ಸಂಗೀತ – ಸಮರ್ಪಣೆ ಒಂದು ದಿನ ಸಂಗೀತ ಕಾರ್ಯಕ್ರಮ ಮುಗಿಸಿ ವೇದಿಕೆ ಇಂದ ಕೆಳಗಿಳಿಯುವ ಸಮಯಕ್ಕೆ ಸರಿಯಾಗಿ ಪ್ರೇಕ್ಷಕರೊಬ್ಬರು ಒಂದು ಪ್ರಶ್ನೆ ಕೇಳಿದರು. ನೀವು ಯಾತಕ್ಕಾಗಿ ಹಾಡುತ್ತಿರ ಎಂದು.ಆಗ ನನಗೆ ಏನೂ ಹೇಳಲು ತೋಚಲಿಲ್ಲ.ಬಹಳ ಯೋಚಿಸಿದೆ ನಾನು ಏಕೆ ಹಾಡುತ್ತೇನೆ, ಜೀವನ ನಡೆಸಲು! ಮನೆಯವರ ಒತ್ತಾಯಕ್ಕೊ!,ಕಲಿತಿರುವ ವಿಧ್ಯೆ ವ್ಯರ್ಥವಾಗಬಾರದೆಂದು!, ಅಥವಾ ಪ್ರೇಕ್ಷಕರ ಸಂತೋಷಕ್ಕೊ!, ಬಹಳ ಯೋಚಿಸಿದ ಮೇಲೆ ಕೊನೆಗೆ ಅನ್ನಿಸಿದ್ದು ಇದ್ಯಾವುದೂ ಅಲ್ಲ ನಾನು ಹಾಡುವುದು ಕೇವಲ ನನ್ನ ಆತ್ಮ ತೃಪ್ತಿಗೆ. ಸಂಗೀತ ಕಲಿಯುವುದು ಮತ್ತು ಕಲಿತು […]Read More
ಆಶ್ರಯದಾತ ಮನಸು ಮುದುಡಿದೆ. ಆಸೆಗಳು ನಶಿಸಿವೆಜೀವ ಸಂಕುಲದ ಕ್ರೌರ್ಯಕ್ಕೆ ನಲುಗಿಹೋದೆಅದೆಷ್ಟು ಬಾರಿ ತಿಳಿ ಹೇಳಿದರೂ ಅರಿಯಾದಾಗಿದೆ ಗಢಚಿಕ್ಕುವ ಶಬ್ದ ಗುಡುಗು ಸಿಡಿಲುಗಳುಆಗಾಗ ಬೀಳುವ ಕೋಲ್ಮಿಂಚುಗಳುಮಾಡುತಿವೆ ನಿರಂತರ ದಾಳಿಗಳು ಒಂದೊಮ್ಮೆ ಆರೋಗ್ಯಪೂರ್ಣನಾಗುವೆನಳನಳಿಸಿ ಎದೆಯುಬ್ಬಿಸುವಾಗಲೇರೋಗ ತಾಗಿ ಅಸ್ಥಿಪಂಜರದಂತೆ ಬಡಕಲಾಗುವೆ ಕಷ್ಟ ಕೋಟಲೆಗಳೆಲ್ಲವನ್ನೂ ಸಹಿಸುಷ್ಟರಲ್ಲಿಬುಡಕ್ಕೆ ಸಂಚಕಾರ ತಂದಿಡುವ ಜನರುಈ ಗೋಳಿನಾ ಕಥೆಯ ಕೇಳುವರಾರು ಜೀವವಿದ್ದರೂ ನಾನಾದೆ ಬರೀ ಮರಜೀವಿಗಳಿಗೆ ಕೊಟ್ಟೆ ಪ್ರಾಣವಾಯುವಿನ ವರಇಷ್ಟಾದರೂ ಯಾರಿಗೂ ಇಲ್ಲ ನನ್ನಲ್ಲಿ ಕನಿಕರಆಶ್ರಯ ಕೊಟ್ಟ ನನ್ನನ್ನೇ ಮರೆತರಾ… ಮರ ಮರ ಹೆಮ್ಮರ ನೀನೆಷ್ಟು ಸುಂದರಹಸಿರು ರಾಶಿಯ […]Read More
