ಕಟ್ಟುಹಾವು – ಇದು ಸೈಲೆಂಟ್ ಕಿಲ್ಲರ್

ಕಟ್ಟುಹಾವು – Common Krait ನಮ್ಮ ಮಲೆನಾಡು ಭಾಗದಲ್ಲಿ ಕಟ್ಟುಹಾವು, ಕಡಂಬಳ ಹಾವು, ಕಟ್ಟು ಕಡಂಬಳ, ಕಟ್ಟು ಕನ್ನಡಿ ಹಾವು ಎಂದೆಲ್ಲ ಹೆಸರಿನಿಂದ ಕರೆವ ಈ ಹಾವಿಗೆ ಆಂಗ್ಲದಲ್ಲಿ Common Krait ಎನ್ನುತ್ತಾರೆ,ಭಾರತದ 4 ಅಪಾಯಕಾರಿ ಹಾವುಗಳಲ್ಲಿ (Big four venomous snakes) ಇದೂ ಒಂದು. ನಮ್ಮಲ್ಲಿ 2-3 ಅಡಿ ಉದ್ದದ ಹಾವುಗಳನ್ನು ಈ ಜಾತಿಯಲ್ಲಿ ನೋಡಬಹುದು, ಸದಾ ರಾತ್ರಿ ಸಂಚಾರಿಯಾದ (Noctarnul) ಇದು ಹೆಚ್ಚಾಗಿ ಇತರ ಜಾತಿ ಹಾವುಗಳನ್ನೇ ತಿಂದು ಜೀವಿಸುತ್ತದೆ. ಸಾಮಾನ್ಯವಾಗಿ ಕಪ್ಪು ಬಣ್ಣದಂತೆ […]Read More

ನೋಡಬನ್ನಿರಿ ಶ್ರೀ ಜಗನ್ನಾಥದಾಸರ ತಂಬೂರಿ!!

ಶ್ರೀ ಜಗನ್ನಾಥದಾಸರ ತಂಬೂರಿ ಮಲಗಿ ಪರಮಾದರದಿ ಪಾಡಲು |ಕುಳಿತು ಕೇಳುವ |ಕುಳಿತು ಪಾಡಲು ನಿಲುವ |ನಿಂತರೆ ನಲಿವ | ನಲಿದರೆ ಒಲಿವೆ |ನಿಮಗೆಂಬ ಸುಲಭನೋ ಹರಿ|ತನ್ನವರನರಘಳಿಗೆ ಬಿಟ್ಟಗಲನು |ರಮಾಧವನೊಲಿಸಲರಿಯದೆ |ಪಾಮರರು ಬಳಲುವರು ಭವದೊಳಗೆ| ಭಾರತದ ವೇದಾಂತ ಮತ್ತು ದರ್ಶನ ಶಾಸ್ತ್ರಗಳನ್ನು ಶ್ರೀಮಂತಗೊಳಿಸುವಲ್ಲಿ ಕರ್ನಾಟಕದ ದಾಸ ಸಾಹಿತ್ಯ ಪರಂಪರೆಯದ್ದು ಮಹತ್ತರವಾದ ಪಾತ್ರ. ಕರ್ನಾಟಕದಲ್ಲಿ ದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಅನೇಕ ಮಹನೀಯರಿದ್ದಾರೆ ಅಂಥಹವರಲ್ಲಿ ಪ್ರಮುಖರಾದವರು ಶ್ರೀ ಜಗನ್ನಾಥದಾಸರು. ಇವರು ಭಾರತೀಯ ವೇದಾಂತ ಮತ್ತು ದರ್ಶನ ಶಾಸ್ತ್ರಗಳಲ್ಲಿ ಅದ್ವಿತೀಯ ಪಾಂಡಿತ್ಯವನ್ನು ಹೊಂದಿದ್ದವರು […]Read More

