ಅವ ಬರುವ

ಅವ ಬರುವ ಓ ಮುಗಿಲೆಅವ ಬರುವಮಳೆಯಂತೆನನ್ನನಾವರಿಸಲು; ಮಳೆಬಿಲ್ಲೆಅವ ಬರುವಕಂಗಳಲಿ ರಂಗಿನಾಕಾಂತಿ ತುಂಬಲು; ಕೋಗಿಲೆಯೆಅವ ಬರುವಇನಿದನಿಯಲಿನುಡಿ ಕಲಿಸಲು; ಓ ನವಿಲೆಅವ ಬರುವನನ್ನಯಾ ನಡಿಗೆಗೆನಾಟ್ಯ ಕಲಿಸಲು; ಓ ವೀಣೆಅವ ಬರುವಮನದ ತಂತಿಯತಾ ಮೀಟಲು; ನೋವ ನೀಗಲುಅವ ಬರುವಸುಖದ ಸೆಲೆತಾನಾಗಿ ಬರುವ!! ಶ್ರೀವಲ್ಲಿ ಮಂಜುನಾಥRead More

ಭಕ್ತರ ಕಾಯುವ ದೊಡ್ಡ ಕಾಯಪ್ಪ

ಭಕ್ತರ ಕಾಯುವ ದೊಡ್ಡ ಕಾಯಪ್ಪ ತುಮಕೂರಿನಿಂದ ಕೊರಟಗೆರೆ ಮಾರ್ಗವಾಗಿ ತೋವಿನಕೆರೆ ಬಳಿಯ ಕುರಮಕೋಟೆ ಎಂಬ ಹಳ್ಳಿಗೆ ಹೋದರೆ ಸಿದ್ದರ ಬೆಟ್ಟದ ಬುಡದಲ್ಲಿ ನೆಲೆಸಿ ಕಷ್ಟ, ರೋಗ ರುಜಿನ ಎಂದು ನೊಂದು ಬರುವ ಭಕ್ತರ ಅಭಿಲಾಷೆಯನ್ನು ಇಡೇರಿಸುತ್ತಾ ದೊಡ್ಡಕಾಯಪ್ಪ ಎಂಬ ಹೆಸರಿನಿಂದ ಇಲ್ಲಿ ಅಂಜನೇಯ ಸ್ವಾಮಿ ನೆಲೆ ನಿಂತಿದ್ದಾನೆ. ಹಿಂದಿನಿಂದಲೂ ಇಲ್ಲಿಗೆ ಬರುವ ಭಕ್ತರಿಗೆ ಇರುವ ಖಾಯಿಲೆ ಹಾಗೂ ಕಷ್ಟ ನಿವಾರಣೆಯಾಗುತ್ತದೆಂಬ ನಂಬಿಕೆ ಇದ್ದು ಅದು ಹಾಗೆ ಮುಂದುವರೆದುಕೊಂಡು ಬಂದಿದೆ. ಈ ದೇವಸ್ಥಾನದ ಇತಿಹಾಸವನ್ನು ಹುಡುಕುತ್ತಾ ಹೋದರೆ ಅದು […]Read More

