ಪಾರು ಹೇಳಿದ ಕಥೆ – 9

–ಇಂಗ್ಲಿಷ್ ಗಾಥೆ– ಕನ್ನಡ ಮೀಡಿಯಂ ಸೆಕೆಂಡ್ ಪಿ.ಯು.ಸಿ ಪಾಸಾದ ಪಾರು ಹೀಗೆ ಹೇಗೋ ತಾನು ಒಂದು ಕೆಲಸಕ್ಕೆ ಸೇರಿ ದುಡಿಯಬೇಕೆಂಬ ಆಸೆಯನ್ನು ನೆರವೇರಿಸಿಕೊಂಡು ಒಂದು ದಡ ತಲುಪಿದಳು. ಎನ್ನುವಷ್ಟರಲ್ಲಿ ಅವಳಿಗೆ ಮತ್ತೊಂದು ಸವಾಲು ಎದುರಾಯಿತು. ಬೆಂಗಳೂರು ಮಹಾನಗರದಲ್ಲಿ ಶಿಕ್ಷಕಿಯಾಗಿದ್ದ ಪಾರುವಿಗೆ ಇಂಗ್ಲಿಷ್ ಕಲಿಕೆಯ ಅನಿವಾರ್ಯತೆ ಇತ್ತು. ಅದಲ್ಲದೆ ಬೆಂಗಳೂರಿಗೆ ಬಂದ ಹೊಸತರಲ್ಲಿ ಆಚೆ ಹೋದರೆ ಎಲ್ಲರೂ ಇಂಗ್ಲಿಷಿನಲ್ಲಿ ಲೀಲಾಜಾಲವಾಗಿ ಮಾತನಾಡುತ್ತಾರೆ, ಸಣ್ಣ ಸಣ್ಣ ಮಕ್ಕಳು ಇಂಗ್ಲಿಷ್ ಮಾತನಾಡುವುದರಲ್ಲಿ ನಿಪುಣರು.ಬಲು ಮಾತುಗಾತಿಯಾದ ಪಾರು ಅವರನ್ನೇ ಮೌನವಾಗಿ ಪಿಳಪಿಳ ನೋಡುತ್ತಿದ್ದಳು. […]Read More

ಮೇ 5 ರಂದು ಮ್ಯಾನ್ ಆಫ್ ದಿ ಮ್ಯಾಚ್

ಮ್ಯಾನ್ ಆಫ್ ದಿ ಮ್ಯಾಚ್ ಸತ್ಯ ಸೂತ್ರದಾರನಾಗಿರುವ ‘ಮ್ಯಾನ್ ಆಫ್ ದಿ ಮ್ಯಾಚ್‘ ಚಲನಚಿತ್ರ ಇದೇ ಮೇ 5 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಿದೆ. ಕನ್ನಡದ ಈಗಿನ ದಿನಮಾನದ ಪ್ರತಿಭಾವಂತ ಯುವ ನಿರ್ದೇಶಕರ ಟಾಪ್ ಟೆನ್ ನಿರ್ದೇಶಕರಲ್ಲಿ ಪಟ್ಟಿಯಲ್ಲಿ ಡಿ ಸತ್ಯಪ್ರಕಾಶ್ ಕೂಡ ಸೇರಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹಲವು ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದ ‘ರಾಮಾ ರಾಮಾ ರೇ‘ ಹಾಗೂ ‘ಒಂದಲ್ಲಾ ಎರಡಲ್ಲಾ‘ ನಂತರ ಸತ್ಯ ಅವರು ಕರ್ಮಶಿಯಲ್ ಟಚ್ ಕೊಟ್ಟು ಈ ಮೂರನೇ ಚಿತ್ರವನ್ನು ನಿರ್ದೇಶಿಸಿದ್ದಾರೆ. […]Read More

ಕೆಲಸದ ಒತ್ತಡ -ನಿರ್ವಹಣೆ ಏಕೆ? ಹೇಗೆ?

