ಬಯಲು ಆಲಯದ ಶ್ರೀ ಸೌತಡ್ಕ ಮಹಾಗಣಪತಿ

ಬಯಲು ಆಲಯದ ಶ್ರೀ ಸೌತಡ್ಕ ಮಹಾಗಣಪತಿ ಸೌತಡ್ಕ ಏನಪ್ಪಾ ಈ ಹೆಸರು ಒಂಥರಾ ವಿಚಿತ್ರವಾಗಿದೆಯಲ್ಲಾ ಎಂದು ಎಣಿಸಬಹುದಾದರೂ ಹೆಸರೇ ಹೇಳುವಂತೆ ಇದು ಸೌತೆಯ ಬಯಲು (ಅಡ್ಕ) ಎಂದು ಹೇಳಬಹುದು. ಸಾಮಾನ್ಯವಾಗಿ ಎಲ್ಲಾ ದೇವರುಗಳು ದೇವಸ್ಥಾನದ ಒಳಗಡೆ ಪ್ರತಿಷ್ಠಾಪನೆಗೊಂಡು ಪೂಜಿಸಲ್ಪಟ್ಟರೆ ಇಲ್ಲಿನ ಗಣಪ ಬಯಲು ಆಲಯದಲ್ಲಿ ಪ್ರತಿಷ್ಠಾಪನೆ ಕೊಂಡಿದ್ದಾನೆ. ಹೌದು ಈ ವಿಶಿಷ್ಟವಾದ ಬಯಲು ಆಲಯದ ಗಣಪತಿ ಇರುವುದು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಹೋಬಳಿಯ ಸೌತಡ್ಕ ಎಂಬ ಗ್ರಾಮದಲ್ಲಿ. ಇದೊಂದು ಹಿಂದುಗಳ […]Read More

ಮೌನ – ಮಾತು

ಮೌನ – ಮಾತು ನಿನ್ನ ಮೌನವಿಂದುಹೆಬ್ಬಂಡೆಯಂದದಲಿಎನ್ನ ಮನದ ಮೇಲೆತಾ ಕುಳಿತು ನನಗೆಉಸಿರುಗಟ್ಟಿಸುತಿದೆನಿನ್ನ ಮಾತಿನಿಂದದನುಅತ್ತ ಸರಿಸಲಾರೆಯಾ ? ನಿನ್ನ ಸುಡು ಮೌನನನ್ನೊಡಲ ತುಂಬಹರಡುತ್ತ ಉರಿವ,ಅಗ್ನಿಯಂದದಿ ತಾಧಗಧಗಿಸುತ್ತಲಿದೆನಿನ್ನ ಸವಿಮಾತಿನಮಳೆಯಿಂದಲದನುತಣಿಸಲಾರೆಯಾ ? ನಿನ್ನ ಮೌನವ್ರತವಕಂಡು ಮೂಕವಾಗಿಕೊರಗಿ, ಸೊರಗುತ್ತಮಂಕಾಗಿ ಕುಳಿತನನ್ನ ಸವಿಮನಕೆ ನಿನ್ನಸಿಹಿ ಮಾತಿನ ಅಮೃತಸೇಚನವಿತ್ತು ಮತ್ತೆನೀನದ ನಗಿಸಲಾರೆಯಾ ? ಶ್ರೀವಲ್ಲಿ ಮಂಜುನಾಥRead More

