ಜೀವಜಲ ರಸ್ತೆಯ ತುಂಬೆಲ್ಲಾ ಕರೆಕಟ್ಟಿದ ಸಗಣಿಯ ರಾಶಿ, ಅಲ್ಲೇ ಒಣಗಿಹೋದ ಗೋಮೂತ್ರದ ಕರೆಗಳು, ರಸ್ತೆಯ ಇಕ್ಕೆಲಗಳಲ್ಲಿ ನಿಂತ ಅಸಹಾಯಕರಂತೆ , ಅಮಾಯಕರಂತೆ ಕಾಣುವ ಮಂದಿ. ಬಾನಿನಲ್ಲಿ ನಿಗಿನಿಗಿ ಹೊಳಿಯುತಿಹ ಸೂರ್ಯ.. ಅಲ್ಲಲ್ಲಿ ಓಡಾಡುತ್ತಿರುವ ವಾಹನಗಳು. ರಸ್ತೆಯ ಕೂಡು ಸ್ಥಳಗಳಲ್ಲಿ ನಿಂತ ಯುವಕರ ಹತಾಶ ಮುಖಗಳು. ಕೊಳೆ ಬಟ್ಟೆಗಳನ್ನು ಧರಿಸಿದ್ದಾರೆ. ಎಣ್ಣೆ ಕಾಣದ ಕೂದಲು, ಹಾಗೆಯೇ ಊರಿನ ಒಳ ಹೊಕ್ಕರೆ ಪ್ರತಿ ಮನೆಯ ಎದುರಿನಲ್ಲೂ ಹತ್ತಾರು ಕೊಡಪಾನಗಳು, ಪ್ಲಾಸ್ಟಿಕ್ ಬಿಂದಿಗೆಗಳು.. ರಾತ್ರಿಯ ಹನ್ನೆರಡೂವರೆ ಸುಮಾರು, ಬೀದಿಗಳಲ್ಲಾ ನಿರ್ಮಾನುಷವಾಗಿದೆ. ಬೀದಿ […]Read More
ವಿಶ್ವ ಪ್ಯಾಂಗೋಲಿಯನ್ ದಿನ ವಿಶ್ವ ಪ್ಯಾಂಗೋಲಿನ್ ದಿನವನ್ನು ಪ್ರತಿವರ್ಷ ಫೆಬ್ರವರಿ ಮೂರನೇ ಶನಿವಾರ ಆಚರಿಸಲಾಗುತ್ತದೆ.ವಿಶ್ವದಲ್ಲಿ ಅತೀ ಹೆಚ್ಚು ಕಳ್ಳಸಾಗಣೆಗೆ ಬಲಿಯಾಗಿ ವಿನಾಶವಾಗುವ ಹಂತ ತಲುಪಿದ ಪ್ಯಾಂಗೋಲಿನ್ಗಳ ಬಗೆಗೆ ಅರಿವು ಹಾಗು ನಿಸರ್ಗದಲ್ಲಿ ಅವುಗಳ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 2012 ರಿಂದ ವಿಶ್ವ ಪ್ಯಾಂಗೋಲಿನ್ ದಿನವನ್ನು ಆಚರಿಸಲಾಗುತ್ತಿದೆ. ಪ್ಯಾಂಗೋಲಿನ್ ಅಥವಾ ಚಿಪ್ಪುಹಂದಿ ಬಗೆಗೆ ಕೆಲವು ಕುತೂಹಲಕರ ಮಾಹಿತಿ ಇಲ್ಲಿವೆ. 🔸ಚಿಪ್ಪು ಹಂದಿಗಳು ಆಫ್ರಿಕಾ ಹಾಗು ಏಷಿಯಾ ಖಂಡಗಳಿಗೆ ಸೀಮಿತವಾಗಿದ್ದು ಇವುಗಳಲ್ಲಿ ಒಂದೇ ಕುಟುಂಬಕ್ಕೆ ಸೇರಿದ ಎಂಟು […]Read More
