ಕರ್ನಾಟಕದ ಎರಳೆಗಳು – Antelopes

ಕರ್ನಾಟಕದ ಎರಳೆಗಳು – Antelopes ಹುಲ್ಲೆ ಅಥವಾ ಎರಳೆಗಳ (Antelope) ಜಾತಿಗೆ ಸೇರಿದ ನಾಲ್ಕು ಪ್ರಾಣಿಗಳನ್ನು ನಮ್ಮ ರಾಜ್ಯದಲ್ಲಿ ನೋಡಬಹುದು. ಇವು ಸೀಳುಗೊರಸುಳ್ಳ ಮೆಲಕು ಹಾಕುವ ಬೋವಿಡೀ ಕುಟುಂಬದ ಪ್ರಾಣಿಗಳಾಗಿವೆ, ಇವುಗಳ ಕೊಂಬುಗಳು ಕವಲು ಒಡೆಯುವುದಿಲ್ಲ ಹಾಗು ಇವುಗಳ ಕೊಂಬುಗಳು ಜಿಂಕೆಗಳ ಕೊಂಬುಗಳಂತೆ ಕಾಲಕಾಲಕ್ಕೆ ಬಿದ್ದು ಹುಟ್ಟಿದೆ ಶಾಶ್ವತವಾಗಿ ಇರುತ್ತವೆ. ಹೆಚ್ಚಾಗಿ ಒಣ ಪರಿಸರಕ್ಕೆ ಹೊಂದಿ ಕೊಂಡ ಇವನ್ನು ಮಲೆನಾಡಲ್ಲಿ ಕಾಣುವುದು ಅಪರೂಪ. ನಮ್ಮಲ್ಲಿಯ ಎರಳೆಗಳ ಕುರಿತು ಕಿರು ಪರಿಚಯ ಇಲ್ಲಿದೆ ನೋಡಿ. ಕೃಷ್ಣಮೃಗ (Black Buck) […]Read More

ಕ್ಯಾನ್ಸರ್ ಪೀಡಿತರ ಆಶಾಕಿರಣ – ಹರಕ್‌ಚಂದ ಸಾವ್ಲಾ

ಕ್ಯಾನ್ಸರ್ ಪೀಡಿತರ ಆಶಾಕಿರಣ – ಹರಕ್‌ಚಂದ ಸಾವ್ಲಾ ಇತ್ತೀಚಿನ ದಿನಗಳಲ್ಲಿ ದಿನಬೆಳಗಾಗುವುದರೊಳಗೆ ಕೆಲವರು ಏನೇ ಸಾಧನೆ ಮಾಡದಿದ್ದರು ಹೀರೋಗಳಾಗಿ ಬಿಟ್ಟಿರುತ್ತಾರೆ. ಆದರೆ ಅದೆಷ್ಟೋ ಮಹತ್ತರವಾದ ಸಾಧನೆ ಮಾಡಿಯೂ ಮುಖ್ಯವಾಹಿನಿಗೆ ಬರದ ಅದೆಷ್ಟೋ ಹೀರೋಗಳು ನಮ್ಮ ಮಧ್ಯದಲ್ಲಿದ್ದಾರೆ. ಅಂಗವಿಕಲರ, ರೋಗಿಗಳ, ಬಡವರ ಹಾಗೂ ಅನಾಥರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟಿರುವ ಸಮಾಜ ಸೇವೆಯಲ್ಲೆ ಜೀವನದ ಸಾರ್ಥಕತೆಯನ್ನು ಕಂಡುಕೊಂಡ ಬಹಳ ಮಂದಿ ನಮ್ಮ ನಡುವೆಯೆ ಇದ್ದಾರೆ. ಏಲೆಮರೆಯ ಕಾಯಿಯಂತೆ ಯಾವುದೇ ಫಲಾಪೇಕ್ಷೆಯಿಲ್ಲದೆ ಸಮಾಜಕ್ಕೆ ಸೇವೆಸಲ್ಲಿಸುತ್ತಿದ್ದಾರೆ. ಸುಮಾರು 30 ವರ್ಷ ವಯಸ್ಸಿನ […]Read More

