ಡೇರ್ ಡೆವಿಲ್ ಮುಸ್ತಫಾ – ಪೂಚಂತೇ ಸಿನಿಮಾ ಕನ್ನಡದ ಖ್ಯಾತ ಬರಹಗಾರರಾದ ಪೂರ್ಣಚಂದ್ರ ತೇಜಸ್ವಿ ನಾಡಿನಾದ್ಯಂತ ಬಹು ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಈಗಲೂ ಅವರ ಕೃತಿಗಳನ್ನು ಮೊದಲಬಾರಿಗೆ ಓದಿದ ಅನೇಕರು ಅಭಿಮಾನಿಗಳ ಪಟ್ಟಿಯಲ್ಲಿ ಸೇರುತ್ತಿದ್ದಾರೆ. ಪೂಚಂತೇ ಅವರ ಅಭಿಮಾನಿಗಳು ಕೇವಲ ಒಂದೆರಡು ವರ್ಗಕ್ಕೆ ಸೇರದೆ ಬಹುತೇಕ ಎಲ್ಲಾ ವರ್ಗದಲ್ಲಿರುವುದು ವಿಶೇಷವೇ ಸರಿ. ಯುವಕರಲ್ಲದೆ ಮಕ್ಕಳು, ಮಹಿಳೆಯರು, ವಯಸ್ಸಾದವರು, ತರಕಾರಿ ಮಾರುವವರು, ಕಿರಾಣಿ ಅಂಗಡಿಯವರು, ಆಟೋ ಚಾಲಕರು ಇನ್ನೂ ಅನೇಕ ವೃತ್ತಿಗಳಲ್ಲಿ ಇರುವವರು, ಕಡಿಮೆ ಓದುವ ಹವ್ಯಾಸ ಇರುವವರು […]Read More
ಅಮ್ಮನೆಂದರೆ…. ಅತೃಪ್ತ ಜೀವವಸಂತೈಸುವ ಮಡಿಲು;ಚಿಂತೆಯ ಚಿತೆಗೇರಿಸೊಪ್ರಸನ್ನತೆಯ ಮುಗುಳು; ಅಶಾಂತ ಮನವಶಾಂತಗೊಳಿಪ ಜೋಗುಳ;ಹಸಿದ ಹೊಟ್ಟೆಯಉರಿಯರಿತ ಕೈತುತ್ತು; ಅಶಕ್ತ ದೇಹಕೆ ಶಕ್ತಿತುಂಬುವ ಆಲಿಂಗನ;ಪರರೊಳಿತಿಗೆ ಬೇಡುವಅಚಲ ಪ್ರಾರ್ಥನೆ: ಮೊಗೆದಷ್ಟೂ ಉಕ್ಕುವಬತ್ತದ ಪ್ರೀತಿಯೊರತೆ;ನವಚೈತನ್ಯವನೀವಸಗ್ಗದ ಅಮೃತಸುಧೆ : ಎಡವಿದಾಗ ಮೇಲೆತ್ತಿಹಿಡಿವ ಕರ ಕಮಲ,ಸೋತ ನೆಗಲಿಗೆಆಸರೆಯಾದ ಹೆಗಲು: ಕತ್ತಲ ಹಾದಿಯನುಬೆಳಗುವ ಕಿರುದೀಪ;ಚಿಗುರು ನಳನಳಿಸಲುನೀರುಣಿಪ ತಾಯಿಬೇರು!! ಶ್ರೀವಲ್ಲಿ ಮಂಜುನಾಥRead More
ಒಲವಿನಾಸರೆಯಲಿ ಲೋಕ ಈ ಭೂಮಿ ಆ ಬಾನು ಒಂದಾದಂತೆಕಂಗಳಿಗೆ ಚೆಂದ ಆ ಕ್ಷಿತಿಜ..ಬೇರೇನು ಬೇಕು ಬದುಕಲಿಅಮಿತ ಒಲವಿರಲು ತೃಪ್ತ ಮನುಜ!! ದಿಗಂತದಿ ಬಾನಂಗಳದೋಕುಳಿಯುಭವ್ಯ ಸ್ವಾಗತ ಕೋರಿದೆ..ಬದುಕಲಿ ಬೆಳಕು ನೀನಾದ ಪರಿಗೆಮನದಂತರಾಳದಿ ಸಡಗರ ಮೂಡಿದೆ!! ಒಲವಿನಲಿ ಅಪ್ಪಿಹ ತರುಬಳ್ಳಿಗಳಲಿಕಂಡಿತು ಲೋಕದ ಸತ್ಯ..ಜಗದಲಂಕುರಿಸಿಹ ಪ್ರೇಮವೊಂದುಳಿದುಬಾಳಲಿ ಮಿಕ್ಕೆಲ್ಲವೂ ಮಿಥ್ಯ!! ಜೀವನದೊಲವಿನಲಿ ಸುಖದುಃಖವುನಾಣ್ಯದ ಎರಡು ಮೊಗಗಳಂತೆ…ಒಮ್ಮೆ ನಗು ಒಮ್ಮೆ ಅಳುಇರುಳಳಿದು ದಿವ್ಯ ಬೆಳಗು ಬಂದಂತೆ!! ಸುಮನಾ ರಮಾನಂದRead More
