ಹಿಂದಿನ ಸಂಚಿಕೆಯಿಂದ…. ಚಂದ್ರೋದಯವಾಯಿತು. ಕೃಷ್ಣಪಕ್ಷದ ಚತುರ್ಥಿಯ ಚಂದ್ರನು ಪೂರ್ವಾಚಲದ ನೆತ್ತಿಯ ಮೇಲೆ ಕಾಣಿಸಿಕೊಂಡು ಬಲವಂತದ ನಗೆ ನಗುತ್ತಿದ್ದಾನೆ. ಪಾಂಥಶಾಲೆಯ ಅಂಗಳದಲ್ಲಿ ಯಾರೂ ಇಲ್ಲ. ಪಾರಸಿಕರು ತಮ್ಮ ಕೊಠಡಿಯ ಬಾಗಿಲು ಮುಚ್ಚಿಕೊಂಡಿದ್ದಾರೆ. ಅಂಗಳ ಚಂದ್ರನ ಮಂದ ಪ್ರಕಾಶದಿಂದ ಬೆಳಗಿದೆ. ಚಿತ್ರಕ ರಟ್ಟಾಳ ಕೊಠಡಿಯ ಬಾಗಿಲು ಬಡಿದು ‘ದೇವಿ, ಏಳಿರಿ ಏಳಿರಿ. ಊಟಕ್ಕೆ ಬನ್ನಿರಿ’ ಎಂದು ಕರೆದನು. ರಟ್ಟಾ ಬಾಗಿಲು ತೆರೆದು ಹೊರ ಬಂದು ನಗುತ್ತ ‘ನಿದ್ದೆ ಬಂದು ಮಲಗಿಬಿಟ್ಟಿದ್ದೆ’ ಎಂದಳು. ಕೊಠಡಿಯ ಎದುರಿಗೆ ಊಟದ ವ್ಯವಸ್ಥೆ. ಎದುರು ಬದುರು […]Read More
ಬಿಹಾರದ ಪೊಲೀಸರು ಹಾಗು ಅರಣ್ಯ ರಕ್ಷಕ ಪಡೆಗಳು ತಮ್ಮ ಜಂಟಿ ಕಾರ್ಯಾಚರಣೆಯಲ್ಲಿ ನರಭಕ್ಷಕನಾಗಿದ್ದ “T – 104” ಎಂಬ 3 ವರ್ಷದ ಗಂಡು ಹುಲಿಯನ್ನು ಕಳೆದ ಶನಿವಾರ 8 ರಂದು ಹೊಡೆದು ಹಾಕಿದ್ದಾರೆ. ಸ್ಥಳೀಯ ಗ್ರಾಮದ ಜನರು, ಎರಡು ಆನೆಗಳು, 8 ನುರಿತ ಶಾರ್ಪ್ ಶೂಟರ್ಗಳು ಹಾಗು ಅರಣ್ಯ ರಕ್ಷಕ ಪಡೆಗಳು, ಒಟ್ಟು ಸುಮಾರು 200 ಮಂದಿ ಇದರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಮೂರು ವರ್ಷ ತುಂಬಿದ್ದ ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದ ಚಂಪಾರಣ್ ನ ಈ ಗಂಡು […]Read More
ಕಥಾಭರಣ – SOMEದರ್ಶನ – ಅಡ್ಡಿತುಷ ಬಕ್ಕಜಬಿನ್ನಿಕೃತಿಗಳ ಬಿಡುಗಡೆ ದಿನಾಂಕ: 16-10-2022ಸ್ಥಳ: ಅಕ್ಕಮಹಾದೇವಿ ಸಭಾಂಗಣಕನ್ನಡ ಸಾಹಿತ್ಯ ಪರಿಷತ್ತು,ಚಾಮರಾಜಪೇಟೆ,ಬೆಂಗಳೂರು- 560018 ಕನ್ನಡ ಸಾಹಿತ್ಯಲೋಕಕ್ಕೆ ಸದಾ ಸದಭಿರುಚಿಯ ಪುಸ್ತಕಗಳನ್ನು ಪರಿಚಯಿಸುತ್ತಿರುವ ಸಾಹಿತ್ಯಲೋಕ ಪಬ್ಲಿಕೇಷನ್ಸ್ ಈ ಭಾರಿ ಮೂರೂ ವಿಭಿನ್ನ ಕೃತಿಗಳನ್ನು ಲೋಕಾರ್ಪಣೆ ಮಾಡುತ್ತಿದೆ. ಕಥಾಭರಣ – ವಿವಿಧ ಲೇಖಕರ ಕಥಾಸಂಕಲನ ಡಾ. ಅಜಿತ್ ಹರೀಶಿ ಹಾಗು ವಿಠ್ಠಲ್ ಶೆಣೈ ರವರು ಕನ್ನಡ ಸಾಹಿತ್ಯಲೋಕದ ಇಪ್ಪತೆಂಟು ವಿಭಿನ್ನ ಲೇಖಕರ ಕಥೆಗಳನ್ನು ಸಂಪಾದಿಸಿದ್ದಾರೆ. ಈ ಪುಸ್ತಕದಲ್ಲಿರುವ ಕಥೆಗಳು ಹೆಸರೇ ಹೇಳುವಂತೆ ವಿಭಿನ್ನ ಭಾವಗಳ […]Read More
ಇಡ್ಲಿ ಹುಟ್ಟಿದ್ದು ಹೀಗೆ!! – ಇಡ್ಲಿಯ ಪುರಾಣ ಇಡ್ಲಿ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಮಕ್ಕಳಿಂದ ಮುದುಕರವರೆಗೂ ರುಚಿಯಾದ ಚಟ್ನಿ ಹಾಗೂ ಸಾಂಭಾರ್ ಇದ್ದರೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಇನ್ನು ಹಬೆಯಲ್ಲಿ ಬೇಯುವುದರಿಂದ ರೋಗಿಗಳಿಗಂತೂ ಅತ್ಯಂತ ಉತ್ಕಷ್ಟವಾದ ಆಹಾರ, ಹಾಗಾಗಿಯೇ ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಪುಷ್ಟಿಕರವಾದ ಹಾಗೂ ಆರೋಗ್ಯಕರವಾದ ಆಹಾರ ಎಂದು ಪರಿಗಣಿಸಿದೆ. ಇಡ್ಲಿ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಅಚ್ಚುಮೆಚ್ಚಿನ ತಿಂಡಿಯಾಗಿದೆ. ಬಿಸಿ ಬಿಸಿ ಸಾಂಬಾರ್ ನೊಂದಿಗೆ ಬಿಳಿಗ್ಗೆ ಬಿಸಿ-ಬಿಸಿ ಇಡ್ಲಿ ಇದ್ದರೆ […]Read More
ಸ್ಕಂದಪುರಾಣದಲ್ಲಿ ಉಲ್ಲೇಖಿತ ಬಿಲದ್ವಾರ ಗುಹೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಮುಖ ಆಕರ್ಷಣೆಗಳಲ್ಲಿ ಬಿಲದ್ವಾರ ಗುಹೆಯೂ ಒಂದು. ಇದು ಸುಬ್ರಹ್ಮಣ್ಯ ದೇವಾಲಯದಿಂದ ಕುಮಾರಧಾರ ನದಿಗೆ ಹೋಗುವ ಹಾದಿಯಲ್ಲಿದೆ. ದಂತಕಥೆಗಳ ಪ್ರಕಾರ ಸರ್ಪಗಳ ರಾಜನಾದ ವಾಸುಕಿಯು ಗರುಡನ ಆವೇಶದಿಂದ ತಪ್ಪಿಸಿಕೊಳ್ಳಲು ಮತ್ತು ತನ್ನನ್ನು ತಾನು ಕಾಪಾಡಿ ಕೊಳ್ಳಲು, ಈ ಗುಹೆಗೆ ಬಂದು ಅವಿತುಕೊಂಡು ತನ್ನನ್ನು ತಾನು ರಕ್ಷಿಸಿಕೊಂಡನೆಂದು ಹೇಳಲಾಗಿದೆ. ಈ ಗುಹೆಯು ನೈಸರ್ಗಿಕವಾಗಿ ನಿರ್ಮಾಣವಾಗಿದ್ದು, ಪ್ರವೇಶ ಮತ್ತು ನಿರ್ಗಮದ್ವಾರವನ್ನು ಹೊಂದಿದೆ. ಈ ಗುಹೆಯು 10 ಮೀ ಉದ್ದ ಮತ್ತು 30 […]Read More