ಕರೋನದ ಒಂದು, ಎರಡು, ಮೂರು ಅಲೆಗಳ ಆರ್ಭಟ ಮುಗಿದಿದ್ದು ಎಲ್ಲರಿಗು ಸಿಕ್ಕಿದ್ದ “ವರ್ಕ್ ಫ್ರಮ್ ಹೋಂ” ಅವಕಾಶ ಮುಗಿದು, ಈಗ ಹೆಚ್ಚು ಕಡಿಮೆ ಎಲ್ಲಾ ಕಂಪನಿಗಳು ತಮ್ಮ ಕೆಲಸಗಾರರನ್ನು ಮರಳಿ ಆಫೀಸಿಗೆ ಬಂದು ಕೆಲಸ ಮಾಡುವಂತೆ ಸೂಚಿಸಿರುವ ಸಂದರ್ಭದಲ್ಲಿ ಎಲ್ಲರು ಪುನಃ ಅದೇ ಟ್ರಾಫಿಕ್ ಜಾಮ್ ಒತ್ತಡದಿಂದ ಆಫೀಸಿಗೆ ಹೋಗಿ ಅಲ್ಲಿಯ ಒತ್ತಡವನ್ನು ಸಹ ನಿಭಾಯಿಸಬೇಕಾಗಿದೆ. ಮತ್ತದೇ ಯಾಂತ್ರಿಕ ಜೀವನದಲ್ಲಿ ಸಂಜೆಯಾಗುತ್ತಿದ್ದಂತೆ ಆಫೀಸ್ ನಿಂದ ಮನೆಗೆ ಬರುವ ವೇಳೆಗೆ ಕೇಳುವ ಒಂದೇ ಮಾತು ತುಂಬಾ ಕೆಲಸದ ಒತ್ತಡ […]Read More

ವಾರಕ್ಕೊಂದು ಕಗ್ಗ – 2

ಕಗ್ಗ ಮಾಲಿಕೆ – 2 ಒಂದೇ ಗಗನವ ಕಾಣುತೊಂದೆ ನೆಲವನು ತುಳಿಯು Iತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು IIಒಂದೇ ಗಾಳಿಯನುಸಿರ್ವ ನರಜಾತಿಯೋಳಗೆಂತು Iಬಂದುದೀ ವೈಷಮ್ಯ? – ಮಂಕುತಿಮ್ಮ ಒಂದೇ ಗಗನವ (ಆಕಾಶ) ಕಾಣುತ + ಒಂದೇ ನೆಲವನು ತುಳಿಯುತ + ಒಂದೇ ದ್ಯಾನವನು ಉಣ್ಣುತ್ತಾ (ತಿನ್ನುತಾ) + ಒಂದೇ ಗಾಳಿಯನು + ಉಸಿರ್ವ (ಉಸಿರಾಡುವ) + ನರಜಾತಿಯಳೊಗೆ + ಎಂತು + ಬಂದುದೀ ವೈಷ್ಯಮ್ಯ ? ನಾವೆಲ್ಲರೂ ಕಾಣುವ ಆಕಾಶ ಒಂದೇ, ತುಳಿಯುವ ನೆಲವು ಒಂದೇ, ತಿನ್ನುವ ಧಾನ್ಯವು […]Read More

