ಬದುಕಿನ ಸುಂಕ

ಬದುಕಿನ ಸುಂಕ ಸುಮ್ಮನೆ ರೂಪಗೊಳ್ಳದೀ ಬದುಕುಸುಂಕ ಕಟ್ಟಲೇಬೇಕು ಪ್ರತೀ ಹೊತ್ತುನಮ್ಮ ನಮ್ಮ ವ್ಯವಹಾರಕ್ಕೆ ನಾವೇ ಹೊಣೆಗಾರರುದೂಷಿಸುವಂತಿಲ್ಲ ಯಾರಿಗೂ ತಪ್ಪಿಸಿಕೊಳ್ಳುವಂತಿಲ್ಲ ಸುಂಕದ ಬಾಬ್ತುಇಂದಿಲ್ಲ ನಾಳೆಯಾದರೂ ಕಟ್ಟಲೇಬೇಕು ದುಪ್ಪಟ್ಟು,ಜಾಣ್ಮೆಯ ನಡೆಗೆ ವಿನಾಯಿತಿಘೋಷಿಸಿದರು ಪರಿಶೀಲನೆಗೊಬ್ಬ ಲೆಕ್ಕಿಗನಿರುವ,ಬರೆದಿಟ್ಟುಕೊಂಡಿರುವ ಎಲ್ಲದರ ಎಲ್ಲರ ಲೆಕ್ಕಾಚಾರವ ಬದುಕೊಂದ ಬದುಕೋಣು ಬಾರಹೇಗಾದರೂ ಸರಿಯೇ ಬದುಕಿಬಿಡುವ ಎನ್ನುವಂತಿಲ್ಲ,ಗಮನಿಸುತಲೇ ಇದ್ದಾನೆ ಓರ್ವ ತೀರ್ಪುಗಾರ ಸುಂಕಕಂಜದಿರು ಮನವೇಸರಿಯಾದ ಸಮಯಕ್ಕೆ ಪಾವತಿಸಿದರೆಅದುವೇ ಪುರಸ್ಕಾರ… ಪವನ ಕುಮಾರ ಕೆ. ವಿ.ಬಳ್ಳಾರಿRead More

ಸುರಕ್ಷಾ ಜಾಗೃತಿ – 7

ಸುರಕ್ಷಾ ಜಾಗೃತಿ – 7(ನಮ್ಮ ಸುರಕ್ಷೆಯ ಬಗ್ಗೆ ತಿಳಿದುಕೊಳ್ಳಬೇಕಾದಂತಹ ಅಂಶಗಳು) ಅಪರಿಚಿತರನ್ನು ಅನುಮಾನಿಸು ಸುರಕ್ಷತೆಯ ಪಾಠದಲ್ಲಿ ಇದು ಕೂಡ ಒಂದು ಮುಖ್ಯವಾದ ವಾಕ್ಯವಾಗಿದೆ ಮತ್ತು ಇದನ್ನು ಯಾವಾಗಲೂ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದಂತೆ ನೆನಪಿನಲ್ಲಿಟ್ಟುಕೊಳ್ಳತಕ್ಕದ್ದು. ನಿಮಗೆಲ್ಲರಿಗೂ ನಿಮ್ಮ ಬಾಲ್ಯದಲ್ಲಿ ತಂದೆ ತಾಯಂದಿರು ನೀವು ಶಾಲೆಗೆ ಹೋಗುವಾಗ ಹೇಳುತ್ತಿದ್ದಂತಹ ಬುದ್ದಿಮಾತು ಇಂದಿಗೂ ನೆನಪಿದೆಯಲ್ಲವೇ? ಅದೇನಂದರೆ ಯಾರೇ ಆದರೂ ಏನಾದರೂ ಚಾಕೋಲೇಟ್ ಕೊಟ್ಟರೆ ತೆಗೆದುಕೊಳ್ಳಬಾರದು. ಯಾರಾದರೂ ಕರೆದರೆ ಅಥವಾ ಮನೆಗೆ ಬಿಡುತ್ತೇನೆ ಅಂದರೆ ಹೋಗಬಾರದು. ಇಂತಹ ಹಲವಾರು ಬುದ್ದಿಮಾತುಗಳನ್ನು ದಿನನಿತ್ಯ ನಮಗೆಲ್ಲರಿಗೂ […]Read More

