‘ಚಿತ್ತರಂಗ’ ಕಾದಂಬರಿ ಲೋಕಾರ್ಪಣೆ ಬೆಂಗಳೂರಿನ ಸಾಹಿತ್ಯಲೋಕ ಪಬ್ಲಿಕೇಷನ್ಸ್ ಹಾಗೂ ಬುಕ್ ಬ್ರಹ್ಮ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಲೇಖಕಿ ಆಶಾ ರಘು ಅವರ ‘ಚಿತ್ತರಂಗ’ ಕಾದಂಬರಿ ಕಸಾಪ ಆವರಣದಲ್ಲಿರುವ ಅಕ್ಕಮಹಾದೇವಿ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡಿತು. ಹಿರಿಯ ನಟ ಶ್ರೀನಿವಾಸ ಪ್ರಭು ಕೃತಿಯನ್ನು ಲೋಕಾರ್ಪಣೆಗೊಳಿಸಿ, “ಕೃತಿಯ ಕೇಂದ್ರ ಪಾತ್ರಗಳ ಚಿತ್ತ ಮನೋ ಆಳಕ್ಕೆ ಇಳಿದು, ಬಗೆಯುತ್ತಾ ಎಳೆ ಎಳೆಯಾಗಿ ಆ ಮನೋ ವ್ಯಾಪಾರಗಳನ್ನು ಬಿಡಿಸಿ, ಅನಾವರಣಗೊಳಿಸುವ ಲೇಖಕಿಯ ನಿರೂಪಣಾ ಶೈಲಿ ಇಲ್ಲಿ ಮುಖ್ಯವಾಗಿದೆ. ಬೇರೆ ಬೇರೆ ರೀತಿಯಲ್ಲಿ ಹೆಸರು ಮಾಡಿದ ವ್ಯಕ್ತಿಗಳನ್ನು ಹಾಗೂ ಘಟನೆಗಳನ್ನು […]Read More
ಗಾಜಿನ ಬಳೆಯ ಸ್ವಗತ… ಹೆಣ್ಣೆ ನಮ್ಮಿಬ್ಬರದುಬಿಡಿಸಲಾಗದ ಬಂಧ,ಅವಿನಾಭಾವ ಸಂಬಂಧ. ನೀ ಮಗುವಾಗಿದ್ದಾಗನಿನ್ನಮ್ಮನ ಕೈಲಿದ್ದನನ್ನ ನಾದಕೆ ನೀಕಣ್ಣರಳಿಸುತಿದ್ದೆ. ಪುಟ್ಟಕೂಸಾಗಿದ್ದಾಗಹಠ ಮಾಡಿ ನೀನೆನ್ನಧರಿಸಿದ್ದೆಯಲ್ಲ.ಆಡುವಾಗ ಬಿದ್ದುನಾ ಚೂರುಚೂರಾಗಿನಿನ್ನ ಕೈಲಿ ರಕ್ತ ಬಂದು‘ಓ ನಾನೆಷ್ಟು ಹೆದರಿದ್ದೆ’ಆದರೇನು ನನ್ನೆಡೆಗೆ ನಿನ್ನಸೆಳೆತ ಅಗಾಧವಾದುದು. ಹಬ್ಬ-ಹರಿದಿನಗಳಲಿನಿನ್ನ ಕೈ ತುಂಬಾ ನಾಮೆರೆದಿದ್ದ ನಾ ಮರೆವೆನೆ.