ಜಾತ್ರೆಯ ಮೂರು ಗೊಂಬೆಗಳು ಒಂದು ಊರಿನ ಜಾತ್ರೆಯು ವಿಜೃಂಭಣೆಯಿಂದ ನಡೆದಿತ್ತು. ಜಾತ್ರೆಯಲ್ಲಿ ಇಡೀ ಊರಿಗೆ ಊರೇ ಸೇರಿತ್ತು. ವೈವಿಧ್ಯಮಯ ಅಂಗಡಿಗಳು, ಹೋಟೆಲ್ಗಳ ಹಬ್ಬವೇ ಅಲ್ಲಿತ್ತು. ಜಾತ್ರೆಗೆ ಒಬ್ಬ ಒಬ್ಬ ರೈತ ತನ್ನ ಮಗಳನ್ನು ಕರೆದುಕೊಂಡು ಬಂದಿದ್ದ. ಜಾತ್ರೆಯಲ್ಲಿ ಮಗಳಿಗೆ ತಿಂಡಿ ತಿನಿಸು, ಬಟ್ಟೆಬರೆ, ಪುಸ್ತಕಗಳನ್ನು ಕೊಡಿಸಿ ಮನೆಗೆ ಹೊರಡುತ್ತಾನೆ. ಹೀಗೆ ಮನೆಗೆ ಹೋಗುತ್ತಿರಬೇಕಾದರೆ ಅಲ್ಲಿನ ಗೊಂಬೆಗಳ ಮಳಿಗೆಯ ಮುಂಭಾಗಕ್ಕೆ ಮಗಳೊಂದಿಗೆ ಬರುತ್ತಾನೆ. ಗೊಂಬೆಯ ಅಂಗಡಿಯಲ್ಲಿದ್ದ ಸುಂದರವಾದ ಗೊಂಬೆಗಳನ್ನು ನೋಡಿ ರೈತನ ಮಗಳು ತನಗೆ ಗೊಂಬೆ ಬೇಕು ಎಂದು […]Read More
ಕವಿ ಶ್ರೀ ಮುತ್ತು ವಡ್ಡರ ರಾಜ್ಯಮಟ್ಟದ ಚಾಲುಕ್ಯ ಸಾಹಿತ್ಯ ರತ್ನ ಪ್ರಶಸ್ತಿಗೆ ಆಯ್ಕೆ… ವಿಶ್ವ ಬಂಜಾರ ಕಲಾ ಸಾಹಿತ್ಯ ಸಂಘ (ರಿ ) ಅಮೀನಗಡ ಹಾಗೂ ಬರಹವೇ ಶಕ್ತಿ ವೇದಿಕೆಯ ವತಿಯಿಂದ ಹುನಗುಂದ ತಾಲೂಕಿನ ಐಹೊಳೆಯಲ್ಲಿ ದಿನಾಂಕ 07-07-2024 ರವಿವಾರ ದಂದು ನಡೆಯುತ್ತಿರುವ ಪ್ರಥಮ ಚಾಲುಕ್ಯ ಸಾಹಿತ್ಯ ಸಮ್ಮೇಳನ ಹಾಗೂ ಬಹು ಭಾಷಾ ಕವಿಗೋಷ್ಠಿಯಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದೆಂದು ಸಂಸ್ಥಾಪಕ ಅಧ್ಯಕ್ಷರಾದ ಚಂದ್ರಕಾಂತ ಚವಾಣ್ ರವರು ಪತ್ರಿಕಾಗೋಷ್ಠಿಗೆ ತಿಳಿಸಿದ್ದಾರೆ. ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ […]Read More
