ಆರಿಫ್ ನ ಕ್ರೌಂಚ ಪಕ್ಷಿ ಪ್ರೇಮ

ಆರಿಫ್ ನ ಕ್ರೌಂಚ ಪಕ್ಷಿ ಪ್ರೇಮ ಆರಿಫ್ ಖಾನ್ ಉತ್ತರಪ್ರದೇಶದ ಅಮೇಥಿ ಜಿಲ್ಲೆಯ ಮಂಧ್ಕಾಎಂಬ ಹಳ್ಳಿಯೊಂದರ ರೈತ. ಫೆಬ್ರವರಿ 2022 ರ ಒಂದು ಮುಂಜಾನೆ ತನ್ನ ಹೊಲದಲ್ಲಿ ತಿರುಗಾಡುತಿದ್ದಾಗ ಸಾರಸ್ ಕೊಕ್ಕರೆ ಅಥವಾ ಕ್ರೌಂಚ ಪಕ್ಷಿಯೊಂದು ಬಿದ್ದಿರುವುದನ್ನು ನೋಡಿದನು. ಸತ್ತ ಪಕ್ಷಿಯೆಂದು ತಿಳಿದು ಅದರ ಸಮೀಪಕ್ಕೆ ಹೋಗಿ ಪರಿಶೀಲಿಸಿದಾಗ ಅದರ ಕಾಲಿಗೆ ಮಾರಣಾಂತಿಕವಾಗಿ ಪೆಟ್ಟು ತಗುಲಿ ಹಾರಲಾರದೆ ಇನ್ನೂ ಉಸಿರಾಡುತ್ತಿರುವುದನ್ನು ಕಂಡು ಕೂಡಲೇ ಅದನ್ನು ತನ್ನ ಮನೆಗೆ ಸಾಗಿಸಿ ತನಗೆ ಗೊತ್ತಿರುವ ಪ್ರಕೃತಿ ಚಿಕಿತ್ಸೆಗಳನ್ನು ಮಾಡಿದನು. ಕಾಲಿಗೆ […]Read More

ರಾಮ ಭಕ್ತ ಹನುಮ

ರಾಮ ಭಕ್ತ ಹನುಮ ಆಂಜನೇಯಗೆ ಶರಣು |ನಮ್ಮ ಮಹಿಮಾನ್ವಿತನಿಗೆ ಶರಣು ||ವಾಯುಪುತ್ರಗೆ ಶರಣು |ನಮ್ಮರಾಮ ಭಕ್ತನಿಗೆ ಶರಣು || ||೧|| ಅಂಜನಿ ಪುತ್ರ ಹನುಮಂತಕೇಸರಿ ತನಯ ಹನುಮಂತ |ಸುಗ್ರೀವ ಸಚಿವ ಹನುಮಂತಮಹಾ ಶಕ್ತಿವಂತ ಹನುಮಂತ || ೨|| ಕೇಳೋಣ ಆಂಜನೇಯನ ಮಹಿಮೆಯನುನೋಡೋಣ ಅವನ ಪರಾಕ್ರಮವನು |ಸಾಗರವನ್ನು ದಾಟಿದನುಸೀತಾ ಮಾತೆಯ ಹುಡುಕಿದನು|| ||೩|| ಲಂಕಿಣಿಯನು ಯುದ್ಧದಿ ಕೊಂದನುಲಂಕೆಗೆ ಸೇತುವೆ ಕಟ್ಟಿಸಿದನು|ಸಂಜೀವಿನಿ ಬೆಟ್ಟವನು ತಂದನುಸೀತಾ ಮಾತೆಯನು ಕರೆತಂದನು || ||೪|| ನಾಗರಾಜು. ಹಬೆಂಗಳೂರುRead More

ನೀ ನನ್ನ ಎಡಗೈ ಆಗುವೆಯಾ?

