ಕೇಳೇ ಗೆಳತಿ…..

ಕೇಳೇ ಗೆಳತಿ….. ಸಾಹಿತ್ಯ ಮೈತ್ರಿ ಇವಳು ಸಹನನ್ನ ಗೆಳತಿ…..ಅದೆಷ್ಟು ಸೊಗಸಾದ ಗೆಳತನಅವಳ ಜೊತೆಗಿನ ನನ್ನ ಒಡನಾಟಎಷ್ಟು ಮಧುರ…. ಈಗ ಅವಳಿಗೆ ತುಂಬಿದೆ ವರ್ಷಆ ಹರುಷವ ಹಂಚುವೆ ನಾ ನಿನ್ನ ಜೊತೆ…. ಎಷ್ಟು ಸ್ವಾರಸ್ಯ ಅವಳೊಡನಾಟದಲ್ಲಿ…ನೋವು ನಲಿವುಗಳ ಸಂಗಮ.ಬಗೆ ಬಗೆಯ ಲೇಖನ ಕವಿತೆ , ಶುಭಾಶಯಗಳಆಗರ, ಅವಳ ಒಡಲು.. ಒಂದಕ್ಕಿಂತ ಒಂದು ಭಿನ್ನಚಿತ್ರಗಳಂತೂ ಅವಳ ಭಾವಗಳಸಾರವನ್ನೇ ಸಾರುತ್ತವೆ….. ಗೆಳತಿ…ಸಾಹಿತ್ಯ ಮೈತ್ರಿಯ ಪರಿಚಯವಾದದ್ದೇನಿನ್ನಿಂದ….ಅವಳ ಸಹವಾಸ ಮಾಡಿಸಿದ ನಿನಗೆಅವಳ ಕತೃ ಗಳಿಗೆ ನನ್ನ ನಮನಇನ್ನು ಮುಂದೆ ಮುಂದೆ ಹರಡಲಿಅವಳ ಕೀರ್ತಿಪತಾಕೆ…ಎಂಬ ಹಾರೈಕೆಅವಳ […]Read More

ಪಾರು ಹೇಳಿದ ಕಥೆ – 7

ಆಗುವುದೆಲ್ಲಾ ಒಳ್ಳೆಯದಕ್ಕೆ ವೀಣಾ, ಈಗ ಸಿರ್ಸಿಸಿಯಲ್ಲಿದ್ದಾಳೆ. ಮಾರಿಕಾಂಬಾ ಜಾತ್ರೆಗೆ, ಪಾರು ಬಾ ಎಂದು ಒಂದೇ ಸಮನೆ ಕರೆದಿದ್ದಳು.ಪಾರೂಗೂ ಸಂಭ್ರಮ ಅವಳು ಮಕ್ಕಳೊಡನೆ ಸಿರ್ಸಿಗೆ ಹೊರಟಳು. ಅವಳು ಹೋದ ದಿನದಿಂದ ಜಾತ್ರೆಯ ಸಂಭ್ರಮ,ತೇರು,ಜನ ಜಂಗುಳಿ, ಇದ್ದಕ್ಕಿದ್ದಂತೆ ಮೋಡ ಆವರಿಸಿ ಅಕಾಲ ಭಾರಿ ಮಳೆ ಗಾಳಿ, ಸಿಡಿಲು ಗುಡುಗು ಪ್ರಾರಂಭವಾಯಿತು. ಜನ ದಟ್ಟಣೆ ಕಡಿಮೆಯಾಯಿತು. ಪಾರುವು ವೀಣಾಳ ಮನೆ ಸೇರಿದಳು. ಆ ಮಳೆಗೆ ಜಾತ್ರೆಗೆ ಹಾಕಿದ್ದ ಸಣ್ಣಪುಟ್ಟ ಅಂಗಡಿ-ಮುಗ್ಗಟ್ಟುಗಳೆಲ್ಲಾ ಅಸ್ತವ್ಯಸ್ತವಾಯಿತು. ನೋಡುನೋಡುತ್ತಿದ್ದಂತೆ ಜಾತ್ರೆಯ ಗದ್ದುಗೆ ಮಂಟಪಕ್ಕೆ ಹಾನಿಯಾಯಿತು. ಇದರಿಂದ ಜನರು […]Read More

ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ- ೨೭

–ಬ್ರಿಜ್ (Bridge) ಎಂಬ ಇಸ್ಪೀಟ್ ಆಟ!– ಹವ್ಯಾಸಗಳು ಒಂದಲ್ಲ ಒಂದು ರೀತಿಯಲ್ಲಿ ಅನೇಕರ ಮೈಕೈಗಳಿಗೆ ಅಂಟಿಕೊಂಡೇ ಇರುತ್ತವೆ. ಕೆಲವು ಉತ್ತಮ, ಇನ್ನು ಕೆಲವು ಉತ್ತಮ ಅಲ್ಲದವು – ಸಮಾಜದ ಕಣ್ಣಲ್ಲಿ! ಉದಾಹರಣೆಗೆ ಒಬ್ಬ ವ್ಯಕ್ತಿ ತನ್ನ ವೃತ್ತಿಯ ಜೊತೆಗೆ, ಹಾಡುವಂಥ ಕಂಠ ಹೊಂದಿದ್ದು ಅದನ್ನು ಕೆಲವು ಕಾರ್ಯಕ್ರಮಗಳಲ್ಲಿ ಉಪಯೋಗ ಮಾಡುತ್ತಿದ್ದರೆ ಅದು ಆತನ ಉತ್ತಮ ಹವ್ಯಾಸ. ಹಾಗೆಯೇ ಕಥೆ, ಕವನ ಮತ್ತು ಇನ್ನಿತರ ಬರವಣಿಗೆಯ ಹವ್ಯಾಸ ಇರಬಹುದು. ಮೈದಾನಗಳಲ್ಲಿ ಆಡುವಂತಹ ಆಟಗಳಿರಬಹುದು; ಇವು ಉತ್ತಮ. ಅದೇ ಮಾದರಿಯಲ್ಲಿ […]Read More

ಸಾಹಿತ್ಯಮೈತ್ರಿಗೆ ವರುಷ ತುಂಬಿತು

ಸಾಹಿತ್ಯ ಮೈತ್ರಿ ಗೆ ವರ್ಷ-ಹರ್ಷ! ಸಾಹಿತ್ಯ ಮೈತ್ರಿಯು ವರ್ಷಕ್ಕೆ ಕಾಲಿಟ್ಟು ಮನೆಯಂಗಳದಿಂದ ಹೊರ ಬಂದು ಕನ್ನಡಿಗರ ಮನದಂಗಳಕ್ಕೆ ಅಂಬೆಗಾಲಿಟ್ಟಿದೆ. ಈ ‘ಸಾಹಿತ್ಯ ಮೈತ್ರಿ’ ಆನ್ಲೈನ್ ಪತ್ರಿಕೆಗೆ ಒಂದು ವರ್ಷವಾಗಿದೆ. ಈ ಪತ್ರಿಕೆಯ ರುವಾರಿ ಹಾಗೂ ಲೇಖಕರೂ ಆದ ಕು.ಶಿ ಚಂದ್ರಶೇಖರ್ ಅವರ ಶ್ರಮವನ್ನು ಈಗ ಇಲ್ಲಿ ಶ್ಲಾಘಿಸಲೇಬೇಕು. ವೃತ್ತಿಗಷ್ಟೇ ಸೀಮಿತವಾಗದೇ ಪ್ರವೃತ್ತಿಯನ್ನಾಗಿ ಈ ಪತ್ರಿಕೆಯನ್ನು ಆರಂಭಿಸಿದ್ದಾರೆ. ಈ ಪತ್ರಿಕೆಗೆ ಶೀರ್ಷಿಕೆಯನ್ನು ಆರಿಸುವ ಹಂತದಿಂದ, ಕನ್ನಡದ ಸಾಹಿತ್ಯಲೋಕದ ದಿಗ್ಗಜ ಎಚ್ ಎಸ್ ವೆಂಕಟೇಶಮೂರ್ತಿ ಅವರಿಂದ ಉದ್ಘಾಟಿಸುವ ಸಂಭ್ರಮ (ಹೋದ […]Read More