ಜನ್ಮದಿನದ (ಸಂ)ಭ್ರಮ

ಜನ್ಮದಿನದ (ಸಂ)ಭ್ರಮ ಸಂದಿಹವು ವರುಷಗಳುನೆನಪುಗಳ ಮೆರವಣಿಗೆಯಲಿನಾನು ಇಟ್ಟ ಹೆಜ್ಜೆಗಳ ಲೆಕ್ಕವಿಲ್ಲಕಂಡ ಕನಸುಗಳ ಪರಿವೆಯಿಲ್ಲ ನೆನಪುಗಳ ದಾರದಲಿ ಪೋಣಿಸಿಹಮಧುರ ನೆನಪುಗಳಹೂವಿನ ಘಮಲು ಮಾತ್ರಇಂದಿಗೂ ಆಗೀಗ ಕಾಡುತ್ತನನ್ನೊಳಗಿನ ನಾನು ಎಚ್ಚೆತ್ತುಒಮ್ಮೆ ಕಣ್ಣಹನಿಯು ಜಾರುತ್ತಮತ್ತೊಮ್ಮೆ ಹರಿಯಲಾಗದೇ ಇಂಗುತ್ತಾಮಗದೊಮ್ಮೆ ದಿಂಬಿನಾಸರೆಯಲ್ಲಿನಿರಾಳವಾಗಿ ನಿಟ್ಟುಸಿರು ಬಿಡುತ್ತದೆ ಅಂದು ಮುತ್ತಿನ ಹನಿಯಂತೆಫಳಫಳನೆ ಹೊಳೆದುಕೋಡಿ ಒಡೆದು ಜಾರಿದ ಕಣ್ಣೀರುಇಂದು ಕಟ್ಟೆ ಕಟ್ಟಿದರೂ ತುಂಬದಬರಡು ಜಲಾಶಯದಂತೆಅಳುವಿಗೂ ತತ್ವಾರ ತಂದಿದೆ ಬೆಳಕಿನರಮನೆಯಲ್ಲಿ ಕುಳಿತವಗೆಅಂತರಂಗದ ಕತ್ತಲೆಯ ತೊಡೆವದಾರಿ ಕಾಣದಾಗಿದೆಒಡಲೊಳಗಿನ ಬಾಗಿಲಿಗೆಬೀಗ ಜಡಿದಿರುವಾಗಗುರಿಗೆ ಎಲ್ಲಿಯ ದಾರಿ!? ಮೌನವನು‌ ಆಲಿಸಿದ ಕಿವಿಗೆಮಾತು ಇಷ್ಟವಾಗುತ್ತಿಲ್ಲನೆನಪಿನಂಗಳದಿ ಚದುರಿಹೋದಭಾವಗಳನ್ನು ಹೆಕ್ಕಿ […]Read More

ಕಲ್ಲು ಮೀನು

ಕಲ್ಲು ಮೀನು ಬಹುಶಃ ಕಡಲತೀರದಲ್ಲಿ ಅತ್ಯಂತ ಅಪಾಯಕಾರಿ ಎಂದರೇ ಅದು ಈ ಕಲ್ಲು ಮೀನು (ಸ್ಟೋನ್ ಪಿಶ್) ಇರಬಹುದು. ಸಾಮಾನ್ಯವಾಗಿ ಇವು ಸಾಗರದ ಹವಳದ ಬಂಡೆಗಳು, ಸಮುದ್ರದ ಹುಲ್ಲು ಮತ್ತು ಇತರೇ ಸಸ್ಯಗಳ ನಡುವೆಚಲನರಹಿತವಾಗಿರುತ್ತವೆ (ನಿಶ್ಚಲವಾಗಿ ಬಿದ್ದುಕೊಂಡಿರುತ್ತವೆ), ಕೆಲವೊಂದು ಸರ್ತಿ ಸಮುದ್ರದ ಮರಳಿನಡಿಯಲ್ಲಿ ದೇಹದ ತಲೆಯನ್ನ ಹೊರಹಾಕಿ ಸಮುದ್ರದ ಮರಳಿನಲ್ಲಿ ಬಾಗಶಃ ಮರೆಮಾಚಿಕೊಂಡು ಮುಚ್ಚಿಹಾಕಿಕೊಂಡಿರುತ್ತವೆ. ಇವು ಭೇಟೆಗಳ ಬೆನ್ನು ಹತ್ತಿ ಹೋಗುವುದಿಲ್ಲ. ತಮ್ಮ ಹತ್ತಿರ ಬರುವ ಭೇಟೆಗಳ ಮೇಲೆ ಮಿಂಚಿನಂತೆ ಎರಗಿ ಭೇಟೆಯಾಡಿ ಭಕ್ಷಿಸುತ್ತವೆ. ಇವುಗಳ ವಿಷ […]Read More