ನೀ ನನ್ನ ಎಡಗೈ ಆಗುವೆಯಾ? ಎಂದೂ ಇರುವಿಕೆಯ ತೊರ್ಪಡಿಸದ,ಮುಂದು ನಾನೆಂದು, ಮುಂದೆ ಬಾರದಹಿಂದಿದ್ದರೂ ಪಕ್ಕೆಲುಬಿನಂತೆ ದೃಢವಾದನನ್ನ ಎಡಗೈ ಆಗುವೆಯಾ? ಬಲಗೈ ಉತ್ಸವಮೂರ್ತ, ಎಲ್ಲಕ್ಕೂ ಮುಂದೆ,ಎಲ್ಲ ಕಾರ್ಯಕು ತಾ ಮುಂದೆನಾನು ಎಂದು ಅಹಮಿಕೆ ಪಡುವ ಮನುಜನಂತೆಅದಕೆ ಪೆಟ್ಟುಬೀಳುವ ತನಕ ಅಯ್ಯೋ ಎಂದು ಬಲಗೈ ನೋವಲಿ ಮುಲುಗುವ ಸಮಯಎಲ್ಲಿದ್ದೀತೋ ಎಡಗೈ, ನಾನಿದ್ದೀನಿ ಎಂದು ಬಂತು ಮುಂದೆ ಅಳುವ ಕಂದನ ತಾಯಿ ಹಿಡಿದಪ್ಪಿ ಸಂತೈಸುವಂತೆನೋವಲಿ ಮಿಡಿದ ಬಲಗೈಯ ಹಿಡಿದು ನುಡಿಯಿತು, ಇನ್ನು ನೀ ವಿಶ್ರಮಿಸುನಾನಿರುವೆ ನಿನ್ನ ಹಿಂದೆ ನಡೆಸಿತು ಎಲ್ಲ ಕಲಾಪ,ಆಗತಾನೆ […]Read More

ಹೀಗೊಂದು ಪ್ರೇಮದ ಗಜ಼ಲ್

ಹೀಗೊಂದು ಪ್ರೇಮದ ಗಜ಼ಲ್ ಬಾಳಲಿ ನಿನ್ನಂತೆ ನಂಗೆ ಯಾರಿಲ್ಲಹಾಗಾಗಿ ನಿನ್ನಲೇ ನನ್ನ ಮನಸೆಲ್ಲಾ..! ಹೃದಯದ ತಂತಿಯ ನೀ ಮೀಟಿದೆಆ ಕ್ಷಣದಿಂದ ನಿನ್ನಲ್ಲೇ ಮನ ನಾಟಿದೆ..! ಮಳೆಬಿಲ್ಲಿನ ಬಣ್ಣವಿದೆ ನಿನ್ನ ಪ್ರೀತಿಯಲಿಅದಕೇ ನಿನ್ನ ಹೆಸರಿದೆ ನನ್ನ ಉಸಿರಿನಲಿ..! ಬುವಿಯಲಿ ಬಾನಲಿ ಎಲ್ಲೆಲ್ಲೂ ನೀನೇಸವಿಪ್ರೀತಿಯ ಹೆಸರು ಮತ್ತೆ ಇದಕೇ ತಾನೆ..! ಇಳಿಸಂಜೆಯ ಹೊತ್ತು ನೀ ಬರುವೆ ಕನಸಿನಲಿಶಾಶ್ವತದಿ ನಿ ನೆಲೆಸಿಹೆ ನನ್ನ ಮನಸಿನಲಿ..! ಅರಿವಾಗಿದೆ ಆತ್ಮಕೆ ನಿನ್ನ ಪ್ರೇಮದ ಬಂಧುರನೀನಾಗಿಹೆ ನನ್ನ ಬಾಳಲಿ ನಗುವ ಸಿಂಧೂರ..! ಚಿಗುರು ವೀಳ್ಯೆಯ ಸವಿ […]Read More