ಆವರ್ತ – ಮನಸಿನ ಅರಿಗಳ ಅರಸುತ್ತಾ

ಆವರ್ತ-ಮನಸಿನ ಅರಿಗಳ ಅರಸುತ್ತಾ ಆಶಾ ರಘು ಅವರೇ ಹೇಳುವಂತೆ, ’ಆವರ್ತ’ ಅವರ ಮಹತ್ವಾಕಾಂಕ್ಷೆಯ ಕಾದಂಬರಿ. ʻಹೌದು, ಇದು ಒಂದು ಮಹತ್ವಾಕಾಂಕ್ಷೆಯ ಕಾದಂಬರಿಯೇʼ ಎಂದು ಓದುಗರನ್ನೂ ಒಪ್ಪಿಸಬೇಕಾದರೆ ಎಷ್ಟು ಸಶಕ್ತವಾಗಿ ಇರಬೇಕು ಎನ್ನುವ ಕಲ್ಪನೆ, ಬಹಶಃ ಆಶಾ ಅವರಿಗೆ ಸುಲಭವಾಗಿ ಅರ್ಥವಾಗಿಬಿಟ್ಟಿರುವಂತಿದೆ. ಹಾಗಾಗಿಯೇ ʻಆವರ್ತʼ ಓದುತ್ತಾ ಹೋದಂತೆ ಅದು ಓದುಗನನ್ನು ಆವರಿಸಿಕೊಂಡು ಬಿಡುತ್ತದೆ. ಎಲ್ಲ ನವರಸಗಳು ಓದುಗನ ಮೇಲೆ ಮುಕುರಿ ಬಿದ್ದು ಅವನು ಭಾವನೆಗಳ ತೀವ್ರ ಏರಿತಗಳನ್ನು ಗಾಢವಾಗಿ ಅನುಭವಿಸುವುದು ಉಚಿತವೆನಿಸಿ ತನ್ಮೂಲಕ ಅನಿವಾರ್ಯವೂ ಆಗಿ ಬಿಡುತ್ತದೆ. ನಮ್ಮ […]Read More

ಧೈರ್ಯಂ ಸರ್ವತ್ರ ಸಾಧನಂ – ಸಂತೋಷ್ ರಾವ್ ಪೆರ್ಮುಡ

ಧೈರ್ಯಂ ಸರ್ವತ್ರ ಸಾಧನಂ ‘ಜೀವನ ಎನ್ನುವುದು ಯಾರಿಗೂ ಸುಖದ ಸುಪ್ಪತ್ತಿಗೆ ಅಲ್ಲ. ಇಂದು ಕಠಿಣತೆಗೆ ತನ್ನನ್ನು ತಾನು ಒಡ್ಡಿಕೊಂಡವನು ಮತ್ತು ನಾಳೆಯೂ ಕಠಿಣತೆಯನ್ನು ಎದುರಿಸಲು ಸಿದ್ಧವಾಗಿ ಇರುವವನು ನಾಳೆಯೂ ಸುಖದ ಅನ್ನವನ್ನು ಉಣ್ಣಬಲ್ಲ’ ಶ್ರೀ “ಸಂತೋಷ್ ರಾವ್ ಪೆರ್ಮುಡ” ಅವರ ಹೊಸ ಪುಸ್ತಕ “ಧೈರ್ಯಂ ಸರ್ವತ್ರ ಸಾಧನಂ” ನಿಂದ ಆಯ್ದ ಸಾಲು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಯವರಾದ ಶ್ರೀ ಸಂತೋಷ್ ರಾವ್ ಪೆರ್ಮುಡ ” ಧಾರವಾಡ ಜ್ಞಾನವಿಕಾಸ ತರಬೇತಿ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಯುವ […]Read More

