ಅಸಹಾಯಕತೆ ಮಲಗಿದಲ್ಲೇ ಮಲಗಿರುವ ರೋಗಿಅವನ ಕಂಡು ಎಲ್ಲರೂ ಮರುಗಿನೋಡುತಿಹರು ಎಲ್ಲರೂ ತಿರುತಿರುಗಿ ಇತ್ತ ರೋಗಿಯ ಮನದಲ್ಲಿ ಕಾಡುತಿದೆ ನೋವೊಂದುಕೈಕಾಲು ಆಡದೇ ಮಾತು ಹೊರಡದೇತಲೆಯಾಡಿಸಲಾಗದೇ ನೋವುಂಡು ಪಿಳಿ ಪಿಳಿ ಕಣ್ಣು ಬಿಡುತಲಿ ಅತ್ತಿತ್ತ ನೋಡುತಿರೆದಪ್ಪನೆಯ ನೊಣವೊಂದು ಮೂಗಿನ ಮೇಲೆ ಕುಳಿತುಅಣಕಿಸುತಿದೆ ನನ್ನೇನು ಮಾಡುವೆ ನೀನು ಎಂದು ಕಿವಿ ಪಕ್ಕದಲ್ಲಿ ಸೊಳ್ಳೆಗಳ ಝೇಂಕಾರವ ತಾಳದೇದಪ್ಪಗಾತ್ರದ ನೊಣವ ಓಡಿಸಲಾರದೇಯಾರನ್ನೂ ಕರೆಯಲಾರದೇ ರೋಧಿಸುತಿದೆ ಮನ ನೂರೆಂಟು ತಂತಿಗಳು ಬಿಗಿದಿವೆ ನನ್ನನ್ನುಸೂಜಿಗಳು ಮಾಡಿವೆ ತೂತು ಮೈಯನ್ನುಮನವಾಗಿದೆ ಹಣ್ಣು ಹಣ್ಣು ಇಷ್ಟಾದರೂ ಮನದಲಿ ಮತ್ತೆ ಓಡಾಡುವಾಸೆಮಕ್ಕಳಲಿ […]Read More
ಧಾರಿಣಿ… ಅಂದು ಭಾವಗಳ ಮಳೆಯಲಿತೋಯ್ದು ಹನಿಗಳು ತೊಟ್ಟಿಕ್ಕಿದಾಗನಿನ್ನದೇ ನೆನಪು.. ಮಳೆ ಎಂದರೆನಿನ್ನ ಮಡಿಲಲಿ ನಾ ಮಲಗಿಉಂಡ ಮಮತೆಯ ಸಾಮೀಪ್ಯ ನನ್ನೊಳಗೆ ನೀ ಆವರಿಸಿಜೀವರಸ ಮೈಯೆಲ್ಲಾ ಹರಿದಾಗಆತ್ಮಸಾಂಗತ್ಯದ ಅನುಭೂತಿ.. ನಿನ್ನೊಳಗೆ ಜೀವ ಮಿಸುಕಿದೇಹವೆಲ್ಲಾ ಜೀಕಿದಾಗಹೃದಯದ ಮಾತುಗಳು ನರ್ತಿಸಿ.. ಮುದುಡಿದ್ದ ಕನಸುಗಳುಕನವರಿಕೆಗಳು ಜೀವತಾಳಿನಿನ್ನ ಮುಂಗುರುಳ ನೇವರಿಸಿದವು ನಿನ್ನೆದೆಯ ನಡುವಲ್ಲಿಹರಿದ ಬಿಸಿಯುಸಿರುಕರುಳಬಳ್ಳಿಯ ಸಂಬಂಧದ ಸಾಕ್ಷಿಪ್ರಜ್ಞೆ.. ಕೊನೆಗೂ ನನ್ನ ಭಾವದಹನಿಗಳೆಲ್ಲಾ ಕೂಡಿ ನದಿಯಾಗಿಹರಿದು ಕಾವ್ಯಗಂಗೆಯಾದಾಗ ನನಗನ್ನಿಸಿದ್ದು… ಹೆಣ್ಣೆಂದರೆ ಕೇವಲ ಹೆಣ್ಣಲ್ಲಅಕ್ಕನ ಅಕ್ಕರೆ,ಅಮ್ಮನ ಆರೈಕೆಬಿಕರಿಯಾಗುವ ಅಂಗಡಿಯಲ್ಲ.. ದೇಹವೇ ದೇಗುಲವಾಗಿಚಿಮ್ಮಿದ ಜೀವಚೈತನ್ಯ!!ಅರಿತೂ ಅರಿಯದವಳು. ಅರಿಯದೇ ಆಸರೆಯಾದವಳುಕತ್ತಲೆಯ […]Read More
ಕಂಬನಿಯ ಬೆಲೆ ಮನದಿ ನೋವು ಮಡುಗಟ್ಟಿರೆನಿರತ ಹರಿವುದು ಕಂಬನಿಧಾರೆ!ಮನದ ಭಾವ ತಟಸ್ಥವಾಗಿರೆ..ನೋವೆಲ್ಲ ಕಂಗಳಲಿ ಸೆರೆ!! ಹೆಣ್ಣಿನ ಕಂಬನಿಯ ಬೆಲೆಯಅರಿತವರಾರು ಈ ವಿಶಾಲ ಜಗದಿ!ಕಣ್ಣೊರೆಸುವವರು ಕೃತಕತೆಯಲಿ..ತಿಳಿವರೇನವಳ ಹೃದಯದ ಬೇಗುದಿ!! ಕಂಗಳ ಅಂಚಲಿ ಜಾರಿದ ಕಂಬನಿಹೇಳಿದೆ ನೂರೊಂದು ಕಥೆಯ!ಪುಟದಲಿ ಬರೆಯಲಾರದು ಲೇಖನಿ..ಅವಳ ಮನದಲಿರುವ ವ್ಯಥೆಯ!! ಅಶ್ರುಧಾರೆ ಕೆನ್ನೆಗಿಳಿಯಲುಇಹುದು ನೂರು ದಾರಿ!ಕಂಬನಿ ಒರೆಸುವ ಕರಗಳಿರಲು..ನೋವು ಕಲಿವುದು ನಗುವ ಪರಿ!! ಸುಮನಾ ರಮಾನಂದRead More
“ಅಕ್ಷರ ಸಿಂಗಾರೋತ್ಸವ” ವರ್ಣಮಾಲೆಯ ಕಲಾಕೃತಿಗಳು ಪ್ರದರ್ಶನ : ಅಕ್ಷರ ಸಿಂಗಾರೋತ್ಸವಸ್ಥಳ : ಆರ್ಟ್ ಗ್ಯಾಲರಿ, ಯುವಪಥ ರಸ್ತೆ,ಜಯನಗರ ಬೆಂಗಳೂರುದಿನಾಂಕ : ನವೆಂಬರ್ 30 ರ ವರೆಗೂ ಕನ್ನಡವನ್ನು ಪ್ರೀತಿಸಲು ಸಾವಿರ ಕಾರಣಗಳಿವೆ!ಅದರಲ್ಲೊಂದು ಪ್ರಮುಖವಾದದ್ದು ಸುಂದರ ಬರವಣಿಗೆ! ಕನ್ನಡದಷ್ಟು ಸುಂದರವಾಗಿ ಬರೆಯಲು ಬೇರೆ ಬಾಷೆಯೇ ಇಲ್ಲವೇನೋ ಅನ್ನುವಷ್ಟು ಅಭಿಮಾನ! ಬೆಂಗಳೂರಿನ ಜಯನಗರದ ಯುವಪಥ ರಸ್ತೆಯಲ್ಲಿರುವ ಆರ್ಟ್ ಗ್ಯಾಲರಿಯಲ್ಲಿ “ಅಕ್ಷರ ಸಿಂಗಾರೋತ್ಸವ” ದ ಪ್ರದರ್ಶನ ನೆಡೆಯುತ್ತಿದೆ. ಕನ್ನಡ ನಾಡು ನುಡಿ, ಇತಿಹಾಸ,ಪರಂಪರೆ, ಕಾವ್ಯ , ಸಾಹಿತ್ಯದೊಂದಿಗೆ ಕನ್ನಡ ಅಕ್ಷರಮಾಲೆಯನ್ನೇ ಕಲಾಕೃತಿಗಳಾಗಿ […]Read More
ಮೆರೆಯಲಿ ಕನ್ನಡತನ ನಮ್ಮ ನಾಡು ಕನ್ನಡ,ನಮ್ಮ ಭಾಷೆ ಕನ್ನಡ|ನಮ್ಮ ನುಡಿಯೂ ಕನ್ನಡನಮ್ಮ ಅಂಕೆಯೂ ಕನ್ನಡ|| ನೆರೆ ಹೊರೆಯವರು ಬರುತಿಹರುಕನ್ನಡವಾ ಕಲಿಯುತಿಹರು|ಪರರಿಗೂ ಕನ್ನಡವ ಕಲಿಸುತಿಹರುಕನ್ನಡದೀ ವ್ಯವಹರಿಸುತಿಹರು|| ಎಲ್ಲರಲೂ ಮೆರೆಯುತಿರಲಿ,ಕನ್ನಡತನ ಹಬ್ಬುತ್ತಿರಲೀ|ಕನ್ನಡದ ಸೌಗಂಧ ಸೂಸುತಿರಲೀ|ಕನ್ನಡ ಕಸ್ತೂರಿ ಘಮಘಮಿಸುತಲಿರಲೀ|| ದೇಗುಲಗಳಲೀ ಮಂತ್ರಗಳು ಕನ್ನಡದಲ್ಲಿರಲೀ!ನ್ಯಾಯಾಂಗದಲಿ ಕನ್ನಡವು ಸ್ಥಿರವಾಗಿರಲೀ|ವಕೀಲರು ಕನ್ನಡದಲ್ಲಿ ವಾದ ಮಂಡಿಸಲಿನಾಗಶಯನ ಒಲಿಯವ ಆಗಲೀ|| ನಾಗರಾಜು.ಹಬೆಂಗಳೂರುRead More
ಸಂಗೀತ – ಸಮರ್ಪಣೆ ಭಾಗ 2 ಒಮ್ಮೆಯಾದರೂ ತಮಗೆ ಇಷ್ಟವಾದ ಗೀತೆಯನ್ನು ಗುನುಗದೆ ಇರುವವರು ತುಂಬಾ ವಿರಳ. ಪ್ರತಿಯೊಂದು ಸಂದರ್ಭಕ್ಕೂ , ಪ್ರತಿಯೊಂದು ಭಾವನೆಗೂ ಅನುಗುಣವಾಗಿ ಒಬ್ಬೊಬ್ಬರಿಗೆ ಒಂದೊಂದು ಗೀತೆ ಯಾವುದೋ ಕಾರಣಕ್ಕೆ ಅಚ್ಚುಮೆಚ್ಚು ಆಗಬಹುದು. ಇನ್ನು ಗಾಯಕರಿಗೆ ಒಂದೇ ಕಾರ್ಯಕ್ರಮದಲ್ಲಿ ಹಲವಾರು ರೀತಿಯ ಪ್ರೇಕ್ಷಕರು ಇರುವುದರಿಂದ ಒಬ್ಬೊಬ್ಬರ ಮನಸ್ಥಿತಿ ಒಂದೊಂದು ತರಹದ್ದು ಆಗಿರುತ್ತದೆ. ಕೆಲವರಿಗೆ, ಪ್ರೀತಿ ವ್ಯಕ್ತ ಪಡಿಸುವ ಗೀತೆ ಇಷ್ಟವಾದರೆ, ಇನ್ನೂ ಕೆಲವರಿಗೆ ಸಂತೋಷದ ಗೀತೆ, ಮತೊಬ್ಬರಿಗೆ ದುಃಖದ ಗೀತೆ, ಇನ್ನೂ ಹಲವರಿಗೆ ಭಕ್ತಿ […]Read More