ಹಾಡು ಹಳೆಯದಾದರೇನು – ಕಣಗಾಲ್ ಪ್ರಭಾಕರ ಶಾಸ್ತ್ರಿ – ಭಾಗ – 1

ಹಾಡು ಹಳೆಯದಾದರೇನು – ಕಣಗಾಲ್ ಪ್ರಭಾಕರ ಶಾಸ್ತ್ರಿ – ಭಾಗ – 1 ಕಣಗಾಲ್ ಪ್ರಭಾಕರ ಶಾಸ್ತ್ರಿಗಳು ರಚಿಸಿದ ಅತ್ಯಂತ ಪ್ರಸಿದ್ಧಿ ಪಡೆದ ಗೀತೆಗಳಲ್ಲಿ “ಒಲವೆ ಜೀವನ ಸಾಕ್ಷಾತ್ಕಾರ…” ವೂ ಒಂದು..ಸಾಕ್ಷಾತ್ಕಾರ ಎಂದರೆ ನಮ್ಮ ಬದುಕಿನ ಆವಿರ್ಭಾವ ಮತ್ತು ಆ ಮೂಲಕ ನಮ್ಮನ್ನು ಅರಿತುಕೊಳ್ಳುವ ಪ್ರಕ್ರಿಯೆ. ಇದಕ್ಕೆ ಅಡಿಪಾಯವೇ ಒಲವೆಂಬ ಜೀವನ ಪ್ರೀತಿ! ಅದಕ್ಕೆಂದೇ ಹೇಳುತ್ತೇವೆ; ಒಲವೆಂಬ ಶಕ್ತಿಗೆಲುವಿನ ಮೂಲವೆಂದು. ಒಲವಿನ ಮಾತು, ನುಡಿ, ಕೃತಿಯಿಂದ ಎಲ್ಲವನ್ನೂ ಸಿದ್ದಿಸಿ ಕೊಳ್ಳಬಹುದು; ಜಗವನ್ನೇ ಜಯಿಸಬಹುದು. ಸಕಲ ಜೀವ ರಾಶಿಗಳಲ್ಲಿ […]Read More

ಗಂಡಿನ ನಕಲಿ ವೇಷಧಾರಿ !! ಕತ್ತೆಕಿರುಬ

ಗಂಡಿನ ನಕಲಿ ವೇಷಧಾರಿ !! ಕತ್ತೆಕಿರುಬ – Spotted Hyena ಆಫ್ರಿಕಾದ ವಿಲಕ್ಷಣ ಪ್ರಾಣಿ ಚುಕ್ಕೆ ಕತ್ತೆಕಿರುಬ (Spotted Hyena) ಇದು ಗಂಡಿನ ನಕಲಿ ವೇಷಧಾರಿ !! ಜಗತ್ತಿನಾದ್ಯಂತ ಹಯಿನಾದ ಒಂಬತ್ತು ಜಾತಿ / ಪ್ರಬೇಧಗಳಿದ್ದು ,ನಮ್ಮ ದೇಶದಲ್ಲಿ Striped Hyena ಅಥವಾ ಪಟ್ಟೆ ಕತ್ತೆ ಕಿರುಬವನ್ನು ನೋಡಬಹುದು. ಈಗ ನಾನು ಬರೆಯುತ್ತಿರುವುದು ಆಫ್ರಿಕಾದ Spotted Hyena ಬಗ್ಗೆ. ನಮ್ಮ ಪ್ರಯಾಣ ಈಗ ಆಫ್ರಿಕಾ ಕಡೆಗೆ, ಆಫ್ರಿಕಾ ಎಂದೊಡನೆ ಹೇಳಬೇಕಿಲ್ಲ, ಅದು ವನ್ಯಜೀವಿಗಳ ತವರು, ಕೃಗರ್, ಸರಂಗೇಟಿಯಂತ […]Read More