ಹನಿಗವನಗಳು – ಶ್ರೀಧರ ಕಾಡ್ಲೂರು

ದಾರಿ ನಿಮ್ಮ ಜೀವನದ ಪತನಕ್ಕೆನಾಂದಿ ಹಾಡಿದದಾರಿ.ನಿಮ್ಮಬೇಜವಾಬ್ದಾರಿ. ಧ್ಯಾನ ಬುದ್ದನ ಸಿದ್ಧಾಂತ ಪಾಲಿಸುವವರುಕೇವಲ ಐ ಟಿಉದ್ಯೋಗಿಗಳೆ.ದಿನಕ್ಕೆ ಹನ್ನೆರೆಡು ತಾಸುಅವನ ಹಾಗೆ ಕೆಲಸಕೂತಲ್ಲೆ… ಸಿದ್ಧಾಂತ ನಮ್ಮ ಮನೆಯಲ್ಲೂ ಉಂಟುಬುದ್ದನ ದೊಡ್ಡ ಕಲ್ಲಿನಮೂರ್ತಿ.ಅದರ ಮುಂದೆ ಅವನ ಹಾಗೆಗಟ್ಟಿಯಾಗಿ ಹನ್ನೆರೆಡು ತಾಸು ಕೂತೂನಾನು ಕಾರ್ಯಪ್ರವೃತ್ತಿ. ತೀರ್ಪು ಮಹಿಳೆ ಅಂದರೆಎಂದೆಂದಿಗೂ ನಯ,ವಿನಯ.ಗಂಡಸರದ್ದು,ಕೇವಲ ಮೂಕಾಭಿ-ನಯ. ಶ್ರೀಧರ ಕಾಡ್ಲೂರುRead More

ಪುಸ್ತಕ ಓದುವವರು ಖಂಡಿತ ಇದ್ದಾರೆ! – ಅನಂತ್ ಕುಣಿಗಲ್

ಪುಸ್ತಕ ಓದುವವರು ಕಡಿಮೆಯಾಗಿರಬಹುದು. ಆದರೆ ಪುಸ್ತಕ ಓದುವವರೇ ಇಲ್ಲ ಎನ್ನುವ ದೋರಣೆಯನ್ನು ನಾನಂತು ಒಪ್ಪಿಕೊಳ್ಳಲಾರೆ. ಪ್ರಿಂಟೆಡ್ ಪುಸ್ತಕಗಳನ್ನು ಪ್ರೀತಿಯಿಂದ ಓದುವವರು ಖಂಡಿತ ಇದ್ದಾರೆ ಎನ್ನುವುದಕ್ಕೆ ನಾನು ಮತ್ತು ನನ್ನ ಪುಸ್ತಕಗಳೇ ಸಾಕ್ಷಿ. ಬಹುಶಃ ಓದುವವರನ್ನು ತಲುಪುವಲ್ಲಿ ಮತ್ತು ನಮ್ಮ ಸಾಹಿತ್ಯದ ಗುಣಮಟ್ಟವನ್ನು ಕಾಪಾಡಿಕೊಳ್ಳುವುದರಲ್ಲಿ ನಾವು ಎಡವುತ್ತಿರಬಹುದು. ಮತ್ತು ಓದುಗರು ಬಿಡುವಿಲ್ಲದ ಕೆಲಸಗಳಲ್ಲಿ ನಿರತರಾಗಿ, ಓದುವ ಆಸಕ್ತಿಯನ್ನು ಸ್ವಲ್ಪಮಟ್ಟಿಗೆ ಕಳೆದುಕೊಂಡಿರಬಹುದು! ಕೆಲವು ಹಿರಿಯ ಲೇಖಕರನ್ನು ಸೇರಿಸಿಕೊಂಡು ಯುವಬರಹಗಾರರ ಪುಸ್ತಕಗಳ ಮೊದಲ ಮುದ್ರಣ ಪ್ರತಿಗಳ ಸಂಖ್ಯೆ ಒಂದು ಸಾವಿರಕ್ಕೆ ಇಳಿದಿದೆ. […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 32

