ಉಕ್ಕಿನ ಮನುಷ್ಯನಿಗೊಂದು ಏಕತೆಯ ಪ್ರತಿಮೆ ದೇಶದ ಮತ್ತು ಪ್ರಪಂಚದ ವಿವಿಧ ಸ್ಥಳಗಳಲ್ಲಿ ಹಲವಾರು ಮಹಾನ್ ಸಾಧಕರ ಹಾಗೂ ವಿಶೇಷ ವ್ಯಕ್ತಿಗಳ ಪ್ರತಿಮೆಗಳನ್ನು ಸ್ಥಾಪಿಸುವುದು ನಾವೆಲ್ಲರೂ ನೋಡಿದ್ದೇವೆ. ಅವುಗಳ ಪೈಕಿ ಅಮೇರಿಕಾದ ನ್ಯೂಯಾರ್ಕ್ ನಗರದ ಲಿಬರ್ಟಿ ಪ್ರತಿಮೆಯು ಅತ್ಯಂತ ವಿಶೇಷವಾದ ಹಾಗೂ ಪ್ರಪಂಚದಲ್ಲಿ ಅತ್ಯಂತ ಎತ್ತರವಾದ ಪ್ರತಿಮೆಯೆಂದು ಇದುವರೆಗೂ ಹೆಗ್ಗಳಿಕೆಯನ್ನು ಪಡೆದಿತ್ತು. ಆದರೆ ಈ ಹೆಗ್ಗಳಿಕೆಯು 31 ಅಕ್ಟೋಬರ್ 2018 ರ ನಂತರ ಗುಜರಾತ್ ರಾಜ್ಯದಲ್ಲಿ ನಿರ್ಮಿಸಲಾಗಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 142 ನೇ ಜನ್ಮದಿನದಂದು ಉಕ್ಕಿನ […]Read More
ಮತ್ತೆ ಬಂತು ಸಂಕ್ರಾಂತಿ.. ಮತ್ತೆ ಬಂದಿದೆ ನೋಡು ಮಕರ ಸಂಕ್ರಾಂತಿಎಳ್ಳು ಬೆಲ್ಲದ ಸವಿಯ ಜೊತೆಯಲಿ ತಂದುಎಲ್ಲರ ಮೊಗದಲ್ಲಿ ಮೂಡಿಸಿದೆ ಕಾಂತಿ ಹೊಲಗದ್ದೆಯಲಿ ತುಂಬಿದೆ ಕಾಳುರೈತನ ಜೀವಕೆ ತಂದಿದೆ ಹೊಸಬಾಳುಕಬ್ಬಿನ ಜಲ್ಲೆಯು ನಿಂತಿದೆ ಹೊಲದಲಿಬೆಲ್ಲದ ಸವಿಯನು ನೀಡಲು ಬಂದಿದೆ ಭತ್ತದ ಪೈರು ನೀಡಿದೆ ಧಾನ್ಯಬೆಳೆದ ರೈತನಿಗೆ ಅದುವೆ ಭಾಗ್ಯ ಎತ್ತುಗಳ ಸಿಂಗರಿಸಿ ಬೀಗಿಹ ರೈತದೇಶದ ಬದುಕಿನ ಭಾಗ್ಯದಾತ ಲೋಕದಾ ಕಾರಿರುಳ ಕಳೆಯುವನೀತಸುಗ್ಗಿಯ ಸಡಗರವ ಎಲ್ಲೆಡೆ ಬೀರುತ್ತಬಂದಿದೆ ನೋಡಿರಿ ಈ ಸಂಕ್ರಾತಿಎಲ್ಲರ ಮನದಲಿ ತುಂಬಿದೆ ಶಾಂತಿ…. ಸುನೀಲ್ ಹಳೆಯೂರುRead More
ಪ್ರತ್ಯಗಾತ್ಮ ಚಿಂತನ ಕಾಲ ಕಾಲಕೆ ಮೋಡ ಮಳೆಯ ಸುರಿಸುತ್ತಿರಲಿಆಗೆಲ್ಲ ಬೆಳೆಯು ಸಾಕಷ್ಟು ಬರಲಿಸಾಲಗಾರನ ಕೈಗೆ ಸಿಲುಕದೆ ಕೃಷೀವಲನಬಾಳು ಹಸನಾಗಿರಲಿ- || ಪ್ರತ್ಯಗಾತ್ಮ || ಜೀವ ಜಂತುಗಳೆಲ್ಲ ಜೀವಿಸಲಿ ಸುಖವಾಗಿದೇವೇಂದ್ರ ವರ್ಷಿಸಲಿ ಕಾಲ ಕಾಲಕ್ಕೆಬೇವೊಂದೆ ಬಾಳಿನಲಿ ಇರದೆ, ಬೆಲ್ಲವೂ ಇರಲಿನೋವಿರದೆ ಸುಖವಿರಲಿ- || ಪ್ರತ್ಯಗಾತ್ಮ || ಮನೆಯ ಅಂಗಳದಲ್ಲಿ ಮಕ್ಕಳಾಡುತಲಿರಲಿಮನೆಯೊಳಗೆ ನಡೆದಿರಲಿ ನಿತ್ಯ ಶುಭಕಾರ್ಯಮನೆ ಮಂದಿ ಅನ್ಯೋನ್ಯ ಭಾವದಲಿ ಬಾಳಿರಲಿಮನೆ ತುಂಬ ನಗುವಿರಲಿ- || ಪ್ರತ್ಯಗಾತ್ಮ || ಎನ್. ಶಿವರಾಮಯ್ಯ (ನೇನಂಶಿ)ವಾಚನ: ಗೌರಿದತ್ತRead More
ಹೆಳವರು ಮನೆಯ ಮಗನೆಂದು ಬಂದವರುತಾತ ಮುತ್ತಾತ ಮರಿತಾತನ ಕಥೆ ಹೇಳುವರುಗತಕಾಲದ ಇತಿಹಾಸ ಬಿಚ್ಚಿಡುವವರು ಪ್ರತಿ ಊರು ಪ್ರತಿ ಕೇರಿಗಳ ಕಥೆ ತಿಳಿದವರುಬ್ರಹ್ಮಗಂಟು ಮೋಡಿ ಭಾಷೆಯ ಪಂಡಿತರುವರ್ಷಕೊಮ್ಮೆ ಮನೆಯ ಕಡೆ ಬರುವವರು ಹಳದಿ ರುಮಾಲು ಕರಿ ಕೋಟು ಧರಿಸಿದವರುಕೈಯ್ಯಲ್ಲಿ ಗುಲಾಬಿ ಬಣ್ಣದ ಚೀಲ ಹಿಡಿದವರುಕಂಕುಳಲ್ಲಿ ಜೋಳಿಗೆಯ ನೇತಾಡಿಸಿಕೊಂಡವರು ಮನೆ ಮನೆಯ ಪ್ರತಿಯೊಬ್ಬರ ಹೊಗಳುವವರುಹಿಡಿ ಜೋಳ, ಹಳೆಬಟ್ಟೆ ಪಡೆಯುವವರುಕುರಿ ಕೊಟ್ಟರೂ ಸರಿ ಕೋಳಿಯಾದರೂ ಸರಿ ಹೆಗಲಿನ ಚೀಲದಲಿ ಕುಳಿತ ಪುಸ್ತಕವಾ ಬಿಡಿಸಿತಲೆಮಾರುಗಳ ಕಥೆ ಹೇಳಿ ಖುಷಿಪಡಿಸಿನಾ ನಿಮ್ಮ ಮನೆ ಮಗನೆಂದು […]Read More
ಪರಿಚ್ಛೇದ – 17 ಹೂಣರಕ್ತ ಮೀನಿನಾಕಾರದ ಒಂದು ತಪ್ಪಲಿನಲ್ಲಿ ಚಷ್ಟನ ದುರ್ಗ ಇದ್ದಿತು. ಉತ್ತರ ದಿಕ್ಕಿನಿಂದ ಆರ್ಯಾವರ್ತವನ್ನು ಪ್ರವೇಶಿಸುವ ಕಣಿವೆ ಮಾರ್ಗಗಳಲ್ಲಿ ಇದೂ ಒಂದು. ಆದುದರಿಂದಲೇ ಈ ದುರ್ಗಕ್ಕೆ ವಿಶೇಷ ಸ್ಥಾನವಿದೆ. ಈ ಮಾರ್ಗದಿಂದಲೇ ಹಿಂದಿನ ಕಾಲದಲ್ಲಿ ಯುದ್ಧ ವೀರರು ದಂಡಯಾತ್ರೆ ಮಾಡಲು ಆರ್ಯಭೂಮಿಗೆ ಬಂದಿದ್ದರು, ವ್ಯಾಪಾರ ಮಾಡುವ ಸಲುವಾಗಿ ವಿದೇಶಿ ವ್ಯಾಪಾರಿಗಳು ಬಹುಮೂಲ್ಯ ವಸ್ತುಗಳನ್ನು ತೆಗೆದುಕೊಂಡು ಬಂದು ಹೋಗಿ ಮಾಡುತ್ತಿದ್ದರು. ಚೀನಾ ದೇಶದ ಯಾತ್ರಿಕರು ತೀರ್ಥಯಾತ್ರೆಗಾಗಿ ಬರುತ್ತಿದ್ದರು. ಈ ತಪ್ಪಲಿನ ಪ್ರದೇಶವು ಉತ್ತರ ದಕ್ಷಿಣವಾಗಿ ಐದು […]Read More