ಶತಾವರಿಯೆಂಬ ವಿಶಿಷ್ಟ ಸಸ್ಯ – ಸಂತೋಷ್ ರಾವ್ ಪೆರ್ಮುಡ

ಶತಾವರಿಯೆಂಬ ವಿಶಿಷ್ಟ ಸಸ್ಯ ಶತಾವರಿಯು ‘ಆಸ್ಪ್ಯಾರಗಸ್‌ ಅಫಿಷಿನಾಲಿಸ್‌’ ಎಂಬ ‘ಆಸ್ಪ್ಯಾರಗಸ್‌’ ಕುಲದ ಒಂದು ಹೂ ಬಿಡುವ ಸಸ್ಯದ ಜಾತಿಯಾಗಿದೆ. ಶತಾವರಿ ಎಂದು ಹೆಸರಾಗಿರುವ ತರಕಾರಿಯನ್ನು ಅದರಿಂದ ಪಡೆಯಲಾಗುತ್ತದೆ. ಶತಾವರಿಯನ್ನು 100 ಮಕ್ಕಳ ತಾಯಿ ಎಂದು ಕರೆಯುತ್ತಾರೆ. ಇದಕ್ಕೆ ಆಯುರ್ವೇದದಲ್ಲಿ ಮಹತ್ವದ ಸ್ಥಾನವಿದೆ. ಇದು ಯುರೋಪ್, ಉತ್ತರ ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾ ದ ಬಹುತೇಕ ಭಾಗಗಳಲ್ಲಿ ಸ್ಥಳೀಯವಾಗಿ ಬೆಳೆಯುತ್ತದೆ. ಇದನ್ನು ತರಕಾರಿ ಬೆಳೆಯಾಗಿಯೂ ವ್ಯಾಪಕವಾಗಿ ಬೆಳೆಯುತ್ತಾರೆ. ಶತಾವರಿ ಸಸ್ಯಕ್ಕೆ ಸಂಸ್ಕೃತದಲ್ಲಿ ‘ಶತಮೂಲಿ’ ಎಂಬ ಹೆಸರಿದೆ. ಇಂಗ್ಲೀಷಿನಲ್ಲಿ ‘ಆಸ್ಪರಾಗಸ್’ […]Read More

“ನಂಕಂಪ್ನಿ” – ಟಿ. ಪಿ. ಕೈಲಾಸಂ ವಿರಚಿತ ನಾಟಕ ಪ್ರದರ್ಶನ

ನಂಕಂಪ್ನಿ – ನಾಟಕ ಪ್ರದರ್ಶನ ಸುಮಾರು ನೂರು ವರುಷ ಹಳೆಯ ನಾಟಕವಾದರೂ ನಿತ್ಯನೂತನ ಟಿ. ಪಿ. ಕೈಲಾಸಂ ರವರ ಆಹ್ಲಾದಕರ ರಂಗಕೃತಿ “ನಂಕಂಪ್ನಿ” ಸಂಗೀತಮಯ – ಹಾಸ್ಯ– ವಿಡಂಬನಾತ್ಮಕ ನಾಟಕವು ಕನ್ನಡ ರಂಗ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದೆ. ನಾಟಕದೊಳಗೆ ನಾಟಕ ನಡೆಯುವ ಅಂಶ ಹೊಂದಿರುವ ಕೃತಿ ನಕ್ಕು ನಗಿಸುತ್ತದೆ – ವಿಶಿಷ್ಟ ಹಾಡುಗಳಿಂದ ಮುದಗೊಳಿಸುತ್ತದೆ. ನಾಟಕ ಆರಂಭದಲ್ಲಿ ಸೂತ್ರಧಾರನೊಂದಿಗೆ ನಟಿಯ ಪ್ರವೇಶ. “ನಂಕಂಪ್ನಿ” ತಂಡದಿಂದ “ಶೂರ್ಪನಖ ಕುಲವಿಲಾಸ” ನಾಟಕ ಪ್ರದರ್ಶನ! “ಆ ನಾಟಕ” ನಡೆಯುವಾಗ ಘಟಿಸುವ […]Read More