ನಿನ್ನ ನೋಡಲು ಬಂದವರ ಮಹಾಶಯ ನಿನ್ನಕೈಲಿ ಅಂದವಾಗಿ ನಲಿಯುತಿದ್ದ ನನ್ನ ನೋಡಿಯೇ ಅಲ್ಲವೆನಿನಗೆ ಮರುಳಾಗಿದ್ದು !! ನೆನಪಿದೆಯೆ ನಿಮ್ಮಪ್ಪ ನಿನ್ನನಿನ್ನವನಿಗೆ ಧಾರೆಯೆರೆವಾಗಕಣ್ಣಹನಿಗಳೆರಡು ನನ್ನಮೇಲೆ ಬಿದ್ದಾಗ ನನ್ನಗಾಜೆದೆಯೂ ಒಂದುಕ್ಷಣ ಮಿಡುಕಿದ್ದು ಸುಳ್ಳಲ್ಲ. ನೆನಪಿದೆಯೆ ಗೆಳತಿ ನಿನ್ನ” […]Read More
ಹೃನ್ಮನದ ಭಾವಲಾಸ್ಯ ತಾಳ ತಪ್ಪದ ಮೌನರಾಗಕೆಮನವು ಮೂಕಭಾವ ತಳೆದಿದೆ!ಕುಳಿರ್ಗಾಳಿಯ ಕಡು ದಾಳಿಯಲೂ…ಚಿಗುರಿದೆಲೆಗಳು ನಿತ್ಯ ನಗುತಿವೆ!! ಬತ್ತಿದೆದೆಯಲಿ ಹೊಸ ಕನಸುಗರಿಗೆದರಿ ಚೈತನ್ಯವು ಮೂಡಿದೆ!ಕದಡಿದ ಭಾವಗಳು ನನಸಾಗಲು..ಹೃನ್ಮನವು ಕೂಗಿ ಕರೆದಿದೆ!! ದಿಕ್ಕು ತಪ್ಪಿಸುವ ಕತ್ತಲೆಯಲೂನಂದದ ಬೆಳಕು ಜಗದಿ ಉಳಿದಿದೆ!ಅವನೆಣಿಸಿದಂತೆ ಸಾಗಿಹ ಪಯಣದಲಿ..ಕಾಲವು ಮುಷ್ಟಿಯಲಿಹ ಮರಳಂತೆ ಸರಿದಿದೆ!! ವಿಸ್ತರಿಸಿದ ಅಂಬರದ ಕ್ಷಿತಿಜದೊಳುಮುಚ್ಚಿದ ಕಂಗಳಲೂ ಅಡಗಿದೆ ಬೆಳಕು!ಅಳಿಯದ ಒಲವಿಗೆ ನಿಜದೊಳು..ಮನತೆರೆದು ನೋಡಲು ನಲ್ಮೆಯ ಬದುಕು!! ಸುಮನಾ ರಮಾನಂದRead More
ಅಳಿವಿಲ್ಲದ ಸ್ಥಾವರ – ಸಿ ಆರ್ ಸತ್ಯ ಪುಸ್ತಕ ಪರಿಚಯ:ಅಳಿವಿಲ್ಲದ ಸ್ಥಾವರಲೇಖಕರು:ಸಿ ಆರ್ ಸತ್ಯಪ್ರಕಾಶಕರು :ಹೇಮಂತ ಪ್ರಕಾಶನ Senteineils of glory ಸಿ.ಆರ್.ಸತ್ಯ ಅವರದೇ ಮೂಲಕೃತಿ “ಅಳಿವಿಲ್ಲದ ಸ್ಥಾವರ “ದ ಭಾಷಾಂತರ.ಕರ್ನಾಟಕ – ಕೇರಳ ರಾಜ್ಯಗಳ ಸಾಂಸ್ಕೃತಿಕ ಕೊಂಡಿಯಾಗಿ ಸಿ.ಆರ್.ಸತ್ಯರವರ ಸಾಧನೆ ಗಣನೀಯ. ಬರಹಗಾರರಾಗಿ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ ಅವರ “ಅಳಿವಿಲ್ಲದ ಸ್ಥಾವರ’ ಕೇರಳದ ಅನಂತ ಪದ್ಮನಾಭಸ್ವಾಮಿ ದೇವಾಲಯ ನಿರ್ಮಾಣದ ಹಿಂದಿನ ತಂತ್ರಗಾರಿಕೆಯನ್ನು ಕುರಿತು ಬೆಳಕು ಚೆಲ್ಲುತ್ತದೆ. ಸಿ ಆರ್ ಸತ್ಯರವರ ಸಂಶೋಧನಾ ಪುಸ್ತಕ – […]Read More
