ಮಂಗಳದ ಅಂಗಳ ಬೆಂಕಿಯ ಕೆನ್ನಾಲಿಗೆಗೆ ಕಾಡು ಹೊತ್ತಿ ಉರಿದಿದೆಅದ್ಯಾವ ಎದೆಯ ಬೆಂಕಿ ಸುಟ್ಟು ಹೋಗಿದೆಯೋಅದೆಷ್ಟು ಜೀವ ರಾಶಿ ಆರ್ದತೆಯೊಳು ಚೀತ್ಕರಿಸಿವೆಯೋ.? ನಭವ ಸುಡುತ್ತಿದೆ ಸಣ್ಣ ಕಿಡಿನಿರ್ಲಜ್ಜ ಜೀವದ ಸ್ವಾರ್ಥದ ಕಿಡಿಯಾಗಿರಬಹುದೇ?ಕಿಡಿಗೇಡಿಯೆಂದರು ಹಿರಿಯರು ಇರಬಹುದು.ಮನುಜನಾಸೆಗೆ ಬೆಂಕಿ ಬೀಳುವುದ್ಯಾವಾಗ? ಕಾಡು ಉಳಿದರೆ ನಾಡು ಉಳಿಯುವುದುಪುಸ್ತಕಗಳ ಪೀಠಿಕೆಗೆ ಕಡಿವಾಣ ಎಂದು?ಪ್ರಕೃತಿಯ ಮುನಿಸಿಗೆ ಧರೆಯ ಜೀವಿಗಳು ಧಗ ಧಗ.ಮನುಜನಿಲ್ಲದ ಭೂಮಿ ಮತ್ತೊಂದು ಮಂಗಳದ ಅಂಗಳ… ಪವನ ಕುಮಾರ್ ಕೆ ವಿಬಳ್ಳಾರಿRead More
ಹಾಡು ಹಳೆಯದಾದರೇನು..… ರಾಮನ ಅವತಾರ ದ್ವಾರಪಾಲರ ಮರಳಿ ಬಳಿಗೊಯ್ವ ಕೃಪೆಯೋ…?ಜಾರತನ ಸದೆಬಡೆವ ಸಂಭ್ರಮದ ನೆಪವೋ….?ರಾಮನ ಅವತಾರಾ …ರಘುಕುಲ ಸೋಮನ ಅವತಾ…..ರ ಕು ರ ಸೀ ಅವರ ರಚನೆಯ ರಾಮನ ಅವತಾರ ಕನ್ನಡ ಚಿತ್ರ ಸಾಹಿತ್ಯದ ಆಸ್ತಿ ಎಂದೇ ಪರಿಗಣಿಸಲ್ಪಟ್ಟಿದೆ.ನಾರಾಯಣನ ಹಲವು ಅವತಾರಗಳಲ್ಲಿ ರಾಮಾವತಾರವೂ ಒಂದು. ಈ ರಾಮಾವತಾರದಲ್ಲಿ ನಡೆಯುವ ಘಟನಾವಳಿಗಳ ಚಿತ್ರಣವೇ ರಾಮಾಯಣ. ಬ್ರಹ್ಮನ ಮಾನಸಪುತ್ರರಿಂಪ ಶಾಪಗ್ರಸ್ತರಾದ ಜಯ-ವಿಜಯರಿಗೆ ,ಶಾಪದಿಂದ ಮುಕ್ತಿಯಾಗಲು ಎರಡು ಆಯ್ಕೆಗಳಿರುತ್ತವೆ.. ಮೊದಲ ಆಯ್ಕೆಯಲ್ಲಿ ಮೂರು ಜನ್ಮಗಳು ವಿಷ್ಣುವಿನ ಶತ್ರುಗಳಾಗಿ ಜನ್ಮತಾಳಿ ವಿಷ್ಣುವಿನಿಂದಲೇ ಸಂಹಾರಗೊಂಡು […]Read More
“ಚಿತ್ತರಂಗ” – ಆಶಾ ರಘು ಹೊಸ ಕಾದಂಬರಿ ಕನ್ನಡದ ಕಾದಂಬರಿಗಾರ್ತಿ ಶ್ರೀಮತಿ ಆಶಾ ರಘು ರವರು ತಮ್ಮ “ಆವರ್ತ” ಕಾದಂಬರಿಯ ಮೂಲಕ ಕನ್ನಡ ಸಾಹಿತ್ಯಲೋಕದಲ್ಲಿ ಜನಪ್ರಿಯರಾದವರು ಮತ್ತು ಆ ಕೃತಿಗಾಗಿಯೇ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಇತರ ಪ್ರಶಸ್ತಿಗಳನ್ನು ಮುಡುಪಿಗೇರಿಸಿಕೊಂಡವರು. ಆವರ್ತ, ಗತ, ಮಾಯೆ ಕಾದಂಬರಿಗಳ ನಂತರ ತಮ್ಮ ಮತ್ತೊಂದು ಕಾದಂಬರಿ “ಚಿತ್ತರಂಗ” ದ ಮೂಲಕ ಮತ್ತೊಮ್ಮೆ ಕನ್ನಡ ಓದುಗರ ಮುಂದೆ ಬಂದಿದ್ದಾರೆ. “ಚಿತ್ತರಂಗ” ಲೇಖಕರೇ ಹೇಳಿದಂತೆ ಇದೊಂದು ಎಪ್ಪತ್ತು-ಎಂಭತ್ತರ ದಶಕದ ಕನ್ನಡ ಚಿತ್ರರಂಗದ ವಾತಾವರಣವನ್ನು ಹೊಂದಿರುವ […]Read More
ಸಾಗರದ ಬುದ್ಧಿಜೀವಿ ಆಕ್ಟೊಪಸ್ ಸಮುದ್ರದಾಳವೇ ಒಂದು ವಿಭಿನ್ನ ಪ್ರಪಂಚವಾಗಿದ್ದು ಇಲ್ಲಿ ಅಸಂಖ್ಯ ವೈವಿಧ್ಯಮಯ ಜೀವಿಗಳಿವೆ. ಅವುಗಳ ಪೈಕಿ ಬಹುತೇಕ ಜೀವಿಗಳ ಕುರಿತು ಮನುಷ್ಯನಿಗೆ ಕಿಂಚಿತ್ತೂ ತಿಳಿದಿಲ್ಲವೆನ್ನಬಹುದು. ಸಮುದ್ರದಾಳದಲ್ಲಿ ವಿವಿಧ ರೀತಿಯ ಮೀನುಗಳು, ಕಪ್ಪೆಚಿಪ್ಪು, ಹವಳಗಳು, ಏಡಿ, ತಿಮಿಂಗಿಲಗಳು, ನಕ್ಷತ್ರ ಮೀನುಗಳು ಸಾಮಾನ್ಯವಾಗಿ ಇರುತ್ತವೆ. ಇವುಗಳ ಜೊತೆಗೆ ಸಮುದ್ರದಲ್ಲಿ ಆಕ್ಟೋಪಸ್ ಎಂಬ ವಿಚಿತ್ರವಾದ ಜೀವಿಯು ವಾಸಿಸುತ್ತದೆ. ಆಕ್ಟೊಪಸ್ ಇದರ ವೈಜ್ಞಾನಿಕ ಹೆಸರು ‘ಆಕ್ಟೊಪಸ್ ಆಕ್ಟೋಪೋಡಾ’ ಆಗಿದ್ದು, ಇದು ಎಂಟು ಕಾಲುಗಳುಳ್ಳ ‘ಸೆಫಾಲೋಪೋಡಾ’ ವರ್ಗಕ್ಕೆ ಸೇರಿದ ಜಲಚರವಾಗಿದೆ. ಆಕ್ಟೊಪಸ್ಗಳಿಗೆ ಎರಡು […]Read More
ಕಾಫಿ ಅಮೃತದಂತೆ ಕಾಣುವೆ ನೀ ಬೆಳಗಿನ ಹೊತ್ತುಹಬೆಯಾಡುತಲಿ ನೀ ಕಂಡರೆ ನನಗದೇ ಸಂಪತ್ತುಏನಾದರೂ ಸರಿಯೇ ತಪ್ಪಿಸಲಾರೆ ಒಂದ್ಹೊತ್ತು ದೂರದೂರದಾ ಊರುಗಳಲಿ ನಿನಗೇ ಹುಡುಕಾಟಬಯಲು ಸೀಮೆಯಲಿ ನಿನಗಾಗಿ ಪರದಾಟನಿನಗಾಗಿ ಮನದಲ್ಲಿ ಆಗಾಗ ಬಡಿದಾಟ ಬಾಬಾ ಬುಡನ್ ತಂದ ವರವು ನೀನುಚೆನ್ನಾಗಿ ಹುರಿದು ಪುಡಿಮಾಡುವನುಉಷ್ಣೋದಕದಲ್ಲಿ ಬೆರಸಿ ಕುಡಿವೆ ನಾನು ಇಲ್ಲಾರು ಇಲ್ಲ ನಿನಗೆ ಸರಿಸಾಟಿನಿನ್ನದೇ ರೂಪದಿ ಮೆರೆಯುವ ಆಟದಿಬಯಸಿದೆ ನಿನ್ನನೇ ಒಂದು ಭರ್ತಿ ಲೋಟದಿ ಬೆಳಗೆದ್ದು ನೀ ಸಿಕ್ಕಿದರೆ ನನಗಷ್ಟು ಸಾಕುಮರೆಯುವುದು ಬೇಗ ಮನದ ನೋವುಒಡಲಾಗುವುದು ಮಲ್ಲಿಗೆ ಹೂವು… ನೀನಾದೆ […]Read More
