ಹಾಯ್ಕುಗಳು – ಹ.ನಾಗರಾಜು

ವಿಹಾರ ರಜಾ ದಿನದವಿಹಾರ ಮನಸಿಗೆಉಲ್ಲಾಸಕರ ಆಹಾರ ಶುಚಿ ಆಹಾರದೇಹಕೆ ಹಿತಕರಆಹ್ಲಾದಕರ ಸರೀ ನಿಯಮದಂತೇಪಾಲನೆ ಮಾಡುವುದುಸರಿಯಾದುದು ತಪ್ಪು ನಿಯಮಾವಳೀನೋಡದೇ ನೆಡೆವುದುತಪ್ಪು ಕಾರ್ಯವು ಉತ್ತರ ಸಂಸ್ಕೃತ ಭಾಷೆಉತ್ತರ ಭಾರತದಪವಿತ್ರ ಭಾಷೆ ದಕ್ಷಿಣ ನಮ್ಮ ಕನ್ನಡದಕ್ಷಿಣ ಭಾರತದಪವಿತ್ರ ಭಾಷೆ ಹ.ನಾಗರಾಜುRead More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 35

ಹಿಂದಿನ ಸಂಚಿಕೆಯಿಂದ…. ಚಿತ್ರಕನು ಚಕಿತನಾಗಿ ಆಕೆಯ ಕಡೆ ನೋಡಿದನು. ರಟ್ಟಾ- ‘ಆಸಮುದ್ರ ಆರ್ಯಭೂಮಿಯ ಏಕಚ್ಛತ್ರ ಅಧೀಶ್ವರರಾದ ಸ್ಕಂದಗುಪ್ತರ ದೂತರನ್ನು ಅಜ್ಞಾತ ಕುಲ ಶೀಲರೆಂದು ಹೇಳಿದರೆ ಸ್ಕಂದಗುಪ್ತರಿಗೆ ಅವಮಾನ ಮಾಡಿದಂತಾಗುವುದಿಲ್ಲವೆ? ಇದೆಲ್ಲ ವ್ಯರ್ಥಾಲಾಪವಲ್ಲವೆ? ತಾವು ಕಳ್ಳರೂ ಕೆಟ್ಟ ಸ್ವಭಾವದವರೂ ಆಗಿದ್ದೀರೆಂದುಕೊಳ್ಳೋಣ. ಆದರೆ ಆ ವಿಷಯವನ್ನು ಈಗ ಏಕೆ ಹೇಳುತ್ತಿದ್ದೀರಿ? ಕಳ್ಳನಾದವನು ತನಗೇ ವಿರುದ್ಧವಾಗಿ ಬೇರೆಯವರಿಗೆ ಎಚ್ಚರಿಕೆ ವಹಿಸುವಂತೆ ಹೇಳುತ್ತಾನೇನು?’ ಹೀಗೆಂದು ಹೇಳಿದವಳೇ ಜೋರಾಗಿ ನಗಲಾರಂಭಿಸಿದಳು. ರಟ್ಟಾಳಿಗೆ ತನ್ನ ನಿಜವಾದ ಸಂಗತಿಯನ್ನು ತಿಳಿಸಿ ಅವಳ ಮುಖಭಾವದ ಬದಲಾವಣೆಗಳನ್ನು ಪರೀಕ್ಷಿಸಿ ನೋಡಬೇಕೆಂದು […]Read More