ಊರ್ಮಿಳೆಗೆ….. ನೀನು ಅಲ್ಲಿ ಸೊರಗುತ್ತಿದ್ದೆನಾನು ಇಲ್ಲಿ ಕೊರಗುತ್ತಿದ್ದೆಎಲ್ಲವಿದ್ದೂ ಇಲ್ಲದಂತೆಒಳಗುದಿಯು ಕಾಣದಂತೆನಾವು ಬದುಕುತ್ತಿದ್ದೆವು…. ನನ್ನ ಎದೆಯ ತುಂಬಾ ಪ್ರೀತಿನಿನ್ನ ಮನದ ಕಕ್ಕಲಾತಿಅನುಜನವನು ನನ್ನ ರಾಮಭಾರ್ಯೆ ನೀನು ನನ್ನ ಭಾಮೆನಯನಗಳೆರೆಡು ನೀವು… ಅಪ್ಪನಾಜ್ಞೆ ಮೀರಲಿಲ್ಲಅವನು ನನ್ನ ರಾಮವನವಾಸಕೆ ಹೆದರಲಿಲ್ಲಅವಳು ಮಾತೆ ಸೀತೆನೀನು ಮಾತ್ರ ತ್ಯಾಗಮೂರ್ತಿಮನದ ಒಡತಿ ಊರ್ಮಿಳೆ… ನಿನ್ನ ಬಿಟ್ಟು ನಾನು ಬಂದೆಮನವನಲ್ಲೇ ನೆಟ್ಟು ಬಂದೆಹೂವು ದುಂಬಿ ಬೇರೆಯಾಗಿಮಕರಂದವು ಕರಗಿದಾಗರಾಗವಿರದ ಪರಾಗ… ಮನದ ಗುಡಿಯಲಿದ್ದೆ ನೀನುಕಾಡಿನ ಜೋಪಡಿಯಲಿ ನಾನುಅರಮನೆಯ ಶೃಂಗಾರಕೂವೈರಾಗ್ಯದ ಸಿಂಚನಬಿಡಲಾಗದ ಭಾವಬಂಧನ… ಇನ್ನು ಕಾಯಲಾರೆ ನಾನುನನ್ನ ಮನದ ಅರಸಿ […]Read More
ಹೆಲ್ಮೆಟ್ ಖರೀದಿಯಲ್ಲಿ ಇರಲಿ ಎಚ್ಚರ ದ್ವಿಚಕ್ರ ವಾಹನವೆಂದರೆ ಕ್ರೇಜ್ಗೆ ಬೀಳುವ ಯುವಕ ಯುವತಿಯರು ಸುಪ್ರೀಂ ಕೋರ್ಟ್ ಜಾರಿಗೆ ತಂದಿರುವ ದ್ವಿಚಕ್ರವಾಹನ ಸವಾರಿಯ ಸಂದರ್ಭದಲ್ಲಿ ಸವಾರರಿಗೆ ‘ಹೆಲ್ಮೆಟ್ ಕಡ್ಡಾಯ’ ವಾಗಿ ಧರಿಸಬೇಕೆಂಬ ನಿಯಮ ಜಾರಿಗೆ ತಂದಾಗ ಮುಖ ಸಿಂಡರಿಸಿದ್ದು ಸುಳ್ಳಲ್ಲ. ಹೆಲ್ಮೆಟ್ ಧಾರಣೆಯಿಂದ ಅಪಘಾತಗಳಾದಾಗ ನೇರ ತಲೆಗೆ ಏಟಾಗಿ ಪ್ರಾಣಾಪಾಯ ಆಗದಿರಲಿ ಎಂಬ ಕಾರಣಕ್ಕಾಗಿ ಸಂಪೂರ್ಣ ತಲೆಯನ್ನು ರಕ್ಷಿಸಬಲ್ಲ ಹೆಲ್ಮೆಟ್ಗಳನ್ನು ಧರಿಸುವಂತೆ ನ್ಯಾಯಾಲಯ ಶಿಫಾರಸ್ಸು ಮಾಡಿದೆ. ಅದರರ್ಥ ಸಂಪೂರ್ಣವಾಗಿ ಸವಾರರ ತಲೆಯನ್ನು ಮುಚ್ಚುವ, ISI ಗುರುತಿರುವ ಹೆಲ್ಮೆಟ್ಗಳನ್ನೇ ಕಾನೂನು […]Read More
