ಪ್ರತ್ಯಗಾತ್ಮ ಚಿಂತನ (ನೇನಂಶಿ) – 31

ಸಾವಧಾನದಿ ಕುಳಿತು ಉಣ್ಣುವರ ನಾ ಕಾಣೆಯಾವುದೋ ಧಾವಂತ ಯಾವುದೋ ಚಿಂತೆಯಾವ ಪುರುಷಾರ್ಥಕ್ಕೆ ಈ ಪರಿಯ ದುಡಿಮೆ!ಯಾವ ಕಾಲಕೆ ಬಿಡುವು_ || ಪ್ರತ್ಯಗಾತ್ಮ || ಎರಡು ಕೈಗಳ ಬಳಸಿ ಕೋತಿಗಳು ಮುಕ್ಕುವುವುಸರಸರನೆ ಹಕ್ಕಿಗಳು ಕುಕ್ಕಿ ತಿನ್ನುವುವುಗುರುಗುಟ್ಟಿ ಅತ್ತಿತ್ತ ನೋಡಿ ತಿಂಬುದು ನಾಯಿನರನಿದಕೆ ಹೊರತೇನು? || ಪ್ರತ್ಯಗಾತ್ಮ || ಹಕ್ಕಿಗಳು ತಮ್ಮವರನೊಂದು ಚಣವಗಲಿರವುಅಕ್ಕರೆಯೊಳೊಂದಾಗಿ ಒಲವ ತೋರುವುವುರೊಕ್ಕ ಸಂಪಾದನೆಗೆ ನರನು ಅಲೆಯುತ ಮಡದಿ-ಮಕ್ಕಳನು ಅಗಲುವನು- || ಪ್ರತ್ಯಗಾತ್ಮ || ಇರುಳಿನಲಿ ವಿಶ್ರಮಿಸಿ ಪ್ರಾಣಿ ಪಕ್ಷಿಗಳೆಲ್ಲಇರುವನಿತು ಕಾಲವನು ಸುಖಿಸಿ ಬಾಳುವುವುಇರುಳು ಹಗಲೆನ್ನದೆಯೆ ದುಡಿದು […]Read More

ರೌದ್ರಾವರಣಂ – ಒಂದು ಓದು

ಲೇಖಕರು: ಅನಂತ್ ಕುಣಿಗಲ್ಮುದ್ರಣ: ಅವ್ವ ಪುಸ್ತಕಾಲಯ ಬೇಟೆ – ಬೇಟೆಗಾರ – ಕಾನನ – ಹಳ್ಳಿಯ ವ್ಯವಸ್ಥೆ- ಹಾದರ – ಶೋಷಣೆ – ನಂಬಿಕೆ. ಇವಿಷ್ಟು ರೌದ್ರಾವರಣಂ ಕೃತಿಯ ಕುರಿತು ಒಂದು ಸಾಲಿನ ಮಾತು. ಲೇಖಕರ ಪರಿಚಯ: ತುಮುಕೂರು ಜಿಲ್ಲೆ ಕುಣಿಗಲ್ ತಾಲೂಕು ಕೆಂಚನಹಳ್ಳಿ ಗ್ರಾಮದವರಾದ ಶ್ರೀ ಅನಂತ್ ಕುಣಿಗಲ್ ತಮ್ಮ ಸಾಹಿತ್ಯ ಚಟುವಟಿಕೆಗಳಿಗೆ ಹೆಸರುವಾಸಿ. ಸ್ವತಃ ಯುವಬರಹಗಾರರಾದ ಇವರು ತಮ್ಮ ಅನೇಕ ಸಮವಯಸ್ಕರನ್ನು ಹಾಗು ಅನೇಕ ಬರಹಗಾರರನ್ನು ಉತ್ತೇಜಿಸಲು ಅವ್ವ ಪುಸ್ತಕಾಲಯದ ಉದಯಕ್ಕೆ ಕಾರಣರಾಗಿರುತ್ತಾರೆ. ಸದಾ […]Read More