ನಿನ್ನಂತಹ – ಬಿಸಿಲು

ನಿನ್ನಂತಹ – ಬಿಸಿಲು ಇದೆಂಥಾ ಉರಿ ಬಿಸಿಲೋ ಮಹರಾಯಾಚರ್ಮ ಉರಿಯುವನೆತ್ತಿ ಸುಡುವ ಬಿರು ಬಿಸಿಲುಸುಡು ಸುಡು ಬಿಸಿಲುಬಿಸಿ ಬಿಸಿ ಉರಿಬಿಸಿಲುಕಿಂಚಿತ್ತು ಕಾರಣ ಸಿಕ್ಕರೂಸಾಕು ಕೆಂಡಮಂಡಲನಾಗಿಉರಿದುರಿದು ಉರುಟುವನಿನ್ನ ಸಿಟ್ಟು ಸೆಡವುಗಳಂಥದ್ದೇ ಈ ಬಿಸಿಲು ಶಿವನು ತನ್ನ ಮೂರನೆಯಕಣ್ಣನ್ನು ಒಂದರೆಘಳಿಗೆಗೆತೆರೆದಿದ್ದನೋ ಏನೋ ಎಂಬಂತೆನಿಗಿ ನಿಗಿ ಕೆಂಡದಂತೆಕುದಿಯುತ್ತಿದ್ದಾನೆಎಲ್ಲಾ ಬಣ್ಣಗಳ ನುಂಗಿರುವಬಿಳಿಮೊಗದ ಸೂರ್ಯಥೇಟು ಕೋಪ ತುಂಬಿದನಿನ್ನ ಜೋಡಿ ಕಣ್ಣುಗಳಂತೆ ನಿನ್ನಂತೆಯೇ ಸೂರ್ಯನೋಸೂರ್ಯನಂಥವನು ನೀನೋಆಗಾಗ ಕಾರಣವಿಲ್ಲದೇಉರಿದುರಿದು ಬೀಳುತ್ತೀರಿ ಇಬ್ಬರೂ ಸಮಯ ಸರಿದಂತೆನಕ್ಷತ್ರ ಲೋಕ ಕಣ್ತೆರೆಯುತ್ತಿದ್ದಂತೆತುಂಟ ಮಗುವಿನೊಲುನಿರುಮ್ಮಳವಾಗಿ ಕಣ್ಣುಮುಚ್ಚಿಮುದ್ದಾಗಿ ಮಲಗುವ ಹಾಗೆಕೋಪವುಕ್ಕಿದ ಕಾರಣಗಳಿಗೆನೀವು ಕುರುಡಾಗಿ ಕಿವುಡಾಗಿತಣ್ಣಗಾಗಿಬಿಡುತ್ತೀರಿಏನೂ […]Read More

“ಅಪ್ಪ” ನೆಂಬ ಸ್ನೇಹಿತ

“ಅಪ್ಪ” ನೆಂಬ ಸ್ನೇಹಿತ “ಅಪ್ಪ” ಎಲ್ಲಾ ಹೆಣ್ಣು ಮಕ್ಕಳ ಜೀವನದ ನಿಜವಾದ ಹೀರೋ. ಅಪ್ಪ ಅಂದರೆ ಗತ್ತು ಗಾಂಭೀರ್ಯ, ತಂದೆಯ ತ್ಯಾಗಮಯವಾದ ಜವಾಬ್ದಾರಿಕೆಗೆ ಬೆಲೆ ಕಟ್ಟಲಾಗದು. ಅಪ್ಪ ಆಕಾಶ, ಅಪ್ಪ ಶಕ್ತಿ, ಅಪ್ಪ ಪ್ರೀತಿ, ಅಪ್ಪ ನೆರಳು, ಅಪ್ಪ ಸಾಗರ. ಅಪ್ಪ ಭರವಸೆ…ಮಕ್ಕಳ ನೆರಳಿನಂತೆ ತನ್ನ ಜೀವನವನ್ನು ಸವೆದು ಗುಬ್ಬಚ್ಚಿಯಂತೆ ಮಕ್ಕಳನ್ನು ಕಾಪಾಡಿಕೊಳ್ಳುವ ಜೀವ. ಹೀಗೆ ಅಪ್ಪನ ಬಗ್ಗೆ ಎಷ್ಟೇ ವಿವರಣೆ ಕೊಟ್ಟರು ಕಡಿಮೆಯೇ. ಸಂಸಾರದಲ್ಲಿ ಅಮ್ಮನ ಪ್ರಾತಿನಿಧ್ಯತೆ ಎಲ್ಲಾ ಕಡೆ ಎದ್ದು ಕಾಣಿಸುತ್ತದೆ. ಆದರೆ ಅಪ್ಪ […]Read More

ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ- ೩೦ (ಕೊನೆಯ ಭಾಗ)