ಸಹಜಾತ ಅಕ್ಕನ ಕಂಡರೆ ಅದೆಷ್ಟು ಪ್ರೀತಿ ಇವಗೆಅವಳ ಸೆರಗ ಹಿಡಿದು ಸುತ್ತಾಡುವಗೆಭೂ ತಾಯಿಯ ತಮ್ಮ ಚಂದಿರಗೆ ನೀಲಾಕಾಶದ ಒಡೆಯನುಪಡುವಣದಿ ಮೂಡಿದವನುಇವನೇ ಬಾಲ ಚಂದಿರನು ದಿನ ದಿನವೂ ಅರಳಿ ನಗುವವನುಪಕ್ಷಕ್ಕೊಮ್ಮೆ ಬೆಳಗುವವನುಪೌರ್ಣಮಿಯ ಚಂದಿರನು ಇವನ ಕಂಡ ಸಮುದ್ರರಾಜಭರತದ ಅಲೆಗಳಲಿ ಜಿಗಿದಾಡಿದಇಳಿತ ಸಪ್ಪಳದಿ ತೊನೆದಾಡಿದ ವಸುಂಧರೆಯ ಪ್ರಿಯ ಸಹೋದರಪ್ರೀತಿಯ ಚಂದಿರ ನೀನೆಷ್ಟು ಸುಂದರ… ಸಿ.ಎನ್. ಮಹೇಶ್Read More
ಸೋಜಿಗದ ಬದುಕು ಊರ ದಾರಿಯಲ್ಲಿ ನಡೆವನೆನಪ ಹಾದಿಯಲ್ಲಿ ಪಡೆವಸುಖವದೆಷ್ಟು ಸೋಜಿಗ!! ಹರಿದ ಚಡ್ಡಿ, ಸುರಿವ ಮೂಗುಬಗಲಿಗೊಂದು ಪಾಟಿ ಚೀಲರಸ್ತೆ, ಓಣಿ ತೋಟ, ಗದ್ದೆಯಲ್ಲಿ ನಡೆದಕಾಲ್ಗಳೆಷ್ಟು ಸೋಜಿಗ!! ನಿಂಬೆಹುಳಿಯ ಪೆಪ್ಪರಮಿಂಟುಕಡ್ಲೆಪುರಿ ಚಾಕಲೇಟುಮೂಲೆಯಂಗಡಿಯ ಶೆಟ್ಟಿಸಂತೆಯಲ್ಲಿ ಸಿಕ್ಕ ಸುಖವದೆಷ್ಟು ಸೋಜಿಗ!! ಬಾಯಿಪಾಠ ಹೇಳಿಸುತ್ತಲೆಕ್ಕ, ಮಗ್ಗಿ ಮಾಡಿಸುತ್ತಕಾಗುಣಿತವ ಹೇಳಿಕೊಟ್ಟಅಮ್ಮನೆಂತ ಸೋಜಿಗ!! ನನಗೆ ಗುರಿಯ ಹಾಕಿಕೊಟ್ಟುನಡೆವ ದಾರಿ ತೋರಿಕೊಟ್ಟಗುರುವು ಅದೆಂತಾ ಸೋಜಿಗ!! ಒಮ್ಮೆ ಹೆಮ್ಮೆಯಿಂದ ಬೀಗಿಅಹಮಿಕೆಯಲ್ಲಿ ಸಾಗಿಎಡವಿಬಿದ್ದ ಗಳಿಗೆಯಲ್ಲಿಅಹಂಕಾರವೆಲ್ಲ ಬಾಗಿ ಅಲ್ಲಿ ಬಿದ್ದು, ಇಲ್ಲಿ ಎದ್ದುಎಲ್ಲಿ ಎಲ್ಲೋ ಅಲೆದಾಡುವಮತ್ತೆ ಮಣ್ಣ ಸೇರುವಬದುಕದೆಷ್ಟು ಸೋಜಿಗ!! ಸುನೀಲ್ […]Read More