ಬದುಕು ಮನ್ವಂತರ ಆಕಸ್ಮಿಕ ತಿರುವಿನಲ, ಅನಿರೀಕ್ಷಿತ ಕೋನಗಳಿಂದಅಚರಿಗಳ ತೂರುವ ಈ ಬದುಕಿನಲಿ ಒ೦ದಿಷ್ಟುಜಾಗರೂಕತೆಯಿರಬೇಕಿದೆ ; ಬಾಳಿನ ಸಮಸ್ಯೆಗಳಿಗೆ ನಿಶ್ಚಿತ ಪರಿಹಾರವಿಲ್ಲದಾರಿಯ ಅನುಭವ, ಅನುಭಾವದಲ್ಲಿನಾವೇಅರಿತುಕೊಳ್ಳಬೇಕಿದೆ: ನೋವನಗಿದು ನು೦ಗಿಯೂ, ಬದುಕೊಮೆಮ್ಮೆ ಕರುಣೆತೋರಿ ಎಸೆವ ಹರುಕು ಹಗವ ಜಗ್ಗಿ ಹಿಡಿಯುತ್ತಾಮತ್ತೆ, ಮತ್ತೆ ಮೇಲೆ ಜೀಕಬೇಕಿದೆ; ಎದೆಯಾಳದ ಬಿಕ್ಕುಗಳಿಗೆ ಒಮೊಮ್ಮೆ ಬೀಗಿಕ್ಕಿನಗುಮೊಗವ ಧರಿಸುತ್ತಾ ಜಗದ ನಿಜ ನಗುವಿನಜಾಡನ್ನರಸಿಬಿಡಬೇಕಿದೆ ; ಬೆ೦ಕಿಗೆ ಕರಗುವ, ಅರಗಿನ ಅರಮನೆಯಂತಿರುವಈ ಬದುಕು ತಾ ಕರಗುವ ಮುನ್ನ ನಗುವ ಹಂಚಿ,ಪ್ರೀತಿಯ ಪಡೆಯಬೇಕಿದೆ ; ಹುಚ್ಚುಚ್ಚು ಭಾವುಕತೆ, ಕಪಟ ಭರವಸೆಯ,ಕನಸು- ಸಾರವಿರದ, […]Read More
ಅಯ್ಯೋ….. ಮಳೆಯೇ! ಬಾನು ಭೂಮಿ ಒಂದಾದಂತೆ ಮಳೆ. ಅದೆಷ್ಟು ಕಾಲದ ಹಸಿವೋ ಎಂಬಂತೆ ಮುಸಲಧಾರೆ. ಕಾಡೆಂದರೆ ಕಾಡಿಲ್ಲ, ಊರೆಂದರೆ ಊರಿಲ್ಲ ; ಅಂಥಾರ್ಭಟದ ಜಲಪ್ರ ಳಯ.ಇಡೀ ಒಂದು ರಾತ್ರಿ ಸುರಿದ ಮಳೆಗೆ ಆ ಹಳ್ಳಿ ಗಾಣಕ್ಕೆ ಸಿಕ್ಕಿದ ಕಬ್ಬಾಗಿತ್ತು . ಮುಂಜಾನೆ ಆಯ್ತು ಅನ್ನೋವಷ್ಟ ರಲ್ಲಿ ಏನೂ ಆಗಿಲ್ಲದ ಮದುವಣಗಿತ್ತಿಯ ಮೈ ಘಮದ ಭಾವ ಊರ ನೆಲದ್ದು . ಬಿದ್ದ ಮರ, ಕಳಚಿದ ಕಂಬ, ಕೊರೆದ ಹಳ್ಳ , ಕೊಚ್ಚಿ ಹೋದ ಫಸಲು, ಕಾಣೆಯಾದ ದನ- ಕರ. […]Read More
ಗಂಗಾವತರಣ.. ಮಳೆಯು ತಾನು ಇಳೆಗೆ ಇಳಿದುಹಸಿದ ನೆಲಕೆ ಹರುಷ ತರಲುಹೊಂಗೆ ತೆಂಗು ಬಾಳೆಯೆಲ್ಲಮುದದಿ ನಕ್ಕು ನಲಿದವು ಗಿರಿಯ ತುದಿಯ ಅಂಚಿನಿಂದಹರಿವ ತೊರೆಯ ನೋಟ ಚಂದಬಳುಕಿ ಬಳಸಿ ಸಾಗುತಿರಲುಜಲಲ ಧಾರೆ ಅದುವೆ ಅಂದ ಚಿಲಿಪಿಲಿಸುವ ಪಕ್ಷಿಗಳಲಿಅರಳಿ ನಗುವ ಹೂಗಳಲಿಕುಣಿದು ನಲಿವ ಜಿಂಕೆಗಳಲಿಧರೆಯು ಖುಷಿಯ ಕಂಡಿದೆ ಮನದ ಕೊಳೆಯು