ಮಂಜಿನ ಹನಿ ಕಾವಳದ ರಾತ್ರಿ ಸರಿದಾಯ್ತುನಲ್ಬೆಳಕಿನ ನಸುಕು ಮೂಡಿತುಭುವಿಯ ಮೇಲೆ ಚಿತ್ತಾರ ಅರಳಿತು ಕಾನನದ ಅಂಚಿನಲಿ ನಡುಮಧ್ಯ ನಾಡಿನಲಿತರುಲತೆ ಪರ್ಣಗಳಲಿ ಹೊಳೆಯುತಿಹಬೆಲೆ ಕಟ್ಟಲಾರದ ಮುತ್ತುಗಳು ಪ್ರತಿದಿನವೂ ಪಕ್ಷಿ ಕೀಟಗಳಿಗಾಸರೆಬರಗಾಲದಲಿ ಪಶುಪಕ್ಷಿಗಳಿಗಾಸರೆಅವರೆ ತೊಗರಿ ಬೆಳೆಗಳ ಸೊಗಡಿನಾಸರೆ ನಿನ್ನಯ ಮುತ್ತಿನ ಪ್ರತಿ ಬಿಂದುಮೂಡಿಸಿದೆ ಮನದಲಿ ಹರ್ಷವಿಂದುನಿನ್ನ ರೂಪಕೆ ಶರಣು ಓ ಹಿಮಬಿಂದು ಸಿ.ಎನ್. ಮಹೇಶ್Read More
ಕತ್ತಲಿನಿಂದ ಬೆಳಕಿನೆಡೆಗೆ – ಉತ್ತರಕಾಶಿ ಕಾರ್ಯಾಚರಣೆ ಇದು ಬರೋಬರಿ ಹದಿನೇಳು ದಿನಗಳ ಕಾಲ ಪಾತಾಳದ, ಕಗ್ಗತ್ತಲಲ್ಲಿ ಸಿಲುಕಿದ 41 ಜನ ಕಾರ್ಮಿಕರ ಕಥೆ, ವ್ಯಥೆ ಹಾಗು ನಮ್ಮ ರಕ್ಷಣಾಪಡೆಯ ಯಶಸ್ವಿಗಾಥೆ. ಉತ್ತರಾಖಂಡದ ಉತ್ತರ ಕಾಶಿ ಜಿಲ್ಲೆಯ ಸಿಲ್ಕ್ಯಾರ ಬಡ್ ಕೊಟ್ ಸುರಂಗದಲ್ಲಿ ನಡೆದ ರಕ್ಷಣಾಪಡೆಯ ಕಾರ್ಯಾಚರಣೆ ನಿಜಕ್ಕೂ ರೋಚಕ. ಹೈದರಾಬಾದ್ ಮೂಲದ ನವಯುಗ ಇಂಜಿನಿಯರಿಂಗ್ ಕಂಪನಿಯು ರಾಷ್ಟ್ರೀಯ ಹೆದ್ದಾರಿ ನಿಗಮದ ಸಹಯೋಗದಲ್ಲಿ ಉತ್ತರಾಖಂಡದಲ್ಲಿನ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಯಾತ್ರಿಕರಿಗಾಗಿ ಸುಗಮ ಹೆದ್ದಾರಿ ರಸ್ತೆ ನಿರ್ಮಾಣದಲ್ಲಿ ತೊಡಗಿದ್ದು; […]Read More
