ಹಿಂದಿನ ಸಂಚಿಕೆಯಿಂದ…. ರಟ್ಟಾ ಮತ್ತು ಚಿತ್ರಕ ಇವರುಗಳಿಗೆ ಕೊಡ ಮಾಡಿದ ಕೊಠಡಿಗಳು ಇತರೆ ಕೊಠಡಿಗಳಂತೆಯೇ ಆದರೂ ಇವರ ಕೊಠಡಿಯ ನೆಲಕ್ಕೆ ಒಂಟೆ ಕೂದಲಿನ ಕಂಬಳಿ ಹಾಸಿ ಅದರ ಮೇಲೆ ಮೆತ್ತನೆಯ ಹಾಸಿಗೆಗಳನ್ನು ಹಾಸಿದ್ದರು. ಮೂಲೆಯಲ್ಲಿ ಹಿತ್ತಾಳೆಯ ದೀಪದ ಕಂಬದಲ್ಲಿ ಎಣ್ಣೆ ಬತ್ತಿ ಉರಿಯುತ್ತಿತ್ತು. ರಾಜಕುಮಾರಿಯ ಅಂತಸ್ಥಿಗೆ ಇದು ತಕ್ಕುದಲ್ಲವಾದರೂ, ರಟ್ಟಾ ಇದನ್ನು ನೋಡಿ ಸಂಪ್ರೀತಳಾಗಳು. ಅತಿಥಿಗಳಿಬ್ಬರೂ ಹಾಲುಕೀರು, ಅಮ್ಲಸೀಧು ಕಡಿದು ಹಸಿವು ಬಾಯಾರಿಕೆಗಳನ್ನು ಹೋಗಲಾಡಿಸಿಕೊಂಡರು. ರಾತ್ರಿ ಊಟವೊಂದು ಬಾಕಿ ಇತ್ತು. ಇದಾದ ನಂತರ ಚಿತ್ರಕ ಮೇಲೆದ್ದು ರಟ್ಟಾಳಿಗೆ […]Read More
ಕೆಂಪು ಬಸ್ಸಿನ ನೀಲಿ ಸೀಟು ಮತ್ತು ಹಸಿರು ಸೀರೆಯ ಹುಡುಗಿ ವಿಜಯದಶಮಿ ಹಬ್ಬದ ಮಾರನೆಯ ದಿನ. ಹಳ್ಳಿಯಿಂದ ಬೆಂಗಳೂರಿಗೆ ಹೊರಡಲು ಒಂದಷ್ಟು ಜನ ಕೆಂಪು ಬಸ್ಸಿಗಾಗಿ ಕಾಯುತ್ತಿದ್ದರು. ಹಾಗೆ ಕಾಯುತ್ತಿದ್ದವರಲ್ಲಿ ನಾನೂ ಒಬ್ಬ. ಒಂದು ಗಂಟೆಯ ಮುಂಚೆಯೇ ನಾನು ನಿಲ್ದಾಣಕ್ಕೆ ಬಂದಿದ್ದರೂ ಕೂಡ, ಬರಬೇಕಿದ್ದ ಬಸ್ ಬರದೆ ಇನ್ನೊಂದು ಬಸ್ಸಿಗಾಗಿ ಕಾದು ಕೂತಿದ್ದೆ. ಬಸ್ ಬಂದ ತಕ್ಷಣ ಅದುವರೆಗೂ ನನ್ನ ಕಣ್ಣಿಗೆ ಬೀಳದ ಹಸಿರು ಸೀರೆ ಉಟ್ಟ ಹುಡುಗಿಯೊಬ್ಬಳು ನನ್ನ ಕಣ್ಮುಂದೆ ರಪ್ ಅಂತ ಓಡಿಹೋಗಿ ಬಸ್ಸಿನ […]Read More
ಬಡತನದಲ್ಲೂ ಸಾಧನೆಯೆಡೆಗೆ – ನಜತ್ ಸಾಧನೆಗೆ ಬಡತದ ಅಡ್ಡಿಯಿಲ್ಲ-ಪರಿಶ್ರಮ ಅಗತ್ಯ. ಆಕೆ ಬಡ ಕುಟುಂಬದಿಂದ ಬಂದ ಹೆಣ್ಣು ಮಗಳು ಕುರಿ ಕಾಯುವಿಕೆಯನ್ನೇ ಜೀವನಾಧಾರವನ್ನಾಗಿ ಮಾಡಿಕೊಂಡಿದ್ದ ಕುಟುಂಬದಲ್ಲಿ ಹುಟ್ಟಿ ಶ್ರೀಮಂತಿಕೆಯೆಂದರೇನೆಂಬುದು ಅರಿಯದೆ ಇಂದು ರಾಷ್ಟ್ರವೊಂದರ ಎರಡನೇ ಅತ್ಯುನ್ನತ ಸಚಿವೆಯ ಸ್ಥಾನವನ್ನು ಅಲಂಕರಿಸಿರುವ “ನಜತ್” ಎಂಬ ಮಹಿಳೆಯ ಮಹಾನ್ ಸಾಹಸಗಾಥೆ. “ಬದುಕಲ್ಲಿ ಬಡವನಾಗಿ ಹುಟ್ಟುವುದು ತಪ್ಪಲ್ಲ, ಆದರೆ ಬಡವನಾಗಿ ಸಾಯುವುದು ತಪ್ಪು” ಎಂಬ ಮಾತನ್ನು ಅಕ್ಷರಶಃ ನಿಜವಾಗಿಸಿದ ಧೀರ ಹೆಣ್ಣು ಮಗಳು ಈಕೆ. 4ನೇ ಅಕ್ಟೋಬರ್ 1977 ರಲ್ಲಿ ಉತ್ತರ […]Read More
ಮನೆ – ಮನಗಳನು ಬೆಸೆಯುವ ಮಹಾನವಮಿ ಜಗತ್ತಿನ ಸಾಂಸ್ಕೃತಿಕ ಚರಿತ್ರೆಯಲ್ಲಿ ಭಾರತಕ್ಕೆ ವಿಶೇಷ ಸ್ಥಾನ – ಮಾನವಿದೆ. ಭಾರತವು ಹಲವು ಧರ್ಮಗಳ ತವರೂರಾಗಿದ್ದು ಪ್ರಾಚೀನ ಕಾಲದಿಂದಲೂ ವಿವಿಧತೆಯಲ್ಲಿ ಏಕತೆಯ ಪರಂಪರೆಯನ್ನು ಹೊಂದಿದ ದೇಶವಾಗಿದೆ. ಭಾರತದ ಇತಿಹಾಸದ ಪುಟಗಳಲ್ಲಿ ಎರಡು ಧರ್ಮಗಳ ನಡುವೆ ಕೆಲವು ಕಾಲ ಸಂಘರ್ಷ ನೆಡೆದಿದ್ದರೂ ಅನಂತರದ ದಿನಗಳಲ್ಲಿ ಅವರೆಲ್ಲ ಮತ್ತೆ ಒಂದೇ ಮನೆಯವರಂತೆ ಕೂಡಿ ಬಾಳುತ್ತ ಬಂದಿರುವುದು ವಾಸ್ತವ ಸಂಗತಿ. ಒಳ್ಳೆಯ ಸಂಸ್ಕಾರಗಳನ್ನು ಬೆಳೆಸುವ ನಮ್ಮ ಹಬ್ಬಗಳೇ ಇದಕ್ಕೆ ಮೂಲ ಪ್ರೇರಣೆ. ಈ ನಿಟ್ಟಿನಲ್ಲಿ […]Read More
ಪಾಂಥಶಾಲೆ – ಪ್ರಯಾಣಿಕರ ತಂಗುದಾಣ ಚಿತ್ರಕ ಹಾಗೂ ರಾಜಕುಮಾರಿ ರಟ್ಟಾ ಪಾಂಥಶಾಲೆಯನ್ನು ತಲುಪಿದಾಗ ಸೂರ್ಯಸ್ತವಾಗಲು ಇನ್ನೂ ಎರಡು ಗಂಟೆ ಬಾಕಿ ಇತ್ತು. ಎರಡು ರಸ್ತೆಗಳು ಸೇರುವ ಜಾಗದಲ್ಲಿ ಈ ಪಾಂಥಶಾಲೆ ಇತ್ತು. ಕಪೋತ ಕೂಟದಿಂದ ಹೊರಟು ಚಷ್ಟನ ದುರ್ಗ ಸೇರುವ ರಸ್ತೆಯು ಈ ಜಾಗದಲ್ಲಿ ರಸ್ತೆಯಿಂದ ಕವಲೊಡೆದು ಅಗ್ನಿಮೂಲೆಯ ಕಡೆಗೆ ತಿರುಗಿ ಆರ್ಯಾವರ್ತದ ದಿಕ್ಕಿಗೆ ಹೋಗುತ್ತದೆ. ಆ ಕವಲು ದಾರಿಯ ನಡುವೆ ಈ ಪಾಂಥಶಾಲೆ ಇದೆ. ಇದರ ಸುತ್ತಲೂ ಕಲ್ಲಿನಿಂದ ನಿರ್ಮಿಸಿದ ಪ್ರಾಕಾರದ ಗೋಡೆ. ಮನೋಹರವಾದ ಜಾಗ. […]Read More
