ಮಾತು ಬೆಳ್ಳಿ ಮೌನ ಬಂಗಾರ ಮಾತು ಮತ್ತು ಮೌನದ ಬಗ್ಗೆ ನಾವು ಹೆಚ್ಚು ವಿಚಾರ ಮಂಥನ ಮಾಡಿದಾಗ ಪ್ರತಿ ಬಾರಿಯೂ ಮೌನ ಎಂಬುದು ಮಾತಿನ ಅಭಾವದ ಸ್ಥಿತಿ ಮತ್ತು ಮಾತು ಎನ್ನುವುದು ವಿಚಾರಗಳನ್ನು ಒಬ್ಬರಿಂದ ಮತ್ತೊಬ್ಬರಿಗೆ ಸರಿಯಾಗಿ ವರ್ಗಾಯಿಸುವಲ್ಲಿ ಸರ್ವಶಕ್ತ ಎನ್ನುವುದು ಅರ್ಧಸತ್ಯವಷ್ಟೇ ಎಂದು ತಿಳಿದು ಬರುತ್ತದೆ. ಕೆಲವು ವಿಚಾರಗಳನ್ನು ಮಾತಿಗಿಂತ ಮೌನವೇ ಹೆಚ್ಚು ಶಕ್ತವಾಗಿ ಮತ್ತು ಸಮಗ್ರವಾಗಿ ಸಂವಹಿಸುತ್ತದೆ ಎನ್ನುವುದನ್ನು ನಾವು ಮರೆತೇ ಬಿಟ್ಟಿದ್ದೇವೆ. ‘ಮಾತು ಬೆಳ್ಳಿ ಮೌನ ಬಂಗಾರ’ ಎನ್ನುವ ಗಾದೆ ಮಾತು ಅತ್ಯಂತ […]Read More
ಚೇಳು ಚೇಳುಗಳನ್ನು “ಲಾಟ್ರೋಡಕ್ಟಸ್ ಮ್ಯಾಕ್ಟನ್ಸ್” ವೈಜ್ಞಾನಿಕ ಹೆಸರಿನಿಂದ ಗುರುತಿಸುತ್ತಾರೆ. ಇವು ಜೇಡದಂತ ಕೀಟಗಳ ಜಾತಿಗೆ ಸೇರುತ್ತವೆ. ಇವುಗಳ ಗಾತ್ರ 2 ಸೆಂಟಿಮೀಟರಿನಿಂದ ಹಿಡಿದು 3.3 ಮೀಟರ್ ವರೆಗೆ ಇರುತ್ತವೆ. ಇವುಗಳಿಗೆ 4 ಜೊತೆ ಕಾಲುಗಳು, ತಲೆ, ಕುಟುಕು ಅಂಗ ಮತ್ತು ಶರೀರ ಇರುತ್ತದೆ. ಇವು ಅಕಶೇರುಕಗಳಾಗಿದ್ದು ಶರೀರವನ್ನು ರಕ್ಷಿಸಲು ಕವಚ ಹೊಂದಿರುವ ಬಹು ಕಾಲಿನ ಪ್ರಾಣಿಗಳಾಗಿವೆ. ಇವುಗಳಿಗೆ ಎಲುಬುಗಳಿಲ್ಲ, ರಕ್ತವಿಲ್ಲ. ಚಳಿಗಾಲದಲ್ಲಿ ಚೇಳುಗಳು ಶೀತನಿದ್ರೆಗೆ ಜಾರುತ್ತವೆ. ಅವುಗಳ ಜೀವಿತಾವಧಿಯಲ್ಲಿ ಚೇಳುಗಳು 7 ಸಲ ಅವುಗಳ ಕವಚವನ್ನು ಬದಲಾಯಿಸುತ್ತವೆ. […]Read More
ಆದಿತ್ಯ – ಎಲ್ – 1 ಹೇ! ಸೂರ್ಯದೇವಾ ನಿನಗೆ ವಂದನೆ!!ನಿನ್ನ ನೋಡಲೆಂದೇ ಬಳಿ ಬಂದೆನೇ|ನಿನ್ನ ತಾಪ ಎನ್ನ ಮೇಲೇ ಬರುವುದ ಕಂಡೆನೆನಿನ್ನ ಕೋಪ ಎನ್ನ ಮೇಲೆ ಇರುವುದ ಅರಿತೆನೆ|| ನಿನ್ನ ಬಗ್ಗೆ ತಿಳಿಯಲೆಂದೇ ಬಂದೆನನ್ನ ಹೆಸರೂ ಆದಿತ್ಯ ಎಲ್೧ ಎಂದೇ|ಶ್ರೀಹರಿಕೋಟ ಬಾಹ್ಯಾಕಾಶ ಕೇಂದ್ರದಿಂದ ಬಂದೇಧೃವೀಯ ಉಡ್ಡಣ ವಾಹಕದಿಂದ ಬಂದೇ|| ನಾನು ಹುಟ್ಟಿದ್ದು ಕರ್ನಾಟಕ ಬೆಂಗಳೂರಲ್ಲಿಉ.