ಚುಟುಕುಗಳು ಅಂದದ ವಿಸ್ತಾರ ಆಸರೆಯ ಸೆಲೆ ತಾಯಿಯ ಮಡಿಲುಪ್ರೀತಿಯ ನೆಲೆ ತಂದೆಯ ಹೆಗಲುಆಲದಮರದ ಚೆಲುವು ಬಿಳಲಲಿನದಿಗಳಿಗಿರದ ವಿಸ್ತಾರ ಕಡಲಲಿ ಹೆತ್ತವರ ಹೆಮ್ಮೆ ಮಡಿಲಲಿ ಬೆಳೆದ ಕಂದತಮ್ಮ ಹೆಗಲಿ ಗೆ ಆಸರೆಯಾದ(ಳು)!ಕಡಲಿ ನಷ್ಟು ಪ್ರೀತಿ ತೋರುತಾಬದುಕಲಿ ಬಿಳಲಿ ನಂತೆ ಊರುಗೋಲಾದ(ಳು)!! ಅಗಾಧ ಪ್ರೀತಿ ಕಡಲಿನಂತಹ ಒಲವಿಗೆ ಹೆಗಲಾಗಿಮರಕೆ ಜೋತುಬೀಳುವ ಬಿಳಲಿನಂತೆ..ಅಮ್ಮನ ಮಡಿಲು ಬದುಕಿನ ವಿಸ್ತಾರ ಮರಕಿರುವಂತೆ ಗಟ್ಟಿ ಬಿಳಲುಸಂಸಾರದಲಿ ತಂದೆಯ ಹೆಗಲು!ಜಗ್ಗಿದರೂ ಅದೆಂದಿಗೂ ಕುಗ್ಗದು..ಹಾಂ..ಅದೊಂದು ವಿಶಾಲ ಕಡಲು!!ಇದ ಕಂಡು ಸಂತಸಪಡುವುದುತಾಯಿಯ ಮಡಿಲು!!!! ಸುಮನಾ ರಮಾನಂದRead More
ತಲೆಮಾರಿನ ಅಂತರ ಓಬೀರಾಯನ ಕಾಲದ ಪ್ರತಿನಿಧಿಗಳಿವರಂತೆ….ಶುರುವಾದರೆ ಸಾಕು ಇವರ ಮಾತು ,ಹೇಳುವರು ಬಗೆ ಬಗೆಯ ಕತೆಗಳ ಕಂತೆ…ನೂರು ರೂಪಾಯಿ ಸಂಬಳದ ಕತೆಯ ವ್ಯಥೆ… ಮಳೆ ಬೆಳೆಗಳ ಹಸಿರು ಸಿರಿಗಳ ಮನ ಸೆಳೆಯುವ, ಕತೆ ಹೇಳುವರು ಇವರು…ದೋಣಿಯಲಿ ತೇಲಿದ,ಬೆಟ್ಟವನು ಹತ್ತಿದ, ನೀರಿನಲಿ ಆಡಿದ ಕತೆ ಹೇಳುವರು ಇವರು.. ಇಳಿಜಾರಿನಲ್ಲಿ ಜಾರಿದ, ಗಾಯಕೆ ಅರಿಶಿನ ಹಚ್ಚಿದ ,ರಾಜಣ್ಣನ ಸಿನಿಮಾ ನೋಡಿಗದ್ಗದಿತರಾದ , ನಾನೇ ರಾಜಕುಮಾರನೆಂದು ಬೀಗಿದ ಕತೆ ಹೇಳುವರು ಇವರು… ತುತ್ತು ಅನ್ನಕ್ಕೂ ಪರದಾಡಿದರಂತೆ..ಎಲ್ಲಿಂದೆಲ್ಲಿಗೆ ಹೋಗುವುದಾದರೂ ಆಗ ಬರೀ ನಡಿಗೆಯಂತೆ…ಮೋಟಾರು […]Read More
