ಸೋತರೂ ಸೊಲೊಪ್ಪದ ರಾಘವೇಂದ್ರ ದೇವ್ಗಿ

ಸೋತರೂ ಸೊಲೊಪ್ಪದ ರಾಘವೇಂದ್ರ ದೇವ್ಗಿ ಉತ್ತರ ಕನ್ನಡ ಜಿಲ್ಲೆಯ ಕುಮುಟಾದ ಒಂದು ಚಿಕ್ಕ ಹಳ್ಳಿಯಲ್ಲಿ ಹುಟ್ಟಿ ಸುಮಾರು ಹನ್ನೆರಡು ವರ್ಷಗಳ ಹಿಂದೆ ಭಾರತ ಕ್ರಿಕೆಟ್ ತಂಡದ ತಾರೆಯಾಗಿ ಮಿನುಗಬೇಕೆಂಬ ಮಹದಾಸೆಯನ್ನು ಹೊತ್ತು ಮುಂಬೈ ಎಂಬ ಮಾಯಾನಗರಿಗೆ ಬಂದ ಯುವಕನೊಬ್ಬನ ಬದುಕು ಅನಿವಾರ್ಯವಾಗಿ ತಿರುವನ್ನು ಪಡೆದುಕೊಂಡ ರಾಘವೇಂದ್ರ ದೇವ್ಗಿ ರವರ ಕಥೆಯಿದು.ಇವರು ಇಂದು ಭಾರತೀಯ ಕ್ರಿಕೆಟ್ ತಂಡದ ಸಹಾಯಕ ದೈಹಿಕ ತರಬೇತುದಾರ. ಕುಮಟಾದ ಹಳ್ಳಿಯೊಂದರ ಬಡ ಕುಟುಂಬದಲ್ಲಿ ಹುಟ್ಟಿದ ರಾಘವೇಂದ್ರ ದೇವ್ಗಿರವರು ಶಾರದಾ ನಿಲಯ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ […]Read More

ವ್ಯಕ್ತಿಚಿತ್ರ ಕಲಾವಿದೆ ಪಾವನಾ ಬೈಲೂರು

ಪಾವನಾ ಬೈಲೂರು ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆಯು ಸುಪ್ತವಾಗಿ ಅಡಗಿರುತ್ತದೆ. ಕೆಲವರು ಅವುಗಳನ್ನು ಬಾಹ್ಯ ಜಗತ್ತಿಗೆ ತೋರ್ಪಡಿಸಿದರೆ ಇನ್ನೊಂದಷ್ಟು ಮಂದಿ ಬಾಹ್ಯ ಜಗತ್ತಿಗೆ ತಮ್ಮ ಕಲೆಯನ್ನು ಪರಿಚಯಿಸುತ್ತಾರೆ. ಕಲೆ ಎನ್ನುವುದು ಎಲ್ಲರಿಗೂ ಸುಲಭದಲ್ಲಿ ಒಲಿಯುವುದಿಲ್ಲ. ಅದಕ್ಕಾಗಿ ಕಠಿಣ ಪರಿಶ್ರಮ ಮತ್ತು ಬದ್ಧತೆ ಅತೀ ಮುಖ್ಯ. ಕೆಲವೇ ಕೆಲವರಿಗೆ ಕೆಲವೊಂದು ಕಲೆಗಳು ಒಲಿಯುತ್ತವೆ. ಅವುಗಳ ಪೈಕಿ ಸಂಗೀತ, ನೃತ್ಯ, ಯಕ್ಷಗಾನ, ಚಿತ್ರಕಲೆ ಇತ್ಯಾದಿ ಪ್ರಮುಖವಾದವುಗಳು. ಚಿತ್ರಕಲೆಗೆ ಇಂದು ಹೆಚ್ಚಿನ ಅವಕಾಶಗಳಿದ್ದು, ಅವುಗಳ ಪೈಕಿ ತೈಲ ವರ್ಣ ಚಿತ್ರ, ಪ್ರಕೃತಿ […]Read More