ನಿಜವಾದ ಸಂಪತ್ತು

ನಿಜವಾದ ಸಂಪತ್ತು ನೀ ನನ್ನವಳು / ನನ್ನವನು…..ಜಗದ ಸಾವಿರ ಜನ ಎದುರಾದರೂ ಕೈಬಿಡೆನುಎನ್ನುವ ಒಂದು ಜೀವ……ಅದು ಯಾರೇ ಆಗಿರಲಿ…ಅದೇ ನಿಜವಾದ ಸಂಪತ್ತು. ಒಂದು ಸಣ್ಣ ಕಾಳಜಿ..ತುಸು ಪ್ರೀತಿ,ಕಿಂಚಿತ್ತು ಅಕ್ಕರೆ…ಅಷ್ಟೇ ಸಾಕು…!! ನಮ್ಮ ಯಾವುದೇ ಭಾರ ಅವರು ಹೊರಬೇಕಿಲ್ಲ…ಹಿತವಾದ ಎರಡು ಮಾತು..ಎಲ್ಲಕ್ಕೂ ಮಿಗಿಲು..ಅಂತಹ ಒಬ್ಬರು ಜೊತೆಗಿದ್ದರೆ ಇರದು ದಿಗಿಲು… ಸುಕೃತಿ ಕಂದRead More

ಪಾರು ಹೇಳಿದ ಕಥೆಗಳು ಕಥೆ-೫

–ಕಣ್ಣಾ ಮುಚ್ಚಾಲೆ– ಪಾರು ಏನೋ ಕೆಲಸದಲ್ಲಿ ಮಗ್ನಳಾಗಿದ್ದಳು. ಇದ್ದಕ್ಕಿದ್ದಂತೆ ನಿಖಿಲ್ ಅಮ್ಮ ನಿಕಿತಾ ಎಲ್ಲಿ? ಎಂದು ಕೇಳಿದ. ಗೊತ್ತಿಲ್ಲಾ, ಇಲ್ಲೇ ಎಲ್ಲೋ ಇರಬೇಕು ನೋಡು ಎಂದಳು. ಅಮ್ಮ ಕಣ್ಣಾಮುಚ್ಚಾಲೆ ಆಟ ಆಡ್ತಾ ಇದ್ವಿ, ನಿಕಿತ ಕಾಣ್ತಾ ಇಲ್ಲಾ! ಎಂದ. ಪಾರು ಗಾಬರಿಯಾದಳು ಮನೆಯೆಲ್ಲಾ ಹುಡುಕಿದಳು, ಮೊದಲು ನೀರಿನ ತೊಟ್ಟಿ, ಸೋಫಾ, ಮಂಚದ ಅಡಿ ,ಅಕ್ಕಪಕ್ಕದ ಮನೆ ಎಲ್ಲಾ ಕಡೆ ಅವಳ ಹುಡುಕಾಟ ಸಾಗಿತ್ತು. ನೆನಪಾದ ದೇವರಿಗೆಲ್ಲಾ ಕೈ ಮುಗಿದಳು. ಗಾಡಿಯಲ್ಲಿ ಅಕ್ಕಪಕ್ಕದ ಬೀದಿಗೂ ಹೋಗಿಬಂದಳು. ಸುಸ್ತಾದ ಪಾರು […]Read More