ತಗಾದೆ ಬೇಡ ಗಾದೆ ನೋಡ – ಶ್ರೀವಲ್ಲಿ ಮಂಜುನಾಥ

ತಗಾದೆ ಬೇಡ ಗಾದೆ ನೋಡ ಕೃತಿ : ತಗಾದೆ ಬೇಡ ಗಾದೆ ನೋಡಲೇಖಕಿ : ಶ್ರೀವಲ್ಲಿ ಮಂಜುನಾಥಬಿಡುಗಡೆ :ಸ್ಥಳ : ಮಾತಿನ ಮನೆ,ನಂ: 14, ಶ್ರೀ ಕುಟೀರ, 5ನೆ ತಿರುವು, 6ನೇ ಮುಖ್ಯ ರಸ್ತೆ,ಚಾಮರಾಜಪೇಟೆ, ಬೆಂಗಳೂರು – 560018 ಶ್ರೀಮತಿ ಶ್ರೀವಲ್ಲಿ ಮಂಜುನಾಥ ರವರು ಸದಭಿರುಚಿಯ ಬರಹಗಾರರು. ಅವರ ಅನೇಕ ಕವಿತೆಗಳು, ಕಥೆಗಳು, ಹಾಗು ವೈಚಾರಿಕ ಲೇಖನಗಳು ಈಗಾಗಲೇ ಪ್ರಮುಖ ಪತ್ರಿಕೆಗಳಾದ ತುಷಾರ, ತರಂಗ, ಮಯೂರ, ಮಂಗಳಾ, ಅಪರಂಜಿ, ಮಂಜುವಾಣಿ, ಓ ಮನಸೇ, ಸಂಕ್ರಮಣ ಮತ್ತಿತರ ಪತ್ರಿಕೆಗಳಲ್ಲಿ […]Read More

ಇಂಗ್ಲೆಂಡಿನಲ್ಲೊಂದು ತಲೆಕೆಳಗಾದ ವಿಚಿತ್ರ ಮನೆ

ಇಂಗ್ಲೆಂಡಿನಲ್ಲೊಂದು ತಲೆಕೆಳಗಾದ ವಿಚಿತ್ರ ಮನೆ ಭೂಮಿಯ ಮೇಲಿರುವ ಯಾವುದೇ ಒಂದು ಸಹಜವಾದ ವಸ್ತುವೂ ತಲೆಕೆಳಗಾದರೆ ಅದು ವಿಚಿತ್ರ ಮತ್ತು ಕುತೂಹಲಕಾರಿ ಸಂಗತಿಯಾಗಿಬಿಡುತ್ತದೆ. ಇಂಗ್ಲೆಂಡಿನ ಬ್ರೈಟನ್ ನಗರದಲ್ಲಿಯೂ ಇದೇ ರೀತಿಯ ಒಂದು ವಿಸ್ಮಯವಿದೆ. ಅಲ್ಲಿ ಅಪ್‌ಸೈಡ್ ಡೌನ್ ಆಗಿರುವ ಬೃಹತ್ ಬಂಗಲೆಯೊಂದು ಎಲ್ಲರ ಗಮನವನ್ನು ತನ್ನೆಡೆಗೆ ಸೆಳೆಯುತ್ತಿದೆ. ಇದು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು, ಇಲ್ಲಿ ಎಲ್ಲವೂ ತಲೆಕೆಳಗಾಗಿರುವುದರಿಂದ ಇದಕ್ಕೆ ಬ್ರೈಟನ್ ಹೌಸ್ ಎಂದು ಹೆಸರಿಡಲಾಗಿದೆ. ಈ ಮನೆಯೊಳಗೆ ಪ್ರವೇಶಿಸಿದಾಗ ಇದರೊಳಗಿನ ಎಲ್ಲವೂ ತಲೆಕೆಳಗಾಗಿರುವುದನ್ನು ಕಂಡು ಎಲ್ಲರೂ ಆಶ್ಚರ್ಯ […]Read More