ಮೋಡದ ಮರೆಯ ಬೆಳಕು ರವಿಕಿರಣವದು ತಿಣುಕಾಡಿದೆಮೋಡದ ಮರೆಯಿಂದ ಹೊರಬರಲು!ಬೆಳಕದು ಬಂಧನ ಬಿಡಿಸಿ ಬಂದಿದೆ..ಬುವಿಯ ಜೀವರಾಶಿಯ ಕಾಯಲು!! ಪ್ರತಿಭೆಯು ಪ್ರಭೆಯಂತೆ ಹೊಳೆಯಲುಅಹಮ್ಮಿನ ಮೋಡ ಸರಿಯಬೇಕು!ಟೀಕಿಸುವವರ ಬಿರುನುಡಿಯ ಎದುರಿಸಲು..ತಾಳ್ಮೆಯ ಗೋಡೆಯನೊಮ್ಮೆ ಮುರಿಯಬೇಕು!! ಬೆಳ್ಳಿಯ ಕಿರಣವು ಬೆಳ್ಮುಗಿಲಮೋಡದಿಂದ ಜಾರಿ ಧರೆ ಬೆಳಗುವಂತೆ!ಮಾತಿನ ಸಿಹಿ ಮೌನದ ಕಹಿಯ ಮೀರಿ..ಮನದೊಳಗೆ ಲಹರಿ ಮಿಂಚುವಂತೆ!! ಕಾನನದ ಹಸಿರು ಚಿಗುರಲುಹೊಂಗಿರಣದ ಬೆಳಕು ಬೇಕು!ಬೆಳ್ಳಿಮೋಡದಂಚಲಿ ದಿನಪ ನಗುತಿರಲು..ಜೀವಸಂಕುಲವದು ನಿತ್ಯ ಬೆಳೆಯಬೇಕು!! ಸುಮನಾ ರಮಾನಂದRead More
ರವಿರಶ್ಮಿ ನಡುನೆತ್ತಿಯಲಿ ನಿಂತ ಸೂರ್ಯನಪ್ರಭೆಯು ಭೂತಳವ ಹುಡುಕುತಿದೆರವಿಕಿರಣದಾಟಕ್ಕೆ ನೆರಳಿನ ನರ್ತನ ಹೊನ್ನ ನೇಸರನ ನೇರ ರಶ್ಮಿಯುಭೂ ಸ್ಪರ್ಷವ ಮಾಡಲು ಕೆಂಪಾಗಲುಇಳೆಯ ಒಡಲು ಹಸಿರಾಗುವುದು ಎಳೆ ಹಸಿರ ಗಿಡಬಳ್ಳಿಗಳು ಕಡುಬಣ್ಣಕೆ ತಿರುಗಿಭೂ ಒಡಲಾಳದ ಜೀವಜಲ ಗಗನ ಸೇರಿಬಾನಲ್ಲಿ ಕರಿಮೋಡವು ಮೂಡುವುದು ಇಳೆಯ ತಿರುಗಾಟದಿ ಚಂದಮಾಮನುಹಗಲಿರುಳು ಕ್ಷೀಣಿಸುತಲಿ ವೃದ್ದಿಸುತಿಹನುಪಕ್ಷಪಕ್ಷಕೂ ಕುಂದಿ ಬೆಳಗುತಿಹನು. ದಿನವೂ ಕಾಣುವ ನೇಸರನು ಅದೇ ಸೊಬಗಿನಲಿತಿರುಗಾಡುತಾ ಭೂಮಿಯ ಮೇಲೆ ಕೃಪೆಯಿರಿಸಿಕಣ್ಣು ಮುಚ್ಚಾಲೆಯಾಡುವನು ಮೋಡಗಳಲಿ ನೇಸರನಿದ್ದರ ಮಳೆಮಳೆಯಿದ್ದರೆ ಇಳೆ….ಇಳೆ ಮಳೆಗಳ ಒಡನಾಟದಲಿಬೆಳೆಯುತಿಹೆವು ನಾವು ಬೆಳೆ. ಸಿ.ಎನ್. ಮಹೇಶ್Read More