ಕೆಲಸಕ್ಕಾಗಿ ಕಗ್ಗತ್ತಲೆಯ ಖಂಡದತ್ತ – ೨೫

–ಇಂಥ ಸಾವು ನ್ಯಾಯವೇ?– “ಖಂಡಿತ ಕೂಡದು” ಎಂಬ ಕಾನೂನು ಎಲ್ಲಿ, ಯಾವ ದೇಶದಲ್ಲಿ ಬಂದರೂ ಅದು ಬಹಳ ಬೇಗ ತನ್ನ ಸಾವನ್ನಪ್ಪುತ್ತದೆ ಅಥವ ಅತಿಕ್ರಮಣವಾಗುತ್ತದೆ! ಅದು ಮಾನವ ಸಹಜ ಕುತೂಹಲವನ್ನು ಕೆದಕುವುದರಿಂದ, ಅದರ ಉಲ್ಲಂಘನೆಯ ದಾರಿಯಲ್ಲಿ, ಅದು ಎಷ್ಟೇ ಕಠಿಣವಿರಲಿ, ಪ್ರತಿಯೊಬ್ಬರೂ ತುದಿಗಾಲಲ್ಲಿ ಸ್ಪರ್ಧೆಗೆ ನಿಲ್ಲುತ್ತಾರೆ. ಒಂದು ಮಗು ಸಹ ಬೇಡ ಎಂದ ಕೂಡಲೇ ಅದಕ್ಕೇ ಕೈ ಇಡುತ್ತದೆ. ಅಂತೆಯೇ ಈ “ಡೆತ್ ಆಫ್ ಎ ಪ್ರಿನ್ಸೆಸ್” ಕಥೆ ಕೂಡ. ಸೋಮಾಲಿಯಾ ದೇಶಕ್ಕೆ ಸೌದಿ ದೇಶದಿಂದ ಸಾಕಷ್ಟು […]Read More

ರೀಲ್ಗಷ್ಟೇ ಸೀಮಿತವಲ್ಲದ ರಿಯಲ್ ಹೀರೋ ಅಪ್ಪು

ಇಂದು ಪ್ರೀತಿಯ ಅಪ್ಪುವಿನ ಜನ್ಮ ದಿನ… ‘ಅಪ್ಪು’ ಎಂಬುದು ನಾಮ ಪದವೋ? ಕ್ರಿಯಾ ಪದವೋ? ಇವೆರಡನ್ನೂ ಮೀರಿದ ಕ್ರಿಯಾಶೀಲತೆಯ ನಾಮಾಂಕಿತ! ಇತ್ತೀಚಿಗೆ ಅಪ್ಪು, ಪುನೀತ್, ಲೋಹಿತ್ ಎಂಬ ಪದಗಳು ಕನ್ನಡಿಗರ ಮನದಲ್ಲಷ್ಟೇ ಮಾರ್ನುಡಿಯುತ್ತಿಲ್ಲ, ಕನ್ನಡೇತರರ ಮನದಲ್ಲೂ ನೆಲೆ ಕಂಡು ಮನ ಕಲಕಿದೆ. ಚಿತ್ರಪ್ರೇಮಿಗಳಲ್ಲದೇ , ಚಿತ್ರಗಳನ್ನು ನೋಡುವ ಅಭ್ಯಾಸವಿಲ್ಲದವರಲ್ಲೂ ‘ಅಪ್ಪು’ ಸ್ಥಾನ ಪಡೆದಿದ್ದಾನೆ ಎಂಬುದೀಗ ಜನಜನಿತ ಮಾತು. ಆಬಾಲವೃದ್ಧರಾಗಿ ಲಿಂಗಭೇದವಿಲ್ಲದೇ ನಿಷ್ಕಳಂಕ ಭಾವದಿ ಪುನೀತನನ್ನು ಪ್ರೀತಿಸುತ್ತಿದ್ದಾರೆಂದರೆ ಅದರ ಹಿಂದಿನ ಮರ್ಮ ಆ ಮುಗ್ಧ ನಗುವೇ ಆಗಿದೆ! ಜಗದ […]Read More