ಒಲವಿನ ನೋಟದುಯ್ಯಾಲೆ

ಒಲವಿನ ನೋಟದುಯ್ಯಾಲೆ ಸವಿಕಂಗಳ ನೋಟವು ಒಂದಾಗಿರಲುಅಂಕುರಿಸಿತು ಒಲವಿನ ಸೆಲೆ!ಜೀವಭಾವಗಳು ಜತೆಯಲಿ ಮಿಡಿದಿರಲು..ಅನುಭಾವದಲಿ ಕಂಡಿದೆ ನೆಲೆ!! ಕಾಡುವಾ ಸಂಪ್ರೀತಿಯ ಸೆಳೆತಕೆಭಾವತರಂಗಗಳ ನಿತ್ಯ ನರ್ತನ..!ಮೂಡುವಾ ಭಾವದ ಅಗ್ಗಿಷ್ಟಿಕೆಗೆ..ಪ್ರೀತಿಯಲೆಯ ಪನ್ನೀರ ಸಿಂಚನ!! ಸುಪ್ತಮನದ ಸಂತಸದೊಲುಮೆಗೆಮನದಂಗಳದಿ ಬಣ್ಣಗಳ ಚಿತ್ತಾರ!ಅಪ್ಪಳಿಸುವ ಅನುರಾಗದಲೆಗೆ..ಮಿಡಿದ ಹೃದಯವಾಗಿದೆ ಹಗುರ!! ಸರಿಸಾಟಿ ಜಗದಲಿ ಯಾವುದಿದೆಬಳ್ಳಿ ಮರವನು ಅಪ್ಪುವ ರೀತಿಗೆ..!ಸಂಕಟದಿ ನೊಂದ ಜೀವವರಳಿದೆ..ದೊರೆತಾಗ ಜನ್ಮದ ಪ್ರೀತಿಗೆ ಅದರ ನೀತಿಗೆ!! ಸುಮನಾ ರಮಾನಂದRead More

ಕಂಟಕದ ಸಮಯದಲ್ಲಿನ ತಾಳ್ಮೆ – ಸಂಯಮ

ಕಂಟಕದ ಸಮಯದಲ್ಲಿನ ತಾಳ್ಮೆ – ಸಂಯಮ ಮಹಾಭಾರತ ಮಹಾಯುದ್ಧದಲ್ಲಿ ಕೌರವರ ಮತ್ತು ಪಾಂಡವರ ಬಿಲ್ವಿದ್ಯೆಯ ಗುರುಗಳಾದ ದ್ರೊಣಾಚಾರ್ಯರು ಕೊಲ್ಲಲ್ಪಟ್ಟಾಗ ಅವರ ಮಗ ಅಶ್ವತ್ಥಾಮನಿಗೆ ಸಹಿಸಲು ಅಸಾಧ್ಯವಾದ ನೋವು, ದುಃಖ, ಕ್ರೋಧ ಮತ್ತು ದ್ವೇಷ ಉಂಟಾಗಿತ್ತು. ಆ ಕೋಪದ ಆವೇಶದಲ್ಲಿ ಪಾಂಡವರನ್ನೆಲ್ಲರನ್ನು ಸಂಹರಿಸಲು ಅಶ್ವತ್ಥಾಮನು ಅತ್ಯಂತ ಭಯಾನಕ ಮತ್ತು ವಿಧ್ವಂಸಕಾರಿಯಾದ ನಾರಾಯಣ ಅಸ್ತ್ರವನ್ನು ಪಾಂಡವರ ಸೈನ್ಯದ ಮೇಲೆ ಪ್ರಯೋಗಿಸಿದನು.ಒಮ್ಮೆ ಪ್ರಯೋಗಿಸಲ್ಪಟ್ಟ ನಾರಾಯಣ ಅಸ್ತ್ರವನ್ನು ನಿಷ್ಕ್ರಿಯಗೊಳಿಸುವುದು ಯಾರಿಂದಲೂ ಸಾಧ್ಯವಿರಲಿಲ್ಲ. ಶಸ್ತ್ರಸಜ್ಜಿತರಾದ ಹಾಗೂ ಆಯುಧಗಳನ್ನು ಹಿಡಿದುಕೊಂಡು ಎದುರಾಳಿಯ ಮೇಲೆ ಧಾಳಿಮಾಡಲು ಪ್ರಯತ್ನಿಸುವವರನ್ನು […]Read More