ಜಿಂಕೆಗಳು – Deer

ಜಿಂಕೆಗಳು ಸೀಳುಗೊರಸುಳ್ಳ ಜಿಂಕೆಗಳು ಮೆಲುಕಾಡಿಸುವ (Ruminants) ಪ್ರಾಣಿಗಳ ಗಣಕ್ಕೆ ಸೇರಿದ್ದು Cervidae ಕುಟುಂಬದಲ್ಲಿ ಬರುತ್ತವೆ, ಇವುಗಳಿಗೆ ಕವಲುಗೊಂಬುಗಳು (Antlers) ಇದ್ದು ವಾಡಿಕೆಯಾಗಿ ಗಂಡುಗಳಿಗೆ ಕೊಂಬುಗಳು ಇರುತ್ತವೆ, ಆದರೆ ಕಸ್ತೂರಿ ಮೃಗಕ್ಕೆ ಹೆಣ್ಣು ಮತ್ತು ಗಂಡು ಎರಡಕ್ಕೂ ಕೊಂಬುಗಳು ಇರುವುದಿಲ್ಲ. ರೇನ್ ಡೀರ್, ಕ್ಯಾರಿಬೂಗಳಿಗೆ ಹೆಣ್ಣಿಗೂ ಕೊಂಬುಗಳಿವೆ.ಜಿಂಕೆಗಳ ಕೊಂಬುಗಳು ಕಾಲಕಾಲಕ್ಕೆ ಬಿದ್ದು ಹುಟ್ಟುತ್ತವೆ. ಚಿಲಿಯ ಪುಡು (Pudu) ಜಿಂಕೆ 40 ಸೆಂಮೀ ಎತ್ತರವಿದ್ದರೆ, ಯುರೇಶಿಯಾದ ಎಲ್ಕ್ ಜಿಂಕೆ 150 ಸೆಂಮೀ ಎತ್ತರವಿದೆ.ಜಿಂಕೆಗಳ ಕೋರೆ ಹಲ್ಲುಗಳು ಅಭಿವೃದ್ಧಿ ಹೊಂದಿವೆ.ಕಸ್ತೂರಿ ಮೃಗ […]Read More

ಶ್ರೀಮತಿ ಸೌಜನ್ಯ ದತ್ತರಾಜ್ ರವರ ಎರಡು ಕೃತಿಗಳ ಲೋಕಾರ್ಪಣೆ

ಭಾವ ನೌಕೆಯನೇರಿ ಹಾಗು ಕಥೆಯೆಂಬ ಕನ್ನಡಿಯಲ್ಲಿ ಕೃತಿಗಳ ಲೋಕಾರ್ಪಣೆ ಇಂದು ಬೆಳಿಗ್ಗೆ ಕನ್ನಡ ಸಾಹಿತ್ಯ ಪರಿಷತ್ತು, ಕುವೆಂಪು ಸಭಾಂಗಣದಲ್ಲಿ ಶ್ರೀಮತಿ ಸೌಜನ್ಯ ದತ್ತರಾಜ್ ರವರ ಎರಡು ಕೃತಿಗಳಾದ “ಭಾವ ನೌಕೆಯನೇರಿ” ಕವನ ಸಂಕಲನ ಹಾಗು “ಕಥೆಯೆಂಬ ಕನ್ನಡಿಯಲ್ಲಿ” ಕಥಾ ಸಂಕಲನ ಆದಮ್ಯಾ ಪ್ರಕಾಶನ ದವರಿಂದ ಲೋಕಾರ್ಪಣೆಯಾಯಿತು. ಕನ್ನಡ ಸಾಹಿತ್ಯ ಸಮಾರಂಭಗಳ ಎಂದಿನ ಸಂಪ್ರದಾಯದಂತೆ ನಾಡಗೀತೆಯಿಂದ ಶುರುವಾದ ಕಾರ್ಯಕ್ರಮವು ನಂತರ ದೀಪವನ್ನು ಬೆಳಗಲಾಯಿತು. ಶ್ರೀಮತಿ ಸೌಜನ್ಯ ದತ್ತರಾಜ್ ರವರು ನಾಡಿನ ತಮ್ಮ ಕಥೆ ಕವನಗಳಿಂದ ಅನೇಕ ಕಡೆಯಿಂದ ಸಾಕಷ್ಟು […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 47