ಭಾಷೆ-ಬಾಂಧವ್ಯ ಮತ್ತು ಭರವಸೆ ‘ಭಾಷೆ’ ಯಾವುದೇ ಇರಲಿ ಅದು ಸಮುದಾಯಕ್ಕೆ ಅದ್ಭುತವಾದ ಬೆಳಕು. ಅದರ ಬೆಳಕಿನಲ್ಲಿ ಕೇವಲ ಬಾಹ್ಯರೂಪವನ್ನಷ್ಟೆ ಅಲ್ಲಅಂತರಂಗವನ್ನೂ ಕಾಣಬಹುದು. ಮನುಷ್ಯ ಸೃಷ್ಟಿಸಿದ ಅತ್ಯದ್ಭುತ ವಸ್ತು ಅಥವಾ ಸಂಗತಿಯೊಂದಿದ್ದರೆ ಅದು ಭಾಷೆಯೇ. ಭಾಷೆಯಿಂದಾಗಿಯೇ ಮನುಷ್ಯ ಸಂಸ್ಕತಿವಂತ ನಾಗರಿಕನಾಗಲು ಸಾಧ್ಯವಾಗಿದೆ. ನಾಲ್ಕೇ ಮಂದಿ ಮಾತಾಡುತ್ತಿರಲಿ, ನಾಲ್ಕು ಕೋಟಿ ಜನ ಮಾತನಾಡುತ್ತಿರಲಿ ಅದು ಭಾಷೆಯ ಮೂಲಕವೇ. ಯಾವುದೇ ಭಾಷೆಯೂ ಮೇಲಲ್ಲ ಅಥವಾ ಕೀಳಲ್ಲ. ‘ಭಾರತೀಯ ಭಾಷೆಗಳೆಲ್ಲವೂ ಅತ್ಯಂತ ಸಂಪದ್ಭರಿತ ಮತ್ತು ಸತ್ವಪೂರ್ಣ ಭಾಷೆಗಳು’. ಭಾರತದಲ್ಲಿ ಒಟ್ಟು 723 ಭಾಷೆಗಳಿದ್ದು, […]Read More
ಸಾಹಿತ್ಯ ಭೂತಕಾಲದಿಂದವರ್ತಮಾನದಲ್ಲಿನಬತ್ತದ ಕಣಜವೀ ಸಾಹಿತ್ಯ! ಪ್ರಚಲಿತ ವಿದ್ಯಮಾನವರೋಚಕವಾಗಿಸುವಕಥೆ, ಕಾದಂಬರಿ ಸಾಹಿತ್ಯ! ಉತ್ತಮೋತ್ತಮರಜೀವನ ಗಾಥೆಯಅರುಹುವ ಚರಿತ್ರೆ ಸಾಹಿತ್ಯ! ಜನಪದರ ಜೀವನಶೈಲಿಯ ತಿಳಿಸುವಜಾನಪದ ಸಾಹಿತ್ಯ! ನಗಿಸುತ್ತಲೇ, ಲೋಕದಡೊಂಕನ್ನು ತಿದ್ದುವವಿಡಂಬನಾ ಸಾಹಿತ್ಯ! ರವಿ ಕಾಣದ್ದನ್ನು ಕಂಡ ಕವಿ,ತಾನಿತರರಿಗುಣಿಸುವರಮ್ಯ ಕಾವ್ಯವೀ ಸಾಹಿತ್ಯ! ತಾ ನೋಡಿದ ಜಾಗಗಳಕಣ್ಣೆದುರಿಗೆ ಬಿಚ್ಚಿಡುವಪ್ರವಾಸ ಸಾಹಿತ್ಯ! ಚಿಣ್ಣರ ಲೋಕವನುಬಣ್ಣ ಬಣ್ಣಗೊಳಿಸುವಮಕ್ಕಳ ಸಾಹಿತ್ಯ! ಎಲ್ಲರ ಕುತೂಹಲವತಣಿಸಲೆಂದೇ ರಚಿಸುವವೈಜ್ಞಾನಿಕ ಸಾಹಿತ್ಯ! ಆಯಾ ಭಾಷೆಯಆಯಾ ಜನಾಂಗದಅಭಿವ್ಯಕ್ತಿ ಈ ಸಾಹಿತ್ಯ! ಶ್ರೀವಲ್ಲಿ ಮಂಜುನಾಥRead More
