ನಮ್ಮೊಳಗಿನ ಮಾನವೀಯತೆ ಸಾಯುತ್ತಿದೆಯೆ? ಕೆಲವು ತಿಂಗಳ ಹಿಂದೆ ಕೋಲಾರದಲ್ಲಿ ದ್ವಿಚಕ್ರವಾಹನ ಅಪಘಾತಕ್ಕಿಡಾಗಿ ಒಬ್ಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದರೆ ಇನ್ನೊಬ್ಬ ರಕ್ತದ ಮಡುವಿನಲ್ಲಿ ಬಿದ್ದು ನೀರು ಕೊಡಿ ನನ್ನನ್ನು ಆಸ್ಪತ್ರೆಗೆ ಸೇರಿಸಿ ಅಂಗಲಾಚುತ್ತಿದ್ದರೂ ಬೇಡುತ್ತಿದ್ದರೂ ಅದನ್ನು ನೋಡಿಯೂ ಸುಮ್ಮನೇ ನಮಗೇಕೆ ಎಂದು ಹೋಗುತ್ತಿದ್ದ ಜನ ಒಂದು ಕಡೆಯಾದರೆ, ಮನುಷ್ಯತ್ವ ಮರೆತ ಕೆಲವು ಜನ ದೃಶ್ಯವನ್ನು ಚಿತ್ರೀಕರಿಸಿ ಅದನ್ನು ವಾಟ್ಸಪ್ ನಲ್ಲಿ ಕಳಿಸುವತ್ತ ಮಗ್ನರಾಗಿದ್ದರು, ಇದರ ಬದಲು ಅಪಘಾತದ ಸ್ಥಳದಲ್ಲಿ ನೆರೆದ ಜನ ವೀಡಿಯೋ ಮಾಡುವುದನ್ನು ಬಿಟ್ಟು ಅವನನ್ನು ಆಸ್ಪತ್ರೆಗೆ […]Read More
ಆರೋಗ್ಯ ರಕ್ಷಕ ದೊಡ್ಡಪತ್ರೆ ಇದೇನಪ್ಪಾ ಹೀಗೊಂದು ದೊಡ್ಡದಾದ ಪತ್ರೆ (ಎಲೆ) ಎಂದುಕೊಂಡಿದ್ದೀರಾ? ಇದೊಂದು ರೀತಿಯಲ್ಲಿ ದೊಡ್ಡದಾದ ಪತ್ರೆಯೇ ಹೌದು. ಸಂಸ್ಕೃತದ ಭಾಷೆಯಲ್ಲಿ ಪತ್ರೆ ಎಂದರೆ ಎಲೆ ಎಂದರ್ಥ. ‘ಹಿತ್ತಿಲ ಗಿಡ ಮದ್ದಲ್ಲ’ ಎಂಬ ನಾಣ್ಣುಡಿಯಂತೆ ಅದೆಷ್ಟೋ ಮಂದಿಗೆ ತಮ್ಮ ಮನೆಗಳ ಹಿತ್ತಿಲಲ್ಲಿ ಬೆಳೆಯುವ ಈ ಸಸ್ಯದ ಔಷಧೀಯ ಗುಣಗಳ ಬಗ್ಗೆ ತಿಳಿದೇ ಇಲ್ಲವೆನ್ನಬಹುದು. ಏಕೆಂದರೆ ಮಲೆನಾಡಿನ ಬಹುತೇಕ ಮನೆಗಳಲ್ಲಿ ಹಾಗೂ ಕೃಷಿ ಜಮೀನಿನಲ್ಲಿ ಈ ಸಸ್ಯವು ಸಾಮಾನ್ಯವಾಗಿದ್ದರೂ ಇವುಗಳ ಬಳಕೆಯೆ ಬಹುತೇಕರಿಗೆ ತಿಳಿಯದಿರುವುದು ದುರಂತವೇ ಸರಿ. ‘ದೊಡ್ಡಪತ್ರೆ’ […]Read More