ವಿಜಯಕ್ಕೆ ಮಾರ್ಗದರ್ಶಕ ವಿಜಯೀಭವ – ವಿ. ಗೋಪಕುಮಾರ್

ವಿಜಯೀಭವ – ಗೆಲ್ಲಲು ಸಿದ್ದರಾಗಿ ಕನ್ನಡದಲ್ಲಿ ನ್ಯಾನೋಕಥೆಗಳನ್ನು ರಚಿಸುವ ಮೂಲಕ ಸಾಹಿತ್ಯದಲ್ಲಿ ಹೊಸ ಅಲೆ ಎಬ್ಬಿಸುತ್ತಾ ನಮ್ಮೆಲ್ಲರಿಗೂ ಪರಿಚಿತರಾದ ವಿ ಗೋಪಕುಮಾರ್ ಅವರ ನಾಲ್ಕನೆ ಕೃತಿ ‘ವಿಜಯೀಭವ’ ಟೀನೇಜ್ ಮಕ್ಕಳ ಶಿಸ್ತು, ಏಕಾಗ್ರತೆ ಮತ್ತು ಪೊಟೆನ್ಶಿಯಾಲಿಟಿಯನ್ನು ಕಾಪಾಡಿಕೊಳ್ಳಲು ಒಬ್ಬೊಳ್ಳೆ ಗೆಳೆಯನಾಗಿ, ಮಾರ್ಗದರ್ಶಕನಾಗಿ ಸಹಕರಿಸುತ್ತದೆ. ಎಲ್ಲ ಅಧ್ಯಾಯಗಳನ್ನು ಮಕ್ಕಳ ಮನಸ್ಸಿಗೆ ಹತ್ತಿರವಾಗುವಂತೆ ಸೂಕ್ತ ಉದಾಹರಣೆಗಳ ಮುಖಾಂತರ ವಿಶ್ಲೇಷಿಸಿದ್ದಾರೆ. ಪ್ರೌಢಶಾಲ ಹಾಗೂ ಕಾಲೇಜು ಮಕ್ಕಳ ವ್ಯಕ್ತಿತ್ವವನ್ನು ಅಚ್ಚುಕಟ್ಟಾಗಿ ರೂಪಿಸುವಲ್ಲಿ ಈ ಪುಸ್ತಕ ಖಂಡಿತ ಕೆಲಸ ಮಾಡುತ್ತದೆ. ಓದಲು ಅಷ್ಟೇ ಅಲ್ಲದೆ […]Read More

ತಂತಿಗೆ ತಂತಿ ತಾಗಿ – ದೀಪ ಗೋನಾಳ, ಕವನ ಸಂಕಲನ

ತಂತಿಗೆ ತಂತಿ ತಾಗಿ ದೀಪಕ್ಕಳ ‘ತಂತಿಗೆ ತಂತಿ ತಾಗಿ’ ಕವನ ಸಂಕಲನ ಓದುವುದೇ ಚೆಂದ. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು, ಎಲ್ಲರೂ ಓದಬಹುದಾದ ಪುಟ್ಟ ಪುಟ್ಟ ಕವಿತೆಗಳಿಂದ ಹಿಡಿದು ಪುಟ ಪುಟಗಳ ತುಂಬ ಹರವಿಕೊಂಡಿರುವ ದೊಡ್ಡ ಗಾತ್ರದ ಕವಿತೆಗಳೂ ಇಲ್ಲಿ ಸಾಲುಸಾಲಾಗಿ ಜಾಗ ಪಡೆದುಕೊಂಡಿವೆ. ಬರೀ ಕವಿತೆಗಳಾಗದೆ ನೆನಪಿನ ಬುತ್ತಿ ಬಿಚ್ಚಿಡುವ, ಇನಿಯನಿಗೆ ಪ್ರೇಮ ನಿವೇದನೆ ಹೇಳಿಕೊಳ್ಳುವ, ಇನ್ಯಾರೊಂದಿಗೋ ಸಂವಾದ ಮಾಡುವ ಒಂದಷ್ಟು ಗದ್ಯ ಕವಿತೆಗಳು ನಮ್ಮನ್ನು ಮಾತು ಮಾತಿಗೂ ಕೆಣಕುತ್ತವೆ. ಪರಿಶುದ್ಧವಾದ ಪ್ರೀತಿಯ ಹುಡುಕಾಟದಲ್ಲಿ ಕೊನೆಗೆ […]Read More