ಪಾಶ್ಚಿಮಾತ್ಯ ಸಂಸ್ಕೃತಿಯ ಮೋಹ

ಪಾಶ್ಚಿಮಾತ್ಯ ಸಂಸ್ಕೃತಿಯ ಮೋಹ ನಮ್ಮ ಭಾರತೀಯ ಸಂಸ್ಕೃತಿ ಅತ್ಯಂತ ಶ್ರೀಮಂತವಾದದ್ದು. ಕಲೆ, ಸಂಗೀತ, ನೃತ್ಯ, ಸಾಹಿತ್ಯ, ಸಂಸ್ಕೃತಿಯಲ್ಲಿ, ಹಾಗೆಯೇ ಅಲ್ಲಲ್ಲಿ ಈಗಲೂ ಕಾಣಬಹುದಾದ ಅವಿಭಕ್ತ ಕುಟುಂಬಗಳು, ಅಲ್ಲಿ ಕಂಡು ಬರುವ ಒಗ್ಗಟ್ಟು, ಅಂಥಹ ಒಗ್ಗಟ್ಟಿನಿಂದ ಒಟ್ಟಿಗೆ ಆಚರಿಸುವ ಆಚಾರ ವಿಚಾರಗಳು ಅಂದಿನಿಂದ ಇಂದಿನವರೆಗೂ ಭಾರತೀಯರಾದ ಪ್ರತಿಯೊಬ್ಬರಲ್ಲೂ ತನ್ನತನ ಉಳಿಸುವಲ್ಲಿ ಯಶಸ್ವಿಯಾಗಿದೆ. ಬೇರೆ ಬೇರೆ ದೇಶದವರೂ ಸಹ ಭಾರತೀಯ ಸಂಸ್ಕೃತಿಗೆ ಮರುಳಾಗಿ ಅವರೂ ಅಳವಡಿಸಿ ಕೊಂಡಿರುವುದು, ನಮಗೆ ಹೆಮ್ಮೆಯ ಸಂಗತಿ. ಆದರೆ ನಾವು ನಮ್ಮ ಸಂಸ್ಕೃತಿಯನ್ನೇ ಎಲ್ಲೋ ಮರೆಯುತ್ತಿದ್ದೇವೆ. […]Read More

ಮನೆದೇವತೆ

ಮನೆದೇವತೆ ಶರಣಾದೆ ನಿನ್ನಲ್ಲಿ ಓ ಮುದ್ದು ಮಡದಿಇರಬೇಕು ನೀನೆಂದು ಈ ನನ್ನ ಮನದಿ!! ಪಲ್ಲವಿ!! ನನಗಾಗಿ ನೀನು ತವರನ್ನು ಮರೆತೆನೀನಾದೆ ನನ್ನ ಮನೆಯಲ್ಲಿ ಹಣತೆನಿನಗಾಗಿ ನಾನೀಗ ಕವಿಯಾದೆನುಏಳೇಳು ಜನುಮಕ್ಕು ಜೊತೆಬರುವೆನು.!!೧!! ಹಗಲಿರುಳು ಆಯಾಸ ನಿನಗಾಗದೆನಿನ ಪ್ರೀತಿ ವಾತ್ಸಲ್ಯ ನಮಗೆಯಿದೆನೀ ತಾನೆ ನನ್ನ ಮನೆದೇವತೆ,,ನಿನಗಾಗಿ ಬರೆದೆ ಈ ನನ್ನ ಕವಿತೆ !!೨!! ತಾಯಂತೆ ನನ್ನನ್ನು ಹಾರೈಸುವೆಮಗುವಂತೆ ನೀ ನನ್ನ ಮುದ್ದಾಡುವೆನಾ ಎಡವಿ ಬಿದ್ದಾಗ ಕೈಹಿಡಿಯುವೆಎನಾದರೂನು ಜೊತೆ ನೆಡೆಯುವೆ.!!೩!! ನನ ಮುದ್ದು ಮಗುವಿಗೆ ತಾಯಾಗುತಮರುಜನ್ಮದ ನೋವು ನೀ ಸಹಿಸುತನೋವೆಲ್ಲ ಮರೆತು […]Read More