ಬಹುಮುಖ ಪ್ರತಿಭೆಯ ರಾಕೆಟ್ ತಂತ್ರಜ್ಞ – ಸಿ.ಆರ್.ಸತ್ಯ ಇಸ್ರೋದ ಹಿರಿಯ ರಾಕೆಟ್ ತಂತ್ರಜ್ಞ ಶ್ರೀ ಸಿ ಆರ್ ಸತ್ಯ ಅವರು ಮಂಗಳವಾರ ಸಂಜೆ(04.04.2023) ನಿಧನರಾದರು..ಅಗಲಿದ ಆತ್ಮಕ್ಕೆ ಶಾಂತಿ ಕೋರುತ್ತಾ ಅವರ ಈ ಪರಿಚಯ ಲೇಖನ…. ಭಾರತದ ಬಾಹ್ಯಾಕಾಶ ಸಂಶೋಧನೆಯ ಪಿತಾಮಹ ಡಾ.ವಿಕ್ರಮ್ ಸಾರಭಾಯಿ ಅವರ ಆಹ್ವಾನದ ಮೇರೆಗೆ ಕೇರಳದ “ತುಂಬಾ” ರಾಕೆಟ್ ನೆಲೆಯಲ್ಲಿಅಂದಿನ ಪ್ರಧಾನಿ ಇಂದಿರಾಗಾಂಧಿ ಬಂದು ಆ ಯುವ ವಿಜ್ಞಾನಿ ವಿನ್ಯಾಸಗೊಳಿಸಿದ ಯಂತ್ರವನ್ನು ಉದ್ಘಾಟಿಸಿದರು. ಭಾರತ ದೇಶ ಆಗಿನ್ನೂ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಅಂಬೆಗಾಲಿಡುತಿತ್ತು.ರಾಕೆಟ್ ಉಡಾವಣೆಗೆ ಕ್ಷಣಗಣನೆ […]Read More
ಇಗುವಾಜು ಜಲಪಾತ – ಪ್ರಪಂಚದ ಅದ್ಭುತ ಸೃಷ್ಟಿ ಈ ಭೂಮಿಯು ಪ್ರಕೃತಿಯ ವೈಚಿತ್ರದ ಸೃಷ್ಟಿಯಾಗಿದ್ದು ಈ ಭೂಮಿಯಲ್ಲಿ ಏನಿದೆ ಮತ್ತು ಏನಿಲ್ಲ ಎಂದು ಹೇಳುವುದೇ ಅಸಾಧ್ಯ. ಇಲ್ಲಿ ಮಣ್ಣು, ನೀರು ಗಾಳಿ, ನದಿ ತೊರೆ, ಕಾಡು ಮತ್ತು ಪರ್ವತಗಳಿದ್ದು, ಎತ್ತರವಾದ ಪ್ರದೇಶದಿಂದ ತಗ್ಗು ಪರ್ದೇಶಗಳಿಗೆ ಧುಮುಕುವ ಅದೆಷ್ಟೋ ನದಿಗಳು ಸಾವಿರಾರು ಜಲಪಾತಗಳು ಇಲ್ಲಿ ಸೃಷ್ಟಿಯಾಗಿವೆ. ಜಲಪಾತವೆಂದರೆ ಒಂದು ನದಿಯು ಒಂದೆಡೆ ಕೇಂದ್ರೀಕೃತಗೊಂಡು ಕೆಲವು ಕವಲುಗಳಾಗಿ ಧುಮುಕುತ್ತದೆ. ಆದರೆ ಇಲ್ಲೊಂದು ಜಲಪಾತವಿದ್ದು ಇದು ಬರೋಬ್ಬರಿ 275 ಕವಲು ಅಥವಾ […]Read More