ಹಿರಿಯ ಆರಕ್ಷಕರು ಕೆಳಗಿನವರನು ಬಯ್ಯೆಕಿರಿಯ ಪೇದೆಯ ಬಯ್ಯೆ ಆ ಕೆಳಗಿನವರುಪಿರಿದು ಕೋಪದಿ ಪೇದೆ ಹಾದಿ ನಾಯಿಯ ಒದೆದಪರದೇಶಿಗೇ ಶಿಕ್ಷೆ- || ಪ್ರತ್ಯಗಾತ್ಮ || ಉಂಡು ತೆಪ್ಪಗೆ ಕುಳಿತ ಗಂಡನನು ರಂಜಿಸಲುಉಂಡ ಬಾಯಿಗೆ ಇನಿತು ಒಗ್ಗರಣೆ ಎಂದುಮಂಡಕ್ಕಿ ಪುರಿ ಕೊಡಲು ಮೊದಲು ಮುಕ್ಕಿಗೆ ಕಲ್ಲು!ಗಂಡ ಕೆಂಡವೆ ಆದ! – || ಪ್ರತ್ಯಗಾತ್ಮ || ಮಡದಿ ತಾನೊಲವಿನಲಿ ಎದೆಯ ನೋವಿನ ಪತಿಗೆಸಡಗರದಿ ಗಸಗಸೆಯ ಪಾಯಸವ ಕೊಡಲು,ಕುಡಿದು ನಾಲಗೆ ಸುಟ್ಟು `ಬಿಸಿ’ ಎಂದು ಬೊಬ್ಬೆ ಇಡೆಬಿಡದೆ ಹೆಚ್ಚಿತು ನೋವು- || ಪ್ರತ್ಯಗಾತ್ಮ […]Read More
ಹೇಳಿ, ಇವಳೇಕೆ ಕಳ್ಳಿ? ಬೆಳಗಿನ ಸಮಯ. ಸುಮಾರು ಹನ್ನೊಂದು ಗಂಟೆಯಾಗಿರಬಹುದು. ಯಾರೋ ಬಾಗಿಲು ಬಡಿದಂತಾಗಿ ಅಡುಗೆ ಮನೆಯಲ್ಲಿದ್ದ ಭವಾನಿ, ‘ಯಾರು ಬಂದಿರಬಹುದು ಈಗ? ಗ್ಯಾಸ್ ಸಿಲಿಂಡರ್ ಕೊಡುವವನು ನಿನ್ನೆಯೇ ಕೊಟ್ಟು ಹೋಗಿದ್ದಾನೆ. ಪೋಸ್ಟ್ ಮನ್ ಬರುವ ಸಮಯವಿನ್ನೂ ಆಗಿಲ್ಲ. ಅವನು ಬಂದರೂ ಬಾಗಿಲು ಬಡಿಯದೆ ‘ಪೋಸ್ಟ್’ ಎಂದು ಕೂಗುತ್ತಾ ಪತ್ರಗಳನ್ನು ಬಾಗಿಲಲ್ಲೇ ಹಾಕಿ ಹೋಗುತ್ತಾನೆ. ಮೇಲಿನ ಮನೆಗೆ ಬಾಡಿಗೆಗೆ ಈಗಾಗಲೇ ಹೊಸಬರು ಬಂದಿರೋದ್ರಿಂದ ಮನೆ ಕೇಳಿಕೊಂಡು ಯಾರೂ ಬಂದಿರೋದಿಲ್ಲ. ಅಂದ್ಮೇಲೆ, ಮತ್ಯಾರಿರಬಹುದು?’ ಎಂದು ಅಡುಗೆ ಮನೆಯಿಂದ ಹೊರ […]Read More
ವಿಜ್ಞಾನ ಲೋಕ ನಮ್ಮ ದೇಶ ಧಾರ್ಮಿಕಕೆ ಹೆಸರುಅಂತೆಯೇ ವೈಜ್ಞಾನಿಕಕೂ ಹೆಸರು|ಕರೆಯಬಹುದು ವಿಜ್ಞಾನ ಲೋಕಸದಾ ಅನ್ವೇಷಣೆ ಮಾಡುತಿಹರು|| ಆಪತ್ಧರ್ಮ ಸಾಲ ಕೇಳುವಾಗ ಮಿತ್ರರುತಮ್ಮ ಕಷ್ಟಗಳ ತೋಡಿಕೊಳ್ಳುವರು|ನಂಬಿಕೆಯಿಂದ ಇವರುಆಪತ್ಧರ್ಮವೆಂದು