ಒಬ್ಬ ಹರೆಯದ ಹುಡುಗ ಹಾದಿ ಕಲ್ಲನು ಒದೆದುಉಬ್ಬಿ ಕುಣಿದಾಡಿದನು `ಕಲ್ಲೊಳಗೆ ರಕುತ !’ಅಬ್ಬೆ ಮನೆಯಲಿ ಕೇಳೆ ಆಗ ಗಾಯದ ಅರಿವು !ಅಬ್ಬ! ಪ್ರಾಯದ ಮದವೆ – || ಪ್ರತ್ಯಗಾತ್ಮ || ಮೀಸೆ ಮೊಲೆ ಬಂದವರು ದೇಶ ನೆಲ ಕಾಣರಲ !ಆಸೆ ಮಹಲಲಿ ವಾಸ; ಹಗಲಿನಲಿ ಕನಸು !ದೇಶವೆಲ್ಲವು ರಂಗುರಂಗಾಗಿ ಕಾಣುವುದುಲೇಸು ಬೆದೆಗಾಲವದು- || ಪ್ರತ್ಯಗಾತ್ಮ || ಜರೆಯುವರು ಗರ್ವದಲಿ ದೇವರನು ಕಲ್ಲೆಂದುಹಿರಿಯರನು ಮುದಿಗೊರಡು ಎಂದು ನೂಕುವರುಪರಿಪರಿಯ ಹಿತನುಡಿಗೆ ಎಳ್ಳಿನಿತು ಕಿವಿಗೊಡರುಹರೆಯದಲ್ಲದು ಸಹಜ_ || ಪ್ರತ್ಯಗಾತ್ಮ || ಸೋಲು […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 30

ಹಿಂದಿನ ಸಂಚಿಕೆಯಿಂದ…. ಆ ರಾತ್ರಿ ಚಿತ್ರಕನು ಅರಮನೆಗೆ ಹಿಂದಿರುಗಿ ಹೋಗಲಿಲ್ಲ. ಅನುಮಾನಗೊಂಡ ಕಂಚುಕಿಯು ಗುಟ್ಟಾಗಿ ರಕ್ಷಕಭಟರನ್ನು ಕಳುಹಿಸಿದ್ದನು. ಅವರು ರಾತ್ರಿಯೆಲ್ಲಾ ಸುಗೋಪಾಳ ಕುಟೀರದ ಹೊರಗೆ ಕಾವಲು ಕಾಯುತ್ತಿದ್ದರು. ಮಧ್ಯರಾತ್ರಿಯ ಹೊತ್ತಿಗೆ ಪೃಥಾ ಪ್ರಜ್ಞಾಹೀನಳಾದಳು. ಚಿತ್ರಕನು ಆಕೆಯ ಹಾಸಿಗೆಯ ಬಳಿ ನಿಂತು, ಸುಗೋಪಾಳ ಹೆಗಲ ಮೇಲೆ ಕೈಯಿಟ್ಟು ‘ಸುಗೋಪಾ ನೀನು ನನ್ನ ಸೋದರಿ. ನಾವಿಬ್ಬರೂ ಒಬ್ಬ ತಾಯಿಯ ಹಾಲು ಕುಡಿದವರು’ ಎಂದು ಹೇಳಿದನು. ಸುಗೋಪಾ ಅಶ್ರುಪೂರಿತ ನಯನಳಾಗಿ ಚಿತ್ರಕನನ್ನು ನೋಡಿದಳು. ಚಿತ್ರಕ- ಈ ದಿನ ನೀವು ಕೇಳಿದ ಈ […]Read More