ಅಹಿಂಸಾ ಗುರು ಋಷಭದೇವರು ಹೊತ್ತಿಸಿದ ಅಹಿಂಸಾ ಜ್ಯೋತಿಅನುದಿನ ಬೆಳಗಿದರು ಭಗವಾನ್ ತೀರ್ಥಂಕರರುಆಚರಿಸುವರು ಮುನಿ ತ್ಯಾಗ ವೈರಾಗ್ಯ ತಪಸ್ಸುಸದಾಚಾರ ದಾರಿ ತೋರುವರು ಅರಿಹಂತರು ಇಳೆಯ ‘ತೀರ್ಥಂ ಕರೋತಿ ಇತಿ’ ಇಳಿದು ಬಂದರುಅವತರಿಸಿದರು ಧರೆಗೆ ಭಗವಾನ ಮಹಾವೀರರುವೈಶಾಲಿಯ ತ್ರಿಶಲಾದೇವಿ ಉದರದಿ ಜನಿಸಿದರುವರ್ಧಿಸಿದರು ಸಿದ್ಧಾರ್ಥರ ಸುತ ವರ್ಧಮಾನರು ಕಠೋರಾತಿ ಕಠೋರ ತಪವ ಮಾಡಿದರು ವೀರಕಡೆಯ ಮೂರು ದಶಕ ಕಾಲ ಜೀವಿಗಳ ಉದ್ಧಾರಅರ್ಧಮಾಗಧಿಯೊಳು ಜಿನತತ್ವವ ಸಾರಿದರುಹಲವು ಶಿಷ್ಯ ‘ಗಣಧರ’ ಕಮಲಗಳ ಅರಳಿಸಿದರು ಓದಿನಲ್ಲಿ ‘ಸನ್ಮತಿ’, ರಾಜಭೋಗದಲ್ಲಿ ಅತಿ ವಿರಕ್ತಿಜಿನಮಾರ್ಗದಿ ಅಡಿಯಿಟ್ಟು, ಸುತ್ತಿದರು ನಾಡೆಲ್ಲದ್ವಾದಶ […]Read More
ನಮ್ಮೊಳಗಿನ ಮಾನವೀಯತೆ ಸಾಯುತ್ತಿದೆಯೆ? ಕೆಲವು ತಿಂಗಳ ಹಿಂದೆ ಕೋಲಾರದಲ್ಲಿ ದ್ವಿಚಕ್ರವಾಹನ ಅಪಘಾತಕ್ಕಿಡಾಗಿ ಒಬ್ಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದರೆ ಇನ್ನೊಬ್ಬ ರಕ್ತದ ಮಡುವಿನಲ್ಲಿ ಬಿದ್ದು ನೀರು ಕೊಡಿ ನನ್ನನ್ನು ಆಸ್ಪತ್ರೆಗೆ ಸೇರಿಸಿ ಅಂಗಲಾಚುತ್ತಿದ್ದರೂ ಬೇಡುತ್ತಿದ್ದರೂ ಅದನ್ನು ನೋಡಿಯೂ ಸುಮ್ಮನೇ ನಮಗೇಕೆ ಎಂದು ಹೋಗುತ್ತಿದ್ದ ಜನ ಒಂದು ಕಡೆಯಾದರೆ, ಮನುಷ್ಯತ್ವ ಮರೆತ ಕೆಲವು ಜನ ದೃಶ್ಯವನ್ನು ಚಿತ್ರೀಕರಿಸಿ ಅದನ್ನು ವಾಟ್ಸಪ್ ನಲ್ಲಿ ಕಳಿಸುವತ್ತ ಮಗ್ನರಾಗಿದ್ದರು, ಇದರ ಬದಲು ಅಪಘಾತದ ಸ್ಥಳದಲ್ಲಿ ನೆರೆದ ಜನ ವೀಡಿಯೋ ಮಾಡುವುದನ್ನು ಬಿಟ್ಟು ಅವನನ್ನು ಆಸ್ಪತ್ರೆಗೆ […]Read More