ನಾಲ್ಕು ದಾರಿ ‘ಗುರು’ವೆಂಬ ಹೆದ್ದಾರಿ – ನಾಟಕ

ನಾಲ್ಕು ದಾರಿ ‘ಗುರುವೆಂಬ ಹೆದ್ದಾರಿ ದೃಶ್ಯ – 1 ರಂಗಸ್ಥಳದ ಮೇಲೆ ನಾಲ್ಕು ನೇಣು ಕುಣಿಕೆಗಳ ಮುಂದೆ ನಾಲ್ಕು ಜನರಾದ ಇಮಾಮ್ ಸಾಬ್ (ವಕೀಲ) ಪರಸಪ್ಪ (ರೈತ) ಅನಂತು (ಕ್ಲರ್ಕ್) ನಿರುದ್ಯೋಗಿ (ಜನಾರ್ಧನ) ಸಾಯಲು ಪ್ರಯತ್ನಿಸುವ ದೃಶ್ಯ….. ದೃಶ್ಯ -2 ಎಲ್ಲರೂ ಮುಖ ಮುಖ ನೋಡುತ್ತಾ ತಮ್ಮ ತಮ್ಮಲ್ಲಿ ಹೀಗೆ ಹೇಳಿಕೊಂಡುಇಮಾಮ್ ಸಾಬ್… ಹಾ ಟೀಕ್ ಹೈ, ಹಮ್ ಮರ್ನಾ ಹೈ.ರೈತ… ವಿಷಾದದಿಂದ ಹೊಲದ ಕ್ರಿಮಿ ಸತ್ತಾಂಗ ಸಾಯೋಣ, ಬರ್ರಪ್ಪೋ ಬರ್ರಿ….ಅನಂತು… ಎಂತದ್ದು ಮಾರಾಯರೇ ನನ್ನ ಮಂಡೆ […]Read More

ಮಹಿಳೆಯರಿಗೆ ಸ್ಪೂರ್ತಿ ಈ ವನ್ಯಮಾರ್ಗದರ್ಶಿ – ಸೂರಜ್ ಬಾಯ್ ಮೀನಾ

ಸೂರಜ್ ಬಾಯ್ ಮೀನಾ – ಮೊದಲ ವನ್ಯಮಾರ್ಗದರ್ಶಿ “ರಣಥಂಬೋರ್ ರಾಷ್ಟ್ರೀಯ ಉದ್ಯಾನವನ” ರಾಜಸ್ಥಾನದ ಸವಾಯಿ ಮಾಧೋಪುರ್ ನಗರಕ್ಕೆ ಹತ್ತಿರವಿರುವ ವಿಶಾಲವಾದ ವನ್ಯಜೀವಿ ಮೀಸಲು ತಾಣ. “ಸೂರಜ್ ಬಾಯ್ ಮೀನಾ” ಅಲ್ಲಿಯ ವನ್ಯಮಾರ್ಗದರ್ಶಿಗಳಲ್ಲೇ ಜನಪ್ರಿಯವಾಗಿರುವ ಹೆಸರು ಏಕೆಂದರೆ ಮೀನಾ ಅಲ್ಲಿನ ಮೊದಲ ಮಹಿಳಾ ವನ್ಯಮಾರ್ಗದರ್ಶಿ. “ಭೂರಿ ಪಹಾಡಿ” ಎಂಬ ಹಳ್ಳಿಯಲ್ಲಿ ಹುಟ್ಟಿದ ‘ಮೀನಾ’ ಕಳೆದ 15 ವರ್ಷಗಳಲ್ಲಿ ಹಲವು ವಿರೋಧಗಳ ನಡುವೆ ನಡೆದು ಬಂದ ದಾರಿ ಇದುವರೆಗು ಅದೆಷ್ಟೋ ಮಹಿಳೆಯರಿಗೆ ಸ್ಪೂರ್ತಿಯಾಗಿದೆ. “ಸೂರಜ್ ಮೀನಾ” ಹುಟ್ಟಿ ಬೆಳೆದ ‘ಭೂರಿ […]Read More