ದುಸ್ತರ ರಾತ್ರಿ

ದುಸ್ತರ ರಾತ್ರಿ ಕಾವಳದ ರಾತ್ರಿಯಲಿ ಬೀದಿದೀಪಗಳ ಸಾಲಿನಲಿಅಲ್ಲೊಂದು ಇಲ್ಲೊಂದು ವಾಹನಗಳು ಸಾಗುತಲಿಪರವೂರಿಗೆ ಹೋಗುವ‌ ವಾಹನಗಳ ಭರಾಟೆ ನಿಲ್ದಾಣವೊಂದು ಸಿಗಲು ನಡುರಾತ್ರಿಯಲಿಓಡಾಡುವ ಹೆಂಗಳೆಯರ ಕಂಡು ಸ್ವಗತದಲಿಅದೇನು ರಾಜಕಾರ್ಯವೋ ಎನುವ ಮನ ಅದೆಲ್ಲಿಂದ ಬರುವರೋ ಅದೆಲ್ಲಿಗೆ ಹೋಗುವರೋಎತ್ತ ನೋಡಿದರೂ ನಡುವಯಸ್ಸಿನ ಹೆಂಗಳೆಯರುಮಕ್ಕಳ ನೋಡಲು ಹೋಗುವ ಅಮ್ಮಂದಿರೇ ಖಾಲಿ ಇದ್ದ ನಿಲ್ದಾಣದಲಿ ಅದೇನೋ ಗೊಂದಲಎಲ್ಲಿದ್ದರೋ ಇವರು ಬಸ್ಸನ್ನು ಏರುವ ಹಂಬಲತಡವಾಗಿ ಬಂದ ಬಸ್ಸನ್ನು ಶಪಿಸುವ ಚಪಲ ಹಾಗೆ ನೋಡಿದರೆ ನನದೂ ರಾಜ ಕಾರಣವೇನಲ್ಲಜಗವೆಲ್ಲ ನನ್ನ ಸುತ್ತಲೇ ಸುತ್ತುತ್ತಿಲ್ಲಅವರವರ ಕಾರಣ ಅವರಿಗೇ ಹಿರಿದಲ್ಲ… […]Read More

ಒಂಟೆ ಮತ್ತು ನರಿ

ಒಂಟೆ ಮತ್ತು ನರಿ ಒಂದು ದಟ್ಟಾರಣ್ಯದಲ್ಲಿ ಒಂದು ಒಂಟೆ ಮತ್ತು ನರಿ ಸ್ನೇಹಿತರಾಗಿದ್ದವು. ಇವುಗಳ ಸ್ನೇಹವು ಕಾಡಿನ ಇತರ ಪ್ರಾಣಿಗಳ ಅಸೂಯೆಗೆ ಕಾರಣವಾಗುವಷ್ಟು ಗಾಢವಾಗಿತ್ತು. ಇವೆರಡೂ ಒಬ್ಬರನ್ನೊಬ್ಬರು ಬಿಟ್ಟು ಎಲ್ಲೂ ಹೋಗುತ್ತಿರಲಿಲ್ಲ. ಆಹಾರವನ್ನು ಅರಸಿಕೊಂಡು ಇವುಗಳು ಜೊತೆಗೇ ಹೋಗಿ ಹಂಚಿಕೊಂಡು ತಿನ್ನುತ್ತಿದ್ದವು. ಒಂದು ವರ್ಷ ಕಾಡಿನಲ್ಲಿ ಇವುಗಳಿಗೆ ತಿನ್ನಲು ಏನೂ ಸಿಗದಂತಹ ಪರಿಸ್ಥಿತಿ ಬಂದು ಪ್ರಾಣಿಗಳು ನಾಡಿನ ಕಡೆಗೆ ಆಹಾರ ಅರಸಿಕೊಂಡು ಹೋಗಲಾರಂಭಿಸಿದವು. ಮಿತ್ರರಾಗಿದ್ದ ಒಂಟೆ ಮತ್ತು ನರಿಯೂ ಆಹಾರವನ್ನು ಅರಸಿಕೊಂಡು ಕಾಡಿನ ಪಕ್ಕದಲ್ಲಿದ್ದ ಹೊಲಕ್ಕೆ ಹೋಗಲು […]Read More

