ಅಳಿವಿನಂಚಿನ ಪಕ್ಷಿ – ಓಸೆಲೇಟೆಡ್ ಟರ್ಕಿ

ಅಳಿವಿನಂಚಿನ ಪಕ್ಷಿ – ಓಸೆಲೇಟೆಡ್ ಟರ್ಕಿ ಓಸೆಲೇಟೆಡ್ ಟರ್ಕಿ (ಮೆಲಿಯಾಗ್ರಿಸ್ ಒಸೆಲ್ಲಾಟಾ) ಟರ್ಕಿ ಕೋಳಿ ಜಾತಿಯ ತಳಿಯಾಗಿದ್ದು, ಇವುಗಳು ಮುಖ್ಯವಾಗಿ ಯುಕಾಟಾನ್ ಪರ್ಯಾಯ ದ್ವೀಪದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತವೆ. ಇವುಗಳು ಕಾಡು ಟರ್ಕಿಯ (ಮೆಲಿಯಾಗ್ರಿಸ್ ಗ್ಯಾಲೋಪಾವೊ) ಪ್ರಬೇಧಕ್ಕೆ ಸೇರಿದ್ದು, ಅಗ್ರಿಯೊಚಾರಿಸ್ ಜಾತಿಗೆ ಸೇರಿದ್ದೆಂದೂ ಹೇಳಲಾಗುತ್ತದೆ. ಇದು ವಿಶಿಷ್ಟವಾದ ಹಾಗೂ ದೈಹಿಕವಾಗಿ ದೊಡ್ಡ ಗಾತ್ರದ ಹಕ್ಕಿಯಾಗಿದೆ. ಈ ಹಕ್ಕಿಗಳು ಸರಾಸರಿ 70 ರಿಂದ 122 ಸೆಂ.ಮೀ ಉದ್ದ, ಹೆಣ್ಣು ಹಕ್ಕಿಯು ಸರಾಸರಿ 3 ಕೆ.ಜಿ ಮತ್ತು ಗಂಡು ಹಕ್ಕಿಗಳು […]Read More

ಕಥಾಭರಣ -ವಿಭಿನ್ನ ಭಾವಗಳ ಹೂರಣ

ಕಥಾಭರಣ -ವಿಭಿನ್ನ ಭಾವಗಳ ಹೂರಣ ಸಂಪಾದಕರು: ಡಾ. ಅಜಿತ್ ಹರೀಶಿ ಹಾಗು ವಿಠ್ಠಲ್ ಶೆಣೈಪ್ರಕಾಶಕರು: ಸಾಹಿತ್ಯಲೋಕ ಪಬ್ಲಿಕೇಷನ್ಸ್ಬೆಲೆ: 290/- “ಇಂಡಿಯಾ ಗೆದ್ ಬಿಡ್ತು ಗೆದ್ ಬಿಡ್ತು” “ಎಂ ಕೆ. ಎಂ ಕೆ.” ಇದು ದಿನಗೂಲಿ ಮೇಸ್ತ್ರಿ ‘ಗಿರಿಯ’ ನ ಮಗಳಾದ ಪುಟ್ಟ ಭಾನುವಿನ ಖುಷಿಯ ಚೀರಾಟ. ಇಲ್ಲಿ “ಎಂ ಕೆ” ಅಂದರೆ ಸ್ಟಾರ್ ಬ್ಯಾಟ್ಸಮನ್, ಕೊನೆಯ ಓವರ್ ನಲ್ಲಿ ತನ್ನದೇ ಶೈಲಿಯಲ್ಲಿ ಸಿಕ್ಸರ್ ಎತ್ತಿ ವಿಶ್ವ ಕಪ್ ಗೆಲ್ಲಿಸಿದಾಗ ಪುಟ್ಟ ಭಾನು ಖುಷಿಯಿಂದ ಕೂಗಿಕೊಂಡಿದ್ದು. ಇದು “ಕಥಾಭರಣ” […]Read More