ಯೋಚಿಸಿ ಪ್ರೀತಿಸು ಮೋಸ ಮಾಡುವ ಮನಸು ಇದ್ದರೆನನ್ನ ಕಾಡಬೇಡ……ನಾನು ಬಡವನು, ಹೆಂಗೊ ಬದುಕಿರುವೆನನ್ನ ಕೊಲ್ಲಬೇಡ…..ಬದುಕು ಹಾಳುಮಾಡಬೇಡ. ಒಮ್ಮೆ ಪ್ರೀತಿಯು ಹೃದಯ ಸೇರಿದರೆಅಳಿಸಲಾಗದೆಂದು…..ಹೃದಯ ಸೇರಿದ ಪ್ರೀತಿಯ ಮರೆತುಬದುಕಲಾರೆ ಎಂದು……ಈ ಪ್ರೀತಿ, ಪ್ರೇಮ ಕೊಂದು. ನೀ ನನ್ನ ಬದುಕಿಗೆ ಬೆಳಕು ಚೆಲ್ಲುವದೀಪವಾಗಬೇಕು…..ಆ ಬೆಳಕಿನಲಿ ಬದುಕು ನೆಡೆಸುತನನ್ನ ಅರಿಯಬೇಕು……ನಾ ನಿನ್ನ ಅರಿಯಬೇಕು. ದುಡ್ಡು ಕಾಸಿನ ಆಸೆಯಿದ್ದರೆನನ್ನ ಮರೆಯಬೇಕು…..ಬೆವರು ಹರಿಸುತ, ನಾವು ದುಡಿಯುತಬದುಕು ನಡೆಸಬೇಕು…..ಪ್ರೀತಿಯ ಹಣತೆ ಹಚ್ಚಬೇಕು. ತಂದೆ ತಾಯಿಯು ನನಗೆ ದೇವರುಜೊತೆಗೆ ಬದುಕಬೇಕು….ಅವರ ಬದುಕನು ನಮಗೆ ಸವೆಸಿದರುಸೇವೆ ಮಾಡಬೇಕು…..ಅವರ ಋಣವು ತೀರಬೇಕು. […]Read More
ಸೃಜನಶೀಲತೆ ಕ್ಷೀಣಿಸುತ್ತಿದೆಯೇ ? ನಮ್ಮಲ್ಲಿ ಸೃಜನಶೀಲತೆಯ ಕೊರತೆ ಉಂಟಾಗಿದೆಯೆ? ಹೌದೆನ್ನುತ್ತದೆ ಎಷ್ಟೋ ಸಂಶೋಧನೆಗಳು. ಈಗಿನ ತಂತ್ರಜ್ಞಾನ ನಮ್ಮನ್ನು ಎಷ್ಟೊಂದು ಆವರಿಸಿಕೊಂಡಿದೆ, ನಾವು ಎಷ್ಟು ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದ್ದೇವೆ ಎಂದರೆ, ಉಸಿರಾಡುವಷ್ಟೇ ಅದು ಕೂಡ ಅವಶ್ಯಕ ಎನ್ನುವಷ್ಟು!. ಲೆಕ್ಕವಿಲ್ಲದಷ್ಟು ಸಾಮಾಜಿಕ ಜಾಲತಾಣಗಳು ನಮ್ಮ ಸೃಜನಶೀಲತೆಯನ್ನು ನುಂಗಿಹಾಕಿವೆ ಎಂದರೆ ತಪ್ಪಾಗಲಾರದು. ಈಗ ಶುರುವಾಗಿರುವ ಕೃತಕಬುದ್ಧಿಮತ್ತೆಯ ತಂತ್ರಜ್ಞಾನವಂತೂ ಮೊದಲು ಅಚ್ಚರಿ ಮೂಡಿಸಿ ಈಗ ಎಲ್ಲರನ್ನು ಬೆಚ್ಚಿ ಬೀಳಿಸುತ್ತಿದೆ. ಕುತ್ತಿಗೆಯವರೆಗಿನ ಯಾರದೋ ದೇಹವನ್ನು ಉಪಯೋಗಿಸಿ ಇನ್ನ್ಯಾರದೋ ತಲೆಯನ್ನು ಜೋಡಿಸಿ ಒಂದು ಚೂರು ಸಂಶಯ […]Read More