ರೌದ್ರಾವರಣಂ – ಕಾದಂಬರಿ ಬಿಡುಗಡೆ

ಮೂರು ವರ್ಷಗಳ ಹಿಂದೆ ಪ್ರತಿಲಿಪಿಯಲ್ಲಿ ‘ರೌದ್ರಾವರಣಂ’ ಕಾದಂಬರಿಯ ಬರವಣಿಗೆ ಶುರುಮಾಡಿದ್ದೆ. ಹಿಂಬಾಲಕರು, ಓದುಗರು ಹೆಚ್ಚಿ ಒಳ್ಳೆಯ ಪ್ರತಿಕ್ರಿಯೆಯೂ ಬಂದವು. ಅದೇ ಸಮಯಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಯುವಬರಹಗಾರರ ಚೊಚ್ಚಲ ಕೃತಿ ಪುರಸ್ಕಾರಕ್ಕೆ ನನ್ನ ಕಚ್ಚಾ ಕಥೆಗಳು ಆಯ್ಕೆಯಾಗಿದ್ದವು. ಪುಸ್ತಕ ಕೆಲಸದಲ್ಲಿ ತೊಡಗಿದ್ದರಿಂದ ಮತ್ತು ನಾನು ಶಿವಸಂಚಾರ ರೆಪರೇಟರಿಯಲ್ಲಿ ಇದ್ದುದರಿಂದ ರೌದ್ರಾವರಣಂ ಬರವಣಿಗೆ ನಿಲ್ಲಿಸಿದ್ದೆ. ಅದಾದಮೇಲೆ ಸಿನೆಮಾ ಕೆಲಸಗಳಲ್ಲಿ ನಿರತನಾಗಿ ಪ್ರತಿಲಿಪಿಯಲ್ಲಿ ಸಕ್ರಿಯವಾಗಿರಲು ಸಾಧ್ಯವಾಗಲಿಲ್ಲ. ಈಗ ರೌದ್ರಾವರಣಂ ಕಾದಂಬರಿ ಪುಸ್ತಕವಾಗಿ ಬಿಡುಗಡೆಗೂ ಮುನ್ನವೇ ಬಹಳಷ್ಟು ಓದುಗರನ್ನು ತಲುಪಿದೆ. ಮತ್ತು […]Read More

ಹನಿಗವಿತೆಗಳು – ಡಾII ಪರಮೇಶ್ವರಪ್ಪ ಕುದರಿ – 16

ಮೌನ ಸಂಭಾಷಣೆ ಪ್ರೇಮ ಸಂಭಾಷಣೆಗೆಭಾಷೆಯೇ ಬೇಕಿಲ್ಲ!ಮೌನದಲ್ಲೂನಡೆಯುತ್ತದೆ ಸಂಭಾಷಣೆಕಣ್ಣಿನ ಕಾಗುಣಿತವೇ ಸಾಕಲ್ಲನೋಟದಲ್ಲೇಸವಿಯುತ್ತಾರೆ ಸಿಹಿ ಬೆಲ್ಲ!! ಮೂರೇ ಗೇಣು ಜೋಡಿ ಕಂಗಳ ಕಾಗುಣಿತಹೆಚ್ಚಾಗಿದೆಹೃದಯದಿ ಒಲವ ದೀಪಬೆಳಗಿದಂತಿದೆಪರಸ್ಪರ ಕಾಣಲು ಕಂಗಳುಹಾತೊರೆದಿವೆ!ಮನದಲಿ ಪ್ರೀತಿ ಒಡಮೂಡಿಬಂದಂತಿದೆಅಪ್ಪುಗೆಯ ಒಪ್ಪಿಗೆಗಾಗಿ ಕಾತರಹೆಚ್ಚಾಗಿದೆಸ್ವರ್ಗ ಮೂರೇ ಗೇಣುಎಂಬಂತಾಗಿದೆ!! ಹೃದಯ ಒಲಿದು ಬಂದವರಿಗೆ ಮಾತ್ರಹೃದಯ ಮಿಡಿಯುತ್ತದೆ!ತನ್ನವರನ್ನುತನ್ನನ್ನು ಪ್ರೀತಿಸುವವರನ್ನುಹುಡುಕುತ್ತಿರುತ್ತದೆ!!ಕನಸುಗಳನ್ನುಹೊಂಗನಸುಗಳನ್ನುಬಿತ್ತುತಿರುತ್ತದೆ!!! ಬಾಳಪೂರ್ತಿ ಹಂಚಿದಷ್ಟು ಕೆಲವುಖರ್ಚಾಗುತ್ತಲೇ ಹೋಗುತ್ತವೆಪ್ರೀತಿ ಮಾತ್ರಹಂಚಿದಷ್ಟೂ ಹೆಚ್ಚಾಗುತ್ತಲೇಹೋಗುತ್ತದೆ!ಹಂಚಿ ಹಂಚಿ ಬಾಳಿದರೆ ಪ್ರೀತಿಕೊನೆಯಾಗುವುದೇ ಇಲ್ಲಬಾಳಪೂರ್ತಿ!! ಡಾII ಪರಮೇಶ್ವರಪ್ಪ ಕುದರಿRead More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 12