ವೃಕ್ಷಮಾತೆ ತುಳಸಿ ಗೌಡ

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೃಕ್ಷಮಾತೆ ತುಳಸಿ ಗೌಡ ಆಧುನೀಕತೆಯ ಧಾವಂತದಲ್ಲಿ ಹಳ್ಳಿಗಳು ಪಟ್ಟಣಗಳಾಗುತ್ತಿವೆ, ಕಾಂಕ್ರಿಟೀಕರಣಗೊಂಡು ಕಾಡೇ ನಶಿಸಿ ಹೋಗುತ್ತಿದೆ. ಅರಣ್ಯ ಸಂರಕ್ಷಣೆಯ ಕುರಿತು ಯುವ ಪೀಳಿಗೆಗೆ ಜಾಗೃತಿ ಬೇಕಿರುವ ಇಂದಿನ ದಿನದಲ್ಲಿ ಇಲ್ಲೊಬ್ಬಾಕೆ ಸದ್ದಿಲ್ಲದೇ ವೃಕ್ಷ ಕ್ರಾಂತಿಯನ್ನು ಮಾಡಿದ್ದಾರೆ. ಅವರೇ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ “ತುಳಸಿ ಗೌಡ”. ಮರ ಗಿಡಗಳೆಂದರೆ ಮಕ್ಕಳಂತೆ ಕಾಣುವ ಇವರ ಈ ಸಾಧನೆಗೆ ಭಾರತ ಸರ್ಕಾರವು ಪ್ರತಿಷ್ಟಿತ ‘ಪದ್ಮಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಈಕೆ ಈ ಶತಮಾನ […]Read More

ನೀರು ನಾಯಿಗಳು – Otters

ನೀರು ನಾಯಿಗಳು ಮಾಂಸಹಾರಿ ಗಣದ ‘ಮುಸ್ಟಲಿಡೀ’ (mustelidae) ಕುಟುಂಬಕ್ಕೆ ಸೇರಿದ್ದು ವೀಸಲ್ ಗಳು (weasel), ಮಾರ್ಟೆನ್ಗಳು (Martens), ಬ್ಯಾಜರ್ (Badger) ಇನ್ನೂ ಅನೇಕ ಪ್ರಾಣಿಗಳು ಈ ಕುಟುಂಬದಲ್ಲಿ ಬರುತ್ತವೆ. ಈ ಗುಂಪುಗಳ ಪ್ರಾಣಿಗಳು ಒಂದಕ್ಕೊಂದು ವಿಭಿನ್ನವಾಗಿದ್ದರೂ ಕೆಲವೊಂದು ಲಕ್ಷಣಗಳಲ್ಲಿ ಸಾಮ್ಯತೆ ಇರುವುದರಿಂದ ಒಂದೇ ಕುಟುಂಬದಲ್ಲಿ ಇರಿಸಲಾಗಿದೆ. ಉದ್ದ ದೇಹ,ಗಿಡ್ಡ ಕಾಲು, ಬಾಲದ ಬುಡದಲ್ಲಿ ವಾಸನಾ ಗ್ರಂಥಿ, ಅಭಿವೃದ್ಧಿ ಹೊಂದಿದ ಮಾಂಸದ ಹಲ್ಲುಗಳು ಈ ಕುಟುಂಬದ ಪ್ರಾಣಿಗಳ ಲಕ್ಷಣಗಳಾಗಿವೆ. ನಮ್ಮ ದೇಶದಲ್ಲಿ 3 ಜಾತಿಯ ನೀರು ನಾಯಿಗಳನ್ನು ಗುರುತಿಸಲಾಗಿದೆ. […]Read More