ರಾ.ಉಪಗ್ರಹ ಕೇಂದ್ರದಲ್ಲಿ|ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಧೃವೀಯ ಉಡ್ಡಣ ವಾಹಕದಲ್ಲಿ|| ಸೆಪ್ಟೆಂಬರ್ ತಿಂಗಳ ಎರಡನೇ ದಿವಸಬೆಳಿಗ್ಗೆ ಹನ್ನೊಂದು ಗಂಟೆ ಐವತ್ತು ನಿಮಿಷ|ಎರಡು ಸಾವಿರದ […]Read More
ಅಟೆನ್ಷನ್ ಸೀಕಿಂಗ್ ಎಲ್ಲೆಲ್ಲೂ ಜನ, ನೂಕು ನುಗ್ಗಲು. ಕಿವುಡುಗಚ್ಚುವ ಕರತಾಡನ. ಕ್ಲಿಕ್-ಕ್ಲಿಕ್ ಕ್ಯಾಮೆರಾದ ಫ್ಲಾಷ್ನಲ್ಲಿ ಅವನ ಮುಖಮತ್ತಷ್ಟು ಹೊಳೆಯುತ್ತಿತ್ತು. ಇಂಥ ಒಂದು ದಿನಕ್ಕಾಗಿಯೇ ಕಾದಂತಿತ್ತು ಇಪ್ಪತ್ತೆಂಟರ ವಯಸ್ಸಿನ ಪ್ರಣವ್ಗೆ. ಅವನಆಟೋಗ್ರಾಫ್ಗಾಗಿ ಯುವತಿಯರ ದಂಡೇ ಮುಗಿಬಿದ್ದಿತ್ತು. ತನ್ನ ಯಶಸ್ಸಿಗೆ ತಾನೇ ತಲೆದೂಗಿದ. ಬರಹ ಲೋಕದಒಡೆಯನಾಗಿದ್ದ. ಅವನ ರೋಮಾನ್ಸ್ ಕಥೆ-ನಾವೆಲ್ಗಳಿಗಾಗಿ ಯುವಜನತೆ ಕಾತುರತೆಯಿಂದ ಕಾಯುತ್ತಿದ್ದರು.ಹುಡುಗಿಯರ ಹುಚ್ಚು ಅತಿರೇಕವಾಗಿ ಅವನ ರೂಮಿನ ತುಂಬಾ ರಕ್ತಾಕ್ಷರದ ಪ್ರೇಮಪತ್ರಗಳು ಹಾರಾಡುತ್ತಿದ್ದವು.ಅವುಗಳನ್ನೆಲ್ಲಾ ತನ್ನೆದೆಯ ಮೇಲೆ ಹಾಕಿಕೊಂಡು ಅಮಲಿನಲ್ಲಿರುತ್ತಿದ್ದ. ಐ ಲವ್ ಯು.., ಪ್ಲೀಸ್ ಮ್ಯಾರಿ ಮೀ… […]Read More
ವಿಶಿಷ್ಟ ಪ್ರಣಯದ ಹಕ್ಕಿ ಈ ಕುಂಜಪಕ್ಷಿ ಹದಿಹರೆಯದ ಹುಡುಗರು ಹುಡುಗಿಯರನ್ನು ಆಕರ್ಷಿಸಿ ತನ್ನ ಸಂಗಾತಿಯನ್ನಾಗಿ ಮಾಡಿಕೊಳ್ಳಲು ಬಗೆ ಬಗೆಯ ಕಸರತ್ತುಗಳನ್ನು ಮಾಡುವುದು ಒಂದೆರಡಲ್ಲ! ಅದು ಪ್ರಕೃತಿ ಸಹಜವಾದ ನಿಯಮವು ಹೌದು. ಅದೇ ರೀತಿ ಪಕ್ಷಿಪ್ರಪಂಚದಲ್ಲೂ ಕೂಡ ಗಂಡು ಹಕ್ಕಿ ಹೆಣ್ಣು ಹಕ್ಕಿಯನ್ನು