ಪ್ರಯೋಗಾತ್ಮಕ ಚಿತ್ರಗಳ ನಿರ್ದೇಶಕ – ಜಯತೀರ್ಥ ರಂಗಭೂಮಿಯ ಹಿನ್ನಲೆಯಲ್ಲಿ ಬಂದಂತಹ ಭರವಸೆಯ ಕನ್ನಡದ ಸಿನಿಮಾ ನಿರ್ದೇಶಕರಲ್ಲಿ ಜಯತೀರ್ಥರವರು ಸಹ ಒಬ್ಬರು. ಮುಂದಿನ ವಾರ ಬಿಡುಗಡೆಗೊಳ್ಳುತ್ತಿರುವ ಇವರು ನಿರ್ದೇಶಿಸಿರುವ “ಕೈವ” ಚಿತ್ರದ ಟೀಸರ್ ಎಲ್ಲೆಡೆ ಸದ್ದು ಮಾಡುತ್ತಿದೆ. ರೆಟ್ರೋ ಶೈಲಿಯಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ನಿರ್ದೇಶಕರು 1983 ರ ಕರಗ ಉತ್ಸವದಲ್ಲಿ ನೆಡೆದ ಒಂದು ಪ್ರಮುಖ ಘಟನೆಯೊಂದನ್ನು ಆಧಾರವಾಗಿಟ್ಟುಕೊಂಡು ಆ ಘಟನೆಯ ಪಾತ್ರಧಾರಿಗಳನ್ನು ಭೇಟಿ ಮಾಡಿ ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದಾರೆ. 2020 ರಲ್ಲಿ “ಆಕೃತಿ” ಕನ್ನಡ ಅಂತರ್ಜಾಲ ಪತ್ರಿಕೆಗೆ […]Read More
ಕನ್ನಡ ಮಾಣಿಕ್ಯ – ಗುಂಡ್ಲು ಪಂಡಿತ ರಾಜರತ್ನಂ ಚಿಕ್ಕಂದಿನ ನಮ್ಮ ಶಾಲೆಯ ದಿನಗಳಲ್ಲಿ ನಮ್ಮ ಪಠ್ಯ ಪುಸ್ತಕದಲ್ಲಿದ್ದ ‘ಒಂದು ಎರಡು ಬಾಳೆಲೆ ಹರಡು’, ಹತ್ತು ಹತ್ತು ಇಪ್ಪತ್ತು ತೋಟಕೆ ಹೋದನು ಸಂಪತ್ತು’, ‘ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ’, ‘ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ’, ಮುಂತಾದ ಪದ್ಯಗಳು ಇನ್ನೂ ಸಹ ನೆನಪಿನಲ್ಲಿ ಇವೆ. ಕಾಲೇಜಿನ ದಿನಗಳಲ್ಲಿ ಕೇಳಿದ ‘ಬೆಳದಿಂಗಳ್ ರಾತ್ರಿಲಿ’, ‘ಹೆಂಡ ಹೆಂಡ್ತಿ ಕನ್ನಡ್ ಪದಗೋಳ್’ ಈಗಲೂ ಕೇಳುತ್ತಲೇ ಇರುತ್ತೀವಿ. ಇಂತಹ ಪದಗಳ […]Read More