ಬಂಡಿ ಹೀಗೆ ಹೋಗುತ್ತಿತ್ತುಅಪ್ಪ ಕೊಳ್ಳು ಕಟ್ಟಿದ ಬಂಡಿ ಮನೆಯಲ್ಲಿಯೇ ಹುಟ್ಟಿದಅಳಿಯ ಮಾವಕೆಂದ,ಮಾಸ ಹೋರಿಮೂರನೇ ತಲೆಮಾರಿಗೆ ಸಾಕ್ಷಿಯಾಗಿಸಂತಸದಲ್ಲಿದ್ದವು ಅಪ್ಪ ಒಡೆಯರ ಕಾಲದಲಿಲ್ಲದಿದ್ದರುಒಡೆಯರಂತಿದ್ದುಒಕ್ಕಲುತನದಲ್ಲಿ ಜೋಡೆತ್ತಿನ ಬಂಡಿಯೇಅಪ್ಪನ ಅಂಬಾರಿ ಅಂಬಾರಿ ಹೊರುವಕರ್ಣ ಅರ್ಜುನನಂತಿದ್ದ ಹೋರಿಗಳುದಸರಾ ಆನೆಯನ್ನು ಮೀರಿಸುತ್ತಿದ್ದವುಗಳೇ ಹೊಡೆದು ದಣಿದುಹೊಲದ ಓಣಿಯಲ್ಲಿಗಿಲ್ ಗಿಲ್ ಸದ್ದು ಮಾಡಿಓಡೋಡಿ ಬರುತ್ತಿದ್ದರೆಊರಿಗೆ ಊರೇ ನೋಡುವಂತಿದ್ದವು ನಗ ಕೂರಿಗೆ ಕುಂಟಿಕುಡ ಕಳೆಬಾರ ಪಿಳಗುಂಟಿಎಡೆ ಕುಂಟಿಎಳಶೆಡ್ಡಿ,ಶೆಡ್ಡಿ ಬಟ್ಟಲುಮಿನಿ ಹಗ್ಗ ಬ್ಯಾಕೋಲುಮಡಿಕಿ ನೇಗಿಲು ಕಳೆ ಚತಿಗಿತಾಳುಎಲ್ಲವೂ ಅಪ್ಪನ ಅಂಬಾರಿಯಪ್ರಯಾಣಿಕರುಒಮ್ಮೊಮ್ಮೆ ಮನೆಮಂದಿ,ಹಾದಿಯಲ್ಲಿ ಕೈ ತೋರಿದವರು ಕಾರಹುಣ್ಣಿವೆಗೆಅಪ್ಪ ಎತ್ತು ಮೈತೊಳೆದುಕೋಡಿಗೆ ಬಣ್ಣ ಹಚ್ಚಿಅಂಬಾರಿಗೂ […]Read More
ಆಪ್ರಿಕಾದ ಸೌಮ್ಯದೈತ್ಯರು ಉಗಾಂಡಾ ಹಲವಾರು ಬುಡಕಟ್ಟು ಜನಾಂಗಗಳನ್ನ ಹೊಂದಿದ ಆಫ್ರಿಕಾದ ಒಂದು ಬಡರಾಷ್ಟ್ರ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ರಾಜಕೀಯ ಅಸ್ಪಷ್ಟತೆ ಅಸ್ಥಿರತೆಯಿಂದ, ಬುಡಕಟ್ಟು ಜನಾಂಗದ ನಡುವಿನ ಕಲಹ ಅಂತರ್ಯುದ್ಧದ ಹಿಂಸೆಯಿಂದ ನರಳಿದೆ . ಅಧಿಕೃತವಾಗಿ ಇಂಗ್ಲಿಷ್ ಮತ್ತು ಸ್ವಹೀಲಿ ( Swahili) ಮಾತನಾಡುವ ಈ ದೇಶದ ಜನಸಂಖ್ಯೆ ನಾಲ್ಕುವರೆ ಕೋಟಿಗಿಂತಲೂ ಅಧಿಕ. ಒಂದು ಕಾಲಕ್ಕೆ ಆಫ್ರಿಕಾದ ಮುತ್ತು ಎಂದೇ ಪರಿಗಣಿಸಲಾಗುತ್ತಿದ್ದ ಈ ದೇಶ ನೈಸರ್ಗೀಕ ಸಂಪನ್ಮೂಲ, ದಟ್ಟಾರಣ್ಯ ಹುಲ್ಲುಗಾವಲುಗಳಿಂದ ಭರ್ತಿಯಾಗಿತ್ತು. 1970 ರಲ್ಲಿ ಈದಿ ಅಮೀನ್ […]Read More