ಆರೋಗ್ಯ ರಕ್ಷಕ ದೊಡ್ಡಪತ್ರೆ ಇದೇನಪ್ಪಾ ಹೀಗೊಂದು ದೊಡ್ಡದಾದ ಪತ್ರೆ (ಎಲೆ) ಎಂದುಕೊಂಡಿದ್ದೀರಾ? ಇದೊಂದು ರೀತಿಯಲ್ಲಿ ದೊಡ್ಡದಾದ ಪತ್ರೆಯೇ ಹೌದು. ಸಂಸ್ಕೃತದ ಭಾಷೆಯಲ್ಲಿ ಪತ್ರೆ ಎಂದರೆ ಎಲೆ ಎಂದರ್ಥ. ‘ಹಿತ್ತಿಲ ಗಿಡ ಮದ್ದಲ್ಲ’ ಎಂಬ ನಾಣ್ಣುಡಿಯಂತೆ ಅದೆಷ್ಟೋ ಮಂದಿಗೆ ತಮ್ಮ ಮನೆಗಳ ಹಿತ್ತಿಲಲ್ಲಿ ಬೆಳೆಯುವ ಈ ಸಸ್ಯದ ಔಷಧೀಯ ಗುಣಗಳ ಬಗ್ಗೆ ತಿಳಿದೇ ಇಲ್ಲವೆನ್ನಬಹುದು. ಏಕೆಂದರೆ ಮಲೆನಾಡಿನ ಬಹುತೇಕ ಮನೆಗಳಲ್ಲಿ ಹಾಗೂ ಕೃಷಿ ಜಮೀನಿನಲ್ಲಿ ಈ ಸಸ್ಯವು ಸಾಮಾನ್ಯವಾಗಿದ್ದರೂ ಇವುಗಳ ಬಳಕೆಯೆ ಬಹುತೇಕರಿಗೆ ತಿಳಿಯದಿರುವುದು ದುರಂತವೇ ಸರಿ. ‘ದೊಡ್ಡಪತ್ರೆ’ […]Read More
ಅರಿವಿನ ಗುರುವಿಗೆ ನಮನ ಕತ್ತಲಿನಲ್ಲಿ ನೊಂದಮನದಲ್ಲೊಂದುಕಿರುದೀಪ ಬೆಳಗಿದಾನಿನಗಿಂದು ಶರಣು ! ನಿಶೆಗೆ ಅಂಜಿದವಳಿಗೆಚುಕ್ಕಿಗಳ ತೋರಿಸಿಬಿಕ್ಕುಗಳ ಮರೆಸಿದಾನಿನಗಿಂದು ಶರಣು ! ಮೌನದರಮನೆಯರಸಿಗೆಕೋಗಿಲೆಯ ಸ್ವರದೊಡನೆಗಿಳಿಮಾತ ಕಲಿಸಿದಾನಿನಗಿಂದು ಶರಣು ! ನಡೆಯುವುದ ಮರೆತುಎಡವುತಿದ್ದವಳ ಕಾಲಿಗೆನವಿಲ ನಡಿಗೆ ತುಂಬಿದಾನಿನಗಿಂದು ಶರಣು ! ಈ ಬರಡು ಬಾಳಿನಲಿಹಸಿರನ್ನು ಚಿಗುರಿಸಿ,ಹೂವರಳಿಸಿ ನಗಿಸಿದನಿನಗಿಂದು ಶರಣು ! ಗುರಿಯಿರದ ಬಾಳಿಗೆಗುರುವಾಗಿ, ಗುರಿಯೆಡೆಗೆನಡೆಸಿದ ಅರಿವಿನಾ ಗುರುವೆನಿನಗಿಂದು ಶರಣು !! ಶ್ರೀವಲ್ಲಿ ಮಂಜುನಾಥRead More