ಕನ್ನಡ ಸಾಹಿತ್ಯಕ್ಕಾಗಿ – ಪುಸ್ತಕ ತಾಂಬೂಲ ಕನ್ನಡ ನಮ್ಮ ಮಾತೃ ಭಾಷೆ ನಮ್ಮೆಲ್ಲರ ಅಸ್ಮಿತೆ. ರಾಜ್ಯಾದ್ಯಂತ ಕನ್ನಡ ಭಾಷೆಯ ಹೆಸರಿನಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಅನೇಕ ಕೆಲಸಗಳು ನೆಡೆಯುತ್ತಲೇ ಇರುತ್ತವೆ ಅದು ಕೆಲವರಿಗೆ ಭಾಷಾಭಿಮಾನದ ಪ್ರೀತಿ ಹಾಗು ಕೆಲವರಿಗೆ ಹೊಟ್ಟೆ ಪಾಡು ಹೌದು. ನವೆಂಬರ್ ಮಾಸ ಬಂತೆಂದರೆ ಇಡೀ ತಿಂಗಳು ರಾಜ್ಯದಲ್ಲಿ ಒಂದಲ್ಲಾ ಒಂದು ಕಡೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ನೆಡೆಯುತ್ತಲೇ ಇರುತ್ತವೆ. ರಾಜ್ಯೋತ್ಸವ ಸಮಾರಂಭಗಳು ಶಾಲಾ ಕಾಲೇಜು, ಸಾಹಿತ್ಯಲೋಕದವರು ಅಥವಾ ಸಿನಿಮಾ ರಂಗದವರೇ ಆಚರಿಸಬೇಕೆಂದಿಲ್ಲ! ಇಡೀ ದಿನ […]Read More
ಒಲವಿನ ಮಜಲುಗಳು ಬಾನಂಗಣದಿ ಮುಳುಗುತಾಹೊಳೆವ ನೇಸರನ ಬಣ್ಣದಲಿಕಣ್ಕೋರೈಸುವ ಕಾಮನಬಿಲ್ಲಿನಲಿಕಂಡೆ ನಿನ್ನ ಒಲವಿನ ರಂಗು!! ನೀಲಾಂಬರದ ಮೋಡಗಳುಕರಗುತಾ ಸುರಿದ ವರ್ಷಧಾರೆಯಲಿಅರಳುತಿಹ ಮಲ್ಲಿಗೆಯ ಘಮಲಲಿಸವಿದೆ ನಿನ್ನ ನೋಟದ ಗುಂಗು!! ಕಡಲಕಿನಾರೆಯ ದಾರಿಯುದ್ದಕೂಬಂಡೆಗಪ್ಪಳಿಸಿಹ ಅಲೆಅಲೆಗಳಲೂಮರಳಲಿ ಮೂಡಿಹ ಬೆರಳ ಚಿತ್ತಾರದಲೂಅರಿತೆ ನಿನ್ನ ಭಾವದ ರಂಗು!! ಮುಗಿಲೆತ್ತರಕೇರಿಹ ಮರದಲೂಬುವಿಯಾಳಕಿಳಿದಿಹ ಬೇರುಗಳಲೂಗಾಳಿಗದುರುವ ತರುಲತೆಗಳಲೂಕಂಡೆ ನಿನ್ನದೇ ಪ್ರೀತಿಯ ಗುಂಗು!! ನಿತ್ಯ ಮಿಡಿಯುವ ಮನಸಲೂಸತ್ಯ ಅಂತರಾಳದ ಕನಸಲೂಅರಿತೆ ನಿನ್ನ ಆಸರೆಯ ರಂಗುಬೇಕಿಲ್ಲ ಅದಕೆ ಯಾರ ಹಂಗು!! ಸುಮನಾ ರಮಾನಂದRead More
ಕೂಡಲ ಸಂಗಮ – ಬಸವಣ್ಣನವರ ಐಕ್ಯಸ್ಥಳ ಮಹಾಮಹಿಮ ಬಸವಣ್ಣನವರು ಪಾದವಿಟ್ಟ ಅವಿಮುಕ್ತ ಕ್ಷೇತ್ರವಾಗಿ, ಬಸವಣ್ಣನವರ ವಿದ್ಯಾಭೂಮಿಯಾಗಿ, ಐಕ್ಯ ಕ್ಷೇತ್ರವಾಗಿ ಮತ್ತು ಪುಣ್ಯಭೂಮಿಯಾಗಿ ಕೂಡಲಸಂಗಮವು ಗೋಚರಿಸುತ್ತದೆ. ಮುಸಲ್ಮಾನರಿಗೆ ಮೆಕ್ಕಾ, ಸಿಖ್ಖರಿಗೆ ಅಮೃತಸರ, ಬೌದ್ಧರಿಗೆ ಬುದ್ಧಗಯಾ ಇವೇ ಮೊದಲಾದ ಮಹತ್ವದ ಧರ್ಮಕ್ಷೇತ್ರಗಳಂತೆ ಬಸವ ಧರ್ಮೀಯರಾದ ಲಿಂಗಾಯತರಿಗೆ ಕೂಡಲ ಸಂಗಮ ಪವಿತ್ರಕ್ಷೇತ್ರ. ಕಲ್ಯಾಣದಲ್ಲಿ ಬಿಜ್ಜಳನ ಪ್ರಧಾನಿಯಾಗಿದ್ದ ಬಸವಣ್ಣನವರು ಕಲ್ಯಾಣ ಕ್ರಾಂತಿಯ ಬಳಿಕ ಸಂಗಮಕ್ಕೆ ಮರಳಿ ಇಲ್ಲಿಯೇ ಐಕ್ಯರಾದರೆಂದೂ ಇತಿಹಾಸ ತಿಳಿಸುತ್ತದೆ. ಕೂಡಲಸಂಗಮ ಗ್ರಾಮವು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನಲ್ಲಿದ್ದು, ಆಲಮಟ್ಟಿ ಅಣೆಕಟ್ಟಿನಿಂದ […]Read More
ಆದಿ ಕವಿ ವಾಲ್ಮೀಕಿ ಮುನಿ ವಾಲ್ಮೀಕಿ ಎಂಬ ಕೋಗಿಲೇ,ಕವಿತೆಯಾ ಮರದ ಮೇಲೆ|ಮಧುರ ಮಧುರಾಕ್ಷರದಿಂದಲೇರಾಮ ರಾಮ ಎಂದು ಹಾಡಿತಾಗಲೇ!! ಆದಿ ಕವಿ ವಾಲ್ಮೀಕಿಯೇನಿಮಗೆ ವಂದನೇ|ಮಹಾಗ್ರಂಥ ರಾಮಾಯಣವೇನಿಮ್ಮ ಸಾಧನೇ| ಪೂರ್ವದಲ್ಲಿ ನೀವುಪ್ರಾಚೇತಸ ಮುನಿಯು|ಶಾಪದಿಂದ ಬೇಡರಾಗೀಬೆಳೆದು ಬಂದಿರೀ|| ದಾರಿಹೋಕರ ವಸ್ತುಗಳಾಕಸಿದು ಕೊಂಡಿರೀ!ಅದರಿಂದ ಬರೋ ಪಾಪಗಳಕಟ್ಟಿಕೊಂಡಿರೀ|| ಅಗಸ್ತ್ಯರೆಂಬ ಮುನಿಗಳಾ ಕೃಪೆಯು ನಿಮಗೆ ಆಯಿತು|ಅಂದಿನಿಂದ ನಿಮ್ಮ ಪಾಪಗಳು ಭಸ್ಮವಾಯಿತು|| ಅವರೇಳಿದ ಮರದ ಮಂತ್ರತಾರಕ ಮಂತ್ರವಾಯಿತು|ಜಪಿಸುತಲೀ ಆ ಮಂತ್ರಹುತ್ತ ಬೆಳೆಯಿತು|| ಆ ಹುತ್ತದ ಪರಿಣಾಮದಿ“ವಾಲ್ಮೀಕಿ”ಎಂಬಾ ಹೆಸರಾಯಿತು!ಕ್ರೌಂಚ ಪಕ್ಷಿ ಸಾವಿನಿಂದಲೀಸ್ತೋತ್ರ ಉದಿಸಿತು|| ಶಿವನಿಂದ ರಾಮಾಯಣಲಿಖಿತಕೆ ಆದೇಶವಾಯಿತು|ಬ್ರಹ್ಮದೇವನಿಂದ ನಿಮಗೆಲಘುವಾಗಿ […]Read More
ಕತ್ತಲ ಕಂಬನಿ ಅವತ್ತ ಸುಡು ಸುಡು ಬಿಸಿಲು ಇತ್ತು. ಬಿಸಿಲಿನ್ಯಾಗ ಮಂದಿಯೆಲ್ಲಾ ಬಿಸಿಲಿನ ತಾಪಕ್ಕ ರೋಸಿ ಹೋಗಿದ್ರು . ಅವತ್ತು ರವಿವಾರ ಬೇರೆ ಇತ್ತು. ಲಗೂನ ಕೆಲಸ ಮುಗಿಸಿ ದಾವಾಖಾನಿಯಿ೦ದ ಮನೆಗೆ ಹೋಗಬೇಕನ್ನೋ ಗಡಿಬಿಡಿಲಿದ್ರು