ಶಿವ ಕೊಟ್ಟ ಜೋಳಿಗೆಯ ಗೂಟಕ್ಕೆ ತಗುಲಿಸಿರೆಶಿವ ಬಂದು ಉಣಲಿಕ್ಕಿ ತಣಿಸುವನೆ ಹೇಳುಶಿವ ನಾಮ ಧ್ಯಾನದಲಿ ಊರೂರು ತಿರಿದು ಬರೆಶಿವನು ಕರುಣಿಪನೂಟ- || ಪ್ರತ್ಯಗಾತ್ಮ || ಮೃಗರಾಜ ತಾನೆಂದು ಗುಹೆಯೊಳಗೆ ಮಲಗಿರಲುಮೃಗಗಳೇ ತಾ ಬಂದು ಬಾಯ್ಗೆ ಬೀಳುವುವೆ?ಮೃಗರಾಜನಾದರೇಂ ಬೇಟೆಯಾಡಲೆ ಬೇಕುಜಗದೊಳಗೆ ಶ್ರಮಕೆ ಬೆಲೆ- || ಪ್ರತ್ಯಗಾತ್ಮ || ಬೇಸಿಗೆಯ ಬೇಗೆಯನು ತಾಳಲಾರದೆ ಬರಿದೆಘಾಸಿ ಪಟ್ಟರೆ ಗಾಳಿ ಬೀಸುವುದೆ? ಹೇಳುಬೀಸಣಿಗೆಯನು ಹಿಡಿದು ಬೀಸಿಕೊಂಡರೆ ಮಾತ್ರಬೀಸುವುದು ಗಾಳಿಯದು- || ಪ್ರತ್ಯಗಾತ್ಮ || ದಿನದಿನವು ಇನಿತಿನಿತು ಅಭ್ಯಾಸ ಮಾಡುತಿರೆಕೊನೆಗೆ ದಡ್ಡನು ಕೂಡ ವಿದ್ವಾಂಸನಹನುದಿನ […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 14

ಹಿಂದಿನ ಸಂಚಿಕೆಯಿಂದ… ಉಜ್ಜಯಿನಿ ಅಥವಾ ಪಾಟಲಿಪುತ್ರದ ಹಾಗೆ ವಿಶಾಲವಲ್ಲದಿದ್ದರೂ ಈ ಕಪೋತಕೂಟವು ಪರಿಶುದ್ಧವೂ ಸುಂದರವೂ ಆದ ನಗರವೆನ್ನಲೇಬೇಕು ಎಂದು ಚಿತ್ರಕನಿಗೆ ನಗರ ಪ್ರದಕ್ಷಿಣೆಯ ಸಮಯದಲ್ಲಿ ಅನ್ನಿಸಿತು. ಅವನು ತನ್ನ ಸೈನಿಕ ಜೀವನದ ಓಡಾಟದಲ್ಲಿ ಅನೇಕ ಸ್ಥಳಗಳನ್ನು ನೋಡಿದ್ದನು. ಆದರೆ ಚಿಕ್ಕದಾದ ಏರುತಗ್ಗುಗಳಿಂದ ಕೂಡಿದ ಕಲ್ಲಿನ ಈ ನಗರವು ಅವನ ಮೆಚ್ಚುಗೆಗೆ ಪಾತ್ರವಾಯಿತು. ಆದರೆ ಈ ಜಾಗದಲ್ಲಿ ಬಹಳ ಕಾಲ ಇರಲು ಸಾಧ್ಯವಿಲ್ಲ. ಬಹಳ ದಿನವಿದ್ದರೆ ಬಂಧನಕ್ಕೊಳಗಾಗುವ ಭಯವಿದೆ. ಇದೇ ಊರಿನಲ್ಲಿ ಆ ಮೂವರೂ ಇದ್ದಾರೆ. ಅದೂ ಅಲ್ಲದೆ […]Read More