ಆಕರ್ಷಿಸಲು ನಾನಾ ರೀತಿ ಕೂಗುವುದು, ಗಾಳಿಯಲ್ಲಿ ಮೇಲಕ್ಕೆ ಕೆಳಕ್ಕೆ ಹಾರುತ್ತ ಶಿಳ್ಳೆ ಹೊಡೆಯುವುದು, ನರ್ತಿಸುವುದು, ಇನ್ನೂ ಅನೇಕ ವಿಧದಲ್ಲಿ ಪ್ರಣಯಕ್ಕೆ ಸೆಳೆಯಲು ಪ್ರಯತ್ನಿಸಿ ಸಂತಾನೋತ್ಪತ್ತಿಯನ್ನು ಮಾಡಿಕೊಳ್ಳುವುದು ಪ್ರಕೃತಿ ಆಯೋಜಿಸಿರುವ ನಿಯಮ ಎನ್ನಬಹುದು. ಇದರಲ್ಲಿ ಕೊಂಚ […]Read More
ಕಾಮನಬಿಲ್ಲು ಮುಗಿಲಿನಲ್ಲಿ ಮೂಡುತಿದೆ ವಿಸ್ಮಯನೆರಳು ಬೆಳಕಿನ ಸಂಯೋಜನೆಯಲಿಅತ್ತ ಮಳೆಯೂ ಅಲ್ಲ ಇತ್ತ ಬಿಸಿಲೂ ಅಲ್ಲಸೂರ್ಯದೇವನ ಪ್ರಭೆಯ ಪ್ರಭಾವವೆಂತು ಮಾರನು ಇದ ತನ್ನ ಅಂಬನ್ನಾಗಿಸಿಕೊಂಡಏಳುಬಣ್ಣಗಳ ವಸ್ತ್ರಗಳ ಇದಕೆ ಸುತ್ತಿಹನುಅಂಬನ್ನೇ ಹಿಡಿದ ಮನ್ಮಥನು ಮರೆತ ಶರವನುಪುಷ್ಪಮಾಲೆಯಿಂದಲೇ ಶರಾಘಾತ ಮಾಡುವನು ಕಂಡಳು ಮಾರನ ಸತಿ ಈ ಶೃಂಗಾರದ ಅಂಬನುಮೋಹದಾ ಪಾಶದಲಿ ಮೈಮರೆಯಲು ಮಾರನುಫಾಲನೇತ್ರನ ಅವಕೃಪೆಗೆ ಪಾತ್ರನಾದವನುಕ್ಷಣಾರ್ಧದಲೇ ಬೂದಿಯ ಗುಡ್ಡೆಯಾದ ಮಾರನು ಒಮ್ಮೊಮ್ಮೆ ಅರ್ಧ ಚಂದ್ರನಂತೆ ಕಾಣುವುದಿದುಅಪರೂಪಕ್ಕೆ ಸಂಪೂರ್ಣ ವೃತ್ತಾಕಾರದಲಿಎಷ್ಟು ಸುಂದರ ಸುಮನೋಹರ ಈ ಸೋಜಿಗನೋಡಲು ಈ ವರ್ಣಚಿತ್ತಾರ ಅದೇನೋ ಧನ್ಯತಾ ಭಾವ […]Read More
ಹೆಣ್ಣು ಮತ್ತು ಆರೋಗ್ಯ – 6 ಪ್ರಸವ ಹಾಗೂ ಅದರ ತಯಾರಿ ಈ ಸಂಚಿಕೆಯಲ್ಲಿ ಇಷ್ಟು ದಿನದಿಂದ, ಜತನದಿಂದ, ಕಾಯ್ದು, ಪ್ರಸವ ಆಗುವ ಸಮಯ ಬಂದಾಗ ಏನು ತಯಾರಿ ಮಾಡಿಕೊಳ್ಳಬೇಕು ಎಂದು ತಿಳಿಸುತ್ತೇನೆ. 1- ಪ್ರಸವ ಆಗುವುದು ಎಲ್ಲಿ ಎಂಬುದು ಮೊದಲೇ ನಿರ್ಧಾರವಾಗಿರುತ್ತದೆ. ಪ್ರಸೂತಿ ತಜ್ಞರ ಮೊಬೈಲ್ ಹಾಗೂ ರೆಸಿಡೆನ್ಸ್ ನಂಬರನ್ನು ಸಿದ್ಧವಾಗಿರಿಕೊಳ್ಳಬೇಕು. ಯಾರ್ಯಾರಿಗೆ ವಿಷಯ ತಿಳಿಸಬೇಕು ಆ ನಂಬರಗಳನ್ನು ಸಿದ್ಧವಾಗಿರಿಸಿಕೊಳ್ಳಬೇಕು.ಎಲ್ಲ ತಯಾರಿ 15 ದಿನದ ಮೊದಲೇ ಮಾಡಿಕೊಳ್ಳುವುದು ಉತ್ತಮ. 2- ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಬ್ಯಾಗ್ […]Read More