ಆಫ್ರಿಕಾದ ಚೀತಾಗಳು ಭಾರತಕ್ಕೆ

ಆಫ್ರಿಕಾದ ಚೀತಾಗಳು ಭಾರತಕ್ಕೆ ಹಲವು ತಿಂಗಳುಗಳಿಂದ ವನ್ಯಪ್ರಾಣಿ ಪ್ರಿಯರು ಕಾಯುತಿದ್ದ ಹಾಗೂ ಪರ ವಿರೋಧದ ಚರ್ಚೆಗಳಿಗೆ ಗ್ರಾಸವಾಗಿದ್ದ ‘ಆಫ್ರಿಕನ್ ಚೀತಾಗಳು’ ಮಧ್ಯಪ್ರದೇಶದ ಕುನೋ ನ್ಯಾಷನಲ್ ಪಾರ್ಕಿಗೆ ಬಂದಾಗಿದೆ. ಇಂದು ಪ್ರಧಾನಿ ಮೋದಿಯವರು ತಮ್ಮ ಜನ್ಮದಿನದ ಪ್ರಯುಕ್ತ ಚೀತಾಗಳನ್ನು ಅದಕ್ಕೆಂದೇ ಮೀಸಲಿಟ್ಟದ್ದ ಕುನೋ ಅರಣ್ಯಪ್ರದೇಶದಲ್ಲಿ ಬಿಡುಗಡೆ ಮಾಡಲಾಗಿದೆ. ನಮೀಬಿಯಾ ದಿಂದ ಬೋಯಿಂಗ್ 717 ವಿಶೇಷ ವಿಮಾನದಲ್ಲಿ ಇವುಗಳನ್ನು ತರಲಾಗಿದ್ದು ಭಾರತದಲ್ಲಿ ಏಷ್ಯಾಟಿಕ್ ಚೀತಾಗಳು ನಶಿಸಿಹೋದ 70 ವರ್ಷಗಳ ನಂತರ ಇದನ್ನು ಆಯೋಜಿಸಲಾಗಿದೆ. ಮುಂದಿನ ತಿಂಗಳು ಇನ್ನೂ ಹನ್ನೆರಡು ಚೀತಾಗಳು […]Read More

ಫ್ಯಾಷನ್ ಯುಗದ ಔಷಧೀಯ ಹಣ್ಣು – ಫ್ಯಾಷನ್ ಫ್ರೂಟ್

ಫ್ಯಾಷನ್ ಫ್ರೂಟ್ ಹೆಸರೇನೋ ಫ್ಯಾಷನ್ ಆಗಿದೆ ಆದರೆ, ಈ ಹಣ್ಣು ತಿನ್ನೋಕೆ ಎಷ್ಟು ಫ್ಯಾಷನ್ ಆಗಿದೆ ಎಂಬುವುದೇ ಒಂದು ಸ್ವಾರಸ್ಯಕರ ಸಂಗತಿ. ‘ಫೆಸಿಫ್ಲೋರ ಎಡ್ಯುಲಸ್’ ಎಂಬ ವೈನ್ ಪ್ರಬೇಧಕ್ಕೆ ಸೇರಿದ ಫ್ಯಾಷನ್ ಫ್ಲವರ್ ಹೆಚ್ಚಾಗಿ ಬ್ರೆಜಿಲ್, ಪೆರುಗ್ವೆ ಹಾಗೂ ಉತ್ತರ ಅರ್ಜೆಂಟಿನಾಗಳಲ್ಲಿ ಪ್ರಮುಖವಾಗಿ ಕಂಡುಬರುತ್ತದೆ. ಫೆಸಿಫ್ಲೋರ ಎಂಬ ಶಬ್ದದ ಮೂಲ ಲ್ಯಾಟಿನ್ ಭಾಷೆಯಾಗಿದ್ದು, ಇದನ್ನು ಇಂಗ್ಲೀಷ್‌ನಲ್ಲಿ ‘ಫ್ಯಾಷನ್ ಫ್ಲವರ್’ ಎಂದು ಕರೆಯಲಾಗುತ್ತದೆ. ಈ ಹೂವಿಗೆ ಫ್ಯಾಷನ್ ಫ್ಲವರ್ ಎಂದು ಹೆಸರಿಸಿದವರು ಸ್ಪಾನಿಶ್ ಮಿಷನರಿಗಳು. ಇದರಲ್ಲಿ ಬೆಳೆಯುವ ಹಣ್ಣುಗಳನ್ನು […]Read More