ಗಾಣಿಕೆ – ಸೊಲನಂ ನಿಗ್ರಮ್

ಗಾಣಿಕೆ – ಸೊಲನಂ ನಿಗ್ರಮ್ ಅಮ್ಮನ ಜೊತೆ ಮಾತನಾಡಲು ಕುಳಿತರೆ ಸಮಯ ಸಾಗುವುದೇ ತಿಳಿಯುವುದಿಲ್ಲ. ಹೆಚ್ಚಾಗಿ ತನ್ನ ಬಾಲ್ಯದ ನೆನಪುಗಳನ್ನು ಅಮ್ಮ ಹೇಳುವಾಗ ಕೇಳಿದಷ್ಟು ಚೆನ್ನ. ಅವರು ಹುಟ್ಟಿ ಬೆಳೆದದ್ದು ಹಳ್ಳಿಯಲ್ಲಿ, ತಾವು ಆಡಿದ ಆಟಗಳು, ಕಲಿತ ಪಾಠಗಳು, ಕೆಲಸಗಳು, ಹಸುಗಳನ್ನು ಮೇಯಿಸುವ ಪರಿ, ಗುಡ್ಡಗಳಲ್ಲಿ ಓಡಾಡಿ ಅಲ್ಲಿ ಸಿಗುತ್ತಿದ್ದ ಹಣ್ಣುಗಳನ್ನು ಸವಿದ ಪರಿ ಕೇಳುತಿದ್ದರೆ ನಮಗೆ ಇಂತಹ ಬಾಲ್ಯ ಯಾಕೆ ಸಿಗಲಿಲ್ಲ ಎನಿಸುತ್ತದೆ. ಅಮ್ಮನಿಂದಲೇ ತಿಳಿದಿದ್ದು ಗಾಣಿಕೆ ಹಣ್ಣಿನ ರುಚಿ. ನಮ್ಮ ತಾರಸಿ ತೋಟದ ಕುಂಡದಲ್ಲಿ […]Read More

ಕವಿತೆಗೆ ಸಾವಿಲ್ಲ

ಕವಿತೆಗೆ ಸಾವಿಲ್ಲ ನನ್ನ ಕವಿತೆ ನನ್ನದೇ ಕವಿತೆಮಾತು ಬರದ ಮಗು ಇದ್ದಂತೆಪದೇ ಪದೇ ಮುದ್ದು ಮಾಡಿಆಗಾಗ ಬುದ್ದಿ ಹೇಳಿತಿದ್ದಿ ತೀಡಿ ಕಟ್ಟಿದ ಕವಿತೆ ಇದು ಕದ್ದ ಕವಿತೆಯಲ್ಲಅನುವಾದ ಮಾಡಿಲ್ಲಎಲ್ಲಿಂದಲೂ ಪ್ರೇರಣೆಯಾಗಿಲ್ಲಎಲ್ಲೂ ಪ್ರಕಟವಾಗಿಲ್ಲಸ್ವತಃ ನಾನೇ ಮೆಚ್ಚಿಕೊಂಡಿಲ್ಲ ಓದಿದರೆ ಕೆಮ್ಮು ಬರುತ್ತದೆಇದು ಕವಿತೆಯೇ ಅಲ್ಲವೆಂಬ ದೂರು ಬೇರೆ!ಭರವಸೆ ಕಿತ್ತುಕೊಳ್ಳುವಂತೆಕವಿತೆ ಬರಿಯೋಕೆ ನೀನ್ಯಾರೆಂಬ ಪ್ರಶ್ನೆ?ಎಲ್ಲರೂ ಒಟ್ಟಿಗೆ ಮುತ್ತಿಗೆ ಹಾಕುತ್ತಾರೆನನ್ನ ಕವಿತೆ ಹೆದರಿಮತ್ತೆ ನನ್ನಂತರಾಳವ ಸೇರುತ್ತದೆಕೊಂಚ ಪ್ರಾಣ ಭಯ, ಅಲ್ಪ ನಾಚಿಕೆಚೂರೇ ಚೂರು ಹಿಂಜರಿಕೆ ಪತ್ರಿಕೆಗಳು ಸ್ವೀಕರಿಸಲಿಲ್ಲರೇಡಿಯೋದಲ್ಲಿ ಓದಲಿಲ್ಲಹತ್ತಿರದವರು ಒಡೆದು ಬೈದರುಹಿರಿಯರು ಉಗಿದು […]Read More

ಕೇಳಲು ಕಿವಿಯೊಂದು…!