ಡಾಕ್ಟರ್ ಸಂಜಯ್ ಅವರು ಹೆಂಡತಿ ಮಕ್ಕಳ ಜೊತೆ ಬಜಾರ್ ಸುತ್ತಬೇಕು ಹೆ೦ಡತಿ ಮಕ್ಕಳ ಜೊತೆ ಸಮಯ ಕಳಿಬೇಕು. ಈ ಡಾಕ್ಟರಕಿ ಕೆಲಸ ಸಾಕಾಗೇತಿನಂಗರ ಅಂತ ಗಡಿಬಿಡಿಲಿದ್ರು. ಅಷ್ಟರಲ್ಲಿ ನರ್ಸ್ ಬಂದ್ರು, ಸರ್ ಒಬ್ರು ಪೇಷಂಟ್ ಈದರ್ರೀ ಈಗ ಬ೦ದರ, ಅಯ್ಯೋ ದೇವಾ […]Read More
ಜೇನು ಹುಳದ ಮುಳ್ಳು ಹಿಂದೆಲ್ಲ ಜೇನುಹುಳಗಳಿಗೆ ಬೆನ್ನ ಹಿಂದೆ ಮುಳ್ಳು ಇರಲಿಲ್ಲ. ಅದಕ್ಕೆ ಮುಳ್ಳು ಹೇಗೆ ಬಂತು ಎಂದು ನಿಮಗೆ ಗೊತ್ತಾ? ಕಾಡಲ್ಲಿ ಆಲದ ಮರದ ಮೇಲೆ ಸಾವಿರಾರು ಜೇನುಗೂಡು ಕಟ್ಟಿತ್ತು. ಜೇನುಗಳು ನಿರುಪದ್ರವಿಯಾಗಿದ್ದವು. ಊರಿನ ಜನರೆಲ್ಲಾ ಮರದ ಬಳಿ ಬಂದು ತುಪ್ಪವನ್ನು ತೆಗೆದುಕೊಂಡು ಹೋಗುತ್ತಿದ್ದರು. ಜೇನುಗಳಿಗೆ ಮತ್ತೆ ಮತ್ತೆ ಗೂಡು ಕಟ್ಟಲು ಕಷ್ಟವಾಗುತಿತ್ತು. ಇದಕ್ಕೆ ಜೇನುಗಳ ರಾಣಿ ಪರಿಹಾರ ಹುಡುಕುತ್ತಾ ಕುಳಿತಿತು. ಅದೇ ಸಮಯಕ್ಕೆ ಮಂತ್ರಿ ಜೇನಿಗೆ ಒಂದು ಉಪಾಯ ಹೊಳೆಯಿತು. ಮಂತ್ರಿ ರಾಣಿ ಜೇನಿನ […]Read More
ಹೀಗೊಂದು ಪ್ರೇಮದ ಗಜ಼ಲ್ ಬಾಳಲಿ ನಿನ್ನಂತೆ ನಂಗೆ ಯಾರಿಲ್ಲಹಾಗಾಗಿ ನಿನ್ನಲೇ ನನ್ನ ಮನಸೆಲ್ಲಾ..! ಹೃದಯದ ತಂತಿಯ ನೀ ಮೀಟಿದೆಆ ಕ್ಷಣದಿಂದ ನಿನ್ನಲ್ಲೇ ಮನ ನಾಟಿದೆ..! ಮಳೆಬಿಲ್ಲಿನ ಬಣ್ಣವಿದೆ ನಿನ್ನ ಪ್ರೀತಿಯಲಿಅದಕೇ ನಿನ್ನ ಹೆಸರಿದೆ ನನ್ನ ಉಸಿರಿನಲಿ..! ಬುವಿಯಲಿ ಬಾನಲಿ ಎಲ್ಲೆಲ್ಲೂ ನೀನೇಸವಿಪ್ರೀತಿಯ ಹೆಸರು ಮತ್ತೆ ಇದಕೇ ತಾನೆ..! ಇಳಿಸಂಜೆಯ ಹೊತ್ತು ನೀ ಬರುವೆ ಕನಸಿನಲಿಶಾಶ್ವತದಿ ನಿ ನೆಲೆಸಿಹೆ ನನ್ನ ಮನಸಿನಲಿ..! ಅರಿವಾಗಿದೆ ಆತ್ಮಕೆ ನಿನ್ನ ಪ್ರೇಮದ ಬಂಧುರನೀನಾಗಿಹೆ ನನ್ನ ಬಾಳಲಿ ನಗುವ ಸಿಂಧೂರ..! ಚಿಗುರು ವೀಳ್ಯೆಯ ಸವಿ […]Read More