ಮೊಸಳೆಗಳು – ಅಳಿವಿನಂಚಿನಲ್ಲಿರುವ ಸರೀಸೃಪ

ಮೊಸಳೆಗಳು – Crocodile ಸರೀಸೃಪ ವರ್ಗಕ್ಕೆ ಸೇರಿದ ಮೊಸಳೆಗಳು ಶೀತ ರಕ್ತ ಪ್ರಾಣಿಗಳು, ಪ್ರಸ್ತುತ ಭೂಮಿ ಮೇಲಿನ ಅತಿ ದೊಡ್ಡ ಸರೀಸೃಪ ಜುರಾಸಿಕ್ ಯುಗದಲ್ಲಿ ಭೂಮಿಯನ್ನು ಆಳಿದ ಡೈನೋಸಾರ್ ಗಳ ಸಂಬಂಧಿಗಳು, ಸುಮಾರು ೧೭೦ ಮಿಲಿಯನ್ ವರ್ಷಗಳಿಂದ ಅಷ್ಟೊಂದು ಬದಲಾವಣೆ ಹೊಂದದೆ ಭೂಮಿಯ ಬೆಚ್ಚಗಿನ ಮತ್ತು ಉಷ್ಣ ಹವಾಮಾನದ ವಲಯಗಳಲ್ಲಿ ವಿತರಣೆಗೊಂಡಿವೆ. ಜಲವಾಸಿಗಳಾದ ಇವು ಆಹಾರದ ವೇಳೆಯನ್ನು ಬಿಟ್ಟು ಇನ್ನುಳಿದ ಸಮಯದಲ್ಲಿ ಬಿಸಿಲು ಕಾಯಿಸಲು ಭೂಮಿಗೆ ಬರುತ್ತವೆ, ಜಾಲ ಪಾದಗಳನ್ನು ಹೊಂದಿ ಶರೀರ ಈಜುವುದಕ್ಕೆ ಮಾರ್ಪಾಡಾಗಿದೆ, ಬಾಲವು […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 25

ಹಿಂದಿನ ಸಂಚಿಕೆಯಿಂದ… ಅತ್ತ ಚಿತ್ರಕ ಬಹಳ ಹೊತ್ತು ಹಗಲು ನಿದ್ದೆ ಮಾಡಿ ಎಚ್ಚರಗೊಂಡನು. ಶರೀರದಲ್ಲಿ ಲವಲವಿಕೆ ಕಾಣುತ್ತಿತ್ತು. ಹಿಂದಿನ ಅನೇಕ ದಿನಗಳ ನಾನಾ ಕ್ಲೇಶಗಳಿಂದುಟಾದ ಗ್ಲಾನಿ ಇನ್ನಿಲ್ಲವಾಗಿತ್ತು. ಅವನ ಮನಸ್ಸೂ ಕೂಡ ಶರೀರದಂತೆ ಪ್ರಫುಲ್ಲವಾಗಬೇಕಾಗಿತ್ತು. ಆದರೆ ಅವನ ಮನಸ್ಸು ಪ್ರಫುಲ್ಲವಾಗುವುದಕ್ಕೆ ಬದಲಾಗಿ ಉದ್ವಿಗ್ನವಾಗುತ್ತಿರುವಂತೆ ಅವನಿಗೆ ಭಾಸವಾಯಿತು. ಅರಮನೆಯ ಗೌರವಾದರಗಳಿಗೆ, ರಾಜೋಪಚಾರಗಳಿಗೆ ಅವನು ಅಭ್ಯಸ್ಥನಾಗಿರಲಿಲ್ಲ. ಆದರೂ ಕಂಚುಕಿ ಲಕ್ಷ್ಮಣನು ಸ್ವಲ್ಪ ಹೆಚ್ಚಾಗಿಯೇ ಅವನನ್ನು ಉಪಚರಿಸುತ್ತಿದ್ದನು. ಅವನು ಪ್ರತಿ ಗಳಿಗೆಗೊಮ್ಮೆಯಾದರೂ ಬಂದು ಅವನ ಯೋಗ ಕ್ಷೇಮದ ಬಗ್ಗೆ ತಿಳಿದುಕೊಳ್ಳುತ್ತಿದ್ದನು. ಇದರ […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 43