ಕನ್ನಡದ ಕುವರ ರಾಜಕುಮಾರ

ಕನ್ನಡದ ಕುವರ ರಾಜಕುಮಾರ “ಡಾ.ರಾಜ್” ಹೆಸರು ಕೇಳಿದರೆ ಸಾಕು ಒಂದು ಅದ್ಭುತವಾದ ಚೈತನ್ಯ ಸಮಸ್ತಕೋಟಿ ಕನ್ನಡಿಗರಲ್ಲಿ ಥಟ್ಟನೆ ಆವರಿಸಿಕೊಳ್ಳುತ್ತದೆ. ಮೇರು ಪರ್ವತದಂತ ಗುಣ, ಅದ್ಬುತ ನಟ, ಅದ್ಬುತ ಗಾಯಕ, ಸ್ಪುರದ್ರೂಪಿ ಸುಂದರಾಂಗ, ಕನ್ನಡ ಭಾಷೆಯನ್ನೂ ಇನ್ನಿಲ್ಲದಂತೆ ಪ್ರೀತಿಸಿ ಅದ್ಭುತವಾಗಿ, ಸ್ಪಷ್ಟವಾಗಿ (ಮೂರನೇ ಕ್ಲಾಸ್ ಓದಿದ್ದರು ಸಹ) ಉಚ್ಚರಿಸಿದ, ಕನ್ನಡ ಚಿತ್ರರಂಗವ ಬಿಟ್ಟು ಬೇರೆಲ್ಲೂ ಹೋಗದೆ ಕನ್ನಡವನ್ನೇ ಉಸಿರಾಗಿಸಿಕೊಂಡು, ಕನ್ನಡ ಚಳುವಳಿಯಲ್ಲಿ (ಗೋಕಾಕ್ ಚಳುವಳಿ) ಭಾಗವಹಿಸಿ, ಕನ್ನಡ ಪ್ರೇಕ್ಷಕರಿಗೆ ಕಡೆತನಕ ಸದಭಿರುಚಿಯ ಚಿತ್ರಗಳನ್ನೇ ಕೊಟ್ಟು ಭೌತಿಕವಾಗಿ ಕಣ್ಮರೆಯಾದರು ಜನಮಾನಸದಲ್ಲಿ […]Read More

ಕಲಾ ಕೌಸ್ತುಭ

ಕಲಾ ಕೌಸ್ತುಭ ನಟಸಾರ್ವಭೌಮ ಎಂದೇ ಗುರುತಿಸಲ್ಪಡುವ ಡಾ. ರಾಜ್‌ಕುಮಾರ್ ಜನಿಸಿದ್ದು ಏಪ್ರಿಲ್ 24, 1929ರಲ್ಲಿ ಗಾಜನೂರಿನಲ್ಲಿ. ತಂದೆ ಖ್ಯಾತ ರಂಗಭೂಮಿ ಕಲಾವಿದರಾಗಿದ್ದ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು, ತಾಯಿ ಲಕ್ಷ್ಮಮ್ಮ. ಭಾರತೀಯ ಚಿತ್ರರಂಗ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರು ಡಾಕ್ಟರ್ ರಾಜಕುಮಾರ್. ನಟನೆಯಲ್ಲಾಗಲಿ ವ್ಯಕ್ತಿತ್ವದಲ್ಲಾಗಲಿ ನಡೆನುಡಿಯಲ್ಲೇ ಆಗಲಿ ರಾಜಕುಮಾರ್ ಅವರು ಅತ್ಯಂತ ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರು ನಟಿಸಿದ ಚಲನಚಿತ್ರಗಳಲ್ಲಿ ಅವರು ನಿರ್ವಹಿಸಿದ ವೈವಿಧ್ಯಮಯ ಪಾತ್ರಗಳು ಒಂದಲ್ಲ ಒಂದು ರೀತಿಯಲ್ಲಿ ಸಮಾಜಕ್ಕೆ ಸಂದೇಶವನ್ನು ನೀಡುವ ಪಾತ್ರಗಳೇ ಆಗಿತ್ತು ಅನ್ನುವುದರಲ್ಲಿ ಯಾವುದೇ […]Read More