ಇರುಳಿನಲಿ ಮೊಸರನ್ನ ಉಣ್ಣದಿರು ಎಂದೆಂದೂಇರುವ ಆಯುಃ ಕ್ಷೀಣ; ಆರೋಗ್ಯವಲ್ಲ.ಕ್ಷೀರಾನ್ನ ಭುಂಜಿಸಲು ದೀರ್ಘಾಯುವಾಗಿರುವೆಆರೋಗ್ಯಕಿದು ಪಥ್ಯ- || ಪ್ರತ್ಯಗಾತ್ಮ || ‘ನಶ್ಯವದು ವಶ್ಯಕರ’ ಎಂಬುದೆಲ್ಲಾ ಬೊಗಳೆನಶ್ಯ ತುಂಬಿದ ಮೂಗು ಕೊಳೆನೀರ ಜಿನಗುನಶ್ಯ ಒರೆಸಿದ ಬಟ್ಟೆ ಚಿಮಣಿ ಒರೆಸಿದ ಬಟ್ಟೆವಶ್ಯಕರವಿನ್ನಲ್ಲಿ ?- || ಪ್ರತ್ಯಗಾತ್ಮ || ಆಫೀಸಿನಿಂ ಬಂದ ಪತಿಯು ಪತ್ನಿಯ ಗದರೆಕೋಪದಿಂ ಹೆಂಡತಿಯು ಮಗುವ ಚಚ್ಚಿದಳುಪಾಪ ! ಮಗು ಬೊಂಬೆಯನು ಎತ್ತಿ ಕುಕ್ಕಿತು ನೋಡ !ಕೋಪವಲ್ಲಿಗೆ ಶಾಂತ- || ಪ್ರತ್ಯಗಾತ್ಮ || ಕ್ಷುಲ್ಲಕದ ಕಾರಣಕೆ ಕೆಂಡ ಕಾರಿದಳತ್ತೆಬಲ್ಲಿದಳೆ ಅತ್ತೆಯನು ದಂಡಿಸಲು […]Read More
ಕವಡೆಯಲ್ಲಿ ಕೈಕಾಸುವ ಆಟ – ಗಚ್ಚಿ ಆಟ ಇದು ಕವಡೆಯಲ್ಲಿ ಆಡುವ ಇನ್ನೊಂದು ಆಟವಾಗಿದ್ದು ಇದು ಒಳಾಂಗಣ ಕ್ರೀಡೆಯ ಜನಪ್ರಿಯ ಆಟವಾಗಿತ್ತು!! ಇತ್ತೀಚಿನ ದಿನಗಳಲ್ಲಿ ಇದು ಮರೆಯಾಗುತ್ತಿದೆ ಎಂದರೆ ತಪ್ಪೇನಿಲ್ಲ! ಹಿಂದಿನ ಕಾಲದಲ್ಲಿ ಮನೆಯ ಪಡಸಾಲೆಯಲ್ಲಿ ಕುಳಿತು ಕಿರಿಯರಿಂದ ಹಿರಿಯರಾದಿಯಾಗಿ ಆಡುತ್ತಿದ್ದ ಆಟ ಇದು. ಕಾಲ ಕ್ರಮೇಣ ಮರೆಯಾಗುತ್ತಿದ್ದ ಈ ಆಟ ಕೊವಿಡ್ ನ ದೆಸೆಯಿಂದಾಗಿ ಲಾಕ್ ಡೌನ್ ನಿಂದಾಗಿ ಮನೆಯಲ್ಲಿ ಮತ್ತೆ ಎಲ್ಲರೂ ಆಡುವಂತಾಗಿದ್ದು ವಿಶೇಷ. ಇದನ್ನು “ಗಚ್ಚಿ” ಆಟ ಎಂದು ಸಹ ಕರೆಯುತ್ತಾರೆ. ಈ […]Read More
ವಾಸ್ತವ ಸತ್ಯ ನೀನಿಲ್ಲದಿರಲಾರೆನೆ,ಈ ಜೀವ ಶವವಾಗುತ್ತಿದೆಗೆಳತಿ, ಈ ಹಸಿ ಸುಳ್ಳು, ಒಪ್ಪಿಕೊಂಡು ಬಿಡು. ಮನದೊಳಗೆ ನಿನ್ನದೇ ಧ್ಯಾನನಿಧ್ರಾಹಾರಗಳು ಶೂನ್ಯ.ಈ ಮಾತಿಗೆ ನಕ್ಕು ಬಿಡು. ಸದಾ, ತೆರೆದಿದೆ ಮನೆ, ಮನಕಾಯುತಿಹೆನು ಪ್ರತೀ ಕ್ಷಣಬಾ, ಬೆಳಗೋಣ ಜೀವನ.ಈ ನುಡಿಗಳಿಗೆ, ಚಕಿತಗೊಳ್ಳದಿರು.ಗಹ, ಗಹಿಸಿ ಬಿಡು. ಸದಾ ಹಾತೊರೆಯುವ,ವಿರಹಿಯಾಗಿ ಅಲೆಯುವ,ನಿದ್ರಾಹಾರ ತ್ಯಜಿಸುವ, “ನಿನ್ನದೇ ಧ್ಯಾನದೊಳು ಲೀನವಾಗುವಹೋ! ಬೇರೆ ಕೆಲಸವಿಲ್ಲವಾ.? ಇದು ವಾಸ್ತವ. ಪವನ ಕುಮಾರ ಕೆ ವಿಬಳ್ಳಾರಿRead More