ಕೇಳಲು ಕಿವಿಯೊಂದು…! ಆಸ್ಥೆಯಿಂದ ಕೇಳಲೊಂದುಕಿವಿ ಇದ್ದರೆಆ ಕಿವಿ ಹೊತ್ತ ದೇಹಕೊಂದುಮನಸಿದ್ದರೆದುಗುಡವೋ ದುಃಖವೋಖುಷಿಯೋ ಉನ್ಮಾದವೋಏನಾದರೂ ಹೇಳಿಸದ್ಯ ಹೇಳಿದೆನೆಲ್ಲ ಎಂದುಹಗುರಾಗಬಹುದು! ಅಂಥ ಕಿವಿಯೇಅತ್ಯಲ್ಪ ಒಂದಾದರುಇಲ್ಲದಿದ್ದರೆಹೇಳುವುದಾದರು ಏನುಮತ್ತು ಯಾರಿಗಾದರು? ಆದರೂ ಗೋಡೆಗೋಗಾಳಿಗೋಗಿಡಮರಗಳಿಗೋಅಥವ ಯಾವುದೋ ಒಂದುಬಿರುಸು ಲೋಹಕೋಹೀಗೋ ಹಾಗೋ ಹೇಳಿಹಗುರಾಗಬಹುದುಆಗಲೂಹಾಗೆ ಹೇಳುವ ಮನಸುಇನ್ನೂ ಉಳಿದಿದ್ದರೆ! ಅನೇಕವು ಅದೆಂಥಕಠಿಣ ಕಬ್ಬಿಣ ಕಿವುಡುಸಂದರ್ಭಗಳೆಂದರೆನಿಮ್ಮ ಸುತ್ತಮುತ್ತಲುಜೀವಂತ ಕಿವಿಗಳ ಹೊತ್ತನಿಮ್ಮವರೆನಿಮ್ಮ ಒಡಹುಟ್ಟಿದವರೆನಿಮ್ಮ ಸಂಗಾತಿಯೆಅಥವ ಗೆಳೆಯ ಗೆಳತಿಯೆಮುಂತಾಗಿ ಇದ್ದೂ ಸಹಆ ಕಿವಿಗಳಿಗೆ ಕೇಳುವವ್ಯವಧಾನವಾಗಲಿಎದೆಯಾಗಲಿಅಂಥ ಎದೆಯಲಿಕನಿಷ್ಠ ಕೇಳಿಯಾದರು ಮರೆತುಬಿಡುವಕರುಣೆಯಾಗಲಿಯಕಃಶ್ಚಿತ್ ಸಹ ಇರದು! ಇಂಥ ಸುಖಕ್ಕೇನುನಮ್ಮವರುನಮ್ಮ ಬಂಧು ಮಿತ್ರರುಎಂಬ ಭ್ರಮೆ…! ಡಾ. ಅರಕಲಗೂಡು […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 56

ಮೂಡಣಕೆ ಮುಖಮಾಡಿ ಜಲಬಾಧೆ ಮಾಡದಿರುಮೂಡುವೆಳನೇಸರನು ಭಕ್ತಿಯಲಿ ನಮಿಸುಗಾಢ ಭಕ್ತಿಯ ಬೆರೆಸಿ ತಾಯ್ ತಂದೆಗಳಿಗೆರಗುಓಡುವುದು ಕಷ್ಟಗಳು- || ಪ್ರತ್ಯಗಾತ್ಮ || ಕೈ ಗೂಡದಿರುವಂಥ ಆಸೆ ಆಕಾಂಕ್ಷೆಗಳುಮೈಗೂಡಿ ಫಲಿಸುವುದು ಇರುಳ ಕನಸಿನಲಿಆಗಾಗ ಮೂಡಿಬಹ ಕನಸು ದೇವನು ಇತ್ತಕೈಗಾಣ್ಕೆ ಎಂದು ತಿಳಿ- || ಪ್ರತ್ಯಗಾತ್ಮ || ಸೊಬಗಿನಲಿ ಸರಿಕಾಣೆ ವಿಶ್ವದಲಿ ಈ ಭುವಿಗೆನಭ ನೀ, ಇನ ಶಶಿಗಳುದಯಾಸ್ತ ಭವ್ಯಅಬುಧಿ ನೀಲಿಯ ಜೊತೆಗೆ ಸಸ್ಯ ಶ್ಯಾಮಲ ವರ್ಣಸುಭಗ ದೃಶ್ಯಾವಳಿಯೊ – || ಪ್ರತ್ಯಗಾತ್ಮ || ವಿಧವಿಧದ ವರ್ಣಗಳ ಪುಷ್ಪಗಳು ನೂರಾರುವಿಧವಿಧ ಸುವಾಸನೆಯ ಕುಸುಮಗಳು […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 40