ಅರಿವಿನ ಗುರುವಿಗೆ ನಮನ ಕತ್ತಲಿನಲ್ಲಿ ನೊಂದಮನದಲ್ಲೊಂದುಕಿರುದೀಪ ಬೆಳಗಿದಾನಿನಗಿಂದು ಶರಣು ! ನಿಶೆಗೆ ಅಂಜಿದವಳಿಗೆಚುಕ್ಕಿಗಳ ತೋರಿಸಿಬಿಕ್ಕುಗಳ ಮರೆಸಿದಾನಿನಗಿಂದು ಶರಣು ! ಮೌನದರಮನೆಯರಸಿಗೆಕೋಗಿಲೆಯ ಸ್ವರದೊಡನೆಗಿಳಿಮಾತ ಕಲಿಸಿದಾನಿನಗಿಂದು ಶರಣು ! ನಡೆಯುವುದ ಮರೆತುಎಡವುತಿದ್ದವಳ ಕಾಲಿಗೆನವಿಲ ನಡಿಗೆ ತುಂಬಿದಾನಿನಗಿಂದು ಶರಣು ! ಈ ಬರಡು ಬಾಳಿನಲಿಹಸಿರನ್ನು ಚಿಗುರಿಸಿ,ಹೂವರಳಿಸಿ ನಗಿಸಿದನಿನಗಿಂದು ಶರಣು ! ಗುರಿಯಿರದ ಬಾಳಿಗೆಗುರುವಾಗಿ, ಗುರಿಯೆಡೆಗೆನಡೆಸಿದ ಅರಿವಿನಾ ಗುರುವೆನಿನಗಿಂದು ಶರಣು !! ಶ್ರೀವಲ್ಲಿ ಮಂಜುನಾಥRead More
ಹಾಡು ಹಳೆಯದಾದರೇನು – ಕು ರ ಸೀತಾರಾಮಶಾಸ್ತ್ರಿ ಕು.ರ.ಸೀತಾರಾಮ ಶಾಸ್ತ್ರಿಗಳು 1920ರ ಸೆಪ್ಟಂಬರ್ 22 ರಂದು ಜನಿಸಿದರು. ಬಹಳ ಜನ ಅವರ ಹೆಸರನ್ನು ಕು.ರಾ.ಸೀ ಎಂದು ತಪ್ಪು ತಿಳಿದಿದ್ದಾರೆ. ಕು. ರ. ಸೀತಾರಾಮಶಾಸ್ತ್ರಿಗಳ ತಂದೆ ಕುಮಾರಸ್ವಾಮಿಗಳು ನವಗ್ರಹ ಹೋಮ ಮಾಡುವಾಗ ರವಿಕುಂಡದಿಂದ ಎದ್ದ ಬೆಳಕಿನ ಜ್ವಾಲೆ ಅವರ ಧರ್ಮಪತ್ನಿ ಸುಬ್ಬಮ್ಮನವರ ಗರ್ಭವನ್ನು ಪ್ರವೇಶಿಸಿದಂತೆ ಭಾಸವಾಯಿತಂತೆ. ಹೀಗಾಗಿ ನಂತರ ಜನಿಸಿದ ಮಗನಿಗೆ ರವಿ ಎಂದೇ ಹೆಸರಿಡಬೇಕು ಎನ್ನುವ ಸಂಕಲ್ಪ ಅವರಲ್ಲಿ ಮೂಡಿತು. ಆದರೆ ತಂದೆಯ ಹೆಸರು ಇಡಬೇಕು ಎಂದೇ […]Read More
ತರಕಾರಿ….ತರಕಾರಿ ಗಂಟಲು ಬಿರಿಯುವ ಹಾಗೆ ಕೂಗುತಮಣಗಳಭಾರದ ಗಾಡಿಯ ನೂಕುತಹಾದಿ ಬೀದಿಗಳಲ್ಲಿ ತಿರುಗುತಾಬಿಸಿಲು ಮಳೆಯೆನ್ನದೇ ಓಡಾಡುತಾ ಸೂರ್ಯನುದಯಿಸುವಾ ಮುನ್ನವೇಮಂಡಿಯನು ಇವನು ತಲುಪುವುನಲ್ಲವೇನಮಗೆಲ್ಲಾ ತಾಜಾ ತರಕಾರಿ ತರುವನಲ್ಲವೇಅಬ್ಬಾ ಅದೆಷ್ಟು ಶಕ್ತಿಶಾಲಿ ಇವನಲ್ಲವೇ ಪ್ರತಿದಿನವೂ ಮನೆಮುಂದೆ ಬರುವ ಗೆಳೆಯನುಹಣ್ಣು ತರಕಾರಿಗಳನು ಹೊತ್ತು ತರುವವನುಮಾರುಕಟ್ಟೆಯಾ ದರಕೇ ಮಾರುವವನುನಾವ್ಮಾಡುವ ಚೌಕಾಸಿಗೆ ಬಗ್ಗುವವನು ಆದರೂ ನಮಗೊಂದು ವ್ಯಾಮೋಹದೂರದ ಮಹಲಿನಲಿ ಓಡಾಡುವ ಬಯಕೆತಣ್ಣನೆಯ ಗಾಳಿಯಲಿ ತರಕಾರಿ ಕೊಳ್ಳುತಾನಿಗದಿಯಾದ ಬೆಲೆಯನ್ನು ಸರದಿಯಲ್ಲಿ ನೀಡುತಾ ಮನೆ ತಲುಪಿ ತರಕಾರಿ ತೆಗೆದು ಹೊರಗಿಟ್ಟಾಗದರದ ಬಿಲ್ಲಿನ ಪರಿಶೀಲನೆ ಮಾಡುವಾಗಪಾರ್ಕಿಂಗು, ಪೆಟ್ರೋಲು ಎಲ್ಲ ಸೇರಿಸಿದಾಗನೆನಪಾದ […]Read More