ಕೊಡುವರು|| ಚಿಂತೆ ಸಾಲ ಕೊಟ್ಟವ ಕಾಲ ಕಳೆದಂತೆಉಂಟಾಗುವುದು ಹಣದ ಚಿಂತೆ|ಆತ ಜ್ಞಾಪಿಸುವ ಮರಳಿಸುವಂತೆಆತಂಕ ಅವ ಕೊಡದಿದ್ದರೇನಂತೇ|| ಯತ್ನ ಪಡೆದ ಸಾಲವ ತೀರಿಸಲಿಕ್ಕಾಗಿಹೋಗುವ ಕೆಲಸಕ್ಕೆ ದುಡಿಮೆಗಾಗಿ|ಮಾಡುವ ಕೆಲಸ ಹೆಚ್ಚುವರಿಯಾಗಿಕೊನೆಗೂ ತೀರಿಸುವ ಸ್ನೇಹಕ್ಕಾಗೀ|| ನಾಗರಾಜು.ಹಇಸ್ರೋ ಬಡಾವಣೆ,ಬೆಂಗಳೂರುRead More
ಕರ್ನಾಟಕದ ಚಿಕ್ಕ ಕಾಡು ಬೆಕ್ಕುಗಳು ನಮ್ಮ ದೇಶದಲ್ಲಿ ಸುಮಾರು 15 ಬೆಕ್ಕಿನ ಕುಟುಂಬದ ಪ್ರಾಣಿಗಳಿವೆ. ಇದರಲ್ಲಿ ಹುಲಿ ಸಿಂಹಗಳಂತಹ ದೊಡ್ಡ ಬೆಕ್ಕುಗಳಿಂದ ಹಿಡಿದು ಕೇವಲ ಒಂದೂಕಾಲು ಕಿಲೋ ತೂಗುವ ಚಿಕ್ಕ ಬೆಕ್ಕಿನ ಜಾತಿಗಳು ಸಹ ಇವೆ. ನಮ್ಮ ರಾಜ್ಯದಲ್ಲಿ ಹುಲಿ ಚಿರತೆ ಬಿಟ್ಟರೆ ಚಿಕ್ಕ ಚಿಕ್ಕ ಕಾಡು ಬೆಕ್ಕುಗಳು ಸಹ ಇವೆ, ನಮ್ಮಲ್ಲಿ ಅನೇಕರು ಚಿರತೆ ಬಿಟ್ಟರೆ ಅದನ್ನೇ ಹೋಲುವ ಚಿರತೆಗಿಂತ ಸ್ವಲ್ಪ ಚಿಕ್ಕದಾದ ‘ಕುರ್ಕ’ ಎಂಬ ಕಾಡು ಬೆಕ್ಕಿದೆ, ಅದು ದನ ಕರುಗಳನ್ನು ಬೇಟೆಯಾಡಬಲ್ಲದು ಎಂದು […]Read More
ನೆಲಮೂಲ ಸಂಸ್ಕೃತಿಯ ರಾಯಭಾರಿ – ವರನಟ ಡಾ.ರಾಜಕುಮಾರ್ ಕನ್ನಡ ಚಲನಚಿತ್ರ ರಂಗದ ಮೇರು ವ್ಯಕ್ತಿತ್ವದ ನಟ, ರಸಿಕರ ರಾಜ, ನಟ ಸಾರ್ವಭೌಮ, ವರನಟ, ಅಭಿನಯ ಚಕ್ರವರ್ತಿ ಮೊದಲಾದ ಬಿರುದುಗಳಿಂದ ಸನ್ಮಾನಿತರಾದ ಡಾ. ರಾಜಕುಮಾರ್ ರವರು ಕನ್ನಡ ನಾಡು ಕಂಡ ಪ್ರಸಿದ್ಧ, ಅಪ್ರತಿಮ ಕಲಾವಿದರಾಗಿದ್ದರು. ಮೊದಲು ಮುತ್ತುರಾಜ (ಮುತ್ತಣ್ಣ) ಹೆಸರು ಹೊಂದಿದ್ದ ಇವರು ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾಗಿದ್ದರು. ಗಾಯಕರಾಗಿಯೂ ಹೆಸರು ಮಾಡಿದ್ದಾರೆ. ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಅಗ್ರಗಣ್ಯರು. ಗೌರವ ಡಾಕ್ಟರೇಟ್, ನಾಡೋಜ, ದಾದಾಸಾಹೇಬ್ ಫಾಲ್ಕೆ, […]Read More