ಸೂಲಗಿತ್ತಿ ಪಾರವ್ವ

ಸೂಲಗಿತ್ತಿ ಪಾರವ್ವ ” ಏನ ಪಾರವ್ವ ಇವತ್ತು ಯಾವುದು ಡೆಲಿವರಿ ಕೇಸ್ ಬಂದಿಲ್ಲ ಏನೋ? ಅಂತಾ ಕೂಲಿ ಕೆಲಸಕ್ಕೆ ಹೊಂಟಿದ್ದ ರತ್ನವ್ವ ಕೇಳಿದಳು. ಯಾವುದೂ ಇಲ್ಲ ನೋಡ ತ೦ಗಿ ಅಂತಾ ಪಾರವ್ವ ಮುಗುಳುನಕ್ಕಳು”, ನಡು ರಸ್ತೆಯಲ್ಲಿ ಬೀದಿ ನಾಯಿ ಮರಿ ಹಾಕಿತ್ತು. ಯಾವುದಾದರೂ ಗಾಡಿ ಹಾಯ್ದು, ಇಲ್ಲಾ ಯಾರಾದರೂ ತುಳಿದು ಮರಿಗಳು ಸಾಯಬಾರದೆಂದು, ಮರಿಗಳನ್ನು ಸೀರೆಯ ಸೆರಗಿನಲ್ಲಿ ಹಾಕಿಕೊ೦ಡು ತಂದು, ಮನೆಯ ನೆರಳಿಗೆ ಹಾಸಿದ್ದ ಮೆತ್ತನೆಯ ಚೀಲದ ಮೇಲೆ ಹಾಕಿದಳು. ಬಾಣ೦ತಿ ನಾಯಿಗೆ ಹಾಲು ಕಲಸಿದ ಅನ್ನ […]Read More

ಡೇರ್ ಡೆವಿಲ್ ಮುಸ್ತಫಾ – ಪೂಚಂತೇ ಸಿನಿಮಾ

ಡೇರ್ ಡೆವಿಲ್ ಮುಸ್ತಫಾ – ಪೂಚಂತೇ ಸಿನಿಮಾ ಕನ್ನಡದ ಖ್ಯಾತ ಬರಹಗಾರರಾದ ಪೂರ್ಣಚಂದ್ರ ತೇಜಸ್ವಿ ನಾಡಿನಾದ್ಯಂತ ಬಹು ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಈಗಲೂ ಅವರ ಕೃತಿಗಳನ್ನು ಮೊದಲಬಾರಿಗೆ ಓದಿದ ಅನೇಕರು ಅಭಿಮಾನಿಗಳ ಪಟ್ಟಿಯಲ್ಲಿ ಸೇರುತ್ತಿದ್ದಾರೆ. ಪೂಚಂತೇ ಅವರ ಅಭಿಮಾನಿಗಳು ಕೇವಲ ಒಂದೆರಡು ವರ್ಗಕ್ಕೆ ಸೇರದೆ ಬಹುತೇಕ ಎಲ್ಲಾ ವರ್ಗದಲ್ಲಿರುವುದು ವಿಶೇಷವೇ ಸರಿ. ಯುವಕರಲ್ಲದೆ ಮಕ್ಕಳು, ಮಹಿಳೆಯರು, ವಯಸ್ಸಾದವರು, ತರಕಾರಿ ಮಾರುವವರು, ಕಿರಾಣಿ ಅಂಗಡಿಯವರು, ಆಟೋ ಚಾಲಕರು ಇನ್ನೂ ಅನೇಕ ವೃತ್ತಿಗಳಲ್ಲಿ ಇರುವವರು, ಕಡಿಮೆ ಓದುವ ಹವ್ಯಾಸ ಇರುವವರು […]Read More

ಅಮ್ಮನೆಂದರೆ….