—ಗಿರಿಲಂಘನ– ರಟ್ಟಾ ಹಾಗೂ ಚಿತ್ರಕ ಕುದುರೆಯ ಮೇಲೆ ಕುಳಿತುಕೊಳ್ಳುತ್ತಿರುವಾಗ ಜಂಬುಕ ಪಾಂಥಶಾಲೆಯೊಳಗಿಂದ ಓಡಿ ಬಂದು, ಚಿತ್ರಕ ಜೀನಿಗೆ ಒಂದು ಬಟ್ಟೆಯ ಗಂಟನ್ನು ಕಟ್ಟಿದನು. ಚಿತ್ರಕ- ‘ಏನಿದು?’ ಜಂಬುಕ- ಏನಿಲ್ಲ. ಸ್ವಲ್ಪ ಖಾದ್ಯ ಪದಾರ್ಥಗಳು. ಜೊತೆಗಿದ್ದರೆ ಒಳ್ಳೆಯದು’ ಸಮಯಕ್ಕೆ ಬೇಕಾಗಬಹುದು. ಚಿತ್ರಕ- ಒಳ್ಳೆಯದು. ನೀನೂ ಕೂಡ ಇನ್ನು ತಡ ಮಾಡಬೇಡ. ಜಂಬುಕ- ಇಲ್ಲ. ನನ್ನ ಬಳಿ ಕುದುರೆ ಇಲ್ಲ. ಕತ್ತೆಯ ಮೇಲೆ ಪ್ರಯಾಣ ಮಾಡಬೇಕಾಗುತ್ತದೆ. ಹೋಗಿ ಸೇರಲು ಸ್ವಲ್ಪ ತಡವಾಗುತ್ತದೆ. ರಟ್ಟಾ ಜಂಬುಕನ ಕೈಗೆ ಒಂದು ಸ್ವರ್ಣ ದೀನಾರವನ್ನು […]Read More

ಕುಲ್ದಾರ್ – ಊರು ಒಂದು ಕಥೆ ನೂರಾರು

ಕುಲ್ದಾರ್ – ಊರು ಒಂದು ಕಥೆ ನೂರಾರು “ಕುಲ್ದಾರ್” ಇದು ರಾಜಸ್ಥಾನದಲ್ಲಿನ ಒಂದು ವಿಚಿತ್ರವಾದ ಐತಿಹ್ಯವಿರುವ, ನಂಬಲು ಆಧಾರವಿಲ್ಲದ, ಊರಿಗೂರೇ ಸಂಪೂರ್ಣವಾಗಿ ಮಾಯವಾದ ಒಂದು ಗ್ರಾಮದ ಹೆಸರು. ಗ್ರಾಮದ ಜನರೆಲ್ಲರೂ ಸಂಪೂರ್ಣವಾಗಿ ತೊರೆದಾದ ಮೇಲೆ ವಾಸ್ತವದಲ್ಲಿ ಊರು ಎಂಬ ಪದಕ್ಕೆ ಅರ್ಥವೇ ಇರದಿರುವುದರಿಂದ “ಕುಲ್ದಾರ್” ಮಾಯವಾಯಿತೆಂದೇ ಹೇಳಬಹುದು. ರಾಜಸ್ಥಾನದಲ್ಲಿನ ಪಾಲಿ ಎಂಬ ಪ್ರದೇಶದ ಜನರು (ಪಾಲಿವಾಲ್ ಬ್ರಾಹ್ಮಣರು) ಈ ಗ್ರಾಮವನ್ನು 13 ನೇ ಶತಮಾನದಲ್ಲಿ ನಿರ್ಮಿಸಿ ಅಲ್ಲಿ ನೆಲೆಸಿದ್ದರೆಂದು ಹೇಳಲಾಗಿದೆ. ಆಗ ಕುಲ್ದಾರ್, ಕೃಷಿಕರು, ವ್ಯಾಪಾರಸ್ಥರು, ಮೇಧಾವಿಗಳು […]Read More