ಹೃದಯ ಗೀತೆ ಮಳೆ ಬಂದು ಒಡಲು ನೆನೆದರೇನು !?ಇಳೆಯ ಕಡಲು ಮೊರೆದರೇನು..!ಕೆಂಪಾದ ಹಗಲು ಕಪ್ಪಾದ ಮುಗಿಲುಏನಿದ್ದರೂನನ್ನಲಿ ನೀನಿಲ್ಲವೇನು!! ಕಡು ಬೇಸರಿಕೆಯ ಮನವಿರಲಿಮೌನದಲಿ ಮನ ತೂಗುತಿರಲಿ..!ಎದೆಯ ಭಾವ ಭಾರವಿರಲಿನಿನ್ನೆದೆಯ ಕದ ನನಗಾಗಿ ತೆರೆದಿರಲಿ!! ಜಗತ್ತೇ ಆಡಿಕೊಂಡು ನಗಲಿಹೊಟ್ಟೆಕಿಚ್ಚಿನಲಿ ಮಚ್ಚು ಮಸೆಯಲಿ..!ಉಸಿರು ನಿಂತು ಮಸಣಕೊಯ್ದರೂಕೊನೆಯುಸಿರು ಮಾತ್ರ ನಿನ್ನದೇ ತೋಳಿನಲಿ!! ಜನ್ಮಗಳು ಸಾವಿರ ಕಳೆದುಯೌವ್ವನವು ಮುಪ್ಪಿನತ್ತ ಸಾಗೆ..!ಆಸೆ ನಿರಾಸೆಗಳಲಿ ಜೀವ ಬಳಲಿದರೂಕೊನೆಯ ಗಳಿಗೆ ಎಂದೂ ನಿನ್ನ ಜೊತೆಗೆ!! ಸುಮನಾ ರಮಾನಂದRead More
ಚಿತ್ತರಂಗ – ಪುಸ್ತಕ ಬಿಡುಗಡೆ ಸಮಾರಂಭ ಕಾದಂಬರಿ: ಚಿತ್ತರಂಗಲೇಖಕಿ : ಶ್ರೀಮತಿ ಆಶಾ ರಘುಬಿಡುಗಡೆ : ಏಪ್ರಿಲ್ 2 2023ಸ್ಥಳ: ಅಕ್ಕಮಹಾದೇವಿ ಸಭಾಂಗಣಕನ್ನಡ ಸಾಹಿತ್ಯ ಪರಿಷತ್ತಿನ ಆವರಣ,ಚಾಮರಾಜಪೇಟೆ, ಬೆಂಗಳೂರು.ಸಮಯ : 10:30 ಖ್ಯಾತ ಲೇಖಕಿ ಶ್ರೀಮತಿ ಆಶಾ ರಘು ರವರ ಹೊಸ ಕಾದಂಬರಿ “ಚಿತ್ತರಂಗ” ಬಿಡುಗಡೆಗೆ ಸಿದ್ದವಾಗಿದ್ದು ಮುಂದಿನ ಭಾನುವಾರ ಏಪ್ರಿಲ್ 2 ರಂದು ಬಿಡುಗಡೆಗೊಳ್ಳುತ್ತಿದೆ. ಇದೊಂದು ಎಪ್ಪತ್ತು-ಎಂಭತ್ತರ ದಶಕದ ಕನ್ನಡ ಚಿತ್ರರಂಗದ ವಾತಾವರಣವನ್ನು ಹೊಂದಿರುವ ಕಥೆಯಾಗಿದ್ದು. ಚಿತ್ರ ನಿರ್ದೇಶಕನೊಬ್ಬನ ಹಾಗೂ ಅವನೊಂದಿಗೆ ನಿಕಟ ಸ್ನೇಹವಲಯಕ್ಕೆ ಬರುವ […]Read More