ಇಪ್ಪತ್ತು ವರ್ಷಗಳಾದರೂ ಕೊಳೆಯದ ನಾಯಿಯ ಕಳೇಬರ ಈ ಜಗತ್ತಿನಲ್ಲಿ ಯಾವುದೇ ಜೀವಿಯು ಸತ್ತರೂ ಕೆಲವು ದಿನಗಳ ನಂತರ ಅದು ಕೊಳೆತು ದುರ್ವಾಸನೆ ಬೀರಲಾರಂಭಿಸುವುದು ಇಲ್ಲಿನ ನಿಯಮ. ಆದರೆ 1980 ರಲ್ಲಿ ಜಾರ್ಜಿಯಾ ದೇಶದ ಕಾಡೊಂದರಲ್ಲಿ ಓಕ್ ಮರಗಳನ್ನು ಕತ್ತರಿಸುತ್ತಿದ್ದ ಸಂದರ್ಭ ಮರದ ಟೊಳ್ಳಾದ ಒಳಮೈಯಲ್ಲಿ 20 ವರ್ಷಗಳ ಹಿಂದೆ ಸತ್ತಿದ್ದ ನಾಯಿಯ ಕಳೇಬರವು ದೊರೆತಿದ್ದು, ಅದರ ದೇಹವು ಕೊಳೆಯದೇ ಸಂರಕ್ಷಿತ ಸ್ಥಿತಿಯಲ್ಲೇ ಪತ್ತೆಯಾಗಿತ್ತು. ಹೀಗೆ ದೊರೆತ ನಾಯಿಯನ್ನು ಮರದ ಸಮೇತವಾಗಿ ಕತ್ತರಿಸಿ ತಂದು ಇಲ್ಲಿನ ‘ಫಾರೆಸ್ಟ್ ವರ್ಲ್ಡ್ […]Read More
ನೇಪಾಳದಲ್ಲಿ ಮಾಗಡಿ ಗಂಗಮ್ಮನ ಸಾಹಸ ಕಥೆ ನಮ್ಮ ಕನ್ನಡ ನಾಡಲ್ಲಿ ಜನಿಸಿ ನೇಪಾಳ ರಾಷ್ಟ್ರದಲ್ಲಿ ಸಾಧನೆಗಳ ಮೂಲಕ ಗುರುತಿಸಲ್ಪಟ್ಟ ಮಹಿಳೆಯ ಜೀವಗಾಥೆ ಇದು. ಬಹಳ ಹಿಂದೆ 2012 ರಲ್ಲಿ ಈ ವರದಿಯು ಲೇಖನ ರೂಪದಲ್ಲಿ ಉದಯವಾಣಿಯ “ಅವಳು” ಸಂಚಿಕೆಯಲ್ಲಿ ಪ್ರಕಟವಾಗಿತ್ತು ಆನಂತರ ಅಂತರ್ಜಾಲದಲ್ಲಿ ಎಷ್ಟು ಹುಡುಕಿದರೂ ಇದರ ಬಗ್ಗೆ ಮಾಹಿತಿ ಹಾಗು ಫೋಟೋಗಳು ಲಭ್ಯವಿಲ್ಲ. ಯಾವುದೊ ಒಂದು ಕಳ್ಳತನದ ಪ್ರಕರಣದ ಬೆನ್ನತ್ತಿದ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗಳಾದ ಕೆ. ಪಿ. ಸತ್ಯನಾರಾಯಣ್, ಮಲ್ಲಿಕಾರ್ಜುನ್, ಸಿರಾಜುದ್ದೀನ್, […]Read More
ವಿಭಿನ್ನ ಪ್ರವಾಸ ಕೃತಿ “ಕಗ್ಗತ್ತಲೆಯ ಖಂಡದಲ್ಲಿ” ಕೃತಿ ಲೋಕಾರ್ಪಣೆ ಫೆಬ್ರವರಿ 5 ನೇ ತಾರೀಕು ಭಾನುವಾರ ಮೈಸೂರಿನ “ದಿ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್” ಸಭಾಂಗಣದಲ್ಲಿ ಡಾ. ಅರಕಲಗೂಡು ನೀಲಕಂಠಮೂರ್ತಿ ಯವರ ಕೃತಿ ಲೋಕಾರ್ಪಣೆಯ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಶ್ರೀಯುತ ಡಾ.ಕೆ ಎಸ್. ರಂಗಪ್ಪ ನವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. “ಸಾಮಾನ್ಯವಾಗಿ ಪ್ರವಾಸ ಕಥನಗಳಲ್ಲಿ ಲೇಖಕರು ಆಯಾ ದೇಶದ ಸಂಸ್ಕೃತಿ ಪರಂಪರೆಯನ್ನು ವೈಭವೀಕರಿಸುವುದೇ ಹೆಚ್ಚು, ಆದರೆ ಡಾ. ಅರಕಲಗೂಡಿನ ನೀಲಕಂಠಮೂರ್ತಿಯವರು ಆಫ್ರಿಕಾ ಖಂಡದಲ್ಲಿ ತಮ್ಮ […]Read More
ಹಿಂದಿನ ಸಂಚಿಕೆಯಿಂದ…. ಚಿತ್ರಕನು ಮರದ ತೋಪಿಗೆ ಬಂದಾಗ ಸೂರ್ಯಾಸ್ತವಾಗುತ್ತಿತ್ತು. ಗುಲಿಕನಿಗೆ ಎಲ್ಲ ವಿಷಯವನ್ನು ತಿಳಿಸಿದ ಕೂಡಲೆ, ಗುಲಿಕನು ಮೀಸೆಯ ಮೇಲೆ ಕೈಯಾಡಿಸುತ್ತ ‘ಹುಂ ಅಸಭ್ಯ ಬರ್ಬರನಿಗೆ ಯಾವುದೋ ದುರಭಿ ಸಂಧಿ ಇರಬೇಕು. ರಾತ್ರಿಯೆಲ್ಲ ಎಚ್ಚರಿರಬೇಕು. ಅವನು ಅನಿರೀಕ್ಷಿತವಾಗಿ ಆಕ್ರಮಣ ಮಾಡಬಹುದು’ ಎಂದನು. ಕಿರಾತನಲ್ಲಿ ಯಾವುದೋ ದುರಾಲೋಚನೆ ಇದೆ ಎಂದು ಚಿತ್ರಕನಿಗೂ ಸಂದೇಹ ಇದ್ದೇ ಇತ್ತು. ಆದರೆ ಇರುಳಿನಲ್ಲಿ ಆಕ್ರಮಣ ಮಾಡಬಹುದೆಂದು ಅವನಿಗೆ ಅನ್ನಿಸುತ್ತಿಲ್ಲ. ಬೇರೆ ಏನೋ ಉದ್ದೇಶವಿಟ್ಟುಕೊಂಡು ಕಾಲಹರಣ ಮಾಡುತ್ತಿರಬಹುದು. ಆದರೆ ಆ ಉದ್ದೇಶವೇನಿರಬಹುದು? ಚಿತ್ರಕನ ಸೈನ್ಯ […]Read More