ಹನಿಗವನ – ಶ್ರೀಧರ ಕಾಡ್ಲೂರು

ಕಠಿಣ ಏನೂ ಅಪೇಕ್ಷೆ ಪಡದೆ ಶ್ರಮಿಸಿಗಳಿಸಬಹುದುಸನ್ಮಾನಶ್ರಮಿಸದೆ ಬರೋಕೆಅದೇನು ಬೇಕಾಬಿಟ್ಟಿಪೇಟೇಲಿ ಸಿಗೋಸಾಮಾನ?? ರಾಜಿ ತಾರಕಕ್ಕೆ ಏರುವ ಮೊದಲೇಜಗಳಕ್ಕೆ ಹಾಕಿತೇಪೆಕಡೆಗಣಿಸಿ ದೌಲತ್ತು ತೋರಿದರೆಕೋಣೆ ಹೊರಗೆ ಬಿಸಾಡುವಳುದಿಂಬುಚಾಪೆ ಪ್ರಭಾವ ಘೋರ ಪ್ರತಿಭಟನೆಬೆಳಿಗ್ಗೆಕಿಕ್ಕಿರಿದುಮಧ್ಯಾಹ್ನದ ಹೊತ್ತಿಗೆಬಾರೆಡೆಗೆಕಿಕ್ಕಿಳಿದು ಪ್ರಯತ್ನ ಹರಿದ ಬಟ್ಟೆ ಹೊಲಿದಂತೆಒಂದು ಚಿಕ್ಕಸೂಜಿಒಡೆದ ಸಂಬಂಧ ಜೋಡಿಸುವುದುಒಂದು ಚಿಕ್ಕರಾಜಿ ಶ್ರೀಧರ ಕಾಡ್ಲೂರುRead More

ಕೆಮ್ಮೀಸೆ ಪಿಕಳಾರ ಮರಿಗಳ (Red Whiskered Bul Bul)ಹಾರುವ ವ್ಯರ್ಥ ಪ್ರಯತ್ನ…

ಕೆಮ್ಮೀಸೆ ಪಿಕಳಾರ ಮರಿಗಳು ಸಂಜೆಯ ಐದರ ಸಮಯ, ನಮ್ಮ ಮನೆಯ ಮುಂದಿರುವ ಕ್ರಿಸ್ಮಸ್ ಟ್ರೀ ಒಂದರಿಂದ ಎರಡು ಕೆಮ್ಮೀಸೆಯ ಪಿಕಳಾರ (Red Whiskered Bul Bul) ಜೋಡಿ ಹಕ್ಕಿಗಳು ಒಂದೇ ಸಮನೆ ಅರಚಾಟ ನೆಡೆಸುತ್ತಿದ್ದವು. ಏನೆಂದು ಹತ್ತಿರ ಹೋಗಿ ನೋಡಿದರೆ ಅವುಗಳ ಎರಡು ಪುಟ್ಟ ಹಕ್ಕಿ ಮರಿಗಳು ಕೆಳಗೆ ಬಂದು ಕಡಿದ ಕೊಂಬೆಗಳ ಮೇಲೆ ಕುಳಿತುಬಿಟ್ಟಿದ್ದವು. ಬಹುಷಃ ಆ ಮರಿಗಳು ಸ್ವತಂತ್ರವಾಗಿ ಹಾರಲು ಕಲಿಯುತ್ತಿದ್ದವೋ ಏನೋ! ಸುಮಾರು ಅರ್ಧ ಗಂಟೆ ಹಾಗೆ ಅವುಗಳನ್ನು ಗಮನಿಸುತಿದ್ದೆ. ತಾಯಿಯೋ ತಂದೆ […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 27