ಡಾ. ಅರಕಲಗೂಡು ನೀಲಕಂಠಮೂರ್ತಿ ಯವರು “ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ” ಎಂಬ ಸರಣಿಯ ಮೂಲಕ ಆಫ್ರಿಕಾ ಖಂಡದ ದಲ್ಲಿ ತಮ್ಮ ವೃತ್ತಿಯ ಅನುಭವಗಳನ್ನು ಹಾಗು ಅಲ್ಲಿನ ದೇಶದ ರೀತಿ, ರಿವಾಜು, ಅಲ್ಲಿನ ಉಸಿರುಗಟ್ಟಿಸುವ ಆಡಳಿತ, ಕಂಡಂತಹ ಸಹೃದಯಿಗಳು, ಕಪಟಿಗಳು, ಅವೈಜ್ಞಾನಿಕ ಆಚರಣೆಗಳು, ಅಲ್ಲಿನ ಜನರ ಮೌಢ್ಯತೆ ಹಾಗು ವಿವಿಧ ರೀತಿಯ ಜನರ ಬಗ್ಗೆ ಕಳೆದ ಮೂವತ್ತು ವಾರಗಳಿಂದ ಸಾಹಿತ್ಯಮೈತ್ರಿ ಮೂಲಕ ಓದುಗರೊಡನೆ ಹಂಚಿಕೊಂಡಿದ್ದಾರೆ. ಈ ಸರಣಿಯನ್ನು ಪುಸ್ತಕದ ಮೂಲಕ ಹೊರತರುವ ಯೋಜನೆಯು ಅವರಿಗಿದೆ. ನೀಲಕಂಠಮೂರ್ತಿ ಯಂತಹ ಸಜ್ಜನರನ್ನು ಸಾಹಿತ್ಯಮೈತ್ರಿಗೆ […]Read More

ಹನಿಗವಿತೆಗಳು – ಡಾII ಪರಮೇಶ್ವರಪ್ಪ ಕುದರಿ – 18

ಸೌಂದರ್ಯ ನಿಸರ್ಗ ಸೌಂದರ್ಯನೋಡಿ ನೀ ಮೈಮರೆತಿದ್ದೆಚಪ್ಪಾಳೆ ತಟ್ಟಿ ಖುಷಿ ಪಟ್ಟಿದ್ದೆ!ನಾನು ಮೈ ಮರೆತಿದ್ದೆಚಪ್ಪಾಳೆ ತಟ್ಟಿದ್ದೆನಿಸರ್ಗ ಸೌಂದರ್ಯ – ನೋಡಿ ಅಲ್ಲನಿನ್ನ ಮುಗ್ಧ ಸೌಂದರ್ಯ – ನೋಡಿ!! ಕುರುಡ ಅವಳುನಕ್ಕಾಗಲೆಲ್ಲಫಳ ಫಳ ಹೊಳೆವಹಲ್ಲುಗಳ ಹೊಳಪಿಗೆಕಣ್ಣುಗಳ ಮಿಂಚಿಗೆಎಷ್ಟೋ ಸಾರೆ ನಾಕುರುಡನಾಗಿದ್ದೇನೆ!! ಎತ್ತ? ಸಿಹಿ ನೆನಪುಗಳನ್ನುಸ್ಮರಿಸುತ್ತದಿನ ಕಳೆಯುತ್ತಿರುವೆಎಣಿಸುತ್ತನನ್ನ ಮನಸೋ ಬರಿನಿನ್ನ ಸುತ್ತನೀ ಹೊರಟಿರುವೆನನ್ನ ಬಿಟ್ಟು ಎತ್ತ! ಕನಸಿನೂರಿಗೆ ಕನಸುಗಳನು ಹೊತ್ತುಸಾಗುತಿರುವೆದೂರದ ಕನಸಿನೂರಿಗೆಅಲ್ಲಿ ಸ್ವಚ್ಛಂದವಾಗಿಇರಬಹುದಂತೆ!ಹೆಜ್ಜೆ ಹಾಕುತ್ತಿದ್ದೇನೆಅವಳೊಂದಿಗೆನಾಳೆಯ ಬದುಕಬಂಡಿ ಎಳೆಯಲು!! ಡಾII ಪರಮೇಶ್ವರಪ್ಪ ಕುದರಿ ಚಿತ್ರಕೃಪೆ: https://webneel.com/Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 17