ಅಮ್ಮನೆಂದರೆ…. ಅತೃಪ್ತ ಜೀವವಸಂತೈಸುವ ಮಡಿಲು;ಚಿಂತೆಯ ಚಿತೆಗೇರಿಸೊಪ್ರಸನ್ನತೆಯ ಮುಗುಳು; ಅಶಾಂತ ಮನವಶಾಂತಗೊಳಿಪ ಜೋಗುಳ;ಹಸಿದ ಹೊಟ್ಟೆಯಉರಿಯರಿತ ಕೈತುತ್ತು; ಅಶಕ್ತ ದೇಹಕೆ ಶಕ್ತಿತುಂಬುವ ಆಲಿಂಗನ;ಪರರೊಳಿತಿಗೆ ಬೇಡುವಅಚಲ ಪ್ರಾರ್ಥನೆ: ಮೊಗೆದಷ್ಟೂ ಉಕ್ಕುವಬತ್ತದ ಪ್ರೀತಿಯೊರತೆ;ನವಚೈತನ್ಯವನೀವಸಗ್ಗದ ಅಮೃತಸುಧೆ : ಎಡವಿದಾಗ ಮೇಲೆತ್ತಿಹಿಡಿವ ಕರ ಕಮಲ,ಸೋತ ನೆಗಲಿಗೆಆಸರೆಯಾದ ಹೆಗಲು: ಕತ್ತಲ ಹಾದಿಯನುಬೆಳಗುವ ಕಿರುದೀಪ;ಚಿಗುರು ನಳನಳಿಸಲುನೀರುಣಿಪ ತಾಯಿಬೇರು!! ಶ್ರೀವಲ್ಲಿ ಮಂಜುನಾಥRead More

ಒಲವಿನಾಸರೆಯಲಿ ಲೋಕ

ಒಲವಿನಾಸರೆಯಲಿ ಲೋಕ ಈ ಭೂಮಿ ಆ ಬಾನು ಒಂದಾದಂತೆಕಂಗಳಿಗೆ ಚೆಂದ ಆ ಕ್ಷಿತಿಜ..ಬೇರೇನು ಬೇಕು ಬದುಕಲಿಅಮಿತ ಒಲವಿರಲು ತೃಪ್ತ ಮನುಜ!! ದಿಗಂತದಿ ಬಾನಂಗಳದೋಕುಳಿಯುಭವ್ಯ ಸ್ವಾಗತ ಕೋರಿದೆ..ಬದುಕಲಿ ಬೆಳಕು ನೀನಾದ ಪರಿಗೆಮನದಂತರಾಳದಿ ಸಡಗರ ಮೂಡಿದೆ!! ಒಲವಿನಲಿ ಅಪ್ಪಿಹ ತರುಬಳ್ಳಿಗಳಲಿಕಂಡಿತು ಲೋಕದ ಸತ್ಯ..ಜಗದಲಂಕುರಿಸಿಹ ಪ್ರೇಮವೊಂದುಳಿದುಬಾಳಲಿ ಮಿಕ್ಕೆಲ್ಲವೂ ಮಿಥ್ಯ!! ಜೀವನದೊಲವಿನಲಿ ಸುಖದುಃಖವುನಾಣ್ಯದ ಎರಡು ಮೊಗಗಳಂತೆ…ಒಮ್ಮೆ ನಗು ಒಮ್ಮೆ ಅಳುಇರುಳಳಿದು ದಿವ್ಯ ಬೆಳಗು ಬಂದಂತೆ!! ಸುಮನಾ ರಮಾನಂದRead More