ಕಾಲಮಾನದ ಸತ್ಯ ಕಾಲವು ನಿಂತಲಿ ನಿಲ್ಲದೆಓಡಿ ವರುಷವೊಂದು ಉರುಳಿದೆ!ಕಂಡ ಕನಸುಗಳು ಕರಗದೆ..ಮನದಲಿ ಹಾಗೇ ಉಳಿದಿದೆ!! ಕಾಲವದು ಕಾಲಿಲ್ಲದೆಯೂ ಸಾಗಿಗಮ್ಯದೆಡೆಗೆ ರೊಯ್ಯನೆ ಓಡಿದೆ!ತನ್ನದೇ ಹಠವೆಂಬಂತೆ ನುಗ್ಗಿ..ಅದನು ತಡೆದ ಕರಗಳನು ದಾಟಿದೆ!! ಕಾಲವೆನ್ನಲು ಅದು ನಡೆದು ಓಡಿಸಮಯವೆನಲು ಮತ್ತೆ ಕಾಡಿದೆ!ಹೊಸತನವನರಸಿ ದಿಕ್ಕುಗಳಲಿ ಸುತ್ತಾಡಿ..ಕಡೆಗೆ ಬಿಡದೆ ಗುರಿಯ ಮುಟ್ಟಿದೆ!! ಕಾಲವನು ತಡೆವ ಶಕ್ತಿನೀ ಹೇಳು ಜಗದಿ ಯಾರಿಗಿದೆ!ಮುಂದಡಿಯಿರಿಸಿ ಸಾಗಿದೆ ಅಳುಕದೆ…ಹಿಂದಕೆ ಕಾಲವೆಂದೂ ಚಲಿಸಲಾರದೆ!! ಸುಮನಾ ರಮಾನಂದRead More
ಮತ್ತೆ ಸಂಕ್ರಾಂತಿ ಇರುವುದೆಲ್ಲವು ಹೋಗಿ ಮತ್ತೆ ಬೆತ್ತಲೆಯಾಗಿ|ಕುರುಡಾಗಿ ಕಿವುಡಾಗಿ ಮೂಕ ನೀನಾಗಿ||ಸರಿಯುತಿರೆ ಕತ್ತಲೊಳು ಬೆಳಕನ್ನು ಅರಸುತ್ತ|ಮರಳಿ ಬರುವುದೆ ಬದುಕು – ನವ್ಯಜೀವಿ|| ಬದುಕೆಂಬುದು ನಿರಂತರ…ನಾವು ನಮ್ಮ ನಂತರ ಮತ್ತೊಬ್ಬರು. ಕಾಲದೋಟದಲ್ಲಿ ಸಾಗುತ್ತ ಸಿಹಿಕಹಿಗಳ ಮಿಶ್ರಣವನ್ನು ಸವಿಯುತ್ತಾ ಬದುಕಿನಲ್ಲಿ ಸಾರ್ಥಕ್ಯ ಕಾಣಬೇಕು. ಬಾಳಿನ ಎಲ್ಲಾ ನೋವು,ದುಃಖ ದುಮ್ಮಾನಗಳಿಂದ ಹೊರಬಂದು ಸಂತಸದಿಂದ ಮನಃ ಶಾಂತಿ ಹೊಂದಿರುವ ಜೀವನವನ್ನು ನಡೆಸುವಂತಾಗಿ…ನಾವು ದಿಟ್ಟ ಹೆಜ್ಜೆಯನ್ನು ಇಡುತ್ತ ಗುರು ಹಿರಿಯರು ಕಲಿಸಿದ ಮಾರ್ಗದಲ್ಲಿ ಆತ್ಮವಿಶ್ವಾಸದಿಂದ ನಡೆದು ಗುರಿ ಮುಟ್ಟಿ ಯಶಸ್ಸು ಸಾಧಿಸುವಂತಾಗಬೇಕು… ಬದುಕಿನ ಹಣತೆಯನ್ನು […]Read More
ಊಟಿ ಒಂದು ಅದ್ಭುತ ಪ್ರೇಕ್ಷಣೀಯ ಸ್ಥಳ ದೇಶದ ಪ್ರಮುಖ ಪ್ರವಾಸಿ ತಾಣಗಳ ಪೈಕಿ ತಮಿಳುನಾಡಿನ ಊಟಿಯು ವಿಶೇಷ ಸ್ಥಾನವನ್ನು ಪಡೆಯುತ್ತದೆ. ಭೂಲೋಕದ ಸ್ವರ್ಗದಂತಿರುವ ಇಲ್ಲಿನ ಅದ್ಭುತವಾದ ಹವಾಮಾನ ಮತ್ತು ಪ್ರಾಕೃತಿಕ ಸೌಂದರ್ಯಕ್ಕೆ ಬೆರಗಾದ ಪ್ರವಾಸಿಗರೇ ಇಲ್ಲವೆಂದರೆ ತಪ್ಪಾಗಲಾರದು. ಹೊಸದಾಗಿ ಮದುವೆಯಾದ ದಂಪತಿಗಳ ಮಧುಚಂದ್ರದ ತಾಣವೆಂದೇ ಊಟಿಯು ಪ್ರಸಿದ್ಧಿಯನ್ನು ಪಡೆದಿದೆ. ಭಾರತ ದೇಶವಷ್ಟೇ ಅಲ್ಲದೇ ವಿದೇಶದಲ್ಲೂ ಊಟಿಗೆ ಪ್ರವಾಸೋದ್ಯಮದಲ್ಲಿ ವಿಶಿಷ್ಟವಾದ ಸ್ಥಾನಮಾನವಿದ್ದು, ವಿದೇಶಿಯರೂ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಕ್ಕೆ ಆಗಮಿಸುತ್ತಾರೆ. ಊಟಿಯು ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಿಂದ 295 […]Read More
ನಮ್ಮ ಚಾರಣದಲ್ಲಿ ಹುಲ್ಲುಗಾವಲು ಪ್ರದೇಶ ಕಂಡಾಗ ಅಲ್ಲಲ್ಲಿ ಬಿದ್ದಿದ್ದ ಸೆಗಣಿಯನ್ನು ತೋರಿಸಿದ ನಮ್ಮ ಚಾರಣದ ಮಾರ್ಗದರ್ಶಿ ರಂಜಿತ್ ಈ ಸೆಗಣಿ “ಇಂಡಿಯನ್ ಬೈಸನ್” ದು ಎಂದು ಹೇಳಿ ಅದರ ಬಗ್ಗೆ ಹೆಚ್ಚು ಮಾಹಿತಿ ನೀಡುತ್ತಿದ್ದ, ಹಾಗೆಯೇ ಅದು ನಾಚಿಕೆ ಸ್ವಭಾವದ ಪ್ರಾಣಿ ನಮ್ಮನ್ನು ಕಂಡರೆ ಓಡಿಹೋಗುತ್ತದೆ ಆದರೆ ಅಪಾಯ ಕಂಡುಬಂದರೆ ನಮ್ಮ ಮೇಲೆ ದಾಳಿ ಮಾಡುತ್ತದೆ ಎಂದು ಹೇಳಿದ. ಹಾಗೆಯೇ ಎದುರು ಬೆಟ್ಟದ ಕಡೆಗೆ ಬೆಟ್ಟುಮಾಡಿ ತೋರಿಸಿ ಸೂಕ್ಷ್ಮವಾಗಿ ಗಮನಿಸಲು ಹೇಳಿದಾಗ ನಾನು ಮತ್ತು ನನ್ನ ಗೆಳೆಯ […]Read More
ವೈಕುಂಟದ ಆಡುಗೆಮನೆ – ಕಾಂಚನ ಬ್ರಹ್ಮನ ಸನ್ನಿಧಿಯಲ್ಲಿ ಅನ್ನ ಯಜ್ಞ ಭಾರತೀಯ ಸಂಸ್ಕೃತಿಯಲ್ಲಿ ಅನ್ನಕ್ಕೆ ಮಹತ್ವದ ಸ್ಥಾನ. ಅನ್ನವನ್ನು ಪ್ರರಬ್ರಹ್ಮ ಸ್ವರೂಪವೆಂದೆ ವಂದಿಸಿ ನಮಿಸಿ ಸ್ವೀಕರಿಸುವುದು ಭಾರತೀಯ ಸಂಸ್ಕೃತಿ. ದೇಶದಾದ್ಯಂತ ಇರುವ ಹಲವಾರು ಧಾರ್ಮಿಕ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಬಂದ ಭಕ್ತರು ಹಸಿದು ಹಾಗೆ ಹೋಗಬಾರದೆಂಬ ಕಾರಣಕ್ಕೆ ಭೋಜನ ಪ್ರಸಾದದ ವ್ಯವಸ್ಥೆ ಮಾಡಿರುತ್ತಾರೆ. ದೇವರ ದರ್ಶನಕ್ಕೆ ಎಷ್ಟು ಮಂದಿ ಭಕ್ತರು ಬಂದರೂ ಸರಿ ಅವರಿಗೆ ಅಚ್ಚುಕಟ್ಟಾಗಿ ಭೋಜನ ಪ್ರಸಾದ ಮಾಡಿಸಿ ಕಳಿಸುವ ಹಲವಾರು ದೇವಸ್ಥಾನಗಳಿದೆ. ಅವುಗಳಲ್ಲಿ ಮುಂಚೂಣಿಯಲ್ಲಿ […]Read More