ದೂರವಾಗಿತನುವ ಕಳೆಗೆ ಹೊಳಪು ಮೂಡಿಭಾವ ಝರಿಗೆ ಮೊಗವ ತೋರಿಮನವು ಇಂದು ನಲಿದಿದೆ ರವಿಯು ಪೂರ್ವದಿಂದ ಮೂಡಿಕವಿಯ ಮನವು ಹಾಡ ಹಾಡಿದೂರ ತೀರದಿಂದ ಬೆಳಕುನಲಿವಿನಲೆಯ ತಂದಿದೆ ಧರೆಯ ತುಂಬ ಸಿರಿಯು ಉಕ್ಕಿಸುರಿವ […]Read More
ಅಪ್ಪನ ವಾತ್ಸಲ್ಯದೊಲುಮೆ ಅಮ್ಮನಂತೆ ಅಪ್ಪನ ಪ್ರೀತಿಎಂದೂ ಭೋರ್ಗರೆಯದಲ್ಲ…!ಆದರೂ ಅವನೊಲುಮೆಯಲಿಅದರ ರೀತಿಯಲಿ ಎರಡು ಮಾತಿಲ್ಲ..! ಕಟ್ಟಿದ ಹಗ್ಗ ಬಿಟ್ಟೊಡನೆ ಕರುಜಿಗಿಯುವುದು ಹೆತ್ತ ಹಸುವಿನೆಡೆಗೆ..!ಅಂತೆಯೇ ಪುಟ್ಟ ಸಲಹೆಗೂ…ಮಕ್ಕಳೋಡುವರು ತಂದೆಯೆಡೆಗೆ!! ಜಾರಿ ಬಿದ್ದಾಗ ಕೈಹಿಡಿದೆಬ್ಬಿಸಿಬೆನ್ನುತಟ್ಟಿ ನಾನಿದ್ದೇನೆನುವಾ ಅಪ್ಪ..!ಮುಗ್ಗರಿಸಿದಾಗ ತಲೆನೇವರಿಸಿ..ಸಾಧನೆಯೆಡೆಗೆ ದಾರಿ ತೋರುವನು ಅಪ್ಪ!! ಆಗಸದಷ್ಟು ಅಳೆಯಲಾರದಮಮತೆ ತುಂಬಿದೆ ತಂದೆಯ ಹೃದಯದಲಿ!ಯಾವ ಕಾರಣಕೂ ನಮ್ಮಿಂದಿನಿತೂ..ನೋವಾಗದಿರಲಿ ಆ ಮನದಲಿ!! ಸುಮನಾ ರಮಾನಂದRead More
ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನ ನಮ್ಮ ದೇಶದ ಹೆಚ್ಚಿನೆಲ್ಲ ದೇವಸ್ಥಾನಗಳು ಪರ್ವತ ಪ್ರದೇಶಗಳಲ್ಲಿ, ನೀರಿನಿಂದಾವೃತವಾದ ಪ್ರದೇಶಗಳಲ್ಲಿ ಅಥವಾ ವಿಭಿನ್ನವಾದ ಭೌಗೋಳಿಕ ಪ್ರದೇಶಗಳಲ್ಲಿ ನೆಲೆ ನಿಂತಿರುವುದು ನಮ್ಮ ದೇಶದ ಧಾರ್ಮಿಕ ಸ್ಥಳಗಳ ವಿಶೇಷತೆಗಳಲ್ಲಿ ಒಂದಾಗಿದೆ. ಅದರಲ್ಲೂ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವ ಬಹುತೇಕ ಪ್ರಮುಖ ದೇವಾಲಯಗಳು ವಿಭಿನ್ನವಾದ ಭೌಗೋಳಿಕ ಪ್ರದೇಶಗಳಲ್ಲಿ ನೆಲೆ ನಿಂತಿರುವುದು ಹಾಗೂ ಇಲ್ಲಿ ಅದರದೇ ಆದ ಪೌರಾಣಿಕ ಹಿನ್ನೆಲೆಯನ್ನು ಹೊಂದಿರುವುದು ಒಂದು ರೀತಿಯಲ್ಲಿ ವಿಭಿನ್ನತೆಯಲ್ಲಿ ವಿಭಿನ್ನವಾಗಿ ಕಾಣಿಸುತ್ತದೆ. ಇಲ್ಲೊಂದು ವಿಶೇಷವಾದ ದೇವಸ್ಥಾನವಿದ್ದು, ಈ […]Read More