ಕಮಲಾತ್ತಲ್ ಎಂಬ ಇಡ್ಲಿ ಅಮ್ಮನ ಕಥೆ

ಕಮಲಾತ್ತಲ್ ಎಂಬ ಇಡ್ಲಿ ಅಮ್ಮನ ಕಥೆ ಇತ್ತೀಚಿನ ದಿನಗಳಲ್ಲಿ ನಿವೇನಾದರೂ ಹೋಟೆಲ್‌ಗೆ ಹೋದರೆ ಐವತ್ತು ರೂಪಾಯಿಗೆ ಕಡಿಮೆ ಏನೂ ಸಿಗುವುದಿಲ್ಲ, ಹೊಟ್ಟೇನೂ ತುಂಬಲ್ಲ. ಈಗಿನ ದಿನಗಳಲ್ಲಿ ಒಂದು ರೂಪಾಯಿಗೆ ಒಂದರ್ಧ ಲೋಟ ಟೀ ಸಿಗುವುದು ಸಹ ದುರ್ಲಬ. ಅಂಥಹುದರಲ್ಲಿ ಇಲ್ಲೊಬ್ಬರು ಅಜ್ಜಿ ಕಳೆದ ಮುವತ್ತು ವರ್ಷಗಳಿಂದ ಕೇವಲ ಒಂದು ರೂಗೆ ಒಂದು ಇಡ್ಲಿ ಜೊತೆಗೆ ಚಟ್ನಿ ಸಾಂಬಾರ್ ಕೊಡುವ ಮೂಲಕ ಸಾವಿರಾರು ಬಡವರ ಬಾಳಿನ ಅನ್ನಪೂರ್ಣೆಯಾಗಿದ್ದಾರೆ. ಹೌದು ತಮಿಳುನಾಡಿನ ಕೊಯಮತ್ತೂರಿನ ವಡಿವೇಲಮ್‌ಪಾಳ್ಯಮ್‌ನ ಸುಮಾರು 80 ವರ್ಷ ವಯಸ್ಸಿನ […]Read More

ಧನ್ಯತೆ

ಧನ್ಯತೆ ಮುಂಬೆಳಗಿನ ನೋಟಕಿಚ ಕಿಚ ಕೊಕ್ಕೊ ಕೋ ಚಿಲಿಪಿಲಿಸ್ವರ ಮಾಧುರ್ಯ ಕಿವಿ ಹಿಂಡಿ ಕಿವ್ವನೆ ಪಿಸು ಮಾತುಉಸಿರಿ ಹೋದಂತೆ ತಂಗಾಳಿಎಲ್ಲೋ ಅಸ್ಪಷ್ಟ ವೇದ ಘೋಷಈ ಪ್ರಕೃತಿಯಲಿ ಮೀಟುತಿದೆ ಮನದ ಸ್ವರ ಅಗೋ ಮೆಲ್ಲನೆ ವಣ೯ ಬದಲಿಸಿಸೂಯ೯ಬಂದ ಅವನೂ ಕರ್ತವ್ಯಮರೆತು ಶಾಂತನಾದಮೋಡದೊಳಗೆ ಅವಿತು ಕುಳಿತಅಘಟಿತ ವಿಧ್ಯಾಮಾನಕ್ಕೆ ಸಾಕ್ಷಿಯಾದ ಪ್ರಕೃತಿ ನಿನದೆಂತ ಚೆಲುವುನೀ ಕೃಪೆತೋರಲುಸಕಲ ಜೀವ ರಾಶಿಗೆ ಗೆಲುವು ಪವನ ಕುಮಾರ್ ಕೆ. ವಿ.ಬಳ್ಳಾರಿRead More