ಮನದ ಭಾವಲಹರಿ… ನನ್ನೊಳಗಿನ ಭಾವಗಳ ಸಂತೆಯಲಿನಿನ್ನೊಲವನು ಜಂಗುಳಿಯಲಿಹುಡುಕಲಾಗದಂತೆ ಕಳೆದು ಹೋಗಿದ್ದೇನೆ!! ಎಲ್ಲರ ತಿರಸ್ಕಾರದ ಜಾತ್ರೆಯಲ್ಲಿ….ತಪ್ಪಿಸಿ ಕೊಂಡ ಮಗುನನ್ನ ಮನಸು!!! ನೀ ಚಾಚಿದ ಕೈಗಳಭದ್ರವಾಗಿ ಹಿಡಿದು….ಹೆಣೆಯುತಿರುವೆ ನಾನುನೂರಾರು ಕನಸು!! ನೂರಾರು ಕನಸಕಂಡ ಕಂಗಳಿಗೆಹೂಮುತ್ತನು ನೀಡುವಮನಸು!! ನಿನ್ನ ಜೊತೆಗೆಹೆಜ್ಜೆ ಹಾಕುವುದರಲಿಇರುವುದು ಬಾಳಿನ ಸೊಗಸು!! ಚಿಂತನೆಗಿಳಿವುದು ಮನಕಂಡ ಕನಸುಗಳು ಎಂದಾದರೂಆಗುವುದೇ ನನಸು! ಉಂಡ ನೋವಿಗೆಕಂಡ ತಿರಸ್ಕಾರಕೆನಿನ್ನ ಒಲುಮೆ ಹರಿಸು! ಸುಮನಾ ರಮಾನಂದRead More
ಸಾಗರದ ಬುದ್ಧಿಜೀವಿ ಆಕ್ಟೊಪಸ್ ಹಿಂದಿನ ಸಂಚಿಕೆಯಿಂದ…. ಕಳೆದ ಸಂಚಿಕೆಯಲ್ಲಿ ಆಕ್ಟೋಪಸ್ ನ ದೇಹ ರಚನೆ, ಅದರ ಬುದ್ಧಿ ಶಕ್ತಿ, ಸ್ವಯಂ ರಕ್ಷಣೆಯ ತಂತ್ರಗಳನ್ನು ಓದಿದ್ದೀರಿ. ಇದರ ಮುಂದಿನ ವಿವರಗಳು ನಿಮಗಾಗಿ. ಆಕ್ಟೋಪಸ್ ಶಬ್ದದ ನಿರ್ದಿಷ್ಟ ಅರ್ಥ ಆಕ್ಟೋಪಸ್ ಎಂಬ ಶಬ್ದವು ‘ಒಕ್ಟಾಪಸ್’ ಎಂಬ ಗ್ರೀಕ್ ಶಬ್ದದಿಂದ ಬಂದಿದ್ದು, ಇದರರ್ಥ ‘ಅಷ್ಟಪಾದಿ’ ಆಗಿದ್ದು, ಇದರ ಬಹುವಚನ ರೂಪವೇ ‘ಆಕ್ಟೋಪಸ್’. ಆಕ್ಸ್ಫರ್ಡ್ ಇಂಗ್ಲಿಷ್ ನಿಘಂಟಿನಲ್ಲಿ ಆಕ್ಟೋಪಸ್ ಶಬ್ದವು ‘ಆಕ್ಟೋಪಿ’ ಮತ್ತು ‘ಆಕ್ಟೋಪೊಡ್’ ಪದಗಳಿಂದ ಬಂದಿದ್ದೆಂದು ಹೇಳಲಾಗಿದೆ. ಅದರ ಪ್ರಕಾರ ‘ಆಕ್ಟೋಪೊಡ್’ […]Read More
ಮನಸ್ಸು ನಾಲಿಗೆಯ ತೊದಲಾಗಿ,ಕೊರಳಿನ ಬಿಕ್ಕಾಗಿ,ಅರಿಯದ ತಳಮಳವಾಗಿದ್ದಅವನೂ ಬೆಳೆದಿದ್ದಾನೆ ! ಸ್ನೇಹದ ಎಳೆಯಾಗಿ,ಪ್ರೀತಿಯ ಬೆಸುಗೆಯಾಗಿ,ಮೌನದ ಭಾವಾರ್ಥವಾಗಿದ್ದಅವನೂ ಬೆಳೆದಿದ್ದಾನೆ ! ಚಂಚಲತೆಯೊಡನೆ,ಏಳುಬೀಳುಗಳೊಡನೆ,ಹುಚ್ಚು ಭಾವನೆಯೊಡನೆಅವನೂ ಬೆಳೆದಿದ್ದಾನೆ ! ನನ್ನ ವಯಸ್ಸಿನೊಡನೆ,ಪ್ರಭುದ್ಧತೆಯೊಡನೆ,ಬದುಕಿನಾಟದೊಡನೆಅವನೂ ಬೆಳೆದಿದ್ದಾನೆ !! ಶ್ರೀವಲ್ಲಿ ಮಂಜುನಾಥಬೆಂಗಳೂರುRead More