ಹಿಂದಿನ ಸಂಚಿಕೆಯಿಂದ…. ಮರುದಿನ ಬೆಳಗ್ಗೆ ಸಚಿವ ಚತುರಾನನ ಭಟ್ಟನು ರಾಜಭವನದಲ್ಲಿ ಚಿತ್ರಕನನ್ನು ಭೇಟಿ ಮಾಡಲು ಬಂದನು. ಸ್ವಸ್ತಿ ವಾಚನದ ನಂತರ ಅವನು ‘ನಿನ್ನೆ ರಾತ್ರಿ ಅರಮನೆಯ ಪ್ರಾಕಾರದಲ್ಲಿಯೇ ತಮ್ಮ ಮೇಲೆ ಹಲ್ಲೆ ನಡೆಯಿತೆಂದುಕೇಳಿ ತುಂಬ ವಿಷಾದವಾಯಿತು. ತಮಗೆ ಮೇಲಿಂದ ಮೇಲೆ ತೊಂದರೆಗಳು ಉಂಟಾಗುತ್ತಿವೆ. ಇದರಿಂದ ತಮಗೆ ಬಹಳ ನೋವಾಗಿರಬಹುದು. ಸರಿರಾತ್ರಿಯಲ್ಲಿ ರಕ್ಷಣೆಯಿಲ್ಲದೆ ಹೊರಗೆ ಹೋದರೆ ಅಪಾಯ ತಪ್ಪಿದ್ದಲ್ಲ ಅರಮನೆಯಲ್ಲಿಯೂ ವಿಪತ್ತುಗಳು ಘಟಿಸುತ್ತಲೇ ಇರುತ್ತವೆ’ ಎಂದನು. ಕಂಚುಕಿಯೂ ಅಲ್ಲೇ ಇದ್ದನು. ಅವನು ‘ಇದೇ ವಿಷಯವನ್ನು ನಾನೂ ಕೂಡ ಹೇಳಿದೆ. […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 44

ಇನ್ನಾವ ಗ್ರಹದೊಳಗೆ ಜೀವರಾಶಿಗಳಿವೆಯೊಇನ್ನವರ ಮೆಮಗಂತು ತಿಳಿದು ಬಂದಿಲ್ಲಔನ್ನತ್ಯಕೇರಿರುವ ನಾಗರಿಕ ಭೂಮಿಯಿದುಸೊನ್ನೆಯಾಗುವುದೇನೊ !- || ಪ್ರತ್ಯಗಾತ್ಮ || ಉರಿವ ಹಣತೆಯ ದೀಪವನು ಗಾಳಿ ನಂದಿಪುದುಉರಿಯುತಿರೆ ಹುಲು ಬಣವೆ ಬೆನ್ನು ತಟ್ಟುವುದುಪಿರಿದು ಬಲಶಾಲಿಗಳ ಎಲ್ಲ ಬೆಂಬಲಿಸುವರುದುರುಬಲತೆಯೇ ಶಾಪ- || ಪ್ರತ್ಯಗಾತ್ಮ || ನೀತಿವಂತನ ಕಂಡು ಭ್ರಷ್ಟ ಕಿಡಿ ಕಾರುವನುಮಾತಿನಲಗಲಿ ಚುಚ್ಚಿ ಮನವ ನೋಯಿಪನುಧೂರ್ತ ಕಾಗೆಯು ಪುಟ್ಟ ಕೋಗಿಲೆಯ ಮರಿಯನ್ನುಘಾತಿಸುತ್ತಿದೆ ನೋಡು- || ಪ್ರತ್ಯಗಾತ್ಮ || ಕಟ್ಟುಕಟ್ಟಳೆ ಎಂಬುದುಂಟೇನು ನಾಡಿನಲಿ?ಪುಟ್ಟ ಮಕ್ಕಳ ಶಾಲೆ ಕುಸಿದು ಬೀಳುತಿದೆಗಟ್ಟಿ ಸೇತುವೆ ಇಲ್ಲ; ಗಟ್ಟಿ ಅಣೆಕಟ್ಟಿಲ್ಲಭ್ರಷ್ಟತೆಯೆ […]Read More

