ಈಕೆ ಅಭಲೆಯಲ್ಲ ಬಾಲಿವುಡ್ನ ಸ್ಟಂಟ್ ಮಾಸ್ಟರ್ – ಗೀತಾ ಟಂಡನ್ ಹೆಣ್ಣು ಅಭಲೆಯಲ್ಲ ತಾನು ಪುರುಷ ಪ್ರಧಾನವಾದ ಸಮಾಜದಲ್ಲಿ ಪುರುಷನಿಗೆ ಸಮನಾದ ಸಾಧನೆಯನ್ನು ಮಾಡಿ ತನ್ನ ಬದುಕನ್ನು ತಾನೇ ಒಂಟಿಯಾಗಿ ಕಟ್ಟಿಕೊಂಡು ಸಮಾಜದಲ್ಲಿ ಗೌರವಯುತವಾಗಿ ಬದುಕಬಲ್ಲೆನೆಂದು ತೋರಿಸಿದ ಅದೆಷ್ಟೋ ಧೀಮಂತ ಮಹಿಳೆಯರನ್ನು ಇಂದು ನಾವು ಕಾಣಬಹುದು. ತನ್ನ ಹದಿನೈದನೆಯ ವಯಸ್ಸಿಗೇ ಮನೆಯವರ ಒತ್ತಾಯಕ್ಕೆ ಮಣಿದು ಮದುವೆಯಾಗಿ ಗಂಡ ಹೆಂಡತಿ ಸಂಬಂಧದ ಅರ್ಥವನ್ನರಿಯುವ ವೇಳೆಗೆ ಸರ್ವಸ್ವವನ್ನೂ ಕಳೆದುಕೊಂಡು ಮನೆಯಿಂದ ಹೊರಬಿದ್ದು ಫಿನೀಕ್ಸ್ ಹಕ್ಕಿಯಂತೆ ಮೇಲೆದ್ದು ಬಂದ ಒಬ್ಬ ಧೈರ್ಯವಂತ […]Read More
ಕವಿತೆಯ ಸ್ಫೂರ್ತಿಸೆಲೆ ಮನದ ಗೂಡಲಿ ಭಾವವು ಅವಿತಾಗಮನಸು ಆ ಭಾವದಲಿ ಬಂಧಿಯಾದಾಗಭಾವದುಯ್ಯಾಲೆಯಲಿ ಮನ ಜೀಕಿದಾಗ..ಕವಿತೆಯೊಂದು ಮನದಿ ಮೂಡಿದೆ!! ಕನಸುಗಳ ಚಿತ್ತಾರದಿ ಮನವಿರಲುಮನದ ಮಾತು ಹೃದಯವರಿತಿರಲುನೂರಾಸೆಯ ಭಾವವೇ ಕಣ್ಣಲಿರಲು..ಕಾವ್ಯವು ಮನದಾಗಸದಿ ಚಿತ್ತೈಸಿದೆ!! ಬಾಳಿನ ನವಭಾವಕೆ ನಾಂದಿಯ ಹಾಡಿಸಂತಸವದು ಕಂಗಳಲಿ ಮನೆಮಾಡಿಪದಭಂಡಾರವೇ ಮನೋನ್ಮಣಿಯಲಿ ಮೂಡಿಕವನವೊಂದು ಹೃದಯದಲಿ ಉದಯಿಸಿದೆ!! ಮನದ ಕಂಗಳಲಿ ನಲಿವಿನ ನೆಲೆಯಿರಲುನಿರ್ಜೀವದ ಭಾವಗಳಿಗೆ ಜೀವಸೆಲೆಯಿರಲುಸೋತ ಚಿಂತನೆಗೆ ಸವಿಸ್ಪೂರ್ತಿಯ ಅಮಲಿರಲು..ಕವಿತೆಯದು ಅಂತರಾಳವ ತೆರೆದಿದೆ!! ಸುಮನಾ ರಮಾನಂದಕೊಯಮ್ಮತ್ತೂರುRead More
ದೀಪಾವಳಿ – ಕತ್ತಲಿನಿಂದ ಬೆಳಕಿನೆಡೆಗೆ… ದೀಪಾವಳಿ ಪ್ರಮುಖ ಹಬ್ಬಗಳಲ್ಲಿ ಒಂದು. ಹಿಂದೂ, ಸಿಖ್, ಜೈನ, ಬೌದ್ಧ ಧರ್ಮದವರೂ ಮತಭೇದವಿಲ್ಲದೆ ಆಚರಿಸುವ ದೊಡ್ಡ ಹಬ್ಬ. ಅಸತೋಮ ಸದ್ಗಮಯ ತಮಸೋಮ ಜ್ಯೋತಿರ್ಗಮಯ ಎಂದರೆ, ಅಸತ್ಯದಿಂದ ಸತ್ಯದೆಡೆಗೆ ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವುದು ಎಂದರ್ಥ. ದೀಪ ಎಂದರೆ ಸೊಡರು. ಆವಳಿ ಎಂದರೆ ಸಮೂಹ. ದೀಪಾವಳಿ ಎಂದರೆ ದೀಪಗಳ ಸಮೂಹ ಅಂದರೆ ಬೆಳಕಿನ ಪ್ರತೀಕ. ಅಜ್ಞಾನದ ತಮಸ್ಸನ್ನು ಕಳೆದುಕೊಂಡು ಜ್ಞಾನದ ಜ್ಯೋತಿಯೆಡೆಗೆ ನಡೆಯುತ್ತಾ ಅರ್ಥಪೂರ್ಣ ಬದುಕನ್ನು ಕಂಡುಕೊಳ್ಳುವುದು. ಸ್ಕಂದ ಪುರಾಣ ಮತ್ತು ಪದ್ಮ ಪುರಾಣಗಳಲ್ಲಿ […]Read More
ಉಪಾಸನ ಬುಕ್ಸ್ ಪ್ರಕಾಶನ ಸಂಸ್ಥೆಯ 15 ಕೃತಿಗಳ ಬಿಡುಗಡೆ ಸಮಾರಂಭ ಉಪಾಸನ ಬುಕ್ಸ್ ಪ್ರಕಾಶನ ಸಂಸ್ಥೆಯ 15 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವು ದೀಪಾವಳಿಯ ಮುನ್ನಾ ದಿನವಾದ 19.10.2025, ಭಾನುವಾರದಂದು ಬೆಂಗಳೂರಿನಲ್ಲಿ ಸಾಹಿತ್ಯಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸುಮಧುರವಾದ ಪ್ರಾರ್ಥನೆಯ ನಂತರ ಹಿರಿಯ ಸಾಹಿತಿ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷರಾದ ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯನವರ ಅಧ್ಯಕ್ಷತೆಯಲ್ಲಿ ಪುಸ್ತಕಗಳು ಬಿಡುಗಡೆಗೊಂಡವು. ಪುಸ್ತಕ ಬಿಡುಗಡೆಯ ನಂತರ ಮಾತನಾಡಿದ ಶ್ರೀಯುತ ನಿಡಸಾಲೆ ಪುಟ್ಟಸ್ವಾಮಯ್ಯನವರು” ಇಂತಹ ಸಾಹಿತ್ಯದ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಬರಬೇಕು. […]Read More
ಅದೃಶ್ಯ ಬೇರುಗಳು – ಖೋ ಕಾದಂಬರಿ ಪುಸ್ತಕ : ಅದೃಶ್ಯ ಬೇರುಗಳುಪ್ರಕಾರ: ಖೋ ಕಾದಂಬರಿಪ್ರಕಟಣೆ : ಉಪಾಸನ ಬುಕ್ಸ್ದರ : 260 ಏಳು ಸ್ವರವು ಸೇರಿ ಸಂಗೀತವಾಗುವಂತೆ, ಏಳು ಲೇಖಕರ ಬರವಣಿಗೆಯು ಸೇರಿ ಇಲ್ಲಿ ಒಂದು ಗಂಭೀರವಾದ ಕಾದಂಬರಿಯಾಗಿದೆ. ಓದುತ್ತಿದ್ದರೆ, ಇದು ಏಳು ಜನರು ಹಂಚಿಕೊಂಡು ಬರೆದ ಕಾದಂಬರಿಯಂತೆ ಕಾಣಿಸದೆ, ಒಬ್ಬರೇ ಸೂತ್ರವಿಡಿದು ಬರೆದಂತೆ ತೋರುತ್ತದೆ ಎಂದರೆ ಈ ಬರಹಗಾರರ ವೇವ್ಲೆಂತ್ ಎಷ್ಟರಮಟ್ಟಿಗೆ ಹೊಂದಿಕೆಯಾಗಿರಬೇಕು ಎಂದು ಊಹಿಸಿಕೊಳ್ಳಬಹುದು! ವೈಜ್ಞಾನಿಕ ವಸ್ತುವನ್ನು ಹೊಂದಿದ್ದರೂ, ಇದು ನಿಂತಿರುವುದು ಭಾವನಾತ್ಮಕತೆಯ ತಳಹದಿಯ […]Read More