ಪಶ್ಚಿಮ ಘಟ್ಟದಲ್ಲೊಂದು ಇಣುಕು ಗಂಗೆ ಹುಳು ಕುರಿಂಜಾಲು ಬೆಟ್ಟದ ಚಾರಣ ಹೋಗುವಾಗ ಅಲ್ಲಲ್ಲಿ ಬಿದ್ದಿದ್ದ ಉಂಡೆ ರೂಪದ ಹುಳು ಗಮನಿಸಿದ್ದೆ.ಚಾರಣ ಮುಗಿಸಿ ಇಳಿಯುತ್ತಾ ಇದ್ದಾಗ ಅದೇ ಹುಳು ಚಲಿಸುತ್ತಿತ್ತು. ಹಿಂದಿನ ಅನೇಕ ಚಾರಣಗಳಲ್ಲಿ ವಿವಿಧ ಬಣ್ಣಗಳ ಈ ಹುಳುಗಳನ್ನು ಗಮನಿಸಿದ್ದೆ. ಸುಮಾರು ನಾಲ್ಕು ಇಂಚು ಉದ್ದದ ಹುಳ. ಎರಡು ಆಂಟೆನಾಗಳನ್ನು ಬಳಸಿಕೊಂಡು ದಾರಿ ಮಾಡಿಕೊಂಡು ಹೆಜ್ಜೆ ಹಾಕುತ್ತಿತ್ತು. ಅದನ್ನು ಮುಟ್ಟಿದ್ದೇ ತಡ ಚೆಂಡಿನಾಕಾರ ತಾಳಿ ತಟಸ್ಥವಾಯಿತು. ಈ ಹುಳುವಿಗೆ ಗಂಗೆ ಹುಳು. ಉಂಡೆ ಹುಳ, ಗೋಲಿ ಹುಳ […]Read More
ರಾಮನೊಳಗಿನ ಅಳಲು ರಾಮನಿಗೆ ಸೀತೆಯೋಮನವ ಮೆಚ್ಚಿದ ಮಡದಿಅಯೋಧ್ಯೆಯ ಕಿರೀಟವುಅವನ ಕಾಲಿನ ಬುಡದಿ. ಕೈಕೆಯಿಂ ದಶರಥನಅಹಮಿಕೆಯು ಅಡಗಡಗಿವೃದ್ಧರಾ ಮುನಿಗಳಾಶಾಪಕ್ಕೆ ಎರವಾಗಿ. ಬಂದುದೈ ಬೇಸಗೆಯುವಸಂತದ ಮಾಸದಲಿತಂದೆ ಮಾತನು ತಪ್ಪೆ-ನೆಂಬ ಅಭಿ ಮಾನದಲಿ. ಹೊರಟ್ಟಿದ್ದು ನೆನಪಾಯ್ತುಸೀತೆಯಾ ಪತಿಗಿಂದುದುಷ್ಟ ಸಂಹಾರದಲಿಅದೆ ಮೊದಲ ಜಲಬಿಂದು. ನೆಪಮಾತ್ರ ವನವಾಸಎಲ್ಲವೂ ವಿಧಿಲಿಖಿತಗರುಡನಿಗು ಗುರಿಬೇಕುಇಲ್ಲದಿರೆ ನಿರ್ವಾತ. ರಾವಣನ ಗೆದ್ದುದೇನ್ಬಹುದೊಡ್ಡ ಕತೆಯಲ್ಲ.ಸೀತೆಯನು ಕೆಂಡದಲಿನಾನೆ ಕಳುಹಿದೆನಲ್ಲ. ಗೆದ್ದು ಬಂದಳು ಅವಳುಅಗ್ನಿಯ ಪರೀಕ್ಷೆಯಲಿಸಾಕೇತದಲಿ ಇಂದುಸಾಕಾಗದಾಯ್ತಲ್ಲ. ಜನರ ಮನವನು ನಾನುಹೇಗೆ ಹೇಳಲಿ ಹೇಳುರಾಮನಿಗು ಬಿಡಲಿಲ್ಲಜನಮಾನಸದ ಗೋಳು ಅನುಮಾನ ಜನರದ್ದುನಿಜಕು ರಾಮನದಲ್ಲಆದರೂ ಅವನೊಳಗೆಚಿಂತೆ ಬಿಡಲೇ ಇಲ್ಲ. […]Read More