ಮನೆಯಂಗಳದ ಅಪ್ಸರಾ ‘ಪಾರಿಜಾತ’ ಪುಷ್ಪ ಪಾರಿಜಾತ ಹೆಸರಲ್ಲೇ ಏನೋ ವಿಶೇಷ ಶಕ್ತಿ ಅಥವಾ ಅದೇನೋ ಅವರ್ಣನೀಯವಾದ ಸೊಗಡು ಇದೆ ಅಲ್ಲವೇ..? ಹೌದು ಇದು ಪುಷ್ಪ ಪ್ರಬೇಧದಲ್ಲೇ ವಿಶೇಷ ಸ್ಥಾನಮಾನ ಪಡೆದಿರುವ ಹೂವು. ದೇವತೆಗಳು ಮತ್ತು ಅಸುರರು ತಪಸ್ಸಿನ ಮೂಲಕ ವರಪ್ರಸಾದವಾಗಿ ಪಡೆದುಕೊಂಡ ಅಮೃತವನ್ನು ಹಂಚಿಕೊಳ್ಳಲು ನಡೆಸಿದ ಸಮುದ್ರ ಮಥನದ ಸಂದರ್ಭದಲ್ಲಿ ಕ್ಷೀರ ಸಮುದ್ರದಿಂದ ಹದಿನಾಲ್ಕು ಅಮೂಲ್ಯ ರತ್ನಗಳು ಹಾಗೂ ಐದು ಕಲ್ಪವೃಕ್ಷಗಳು ಹುಟ್ಟಿದವೆಂದು ನಂಬಿಕೆಯಿದೆ. (ಕಲ್ಪವೃಕ್ಷವೆಂದರೆ ಕೇಳಿದ್ದನ್ನೆಲ್ಲಾ ಕೊಡುವ ಮರ) ಅವುಗಳೆಂದರೆ ಪಾರಿಜಾತ, ಮಂದಾರ, ಸಂತಾನ, ನಾರೀಕೇಳ […]Read More
ನವದುರ್ಗೆಯರ ನವರಾತ್ರಿ ವೈಭವ ಒಂದೊಮ್ಮೆ, ಮಹಿಷಾಸುರ ಎನ್ನುವ ಅಸುರ ದೇವತೆಗಳನ್ನೆಲ್ಲಾ ಪೀಡಿಸುತ್ತಿದ್ದು, ಆ ದೇವತೆಗಳೆಲ್ಲಾ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಕಾಪಾಡುವಂತೆ ಬೇಡಿದರು. ತ್ರಿಮೂರ್ತಿಗಳು ತಮ್ಮ ಶಕ್ತಿಯನ್ನೆಲ್ಲಾ ಪಾರ್ವತಿಗೆ ಧಾರೆಯೆರೆದು, ದೇವಿಯು ಹತ್ತು ಕೈಗಳನ್ನು ಹೊಂದಿ ದುರ್ಗೆಯ ಅವತಾರವೆತ್ತಿದಳು. ಶಿವನು ತ್ರಿಶೂಲವನ್ನು, ವಿಷ್ಣುವು ಚಕ್ರವನ್ನು, ವರುಣ ದೇವನು ಪಾಶವನ್ನು, ಇಂದ್ರನು ವಜ್ರಾಯುಧವನ್ನು, ವಾಯುವು ಬಾಣಗಳನ್ನು, ಪರ್ವತರಾಜನು ವಾಹನವಾದ ಸಿಂಹವನ್ನು ದುರ್ಗೆಗೆ ನೀಡಿದರು. ಈ ಎಲ್ಲಾ ಆಯುಧ ಹಾಗೂ ವಾಹನಗಳಿಂದ ಸನ್ನದ್ಧಳಾದ ದುರ್ಗೆಯು ಮಹಿಷಾಸುರನ ಸೈನ್ಯದ ಮೇಲೆ ಆಕ್ರಮಣ […]Read More