ಹಣತೆಯ ಜೀವಿ! ಕತ್ತಲ-ಬೆಳಕ ಮಿಣುಕು! ಕತ್ತಲು ಒಳಗೋ, ಹೊರಗೋ!?ಬೆಳಕು ಒಳಗೋ, ಹೊರಗೋ!? ಕಾಡ ಗಾಢಾಂಧಕಾರದಲ್ಲಿಸಾವಿರಾರು ಮಿಣುಕು ಹುಳುಗಳದ್ದೇದೀಪದ ಮೆರವಣಿಗೆ! ತನ್ನ ಮುಂದಿನ ಕತ್ತಲ ಸೀಳಿಕೊಂಡುಹಾರುವ ಈ ಪುಟ್ಟ ಹುಳುಹಿಂದುಳಿದವರಿಗೆ ಬೆಳಕಾಗಿದೆ! ವಿಜ್ಞಾನಿಗಳು ರೇಡಿಯಂ ಅನ್ನುಕಂಡು ಹಿಡಿಯುವ ಮುನ್ನವೇ…ಸೃಷ್ಟಿಕರ್ತನೇ ಜೀವ-ಜಂತುಗಳಲ್ಲಿಅದನ್ನು ಇಟ್ಟು ಕಳಿಸಿದ್ದಾನೆ! ಹುಲಿ, ಬೆಕ್ಕು, ನಾಯಿ, ನರಿತೋಳಗಳಂತಹ ಜೀವಿಗಳಲ್ಲಿಕಣ್ಣಾಲಿಯಲಿ ದೀಪ… ಕತ್ತಲಲ್ಲಿ ಬದುಕುವವರಿಗೆ ಕಣ್ಣ ಬೆಳಕಾಗಿ,ದಾರಿ ದೀಪವಾಗಿದೆ… ಈ ಜಗವು ಹೀಗಿದ್ದರೂ ಗೀಜಗವುತನ್ನ ಗೂಡಲ್ಲಿ ಬೆಳಕಾಗಿಸಿಕೊಂಡದ್ದುಈ ಮಿಣುಕು ಹುಳುವನ್ನೇ! ಶಕುನಿ ತಾ ತನ್ನ ತಂಗಿ ಗಾಂಧಾರಿಯಕತ್ತಲ ಭಯ […]Read More
ಪ. ಸ. ಕುಮಾರ್ ರವರ ಎಡಗೈ ಚಿತ್ರಕಲಾ ಪ್ರದರ್ಶನ ಪ್ರದರ್ಶನ: 10.11.2023 ರಿಂದ 27.11.2023ಸಮಯ: ಬೆಳಿಗ್ಗೆ 10.00 ರಿಂದ ಸಂಜೆ 6ರ ವರೆಗೆಸ್ಥಳ: ಆರ್ಟ್ ಹೌಜ್, ಪ್ಯಾಲೇಸ್ ರಸ್ತೆ,ವಸಂತನಗರ, (ಮೌಂಟ್ ಕಾರ್ಮೆಲ್ ಕಾಲೇಜು ಹತ್ತಿರ)ಬೆಂಗಳೂರು ಮಾಮೂಲಾಗಿ ಬಲಗೈ ಅಥವಾ ಅಪರೂಪಕ್ಕೆ ಎಡಗೈನಲ್ಲಿ ಚಿತ್ರ ಬರೆಯುವುದು ವಾಡಿಕೆ. ಆದರೆ ನಮ್ಮ ನಾಡಿನ ಹಿರಿಯ ಚಿತ್ರ ಕಲಾವಿದರಾದ ಪ ಸ ಕುಮಾರ್ ಅವರು ಎರಡೂ ಕೈಗಳಲ್ಲೂ ರೇಖಾಚಿತ್ರಗಳನ್ನು ಬರೆಯುವ ಸಾಮರ್ಥ್ಯವನ್ನು ರೂಢಿಸಿಕೊಂಡಿದ್ದಾರೆ. ಈ ವಿಷಯ ಬಹುಶಃ ಅವರ ಕಲಾ ಬಳಗದ […]Read More