ಕವಿತೆಯ ಸ್ಫೂರ್ತಿಸೆಲೆ

ಕವಿತೆಯ ಸ್ಫೂರ್ತಿಸೆಲೆ ಮನದ ಗೂಡಲಿ ಭಾವವು ಅವಿತಾಗಮನಸು ಆ ಭಾವದಲಿ ಬಂಧಿಯಾದಾಗಭಾವದುಯ್ಯಾಲೆಯಲಿ ಮನ ಜೀಕಿದಾಗ..ಕವಿತೆಯೊಂದು ಮನದಿ ಮೂಡಿದೆ!! ಕನಸುಗಳ ಚಿತ್ತಾರದಿ ಮನವಿರಲುಮನದ ಮಾತು ಹೃದಯವರಿತಿರಲುನೂರಾಸೆಯ ಭಾವವೇ ಕಣ್ಣಲಿರಲು..ಕಾವ್ಯವು ಮನದಾಗಸದಿ ಚಿತ್ತೈಸಿದೆ!! ಬಾಳಿನ ನವಭಾವಕೆ ನಾಂದಿಯ ಹಾಡಿಸಂತಸವದು ಕಂಗಳಲಿ ಮನೆಮಾಡಿಪದಭಂಡಾರವೇ ಮನೋನ್ಮಣಿಯಲಿ ಮೂಡಿಕವನವೊಂದು ಹೃದಯದಲಿ ಉದಯಿಸಿದೆ!! ಮನದ ಕಂಗಳಲಿ ನಲಿವಿನ ನೆಲೆಯಿರಲುನಿರ್ಜೀವದ ಭಾವಗಳಿಗೆ ಜೀವಸೆಲೆಯಿರಲುಸೋತ ಚಿಂತನೆಗೆ ಸವಿಸ್ಪೂರ್ತಿಯ ಅಮಲಿರಲು..ಕವಿತೆಯದು ಅಂತರಾಳವ ತೆರೆದಿದೆ!! ಸುಮನಾ ರಮಾನಂದಮುಂಬೈRead More

ಆಹಾ, ಇಲ್ಲೆ ಸ್ವರ್ಗ…!

ಆಹಾ, ಇಲ್ಲೆ ಸ್ವರ್ಗ…! ಬೆಳಗಿನ ವಾಯುವಿಹಾರ ಇಂದೇಕೋ ಬಹಳ ಆಪ್ತವೆನಿಸಿತು, ಬೆಚ್ಚಗಿನ ಸೂರ್ಯನ ಕಿರಣಗಳು, ವಿಶಾಲವಾದ ಹಸಿರಿನ ತೋಪನ್ನು ಸೀಳಿ, ನನ್ನ ಮೈಮನದ ಮೇಲೆ ಚೈತನ್ಯದ ಬೆಳಕು ಬೀರಿದವು, ಮುಖವೆತ್ತಿ, ಕಣ್ಣು ಮುಚ್ಚಿ, ಆ ಹಿತವನ್ನು ಸವಿದೆ, ಅಲ್ಲಲ್ಲಿ ಹಕ್ಕಿಗಳ ಕಲರವ, ಸಣ್ಣದಾಗಿ ಬೀಸುವ ಶೀತಗಾಳಿಗೆ ಕೈ ಚಾಚಿ, ಮೈ ಒಡ್ಡ ಬೇಕೆಂಬ ಬಯಕೆ ಮೂಡಿತು, ಹಾಕಿದ ‘ಹೂಡಿ’ ಬೇಡವಾಗಿತ್ತು….. ಇಂತಹ ಹಸಿರು ಸ್ವರ್ಗದಲ್ಲಿ ನಾ ಇರುವುವೆನೆಲ್ಲ ಎಂದು ಹೆಮ್ಮೆಯ ಭಾವ ಮೂಡಿತು. ಹೌದು ನಾನಿರುವ ಊರು, […]Read More