ಹೆಣ್ಣುಮಕ್ಕಳೊಂದಿಗೆ ಹಸಿರುಕ್ರಾಂತಿ – ಪಿಪ್ಲಾಂತ್ರಿ ಗ್ರಾಮ

ಸ್ತ್ರೀ ದೇವೋಭವ ಗ್ರಾಮ – ಪಿಪ್ಲಾಂತ್ರಿ ಗ್ರಾಮ “ಯತ್ರ ನಾರ್ಯಸ್ತು ಪುಜ್ಯಂತೆ ರಮಂತೆ ತತ್ರ ದೇವತ” ಎಂದು ಹಿಂದೂ ಸಂಸ್ಕೃತಿಯಲ್ಲಿ ಯಾವ ಜಾಗದಲ್ಲಿ ಮಹಿಳೆಗೆ ಪೂಜನೀಯ ಸ್ಥಾನಮಾನ ಸಿಗುತ್ತದೋ ಅಂಥಹ ಸ್ಥಳದಲ್ಲಿ ದೇವತೆಗಳು ವಾಸ ಮಾಡುತ್ತಾರೆ ಎನ್ನುವ ಮೂಲಕ ಮಹಿಳೆಗೆ ಪುಜನೀಯ ಸ್ಥಾನ ಕಲ್ಪಿಸಲಾಗಿದೆ. ಆದರೆ ಇಂದಿನ ವಾಸ್ತವವೆ ಬೇರೆ, ದಿನಬೆಳಗಾದರೆ ಸಾಕು ಸುದ್ದಿ ಮಾದ್ಯಮಗಳು ಹೆಣ್ಣು ಮಕ್ಕಳಮೇಲೆ, ಮಹಿಳೆಯರ ಮೇಲೆ ಆಗುವ ದೌರ್ಜನ್ಯ, ಅತ್ಯಚಾರ, ಕೊಲೆ ಮುಂತಾದ ಸುದ್ದಿಯ ಮೂಲಕ ಸುಪ್ರಭಾತ ಹಾಡುತ್ತದೆ. ಇವುಗಳ ಮಧ್ಯೆಯೂ […]Read More

ವಿಶ್ವ ಹಾವುಗಳ ದಿನ – ಜುಲೈ 16

ಇವತ್ತು ವಿಶ್ವ ಹಾವುಗಳ ದಿನ, ಹಾವುಗಳು ಪರಿಸರದ ಆಹಾರ ಸರಪಳಿ ವ್ಯವಸ್ಥೆಯ ಬಹುಮುಖ್ಯ ಕೊಂಡಿಗಳು ಹಾಗಾಗಿ ಅವುಗಳ ಬಗೆಗೆ ಅರಿವು, ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ವಿಶ್ವ ಹಾವುಗಳ ದಿನವನ್ನು ಆಚರಿಸಲಾಗುತ್ತದೆ. ವಿಶ್ವದಲ್ಲಿರುವ ಕೆಲವು ವಿಶೇಷ ಹಾವುಗಳ ಪರಿಚಯ ಹಾವುಗಳ ಕುರಿತು ಇರುವ ಮೂಢನಂಬಿಕೆಗಳು, ಅವುಗಳ ಜೀವನ ಶೈಲಿ ಈ ಕುತೂಹಲಕರ ಮಾಹಿತಿಗಳು ನಿಮಗಾಗಿ ಇಲ್ಲಿವೆ ನೋಡಿ. ವಿಶ್ವದಲ್ಲಿ 2500 ಕ್ಕೂ ಅಧಿಕ ಜಾತಿ / ಪ್ರಭೇದದ ಹಾವುಗಳಿದ್ದು, ಭಾರತದಲ್ಲಿ 300 ಕ್ಕೂ ಅಧಿಕ ಜಾತಿ/ […]Read More