ಓಜೋನ್ ಪದರ ಇದು ಭೂತಾಯಿಯ ಉದರ ಓಜೋನ್ ಅಂದರೆ ಮೂರು ಆಮ್ಲಜನಕದ ಸಣ್ಣ ಸಣ್ಣ ಕಣಗಳಿಂದ ಆದ ಪದರ. ಇದು ವಾಯುಮಂಡಲದ ಅತಿ ಕೆಳಗಿನ ಪದರಗಳಾದ ಟ್ರೋಪೊಸ್ಪಿಯರ್ ಹಾಗೂ ಸ್ಟ್ರಾಟೋಸ್ಪಿಯರ್ ನಲ್ಲಿರುತ್ತದೆ. ಟ್ರೋಪೊಸ್ಪಿಯರ್ ಭೂಮಿಯಿಂದ 12 ಕಿಮೀ ವರೆಗೂ ಪಸರಿಸಿದ್ದರೆ, ಸ್ಟ್ರಾಟೋಸ್ಪಿಯರ್ ಐವತ್ತು ಕಿಮೀವರೆಗೂ ಹಬ್ಬಿದೆ, ಅದರೆ ಶೇಕಡಾ 90ರಷ್ಟು ಓಜೋನ್ ಕಣಗಳು ವಾಯುಮಂಡಲದ ಸ್ಟ್ರಾಟೋಸ್ಪಿಯರ್ನಲ್ಲಿ ಹರಡಿಕೊಂಡಿರುತ್ತದೆ. ನೈಸರ್ಗಿಕವಾಗಿ ಸೂರ್ಯಕಿರಣಗಳು ಆಮ್ಲಜನಕದ ಕಣಗಳೊಡನೆ ನಡೆಸುವ ಕ್ರಿಯೆಯಿಂದ ಈ ಓಜೋನ್ ಪದರ ನಿರ್ಮಾಣವಾಗುತ್ತದೆ. ಸ್ಟ್ರಾಟೋಸ್ಪಿಯರ್ ನಲ್ಲಿ ಸೂರ್ಯಕಿರಣಗಳ ಪ್ರಭಾವದಿಂದ […]Read More
ಕಾಣೆಯಾದಿರೆಲ್ಲಿ? ಮಗುವಿನಂದದಿ ಬಂದುಚಂದದಲಿ ಹೆಗಲೇರಿ,ತೋಳಲ್ಲಿ ನಾ ಬಳಸುವಾಮುನ್ನವೇ ಹೀಗೇಕೆನೀವು ಕಾಣೆಯಾಗುವಿರಿ? ಕೈಗೆ ಸಿಕ್ಕಿಯೇ ಬಿಟ್ಟಿತೆಂದುಕಾಣುವ ನೀರಗುಳ್ಳೆಯಂತೆ,ಒಮ್ಮೆ ಕಣ್ಮುಂದೆ ಬಂದುಮತ್ತೊಂದು ಕ್ಷಣದಲೇಕೆಮಾಯವಾಗುತ್ತಿರುವಿರಿ ? ಹಳೆಯ ಹೆಂಚಿನ ಮನೆಯಸಂದಿಯಿಂದ ಇಣುಕುವಬಿಸಿಲು ಕೋಲಿನಂತೆ,ಸಿಕ್ಕಿಯೂ ಸಿಗದಂತೆನ್ನಹೀಗೇಕೆ ಸತಾಯಿಸುತ್ತಿರುವಿರಿ? ಮಳೆಹನಿಯುದುರಲು,ಆಗಸದಂಚಿನಲಿ ಬಣ್ಣಬಣ್ಣದಿ ಮೂಡಿ, ಮನದಲಾಸೆತೋರಿ ಮೋಸಗೊಳಿಸುವಕಾಮನಬಿಲ್ಲಿನಂತೇಕಾದಿರಿ ? ಹೇಳಿಬಿಡಿ ಒಮ್ಮೆ ನೀವೆಂದುಬರುವಿರೆನ್ನೆಡೆಗೆ, ಚಂದದಕವಿತೆ ನೀವಾಗಲು ನನ್ನಸುಂದರ ಕನಸಿನ ಅಂದದಪದಗಳೆ !! ಶ್ರೀವಲ್ಲಿ ಮಂಜುನಾಥRead More