ಹೆಣ್ಣು ಮತ್ತು ಆರೋಗ್ಯ – 9

ಹೆಣ್ಣು ಮತ್ತು ಆರೋಗ್ಯ – 9 ಒಂದರಿಂದ ನಾಲ್ಕರವರೆಗೆ ಮಕ್ಕಳಿಗೆ ಸಾಮಾನ್ಯವಾಗಿ ಬರುವಂತಹ ಕಾಯಿಲೆಗಳು, ಅದಕ್ಕೆ ನಾವು ಮನೆಯಲ್ಲೇ ಮಾಡಬಹುದಾದಂತಹ ಚಿಕಿತ್ಸೆಗಳು ಇದರ ಬಗ್ಗೆ ಈ ಸಂಚಿಕೆಯಲ್ಲಿ ತಿಳಿಯೋಣ. ನಮ್ಮ ಮಕ್ಕಳಿಗೆ ವೈರಸ್ಗಳಿಂದ ಬರುವಂತ ನೆಗಡಿಗೆ ಆಂಟಿಬೈಯೊಟಿಕ್ ನಿಂದ ಪ್ರಯೋಜನವಿಲ್ಲ, ಹೆಚ್ಚಾಗಿ ನೀರು ಕುಡಿಸುವುದು, ಮಕ್ಕಳಿಗೆ ವಿಶ್ರಾಂತಿ ಕೊಡುವುದು, ಅವರನ್ನು ಬೆಚ್ಚಗೆ ಇಡುವುದು, ಬಿಸಿ ನೀರು ಕೊಡುವುದು ಹಾಗೂ ಬಿಸಿಯಾದ ಸೂಪ್ ತಯಾರಿಸಿ ಕೊಡುವುದು, ಶ್ವಾಸಕೋಶ ತೆರೆಯುವಂತೆ ಹಬೆಯ ಕೊಡುವುದು ಜ್ವರ ಇದ್ದರೆ ಜ್ವರದ ಔಷಧಿ ಕೊಡುವುದು, […]Read More

ಭ್ರಷ್ಟರ ಸಂತೆ

ಭ್ರಷ್ಟರ ಸಂತೆ ನಮ್ದೆ ದುಡ್ಡು,ನಮ್ದೆ ಕಾಸು ತೆರಿಗೆಯ ಹಣಚುನಾವಣೆ ಬಂದ್ರೆ ಸಾಕು ಜಣ್ ಜಣಾ ಜಣ!! ಪಲ್ಲವಿ!! ಮನೆತನಕ ಬರುತಾರೆ ಹುಡುಕೊಂಡು,,ಅದು ಮಾಡ್ತಿನಿ, ಇದು ಮಾಡ್ತಿನಿ ಎನುಕೊಂಡು,,ಗೆದ್ಮೆಲೆ ಮಾಡೋದು ಪುಟ್ಗೊಸಿ,,,,ಗೆಲ್ಲೋದು ಜನಗಳನು ಯಾಮಾರ್ಸಿ!!೧!! ಇವರಿಂದ ಹುಟ್ಟಿದ್ದೆ ಈ ಸುಳ್ಳು,,ಕೊಡುವಂತ ಭರವಸೆಯು ಬರಿ ಪೊಳ್ಳುಅಧಿಕಾರದ ಆಸೆಗೆ ಬರುತಾರೆ,,,ಆ ಪಕ್ಷ, ಈ ಪಕ್ಷ ಎನುತಾರೆ.!!೨!! ಆ ಯೋಜನೆ, ಈ ಯೋಜನೆ ತರುತಾರೆ,,ನಾ ಕೊಟ್ಟೆ,ನಾ ಕೊಟ್ಟೆ ಎನುತಾರೆಅದರಲ್ಲು ಕೊಳ್ಳೇನ ಹೊಡಿತಾರೆಪ್ರಜೆಗಳಿಗೆ ಟೋಪಿನ ಇಡುತಾರೆ.!!೩!! ಜಾತಿಯ ಹೆಸರಲ್ಲಿ ಇವರಾಟಧರ್ಮಕ್ಕು ಕೊಡುತಾರೊ ಬಲುಕಾಟಯುವಜನರ ಬದುಕಲ್ಲಿ […]Read More