ಹಿಂದಿನ ಸಂಚಿಕೆಯಿಂದ….ರಟ್ಟ ಮತ್ತು ಕಿರಾತರ ವಿಷಯವಾಗಿ ನಗರದಲ್ಲಿ ಗುಸು ಗುಸು ಪ್ರಾರಂಭವಾಯಿತು. ಸಚಿವರೂ ಸಭಾಸದರೂ ಇದನ್ನು ಮೊದಲೇ ಗಮನಿಸಿದ್ದರು. ಕೊನೆಗೆ ರಾಜನ ಗಮನಕ್ಕೂ ಬಂದಿತು. ಮೊದಮೊದಲು ರಾಜನಿಗೆ ವಿಸ್ಮಯವಾಯಿತು. ಆ ನಂತರ ಮಂತ್ರಿಗಳೊಡನೆ ಸಮಾಲೋಚಿಸಿದನು. ಉದ್ಧತ ಪ್ರಕೃತಿಯ ಕಿರಾತನ ಬಗೆಗೆ ಯಾರೂ ಒಳ್ಳೆಯ ಅಭಿಪ್ರಾಯ ಹೊಂದಿರಲಿಲ್ಲ. ರಟ್ಟಾ ರಾಜ್ಯದ ಉತ್ತರಾಧಿಕಾರಿಯಾಗಿರುವುದರಿಂದ ಒಬ್ಬ ಸಾಮಾನ್ಯ ಸಾಮಂತರಾಜನ ಮಗನೊಂದಿಗೆ ವಿವಾಹ ಸಲ್ಲದು. ಧಕ್ಕೆ ಉಂಟಾಗುವುದು. ಆದ್ದರಿಂದ ತಮ್ಮ ಅಧಿಕಾರವನ್ನು ಸ್ಥಿರವಾಗಿ ಪ್ರತಿಷ್ಠಾಪಿಸಲು ಬೇರೆ ಯಾವುದಾದರೂ ರಾಜವಂಶದ ಜೊತೆಗೆಸಂಬಂಧ ಬೆಳೆಸುವುದು ಒಳ್ಳೆಯದು. […]Read More

ಪ್ರತ್ಯಗಾತ್ಮ ಚಿಂತನ (ನೇನಂಶಿ) – 30

ತನ್ನ ಮತ ಧರ್ಮಗಳ ಪಾಲಿಸದೆ ಇದ್ದವನುಅನ್ಯ ಮತ ಧರ್ಮಗಳ ಗೌರವಿಪನೆಂತು?ತನ್ನ ತಾಯಿಗೆ ಕೊಡದ ಗೌರವವ, ಕೊಡುವನೇಅನ್ಯ ಮಾತೆಗೆ ? ಹೇಳು- || ಪ್ರತ್ಯಗಾತ್ಮ || ತಾಯಿಯೇ ಮೊದಲ ಗುರು; ಮನೆಯೆ ಮೊದಲ ಶಾಲೆತಾಯಿ ನುಡಿ ನಿನ್ನ ನುಡಿ; ಅವಳೆ ಶ್ರೀರಕ್ಷೆತಾಯಿ ವಾತ್ಸಲ್ಯದಲಿ ಬೆಳೆದ ಮಕ್ಕಳೆ ಧನ್ಯತಾಯಿ ಪ್ರೇಮದ ಮೂರ್ತಿ- || ಪ್ರತ್ಯಗಾತ್ಮ || ತಾಯಂದಿರುಗಳೆಲ್ಲ ತಮ್ಮ ಮಕ್ಕಳ ಕರೆದುಬಾಯಿ ಪಾಠವ ಹೇಳಿ ಕೊಡುತಿದ್ದುದುಂಟುತಾಯಿ ಕಲಿಸಿದ ವಿದ್ಯೆ ಆಜೀವ ಪರ್ಯಂತಮಾಯವಾಗಿದೆ ಇಂದು ! – || ಪ್ರತ್ಯಗಾತ್ಮ || […]Read More