ಭಾರತದಲ್ಲಿ ವಾಣಿಜ್ಯ ಶಿಕ್ಷಣದ ಪ್ರಯೋಜನ

ಭಾರತದಲ್ಲಿ ವಾಣಿಜ್ಯ ಶಿಕ್ಷಣದ ಪ್ರಯೋಜನ ಭಾರತದಲ್ಲಿ ವಾಣಿಜ್ಯ ಶಿಕ್ಷಣವು ವಿದ್ಯಾರ್ಥಿಗಳಿಗೆ, ವಿಶೇಷವಾಗಿ ವ್ಯಾಪಾರ, ಹಣಕಾಸು, ಅರ್ಥಶಾಸ್ತ್ರ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವವರಿಗೆ ಗಮನಾರ್ಹ ಪ್ರಯೋಜನಗಳನ್ನು ನೀಡುತ್ತದೆ. ಇಲ್ಲಿ ಕೆಲವು ಪ್ರಮುಖ ಪ್ರಯೋಜನಗಳಿವೆ: ಉದ್ಯಮಶೀಲತೆ: ವಾಣಿಜ್ಯ ಶಿಕ್ಷಣವು ವಿದ್ಯಾರ್ಥಿಗಳಿಗೆ ವ್ಯವಹಾರ ಜ್ಞಾನವನ್ನು ಒದಗಿಸುತ್ತದೆ, ತಮ್ಮದೇ ಆದ ಉದ್ಯಮಗಳನ್ನು ಪ್ರಾರಂಭಿಸಲು ಮತ್ತು ನಿರ್ವಹಿಸಲು ಅವರನ್ನು ಸಿದ್ಧಪಡಿಸುತ್ತದೆ.ಸರ್ಕಾರಿ ಸೇವೆಗಳುಃ ವಿದ್ಯಾರ್ಥಿಗಳು ಭಾರತೀಯ ಆಡಳಿತಾತ್ಮಕ ಸೇವೆಗಳು (ಐಎಎಸ್) ಭಾರತೀಯ ವಿದೇಶಾಂಗ ಸೇವೆಗಳು (ಐಎಫ್ಎಸ್) ಅಥವಾ ಬಲವಾದ ವ್ಯಾಪಾರ ಮತ್ತು ಆರ್ಥಿಕ ತಿಳುವಳಿಕೆಯ […]Read More

ಕಾಗಿನೆಲೆಯ ಕನಕದಾಸರು

ಕಾಗಿನೆಲೆಯ ಕನಕದಾಸರು ಭಕ್ತಿ ಭಾವಕೆ ಅಜರಾಮರದ ಹೆಸರುಕನ್ನಡ ಭಾಷೆಯ ವಿಶಿಷ್ಟ ಕೀರ್ತನೆಕಾರರುಯುದ್ಧದಿ ಸೋತ ದಾಸ ಪರಂಪರೆಯ ಹರಿದಾಸರು ಕಾಗಿನೆಲೆಯ ವಾಸಿ ನಮ್ಮ ಶ್ರೀ ಕನಕದಾಸರು ಹಾವೇರಿಯ ಬಾಡ ಗ್ರಾಮದ ತಿಮ್ಮಪ್ಪ ನಾಯಕಚಿನ್ನದಂತ ಮಗನ ಹೆತ್ತರು ಬಚ್ಚಮ್ಮ ಬೀರಪ್ಪನಾಯಕವಿಜಯನಗರ ಸಾಮ್ರಾಜ್ಯದ ಗಂಡೆದೆಯ ದಂಡನಾಯಕತಿರುಪತಿ ತಿಮ್ಮಪ್ಪನ ಆಶೀರ್ವಾದದ ಕುಲದೀಪಕ ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರಾಗಿಉಡುಪಿಯ ಕನಕನ ಕಿಂಡಿಯ ರೂವಾರಿಯಾಗಿಕೃಷ್ಣನ ಪ್ರೀತಿಯ ಭಕ್ತರಾದರು ಲೋಕ ಕಲ್ಯಾಣಕ್ಕಾಗಿಜಾತಿ ಪದ್ಧತಿಯ ತಾರತಮ್ಯ ತಿರಸ್ಕರಿಸಿದರು ಮನುಕುಲಕ್ಕಾಗಿ ಕಾಗಿನೆಲೆ ಆದಿಕೇಶವರಾಯರ ಅಂಕಿತದಲಿಕೀರ್ತನೆಗಳ ರಚಿಸಿ ಹಾಡಿದರು ಕೃಷ್ಣನ ಸ್ಮರಣೆಯಲಿ […]Read More