ಸರಳ ಜೀವನ ಸಾಧಕನ ಲಕ್ಷಣ

ಸರಳ ಜೀವನ ಸಾಧಕನ ಲಕ್ಷಣ ಜೀವನ ವೀಣೆಯ ಮೀಟಿದ ವೈಣಿಕನವನುಸೋಲೊಪ್ಪದ ಸರದಾರನವನು|ಕರ್ಮಭೂಮಿಯ ಕಾರ್ಮಿಕನವನುಸರಳತೆಯಿಂದ ಸಾಧನೆಯೆಡೆಗೆ ಸಾಗಿದ ಸಾಧಕನವನು|| ‘ಕ್ಷಿಪಣಿಗಳ ಜನಕ’ ನೆಂಬ ಅಭಿದಾನ ಪಡೆದ ಅಭಿಮಾನಿಯವನುವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಅಧ್ಯಾಪಕನವನು|ಕರ್ತವ್ಯ ನಿಷ್ಠೆಯೇ ಜೀವನದೃಷ್ಟಿಯಾಗಿಸಿಕೊಂಡ ಜನಕನವನುಪವಿತ್ರಾತ್ಮವನು ಹೊಂದಿದ ಪರಮದಯಾಳು ಅವನು|| ದೂರದೃಷ್ಟಿಯ ದಾರ್ಶನಿಕನವನುಧರ್ಮಸಮದೃಷ್ಟಿಯ ಧಾರ್ಮಿಕನವನು|ಕನಸನ್ನು ನನಸಾಗಿಸಿದ ಛಲಗಾರನವನುಮನುಜಧರ್ಮವನು ಮನುಕುಲಕ್ಕೆ ಸಾರಿದ ಮಹಾನಾಯಕನವನು|| ವಿಜ್ಞಾನಿಯಾಗಿ, ವೈಣಿಕನಾಗಿ, ಕವಿಯಾಗಿ, ಕಲಾವಿದನಾಗಿಪ್ರತಿಭಾ ಕಾರಂಜಿಯನ್ನು ಚಿಮ್ಮಿದ ಪ್ರತಿಭಾವಂತನವನುಗುರಿಯೊಂದಿದ್ದರೆ ಸಾಕು ಗರಿ ತಾನಾಗಿಯೇ ಬರುವುದೆಂದು ತೋರಿದದಿಟಪುರುಷನಿವನು|| ಶಿಸ್ತಿನ ಸಿಪಾಯಿಯವನುನಭದೆತ್ತರಕ್ಕೆ ಹಾರಿದರೂ ಇಳೆಗಂಟಿಕೊಂಡ ನಾಯಕನವನು|ಸರ್ವರ ಕಣ್ಣಿನಲ್ಲಿ ಕಣ್ಮಣಿಯವನು‘ಅಂತರಿಕ್ಷ ಅಭಿಯಂತ’ […]Read More

ಅದೃಷ್ಟದ ಆಟ – ಎನ್. ಶಿವರಾಮಯ್ಯ (ನೇನಂಶಿ) ಭಾಗ – 34

ಪರಿಚ್ಛೇದ – 11ಸಡಿಲವಾದ ಕಗ್ಗಂಟು ಉತ್ತರ ದಿಕ್ಕಿನ ನಗರದ್ವಾರವನ್ನು ದಾಟಿ ರಟ್ಟಾ ರಕ್ಷಕಭಟರೊಂದಿಗೆ ಮುಂದೆ ನಡೆದಳು. ಇನ್ನು ಮುಂದೆ ರಾಜಮಾರ್ಗವು ಮೃಗಯಾ- ಕಾನನದಿಂದ ಸುತ್ತುವರಿದು ಹಾವಿನ ನಡೆಯಂತೆ ಅಂಕು ಡೊಂಕಾಗಿ, ಕೆಲವು ಕಡೆ ಏರುತ್ತ ಕೆಲವು ಕಡೆ ಇಳಿಯುತ್ತ ಮುಂದೆ ಹೋಗಿ ಕಾಡಿನಲ್ಲಿ ಮರೆಯಾಗಿತ್ತು. ಬೆಳಗಿನ ಎಳೆ ಬಿಸಿಲಲ್ಲಿ ಈ ದೃಶ್ಯವು ಮನೋಹರವಾಗಿ ಕಾಣುತ್ತಿತ್ತು. ಈ ಸುಂದರವಾದ ಪ್ರಕೃತಿಯ ದೃಶ್ಯದ ಮೇಲೆ ಒಮ್ಮೆ ದೃಷ್ಟಿ ಹಾಯಿಸಿ ರಟ್ಟಾ ಕುದುರೆಯನ್ನು ನಿಲ್ಲಿಸಿ, ಸೇನಾನಿಯನ್ನು ಹತ್ತಿರ ಕರೆದು, ‘ನಕುಲ, ನೀನು […]Read More