ಹನಿಗವಿತೆಗಳು – ಡಾII ಪರಮೇಶ್ವರಪ್ಪ ಕುದರಿ – 21

ಒಲುಮೆ ಮನದಲ್ಲಿ ಅಡಗಿ ಕುಳಿತಿದೆನಿನ್ನ ಪ್ರೇಮದ ಮಧುರ ನೆನಪುನೆನೆದಷ್ಟು ಮನಕೆ ಹೊಳಪುಈ ಬದುಕು ಸವಿಯಲುನಿನ್ನ ಸಾಂಗತ್ಯ ಬೇಕುಸಲುಗೆ ಬೇಕುಒಲುಮೆಯು ಬೇಕು!! ತೇವ ನಾ ನಿನಗಿಷ್ಟವೆಂದುನಿನ್ನ ಮುಖದ ರಂಗೇಸಾರಿ ಸಾರಿ ಹೇಳುತಿದೆ!ಆದರೂನಿನ್ನ ನಾಲಿಗೆಏಕೆ ಮೌನ ?ಕಣ್ಣುಗಳೇಕೆತೇವ ? ಅವಸರವೇನಿತ್ತು? ಹುಡುಗಿ, ನಿನ್ನನ್ನು ಬಹಳಹಚ್ಚಿಕೊಂಡೆನಿನ್ನ ಸಲುಗೆಯ ಸ್ನೇಹವನ್ನುಮೆಚ್ಚಿಕೊಂಡೆನಿನಗೆ ನೀನೆ ಚೆಲುವೆ ಎಂದುಕೊಚ್ಚಿಕೊಂಡೆತಿಳಿಯದೇ ಬದುಕಿಗೆ ಬೆಂಕಿಹಚ್ಚಿಕೊಂಡೆಅಂತಹ ಅವಸರವೇನಿತ್ತು ನಿನಗೆ ?ಯೌವನದ ಮದವೇರಿತ್ತೇ ? ಸಾರಬೇಡ ನಿನ್ನಇಚ್ಛೆಯಂತೆನಿನ್ನನ್ನು ತ್ಯಜಿಸಿದ್ದೇನೆಗೆಳತಿ!ಸುಖಾ ಸುಮ್ಮನೆನಾನುಮೋಸಗಾರಎಂದು ಜಗತ್ತಿಗೆಸಾರಬೇಡ!! ಡಾII ಪರಮೇಶ್ವರಪ್ಪ ಕುದರಿಚಿತ್ರದುರ್ಗRead More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 26

ಹಿಂದಿನ ಸಂಚಿಕೆಯಿಂದ… ನಡುರಾತ್ರಿಯ ನಂತರ ಅರಮನೆಯ ದೀಪಗಳು ಆರಿಹೋಗಿದ್ದವು. ಶುಕ್ಲ ಚತುರ್ದಶಿಯ ಚಂದ್ರನು ಪಶ್ಚಿಮ ದಿಕ್ಕಿನ ಕಡೆಗೆ ಸಾಗುತ್ತಿದ್ದನು. ನಡುನಡುವೆ ಸಣ್ಣ ಪುಟ್ಟ ಮೋಡಗಳು ಚಂದ್ರನನ್ನು ಮರೆ ಮಾಡುತ್ತಿದ್ದವು. ರಾಜಭವನ ಸುಪ್ತಾವಸ್ಥೆಯಲ್ಲಿತ್ತು. ಎಲ್ಲೆಲ್ಲೂ ನೀರವತೆ. ತನ್ನ ಶಯನಕಕ್ಷೆಯಲ್ಲಿ ಕಾಲುಚಾಚಿ ಮಲಗಿದ್ದ ಚಿತ್ರಕನು ನಿಧಾನವಾಗಿ ಎದ್ದು ಕುಳಿತನು. ಅವನು ನಿದ್ರಿಸಿರಲಿಲ್ಲ. ಕಣ್ಣುಮುಚ್ಚಿಕೊಂಡು ಸುಮ್ಮನೆ ಮಲಗಿದ್ದನು. ಮನೆಯ ಒಂದು ಮೂಲೆಯಲ್ಲಿ ಇಟ್ಟಿದ್ದ ಬತ್ತಿಯ ದೀಪವು ಅಸ್ಪಷ್ಟವಾದ ಬೆಳಕು ಚೆಲ್ಲುತ್ತಿತ್ತು. ತೆರೆದ ವಾತಾಯನದ ಮೂಲಕ ತಂಗಾಳಿಯ ಜೊತೆಗೆ ಬೆಳುದಿಂಗಳ ಬೆಳಕು ಕೊಠಡಿಯ […]Read More