ಅಳಲೇಕೆ ಅಳುಕು ಮನದಲವಿತಿಹ ಭಾವನೆಯಅಭಿವ್ಯಕ್ತಿಯಲ್ಲಳುವೂಒಂದೆಂಬುದು ಸುಳ್ಳಲ್ಲ ; ಕಹಿ ನೆನಪುಗಳೆಮ್ಮಮನದಲಡಿಗಡಿಗೂಅಡಿಯನಿಡುತಿರಲು,ಅಳಲು ಅಳುಕೇಕೆ ; ಕಂಗಳ ಕೊಳೆಯೊಡನೆಮನದ ಮೂಲೆಯಲಿಹರಳುಗಟ್ಟಿದ ನೋವುಮುತ್ತಾಗಿ ಹರಿದು ಬರಲಿ! ಆಪ್ತರನ್ನಪ್ಪಿ, ಭೋರೆಂದುಅತ್ತ ಮನ ಹಗುರಾಗಿನಗಲಿ, ನಗುನಗುತಲಿರಲಿ! ಶ್ರೀವಲ್ಲಿ ಮಂಜುನಾಥRead More
ಋಣಮುಕ್ತೆ ಕವಿತಾ ಮನೆಯಲಿರುವ ದಿವಾನಿಗೊರಗಿ ಯೋಚಿಸುತ್ತಿದ್ದಳು ಕಳೆದುಹೋದ ತನ್ನ ಗತಜೀವನದ ದಿನಗಳನು. ಅಷ್ಟರಲಿ 8 ವರ್ಷದ ಪುಟಾಣಿ ಮಗಳು ದೀಪ್ತಿ ಸ್ಕೂಲಿಂದ ಬಂದವಳೇ ಶೂಸ್ ಸಹ ಬಿಚ್ಚದೇ ಅಲ್ಲಿಯ ವರದಿಗಳನು ಅಮ್ಮನಿಗೊಪ್ಪಿಸಲು ಶುರು ಮಾಡಿದಳು ಎಂದಿನಂತೆ.ಕವಿತಾ ಅನ್ಯಮನಸ್ಕತೆಯಿಂದ ಹುಂ ಹುಂ ಅನ್ನುತಿರುವುದ ಕೇಳಿ “ನೀ ಹೋಗಮ್ಮಾ, ಯಾವಾಗ್ಲೂ ಹೀಗೇ ನಾ ಹೇಳೊದನ್ನ ಕೇಳಲ್ಲ ಸರಿಯಾಗಿ..ಅದೇ ಪಪ್ಪ ನನ್ನ ಮಾತನು ಅದೆಷ್ಟು ಚೆಂದ ಕೇಳ್ತಿದ್ರು..ನಾ ಪಪ್ಪನ ಬಳಿ ಹೋಗುವೆ” ಅಂತಂದು ಸಿಟ್ಟಾಗಿ ರೂಮಿಗೆ ಓಡಿದಳು.ತನ್ನ ತಪ್ಪಿನರಿವಾಗಿ ಕವಿತಾ ಸಾರಿ […]Read More
ಮುಖಾಮುಖಿ – ಮಂಜುನಾಥ ಅಜ್ಜಂಪುರ ಪುಸ್ತಕ ಬಿಡುಗಡೆ ಕೃತಿ : ನಿಜ-ಇತಿಹಾಸದೊಂದಿಗೆ – ಮುಖಾಮುಖಿಲೇಖಕರು : ಮಂಜುನಾಥ ಅಜ್ಜಂಪುರಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ “ವಾಡಿಯಾ ಸಭಾಂಗಣ”,6 ಬಿ.ಪಿ.