ಧನಾತ್ಮಕ ದೃಷ್ಟಿ

ಧನಾತ್ಮಕ ದೃಷ್ಟಿ ಆರೋಗ್ಯಕರವಾದ ದೇಹದಲ್ಲಿ ಆರೋಗ್ಯಕರವಾದ ಮನಸ್ಸು ಇರುತ್ತದೆ. ಸಜ್ಜನರ ಸಂಗ, ಉತ್ತಮ ಗ್ರಂಥಗಳ ವಾಚನ, ಚಿಂತನೆ ಮತ್ತು  ಆತ್ಮಾವಲೋಕನದಿಂದ ಧನಾತ್ಮಕ ದೃಷ್ಟಿ ಬೆಳೆಯುತ್ತದೆ.        ಬುದ್ಧ, ಸಾಕ್ರಟೀಸ್,  ಏಸು, ಬಸವ, ತುಕಾರಾಂ,  ಗಾಂಧಿ ಮೊದಲಾದ ಮಹಾನ್ ವ್ಯಕ್ತಿಗಳು ಧನಾತ್ಮಕವಾಗಿ ಯೋಚಿಸುತ್ತಿದ್ದರು. ತಮ್ಮನ್ನು ಕೊಲ್ಲಲು ಬಂದ ಅಂಗುಲಿಮಾಲನ ಮನಸ್ಸನ್ನು ಬುದ್ಧರು ತಮ್ಮ ಧನಾತ್ಮಕ ಮಾತುಗಳಿಂದ ಪರಿವರ್ತಿಸಿದರು. ಸಾಕ್ರಟೀಸನ ಹೆಂಡತಿ ಕೋಪಿಷ್ಠೆಯಾಗಿದ್ದಳು. ಹೆಂಡತಿ ಎಷ್ಟೇ ಬೈದರೂ ಸಾಕ್ರಟೀಸ್ ಸದಾ ನಗುತ್ತ ಇರುತ್ತಿದ್ದ. ಒಮ್ಮೆ ಅವಳು ಹೊಲಸು ನೀರು ತಂದು ಹಾಕಿದಳು. […]Read More

ವಾರಾಂತ್ಯದ ದಿನ – ಸೋಮಾರೀದಿನ

ವಾರಾಂತ್ಯದ ದಿನ – ಸೋಮಾರೀದಿನ ನೀ ಇದ ತಿಳಿಯೋ ಮನುಜರಜಾ ಬಯಸುವುದು ಸಹಜ|ಸೋಮವಾರದಿಂದ ಶನಿವಾರದವರೆಗೆವಾಲುವರು ಕೆಲಸದ ಕಡೆಗೆ||. ||೧|| ಭಾನುವಾರವಾದರೂ ಒಮ್ಮೆಕೆಲಸ ಮಾಡದಿರೋಣ ಒಮ್ಮೆ|ದಿನಂಪ್ರತಿ ಸೂರ್ಯೋದಯದಲೆದ್ದುನಿತ್ಯ ಕರ್ಮವ ಮುಗಿಸುವರು ಪೆದ್ದು||. ||೨|| ವಾರದ ಆರು ದಿನವು ಸಾಮಾನ್ಯ ತಿನಿಸುಭಾನುವಾರ ಮಾಡುವರು ವಿಶೇಷ ತಿನಿಸು|ಸಸ್ಯಾಹಾರವ ಕೆಲವರು ತಿಂದರೇಮಾಂಸ ಮೀನು ಮೊಟ್ಟೆಯ ತಿನ್ನುವರೇ||. ||೩|| ಪ್ರತಿನಿತ್ಯ ಕೆಲಸಕ್ಕಾಗೀ ಏಳುವರುಮುಂಜಾವಿನ ಗಂಟೆ ಆರು|ವಾರಾಂತ್ಯದ ದಿನದೀ ತಡವಾಗೀಹಾಲು ಪತ್ರಿಕೆಗಳ ಪಡೆವರು ತಡವಾಗೀ||. ||೪|| ವಾರಾಂತ್ಯವೆಂದರೇ ಆಗುವರು ಸೋಮಾರೀಪೂಜೇಪುರಸ್ಕಾರವಿಲ್ಲದೆ ಬರೀ|ನಮ್ಮ ನಾಗಶಯನನ ಅರ್ಚಿಸುವರೇಬರಿದೇ ಕೈಮುಗಿದು […]Read More