ಹಿಂದಿನ ಸಂಚಿಕೆಯಿಂದ… ಕಾವಲುಗಾರನಿಗೆ ಆಶ್ಚರ್ಯವಾಯಿತು. ಅದೊಂದು ಸುರಂಗ ಮಾರ್ಗ. ಮಂದ ಪ್ರಕಾಶದ ದೀಪದ ಬೆಳಕಿನಲ್ಲಿ ಸುರಂಗದ ಒಳಗಿನ ಒಳ ಭಾಗಚೆನ್ನಾಗಿ ಕಾಣುತ್ತಿರಲಿಲ್ಲ. ಆದರೆ ಸುರಂಗವು ಕೋಟೆಯ ಗೋಡೆಯ ಒಳಗೆ ಹುತ್ತದೊಳಗಿನ ಬಿಲಗಳಂತೆ ಬಹಳ ದೂರದವರೆಗೆ ಹೋಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಹೂಣರು ಅರಮನೆಯನ್ನೇನೋ ಆಕ್ರಮಿಸಿಕೊಂಡಿದ್ದರು. ಆದರೆ ಈ ಗುಪ್ತ ಸುರಂಗದ ವಿಷಯ ಅವರಿಗೆ ಗೊತ್ತಾಗಿರಲಿಲ್ಲ. ಗುಹನು ಮುಸಿ ಮುಸಿ ನಗುತ್ತ ಆ ಬಿಲದೊಳಕ್ಕೆ ಪ್ರವೇಶ ಮಾಡಿ ಕಾವಲುಗಾರನೂ ಹಿಂಬಾಲಿಸುವಂತೆ ಕೈ ಬೀಸಿದನು. ಸುರಂಗ ಅಷ್ಟೇನೂ ಕಿರಿದಾಗಿರಲಿಲ್ಲ. ಇಬ್ಬರು ಜೊತೆಯಾಗಿ […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 35

ಯಾವುದೇ ಕ್ರಿಮಿ ಕೀಟ ಹಕ್ಕಿಗಳಿಗಾಹಾರಹಾವುಗಳು ಕಪ್ಪೆಗಳ ತಿಂದು ಜೀವಿಪುವುಹಾವು ಮೀನುಗಳೆಲ್ಲ ಗರುಡ ಪಕ್ಷಿಯ ಬಾಯ್ಗೆಜೀವ ಜೀವಕೆ ಉಣಿಸು_ || ಪ್ರತ್ಯಗಾತ್ಮ || ಇದು ಗಂಗೆ, ಇದು ಯಮುನೆ, ಇದುವೆ ಗೋದಾವರಿಯು,ಇದು ಸಿಂಧು, ಕಾವೇರಿ-ನರ್ಮದಾ-ತಪತಿಇದು ತುಂಗೆ, ಇದು ಭದ್ರೆ-ಮನವು ನಿರ್ಮಲವಿರಲುಉದಕವೆಲ್ಲವು ತೀರ್ಥ- || ಪ್ರತ್ಯಗಾತ್ಮ || ಏನೇನೋ ನೆಪ ಹೇಳಿ ಇನಿಯನಿಂ ಹಣ ಪಡೆದುಮನೆಯ ಮುನ್ನಡೆಸುತ್ತ ಅದರೊಳಗೆ ಮಿಗಿಸಿಮಾನ ಹೋಗುವ ವೇಳೆ ಗಂಡನಿಗೆ ನೆರವಪ್ಪಮಾನವತಿ ಸತಿ ಲೇಸು- || ಪ್ರತ್ಯಗಾತ್ಮ || ಸತಿ ಸುತರು ಒಂದಾಗಿ ದೂರದೂರಿಗೆ ಹೋಗಿಅತಿ […]Read More