ಕನ್ನಡದ ಮುತ್ತು- ಡಾ. ರಾಜ್ ಕನ್ನಡ ಭಾಷೆಯ ಅಸ್ಮಿತೆಗಾಗಿ, ಉಳಿವಿಗಾಗಿ ಬೆಳವಣಿಗೆಗಾಗಿ ಸದಾ ಮುಂಚೂಣಿಯಲ್ಲಿ ಕಾಣಿಸಿಕೊಂಡವರ ಪೈಕಿ ಡಾ. ರಾಜ್ ಪ್ರಮುಖರಲ್ಲಿ ಒಬ್ಬರು. ನಮ್ಮೆಲ್ಲಾ ಕನ್ನಡದ ಹೋರಾಟಗಾರರು ಅವರವರ ಕ್ಷೇತ್ರದಲ್ಲಿ ಕನ್ನಡ ಭಾಷೆ, ಕನ್ನಡದ ಜನಗಳಿಗಾಗಿ ಹೋರಾಟ ಮಾಡುತ್ತಿದ್ದಾಗ ಇಡೀ ಚಿತ್ರರಂಗವನ್ನು ತಮ್ಮ ಜೊತೆ ಹೋರಾಟಕ್ಕೆ ಸೆಳೆದುಕೊಂಡವರು ಡಾ. ರಾಜಕುಮಾರ್. ೧೯೬೦ ನೇ ಇಸವಿ, ಆಗ ಡಾ. ರಾಜ್ ಕೇವಲ ೧೪ ಚಲನಚಿತ್ರಗಳಲ್ಲಿ ನಟಿಸಿದ್ದರು. ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದ ಹೊಸತರಲ್ಲಿ ಸಾಕಷ್ಟು ಕಷ್ಟಗಳನ್ನು ಕಂಡಿದ್ದ ಡಾ. ರಾಜ್ […]Read More
ಕುಂಚದಲ್ಲಿ ಕನ್ನಡ ಸಾಹಿತಿಗಳು ಕನ್ನಡದ ಸಾಹಿತ್ಯ ಲೋಕದ ದಿಗ್ಗಜರಾದ ಅ ನ ಕೃ, ಕುವೆಂಪು, ತ ರಾ ಸು, ಎಸ್ ಎಲ್ ಭೈರಪ್ಪ, ತ್ರಿವೇಣಿ, ತೇಜಸ್ವಿ ಇನ್ನೂ ಮುಂತಾದವರು ಒಂದೇ ಮನೆಯಲ್ಲಿ ನೋಡಲು ಸಿಕ್ಕರೆ? ಆಹಾ ಎಂತಹ ಅದ್ಬುತ ದೃಶ್ಯ ಕಲ್ಪನೆ. ಕನ್ನಡದ ಖ್ಯಾತ ವ್ಯಂಗ್ಯ ಚಿತ್ರಕಾರರಾದ ವೈ. ಎಸ್. ನಂಜುಂಡಸ್ವಾಮಿಯವರು ಈ ತರಹದ ವಿಭಿನ್ನ ಅದ್ಭುತ ಕಲಾತ್ಮಕ ಕೊಡುಗೆಯನ್ನು ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಲಾಪ್ರಿಯರಿಗೆ ಒದಗಿಸಿದ್ದಾರೆ. ಬೆಂಗಳೂರಿನ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ […]Read More