಗದ ಹಣತೆ – ಡಾ|| ಡಿ. ವಿ. ಗುಂಡಪ್ಪ “ಡಿ. ವಿ. ಗುಂಡಪ್ಪ” ನವರ ಹೆಸರು ಕೇಳಿದರೆ ಸಾಕು ನಮ್ಮಲ್ಲಿನ ಅಭೂತಪೂರ್ವ ಚೈತನ್ಯವೊಂದು ನಮಗೇ ಗೊತ್ತಿಲ್ಲದ ಹಾಗೆ ನಮ್ಮ ಮನಸ್ಸಿನಲ್ಲಿ ಕ್ರಿಯಾಶೀಲವಾಗುತ್ತದೆ. ಅವರು ರಚಿಸಿದ ಮಂಕುತಿಮ್ಮನ ಕಗ್ಗಗಳು ಅದೆಷ್ಟೋ ಜನರ ಜೀವನದಲ್ಲಿ ನಿರಾಸೆ ಎಂಬ ಕಾರ್ಮೋಡ ಸರಿಸಿ ಬೆಳಕನ್ನು ಚೆಲ್ಲಿದೆ. ನಮ್ಮ ಹಿಂದಿನ ಪೀಳಿಗೆಯ ಹಿರಿಯರು ಹಾಗು ಇಂದಿನ ಕಿರಿಯರು ಎಲ್ಲರಿಗೂ ಡಿ.ವಿ.ಜಿ.  ಹಾಗು ಅವರ ಕಗ್ಗಗಳ ಶಕ್ತಿಯೇನೆಂಬುದು ಗೊತ್ತು. ನಮ್ಮ ಹಿಂದಿನ ತಲೆಮಾರಿನವರು ಅದೆಷ್ಟೋ ಜನರು […]Read More

ಕನ್ನಡಕ್ಕಾಗಿ ಕೈಲಾಸಂ

ಕನ್ನಡಕ್ಕಾಗಿ ಕೈಲಾಸಂ ಅದೊಂದು ಇಂಗ್ಲೆಂಡಿನ ನೈಟ್ ಕ್ಲಬ್, ಅಲ್ಲಿದ್ದ ಹಾಡುಗಾರನೊಬ್ಬ CONSTANTINOPLE ಎಂಬ ಪದವನ್ನೇ ರಾಗವನ್ನಾಗಿಸಿ ಪ್ರತೀ ಪದವನ್ನು C-O-N-S-T-A-N-T-I-N-O-P-L-E ಎಂದು ಬಿಡಿಸಿ ಬಿಡಿಸಿ ಆಕರ್ಷಕ ಶೈಲಿಯಲ್ಲಿ ಹಾಡಿ ಎಲ್ಲರ ಚಪ್ಪಾಳೆಯನ್ನು ಗಿಟ್ಟಿಸಿದ. ನಂತರ ಅಲ್ಲಿ ಸೇರಿದ್ದ ಜನರ ಕುರಿತು “ನಾನು ಹಾಡಿದ ಹಾಗೆ ಸ್ಥಳದಲ್ಲೇ ಯಾವುದಾದರೂ ಪದದ ಮೇಲೆ ರಾಗ ಹಾಕಿ ಹಾಡುವ ದೈರ್ಯ ಯಾರಿಗಾದರೂ ಇದೆಯಾ? ಎಂದು ಸವಾಲು ಹಾಕಿದನಂತೆ. ಆಗ ನಮ್ಮ ಬೆಂಗಳೂರಿನಿಂದ ಇಂಗ್ಲೆಂಡಿಗೆ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದ ಒಬ್ಬ ಉತ್ಸಾಯಿ ಯುವಕರು ಮುಂದೆ […]Read More

ಕನ್ನಡವ ಕಲಿತಿಕೊ

ಕನ್ನಡವ ಕಲಿತಿಕೊ ಕನ್ನಡ ಕಲಿಯೊ ತಮ್ಮ,,ನೀ ಯಾವುರಾದರೆ ನಮಗೇನು.?ಕನ್ನಡವೇ ನಮ್ಮಮ್ಮ,,ಕಲಿತರೆ ನೀನು ನಮ್ಮವನು.!!೧!! ನಿಮ್ಮ ನಾಡಿನಲಿ ನೀನಾಗಿರುನಮ್ಮ ನಾಡಿದು ಬದಲಾಗು.ಕಷ್ಟಪಡುವೆ ನೀ ಚೆನ್ನಾಗಿರುಕನ್ನಡ ನಾಡಿಗೆ ಋಣಿಯಾಗು.!!೨!! ಕಷ್ಟಪಡುವ ಕೈಗಳನ್ನುಬಾಚಿ ಅಪ್ಪಿದೆ ಕರುನಾಡುಕೊಟ್ಟಿದೆ ಗಾಳಿ,ನೀರುಗಳನುಕನ್ನಡ ಕಲಿತು ಕುಣಿದಾಡು.!!೩!! ಕರುನಾಡೆಂದರೆ ಕೈಲಾಸಮಾಡು ಕನ್ನಡದ ಸಹವಾಸನಿನಗೆ ಇಲ್ಲ ಆಯಾಸ,,,ನಿನ್ನವರಿಗೆ ಇಲ್ಲ ಉಪವಾಸ.!!೪!! ಹೇಳಿ ಕೊಡಲು ನಾವು ಇರುವೆವುನಿಮ್ಮಯಾ ಜೊತೆ ಗೆಳೆಯರಾಗಿ.ಕನ್ನಡ ಕಲಿತರೆ ನಾವು ಬರುವೆವುನಿಮ್ಮ ಊರಿಗೆ,ನಿಮ್ಮವರಾಗಿ.!!೫!! ಹೇಗೆ ಪ್ರಸಾದ್ಕುದೂರು ಲಕ್ಕೇನಹಳ್ಳಿRead More