ವಿಶ್ವ ರಂಗಭೂಮಿ ದಿನದ ಸಂದೇಶ – 2022

ಸಂದೇಶಕಾರರು : ಪೀಟರ್ ಸೆಲ್ಲರ್ಸ್ಕನ್ನಡ ಅನುವಾದ – ಬಿ. ಸುರೇಶ ಪೀಟರ್ ಸೆಲ್ಲಾರ್ಸ್ ಅಮೇರಿಕನ್ ರಂಗಭೂಮಿ ನಿರ್ದೇಶಕರಾಗಿದ್ದು, ವಿಶ್ವ ರಂಗಭೂಮಿ ದಿವಸದ ಅಂಗವಾಗಿ ಸಮಸ್ತ ರಂಗಕಲಾವಿದರಿಗೆ ತಮ್ಮ ಸಂದೇಶವನ್ನು ಕಳಿಸಿದ್ದು ಅದನ್ನು ಖ್ಯಾತ ರಂಗನಿರ್ದೇಶಕ ಬಿ. ಸುರೇಶ್ ರವರು ಕನ್ನಡದಲ್ಲಿ ಅನುವಾದಿಸಿದ್ದಾರೆ. ಪ್ರಿಯ ಸಂಗಾತಿಗಳೇ, ಇಡೀ ಜಗತ್ತು ಕ್ಷಣಕ್ಷಣದ ಸುದ್ದಿ ಪ್ರವಾಹದಲ್ಲಿ ಮುಳುಗಿರುವಾಗ, ಸೃಜನಶೀಲವೃತ್ತಿಯವರಾದ ನಾವೆಲ್ಲರೂ ನಮ್ಮ ನೈಜ್ಯ ಶಕ್ತಿ , ಸಾಮರ್ಥ್ಯ, ದೃಷ್ಟಿಕೋನ ಬಳಸಿ ಈ ಮಹಾಕಾಲದ, ಮಹಾ ಬದಲಾವಣೆಯ ಪರ್ವದ, ಮಹಾನ್ ತಿಳುವಳಿಕೆಯ, ಮಹಾನ್ […]Read More

ವಿಶ್ವ ವಿಸ್ಮಯ -4 – ನಕ್ಷತ್ರ ಪುಂಜ

ನಕ್ಷತ್ರ ಪುಂಜ ವಿಶ್ವದ ಸೃಷ್ಟಿ ಸುಮಾರು 12 ರಿಂದ 20 ಬಿಲಿಯನ್ ಅಥವಾ 1200 – 2000 ಕೋಟಿ ವರ್ಷಗಳ ಹಿಂದೆ ಪ್ರಾರಂಭವಾಗಿರಬೇಕೆಂದು ವಿಜ್ಞಾನಿಗಳು ತರ್ಕಿಸಿದ್ದಾರೆ. ಇತ್ತೀಚಿನ ಸಂಶೋಧನೆಗಳ ನಂತರ ವಿಶ್ವದ ವಿಕಾಸದ ಆರಂಭ 1375 ಬಿಲಿಯನ್ ವರ್ಷಗಳ ಹಿಂದೆ ಪ್ರಾರಂಭವಾಗಿರಬೇಕೆಂದು ಮರುತರ್ಕಿಸಿದ್ದಾರೆ. ವಿಶ್ವದ ಆರಂಭದ ಕ್ಷಣಗಳನ್ನು ಮಹಾಸ್ಫೋಟವೆಂದು ಕರೆದಿದ್ದಾರೆ. ಒಂದು ಸೂಕ್ಶ್ಮಾತಿ ಉಪಕರಣ ಪ್ರಭಾಣು ಪ್ರೋಟಾನ್ ಸ್ಪೋಟಗೊಂಡು ಕೆಲವೇ ಸೆಕೆಂಡುಗಳಲ್ಲಿ ಅಗಾಧ ಶಾಖದಿಂದ ಕುದ್ದು 30 ನಿಮಿಷಗಳಲ್ಲಿ ಕುದಿಯುತ್ತಿರುವ ದೊಡ್ಡ ಪ್ಲಾಸ್ಮಾದ ಉಂಡೆಯಾಗಿ ಕ್ರಮೇಣ ಶಾಖವನ್ನು […]Read More