ಅಮ್ಮ ಅಂದ್ರೆ ಭೂಮಿ ಪುಸ್ತಕ : ಅಮ್ಮ ಅಂದ್ರೆ ಭೂಮಿಲೇಖಕರು: ಸ. ಹರೀಶ್ಪ್ರಕಟಣೆ : ಉಪಾಸನ ಬುಕ್ಸ್ದರ : 200/- ಲೇಖಕರ ಪರಿಚಯ ಸ.ಹರೀಶ್ಸಾಹಿತಿ,ಚಲನಚಿತ್ರ ನಿರ್ದೇಶಕರು, ನಿರ್ಮಾಪಕರು.ಈವರೆಗೆ ಐದು ಕಾದಂಬರಿಗಳು, ಐದು ಕಥಾಸಂಕಲನಗಳು,ಎಂಟು ಸಾವಿರಕ್ಕೂ ಹೆಚ್ಚು ಟಿ.ವಿ.ಧಾರಾವಾಹಿಗಳಿಗೆ ಕತೆ-ಚಿತ್ರಕತೆ-ಸಂಭಾಷಣೆ, ಕನ್ನಡ ಚಲನಚಿತ್ರಗಳಿಗೆ ಗೀತರಚನೆ, ಕತೆ-ಚಿತ್ರಕತೆ-ಸಂಭಾಷಣೆ 2018 ರ ಅತ್ಯುತ್ತಮ ಕತೆಗೆ ಕರ್ನಾಟಕ ರಾಜ್ಯ ಚಲನಚಿತ್ರ ರಾಜ್ಯಪ್ರಶಸ್ತಿ. ಲೇಖಕರ ನುಡಿ ಮತ್ತೆ ಸಂಧಿಸುವ ಸಮಯ ಬಂದಿದೆ. ವರ್ಷಕ್ಕೆರಡು ಬಾರಿಯಾದರೂ ನಿಮ್ಮೊಂದಿಗೆ ಮಾತನಾಡಲಿಲ್ಲ ಎಂದರೆ ಸಮಾಧಾನವೇ ಇರುವುದಿಲ್ಲ. ನಮ್ಮ ನಡುವೆ […]Read More
ಸುಡೋಕು – ಕಥಾಸಂಕಲನ ಪುಸ್ತಕ : ಸುಡೋಕುಲೇಖಕರು: ಪ್ರದೀಪ್ ಬೇಲೂರುಪ್ರಕಟಣೆ : ಉಪಾಸನ ಬುಕ್ಸ್ದರ : 130 ಲೇಖಕರ ನುಡಿ ಇದು ನನ್ನ ನಾಲ್ಕನೇ ಪುಸ್ತಕ. ಮೊದಲು ಬರೆದಿದ್ದು ಕಥಾ ಸಂಕಲನ. ತದನಂತರ ಕಾದಂಬರಿಯ ಕಡೆ ಮನಸ್ಸು ಹರಿಯಿತು. ಕಾದಂಬರಿಯ ಆಳದಲ್ಲಿ ಮುಳುಗಿದ್ದ ನನ್ನ ಮನಸ್ಸು ಕಥೆ ಕಟ್ಟುವಿಕೆಯಲ್ಲಿ ಇರುವ ಸೊಬಗನ್ನು ಮರೆತು ಬಿಟ್ಟಿತ್ತು. ಅದಕ್ಕೆ ಲಗಾಮು ಹಾಕಿ ಮತ್ತೆ ಕಾದಂಬರಿಯ ಕಡೆ ಎಳೆದಿದ್ದೇನೆ. ಎರಡು ಕಾದಂಬರಿಯ ನಂತರ ಮತ್ತೆ ಕಥಾ ಸಂಕಲನದ ಕಡೆ ಹೆಜ್ಜೆ ಇಟ್ಟಿದ್ದೇನೆ. […]Read More
ಹೂಮಾಲೆಯಾದ ಆಂಡಾಳು ಪುಸ್ತಕ : ಹೂಮಾಲೆಯಾದ ಆಂಡಾಳುಲೇಖಕರು: ಆಶಾ ರಘುಪ್ರಕಟಣೆ : ಉಪಾಸನ ಬುಕ್ಸ್ದರ : 120 ಲೇಖಕರ ಅರಿಕೆ ಸುಮಾರು ಏಳನೇ ಶತಮಾನದಲ್ಲಿ ಜೀವಿಸಿದ್ದ ಆಂಡಾಳು, ಹನ್ನೆರಡು ಜನ ಆಳ್ವಾರುಗಳಲ್ಲಿ ಒಬ್ಬಳು. ಇವಳ ಇನ್ನೊಂದು ಹೆಸರು ಗೋದಾದೇವಿ. ಇವಳು ಪೆರಿಯಾಳ್ವಾರರ ಸಾಕುಮಗಳು. ಕಟಕಮಾಸದ ಪೂರ್ವಫಾಲ್ಗುಣಿ ನಕ್ಷತ್ರದಲ್ಲಿ ಸಾಕ್ಷಾತ್ ಭೂದೇವಿಯೇ ಎಂದು ಪರಿಭಾವಿಸಲಾಗಿರುವ ಈಕೆಯ ಜನ್ಮದಿನೋತ್ಸವ ಜರುಗುತ್ತದೆ. ಆಂಡುಳುವಿನ ಕಥೆ ಪ್ರಸಿದ್ಧವಾಗಿರುವಂತಹುದು. ಪೆರಿಯಾಳ್ವಾರರು ದೇವರಿಗೆಂದು ಕಟ್ಟಿ ಇರಿಸುತ್ತಿದ್ದ ಹೂಮಾಲೆಯನ್ನು ಇವಳು ಮುಡಿದು ಲೋಹದ ಕನ್ನಡಿಯಲ್ಲಿ ತನ್ನನ್ನು ನೋಡಿಕೊಂಡು, […]Read More
ಶಮೀ ಶಮಯತೆ ಪಾಪಂ… ಬ್ರಹ್ಮಾಂಡದ ಪ್ರತೀ ಅಣುವಿನಲ್ಲೂ ದೈವತ್ವ ಕಾಣುವ, ಬ್ರಹ್ಮಾಂಡದಲ್ಲಿರುವ ಪ್ರತೀ ಪದಾರ್ಥದಲ್ಲೂ ಇರುವುದು ಒಂದೇ ಶಕ್ತಿ ಎಂದು ನಂಬುವ ಧರ್ಮ ಹಿಂದೂ ಧರ್ಮ. ಆ ಶಕ್ತಿಯನ್ನು ಕಂಡುಕೊಳ್ಳಲು ಮತ್ತು ಆರಾಧಿಸಲು ವಿವಿಧ ಮಾರ್ಗಗಳು ಇಲ್ಲಿವೆ. ಅವುಗಳಲ್ಲಿ ಅನೇಕ ರೀತಿಯ ಹಬ್ಬಗಳ ಮೂಲಕ ದೈವಾಚರಣೆ ಮತ್ತು ಆರಾಧನೆ ಪ್ರಮುಖ. ಧಾರ್ಮಿಕ ಆಚರಣೆ ಮತ್ತು ಶ್ರೇಷ್ಠ ಸುಂದರ ಹಬ್ಬಗಳಲ್ಲಿ ಒಂದಾದ ದಸರಾ ಹಬ್ಬವು ವಿಶಿಷ್ಟ. ಇದು ಕರ್ನಾಟಕದ ನಾಡ ಹಬ್ಬ. ಭಾರತ ದೇಶದ ವಿವಿಧೆಡೆ ಈ ಹಬ್ಬವನ್ನು […]Read More
ಭೈರಪ್ಪನವರಿರದ ಸಾಹಿತ್ಯಲೋಕದ ಶೂನ್ಯತೆ ನಮ್ಮ ಕರ್ನಾಟಕದ ಸಾಹಿತ್ಯಲೋಕದಲಿ ಚಿರಪರಿಚಿತವಾದ ಹೆಸರು ಎಸ್.ಎಲ್.ಭೈರಪ್ಪನವರದು. ಯಾವುದೇ ಗ್ರಂಥಾಲಯವಿರಲಿ, ಸಾಹಿತ್ಯ ಸಮ್ಮೇಳನವಿರಲಿ ಅಥವಾ ಪುಸ್ತಕ ಪ್ರದರ್ಶನದಂತಹ ಕಾರ್ಯಕ್ರಮದಲ್ಲಿ ಇವರ ಕಾದಂಬರಿ, ಕೃತಿಗಳು ಹೇರಳವಾಗಿ ಮಾರಾಟವಾಗದೇ ಜನಮನ್ನಣೆ ಪಡೆಯದೇ ಇರದು. ಅಂತಹ ಧೀಮಂತ ಸಾಹಿತಿ ಇವರು. ಭೈರಪ್ಪನವರ ಜನ್ಮದ ಊರು ಚನ್ನರಾಯಪಟ್ಟಣದ ಸಂತೇಶಿವರ. ತಮ್ಮ ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣವನ್ನು ಮುಗಿಸಿ ಹಲವಾರು ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಬರೆದ ಅನೇಕ ಕಾದಂಬರಿಗಳು ಕನ್ನಡ ಚಲನಚಿತ್ರವಾಗಿ ತೆರೆ ಕಂಡು ಕಾದಂಬರಿಗಳಷ್ಟೆ ಯಶಸ್ಸನ್ನು […]Read More