ವಿಭಿನ್ನ ಕರಕುಶಲ ಕಲಾವಿದ ಜಗದೀಶ್ ಭಾವಿಕಟ್ಟಿ

ವಿಭಿನ್ನ ಕರಕುಶಲ ಕಲಾವಿದ ಜಗದೀಶ್ ಭಾವಿಕಟ್ಟಿ ಜನಪದ ಕರಕುಶಲ ಕಲೆಗಳು ತಲೆತಲಾಂತರಗಳಿಂದ ನಡೆದುಕೊಂಡು ಬಂದಿದ್ದು, ಇವುಗಳನ್ನು ಪ್ರಯೋಜನ ಮೂಲ ಕಲೆಗಳು ಮತ್ತು ಆನಂದ ಮೂಲ ಕಲೆಗಳೆಂದು ವಿಂಗಡಿಸಲಾಗಿದೆ. ಕರಕುಶಲ ಕಲೆಗಳು ಪ್ರಯೋಜನ ಮೂಲ ಕಲೆ ಆಗಿದ್ದು, ದುಡಿಮೆಗಾಗಿ ಮತ್ತು ಆದಾಯದ ಉದ್ದೇಶದಿಂದ ಈ ಕಲೆಗಳನ್ನು ಬಳಸುತ್ತಾರೆ. ಇವು ಜೀವನೋಪಾಯಕ್ಕೆ ಆಧಾರವಾಗಿವೆ ಆದರೆ, ಆನಂದ ಮೂಲ ಕಲೆಗಳು ದುಡಿಮೆಯ ನಂತರದಲ್ಲಿ ವಿನೋದದ ಉದ್ದೇಶಕ್ಕಾಗಿ ನಿರ್ವಹಿಸಲಾಗುತ್ತದೆ. ಕರಕುಶಲ ಕಲೆಗಳು ಇಂದು ಪೂರ್ತಿ ಅವಸಾನದ ಹಂತದಲ್ಲಿ ಇದ್ದು, ಇದಕ್ಕೆ ಪುನಶ್ಚೇತನ ನೀಡುವ […]Read More

ಸಾಹಿತ್ಯ ಸಮ್ಮೇಳನದಲ್ಲಿ ದಾಸ ಸಾಹಿತ್ಯ!!

ಸಾಹಿತ್ಯ ಸಮ್ಮೇಳನದಲ್ಲಿ ದಾಸ ಸಾಹಿತ್ಯ!! ಇನ್ನೇನು 87ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್‌ನಲ್ಲಿ ಮಂಡ್ಯದಲ್ಲಿ ನಡೆಯಲು ತಯಾರಿಗಳು ಭರ್ಜರಿಯಾಗಿ ನಡೆಯುತ್ತಿದೆ. ಪ್ರತಿ ಸಾಹಿತ್ಯ ಸಮ್ಮೇಳನದಲ್ಲೂ ಗೋಷ್ಠಿ, ವಿಚಾರ ಸಂಕಿರಣ, ಕವಿಗೋಷ್ಠಿ ಮಾಮೂಲಿನಂತೆ ನಡೆಯುತ್ತಲೇ ಇರುತ್ತದೆ. ಆದರೆ ಕನ್ನಡ ಸಾಹಿತ್ಯಕ್ಕೆ ಮಹತ್ತರ ಕೊಡುಗೆ ನೀಡಿದ ದಾಸ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮನ್ನಣೆ ಕೊಡದೇ ಇರುವುದು ತೀರ ಖೇದಕರ ವಿಷಯ. ಇಲ್ಲಿಯವರೆಗೆ ಯಾವುದೇ ಸಾಹಿತ್ಯ ಸಮ್ಮೇಳನದಲ್ಲಿ ದಾಸಸಾಹಿತ್ಯದ ಬಗ್ಗೆ ಒಂದೂ ಕಾರ್ಯಕ್ರಮಗಳೂ ನಡೆದಿಲ್ಲ. ಕೇವಲ ಕಥೆ, […]Read More