ಪ್ರತಿಭೆಯುಳ್ಳೊಡೆ ಕೆಲವು ಉದ್ಗ್ರಂಥಗಳ ರಚಿಸುಜತನದಿ ನಿರಕ್ಷರಿಗೆ ಅಕ್ಷರವ ಕಲಿಸುಶತ ಸಂಖ್ಯೆಯಲಿ ಅರ್ಧವಾದರೂ ಮರ ಬೆಳೆಸುಕೃತ ಕೃತ್ಯನೀನಪ್ಪೆ- || ಪ್ರತ್ಯಗಾತ್ಮ || ದೀಪವಿಡಿದಿರುಳಿನಲಿ ನಡೆವ ಕುರುಡನ ಕಂಡು‘ದೀಪವೇತಕೊ ಕುರುಡ?’ ಎನಲೊಬ್ಬ ಕುಹಕಿ,‘ಅಪ್ಪ! ಇದು ಕಣ್ಣುಳ್ಳ ಕುರುಡರಿಗೆ’ ಎಂದೆನಲುತೆಪ್ಪಗಾದನು ಕುಹಕಿ- || ಪ್ರತ್ಯಗಾತ್ಮ || ಮಾರಕಾಸ್ತ್ರಗಳೆಲ್ಲ ಮಾರಿಗೌತಣವಲ್ತೆ ?ಯಾರ ಸಂತೋಷಕ್ಕೆ ಇನಿತು ಕಗ್ಗೊಲೆಯು ?ಮಾರುವೋಗಿಹರೇಕೆ ತರವಲ್ಲದೀ ಚಟಕೆಮಾರಾರಿಯೇ ಬಲ್ಲ- || ಪ್ರತ್ಯಗಾತ್ಮ || ವಿಜ್ಞಾನಿ ಎಂಬುವನು ಮನುಜ ಕುಲಕುಪಕಾರಿಅಜ್ಞಾನಿ ಏಕಾದ ಅಸ್ತ್ರಗಳ ಸೃಜಿಸಿ?ಆಜ್ಞೆಗಾಗಿಯೆ ಕಾದು ಸಜ್ಜಾಗಿ ನಿಂತಿಹವುಆಗ್ನೇಯ ಅಸ್ತ್ರಗಳು !- […]Read More

ಅರುಣಿಮಾ ಸಿನ್ಹಾ – ಕೃತಕ ಕಾಲಿನಿಂದ ಎವರೆಸ್ಟ್ ಏರಿದ ಪ್ರಥಮ ಮಹಿಳೆ

ಅರುಣಿಮಾ ಸಿನ್ಹಾ ರಾಷ್ಟ್ರೀಯ ವಾಲಿಬಾಲ್ ತಂಡದ ಆಟಗಾರ್ತಿಯಾಗಿದ್ದ ಅರುಣಿಮಾ ಸಿನ್ಹಾ ಎಂಬ ಹುಡುಗಿ ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ಹುಟ್ಟಿ ಬೆಳೆದವಳು. ಈಕೆ ತನ್ನ 3 ನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಳು. ಈಕೆ ಭಾರತೀಯ ಸೈನ್ಯದಲ್ಲಿ ಇಂಜಿನಿಯರ್ ಆಗಿದ್ದು, ತಾಯಿ ಆರೋಗ್ಯ ಇಲಾಖೆಯ ಮೇಲ್ವಿಚಾರಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಚಿಕ್ಕಂದಿನಿಂದಲೂ ಆಟಗಳಲ್ಲಿ ಆಸಕ್ತಿ ಹೊಂದಿದ್ದ ಅರುಣಿಮಾ ವಾಲಿಬಾಲಿನ ವಿಭಿನ್ನ ಪ್ರತಿಭೆಯಾಗಿದ್ದಳು. ತನ್ನ ಆಟದ ಚತುರತೆಯಿಂದ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟಗಾರ್ತಿಯಾಗಿ ಮಿಂಚಿದ್ದಳು. ತನ್ನ ಅಪ್ಪರ ಕ್ರೀಡಾಸಕ್ತಿಯಿಂದಾಗಿ ಅರೆ ಸೈನಿಕ […]Read More