ವಾಡಿಯಾ ರೋಡ್, ಬಸವನಗುಡಿ, ಬೆಂಗಳೂರು 560004ಸಮಯ: ಬೆಳಗ್ಗೆ 10.00ಕ್ಕೆ ಇತಿಹಾಸ ಅಂದಕೂಡಲೇ ಅದೊಂದು ಬೋರಿಂಗ್ ಸಬ್ಜೆಕ್ಟ್ ಅನ್ನುವ ಮಾತೇ ಹೆಚ್ಚಾಗಿ ಕೇಳಿಬರುತ್ತದೆ. ನಾವು ಪಠ್ಯ ಪುಸ್ತಕಗಳಲ್ಲಿ ಓದುವ ಇತಿಹಾಸ ನಮ್ಮ ಮನಸ್ಸನ್ನು ತಟ್ಟದೇ ಇರುವುದೇ ಇಂಥದ್ದೊಂದು ಅಭಿಪ್ರಾಯ ಮೂಡಲು ಮುಖ್ಯ ಕಾರಣವಿರಬಹುದು. ದೇಶಾಭಿಮಾನವನ್ನು ಜಾಗೃತಗೊಳಿಸದ, ನಮ್ಮವರ ಸುದ್ದಿಯನ್ನು […]Read More
ಅಂತಿಮ ಭಾಗ ಮತ್ತೆ ಕಪೋತಕೂಟ ಅರಮನೆ ದೀಪಮಾಲಿಕೆಗಳಿಂದ ಝಗಝಗಿಸುತ್ತಿದೆ. ಮಂಗಳ ವಾದ್ಯಗಳು ಮೊಳಗುತ್ತಿವೆ. ಝಲ್ಲರಿ- ಮುರಳಿ- ಮೃದಂಗಗಳ ಮೃದುಮಧುರ ನಿನಾದ ವಾತಾವರಣದಲ್ಲೆಲ್ಲ ತುಂಬಿದೆ. ನಗರದ ಬೀದಿ ಬೀದಿಗಳಲ್ಲಿ ಗಂಡು ಹೆಣ್ಣುಗಳ ನೃತ್ಯಗೀತಗಳು ಇನ್ನೂ ಕಡಿಮೆಯಾಗಿಲ್ಲ. ಪುರಾತನ ರಾಜಪುತ್ರನಿಗೂ ನೂತನ ರಾಜಕುಮಾರಿಗೂ ಮದುವೆ ಎರಡು ರಾಜ ವಂಶಗಳು ಒಂದಾಗಿವೆ. ರಟ್ಟ ಧರ್ಮಾದಿತ್ಯರು ಅಳಿಯನ ಕೈಗೆ ರಾಜ್ಯಭಾರವನ್ನು ಒಪ್ಪಿಸಿ ಚಿಲ್ಲಕೂಟ ವಿಹಾರದಲ್ಲಿ ಆಶ್ರಯ ಪಡೆದಿದ್ದಾರೆ. ಸಮ್ರಾಟ ಸ್ಕಂದಗುಪ್ತರು ವಧೂವರರಿಗಾಗಿ ಸೇನಾ ಶಿಬಿರದಿಂದ ಐದು ಆನೆಗಳನ್ನು ಕಾಣಿಕೆಯಾಗಿ ಕಳುಹಿಸಿಕೊಟ್ಟಿದ್ದಾರೆ. ವಿಶ್ವಾಸಘಾತಕ ಕಿರಾತ […]Read More
ವಿಶ್ವದ ಅನಧಿಕೃತ ಅತ್ಯಂತ ಚಿಕ್ಕ ದೇಶ ಸೀಲ್ಯಾಂಡ್ ಜಗತ್ತಿನಲ್ಲಿ ಗಾತ್ರದಲ್ಲಿ, ಜನಸಂಖ್ಯೆಯಲ್ಲಿ ಮತ್ತು ಶ್ರೀಮಂತಿಕೆಯಲ್ಲಿ ಅನೇಕ ದೊಡ್ಡ ಮತ್ತು ಸಣ್ಣ ರಾಷ್ಟ್ರಗಳಿವೆ. ದೊಡ್ಡ ರಾಷ್ಟ್ರಗಳ ಪೈಕಿ ರಷ್ಯಾ, ಅಮೆರಿಕ, ಚೀನಾ, ಬ್ರೆಜಿಲ್, ಆಸ್ಟ್ರೇಲಿಯಾ, ಕೆನಡಾ ಮತ್ತು ಭಾರತಗಳು ಕ್ರಮವಾಗಿ ಪ್ರಥಮ ಏಳು ಸ್ಥಾನಗಳಲ್ಲಿವೆ. ಹಾಗೇ ಪ್ರಪಂಚದಲ್ಲಿ ಅನೇಕ ಸಣ್ಣ ದೇಶಗಳಿದ್ದು, ಅವುಗಳ ಜನಸಂಖ್ಯೆ ಒಂದು ಲಕ್ಷಕ್ಕಿಂತಲೂ ಕಡಿಮೆಯಿದೆ. ಆದರೆ ಇಲ್ಲೊಂದು ತೀರಾ ಸಣ್ಣ ದೇಶವೊಂದಿದ್ದು, ಅದರ ಹೆಸರು ಸೀಲ್ಯಾಂಡ್ ದೇಶ. ಈ ದೇಶದ ಒಟ್ಟು ಸುತ್ತಳತೆಯು ಒಂದು […]Read More