ಮೋಡದ ಮರೆಯ ಬೆಳಕು ರವಿಕಿರಣವದು ತಿಣುಕಾಡಿದೆಮೋಡದ ಮರೆಯಿಂದ ಹೊರಬರಲು!ಬೆಳಕದು ಬಂಧನ ಬಿಡಿಸಿ ಬಂದಿದೆ..ಬುವಿಯ ಜೀವರಾಶಿಯ ಕಾಯಲು!! ಪ್ರತಿಭೆಯು ಪ್ರಭೆಯಂತೆ ಹೊಳೆಯಲುಅಹಮ್ಮಿನ ಮೋಡ ಸರಿಯಬೇಕು!ಟೀಕಿಸುವವರ ಬಿರುನುಡಿಯ ಎದುರಿಸಲು..ತಾಳ್ಮೆಯ ಗೋಡೆಯನೊಮ್ಮೆ ಮುರಿಯಬೇಕು!! ಬೆಳ್ಳಿಯ ಕಿರಣವು ಬೆಳ್ಮುಗಿಲಮೋಡದಿಂದ ಜಾರಿ ಧರೆ ಬೆಳಗುವಂತೆ!ಮಾತಿನ ಸಿಹಿ ಮೌನದ ಕಹಿಯ ಮೀರಿ..ಮನದೊಳಗೆ ಲಹರಿ ಮಿಂಚುವಂತೆ!! ಕಾನನದ ಹಸಿರು ಚಿಗುರಲುಹೊಂಗಿರಣದ ಬೆಳಕು ಪಸರಿಸಬೇಕು!ಬೆಳ್ಳಿಮೋಡದಂಚಲಿ ದಿನಪ ನಗುತಿರಲು..ಜೀವಸಂಕುಲವದು ನಿತ್ಯ ಬೆಳೆಯಬೇಕು!! ಸುಮನಾ ರಮಾನಂದRead More
ದೇಶದ ರಕ್ಷಣಾ ಗೂಡಚರ್ಯೆಗಿನ್ನು ರುಸ್ತುಂ ಶಕ್ತಿ ‘ರುಸ್ತುಂ-2’ ಎಂದಾಕ್ಷಣ ಇದೇನಪ್ಪಾ ಎಂದು ಹುಬ್ಬೇರಿಸಬೇಡಿ. ಏಕೆಂದರೆ ಇದು 2016ರ ನವೆಂಬರ್ 15ರಂದು ತನ್ನ ಹದಿನಾರನೇ ಪರೀಕ್ಷಾರ್ಥ ಹಾರಾಟದಲ್ಲಿ ಯಶಸ್ವಿಯಾಗಿ ಭಾರತೀಯ ಸೇನೆಯ ಬತ್ತಳಿಕೆಗೆ ಸೇರಲು ಹಾತೊರೆಯುತ್ತಿರುವ ಸ್ವದೇಶಿ ನಿರ್ಮಿತ ಸರ್ವೇಕ್ಷಣಾ ಡ್ರೋನ್ ವಿಮಾನ. (ಡ್ರೋನ್ ಎಂದರೆ ಮಾನವರ ರಹಿತವಾಗಿ ರಿಮೋಟ್ ಮೂಲಕ ನಿಯಂತ್ರಿಸಲ್ಪಡುವ ವಿಮಾನ) ಇದನ್ನು ವಿಶೇಷವಾಗಿ ಶತ್ರು ಸೈನ್ಯದ ವಿವರಗಳನ್ನು ಕಲೆಹಾಕಲು, ಕಣ್ಗಾವಲು ನಡೆಸಲು ಮತ್ತು ಶತ್ರು ಪಾಳಯದ ಮೇಲೆ ಗುಪ್ತವಾಗಿ ದಾಳಿ ಮಾಡುವ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. […]Read More