ಶತ್ರುವಾದ ಸೌಂದರ್ಯ ಸುಂದರವಾದ ಮನೆ ಕಟ್ಟಿದರೆ ಸಾಲದು; ಆ ಸುಂದರವಾದ ಮನೆಯಲ್ಲಿ ಸುಖವಾಗಿ ಬದುಕುವುದನ್ನು ಕಲಿಯಬೇಕುಎಲ್ಲರಿಗೂ ತಮ್ಮ ಮದುವೆಯೆಂದರೆ ಒಂದೊಂದು ರೀತಿಯ ಕನಸುಗಳಿರುವುದು ಸಹಜ. ಅದೇ ರೀತಿ ಜಾಗೂರು ಎಂಬ ಊರಿನಲ್ಲಿ ತೇಜಸ್ ಎಂಬ ಯುವಕನು ತನ್ನ ಮದುವೆಯ ಬಗ್ಗೆ ಬಣ್ಣ ಬಣ್ಣದ ಕನಸುಗಳನ್ನು ಕಟ್ಟಿಕೊಂಡಿದ್ದು, ಪಕ್ಕದ ಹಳ್ಳಿಯ ಸೌಂದರ್ಯವತಿಯಾದ ರೀತಾ ಎಂಬ ಯುವತಿಯನ್ನು ಮನಮೆಚ್ಚಿ ಮದುವೆಯಾದ. ಸೌಂದರ್ಯದ ಆರಾಧಕನಾದ ತೇಜಸ್ ರೀತಾಳನ್ನು ಬಹಳ ಇಷ್ಟಪಡುತ್ತಿದ್ದ. ಆಕೆಗೆ ಯಾವುದರಲ್ಲೂ ಕೊರತೆಯಾಗದಂತೆ ಹೂವಿನಂತೆ ಜತನದಿಂದ ನೋಡಿಕೊಳ್ಳುತಿದ್ದ. ವರ್ಷಗಳು ಉರುಳುತ್ತಿದ್ದಂತೆ […]Read More
ಗುಡ್ಡೆಟ್ಟು ಗಣಪತಿ ಕ್ಷೇತ್ರ ಕುಂದಾಪುರ ತಾಲೂಕಿನ ಪ್ರಮುಖ ತೀರ್ಥ ಕ್ಷೇತ್ರಗಳಲ್ಲಿ ಗುಡ್ಡೆಟ್ಟು ಗಣಪತಿ ಕ್ಷೇತ್ರವು ಒಂದು. ಬ್ರಹ್ಮಾವರ, ಬಾರಕೂರು, ಸಾಯಬ್ರ ಕಟ್ಟೆ, ಮೆಕ್ಕೆಕಟ್ಟು ದಾಟಿ ಹಾಲಾಡಿ ಕಡೆಗೆ ಸಾಗುವಾಗ ಗುಡ್ಡೆಟ್ಟು ಕ್ಷೇತ್ರ ಇದೆ. ಇಲ್ಲಿ ಗಣಪತಿಯು ಸ್ವಯಂಭುವಾಗಿದ್ದು ಸದಾ ನೀರಿನೊಳಗೆ ಇರುತ್ತಾನೆ. ನೀರಿನ ಮೂಲಕವೇ ಆತನ ದರ್ಶನ ಮಾಡಬೇಕು. ದಿನಕ್ಕೆರಡು ಬಾರಿ ಸಂಪೂರ್ಣ ನೀರನ್ನು ಹೊರತೆಗೆದು ಸ್ವಾಮಿಗೆ ಅಲಂಕಾರ ಮತ್ತು ಮಂಗಳಾರತಿ ಮಾಡುತ್ತಾರೆ. ಬಹಳ ಹಿಂದೆ ತ್ರಿಪುರಾಸುರನೆಂಬ ರಾಕ್ಷಸ ಜನರಿಗೆ ಹಿಂಸೆ ಮಾಡುತ್ತಿದ್ದನಂತೆ.. ಅದು ಪರಮೇಶ್ವರನಿಗೆ ತಿಳಿದು, […]Read More