ಶಪಥಗೈದಳು ಕನ್ನಡತಿ

ಶಪಥಗೈದಳು ಕನ್ನಡತಿ ಒಂದಿಷ್ಟು ಗಮನವಿಟ್ಟುಕಲಿಯಬೇಕಿತ್ತು ಮಾತೃಭಾಷೆಯನುಒಂದಿಷ್ಟು ಅರಿಯಬೇಕಿತ್ತುಅದರ ಲಾಲಿತ್ಯವನು ಹ್ರಸ್ವ ದೀರ್ಘಗಳನಡುವಿನ ವ್ಯತ್ಯಾಸಸ್ವರ ವ್ಯಂಜನಗಳ ವಿನ್ಯಾಸಸ್ವಲ್ಪ ಸಂಧಿ ಸಮಾಸಕಲಿತಿದ್ದರೆ ಸಾಕಿತ್ತುಭಾಷೆಯ ಬಂಧ ಬಲಗೊಳ್ಳುತ್ತಿತ್ತು ಕುಮಾರವ್ಯಾಸನಲ್ಲದಿದ್ದರೂಕುವೆಂಪು ವನ್ನಾದರೂಅರ್ಥೈಸಿಕೊಳ್ಳಬಹುದಿತ್ತುಪೂಚಂತೆಯನ್ನಾದರೂ ಓದಬಹುದಿತ್ತುಭೈರಪ್ಪನನ್ನಾದರೂ ತಿಳಿಯಬಹುದಿತ್ತುಸಾಹಿತ್ಯದ ಸಾರವನ್ನು ಸವಿಯಬಹುದಿತ್ತು ಭಾಷೆಯ ಭರವಸೆಯೊಂದಿಗೆಸ್ನೇಹ ಸಂಬಂಧಗಳಸಿಹಿಯನ್ನಾದರೂ ಉಣ್ಣಬಹುದಿತ್ತುಎಲ್ಲರೊಡನೆ ಸೇರಿ ಬೆಳದಿಂಗಳ ರಾತ್ರಿಯಲಿಹೊಲದಲ್ಲಿ ಒಂದಷ್ಟು ಹರಟಬಹುದಿತ್ತುಜಾತ್ರೆ ಜಾಗರಗಳಲ್ಲಿ ಜೊತೆಯಾಗಬಹುದಿತ್ತು ಮನೆ ಮಂದಿಯಿಂದ ಹಿಡಿದುಅಕ್ಕಪಕ್ಕದ ಮನೆಯವರವರೆಗೂಎಲ್ಲರನೂ ‘ಆಂಟಿ – ಅಂಕಲ್ ಎಂದೇ ಕರೆಯದೆನಿಜ ಸಂಬಂಧಗಳಸರಿಯಾದ ಹೆಸರನ್ನಾದರೂ ಕಲಿಯಬಹುದಿತ್ತುಭಾವಗಳೊಡನೆ ಬಂಧಗಳ ಬೆಸೆಯಬಹುದಿತ್ತು ಒಂದಿಷ್ಟು ಗಮನವಿಟ್ಟುಕಲಿಯಬೇಕಿತ್ತು ಮಾತೃಭಾಷೆಯನುಕಿಂಚಿತ್ತಾದರೂ ಅರಿಯಬೇಕಿತ್ತುಅದರ ಲಾಲಿತ್ಯವನು ಕ್ಷಮಿಸು ಭುವನೇಶ್ವರಿಯೇತಾಯಿ […]Read More

ಮನ ಸುಸ್ಥಿತಿಯಲ್ಲಿ ಇದ್ದಾಗ ಬದುಕು ಸುಂದರ

ಮನ ಸುಸ್ಥಿತಿಯಲ್ಲಿ ಇದ್ದಾಗ ಬದುಕು ಸುಂದರ ನಮಗೆ ನಮ್ಮ ಮನಸ್ಸು ಮಿತ್ರನಾಗಬಹುದು ಶತ್ರುನೂ ಆಗಬಹುದು ಎನ್ನುವ ಪ್ರಸಿದ್ಧವಾದ ನುಡಿ ಇದೆ. ಅದು ಅಕ್ಷರಶಃ ಸತ್ಯ. ನಾವು ನಮ್ಮ ಮನಸ್ಸನ್ನ ಹೇಗೆ ಮಾಡಿಕೊಳ್ಳುತ್ತೇವೂ ಹಾಗೆ ಆಗುತ್ತದೆ. ಮನಸ್ಸನ್ನ ಎಲ್ಲಾ ಸಂದರ್ಭದಲ್ಲೂ ಸ್ಥಿತದಲ್ಲಿ ಇಟ್ಟುಕೊಳ್ಳುವುದು ಒಂದು ಸಾಧನೆಯೇ ಸರಿ. ತನ್ನ ಮನವನ್ನು ಗೆದ್ದರೆ ಜಗತ್ತನ್ನ ಗೆದ್ದ ಹಾಗೆ ಅಂತಾ ಹಿರಿಯರು ಸುಮ್ಮನೆ ಹೇಳಿಲ್ಲ. ಬದುಕು ಬೇವು ಬೆಲ್ಲದ ಮಿಶ್ರಣ ಒಂದೇ ಸಮಾನವಾಗಿ ಇರುವುದಿಲ್ಲ ಕಷ್ಟ ಸುಖ ಆಘಾತ ಉದ್ವೇಗ ಸೋಲು […]Read More