ವಿಧುರನ ಸತ್ಯ ಮತ್ತು ಧರ್ಮ

ವಿಧುರನ ಸತ್ಯ ಮತ್ತು ಧರ್ಮ ಸತ್ಯ ಮತ್ತು ಧರ್ಮದ ಆಡಳಿತಕ್ಕೆ ಹೆಸರಾಗಿದ್ದ ವಿಧುರನು ದೃತರಾಷ್ಟ್ರನ ಆಸ್ಥಾನದ ಮಂತ್ರಿಯಾಗಿದ್ದು, ದೃತರಾಷ್ಟ್ರನ ಮಗನಾದ ದುಶ್ಶಾಸನನು ತುಂಬಿದ ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣ ಮಾಡುತ್ತಿದ್ದಾಗ ಅದನ್ನು ವಿರೋಧಿಸಿ ಕೌರವನ ಸಭೆಯನ್ನು ಧಿಕ್ಕರಿಸಿ ಹೊರನಡೆದ ದಕ್ಷ ಆಡಳಿತಗಾರನಾಗಿದ್ದ. ಈತನ ಸತ್ಯ ಮತ್ತು ಧರ್ಮದ ನಡೆಯಿಂದ ಶ್ರೀಕೃಷ್ಣನ ವಿಶ್ವಾಸವನ್ನೂ ಈತ ಗಳಿಸಿದ್ದ. ಹಸ್ತಿನಾವತಿಯ ಅಧಿಕಾರಕ್ಕಾಗಿ ಧುರ್ಯೋಧನನು ಪಾಂಡವರನ್ನು ಮೋಸದಿಂದ ಕೊಲ್ಲಲು ಹಲವು ಕುಟಿಲ ತಂತ್ರಗಳನ್ನು ಹೆಣೆಯುತ್ತಾನೆ. ಆದರೆ ಮಹಾತ್ಮ ವಿಧುರನಿಗೆ ತನ್ನ ಗುಪ್ತಚರರ ಸಹಾಯದಿಂದ ದುರ್ಯೋಧನನು […]Read More

ಹೆಣ್ಣು ಮತ್ತು ಆರೋಗ್ಯ – 8

ಹೆಣ್ಣು ಮತ್ತು ಆರೋಗ್ಯ – 8 ಒಂದು ವರ್ಷದವರೆಗಿನ ಮಗುವಿನ ಬೆಳವಣಿಗೆ ಹಾಗೂ ಚಟುವಟಿಕೆ ಮಗುವಿನ ಮುಂದಿನ ಬೆಳವಣಿಗೆ, ಮಗು ಸುರಕ್ಷಿತವಾದ ವಾತಾವರಣದಲ್ಲಿ,ಪೌಷ್ಟಿಕ ಆಹಾರ ತೆಗೆದುಕೊಳ್ಳುವುದರ ಮೇಲೆ ನಿರ್ಧರಿತವಾಗುತ್ತದೆ. ಮಗು ಹುಟ್ಟಿದಾಗಲೇ ಅದಕ್ಕೆ ಬಿಸಿಜಿ ವ್ಯಾಕ್ಸಿನ್ ಅನ್ನು ಹಾಕಿರುತ್ತಾರೆ. ಮತ್ತೆ ಒಂದು ತಿಂಗಳು, ಎರಡು ತಿಂಗಳು, ಮೂರು ತಿಂಗಳು ಅವಧಿಯಲ್ಲಿ ಡಿಪಿಟಿ, ಹೆಪಟೈಟಿಸ್, ಪೋಲಿಯೋ ಈ ವ್ಯಾಕ್ಸಿನ್ ಗಳನ್ನು ಹಾಕುತ್ತಾರೆ. ವ್ಯಾಕ್ಸಿನ್ಗಳನ್ನು ಹಾಕಿದಾಗ ಮಗುವಿಗೆ ಸ್ವಲ್ಪ ಜ್ವರ ಬರುವುದು ಸಾಮಾನ್ಯ. ಆಗ ಮಗುವಿಗೆ ಜ್ವರದ ಔಷಧಿಯನ್ನು ಡ್ರಾಪ್ಸ್ […]Read More